Gowlli.Film Pooja

Thursday, September 16, 2021

330

ಗೌಳಿಗೆ ಅದ್ದೂರಿ ಮಹೂರ್ತ

ಶ್ರೀನಗರಕಿಟ್ಟಿ ಫಲವತ್ತಾದದಾಡಿಯನ್ನು ಬಿಡಲಾಗಿದ್ದು, ಯಾವ ಸಿನಿಮಾಕ್ಕೆಅಂತ ತಿಳಿದಿರಲಿಲ್ಲ. ಕಳೆದವಾರ ‘ಗೌಳಿ’ ಚಿತ್ರದಜಾಹಿರಾತಿನಿಂದಅದಕ್ಕೆಉತ್ತರ ಸಿಕ್ಕಿತ್ತು.ಈಗ ಅದೇ ಸಿನಿಮಾದ ಮಹೂರ್ತ ಸಮಾರಂಭವು ವಿಜಯನಗರದೇವಸ್ಥಾನದಲ್ಲಿಅದ್ದೂರಿಯಾಗಿ ನಡೆಯಿತು.ರಘುಸಿಂಗಮ್ ನಿರ್ಮಾಣದಲ್ಲಿ, ಸೂರ ನಿರ್ದೇಶನದಜವಬ್ದಾರಿಯನ್ನು ಹೊತ್ತುಕೊಂಡಿದ್ದಾರೆ.ಈ ಕುರಿತಂತೆ ಮಾತನಾಡುವ ನಾಯಕ ಶ್ರೀನಗರ ಕಿಟ್ಟಿ ನಾನು ಇಲ್ಲಿಯವರೆಗೂ ಮಾಡಿರುವ ಚಿತ್ರಗಳದ್ದೇ ಒಂದು ಹಂತವಾದರೆ, ಈ ಸಿನಿಮಾವು ಮತ್ತೊಂದು ಹಂತಎನ್ನುಬಹುದು.ರಗಡ್ ಆಗಿ ಕಾಣಿಸಿಕೊಳ್ಳಲಿದ್ದು, ಲುಕ್ಕು ಕತೆ ಸಾಕಷ್ಟು ಹೊಸತನದಿಂದಕೂಡಿದೆ. ಪೂರ್ತಿಗಡ್ಡ ಬಿಟ್ಟು ಹೀಗೆ ಕಾಣಿಸಿಕೊಂಡಿರಲಿಲ್ಲ. 

ನಿರ್ದೇಶಕರು ನನ್ನನ್ನು ಹೊಸ ರೀತಿಯಲ್ಲಿತೋರಿಸಲಿದ್ದಾರೆಎಂದರು.

ಸದ್ಯಚಂದನವನದ ಬ್ಯುಸಿ ನಟಿಯರಲ್ಲಿಒಬ್ಬರಾಗಿರುವ ಪಾವನಾ ನಾಯಕಿ.ಖಳನಾಗಿ ಯಶ್‌ಶೆಟ್ಟಿ ಹಾಗಯೇ ಮತ್ತೋಂದು ಮುಖ್ಯ ಪಾತ್ರಕ್ಕೆರಂಗಾಯಣರಘು ಬಣ್ಣ ಹಚ್ಚುತ್ತಿದ್ದಾರೆ.ವಿ.ನಾಗೇಂದ್ರಪ್ರಸಾದ್ ಸಾಹಿತ್ಯದಲ್ಲಿ ಶಶಾಂಕ್‌ಶೇಷಗಿರಿ ಸಂಗೀತ ಸಂಯೋಜಿಸಿದ್ದಾರೆ. ಪ್ರಜ್ವಲ್‌ಗೌಡಛಾಯಾಗ್ರಹಣವಿದೆ.ಇದೇ ೨೧ರಿಂದ ಯಲ್ಲಾಪುರ, ಶಿರಸಿ ಮುಂತಾದ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲುತಂಡವುಏರ್ಪಾಟು ಮಾಡಿಕೊಂಡಿದೆ.

 

Copyright@2018 Chitralahari | All Rights Reserved. Photo Journalist K.S. Mokshendra,