Kaaneyagiddaale.News

Thursday, February 16, 2023

117

ನೈಜ ಹಾಗೂ ಕಾಲ್ಪನಿಕ ಕಾಣೆಯಾಗಿದ್ದಾಳೆ

        ವಿನೂತನ ಶೀರ್ಷಿಕೆ ಹೊಂದಿರುವ ‘ಕಾಣೆಯಾಗಿದ್ದಾಳೆ’ ಚಿತ್ರವನ್ನು ಆರ್‌ಕೆ ನಿರ್ದೇಶನ ಮಾಡಿದ್ದಾರೆ. ಹುಡುಕಿಕೊಟ್ಟವರಿಗೆ ಬಹುಮಾನ ಎಂಬುದಾಗಿ ಅಡಿಬರಹವಿದೆ.  ಸಾಮಾಜಿಕ ಕಳಕಳಿಯ ಚಿತ್ರದಲ್ಲಿ ಉನ್ನತ ವ್ಯಾಸಂಗಕ್ಕಾಗಿ ಹಳ್ಳಿಯಿಂದ ನಗರಕ್ಕೆ ಬಂದ ಹೆಣ್ಣುಮಗಳೊಬ್ಬಳಿಗೆ ನಗರದಲ್ಲಿ ಯಾವೆಲ್ಲಾ ಸಮಸ್ಯೆಗಳು ಕಾಡುತ್ತವೆ. ಆಕೆ ಎದುರಿಸುವ ಸವಾಲುಗಳೇನು? ಐಎಎಸ್ ಅಧಿಕಾರಿ ಆಗುತ್ತಾಳಾ? ಪ್ರಸ್ತುತ ಸನ್ನಿವೇಶದಲ್ಲಿ ಹೆಣ್ಣುಮಕ್ಕಳು ಎದುರಿಸುವ ಸಮಸ್ಯೆಗಳ ವಿಚಾರವನ್ನು ಯಾಕೆ ಜನರ ಮುಂದಿಡಬಾರದು ಎನ್ನುವಂತಹ ವಿಷಯಗಳನ್ನು ತೋರಿಸಲಾಗಿದೆ.  

ತೆಲುಗಿನ ಬಿಗ್‌ಬಾಸ್ ಸೀಸನ್-೬ರ ೨ನೇ ಬಹುಮಾನ ಪಡೆದಿದ್ದ ಕೀರ್ತಿಭಟ್ ನಾಯಕಿಯಾಗಿ ಎರಡು ಶೇಡ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ.

       ಶ್ರೀ ಮೈಲಾರಲಿಂಗೇಶ್ವರ ಸಿನಿಮಾಸ್ ಲಾಂಛನದಲ್ಲಿ ನಿರ್ಮಾಣವಾಗಿದ್ದು, ನಿರ್ದೇಶಕರೇ ಬಂಡವಾಳ ಹೂಡಿದ್ದಾರೆ. ನಾಯಕನಾಗಿ ವಿನಯ್‌ಕಾರ್ತಿಕ್ ಉಳಿದಂತೆ ಗಿರಿಜಾಲೋಕೇಶ್, ವಿನಯಾಪ್ರಸಾದ್ ಹಾಗೂ ದಕ್ಷಿಣ ಭಾರತದ ಖ್ಯಾತ ನಟರೊಬ್ಬರು ಬಣ್ಣ ಹಚ್ಚಿರುವುದು ವಿಶೇಷ. ಕೌಶಿಕ್ ಹಾಡುಗಳಿಗೆ ಸಂಗೀತ, ಶಿವರಾಜ್‌ಮೇಹು ಸಂಕಲನವಿದೆ. 

 

Copyright@2018 Chitralahari | All Rights Reserved. Photo Journalist K.S. Mokshendra,