By 1 Get 1 Free.Film Press Meet

Thursday, November 04, 2021

  ಈವಾರ ತೆರೆಮೇಲೆ ಬೈ ಒನ್ ಗೆಟ್ ಒನ್ ಫ್ರೀ   ಇತ್ತೀಚಿನ ದಿನಗಳಲ್ಲಿ ಕನ್ನಡದಲ್ಲಿ ವಿಭಿನ್ನ ಶೈಲಿಯ ಚಿತ್ರಗಳು, ಬಗೆಬಗೆಯ ಶೀರ್ಷಿಕೆಯೊಂದಿಗೆ ನಿರ್ಮಾಣವಾಗುತ್ತಿವೆ. ಅಂಥಾ ಚಿತ್ರಗಳ ಸಾಲಿಗೆ ಸೇರಿದ ಮತ್ತೊಂದು ಚಿತ್ರ ಬೈಒನ್ ಗೆಟ್‌ಒನ್ ಫ್ರೀ. ಚಿತ್ರದ ಶೀರ್ಷಿಕೆ ಹೇಗೆ ಆಕರ್ಷಣೆಯೋ ಹಾಗೆ ಈ ಚಿತ್ರದ ಮತ್ತೊಂದು ಆಕರ್ಷಣೆ ಅಂದರೆ ಅವಳಿ ಸಹೋದರರು. ಮೂಲತಃ ಮೈಸೂರಿನವರಾದ ಮಧುರಾಜ್ ಹಾಗೂ ಮನುರಾಜ್ ಎಂಬ ಅವಳಿ ಸಹೋದರರು ಈ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಬಹುಭಾಷಾ ನಟ ಕಿಶೋರ್ ಇಲ್ಲಿ ಮನ್ಮಥ ಎಂಬ ಪೋಸ್ಟ್  ಮ್ಯಾನ್ ಆಗಿ ಕಾಣಿಸಿಕೊಂಡಿದ್ದಾರೆ. ಹರೀಶ್ ಅನಿಲ್‌ಗಾಡ್ ಅವರ ನಿರ್ದೇಶನದ ಈ ಚಿತ್ರದಲ್ಲಿ  ಸಸ್ಪೆನ್ಸ್-ಥ್ರಿಲ್ಲರ್ ಜೊತೆಗೆ ಹಾರರ್ ಶೇಡ್ ....

495

Read More...

Heegeke Nee Doora Hoguve.News

Wednesday, November 03, 2021

  *ಸಂದೀಪ್ ಮಲಾನಿ* ಅಭಿನಯದ 100ನೇ ಚಿತ್ರ *"ಹೀಗೇಕೆ ನೀ ದೂರ ಹೋಗುವೆ".*    *ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಸದ್ಯದಲ್ಲೇ ಓಟಿಟಿ ಮೂಲಕ ಬಿಡುಗಡೆ* .   ನಟ, ನಿರ್ದೇಶಕ ಸಂದೀಪ್ ಮಲಾನಿ ನಟಿಸಿರುವ ನೂರನೇ ಚಿತ್ರ "ಹೀಗೇಕೆ ನೀ ದೂರ ಹೋಗುವೆ". ಈಗಾಗಲೇ ಚಿತ್ರೀಕರಣ ಬಹುತೇಕ ಪೂರ್ಣವಾಗಿರುವ ಈ ಚಿತ್ರ ಅಂತಿಮ ಹಂತದಲ್ಲಿದೆ. ಈ ಬಗ್ಗೆ ಮಾಹಿತಿ ನೀಡಲು ಚಿತ್ರತಂಡ ಪತ್ರಿಕಾಗೋಷ್ಠಿ ಆಯೋಜಿಸಿತ್ತು.   ನಾನು ಈವರೆಗೂ ತುಳು, ತಮಿಳು, ಕೊಂಕಣಿ, ಕನ್ನಡ ಸೇರಿದಂತೆ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದೇನೆ. " ಹೀಗೇಕೆ ನೀ ದೂರ ಹೋಗುವೆ" ನನ್ನ ನಟನೆಯ ‌ನೂರನೇ ಚಿತ್ರ.  ಈ ಚಿತ್ರದ ನಿರ್ದೇಶಕನೂ ನಾನೇ.. ಇದು ನನಗಿಷ್ಟವಾದ ಜನಪ್ರಿಯ ಗೀತೆಯೊಂದರ ಸಾಲು. ಚಿತ್ರದ ಕಥೆ ಹಾಗೂ ....

513

Read More...

Ombatthane Dikku.Film Trailer Rel

Tuesday, November 02, 2021

  *"ಒಂಭತ್ತನೇ ದಿಕ್ಕು"* ಟ್ರೇಲರ್ ಗೆ ಮೆಚ್ಚುಗೆಯ ಮಹಾಪೂರ.    *ಲೂಸ್ ಮಾದ ಯೋಗಿ - ಅದಿತಿ ಪ್ರಭುದೇವ* ಅಭಿನಯದ ಈ ಚಿತ್ರಕ್ಕೆ *ದಯಾಳ್ ಪದ್ಮನಾಭನ್* ನಿರ್ದೇಶನ.   ಕನ್ನಡದಲ್ಲಿ ‌ತಮ್ಮದೇ ಆದ ವಿಶಿಷ್ಟ ರೀತಿಯ ಚಿತ್ರಗಳನ್ನು ನಿರ್ದೇಶಿಸಿ ಹೆಸರಾದವರು ದಯಾಳ್ ಪದ್ಮನಾಭನ್. ಪ್ರಸ್ತುತ ಅವರು ನಿರ್ದೇಶಿಸಿರುವ ಚಿತ್ರ "ಒಂಭತ್ತನೇ ದಿಕ್ಕು".   ಲೂಸ್ ಮಾದ ಯೋಗಿ ಅವರು ನಾಯಕನಾಗಿ ನಟಿಸಿರುವ ಈ ಚಿತ್ರದ ನಾಯಕಿ ಅದಿತಿ ಪ್ರಭುದೇವ. ಇತ್ತೀಚೆಗೆ ಈ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭ ನೆರವೇರಿತು. .  ಟ್ರೇಲರ್ ಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ನಿರ್ಮಾಪಕರಾದ ಕೆ.ಮಂಜು ಹಾಗೂ ರಮೇಶ್ ಯಾದವ್ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಟ್ರೇಲರ್ ಬಿಡುಗಡೆ ....

453

Read More...

Kannikeri Hudugi.Video Song Rel

Sunday, November 28, 2021

 

*ನಿರೂಪಕಿ ದಿವ್ಯ ಆಲೂರು ಅಭಿನಯಿಸಿ,*  *ಹಾಡಿರುವ "ಕನ್ನಿಕೇರಿ ಹುಡುಗಿ"  ವಿಡಿಯೋ ಸಾಂಗ್ ಬಿಡುಗಡೆ.*

 

ಸುಮಾರು‌ ವರ್ಷಗಳಿಂದ ಚಿತ್ರರಂಗ ಹಾಗೂ ಸಾಂಸ್ಕೃತಿಕ ರಂಗದ ಹಲವು ಕಾರ್ಯಕ್ರಮಗಳ ನಿರೂಪಣೆಯ ಮೂಲಕ ಮನೆಮಾತಗಿರುವವರು ದಿವ್ಯ ಆಲೂರು.

 

ಈಗ ಅವರು "ಕನ್ನಿಕೇರಿ ಹುಡುಗಿ" ಎಂಬ ಮೂಲ ಜನಪದ ಹಾಡನ್ನು ಈಗಿನ ಯುವಜನತೆಯ ಮನಸ್ಸಿಗೆ ಹಿಡಿಸುವ ಹಾಗೆ ನಿರ್ಮಿಸಿದ್ದಾರೆ. ಈ ಹಾಡನ್ನು ಅವರೆ ಸ್ವತ ಹಾಡಿ,  ಅಭಿನಯಿಸಿರುವುದು ವಿಶೇಷ.

ಈ ಹಾಡಿನ ಬಿಡುಗಡೆ ಸಮಾರಂಭ ಇತ್ತೀಚೆಗೆ ನೆರವೇರಿತು.

440

Read More...

Khalas.Film Pooja Press Meet

Sunday, November 28, 2021

  ಕಂಠೀರವ ಸ್ಟುಡಿಯೋದಲ್ಲಿ *"ಖಲಾಸ್"* ಚಿತ್ರಕ್ಕೆ ಮುಹೂರ್ತ.    B S R films ಲಾಂಛನದಲ್ಲಿ ತೆಲುಗಿನ  ಬೋಯಪತಿ ಸುಬ್ಬರಾವ್ ಅವರು ನಿರ್ಮಿಸುತ್ತಿರುವ, ಶಶಿಕಾಂತ್ ಆನೇಕಲ್  ನಿರ್ದೇಶನದ "ಖಲಾಸ್" ಚಿತ್ರದ ಮುಹೂರ್ತ ಸಮಾರಂಭ ಕಂಠೀರವ ಸ್ಟುಡಿಯೋದಲ್ಲಿ ನೆರವೇರಿತು.   ನಾನು ರೈಟರ್ ಆಗಿ ಹಲವು ದಶಕದಿಂದ ಚಿತ್ರರಂಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಈ ಹಿಂದೆ "ಜನಗಣಮನ" ಎಂಬ ಚಿತ್ರವನ್ನು ನಿರ್ದೇಶಿಸಿದ್ದೇನೆ. ಈ ಚಿತ್ರ ಹಲವು ಭಾಷೆಗಳಲ್ಲಿ ಡಬ್ಬಿಂಗ್ ಸಹ ಆಗಿ ಜನಪ್ರಿಯವಾಗಿದೆ. "ಖಲಾಸ್" ನನ್ನ ಎರಡನೇ ನಿರ್ದೇಶನದ ಚಿತ್ರ. ರಾಜಕಾರಣಿ ಹಾಗೂ ಪೊಲೀಸ್ ಅಧಿಕಾರಿಯ ನಡುವೆ ನಡೆಯುವ ಕಥಾಹಂದರ. ರೌಡಿಗಳನ್ನು ಬೆಳೆಸುವುದು ನನ್ನ ಜೀವನ ಎಂದು ರಾಜಕಾರಣಿ ....

490

Read More...

Raw.Film Pooja Press Meet.

Sunday, November 28, 2021

  *ಬಂಡಿಮಹಾಕಾಳಿ ದೇವಸ್ಥಾನದಲ್ಲಿ "ರಾ" ಚಿತ್ರ ಆರಂಭ ..*    *ಮಂಜುನಾಥ್ ಕೆ.ಪಿ* ನಿರ್ದೇಶನದ ಈ ಚಿತ್ರಕ್ಕೆ *ಸಂತೋಷ್ ಬಾಲರಾಜ್* ನಾಯಕ.     ವಿಭಿನ್ನ ಕಥಾಹಂದರದ "ರಾ" ಚಿತ್ರದ ಮುಹೂರ್ತ ಸಮಾರಂಭ ಬಂಡಿಮಹಾಂಕಾಳಿ ದೇವಸ್ಥಾನದಲ್ಲಿ ನೆರವೇರಿತು. ಮೊದಲ ಸನ್ನಿವೇಶಕ್ಕೆ ನಿರ್ಮಾಪಕಿ ವಿನುತ ಮಂಜುಳಾ ಆರಂಭ ಫಲಕ ತೋರಿದರು. ಉದ್ಯಮಿ ಸೂರಜ್ ಗೌಡ ಕ್ಯಾಮೆರಾ ಚಾಲನೆ ಮಾಡಿದರು. ಅನೇಕ ಗಣ್ಯರು ಮುಹೂರ್ತ ಸಮಾರಂಭಕ್ಕೆ ಆಗಮಿಸಿ ಶಭ ಕೋರಿದರು.   ಶಾಂಭವಿ ಕ್ರಿಯೇಷನ್ಸ್ ಲಾಂಛನದಲ್ಲಿ ವಿನುತ ಮಂಜುಳಾ ಹಾಗೂ ಬಂಕ್ ಮಂಜುನಾಥ್ ಈ ಚಿತ್ರ ನಿರ್ಮಿಸುತ್ತಿದ್ದಾರೆ. ಕೆ.ಜಿ.ಎಫ್ ಖ್ಯಾತಿಯ  ರವಿ ಬಸ್ರೂರ್ ಸಂಗೀತ ನಿರ್ದೇಶನ ಹಾಗೂ ಕೃಷ್ಣಕುಮಾರ್(ಕೆ ಕೆ) ಅವರ ಛಾಯಾಗ್ರಹಣ ....

651

Read More...

Mysuru.Film Press Meet

Wednesday, October 27, 2021

  ಮ್ಯೂಸಿಕಲ್ ಲವ್ ಸ್ಟೋರಿಯ "ಮೈಸೂರು" .   ಇದು ಅನಿವಾಸಿ ಕನ್ನಡಿಗನ ಪ್ರೇಮಕಥೆ.   ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಮೈಸೂರು. ‌ಈಗ ಇದೇ ಹೆಸರಿನ ಚಿತ್ರವೊಂದು ಸಿದ್ದವಾಗುತ್ತಿದ್ದು, ಚಿತ್ರೀಕರಣ ಪೂರ್ಣವಾಗಿದೆ.   "ಮೈಸೂರು" ಇದು  ಹೊರ ರಾಜ್ಯದಲ್ಲಿ ನೆಲೆಸಿರುವ ಅನಿವಾಸಿ ಕನ್ನಡಿಗನ ಪ್ರೇಮಕಥೆ.‌ ಮ್ಯೂಸಿಕಲ್ ಲವ್ ಸ್ಟೋರಿ ಯೂ ಹೌದು.   ಈ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಬೆಂಗಳೂರು, ಮೈಸೂರು, ಚಿಕ್ಕಮಗಳೂರು, ಉಡುಪಿ, ಭುವನೇಶ್ವರ್, ಪೂರಿ, ಕಟಕ್ ಮುಂತಾದ ಕಡೆ ನಲವತ್ತು ದಿನಗಳ ಕಾಲ ಚಿತ್ರೀಕರಣ ನಡೆದಿದೆ.   ಕಿರುತೆರೆಯ ವಿವಿಧ ಭಾಗಗಳಲ್ಲಿ ಕಾರ್ಯ ನಿರ್ವಹಿಸಿರುವ ವಾಸುದೇವ ರೆಡ್ಡಿ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ....

406

Read More...

Television Cricket League.Press Meet

Wednesday, October 27, 2021

 

ಡಿಸೆಂಬರ್ ಎರಡನೇ ವಾರದಿಂದ ಶುರುವಾಗ್ತಿದೆ ಕಿರುತೆರೆ ಕಲಾವಿದರ ಕ್ರಿಕೆಟ್ ಪಂದ್ಯಾವಳಿ

 

 

ವಾಸವಿ ವೆಂಚರ್ಸ್ ಸಂಸ್ಥೆ ಸಹಯೋಗದಲ್ಲಿ ಡಿಸೆಂಬರ್ ಎರಡನೇ ವಾರದಿಂದ ‘ಟೆಲಿವಿಷನ್ ಕ್ರಿಕೆಟ್ ಲೀಗ್’ ನಡೆಯಲಿದ್ದು, ಇದರಲ್ಲಿ ಕಿರುತೆರೆ ಕಲಾವಿದರು ಭಾಗವಹಿಸಲಿದ್ದಾರೆ. ಟಿಸಿಎಲ್ ನಲ್ಲಿ ತಂಡಗಳು ಈಗಾಗಲೇ ಅಭ್ಯಾಸದಲ್ಲಿ ತೊಡಗಿವೆ. ಈ ಪಂದ್ಯಾವಳಿಯಲ್ಲಿ ಕ್ರೇಜಿ ಕಿಲ್ಲರ್ಸ್, ಗ್ಯಾಂಗ್ ಗರುಡಾಸ್, ಗ್ರೌಂಡ್ ಹಂಟರ್ಸ್, ಜಟಾಯು ಜೈಂಟ್ಸ್, ಕಿಂಗ್ ಕೇಸರಿಸ್, ಸರ್ಪ ಸ್ಟ್ರೈಕರ್ ಎಂಬ 6 ತಂಡಗಳಿರಲಿದ್ದು, ಕಿರುತರೆ ನಟ-ನಟಿಯರು ಭಾಗವಹಿಸಲಿದ್ದಾರೆ.

405

Read More...

Mahayogi Siddharoodha.News

Wednesday, October 27, 2021

  *ಸಾಧುಕೋಕಿಲ* ನಿರ್ದೇಶನದಲ್ಲಿ ಮೂಡಿಬಂದಿದೆ *"ಮಹಾಯೋಗಿ ಸಿದ್ದರೂಢ".*    *ಟ್ರೇಲರ್ ಬಿಡುಗಡೆ ಮಾಡಿ ಶುಭಕೋರಿದ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್*    ಮಹಾಮಹಿಮ ಸಿದ್ದರೂಢರ ಜೀವನಾಧಾರಿತ ಚಿತ್ರವೊಂದು ನಿರ್ಮಾಣವಾಗಿದೆ.   *"ಮಹಾಯೋಗಿ ಸಿದ್ದರೂಢ" ಎಂಬ ಹೆಸರಿನ ಈ ಚಿತ್ರವನ್ನು ಖ್ಯಾತ ಸಂಗೀತ ನಿರ್ದೇಶಕ ಹಾಗೂ ನಿರ್ದೇಶಕ ಸಾಧುಕೋಕಿಲ ನಿರ್ದೇಶಿಸಿದ್ದಾರೆ. ಈ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭ ಇತ್ತೀಚೆಗೆ ನೆರವೇರಿತು. ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಟ್ರೇಲರ್ ಬಿಡುಗಡೆ ಮಾಡಿ, ಶುಭ ಕೋರಿದರು.   ಬಾಗಲಕೋಟೆಯ ಮುಧೋಳದ ಮಂಟೂರಿನ ಶ್ರೀ ಸದಾನಂದ ಮಹಾಸ್ವಾಮಿಗಳು ಈ ಚಿತ್ರ ನಿರ್ಮಾಣ ಮಾಡಿದ್ದಾರೆ.   ನಮ್ಮ ಮನೆಗೂ, ....

397

Read More...

Bhajarangi 2.Film Event

Tuesday, October 26, 2021

ಭಜರಂಗಿ-೨ ಇವೆಂಟ್‌ದಲ್ಲಿ ತಾರಾಮೇಳ ಮೂವರು ಸ್ಟಾರ್ ನಟರುಗಳು ಒಂದುಕಡೆ ಸೇರಿದರೆ ಹೇಗಿರುತ್ತದೆಎಂದು ಊಹಿಸಿದರೆ ‘ಭಜರಂಗಿ-೨’ ಕಾರ್ಯಕ್ರಮ ನೆನಪಿಗೆ ಬರುತ್ತದೆ.ಯಸ್ ಪ್ರಿ ಇವೆಂಟ್‌ಕಲರ್‌ಫುಲ್ ಸಮಾರಂಭದಲ್ಲಿ ನಾಯಕ ಶಿವರಾಜ್‌ಕುಮಾರ್ ಅವರೊಂದಿಗೆ ಪುನೀತ್‌ರಾಜ್‌ಕುಮಾರ್ ಮತ್ತುಯಶ್ ಆಗಮಸಿದ್ದು ವಿಶೇಷವಾಗಿತ್ತು.ಯಶ್ ಮಾತನಾಡಿ ಸಿನಿಮಾಅನ್ನೋದುರಣರಂಗಅಲ್ಲ. ಅದೂಂದು ಸಮುದ್ರ.ಸಾಮರ್ಥ್ಯಇದ್ದವರುಈಜುತ್ತಾರೆ.ಇಲ್ಲದವರು ಮುಳುಗುತ್ತಾರೆ.ಎಲ್ಲರೂಚೆನ್ನಾಗಿರೋಣ.ಒಟ್ಟಿಗೆಇರೋಣ, ಪ್ರೀತಿಯಿಂದಇರೋಣ. ಇವತ್ತುಯಾರು, ಯಾರೇ ಸ್ಟಾರ್‌ಡಮ್ ಮೆರೆಯಲಿ. ಆದರೆ ಡಾ.ರಾಜ್‌ಕುಮಾರ್,ಶಿವಣ್ಣ ....

412

Read More...

Premam Pujyam.Film Press Meet

Tuesday, October 26, 2021

ನವೆಂಬರ್ಎರಡನೇ ವಾರದಲ್ಲಿ ಪ್ರೇಮಂಪೂಜ್ಯಂ

‘ಪ್ರೇಮಂಪೂಜ್ಯಂ’ ಚಿತ್ರವು ಬಿಡುಗಡೆ ದಿನಾಂಕವನ್ನು ಮುಂದೂಡಿರುವಕಾರಣ ವಿಷಯವನ್ನು ಹೇಳಿಕೊಳ್ಳಲು ತಂಡವು ಮಾದ್ಯಮದ ಮುಂದೆ ಹಾಜರಾಗಿತ್ತು. ನಿರ್ದೇಶಕಡಾ.ರಾಘವೇಂದ್ರ ಹೇಳುವಂತೆ  ಕರೋನ ಮೂರನೆ ಅಲೆ ಬಂದರೂ ನಮ್ಮಚಿತ್ರವುಗಟ್ಟಿಯಾಗಿ ನಿಲ್ಲುತ್ತದೆಎನ್ನುವ ನಂಬಿಕೆ ಇದೆ. ಓಟಿಟಿಯಿಂದ ಬೇಡಿಕೆ ಬಂದರೂಚಿತ್ರಮಂದಿರದಲ್ಲಿಜನರಿಗೆತೋರಿಸೋಣವೆಂದು ನಿರ್ಣಯ ತೆಗೆದುಕೊಳ್ಳಲಾಗಿದೆ.ಉತ್ತಮತಂಡಇಲ್ಲದಿದ್ರೆ ಸಿನಿಮಾ ಮಾಡಲಿಕ್ಕೆಆಗುತ್ತಿರಲಿಲ್ಲ. 

364

Read More...

My Movie Bazaar.Press Meet

Tuesday, October 26, 2021

  *ಇನ್ನೋವೇಟಿವ್ ಫಿಲಂ ಸಿಟಿ ಇನ್ನು ಮುಂದೆ ವೇಲ್ಸ್ ಇನ್ನೋವೇಟಿವ್ ಫಿಲಂ ಸಿಟಿ.*    *ಫೆಬ್ರವರಿಯಲ್ಲಿ ಹೊಸರೂಪದಲ್ಲಿ ಸಿನಿರಂಗಕ್ಕೆ ಅರ್ಪಣೆ.*   ಬಿಡದಿ ಬಳಿಯ ಇನ್ನೋವೇಟಿವ್ ಫಿಲಂ ಸಿಟಿಯನ್ನು ಚೆನ್ನೈನ ಖ್ಯಾತ ನಿರ್ಮಾಪಕ, ನಟ ಹಾಗೂ ಉದ್ಯಮಿ ವೇಲ್ಸ್ ಗ್ರೂಪ್ ನ ಮುಖ್ಯಸ್ಥ ಡಾ||ಐಸಿರಿ ಕೆ ಗಣೇಶ್ ಖರೀದಿಸಿದ್ದಾರೆ‌. ಇನ್ನು ಮುಂದೆ ವೇಲ್ಸ್‌ ಇನ್ನೋವೇಟಿವ್ ಫಿಲಂ ಸಿಟಿ ಎಂದು ಕರೆಯಲಾಗುವುದೆಂದು ವೇಲ್ಸ್ ಇನ್ನೋವೇಟಿವ್ ಫಿಲಂ ಸಿಟಿಯ ಮ್ಯಾನೇಜರ್ ಬಶೀರ್ ಅಹ್ಮದ್ ತಿಳಿಸಿದ್ದಾರೆ‌. ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಬಶೀರ್ ಅವರು, ಕರ್ನಾಟಕದ ಮೇಲೆ ಅಪಾರ ಪ್ರೀತಿ ಹೊಂದಿರುವ ಅವರು ಈ ಜಾಗವನ್ನು ಖರೀದಿಸಿದ್ದಾರೆ ಹಾಗೂ ಅನೇಕ ಗ್ಲೋಬಲ್  ....

368

Read More...

Mugilpet.Film Press Meet

Monday, October 25, 2021

  *ನವೆಂಬರ್ 19 ಕ್ಕೆ "ಮುಗಿಲ್ ಪೇಟೆ" ಚಿತ್ರ ತೆರೆಗೆ.*    *ಮನು ರವಿಚಂದ್ರನ್ ಅಭಿನಯದ ಈ ಚಿತ್ರದ ಟ್ರೇಲರ್ ಹಾಗೂ ಹಾಡುಗಳಿಗೆ ಅಪಾರ ಮೆಚ್ಚುಗೆ.*   ಕನ್ನಡ ಚಿತ್ರರಂಗಕ್ಕೆ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಕೊಡುಗೆ ಅಪಾರ. ಈಗ ಅವರ ಪುತ್ರ ಮನು ಕೂಡ  "ಮುಗಿಲ್ ಪೇಟೆ" ಮೂಲಕ ಯಶಸ್ಸಿನ ಹೆಜ್ಜೆಯಿಡಲು ಸಜ್ಜಾಗಿದ್ದಾರೆ.‌   ಮನು ಅಭಿನಯದ "ಮುಗಿಲ್ ಪೇಟೆ" ಚಿತ್ರವನ್ನು ವೀಕ್ಷಿಸಿರುವ ಸೆನ್ಸಾರ್ ಮಂಡಳಿ ಯು/ಎ ಪತ್ರ ನೀಡಿದೆ. ನವೆಂಬರ್ 19  ರಂದು ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಚಿತ್ರದ ಬಿಡುಗಡೆ ದಿನಾಂಕ ತಿಳಿಸಲು‌ ಚಿತ್ರತಂಡ ಪತ್ರಿಕಾಗೋಷ್ಠಿ ಆಯೋಜಿಸಿತ್ತು.   "ಮುಗಿಲ್ ಪೇಟೆ" ನನ್ನ ಕನಸು. ಇಡೀ ಚಿತ್ರತಂಡದ ಶ್ರಮದ ....

406

Read More...

Kannadiga Neenagu Baa.Song Rel

Monday, October 25, 2021

  .ಕನ್ನಡ ರಾಜ್ಯೋತ್ಸವಕ್ಕೆ *"ಕನ್ನಡಿಗ ನೀನಾಗು ಬಾ"* ಆಲ್ಬಂ ಸಾಂಗ್ ಬಿಡುಗಡೆ.    *ಎಸ್.ಪಿ.ಬಿ* ಕಂಠಸಿರಿಯಲ್ಲಿ ಮೂಡಿಬಂದಿದ್ದ *"ಆಟೋ"* ಚಿತ್ರದ ಅದ್ಭುತ ಗೀತೆಯ ಮರುಚಿತ್ರಣ.   ಕನ್ನಡ ಹಾಗೂ ಗೋವಿನ ಬಗ್ಗೆ ಅಪಾರ ಅಭಿಮಾನವಿರುವ ಮಾರುತಿ ಮೆಡಿಕಲ್ಸ್‌ ನ ಮಹೇಂದ್ರ ಮಣೋತ್ 2009ರಲ್ಲಿ "ಆಟೋ" ಚಿತ್ರವನ್ನು ನಿರ್ಮಾಣ ಮಾಡಿದ್ದರು. ಆ ಚಿತ್ರದಲ್ಲಿ ಗಾನಗಾರೂಡಿಗ ಎಸ್ ಪಿ ಬಾಲಸುಬ್ರಹ್ಮಣ್ಯಂ "ಶತಶತಮಾನಗಳೇ ಉರುಳಲಿ" ಎಂಬ ಹಾಡನ್ನು ಹಾಡಿದ್ದರು.   ಈಗ ಅದೇ ಚಿತ್ರದ ಹಾಡನ್ನು ಮಹೇಂದ್ರ ಮಣೋತ್ ಮರು ನಿರ್ಮಾಣ ಮಾಡಿದ್ದಾರೆ ರಾಜ್ಯೋತ್ಸವದ ಸಲುವಾಗಿ.   ಬಿ.ಪಿ.ಹರಿಹರನ್ ಈ ಹಾಡನ್ನು ನಿರ್ದೇಶನ ಮಾಡಿದ್ದಾರೆ. ಮಲ್ಲಿಕಾರ್ಜುನ ಮುತ್ತಲಗೇರಿ ಈ ಹಾಡನ್ನು ....

411

Read More...

Toom and Jarry.Film Press Meet

Monday, October 25, 2021

ಯುವ ಜೋಡಿಗಳ ಸಂಕೀರ್ಣ ಗುಣಗಳು

ಕೆಜಿಎಫ್ ಛಾಪ್ಟರ್-೧ಗೆ ಕೆಲಸ ಮಾಡಿರುವರಾಘವ್‌ವಿನಯ್ ಶಿವಗಂಗೆ ಇವರು ‘ಟಾಮ್‌ಅಂಡ್‌ಜೆರ್ರಿ’ ಚಿತ್ರಕ್ಕೆರಚನೆ-ನಿರ್ದೇಶನ, ಎರಡನೇಛಾಯಾಗ್ರಾಹಕರಾಗಿದ್ದ ಸಂಕೇತ್ ಪೂರ್ಣಪ್ರಮಾಣದಕ್ಯಾಮಾರಮನ್ ಮತ್ತು ಖಳನಾಗಿ ಕಾಣಿಸಿಕೊಂಡಿದ್ದ ವಿಶ್ವಾಸ್ ಮುಖ್ಯ ಖಳನಾಯಕ. ಮಾಸ್‌ಎಂಟರ್‌ಟೈನ್‌ಮೆಂಟ್‌ದಲ್ಲಿ ಬೇರೆಯದೇಅರ್ಥದಲ್ಲಿ ಬದುಕುತ್ತಿರುವಎರಡು ಪಾತ್ರಗಳ ಕತೆಯಲ್ಲಿ ನಗು, ಅಳು, ಸಂತೋಷಇರುತ್ತದೆ.

397

Read More...

Vijayanand.Film Pooja News

Sunday, October 24, 2021

ವಿಜಯಾನಂದನಿಗೆಅದ್ದೂರಿ ಮಹೂರ್ತ ಖ್ಯಾತಉದ್ಯಮಿ ವಿಜಯ್‌ಸಂಕೇಶ್ವರಜೀವನಕತೆ ಆಧರಿಸಿದ ‘ವಿಜಯಾನಂದ’ ಚಿತ್ರದ ಮಹೂರ್ತ ಸಮಾರಂಭವುಅದ್ದೂರಿಯಾಗಿ ಹುಬ್ಬಳ್ಳಿಯ ವರೂರಿನಲ್ಲಿರುವ ವಿಆರ್‌ಎಲ್ ಪ್ರಧಾನಕಾರ್ಯಾಲಯದಲ್ಲಿ ನಡೆಯಿತು.ಸಮಾರಂಭದಲ್ಲಿ ವಿಜಯ್‌ಸಂಕೇಶ್ವರ, ಆನಂದ್‌ಸಂಕೇಶ್ವರ ಮುಂತಾದವರು ಭಾಗವಹಿಸಿದ್ದರು.ಅನಂತ್‌ನಾಗ್ ಮತ್ತು ನಾಯಕ ನಿಹಾಲ್‌ಅಭಿನಯದ ಮೊದಲ ದೃಶ್ಯಕ್ಕೆ ನಟಗಣೇಶ್‌ಕ್ಲಾಪ್ ಮಾಡಿ ಶುಭ ಹಾರೈಸಿದರು.ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕಿರಿಷಿಕಾಶರ್ಮಒಂಬತ್ತು ವರ್ಷದಅನುಭವದಲ್ಲಿಇದುಎರಡನೆ ಪ್ರಯತ್ನ.೧೯೫೦ ರಿಂದ ೨೦೧೮ರ ವರೆಗಿನ ವಿಜಯ್ ಸಂಕೇಶ್ವರಅವರ ಪಯಣವನ್ನುತೋರಿಸಲಾಗುವುದು.ಒಂದುಅದ್ಬುತ ....

397

Read More...

Kotigobba 3.Film Success Meet

Saturday, October 23, 2021

ಸಂತೋಷಕೂಟದಲ್ಲಿ ಕೋಟಿಗೊಬ್ಬ-೩ ಬಿಡುಗಡೆಒಂದು ದಿನ ತಡವಾದರೂ ಹೆಸರಿಗೆತಕ್ಕಂತೆ ‘ಕೋಟಿಗೊಬ್ಬ-೩’ ಚಿತ್ರವುಒಟ್ಟಾರೆ ೪೦.೫ ಕೋಟಿ ಸಂಗ್ರಹವಾಗಿದೆಎಂಬುದಾಗಿ ಮಾಹಿತಿ ಲಭ್ಯವಾಗಿದೆ.ಅಂತೂ ಸಿನಿಮಾವು ಗೆಲುವಿನ ಸಂತಸದಲ್ಲಿದೆ.ನಿರ್ಮಾಪಕ ಸೂರಪ್ಪಬಾಬು ಮಾತನಾಡಿ ನಮ್ಮಿಬ್ಬರ ನಡುವ ವೈಮನಸ್ಸಿದೆ. ಹಾಗಾಗಿ ಬಿಡುಗಡೆ ವಿಳಂಬವಾಯಿತುಎಂದುಎಲ್ಲರೂ ಹೇಳುತ್ತಿದ್ದರು. ಪರದೆ ಮೇಲೆ ದೃಶ್ಯಗಳು ಉತ್ತಮವಾಗಿ ಬರಬೇಕೆಂದು ನಾವಿಬ್ಬರು ಜಗಳವಾಡಿದ್ದು ನಿಜ. ಅದು ಪ್ರೀತಿಯಿಂದ ಮಾತ್ರ.ತಡವಾದಾಗ ಸುದೀಪ್ ಪೋಷಕರು, ನನ್ನ ಮಗಳು ಧೈರ್ಯತುಂಬಿದರು.ಪ್ರೇಕ್ಷಕರು ಸಿನಿಮಾವನ್ನುಇಷ್ಟಪಟ್ಟು ಗೆಲುವು ....

382

Read More...

Peddu Narayana.Film Press Meet

Saturday, October 23, 2021

ಟ್ರೇಲರ್ ಮೂಲಕ ಪೆದ್ದು ನಾರಾಯಣ ಆಗಮನ ಹೊಸಬರ ‘ಪೆದ್ದು ನಾರಾಯಣ’ ಚಿತ್ರದಟ್ರೇಲರ್‌ಇತ್ತೀಚೆಗೆ ಬಿಡಗಡೆಗೊಂಡಿತು. ಹಿರಿಯ ನಟಕೀರ್ತಿರಾಜ್ ತುಣುಕುಗಳಿಗೆ ಚಾಲನೆ ನೀಡಿತಂಡಕ್ಕೆ ಶುಭಹಾರೈಸಿದರು.ಗಂಗಾಗುರುಕಂಬೈನ್ಸ್ ಬ್ಯಾನರ್‌ಅಡಿಯಲ್ಲಿ ಕೆ.ವಾಸುದೇವ್ ಅರ್ಪಿಸಿ, ಭೀಮರೆಡ್ಡಿ ನಿರ್ಮಿಸುತ್ತಿರುವ ಸಿನಿಮಾಕ್ಕೆಉತ್ತರಕರ್ನಾಟಕದರಘು.ಎ.ರೂಗಿ ನಿರ್ದೇಶನ ಮಾಡುತ್ತಿದ್ದಾರೆ.ಈಗಾಗಲೇ ಹಲವು ಚಿತ್ರಗಳಿಗೆ ಛಾಯಾಗ್ರಾಹಕರಾಗಿ ಕೆಲಸ ಮಾಡಿದಅನುಭವದಿಂದಆಕ್ಷನ್‌ಕಟ್ ಹೇಳುತ್ತಿದ್ದಾರೆ.ಶ್ರೀರತ್ನಕರ್, ವಿಷ್ಣುಪ್ರಿಯಾ, ಸುರಕ್ಷಾ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ.ಉಳಿದಂತೆ ಸಂತೋಷ್‌ನಾರಾಯಣ್‌ಶೆಟ್ಟಿ, ....

432

Read More...

Bhagyavantharu.Film Re-Release

Thursday, October 21, 2021

  *ನವೆಂಬರ್ ನಲ್ಲಿ ನವೀನ ತಂತ್ರಜ್ಞಾನದೊಂದಿಗೆ ಬರುತ್ತಿದ್ದಾರೆ "ಭಾಗ್ಯವಂತರು"* .   ಭಾರ್ಗವ ಅವರ ನಿರ್ದೇಶನದಲ್ಲಿ ಡಾ||ರಾಜಕುಮಾರ್ ಹಾಗೂ ಬಿ.ಸರೋಜಾದೇವಿ ಅವರು ನಟಿಸಿದ್ದ ಸೂಪರ್ ಹಿಟ್ ಚಿತ್ರ " ಭಾಗ್ಯವಂತರು".   ಇದೇ ನವೆಂಬರ್ ನಲ್ಲಿ ಈ ಚಿತ್ರ ಡಿ.ಐ, 7.1 ಟ್ರ್ಯಾಕ್ ಸೇರಿದಂತೆ ಅನೇಕ ನವೀನ ತಂತ್ರಜ್ಞಾನ ಅಳವಡಿಕೆಯೊಂದಿಗೆ ಮರು ಬಿಡುಗಡೆಯಾಗುತ್ತಿದೆ. ಮುನಿರಾಜು ಈ ಚಿತ್ರವನ್ನು ಮತ್ತೆ ತೆರೆಗೆ ತರುತ್ತಿದ್ದಾರೆ.   ನನ್ನ ಮೊದಲ ನಿರ್ದೇಶನದ ಚಿತ್ರ "ಭಾಗ್ಯವಂತರು". ದ್ವಾರಕೀಶ್ ಈ ಚಿತ್ರದ ನಿರ್ಮಾಪಕರು. ನಾನು ಆಗಲೇ ರಾಜಕುಮಾರ್ ಅವರು ನಟಿಸಿದ್ದ ಬಬ್ರುವಾಹನ, ನಾ ನಿನ್ನ ಮರೆಯಲಾರೆ, ಜಗ ಮೆಚ್ಚಿದ ಮಗ ಸೇರಿದಂತೆ ಅನೇಕ ಚಿತ್ರಗಳಿಗೆ ಸಹ ನಿರ್ದೇಶನ ....

416

Read More...

Creative Time Indio Pvt Ltd.Press Meet

Wednesday, October 20, 2021

  ಕ್ರಿಯೇಟಿವ್ ಟೈಮ್ಸ್ ಸ್ಟುಡಿಯೋ ಉದ್ಘಾಟನೆ   ಕನ್ನಡ ಕಿರುತೆರೆ, ಹಿರಿತೆರೆಯಲ್ಲಿ ೩೦ ವರ್ಷಗಳ ಕಾಲ  ಬರಹಗಾರ, ಧಾರಾವಾಹಿ ನಿರ್ದೇಶಕನಾಗಿ ಸೇವೆ ಸಲ್ಲಿಸಿರುವ ಬುಕ್ಕಾಪಟ್ಟಣ ವಾಸು ಈಗಾಗಲೇ ಸೆಂಚುರಿ ಫಿಲಂ ಇನ್ಸ್ಟಿಟ್ಯೂಟ್ ಎಂಬ ಚಲನಚಿತ್ರ ತರಬೇತಿ ಸಂಸ್ಥೆಯನ್ನು ಸ್ಥಾಪಿಸಿದ್ದು, ಆ ಮೂಲಕ ಹಲವಾರು ಪ್ರತಿಭೆಗಳನ್ನು ಹುಟ್ಟುಹಾಕಿದ್ದಾರೆ.  ಅದರ ಮುಂದುವರಿದ ಭಾಗವಾಗಿ ಈಗ ಮತ್ತೊಂದು ಸಾಹಸಕ್ಕೆ ಮುಂದಾಗಿದ್ದಾರೆ. ಗೆಳೆಯ ಶ್ರೀಸಾಯಿಕೃಷ್ಣ ಅವರ ಜೊತೆ ಸೇರಿ ಅತ್ಯಾಧುನಿಕ ತಂತ್ರಜ್ಞಾನದ ಸ್ಪರ್ಷದೊಂದಿಗೆ ನಾಗರಭಾವಿಯ ಬಿಡಿಎ ಕಾಂಪ್ಲೆಕ್ಸ್ ಬಳಿ ಕ್ರಿಯೇಟಿವ್ ಟೈಮ್ಸ್ ಇಂಡಿಯಾ ಪ್ರೈ. ಲಿಮಿಟೆಡ್ ಎಂಬ ಹೊಸ ಸ್ಟುಡಿಯೊವೊಂದನ್ನು ಆರಂಭಿಸಿದ್ದಾರೆ. ಇದರ ಉದ್ಘಾಟನಾ ....

456

Read More...
Copyright@2018 Chitralahari | All Rights Reserved. Photo Journalist K.S. Mokshendra,