*ಮೈಸೂರಲ್ಲಿ ’ಜೋಡೆತ್ತು’ ಚಿತ್ರದ ಅದ್ದೂರಿ ಕ್ಲೈಮ್ಯಾಕ್ಸ್* *ನಾಯಕನ ಗೆಲುವಿನ ಸಂಭ್ರಮದಲ್ಲಿ ಸಾವಿರಾರು ಸಹಕಲಾವಿದರು ಭಾಗಿ* ಸೋಮಶೇಖರ್ ಕಟ್ಟಿಗೇನಹಳ್ಳಿ ನಿರ್ಮಾಣದ ಜೋಡೆತ್ತು ಚಿತ್ರ ಕ್ಲೈಮ್ಯಾಕ್ಸ್ ಹಂತ ತಲುಪಿದೆ. ಚಿಕ್ಕಣ್ಣ, ಸುನಿಲ್ (ತೆಲುಗು) ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿರುವ ’ಜೋಡೆತ್ತು’ ಚಿತ್ರದ ಕ್ಲೈಮ್ಯಾಕ್ಸ್ ಭಾಗದ ಶೂಟಿಂಗ್ ಮೈಸೂರಿನ ಹೊರ ಭಾಗದ ಇಮ್ಮಾವು ಬಳಿ ಅದ್ದೂರಿಯಾಗಿ ನಡೆಯುತ್ತಿದೆ. ಅಲ್ಲಿ ಛಾಯಾಗ್ರಾಹಕ ಕಮ್ ನಿರ್ದೇಶಕ ಸುಧಾಕರ್ ಈ ರೋಮಾಂಚನಕಾರಿ ಎತ್ತಿನಗಾಡಿ ಚೇಸಿಂಗ್ ದೃಶ್ಯಗಳನ್ನು ಸೆರೆ ಹಿಡಿಯುತ್ತಿದ್ದರು. ಸುಮಾರು ಸಾವಿರಕ್ಕೂ ಹೆಚ್ಚು ಜೂನಿಯರ್ ಕಲಾವಿದರು ಮತ್ತು ನೂರಾರು ಎತ್ತಿನ ಗಾಡಿಗಳನ್ನು ....
'ಲವ್ ಒನ್ಸ್ ಮೋರ್’ ಟೈಟಲ್ ಜಾವಗಲ್ ಶ್ರೀನಾಥ್ ಬಿಡುಗಡೆ ಚಿತ್ರರಂಗದಲ್ಲಿ ಡಾಕ್ಟರ್, ಎಂಜಿನಿಯರ್, ರಾಜಕಾರಣಿ, ಲಾಯರ್ ಹೀಗೆ ಪ್ರತಿಯೊಬ್ಬರೂ ತಮ್ಮ ಅದೃಷ್ಟಪರೀಕ್ಷೆ ಮಾಡಿಕೊಂಡಿದ್ದಾರೆ. ಇದೀಗ ಮತ್ತೊಬ್ಬ ವೈದ್ಯರ ಆಗಮನವಾಗಿದೆ. ಅವರೇ ಡಾ.ಕಿರಣ್ ಶೇಖರ್. ಸಧ್ಯ ಆಸ್ಟ್ರೇಲಿಯಾದಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿರುವ ಅವರು ’ಮಿರಾನಾ ಪಿಕ್ಚರ್ಸ್’ ಎಂಬ ನಿರ್ಮಾಣ ಸಂಸ್ಥೆಯನ್ನು ಹುಟ್ಟುಹಾಕಿ ಆ ಮೂಲಕ ಸದಭಿರುಚಿಯ ಸಿನಿಮಾಗಳನ್ನು ನಿರ್ಮಿಸಲು ಮುಂದಾಗಿದ್ದಾರೆ. ಅವರ ಪ್ರಥಮ ಪ್ರಯತ್ನದಲ್ಲಿ ಮೂಡಿಬರುತ್ತಿರುವ ಚಿತ್ರವೇ ಲವ್ ಒನ್ಸ್ ಮೋರ್. ತಮ್ಮ ಹೊಸ ಬ್ಯಾನರ್ ಲಾಂಚ್ ಹಾಗೂ ಹೊಸ ಚಿತ್ರದ ಟೈಟಲ್ ಅನಾವರಣ ಕಾರ್ಯಕ್ರಮವನ್ನು ....
*"ಮಹಾನ್" ಚಿತ್ರದ ಪ್ರಮುಖಪಾತ್ರದಲ್ಲಿ ರಾಧಿಕಾ ನಾರಾಯಣ್ ಹಾಗೂ ಮಿತ್ರ. ಫಸ್ಟ್ ಲುಕ್ ಅನಾವರಣ ಮಾಡಿದ ಚಿತ್ರತಂಡ* . ಕನ್ನಡದಲ್ಲಿ ಸಾಕಷ್ಟು ಸದಭಿರುಚಿಯ ಚಿತ್ರಗಳನ್ನು ನಿರ್ದೇಶಿಸಿರುವ ಪಿ.ಸಿ.ಶೇಖರ್ ನಿರ್ದೇಶನದ, ಆಕಾಶ ಪಿಕ್ಚರ್ಸ್ ಲಾಂಛನದಲ್ಲಿ ಪ್ರಕಾಶ್ ಬೂದೂರು ಅವರು ನಿರ್ಮಿಸುತ್ತಿರುವ ಹಾಗೂ ತಮ್ಮ ಅಮೋಘ ಅಭಿನಯದ ಮೂಲಕ ಜನಪ್ರಿಯರಾಗಿರುವ ವಿಜಯ ರಾಘವೇಂದ್ರ ನಾಯಕರಾಗಿ ನಟಿಸುತ್ತಿರುವ "ಮಹಾನ್" ಚಿತ್ರದ ಪ್ರಮುಖಪಾತ್ರದಲ್ಲಿ "ರಂಗಿತರಂಗ" ಖ್ಯಾತಿಯ ರಾಧಿಕಾ ನಾರಾಯಣ್ ಹಾಗೂ ಖ್ಯಾತ ನಟ ಮಿತ್ರ ಅಭಿನಯಿಸಿದ್ದಾರೆ. ಇತ್ತೀಚೆಗೆ "ಮಹಾನ್" ಚಿತ್ರತಂಡ ರಾಧಿಕಾ ನಾರಾಯಣ್ ಹಾಗೂ ಮಿತ್ರ ಅವರ ಫಸ್ಟ್ ಲುಕ್ ಬಿಡುಗಡೆ ಮಾಡಿದೆ. "ಮಹಾನ್" ....
ಆಗಸ್ಟ್ .16ಕ್ಕೆ ಎಸಿ ಮಿಸ್ ಅಂಡ್ ಮಿಸ್ಟರ್ ಇಂಡಿಯಾ ಮೆಗಾ ಆಡಿಷನ್- ಮುಧೋಳ್ ಫಸ್ಟ್ ಸಾಂಗ್ ಅಮೃತ ಸಿನಿಕ್ರಾಫ್ಟ್ ವತಿಯಿಂದ 9ನೇ ’ಮಿಸ್ ಅಂಡ್ ಮಿಸಸ್ ಇಂಡಿಯಾ ವುಮನ್ ಆಫ್ ಸಬ್ ಸ್ಟ್ಯಾನ್ಸ್’ ಸ್ಪರ್ಧೆ ನಡೆಯಲಿದೆ. ನಿನ್ನೆ ಕರೆದಿದ್ದ ಪತ್ರಿಕಾ ಗೋಷ್ಠಿಯಲ್ಲಿ ಅಮೃತ ಸಿನಿಕ್ರಾಫ್ಟ್ ಸಂಸ್ಥಾಪಕಿ ಅಮೃತಾ ವಿಜಯ್ ರವಿಪಾಟಿ ಟಾಟಾ ಅವರು ಕಾರ್ಯಕ್ರಮದ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು. ಪ್ರತಿಭಾವಂತ ಮಹಿಳೆಯರಿಗೆ ಉತ್ತಮ ವೇದಿಕೆ ಕಲ್ಪಿಸಿಕೊಡುವುದು, ಅವರಲ್ಲಿ ಆತ್ಮ ವಿಶ್ವಾಸ ಬೆಳೆಸುವುದು ನಮ್ಮ ಉದ್ದೇಶ. ಪ್ರತಿ ವರ್ಷ ದುಬೈನಲ್ಲಿ ನಡೆಯುತ್ತಿದ್ದ ಈ ಸ್ಪರ್ಧೆ ಈ ವರ್ಷ ಬೆಂಗಳೂರಿನಲ್ಲಿ ನಡೆಯಲಿದೆ. ಈ ಸೀಜನ್ ನ ಮೆಗಾ ಆಡಿಷನ್ ಆಗಸ್ಟ್ .16ರಂದು ....
*ಸೆಪ್ಟೆಂಬರ್ 18 ರಂದು ತೆರೆಗೆ ಬರಲಿದೆ ಶ್ರೀನಗರ ಕಿಟ್ಟಿ - ಮೇಘನಾರಾಜ್ ಅಭಿನಯದ "ಅಮರ್ಥ"* . ಪಂಚರಂಗಿ ಫಿಲಂಸ್ ಲಾಂಛನದಲ್ಲಿ ಡಾ|| ಕನ್ಯಾನ ಸದಾಶಿವ ಶೆಟ್ಟಿ ಹಾಗೂ ಗುರು ಹೆಗ್ಡೆ ನಿರ್ಮಸಿರುವ, ಗುರು ಹೆಗ್ಡೆ ಹಾಗೂ ವಿನಯ್ ಪ್ರೀತಮ್ ನಿರ್ದೇಶನದ ಮತ್ತು ಶ್ರೀನಗರ ಕಿಟ್ಟಿ - ಮೇಘನಾರಾಜ್ ನಾಯಕ- ನಾಯಕಿಯಾಗಿ ನಟಿಸಿರುವ "ಅಮರ್ಥ" ಚಿತ್ರ ಇದೇ ಸೆಪ್ಟೆಂಬರ್ 18 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಚಿತ್ರದ ಬಿಡುಗಡೆ ದಿನಾಂಕ ಘೋಷಣೆ ಹಾಗೂ ಪತ್ರಿಕಾಗೋಷ್ಠಿ ಇತ್ತೀಚೆಗೆ ನಡೆಯಿತು. ಹಿರಿಯ ನಟ ಹಾಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಉಪಾಧ್ಯಕ್ಷ ಸುಂದರರಾಜ್ ಅವರು ಚಿತ್ರದ ಬಿಡುಗಡೆ ದಿನಾಂಕವುಳ್ಳ ಮೋಷನ್ ಪೋಸ್ಟರ್ ಅನ್ನು ಅನಾವರಣ ಮಾಡಿದರು. ....
ಕಿಡಿ ಹೊತ್ತಿಸಿದ ’ಸ್ಪಾರ್ಕ್’ ಮೊದಲ ಗೀತೆ..! ’ಶಕಲಕ ಭುಂ ಭೂಮ್..’ ಎಂದು ಆರಂಭವಾದ ಹಾಡು ಸುದ್ದಿಗೋಷ್ಠಿಯ ವೇದಿಕೆಯಲ್ಲಿ ಕಿಚ್ಚು ಹತ್ತಿಸಿತು. ಕಾರಣ ಒಂದು ಕಡೆ ಹಾಡಿನಲ್ಲಿರುವ ಮೋಡಿ ಮತ್ತೊಂದೆಡೆ ಆ ಹಾಡಿಗೆ ಹೆಜ್ಜೆ ಹಾಕಿರುವ ಜೋಡಿ. ನಿರಂಜನ್ ಸುಧೀಂದ್ರ ಮತ್ತು ರಚನಾ ಇಂದರ್ ಹೆಜ್ಜೆ ಹಾಕಿರುವ ಅದ್ಧೂರಿ ಹಾಡಿನ ಅನಾವರಣ ಸಮಾರಂಭ ಈ ಎಲ್ಲದಕ್ಕೂ ಸಾಕ್ಷಿಯಾಯಿತು. ನಿರಂಜನ್ ಮತ್ತು ರಚನಾ ಇಂದರ್ ಮಸ್ತಾಗಿ ಕುಣಿದ ಗೀತೆ ನೋಡಿ ಸ್ಪಾರ್ಕ್ ನಲ್ಲಿ ಖಳನಾಗಿ ನಟಿಸಿರುವ ಪ್ರೇಮ್ ಮೆಚ್ಚಿ ಮಾತನಾಡಿದರು. ನಿರಂಜನ್ ನಮ್ಮ ಕನ್ನಡದ ಪ್ರತಿಭೆ. ಅವರನ್ನು ಪರಭಾಷೆಯವರು ಹೈಜಾಕ್ ಮಾಡುವ ಮೊದಲು, ಕನ್ನಡದ ನಿರ್ಮಾಪಕರು ಉಳಿಸಿಕೊಳ್ಳಬೇಕು. ಈ ಚಿತ್ರದ ....
*ತನುಷ್ ಶಿವಣ್ಣ ಅಭಿನಯದ ‘ಬಾಸ್’ ಚಿತ್ರದ ಬಿಡುಗಡೆಗೆ ದರ್ಶನ್ ಅವರ ಒಪ್ಪಿಗೆ* . *ಲವ ವಿ ನಿರ್ದೇಶನದ ಈ ಚಿತ್ರ ಆಗಸ್ಟ್ 7 ರಂದು ತೆರೆಗೆ* . ತನುಷ್ ಶಿವಣ್ಣ ನಾಯಕನಾಗಿ ನಟಿಸಿರುವ ಹಾಗೂ ಲವ ವಿ ನಿರ್ದೇಶನದ ’ಬಾಸ್’ ಚಿತ್ರ ಆರಂಭದಿಂದಲೂ ಸಾಕಷ್ಟು ಸದ್ದು ಮಾಡುತ್ತಿದೆ. ಅಲ್ಲದೆ ಚಿತ್ರಕ್ಕೆ ಸಾಕಷ್ಟು ಅಡೆತಡೆಗಳು ಎದುರಾಗಿತ್ತು. ಈ ಚಿತ್ರದ ಬಿಡುಗಡೆಗೆ ತಡೆ ಕೋರಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಶ್ರೀಮತಿ ....
"ಕರ್ಣಾಟಬಲಂ ಅಜೇಯಂ" ಚಿತ್ರಕ್ಕಾಗಿ ಬಾದಾಮಿ ಬೆಟ್ಟದಲ್ಲಿ ಮೇಳೈಸಿದ ಕಲಾಮೇಳ ಸಹಸ್ರಾರು ನೃತ್ಯ ಕಲಾವಿದರೊಂದಿಗೆ ಕಲರ್ ಫುಲ್ ಹಾಡಿಗೆ ಹೆಜ್ಜೆ ಹಾಕಿದ ಧ್ಯಾನ್ ಯೋಗೀಶ್ವರ್. ಶಾಸಕ, ನಟ, ನಿರ್ಮಾಪಕ ಸಿ.ಪಿ ಯೋಗೀಶ್ವರ್ ಅವರ ಮಗ ಧ್ಯಾನ್ ಯೋಗೀಶ್ವರ್ ನಾಯಕನಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿರುವ ’ಕರ್ಣಾಟಬಲಂ ಅಜೇಯಂ’ ಚಿತ್ರಕ್ಕೆ ಬಾದಾಮಿಯಲ್ಲಿ ಅದ್ದೂರಿಯಾಗಿ ಹಾಡಿನ ಚಿತ್ರೀಕರಣ ನಡೆದಿದೆ. ಇತ್ತೀಚೆಗೆ ಚಿತ್ರತಂಡ ಚಿತ್ರೀಕರಣ ವೀಕ್ಷಣೆಗೆ ಮಾಧ್ಯಮದವರನ್ನು ಬಾದಾಮಿಗೆ ಆಹ್ವಾನಿಸಿತ್ತು. ಬಾದಾಮಿಯ ಕೋಟೆಯಲ್ಲಿ ಚಿತ್ರದ ಶೀರ್ಷಿಕೆ ಗೀತೆಯ ಚಿತ್ರೀಕರಣ ಭರದಿಂದ ಸಾಗಿತ್ತು. ಚಿತ್ರದ ನಾಯಕ ಧ್ಯಾನ್ ಸಹಸ್ರಾರು ಕಲಾವಿದರು ಹಾಗೂ ಸಹ ....
ನೋ ಕೋಕೇನ್ ಕೊನೆ ದಿನದ ಶೂಟಿಂಗ್ ಬಿಗ್ ಬಾಸ್ ಪ್ರಥಮ್ ನಾಯಕ, ಹಿರಿಯ ಸಾಹಸ ಸಂಯೋಜಕ ಕೌರವ ವೆಂಕಟೇಶ್ ಮೊದಲ ಬಾರಿ ನಿರ್ದೇಶನ ಮಾಡುತ್ತಿರುವ ‘ನೋ ಕೋಕೇನ್’ ಸಿನಿಮಾದ ಕೊನೆ ದಿನದ ಚಿತ್ರೀಕರಣ ನಾಗರಬಾವಿಯಲ್ಲಿರುವ ಆರ್ಟ್ ಅಂಡ್ ಲೆನ್ಸ್ ಸ್ಟುಡಿಯೋದಲ್ಲಿ ನಡೆಯುತ್ತಿತ್ತು. ದ ಡಫಿನಿಷನ್ ಆಫ್ ಪ್ಯಾಟ್ರಿಯಾಟಿಸಮ್ ಎಂಬ ಅಡಿಬರಹವಿದೆ. ಅಯೋಧ್ಯರಾಮ್ ಪ್ರೊಡಕ್ಷನ್ಸ್ ಅಡಿಯಲ್ಲಿ ಪುನೀತ್ ನಿರ್ಮಾಣ ಮಾಡುತ್ತಿದ್ದಾರೆ. ಅಂದು ಕಲಾವಿದರುಗಳಾದ ಹಿರಿಯ ನಟಿ ಭವ್ಯ, ನಾಯಕಿ ಆರ್ನಾ ಮೂಲೇರ್, ಶೋಭರಾಜ್, ಕೋಟ್ ಪ್ರಭಾಕರ್, ಮಿಮಿಕ್ರಿ ಗೋಪಿ, ಸುಶ್ಮಿತಾ ಮುಂತಾದವರು ಸೆಟ್ದಲ್ಲಿ ಹಾಜರಿದ್ದರು. ....
*ಆಯೋಗ್ಯ-2 ಚಿತ್ರದ ’ಮಿಲ್ಕಿ ಬ್ಯೂಟಿ’ ಹಾಡು ರಿಲೀಸ್* *ಸುಮಾರು ವರ್ಷಗಳ ನಂತರ ನಟಿ ಪ್ರಜ್ಞಾ ಕಂಬ್ಯಾಕ್* *ಆಗಸ್ಟ್ 7 ರಂದು ರಾಜ್ಯಾದ್ಯಂತ ಅದ್ದೂರಿ ಬಿಡುಗಡೆ* ಸತೀಶ್ ನೀನಾಸಂ, ರಚಿತಾ ರಾಮ್ ಜೋಡಿಯ ‘ಅಯೋಗ್ಯ 2’ ಚಿತ್ರದ ಮತ್ತೊಂದು ಹಾಡು ಅನಾವರಣಗೊಂಡಿದೆ. ಇತ್ತೀಚೆಗಷ್ಟೇ ಬಿಡುಗಡೆಯಾದ ’ಮುದ್ದು ಮುದ್ದು ಪುಟ್ಟಲಕ್ಷ್ಮಿ’, ಅಣ್ಣಾ ಬಂದ್ರೆ ಜೋಶ್ ಬತ್ತದೆ ಹಾಗೂ ಹುಡ್ಗೀರ್ ಡೇಂಜರಸ್ ಎಂಬ ಹಾಡುಗಳಿಗೆ ಸಖತ್ ರೆಸ್ಪಾನ್ಸ್ ಪಡೆದುಕೊಂಡಿದ್ದ ಚಿತ್ರತಂಡ, ಇದೀಗ ’ಮಿಲ್ಕಿ ಬ್ಯೂಟಿ’ ಎಂಬ ಹಾಡನ್ನು ರಿಲೀಸ್ ಮಾಡಿದೆ. ಮಹೇಶ್ ಕುಮಾರ್ ನಿರ್ದೇಶವಿರುವ ಈ ಚಿತ್ರ ಆಗಸ್ಟ್ 7 ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ. ಅರ್ಜುನ್ ಜನ್ಯ ಸಂಗೀತ ....
*ಡೆಡ್ಲಿ ಕಿಲ್ಲರ್ ಚಿತ್ರದ 25 ದಿನಗಳ ಸಮಾರಂಭ* ಥ್ರಿಲ್ಲರ್ ಮಂಜು ಅವರ ನಿರ್ದೇಶನದ ಹಾಗೂ ಅಭಯ್ವೀರ್, ಲೋಕೇಂದ್ರ ಸೂರ್ಯ ನಟಿಸಿರುವ ಡೆಡ್ಲಿ ಕಿಲ್ಲರ್ ಚಿತ್ರವೀಗ 25 ದಿನಗಳನ್ನು ಪೂರೈಸಿ ಮುನ್ನಡೆದಿದೆ. ಕಾಡಿನ ಮನೆಯೊಂದರಲ್ಲಿ ನಡೆಯುವ ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಒಳಗೊಂಡ ಈ ಚಿತ್ರವು ತನ್ನ ಗಟ್ಟಿ ಕಂಟೆಂಟ್, ಬಿಗಿಯಾದ ನಿರೂಪಣೆಯಿಂದಲೇ ಪ್ರೇಕ್ಷಕರ ಮೆಚ್ಚುಗೆ ಗಳಿಸಿ ಮುನ್ನಡೆದಿದೆ. ಉತ್ತರ ಕರ್ನಾಟಕದಲ್ಲಿ ಚಿತ್ರ ಹೆಚ್ಚು ಜನಪ್ರಿಯವಾಗರುವ ಈ 17ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಯಶಸ್ವಿ 25 ದಿನಗಳನ್ನು ಪೂರೈಸಿದೆ. ಅಲ್ಲದೆ ಬೆಂಗಳೂರಿನ ಭೂಮಿಕಾ ಥೇಟರಿನಲ್ಲಿ ಈಗಲೂ ಪ್ರದರ್ಶನವಾಗುತ್ತಿದೆ, ಈ ಸಂದರ್ಭದಲ್ಲಿ ಚಿತ್ರತಂಡ ....
ಯುವ ಪ್ರತಿಭೆಗಳ "ಸಂಪಿಗೆ" ಚಿತ್ರಕ್ಕೆ ಶುಭ ಮುಹೂರ್ತ. ಬೆಂಗಳೂರು ನಗರದಲ್ಲಿರುವ ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಆವರಣದಲ್ಲಿರುವ ಶ್ರೀ ಕಾಲಭೈರೇಶ್ವರ ಸ್ವಾಮಿಯ ಸನ್ನಿಧಿಯಲ್ಲಿ ಯುವ ಪ್ರತಿಭೆಗಳು ಆರಂಭಿಸಿರುವಂತಹ "ಸಂಪಿಗೆ". ಈ ಚಿತ್ರದ ಮಹೂರ್ತ ಸಮಾರಂಭಕ್ಕೆ ಬಿಗ್ ಬಾಸ್ ಖ್ಯಾತಿಯ ಸಾನಿಯಾ ಅಯ್ಯರ್ , ಹಾಗೂ ಅವರ ತಾಯಿ ದೀಪಾ ಅಯ್ಯರ್ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡುವ ಮೂಲಕ ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ಬಿಗ್ ಬಾಸ್ ಪ್ರತಿಭೆ ಇಶಾನಿ ಹಾಗೂ ಸಾಮಾಜಿಕ ಕಾರ್ಯಕರ್ತ ಆಂಜನಪ್ಪ ಸೇರಿದಂತೆ ಹಲವು ಗಣ್ಯರು , ಸ್ನೇಹಿತರು ದರ್ಶನ್ ಫ್ಯಾನ್ಸ್ ಕಾರ್ಯಕ್ರಮದಲ್ಲಿ ಹಾಜರಿದ್ದು ಚಿತ್ರತಂಡಕ್ಕೆ ಶುಭವನ್ನು ಹಾರೈಸಿದರು. ....
"ಬುಲ್ಲಿ" ಚಿತ್ರದಲ್ಲಿ ಭುವನ್ ಪೊನ್ನಣ್ಣ ಅವರಿಗೆ ನಾಯಕಿಯಾಗಿ ದಕ್ಷಿಣ ಭಾರತದ ಖ್ಯಾತ ನಟಿ ಊರ್ವಶಿ ಅವರ ಮಗಳು ತೇಜ ಊರ್ವಶಿ ನಾಯರ್ ! ಅಮ್ಮ ಪಂಚಭಾಷೆ ತಾರೆ ಊರ್ವಶಿ ಹಾಗೂ ಮಗಳು ತೇಜಾ ಮೊದಲನೆಯ ಬಾರಿಗೆ ಒಂದೇ ಚಿತ್ರದಲ್ಲಿ ಅಭಿನಯ! ಭುವನ್ ಪೊನ್ನಣ್ಣ ಮೊದಲನೇ ಬಾರಿಗೆ ಔಟ್ & ಔಟ್ ಕಾಮೆಡಿ ಸಿನಿಮಾ! ಭರ್ಜರಿ ಕಾರ್ಯಕ್ರಮದ ಮೂಲಕ "ಬುಲ್ಲಿ" ಟೈಟಲ್ ಲಾಂಚ್ ! ವಿವರ : ರಾಂಧವ ಸಿನಿಮಾ , "ಬಿಗ್ ಬಾಸ್" ಖ್ಯಾತಿಯ ನಟ ಭುವನ್ ಪೊನ್ನಣ್ಣ ನಾಯಕನಾಗಿ ನಟಿಸುತ್ತಿರುವ ನೂತನ ಚಿತ್ರ "ಬುಲ್ಲಿ" ಸಿನಿಮಾದ ಚಿತ್ರೀಕರಣದ ಮೊದಲನೆಯ ಶೆಡ್ಯೂಲ್ ಮುಕ್ತಾಯ ಗೊಂಡಿದೆ. ಈ ಕಾಮೆಡಿ ಚಿತ್ರದಲ್ಲಿ ಬಹುಭಾಷಾ ತಾರೆ ಹಿರಿಯ ನಟಿ ಊರ್ವಶಿ ಅವರು ....
" *ಪಾರ್ಟ್ನರ್" ಅಮೋರಾ* *ಜಂಜಿ ಸಾಂಗ್ ಬಿಡುಗಡೆ* ಒಂದು ಸಿನಿಮಾ ಗೆಲ್ಲಬೇಕೆಂದರೆ ಅದರ ಗಟ್ಟಿ ಕಥೆ, ಕಲಾವಿದರ ಅಭಿನಯ, ಮೇಕಿಂಗ್ ಜತೆಗೆ ಹಾಡುಗಳೂ ಪ್ರಮುಖ ಪಾತ್ರ ವಹಿಸುತ್ತವೆ. ಮಳೆ, ಧೈರ್ಯಂ, ದಿಲ್ ಪಸಂದ್ ಚಿತ್ರಗಳ ನಂತರ ನಿರ್ದೇಶಕ ಶಿವತೇಜಸ್ ಆಕ್ಷನ್ ಕಟ್ ಹೇಳಿರುವ ಚಿತ್ರ ಪಾರ್ಟ್ನರ್ ವಿಶೇಷ ಹಾಡಿನ ಮೂಲಕ ಪ್ರೇಕ್ಷರನ್ನು ಆಕರ್ಷಿಸುತ್ತಿದೆ. ಬೃಂದಾ ಆಚಾರ್ಯ, ಕೃಷ್ಣ ಅಜಯ್ ರಾವ್ ನಾಯಕ, ನಾಯಕಿಯಾಗಿ ನಟಿಸಿರುವ ಈಗಿನ ಜಂಝಿ ಲವ್, ಬ್ರೇಕಪ್, ಲಿವಿಂಗ್ ಟುಗೆದರ್ ನಂಥ ಕಂಟೆಂಟ್ ಇಟ್ಟುಕೊಂಡು ಜೀವನ ಎಂದರೆ ಇದಲ್ಲ, ಅದು ಬೇರೇನೇ ಇದೆ ಎಂದು ನಿರ್ದೇಶಕ ಶಿವತೇಜಸ್ ಈ ಚಿತ್ರದ ಮೂಲಕ ಹೇಳಹೊರಟಿದ್ದಾರೆ. ಇತ್ತೀಚೆಗಷ್ಟೇ ಫಸ್ಟ್ ಲುಕ್ ಮೂಲಕ ಗಮನ ಸೆಳೆದಿದ್ದ ....
*ಪ್ರಿಯಾಂಕ ಉಪೇಂದ್ರ 50ನೇ ಚಿತ್ರ ಡಿಟೆಕ್ಟಿವ್ ತೀಕ್ಷ್ಣ* ಆಕ್ಷನ್ ಕಿಂಗ್ *ಪ್ರಿಯಾಂಕ ಉಪೇಂದ್ರ ಅಭಿನಯದ 50ನೇ* ಚಿತ್ರ *’ಡಿಟೆಕ್ಟಿವ್ ತೀಕ್ಷ್ಣ’* ಸಿನಿಮಾದ ಟ್ರೇಲರ್ ಬಿಡುಗಡೆ ಸಮಾರಂಭವು ಎಸ್ಆರ್ವಿ ಚಿತ್ರಮಂದಿರದಲ್ಲಿ ಅದ್ದೂರಿಯಾಗಿ ನಡೆಯಿತು. ಇವೆಂಟ್ ಲಿಂಕ್ಸ್ ಎಂಟರ್ಟೈನ್ಮೆಂಟ್ ಅಡಿಯಲ್ಲಿ *ಗುತ್ತ ಮುನಿಪ್ರಸನ್ನ, ಜಿ.ಮುನಿ ವೆಂಕಟ್ಚರಣ್ ಮತ್ತು ಪುರುಷೋತ್ತಮ್.ಬಿ.ಕೊಯ್ಯೂರು* ಜಂಟಿಯಾಗಿ ಬಂಡವಾಳ ಹೂಡಿದ್ದಾರೆ. *ತ್ರಿವಿಕ್ರಮ ರಘು ರಚನೆ, ಸಂಭಾಷಣೆ ಮತ್ತು ನಿರ್ದೇಶನ* ಮಾಡಿರುವುದು ಹೊಸ ಅನುಭವ. ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕರು, ರೈತನ ಮಗನಾಗಿ ಮೊದಲ ಬಾರಿ ನಿರ್ದೇಶನ ಮಾಡಿದ್ದೆನೆ. ಡಿಟಿ ಜೀವಂತಿಕೆ ....
*'ಲವ್ ಕಾಕ್ಟೇಲ್’ ಕೊಡಲು ಬಂದ ಹರೀಶ್ ರಾಜ್* *ಲವ್ ಕಾಕ್ಟೇಲ್ ನಲ್ಲಿ ರೊಮ್ಯಾಂಟಿಕ್ ಆಗಿ ಕಾಡ್ತಿದ್ದಾರೆ ಹರೀಶ್ ರಾಜ್* ಹರೀಶ್ ರಾಜ್ ಅವರನ್ನು ಹಿರಿ ತೆರೆ ಕಿರುತೆರೆಯಲ್ಲಿ ನೋಡಿ ಮೆಚ್ಚಿಕೊಂಡ ಅಭಿಮಾನಿಗಳಿದ್ದಾರೆ. ಇಷ್ಟು ದಿನ ನಾವೂ ನೀವೂ ನೋಡಿದ ಹರೀಶ್ ರಾಜ್ ಬೇರೆ. ಈಗ ಪ್ಲೇ ಬಾಯ್ ಎಲ್ಲರನ್ನ ಕಾಡೋದಕ್ಕೆ ಬಂದಿದ್ದಾರೆ. ಲವ್ ಕಾಕ್ಟೇಲ್ ನಲ್ಲಿ ಕೈನಲ್ಲಿ ಹಿಡಿದು ಎಲ್ಲರನ್ನ ಸೆಳೆಯುತ್ತಿದ್ದಾರೆ. ಲವ್ ಕಾಕ್ಟೇಲ್ ಸಿನಿಮಾದ ಮೇಕಿಂಗ್, ಸಾಂಗ್ಸ್ ಗಳನ್ನ ಬಿಟ್ಟು ಹರೀಶ್ ರಾಜ್ ತಮ್ಮ ಮತ್ತೊಂದ ಮಗಲನ್ನ ವೀಕ್ಷಕರಿಗೆ ಪರಿಚಯ ಮಾಡಿಕೊಟ್ಟಿದ್ದಾರೆ. ಅದರಲ್ಲೂ ಲವ್ ಫೇಲ್ಯೂರ್ ಆದ್ರೆ ಏನಂತೆ, ಲೈಫ್ ನ ಹೇಗೆ ಜಾಲಿಯಾಗಿ ಕಳೆಯಬಹುದು ....
ಶಬರಿ ಚಿತ್ರದ `ತಂದಾನಿ ತಾನೋ’ ವೀಡಿಯೋ ಸಾಂಗ್ ಅನಾವರಣ! ಒರಟ ಶ್ರೀ ನಿರ್ದೇಶನದಲ್ಲಿ ಮೂಡಿ ಬಂದಿರುವ `ಶಬರಿ’ ಚಿತ್ರದ ಟೀಸರ್ ಕೆಲ ದಿನಗಳ ಹಿಂದಷ್ಟೇ ಬಿಡುಗಡೆಗೊಂಡಿತ್ತು. ಈ ಮೂಲಕ ಪ್ರೇಕ್ಷಕರ ವಲಯದಲ್ಲಿ ಕುತೂಹಲ ಮೂಡಿಕೊಂಡಿರುವ ಹೊತ್ತಿನಲ್ಲಿಯೇ ಚಿತ್ರತಂಡ "ತಂದಾನಿ ತನನೋ"ಎಂಬ ವೀಡಿಯೋ ಸಾಂಗ್ ಒಂದನ್ನು ಪ್ರೇಕ್ಷಕರಿಗೆ ತಲುಪಿಸಿದೆ. ನಿರ್ದೇಶಕ ಓಂ ಪ್ರಕಾಶ್ ರಾವ್, ರಘು ರಾಮ್, ಬಾಲಾಜಿ ವೀರಾಸ್ವಾಮಿ ಮತ್ತು ಉದ್ಯಮಿ ವಿ. ಬಾಬು ಈ ವೀಡಿಯೋ ಸಾಂಗ್ ಅನ್ನು ಬಿಡುಗಡೆಗೊಳಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಈ ಸಂಬಂಧವಾಗಿ ನಡೆದ ಪತ್ರಿಕಾಗೋಷ್ಠಿಯಲ್ಲಿ ’ಈ ವೀಡಿಯೋ ಸಾಂಗ್ ಅದ್ಭುತವಾಗಿ ಮೂಡಿ ಬಂದಿದೆ. ಬಿ ಆರ್. ಹೇಮಂತ್ ಕುಮಾರ್ ಅವರ ಸಂಗೀತ ಸಂಯೋಜನೆ ....
*ಯುವ ರೈತ ಚೇತನ್ ನಟನೆಯ ಹೊಸ ಸಿನಿಮಾ " ದೇವಿ"* *ದರ್ಶನ್ ರೈತ ಅಭಿಮಾನಿಯ ಸಿನಿಮಾ ಸಾಹಸ* ಚಿತ್ರರಂಗದಲ್ಲಿ ಆದ ಕಹಿ ಘಟನೆಗಳನ್ನು ಮರೆತು ಬಣ್ಣದ ಲೋಕದಲ್ಲಿ ಸಾಧಿಬೇಕು ಎನ್ನುವ ಛಲದೊಂದಿಗೆ ಮಂಡ್ಯದ ಯುವ ರೈತ ಚೇತನ್ " ದೇವಿ" ಚಿತ್ರದ ಮೂಲಕ ಚಿತ್ರರಂಗದಲ್ಲಿ ಅದೃಷ್ಟ ಹರಸಲು ಮುಂದಾಗಿದ್ದಾರೆ. ಯುವ ನಟ ಚೇತನ್ ಅವರಿಗೆ ಬಿಗ್ ಬಾಸ್ ಬೆಡಗಿ ಭವ್ಯಗೌಡ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ದೇವಿ ಚಿತ್ರದ ಶೀರ್ಷಿಕೆಯಡಿ " ಅಮ್ಮ ಅಂದ್ರೆ ತುಪ್ಪ... ಅಮ್ಮನ್ ಅಂದ್ರೆ ಹಾಲು ತುಪ್ಪಾ ಎನ್ನುವ ಅಡಿ ಬರಹದೊಂದಿಗೆ ಸದ್ದು ಮಾಡಲು ಮುಂದಾಗಿದ್ದಾರೆ. ರೈತನ ಸಾಹಸಕ್ಕೆ ಚಿತ್ರರಂದ ಹಿರಿಯ ನಿರ್ಮಾಪಕ ,ಕಲಾವಿದ ಕರಿ ಸುಬ್ಬು, ....
*--‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಚಿತ್ರದ ಟ್ರೇಲರ್ ಬಿಡುಗಡೆ ಸುದ್ದಿ--* (Sarkari Nyayabele Angadi cinema Trailer Release news) *ಹೊರಬಂತು ’ಸರ್ಕಾರಿ ನ್ಯಾಯಬೆಲೆ ಅಂಗಡಿ’ ಚಿತ್ರದ ಟ್ರೇಲರ್* *ಸಾಮಾಜಿಕ ಕಥಾಹಂದರದ ’ಸರ್ಕಾರಿ ನ್ಯಾಯಬೆಲೆ ಅಂಗಡಿ’ ಚಿತ್ರ ತೆರೆಗೆ ಬರಲು ಸಿದ್ಧ* *ಸಾಮಾಜಿಕ ಕಳಕಳಿಯ ಚಿತ್ರದ ಟ್ರೇಲರ್ ಗೆ ಸಿನಿಮಾ ಮತ್ತು ರಾಜಕೀಯ ಗಣ್ಯರ ಸಾಥ್* *ಇದೇ ಜುಲೈ 31ಕ್ಕೆ ’ಸರ್ಕಾರಿ ನ್ಯಾಯಬೆಲೆ ಅಂಗಡಿ’ ಚಿತ್ರ ತೆರೆಗೆ* ’ಸರ್ಕಾರಿ ನ್ಯಾಯಬೆಲೆ ಅಂಗಡಿ’ ಹೀಗೊಂದು ಹೆಸರಿನಲ್ಲಿ ಕನ್ನಡದಲ್ಲಿ ಸಿನಿಮಾವೊಂದು ತೆರೆಗೆ ಬರುತ್ತಿರುವುದು ನಿಮಗೆ ಗೊತ್ತಿರಬಹುದು. ಇದೀಗ ಈ ಸಿನಿಮಾ ಸದ್ದಿಲ್ಲದೆ ತನ್ನ ಪೋಸ್ಟ್ ಪ್ರೊಡಕ್ಷನ್ ....
'ಜಾಲಿ’ (Jolly) ಕನ್ನಡ ಚಲನಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭದ ಮುಖ್ಯ ಮುಖ್ಯಾಂಶಗಳು (Key Points) ಹೀಗಿವೆ: 1. 'ಜಾಲಿ’ ಟ್ರೈಲರ್ ಬಿಡುಗಡೆ ಹಾಗೂ ಬಿಡುಗಡೆ ದಿನಾಂಕ ಟ್ರೈಲರ್ ಲಾಂಚ್: ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ಅವರು ಹೊಸ ಪ್ರತಿಭೆಗಳು ಸೇರಿ ಮಾಡಿರುವ ’ಜಾಲಿ’ ಚಿತ್ರದ ಟ್ರೈಲರ್ ಬಿಡುಗಡೆ ಮಾಡಿ ಶುಭ ಕೋರಿದ್ದಾರೆ [00:25]. ರಿಲೀಸ್ ಡೇಟ್: ಈ ಚಿತ್ರವು ಜುಲೈ 31, 2026 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ 2. ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ಅವರ ಪ್ರಮುಖ ಅನಿಸಿಕೆಗಳು ಪ್ರೊಡ್ಯೂಸರ್ ಪ್ರಾಮುಖ್ಯತೆ: ಸಿನಿಮಾಕ್ಕೆ ಕೋಟಿಗಟ್ಟಲೆ ಹಣ ಹೂಡುವ ನಿರ್ಮಾಪಕರೇ ನಿಜವಾದ ಹೀರೋ; ಅವರಿಗೆ ಮೊದಲು ಗೌರವ ಸಿಗಬೇಕು ಇಂಡಸ್ಟ್ರಿ ಪರಿಸ್ಥಿತಿ: ವರ್ಷಕ್ಕೆ ....