Janumada Jaathre.Film News

Tuesday, September 21, 2021

ಈವಾರ ತೆರೆಗೆ ಜನುಮದ ಜಾತ್ರೆ     ಶ್ರೀ ಮಣಿಕುಪ್ಪೆ ಆಂಜನೇಯ ಸ್ವಾಮಿ ಪ್ರೊಡಕ್ಷನ್ ಲಾಂಛನ ದಲ್ಲಿ ದೊಡ್ಮನೆ ಮಂಜುನಾಥ್ ಎಂ ಅವರ ನಿರ್ಮಾಣದ ಈ ಚಿತ್ರವನ್ನು ಈ ವಾರ ರಾಜ್ಯದ್ಯಂತ ತೆರೆಗೆ ತರುತ್ತಿದ್ದಾರೆ. ಆಟೋ ಚಾಲಕನಾಗಿದ್ದುಕೊಂಡೇ ಜನುಮದಜಾತ್ರೆ ಎಂಬ ಸಿನಿಮಾ ನಿರ್ದೇಶನ ಮಾಡಿರುವ ಆಟೋ ಆನಂದ್  . ಪಕ್ಕಾ ಹಳ್ಳಿ ಸೊಗಡಿನಲ್ಲಿ ನಡೆಯುವ ಪ್ರೇಮಕಥೆಯ ಚಿತ್ರ ಇದಾಗಿದ್ದು, ಮಲೆ ಮಹದೇಶ್ವರ ಬೆಟ್ಟ, ಮಂಡ್ಯ, ತುಮಕೂರು, ಕೊರಟಗೆರೆ ಸುತ್ತಮುತ್ತ ಚಿತ್ರದ ಚಿತ್ರೀಕರಣ ನಡೆಸಲಾಗಿದೆ. ಎಲ್ಲಾ ಪ್ರೇಮ ಕಥೆಗಳ ಹಾಗೆ ಇದೂ ಕೂಡ ಗ್ರಾಮೀಣ ಪರಿಸರದ ಹಿನ್ನೆಲೆಯಲ್ಲಿ ನಡೆಯೋ ಪ್ರೇಮಕಥೆಯಾಗಿದ್ದರೂ, ಚಿತ್ರಕಥೆಯಲ್ಲಿ ಒಂದಷ್ಟು ಹೊಸ ವಿಷಯಗಳನ್ನು ತೆಗೆದುಕೊಳ್ಳಲಾಗಿದೆ. ಪ್ರೇಮಿಗಳಿಬ್ಬರು ....

405

Read More...

Baualuseeme.Film Press Meet.

Monday, September 20, 2021

 

ಚಿತ್ರೀಕರಣ ಮುಗಿಸಿಕೊಂಡ ರಗಡ್ ಕಥೆಯ ‘ಬಯಲುಸೀಮೆ’!

 

ಉತ್ತರ ಕರ್ನಾಟಕ ಶೈಲಿಯ ರಗಡ್ ಕಥೆಗಳ ಬಗ್ಗೆ ಕನ್ನಡದ ಪ್ರೇಕ್ಷಕರರಲ್ಲಿ ಯಾವತ್ತಿಗೂ ಒಂದು ವಿಶೇಷ ಪ್ರೀತಿ ಜಾರಿಯಲ್ಲಿರುತ್ತೆ. ಇದೀಗ ಅದೇ ಸೊಗಡಿನ ಪಕ್ಕಾ ರಗಡ್ ಕಥಾನಕ ಹೊಂದಿರೋ ಚಿತ್ರವೊಂದು ಸಂಪೂರ್ಣವಾಗಿ ಚಿತ್ರೀಕರಣ ಮುಗಿಸಿಕೊಂಡಿದೆ. ಪೊಲಿಟಿಕಲ್ ಕ್ರೈಂ ಥ್ರಿಲ್ಲರ್ ಜಾನರಿನ ಈ ಸಿನಿಮಾಗೆ ಕಥೆಗೆ ತಕ್ಕುದಾಗಿ ‘ಬಯಲುಸೀಮೆ’ ಎಂಬ ಶೀರ್ಷಿಕೆಯಿದಲಾಗಿದೆ. ಸಂಪೂರ್ಣವಾಗಿ ಉತ್ತರ ಕರ್ನಾಟಕ ಶೈಲಿಯಲ್ಲಿ ತಯಾರಾಗಿರೋ ಈ ಸಿನಿಮಾ ನಾನಾ ಮಜಲುಗಳ, ಮೈನವಿರೇಳಿಸೋ ತಿರುವುಗಳ ಮೂಲಕ ಪ್ರೇಕ್ಷಕರನ್ನು ಬೇರೆಯದ್ದೇ ಜಗತ್ತಿಗೆ ಕೊಂಡೊಯ್ಯುವಂತೆ ಮೂಡಿ ಬಂದಿದೆ ಎಂಬ ಆತ್ಮವಿಶ್ವಾಶ ಚಿತ್ರತಂಡದಲ್ಲಿದೆ.

452

Read More...

Chaddidost Kaddi Alladusbutta.Film Sucess Meet

Monday, September 20, 2021

  ಚಡ್ಡಿ ದೋಸ್ತ್  ಸಿನಿಮಾ ನೋಡಿ ಗೋಲ್ಡ್ ಕಾಯಿನ್ ಗೆಲ್ಲಿ       ಹಾಸ್ಯದ ಜೊತೆ ಸ್ನೇಹ, ಪ್ರೀತಿಯ ಕಥಾನಕ ಹೊಂದಿದ, ರೆಡ್ ಅಂಡ್‌ ವೈಟ್ ಸೆವೆನ್ ರಾಜ್‌ ನಿರ್ಮಾಣದ ಚಡ್ಡಿದೋಸ್ತ್ ಕಡ್ಡಿ ಅಲ್ಲಾಡುಸ್ಬುಟ್ಟ ಚಿತ್ರವು ಕಳೆದ ಶುಕ್ರವಾರ ರಾಜ್ಯಾದ್ಯಂತ ಬಿಡುಗಡೆಯಾಗಿ,  ಎಲ್ಲಾ ಕಡೆಯಿಂದ  ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ.  ದಿನದಿಂದ ದಿನಕ್ಕೆ ಚಿತ್ರದ  ಕಲೆಕ್ಷನ್ ಕೂಡ ಇಂಪ್ರೂವ್ ಆಗ್ತಿದೆ. ಕಾಮಿಡಿಯೊಂದಿಗೆ ಆರಂಭವಾಗುವ ಚಿತ್ರದ ಕ್ಲೈಮ್ಯಾಕ್ಸ್ ಸೀನ್ ಪ್ರೇಕ್ಷಕರ ಕಣ್ಣನ್ನು ಒದ್ದೆಯಾಗಿಸುತ್ತದೆ.  ಆಸ್ಕರ್  ಕೃಷ್ಣ ನಿರ್ದೇಶನದ ಈ ಚಿತ್ರಕ್ಕೆ  ಲೋಕೇಂದ್ರಸೂರ್ಯ. ಕಥೆ, ಚಿತ್ರಕಥೆ, ಸಂಭಾಷಣೆ ರಚಿಸಿದ್ದಾರೆ.  ....

485

Read More...

Cream Colour Studios.Press Meet

Sunday, September 19, 2021

  ಕುಶಲಕರ್ಮಿಗಳ ಉತ್ತೇನಕ್ಕಾಗಿ ವಿಶೇಷ ಸ್ಟುಡಿಯೋ ಉದ್ಘಾಟನೆ! ಅಪರೂಪದ ಸಂಸ್ಥೆ ಕ್ರೀಮ್ ಕಲರ್ಸ್ ಸ್ಟುಡಿಯೋಸ್ ಲಾಂಚ್.   ಫ್ಯಾಶನ್ ಲೋಕದಲ್ಲಿ ಸಾಕಷ್ಟು ಹೆಸರು ಮಾಡುತ್ತಲೇ, ಆ ಜಗತ್ತಿಗೆ ಪ್ರತಿಭಾವಂತರನ್ನು ಕೊಡಮಾಡಿರುವ ಅಪರೂಪದ ಸಂಸ್ಥೆ ಕ್ರೀಮ್ ಕಲರ್ಸ್ ಸ್ಟುಡಿಯೋಸ್. ಈ ಸಂಸ್ಥೆಯೀಗ ಮತ್ತೊಂದು ಸಾಹಸದ ಮೈಲಿಗಲ್ಲು ಸ್ಥಾಪಿಸುವಲ್ಲಿ ಮೊದಲ ಹೆಜ್ಜೆಯಿರಿಸಿದೆ. ಈ ನೆಲದ ನೈಜ ಘಮವನ್ನು ಫ್ಯಾಶನ್ ಜಗತ್ತಿಗೆ ಪರಿಚಯಿಸುವ ಚೆಂದದ ಯಾನವೊಂದಕ್ಕೆ  ಇದೀಗ ಚಾಲನೆ ಸಿಕ್ಕಿದೆ.  ದೇಸೀ ಸೊಗಡಿನ ಕಾಸ್ಟ್ಯೂಮ್‌ಗಳ ಮೂಲಕ, ಕುಶಲಕರ್ಮಿಗಳಿಂದಲೇ ತಯಾರಾದ ವಿಶೇಷ ಬಟ್ಟೆಗಳ ಮೂಲಕವೇ ವಿಶಿಷ್ಟವಾದೊಂದು ಫ್ಯಾಶನ್ ಶೋ ನೆರವೇರಿದೆ. ಈ ಮೂಲಕ ಕುಶಲಕರ್ಮಿಗಳ ವಿನ್ಯಾಸಗಳನ್ನು ....

494

Read More...

Lanke.Film Sucess Meet

Sunday, September 19, 2021

  ಪ್ರೇಕ್ಷಕರ ಮನದೊಂದಿಗೆ ಗಳಿಕೆಯಲ್ಲೂ ಗೆಲ್ಲುತ್ತಿದೆ "ಲಂಕೆ".   ಲೂಸ್ ಮಾದ ಯೋಗೇಶ್ ಅಭಿನಯದ "ಲಂಕೆ" ಚಿತ್ರ‌‌ ಗಣಪತಿ ಹಬ್ಬದ ಶುಭದಿನದಂದು ಬಿಡುಗಡೆಯಾಗಿ ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ಸಂತಸ ಹಂಚಿಕೊಳ್ಳಲು ಚಿತ್ರತಂಡ ಪತ್ರಿಕಾಗೋಷ್ಠಿ ‌ಆಯೋಜಿಸಿತ್ತು.   ನಮ್ಮ ‌"ಲಂಕೆ"  ಯಶಸ್ಸು ಕಾಣುತ್ತಿರುವುದಕ್ಕೆ ಪ್ರಮುಖ ಕಾರಣರಾದ ಮಾಧ್ಯಮ ಹಾಗೂ ಸಿನಿ ರಸಿಕರಿಗೆ ಅನಂತ ಧನ್ಯವಾದ ತಿಳಿಸುತ್ತೇನೆ . ಚಿತ್ರ ಸುಮಾರು ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಎರಡನೇ ವಾರದಲ್ಲೂ ಹೆಚ್ಚು ಕಡಿಮೆ ಅಷ್ಟೇ ಚಿತ್ರಮಂದಿರಗಳಲ್ಲಿ ನಮ್ಮ ಚಿತ್ರ ಮುಂದುವರೆಯುತ್ತಿದೆ. ಹಣ ಗಳಿಕೆಯೂ ಉತ್ತಮವಾಗಿದೆ. ಇದು ನನ್ನ ಮಾತಲ್ಲ ....

390

Read More...

Akshi.Film Audio Launch

Friday, September 17, 2021

ಅಕ್ಷಿ ಹಾಡುಗಳ ಸಮಯ ನೇತ್ರದಾನಕುರಿತಂತೆ ‘ಅಕ್ಷಿ’ ಸಿನಿಮಾವುಅತ್ಯುತ್ತಮಚಿತ್ರವೆಂದು ೬೭ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗೆ ಭಾಜನವಾಗಿದೆ.ಪ್ರಚಾರದಎರಡನೇ ಹಂತವಾಗಿಚಿತ್ರದಆಡಿಯೋ ಬಿಡುಗಡೆ ಸಮಾರಂಭವುರೇಣುಕಾಂಬ ಸ್ಟುಡಿಯೋದಲ್ಲಿ ಸರಳವಾಗಿ ನಡೆಯಿತು.ಸ್ಪರ್ಶಾರೇಖಾ ಮತ್ತು ವಿಜಯ್‌ಸೂರ್ಯ ಅತಿಥಿಗಳಾಗಿ ಆಗಮಿಸಿ ತಂಡಕ್ಕೆ ಶುಭ ಹಾರೈಸಿದರು.ಕತೆ,ಚಿತ್ರಕತೆ,ಸಂಭಾಷಣೆ,ಸಾಹಿತ್ಯ ಬರೆದು ನಿರ್ದೇಶನ ಮಾಡಿರುವ ಮನೋಜ್‌ಕುಮಾರ್ ನುಡಿಗಳ ಪರಿ ಹೀಗಿತ್ತು. ೨೦೧೯ರಲ್ಲಿ ಶುರು ಮಾಡಿ, ೫೫ ದಿನಗಳ ಕಾಲ ಚಿಕ್ಕಮಗಳೂರಿನ ಸಣ್ಣ ಹಳ್ಳಿಯಲ್ಲಿ ಚಿತ್ರೀಕರಣ ನಡೆಸಲಾಗಿತ್ತು.ಡಾ.ರಾಜ್‌ಕುಮಾರ್‌ತೀರಿಕೊಂಡಾಗ, ಕಣ್ಣನ್ನುದಾನ ಮಾಡಿದ ಬಗ್ಗೆ ....

417

Read More...

Aaradhya.Short Film Press Meet

Friday, September 17, 2021

 

ನೋಡಿದವರ ಕಣ್ಣಂಚಲ್ಲಿ ನೀರು ತರಿಸಿದ "ಆರಾಧ್ಯ".

 

ಅಪ್ಪ-ಮಗಳ ಬಾಂಧವ್ಯದ ಕಿರುಚಿತ್ರಕ್ಕೆ ಯತಿರಾಜ್ ಸಾರಥ್ಯ..

 

ಕನ್ನಡದ ಸಾಕಷ್ಟು ಚಿತ್ರಗಳಲ್ಲಿ ನಟಿಸಿರುವ ಯತಿರಾಜ್, ಕಳೆದವರ್ಷ ಕೊರೋನ ಬಂದ ಮೇಲೆ ಸುಮಾರು ಹದಿನೇಳು ಕಿರುಚಿತ್ರಗಳನ್ನು ನಿರ್ದೇಶಿಸಿದ್ದಾರೆ." ಆರಾಧ್ಯ "  ಹದಿನೆಂಟನೇ ಕಿರುಚಿತ್ರ.  

 

ಪತ್ರಕರ್ತ ಹಾಗೂ ಕಲಾವಿದನಾಗಿ ಗುರುತಿಸಿಕೊಂಡಿರುವ ಯತಿರಾಜ್ ಈ ಕಿರುಚಿತ್ರವನ್ನು ನಿರ್ಮಿಸಿ, ನಿರ್ದೇಶಿಸಿದ್ದಾರೆ. ಅಭಿನಯ ಕೂಡ ಮಾಡಿದ್ದಾರೆ.

ಅಪ್ಪ -ಮಗಳ ಸೆಂಟಿಮೆಂಟ್ ಸನ್ನಿವೇಶಗಳು ಈ ಕಿರುಚಿತ್ರದ ಹೈಲೆಟ್.

402

Read More...

Gowlli.Film Pooja

Thursday, September 16, 2021

ಗೌಳಿಗೆ ಅದ್ದೂರಿ ಮಹೂರ್ತ ಶ್ರೀನಗರಕಿಟ್ಟಿ ಫಲವತ್ತಾದದಾಡಿಯನ್ನು ಬಿಡಲಾಗಿದ್ದು, ಯಾವ ಸಿನಿಮಾಕ್ಕೆಅಂತ ತಿಳಿದಿರಲಿಲ್ಲ. ಕಳೆದವಾರ ‘ಗೌಳಿ’ ಚಿತ್ರದಜಾಹಿರಾತಿನಿಂದಅದಕ್ಕೆಉತ್ತರ ಸಿಕ್ಕಿತ್ತು.ಈಗ ಅದೇ ಸಿನಿಮಾದ ಮಹೂರ್ತ ಸಮಾರಂಭವು ವಿಜಯನಗರದೇವಸ್ಥಾನದಲ್ಲಿಅದ್ದೂರಿಯಾಗಿ ನಡೆಯಿತು.ರಘುಸಿಂಗಮ್ ನಿರ್ಮಾಣದಲ್ಲಿ, ಸೂರ ನಿರ್ದೇಶನದಜವಬ್ದಾರಿಯನ್ನು ಹೊತ್ತುಕೊಂಡಿದ್ದಾರೆ.ಈ ಕುರಿತಂತೆ ಮಾತನಾಡುವ ನಾಯಕ ಶ್ರೀನಗರ ಕಿಟ್ಟಿ ನಾನು ಇಲ್ಲಿಯವರೆಗೂ ಮಾಡಿರುವ ಚಿತ್ರಗಳದ್ದೇ ಒಂದು ಹಂತವಾದರೆ, ಈ ಸಿನಿಮಾವು ಮತ್ತೊಂದು ಹಂತಎನ್ನುಬಹುದು.ರಗಡ್ ಆಗಿ ಕಾಣಿಸಿಕೊಳ್ಳಲಿದ್ದು, ಲುಕ್ಕು ಕತೆ ಸಾಕಷ್ಟು ಹೊಸತನದಿಂದಕೂಡಿದೆ. ಪೂರ್ತಿಗಡ್ಡ ಬಿಟ್ಟು ಹೀಗೆ ....

529

Read More...

Premamayi.Film Pooja Press Meet

Wednesday, September 15, 2021

ಪ್ರೀತಿಯ ಅಂಶಗಳನ್ನು ತೆರೆದಿಡುವ ಪ್ರೇಮಮಯಿ ಹೊಸಬರ ‘ಪ್ರೇಮಮಯಿ’ ಚಿತ್ರವೊಂದುಕೋಣನಕುಂಟೆ ಶ್ರೀ ಮಹಾಲಕ್ಷಿದೇವಸ್ಥಾನದಲ್ಲಿ ಸರಳವಾಗಿ ಮಹೂರ್ತಆಚರಿಸಿಕೊಂಡಿತು. ‘ಇದು ಹೃದಯಗಳ ವಿಷಯ’ ಎಂದುಅಡಿಬರಹದಲ್ಲಿ ಹೇಳಿಕೊಂಡಿದೆ.ಚಿತ್ರವು ಹೊಸದಾಗಿದ್ದರೂ ಮುಖ್ಯಕಲಾವಿದರು ಹೂರತುಪಡಿಸಿ ಉಳಿದವರು ಸಿನಿಮಾ ಸಂಸ್ಕ್ರತಿಯಲ್ಲೆ ಬೆಳೆದವರು ಎಂಬುದುಗಮನಾರ್ಹಅಂಶವಾಗಿದೆ. ಮೂರು ಚಿತ್ರಗಳನ್ನು ನಿರ್ದೇಶನ ಮಾಡಿರುವರಘುವರ್ಮಚಿತ್ರಕ್ಕೆ ಕತೆ,ಚಿತ್ರಕತೆ,ಸಂಭಾಷಣೆ, ಸಾಹಿತ್ಯ ಬರೆದುಆಕ್ಷನ್‌ಕಟ್ ಹೇಳುತ್ತಿದ್ದಾರೆ. ಎಲ್.ನಾಗಭೂಷಣ್ ನಿರ್ಮಾಪಕರುಇವರೊಂದಿಗೆ ಸಂಗೀತ ಸಂಯೋಜಕಕಾರ್ತಿಕ್‌ವೆಂಕಟೇಶ್ ಮತ್ತು ಪಿ.ಎನ್.ಕಿರಣ್‌ಕುಮಾರ್ ಸಹ ....

530

Read More...

Karmanye Vadhikaraste.

Tuesday, September 14, 2021

  ಬಿಡುಗಡೆಯಾಯಿತು  "ಕರ್ಮಣ್ಯೇವಾಧಿಕಾರಸ್ತೇ"  ಚಿತ್ರದ ಟ್ರೇಲರ್ ಹಾಗೂ ಹಾಡುಗಳು.   ಶಾಸಕ ಅರವಿಂದ್ ಬೆಲ್ಲದ್ ಸೇರಿದಂತೆ ಅನೇಕ ಗಣ್ಯರ ಉಪಸ್ಥಿತಿ.    "ಕರ್ಮಣ್ಯೇವಾಧಿಕಾರಸ್ತೇ". ಅಂದರೆ ನೀನು ನಿನ್ನ ಕೆಲಸ ಮಾಡು.. ಫಲಾಫಲಗಳನ್ನು ನನಗೆ ಬಿಡು ಎಂದು. ಈ ವಾಕ್ಯದ ಅರ್ಥವನ್ನೇ ಇಟ್ಟುಕೊಂಡು ನಿರ್ಮಾಣವಾಗಿರುವ ಚಿತ್ರ "ಕರ್ಮಣ್ಯೇವಾಧಿಕಾರಸ್ತೇ".   ಈ ಚಿತ್ರದ ಟ್ರೇಲರ್ ಹಾಗೂ ಹಾಡುಗಳ ಬಿಡುಗಡೆ ಸಮಾರಂಭ ನಗರದ ಖಾಸಗಿ ಹೋಟೆಲ್ ನಲ್ಲಿ ನೆರವೇರಿತು. ಧಾರವಾಡ ಶಾಸಕ ಅರವಿಂದ್ ಬೆಲ್ಲದ್ ಈ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಿದರು. ನನಗೆ ಈ ಚಿತ್ರದ ನಾಯಕ ಪ್ರತೀಕ್  ಚಿಕ್ಕಂದಿನಿಂದಲೂ ಪರಿಚಯ. ಅವನು ಸಿನಿಮಾಗೆ ಬರುತ್ತಾನೆ ಎಂದು ತಿಳಿದಾಗ ....

479

Read More...

Groufie.Film Sucess Meet

Tuesday, September 14, 2021

  25ನೇ ದಿನಕ್ಕೆ  *ಗ್ರೂಫಿ*       ಸೆಲ್ಫೀ ಫೋಟೋ ತೆಗೆದುಕೊಳ್ಳುವ  ಹವ್ಯಾಸ ಅತಿಯಾದಾಗ ಅದು ಏನೆಲ್ಲ ಅನಾಹುತಕ್ಕೆ ಕಾರಣವಾಗುತ್ತದೆ ಎಂಬುದನ್ನು ಉತ್ತಮ ಸಂದೇಶದೊಂದಿಗೆ ಹೇಳುವ ಚಿತ್ರ ಗ್ರೂಫಿ,  ವಾರಗಳ ಹಿಂದೆ  ಬಿಡುಗಡೆಯಾಗಿತ್ತು, ಡಿ.ರವಿ ಅರ್ಜುನ್  ಅವರ ನಿರ್ದೇಶನದ ಈ ಚಿತ್ರಕ್ಕೆ  ಬಿಡುಗಡೆಯಾದೆಲ್ಲೆಡೆ ಉತ್ತಮ ಪ್ರತಿಕ್ರಿಯೆ ಸಹ ವ್ಯಕ್ತವಾಗಿತ್ತು. ಆ ಚಿತ್ರವೀಗ ೨೫ ದಿನಗಳನ್ನು ಯಶಸ್ವಿಯಾಗಿ ಪೂರೈಸಿ ಮುನ್ನಡೆದಿದೆ. ಈ ವಿಷಯವನ್ನು  ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡ ಹಂಚಿಕೊಂಡಿತು. ನಿರ್ದೇಶಕ ರವಿ ಅರ್ಜುನ್ ಮಾತನಾಡುತ್ತ ನಮ್ಮ ಸಿನಿಮಾಗೆ ಎಲ್ಲ ಕಡೆಯಿಂದಲೂ ಪಾಸಿಟಿವ್ ರೆಸ್ಪಾನ್ಸ್ ಬಂದಿದೆ, ಚಿತ್ರ ವೀಕ್ಷಿಸಿದ ಎಲ್ಲರೂ ಚೆನ್ನಾಗಿದೆ ....

378

Read More...

Raana.Film Trailer Launch

Tuesday, September 14, 2021

  ರಿಯಲ್ ಸ್ಟಾರ್ ಉಪೇಂದ್ರ ಬಿಡುಗಡೆ ಮಾಡಿದರು "ರಾಣ" ಟೀಸರ್.     ರಿಯಲ್ ಸ್ಟಾರ್ ಉಪೇಂದ್ರ ಅವರು ಶ್ರೇಯಸ್ಸ್ ಕೆ ಮಂಜು ಅಭಿನಯದ  "ರಾಣ" ಚಿತ್ರದ  ಟೀಸರ್ ಹಾಗೂ ಪೋಸ್ಟರ್ ಬಿಡುಗಡೆ ಮಾಡಿದರು.   ಶ್ರೇಯಸ್ಸ್ ಹೆಸರಿನಲ್ಲೇ ಶ್ರೇಯಸ್ಸು ಇದೆ. ಅವನ ಮಾತು ಕೇಳಿ ಸಂತೋಷವಾಯಿತು. ತಂದೆಯನ್ನು ಮೀರಿಸಿದ ಮಗ ಶ್ರೇಯಸ್ಸ್.  ಅವನಿಗೆ ಹಾಗೂ ಚಿತ್ರತಂಡಕ್ಕೆ ಒಳ್ಳೆಯದಾಗಲಿ ಎಂದು ಉಪೇಂದ್ರ ಹರಸಿದರು.   ಕಂಪ್ಲಿ ಶಾಸಕರಾದ J.N ಗಣೇಶ್ ಅವರು ಸಮಾರಂಭಕ್ಕೆ ಆಗಮಿಸಿ ಶುಭ ಕೋರಿದರು.   ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿರುವ ಈ ಚಿತ್ರದ ಟೀಸರ್ ಗೆ ಅಭಿಮಾನಿಗಳಿಂದ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಟೀಸರ್ ಬಿಡುಗಡೆ ಹಾಗೂ ಪತ್ರಿಕಾಗೋಷ್ಠಿಯಲ್ಲಿ ....

486

Read More...

Film 1980.Trailer Launch

Monday, September 13, 2021

 

ಪ್ರಿಯಾಂಕ ಉಪೇಂದ್ರ ಅಭಿನಯದ 1980 ಚಿತ್ರದ ಟ್ರೇಲರ್ ಬಿಡುಗಡೆ ಮಾಡಿ ಶುಭ ಕೋರಿದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ.

 

ವಿಭಿನ್ನ ಟ್ರೇಲರ್ ಗೆ ರಿಯಲ್ ಸ್ಟಾರ್ ಉಪೇಂದ್ರ ಮೆಚ್ಚುಗೆ.

 

 ಪ್ರಿಯಾಂಕ ಉಪೇಂದ್ರ ಅಭಿನಯದ 1980 ಚಿತ್ರದ ಟ್ರೇಲರ್ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ ಅವರಿಂದ ಬಿಡುಗಡೆಯಾಗಿದೆ.

ಟ್ರೇಲರ್ ಬಿಡುಗಡೆ ಮಾಡಿದ್ದ ಸುದೀಪ್, ನಾನು ಎರಡು ವರ್ಷಗಳಿಂದ ದೊಡ್ಡ ಪರದೆಯ ಮೇಲೆ ಚಿತ್ರವನ್ನಾಗಲಿ, ಟ್ರೇಲರ್ ಆಗಲಿ ನೋಡಿಲ್ಲ.‌ ತುಂಬಾ ದಿನಗಳ ನಂತರ ಈ ಅವಕಾಶ ತಂದುಕೊಟ್ಟ ಚಿತ್ರತಂಡಕ್ಕೆ ಧನ್ಯವಾದ ಎಂದು ಹೇಳುತಾ,‌ಈ ಚಿತ್ರದ ಬಿಡುಗಡೆ ವೇಳೆಗೆ ಈಗಿರುವ ಸಂಕಷ್ಟದ ಪರಿಸ್ಥಿತಿ ದೂರವಾಗಿ, ಜನರಿಂದ ‌ಚಿತ್ರಮಂದಿರ ತುಂಬ ತುಳುಕುವಂತಾಗಲಿ ಎಂದು ಶುಭ ಕೋರಿದರು.

359

Read More...

Kunthi Puthra.Film Press Meet

Monday, September 13, 2021

ನೈಜಘಟನೆಯಕುಂತಿಪುತ್ರ ೧೯೯೦ರ ಕಲಬುರ್ಗಿ ಭಾಗದಲ್ಲಿ ನಡೆದಂತಒಂದುಘಟನೆಯು ಈಗ ‘ಕುಂತಿಪುತ್ರ’ ಚಿತ್ರವಾಗಿ ಬರುತ್ತಿದೆ.ಸದ್ದಿಲ್ಲದೆ ಪಾಂಡವಪುರ ಸುತ್ತಮುತ್ತಚಿತ್ರೀಕರಣ ಮುಗಿಸಿದೆ.ಟಾಲಿವುಡ್‌ದಲ್ಲಿ ವಿಜುಯಲ್‌ಎಫೆಕ್ಟ್ ಕೆಲಸ ಮಾಡಿಕೊಂಡಿರುವರಾಜು ಬೋನಗಾನಿ ಸಿನಿಮಾಕ್ಕೆಕತೆ,ಚಿತ್ರಕತೆ ಬರೆದು ನಿರ್ದೇಶನ ಮಾಡಿರುವುದು ಮೊದಲ ಅನುಭವ. ಕತೆಯಲ್ಲಿತಾನಾಯಿತು, ತನ್ನ ಕೆಲಸವಾಯಿತುಎನ್ನುವಂತಿದ್ದ ಹುಡುಗ, ಕೆಟ್ಟದ್ದನ್ನುಎಂದೂ ಸಹಿಸಲಾರ ಹಾಗೂ ಅಲ್ಲಿಅನ್ಯಾಯಕಂಡುಬಂದರೆ, ನೇರವಾಗಿ ಹೇಳುತ್ತಿದ್ದ. ಈತನಗುಣದಿಂದ ಹಳ್ಳಿಜನರುಆತನನ್ನುತಪ್ಪಾಗಿ ತಿಳಿದುಕೊಂಡಿರುತ್ತಾರೆ.ಅವನ ಗುಣಕಂಡ ಅವಳು ಆತನ ಬದುಕಿಗೆ ಪ್ರವೇಶ ಮಾಡಿ ಸರಿದಾರಿಗೆತರಲು ....

382

Read More...

Thrivedham.Film Pooja Press Meet

Monday, September 13, 2021

ವಿಶೇಷತೆಗಳ ಗುಚ್ಚ ತ್ರಿವೇದಂ ಹೊಸಬರ ‘ತ್ರಿವೇದಂ’ ಚಿತ್ರದಲ್ಲಿ ಹಲವು ವಿನೂತನಗಳು ಇರುವುದು ವಿಶೇಷ. ಸಾಮಾನ್ಯವಾಗಿ ನೈಜಕತೆಯನ್ನು ಆದರಿಸಿದ ಚಿತ್ರಗಳು ಬಂದಿವೆ, ಬರುತ್ತಲೆಇದೆ. ಆದರೆಇದರಲ್ಲಿ ಮೂರುಸತ್ಯಘಟನೆಗಳು ಬೇರೆ ಬೇರೆ ಸ್ಥಳಗಳಲ್ಲಿ ನಡೆದಿದೆ.೨೦೧೨ರಲ್ಲಿ ಬೆಂಗಳೂರಿನ ಕುರುಬರಹಳ್ಳಿ, ಆರು ವರ್ಷದ ಕೆಳಗೆ ಮಂಡ್ಯಾ ಮತ್ತು ಹನ್ನರೆಡು ವರ್ಷದ ಹಿಂದೆ ಮೈಸೂರುಆಸುಪಾಸುದಲ್ಲಿಜರುಗಿದೆ.ಅಂದರೆ ತ್ರಿವಳಿ ಕತೆಗಳನ್ನು ಒಗ್ಗೂಡಿಸಿ ಒಂದು ಸಿನಿಮಾ ಮಾಡಲು ಹೊರಟಿದ್ದಾರೆ.ಹಾಗಂತಒಂದಕ್ಕೊಂದು ಸಂಬಂದವಿರುವುದಿಲ್ಲ ಹಾಗೂ ಸಮಾನಾಂತರವಾಗಿ ಸಾಗುತ್ತದೆ.ಎಲ್ಲವು ಪ್ರೀತಿಕುರಿತಾಗಿದ್ದುಇರುತ್ತದೆ.ಅದಕ್ಕಾಗಿಕತೆಗೆ ಪೂರಕವಾಗುವಂತೆ ....

430

Read More...

Film SLV.Film Pooja Press Meet

Saturday, September 11, 2021

  "ಎಸ್ ಎಲ್ ವಿ ಸಿರಿ ಲಂಬೋದರ ವಿವಾಹ" ಕ್ಕೆ ಸೌರಭ ಕುಲಕರ್ಣಿ ಸಾರಥ್ಯ.   ಗಣೇಶನ ಹಬ್ಬದ ಮರುದಿನವೇ ನೂತನ ಚಿತ್ರಕ್ಕೆ ಚಾಲನೆ.   "ಸಂಭ್ರಮ ಸೌರಭ"ದ ಮೂಲಕ ಮನೆ ಮಾತಾಗಿದ್ದ ಸಂಜೀವ್ ಕುಲಕರ್ಣಿ ಪುತ್ರ ಸೌರಭ್ ಕುಲಕರ್ಣಿ ನಿರ್ದೇಶಕನಾಗಿ ಕನ್ನಡ ಚಿತ್ರರಂಗ ಪಾದಾರ್ಪಣೆ ಮಾಡಿದ್ದಾರೆ.   ಇವರ ನಿರ್ದೇಶನದ ಮೊದಲ ಚಿತ್ರ "ಎಸ್ ಎಲ್ ವಿ ಸಿರಿ ಲಂಬೋದರ ವಿವಾಹ" ಚಿತ್ರದ ಮುಹೂರ್ತ ಸಮಾರಂಭ ಧರ್ಮಗಿರಿ ಮಂಜುನಾಥನ ದೇವಸ್ಥಾನದಲ್ಲಿ ನೆರವೇರಿತು. ಮೊದಲ ಸನ್ನಿವೇಶಕ್ಕೆ ನಟ ಸಿಹಿಕಹಿ ಚಂದ್ರು ಆರಂಭ ಫಲಕ ತೋರಿದರು. ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್ ಪುರಾಣಿಕ್ ಕ್ಯಾಮೆರಾ ಚಾಲನೆ ಮಾಡಿದರು. ಮಂಡ್ಯ ರಮೇಶ್, ಮಾಸ್ಟರ್ ಆನಂದ್ ಸೇರಿದಂತೆ ಅನೇಕ ಗಣ್ಯರು ....

384

Read More...

Movigarage.App Press Meet

Thursday, September 09, 2021

  ಚಂದನವನದ ಚಿತ್ರಗಳಿಗೆ ಗ್ಯಾರೇಜು ಬಂದಿದೆ           ಡಿಜಿಟಲಿಕರಣ ನಮ್ಮ ಬದುಕಿನಲ್ಲಿ ಇನ್ನು ಹಾಸು ಹೊಕ್ಕಾಗಿದೆ. ಸಿನಿಮಾ ಮಂದಿರಗಳಿಗೆ ಹೋಗಿ ಗಂಟೆಗಟ್ಟಲೆ ವ್ಯಯಿಸುವ ಮನಸ್ಥಿತಿ ಅಥವಾ ಪರಿಸ್ಥಿತಿ ಇಲ್ಲದ ಸಂದರ್ಭಗಳಲ್ಲಿ ಸಿನಿಮಾಗಳನ್ನು ಮನೆಯಲ್ಲಿ ಕುಳಿತು ಬೇಕೆಂದಾಗ, ನಮ್ಮದೆ ಮೊಬೈಲ್‌ದಲ್ಲಿ ಅಥವಾ ಸ್ಮಾರ್ಟ್ ಟಿವಿಯಲ್ಲಿ ಹಂತ ಹಂತವಾಗಿ ನೋಡುವ ಸುಲಭೋಪಾಯ ಸದರಿ ’ಓಟಿಟಿ’ ಪ್ಲಾಟ್ ಫಾರಂಗಳು ಒದಗಿಸುತ್ತಿವೆ. ಯಕ್ಷಗಾನ, ಭರತನಾಟ್ಯ, ನಾಟಕ ಪಪ್ಪೆಟ್ ಶೋ ಮತ್ತಿತ್ತರ ಪ್ರಮುಖ ಕಲೆಗಳಿಗೆ ಪ್ರೋತ್ಸಾಹಿಸಲು ವೇದಿಕೆಯಾಗಿದೆ ಕನ್ನಡದೇ ಆದ ಓಟಿಟಿ ಪ್ಲಾಟ್‌ಫ್ಲಾರ್ಮ್ ’ಮೂವಿ ಗ್ಯಾರೇಜು’.           ಗೌರಿ ಹಬ್ಬದ ದಿನದಂದು ಸುಜಾತಾ ....

393

Read More...

The Color Of Tomato.Film Teaser

Wednesday, September 08, 2021

ವಿಭಿನ್ನ ಶೀರ್ಷಿಕೆ ದಕಲರ್‌ಆಫ್‌ಟೊಮೆಟೋ ನಮ್ಮ ನೆಲದ ಸೊಗಡು, ಭಾಷೆಕುರಿತಂತೆ ಚಿತ್ರಗಳು ತೆರೆಕಂಡಿರುವುದು ವಿರಳ.ಈ ಬಾರಿಕೋಲಾರ ಮಣ್ಣಿನ ಸೊಗಡಿನ ‘ದಿ ಕಲರ್‌ಆಫ್‌ಟೊಮೆಟೋ’ ಚಿತ್ರವೊಂದು ಹೊಸದೊಂದು ವ್ಯಾಖ್ಯಾನ ಬರೆಯಲು ಮುಂದಾಗಿದೆ.ಇದರ ವಿಷಯವನ್ನು ತಿಳಿಸಲು ತಂಡವು ಜಿ.ಟಿ.ಮಾಲ್‌ದಲ್ಲಿಕಾರ್ಯಕ್ರಮವನ್ನುಏರ್ಪಾಟು ಮಾಡಿತ್ತು.ಪೊಗರುಖ್ಯಾತಿಯಧ್ರುವಸರ್ಜಾಟೈಟಲ್ ಪೋಸ್ಟರ್‌ನ್ನು ಲಾಂಚ್ ಮಾಡಿ ಶುಭ ಹಾರೈಸಿದ್ದನ್ನು ದೊಡ್ಡ ಪರದೆಯ ಮೇಲೆ ತೋರಿಸಲಾಯಿತು.ಚಿತ್ರವನ್ನು ೧ ಟು ೧೦೦ ಡ್ರೀಮ್ಸ್ ಮೂವೀಸ್ ಬ್ಯಾನರ್‌ಅಡಿಯಲ್ಲಿ ಸ್ವಾತಿಕುಮಾರ್ ನಿರ್ಮಾಣ ಮಾಡುತ್ತಿರುವುದುಎರಡನೆಅನುಭವ. ....

484

Read More...

Kaddha Chitra.Film Press Meet

Wednesday, September 08, 2021

ಚಿತ್ರಕದ್ದ ವಿಜಯರಾಘವೇಂದ್ರ ಲಾಕ್‌ಡೌನ್‌ತೆರೆವಾದ ಬಳಿಕ ಸಾಕಷ್ಟು ಚಿತ್ರಗಳು ಸೆಟ್ಟೇರಿದ್ದು, ಬಾಕಿ ಇರುವ ಸಿನಿಮಾಗಳಚಿತ್ರೀಕರಣವು ಮುಗಿದಿತ್ತು.ಈಗ ‘ಕದ್ದಚಿತ್ರ’ ಸಿನಿಮಾವೊಂದುಇದೇಅವಧಿಯಲ್ಲಿ ಮುಗಿಸಿದ್ದಾರೆ.ಕ್ರೈಂ, ಅಪರಾಧ ಸುತ್ತಇರಲಿದ್ದು,ರಂಗಭೂಮಿ ಹಿನ್ನಲೆಇರುವಸುಹಾಸ್‌ಕೃಷ್ಣಅವರದುಎರಡನೇಅನುಭವ. ಈ ಹಿಂದೆ ‘ಪಿ೫’ ಚಿತ್ರ ನಿರ್ದೇಶಿಸಿದ್ದು, ಅದುಇನ್ನಷ್ಟೇ ಬಿಡುಗಡೆಯಾಗಬೇಕಿದೆ. ಸಂದೀಪ್.ಹೆಚ್.ಕೆ ನಿರ್ದೇಶಕರೊಂದಿಗೆ ಸೇರಿಕೊಂಡು ನಿರ್ಮಾಣ ಮಾಡುತ್ತಿದ್ದಾರೆ. ಕಥಾನಾಯಕನುತನ್ನ ಖುಷಿಗೆ ಇಷ್ಟಬಂದಂತೆ ಬರೆದುಕೊಂಡಿರುತ್ತಾನೆ. ಬರಹಗಾರನೊಬ್ಬ ದಿನ ಬೆಳಗಾಗುವುದರಲ್ಲಿ ಖ್ಯಾತಿ ಗಳಿಸಿ ಸ್ಟಾರ್‌ಆಗುತ್ತಾನೆ. ಕೆಲವೊಮ್ಮೆ ....

411

Read More...

Love Me Or Hate Me.Film Pooja

Thursday, September 09, 2021

  ಗೌರಿಹಬ್ಬದಂದು ಆರಂಭವಾಯಿತು *"ಲವ್ ಮಿ or ಹೇಟ್ ಮಿ".*    *ಡಾರ್ಲಿಂಗ್ ಕೃಷ್ಣ - ರಚಿತಾ ರಾಮ್* ಅಭಿನಯದ ಚಿತ್ರಕ್ಕೆ *ದೀಪಕ್ ಗಂಗಾಧರ್* ನಿರ್ದೇಶನ.     ನಾಡಿನಾದ್ಯಂತ ಗೌರಿ - ಗಣೇಶ ಹಬ್ಬದ ಸಡಗರ. ಗೌರಿ ಹಬ್ಬದ ಶುಭದಿನದಂದು  *"ಲವ್ ಮಿ or ಹೇಟ್ ಮಿ"* ಚಿತ್ರದ ಮುಹೂರ್ತ ಸಮಾರಂಭ *ಧರ್ಮಗಿರಿ ಶ್ರೀ ಮಂಜುನಾಥ* ದೇವಸ್ಥಾನದಲ್ಲಿ ನೆರವೇರಿತು. ಚಿತ್ರದ ಮೊದಲ ಸನ್ನಿವೇಶಕ್ಕೆ  *ಮಿಲನ ನಾಗರಾಜ್* ಆರಂಭ ಫಲಕ ತೋರಿದರು.‌ *ದಿನಕರ್ ತೂಗುದೀಪ* ಕ್ಯಾಮೆರಾ ಚಾಲನೆ ಮಾಡಿದರು.    *ದೀಪಕ್ ಗಂಗಾಧರ್* ಈ ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ. ತೂಗುದೀಪ ಸಂಸ್ಥೆಯ ಕೆಲವು ಚಿತ್ರಗಳಿಗೆ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕಾರ್ಯ ನಿರ್ವಹಿಸಿದ್ದ, ದೀಪಕ್ ಗಂಗಾಧರ್ ಆ ....

419

Read More...
Copyright@2018 Chitralahari | All Rights Reserved. Photo Journalist K.S. Mokshendra,