September 10.Film Pooja and Press Meet.

Thursday, January 02, 2020

650

ಆತ್ಮಹತ್ಯೆ  ಮಹಾಪಾಪ

         ಪ್ರಸಕ್ತ ಬದುಕಿನಲ್ಲಿ ಸಣ್ಣದಾದ ಖಿನ್ನತೆಗೆ ಒಳಗಾದರೆ ಆತ್ಮಹತ್ಯೆ ಪರಿಹಾರವೆಂದು ಅದಕ್ಕೆ ಶರಣಾಗುತ್ತಾರೆ.  ಪ್ರಪಂಚದಲ್ಲಿ ಪ್ರತಿ ಮೂರು ಸೆಕಂಡ್‌ಗೆ ಹಲವರು ಇದೇ ದಾರಿಗೆ ಹೋಗುತ್ತಿದ್ದಾರೆಂಬ ಮಾಹಿತಿ ಲಭ್ಯವಾಗಿದೆ. ಇದನ್ನು ಹೇಳಲು ಪೀಠಿಕೆ ಇದೆ. ಹಿರಿಯ ನಿರ್ದೇಶಕ ಸಾಯಿಪ್ರಕಾಶ್  ಗ್ಯಾಪ್ ನಂತರ  ‘ಸೆಪ್ಟಂಬರ್ ೧೦’ ಚಿತ್ರಕ್ಕೆ ನಿರ್ಮಾಣ ಜೊತೆಗೆ ನಿರ್ದೇಶನದ ಸಾರಥ್ಯವಹಿಸಿಕೊಂಡಿದ್ದಾರೆ.   ಅವರು ಕ್ಯಾಪ್ಟನ್ ಜಿ.ಜಿ.ರಾವ್ ಬರೆದಿರುವ  ಇಂಗ್ಲೀಷ್, ತೆಲುಗು ಪುಸ್ತಕವನ್ನು ತೆರೆ ಮೇಲೆ ತರುವ ಪ್ರಯತ್ನ ಮಾಡುತ್ತಿದ್ದಾರೆ. ತೆಲಂಗಾಣದಲ್ಲಿ ಬಿಡುಗಡೆಯಾದ ಪ್ರತಿಗೆ ಅನುಗುಣವಾಗಿ ಅಲ್ಲಿನ ಸರ್ಕಾರವು  ಸೂಕ್ತ ಕ್ರಮವನ್ನು ತೆಗೆದುಕೊಂಡಿದೆ. ಇದನ್ನು ಅರಿತ ನಿರ್ದೇಶಕರು ನಮ್ಮ ರಾಜ್ಯದಲ್ಲೂ ಆಗಬೇಕೆಂದು ಬಯಸಿ, ಸರ್ಕಾರಕ್ಕೆ ಪತ್ರ ನೀಡಿದರೆ ಉಪಯೋಗವಾಗುವುದಿಲ್ಲ. ಚಿತ್ರದ ಮೂಲಕ ಹೇಳಿದರೆ ಸುಲಭವಾಗಿ ತಲುಪುತ್ತದೆಂದು ಯೋಚಿಸಿದ್ದೇ ಸಿನಿಮಾ ಮಾಡಲು ಕಾರಣವಾಗಿದೆ.  ‘ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನಾಚರಣೆ’ಯು ಇದೇ ದಿನದಂದು ಬರುವ ಕಾರಣ ಕತೆಗೆ ಪೂರಕವಾಗಿ  ಹೊಂದಿಕೆಯಾಗುತ್ತದೆಂದು  ಶೀರ್ಷಿಕೆಯನ್ನು ಬಳಸಿಕೊಂಡಿದ್ದಾರೆ.  ಘಟನೆಗಳನ್ನು ಏಳು  ಕತೆಗಳಾಗಿ ವಿಂಗಡಿಸಿ ಇದರ ಕುರಿತಂತೆ ಅರಿವು ಮೂಡಿಸುವ ಸನ್ನಿವೇಶಗಳು ಬರಲಿದೆ.

        ಆತ್ಮಹತ್ಯೆಗೆ  ಶರಣಾದ ರೈತರ ಕುಟುಂಬಕ್ಕೆ ಪರಿಹಾರ ನೀಡಿದರೆ ಸಾಲದು. ಅವರು ಈ ರೀತಿ ಮಾಡಿಕೊಳ್ಳದಂತೆ  ಮನದಟ್ಟು  ಮಾಡಿಕೊಡಬೇಕು.  ಪ್ರೇಮಿಗಳು, ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದ ವಿದ್ಯಾರ್ಥಿಗಳು, ಕುಟುಂಬದ ಹೊರೆ, ಸಾಲದ ಬಾದೆ ತಾಳಲಾರದವರು, ಮಕ್ಕಳು ಇವರೆಲ್ಲರಿಗೂ ತಪ್ಪು ನಿರ್ಧಾರ ತೆಗೆದುಕೊಳ್ಳುವುದನ್ನು ತಪ್ಪಿಸಲು ಏನು ಮಾಡಬೇಕೆಂದು ಹೇಳಲಾಗುತ್ತಿದೆ.  ಸೈಕಿಯಾಟ್ರಿಕ್ ವೈದ್ಯರಾಗಿ ಶಶಿಕುಮಾರ್, ವಕೀಲರಾಗಿ ರಮೇಶ್‌ಭಟ್, ಹಿರಿಯ ಪೋಲೀಸ್ ಅಧಿಕಾರಿಯಾಗಿ ರವೀಂದ್ರನಾಥ್, ಮುಲ್ಲಾನಾಗಿ ಸಿಹಿಕಹಿಚಂದ್ರು, ಚರ್ಚ್ ಫಾದರ್ ಪಾತ್ರದಲ್ಲಿ ಶಿವಕುಮಾರ್, ಶ್ರೀಮಂತ ರೈತನಾಗಿ ಗಣೇಶ್‌ರಾವ್, ಯುವ ಪ್ರೇಮಿಗಳಾಗಿ ಜಯಸಿಂಹ-ಆರಾಧ್ಯ ಇವರೊಂದಿಗೆ ವಿಜಯ್‌ಶ್ರೀನಿವಾಸ್, ನವನಟಿ ಶೃತಿ ಮುಂತಾದವರು ನಟಿಸುತ್ತಿದ್ದಾರೆ. ಹಿರಿಯ ಪಾತ್ರಧಾರಿಗಳು ವೇದಿಕೆಯಲ್ಲಿ  ಅನುಭವಗಳನ್ನು  ಹಂಚಿಕೊಳ್ಳುವುದರೊಂದಿಗೆ ಸನ್ನಿವೇಶಗಳು  ತೆರೆದುಕೊಳ್ಳುತ್ತದೆ. ಮಾದ್ಯಮದವರು ಬಿ.ಜಿ.ಎಸ್.ಆಡಿಟೋರಿಯಂಗೆ ಭೇಟಿ ನೀಡಿದಾಗ ಸದರಿ  ದೃಶ್ಯದ ಚಿತ್ರೀಕರಣ ನಡೆಯುತ್ತಿತ್ತು.

 

Copyright@2018 Chitralahari | All Rights Reserved. Photo Journalist K.S. Mokshendra,