" ಲೈಫ್ ಟುಡೇ" ಚಿತ್ರದ ನೀನೇ ನೀನೇ ನೋಡಲ್ಲಿ.. ಹಾಡು ಬಿಡುಗಡೆ " ಲೈಫ್ ಟುಡೇ" ಚಿತ್ರದ ನೀನೇ ನೀನೇ ನೋಡಲ್ಲಿ ಹಾಡು ಕನ್ನಡ ಮತ್ತು ತಮಿಳು ಭಾಷೆಯಲ್ಲಿ ಬಿಡುಗಡೆಯಾಗಿದ್ದು ಎಲ್ಲೆಲ್ಲೂ ಹುಡುಗ ಕಾಣಿಸುವ ಕುರಿತ ಗೀತೆ ಇದಾಗಿದ್ದು ಹಾಡು ಗಮನ ಸೆಳೆದಿದೆ. ಶ್ರೀಧರ್ ವಿ ಸಂಭ್ರಮ್ ಸಂಗೀತದಲ್ಲಿ ಮೂಡಿ ಬಂದಿರುವ ಈ ಗೀತೆಗೆ ಕವಿರಾಜ್ ಸಾಹಿತ್ಯ ಬರೆದಿದ್ದಾರೆ. ಮೋಹನ್ ಮಾಸ್ಟರ್ ನೃತ್ಯ ಸಂಯೋಜನೆ ಇರುವ ಚಿತ್ರಕ್ಲೆ ಕಾಂತ ಕಣ್ಣಲ್ಲಿ ಆಕ್ಷನ್ ಕಟ್ ಹೇಳಿದ್ದಾರೆ. ಗೀತೆಯಲ್ಲಿ ನಾಯಕ ಕಿರಣ್ ಆದಿತ್ಯ, ನಾಯಕಿ ಲೇಖಾ ಚಂದ್ರ ನಟಿಸಿದ್ದಾರೆ ಕನ್ನಡದ ಹಾಡನ್ನು ನಿರ್ಮಾಪಕ ಪ್ರದೀಪ್ ಹಾಗು ತಮಿಳು ಭಾಷೆಯ ಹಾಡನ್ನು ಲಹರಿ ಸಂಸ್ಥೆಯ ವೇಲು ....
*ಟೀಸರ್ ನಲ್ಲೇ ಕುತೂಹಲ ಮೂಡಿಸಿರುವ "ಬಾಸ್" ಚಿತ್ರದ ಮೊದಲ ಹಾಡಿನ ಲಿರಿಕಲ್ ವಿಡಿಯೋ ಬಿಡುಗಡೆ.* . *ವಿ.ಲವ ನಿರ್ದೇಶನದಲ್ಲಿ ತನುಷ್ ಶಿವಣ್ಣ ನಾಯಕನಾಗಿ ನಟಿಸಿರುವ ಈ ಚಿತ್ರ ಏಪ್ರಿಲ್ ನಲ್ಲಿ ಬಿಡುಗಡೆ* . ಸಿರಿ ಪ್ರೊಡಕ್ಷನ್ಸ್ ನಿರ್ಮಾಣದ, ವಿ.ಲವ ನಿರ್ದೇಶನದಲ್ಲಿ ತನುಷ್ ಶಿವಣ್ಣ ನಾಯಕನಾಗಿ ನಟಿಸಿರುವ "ಬಾಸ್" ಚಿತ್ರಕ್ಕಾಗಿ ಪ್ರಮೋದ್ ಮರವಂತೆ ಬರೆದಿದಿರುವ "ಏನಿದೆಯೊ ನಿನ್ನ ಮಾಯೆ" ಎಂಬ ಹಾಡಿನ ....
*ಪ್ರಥಮ್ ಅಭಿನಯದ ’ಫಸ್ಟ್ ನೈಟ್ ವಿತ್ ದೆವ್ವ" ಚಿತ್ರದ ಟ್ರೇಲರ್ ಬಿಡುಗಡೆ* *ಏಪ್ರಿಲ್ 3 ರಂದು ಚಿತ್ರ ತೆರೆಗೆ* . ಬಿಗ್ಬಾಸ್ ಖ್ಯಾತಿಯ ಪ್ರಥಮ್ ನಾಯಕನಾಗಿ ನಟಿಸಿರುವ, ಪಿ.ವಿ.ಆರ್.ಸ್ವಾಮಿ ಗೂಗಾರೆದೊಡ್ಡಿ ಅವರ ನಿರ್ದೇಶನದ ಬಹು ನಿರೀಕ್ಷಿತ "ಫಸ್ಟ್ ನೈಟ್ ವಿತ್ ದೆವ್ವ" ಚಿತ್ರ ಬಿಡುಗಡೆಗೆ ಸಿದ್ದವಾಗಿದೆ. ಏಪ್ರಿಲ್ 3 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಇತ್ತೀಚೆಗೆ ಈ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭ ನೆರವೇರಿತು. ಈ ಚಿತ್ರಕ್ಕೆ ಕಥೆ, ಚಿತ್ರಕಥೆಯನ್ನು ಕೂಡ ಪ್ರಥಮ್ ಅವರೇ ರಚಿಸಿದ್ದಾರೆ, ಇದೇ ಚಿತ್ರದಲ್ಲಿ ನಟಿಸಿರುವ ಹಿರಿಯನಟ ....
*ಮನಮುಟ್ಟುವ ಕಿರುಚಿತ್ರ "ಮಹರ್ಷಿ ವಾಲ್ಮಿಕಿ"* *ರಾಮನವಮಿಯ ಸುಸಂದರ್ಭದಲ್ಲಿ ರಾಮಭಕ್ತನ ಕುರಿತಾದ ಕಿರುಚಿತ್ರದ ಅನಾವರಣ* ಬೇಡನಾಗಿದ್ದ ರತ್ನಕಾರ, ಋಷಿಗಳ ಉಪದೇಶದಿಂದ ಮಹರ್ಷಿ ವಾಲ್ಮೀಕಿಯಾಗಿದ್ದು ಎಲ್ಲರಿಗೂ ತಿಳಿದ ಸಂಗತಿ. ಕ್ರೌಂಚ ಪಕ್ಷಿಯ ಸಾವನ್ನು ಕಣ್ಣಾರೆ ಕಂಡ ವಾಲ್ಮೀಕಿ ಮಹರ್ಷಿಗಳಿಗೆ ಆ ಘಟನೆ ರಾಮಾಯಣ ಬರೆಯಲು ಸ್ಪೂರ್ತಿಯಾಯಿತು. ಅದು ವಾಲ್ಮೀಕಿ ರಾಮಾಯಣ ಎಂದೇ ಪ್ರಸಿದ್ದವಾಯಿತು. ಅಂತಹ ವಾಲ್ಮೀಕಿ ಋಷಿಗಳ ಜೀವನ ಚರಿತ್ರೆಯನ್ನು ಕಿರುಚಿತ್ರದ ಮೂಲಕ ಹೊರತಂದಿದ್ದಾರೆ ನಿರ್ದೇಶಕ ಪ್ರವೀಣ್ ಶಿವಣ್ಣ . 21 ನಿಮಿಷಗಳಲ್ಲಿ ಅದ್ಭುತವಾಗಿ ಮೂಡಿಬಂದಿರುವ ಈ ಕಿರುಚಿತ್ರಕ್ಕೆ "ಮಹರ್ಷಿ ವಾಲ್ಮೀಕಿ" ಎಂದು ಹೆಸರಿಟ್ಟಿದ್ದಾರೆ. ರತ್ನ ದಾಸ್ ಅವರ ....
ನಾನು ಕರುಣಾಕರ ಚಿತ್ರದ ಆಡಿಯೋ-ಟ್ರೈಲರ್ ಬಿಡುಗಡೆ ನಿರ್ದೇಶಕ ಕಮ್ ನಟ ಆರ್ಯನ್ ತೇಜಸ್ ಇದೀಗ ’ನಾನು ಕರುಣಾಕರ’ ಎಂಬ ತಂದೆ ಮಗನ ನಡುವಿನ ಬಾಂಧವ್ಯದ ಕಥೆಯನ್ನು ತೆರೆಗೆ ತರ್ತಿದ್ದಾರೆ. ರಂಗಭೂಮಿ ಹಿನ್ನೆಲೆಯಿಂದ ಬಂದ ಆರ್ಯನ್ ತೇಜಸ್ ಈ ಚಿತ್ರ ನಿರ್ದೇಶನದ ಜತೆಗೆ ನಾಯಕನ ಪಾತ್ರದಲ್ಲೂ ಕಾಣಿಸಿಕೊಂಡಿದ್ದಾರೆ. ಈ ಹಿಂದೆ ಶಿಕ್ಷಣ ವ್ಯವಸ್ಥೆಯ ಸುತ್ತ ನಡೆಯುವ ಕಥೆ ಹೊಂದಿದ ’ಪಾರ್ಕ್ ರೋಡ್ 100 ರೂಪಾಯಿ’ ಚಿತ್ರ ನಿರ್ದೇಶಿಸಿದ್ದ ಆರ್ಯನ್ ತೇಜಸ್, ಕೊರೊನಾಗೂ ಮೊದಲೇ ಈ ಕಥೆಯನ್ನು ರೆಡಿ ಮಾಡಿಕೊಂಡಿದ್ದರಂತೆ. ನಂತರ ಅದನ್ನು ಸ್ನೇಹಿತ ನಮನ್ ನಾರಾಯಣ್ ಅವರಿಗೆ ಹೇಳಿದಾಗ ಅವರಿಗದು ಇಷ್ಟವಾಗಿ ನಿರ್ಮಾಣಕ್ಕೆ ಮುಂದಾಗಿದ್ದಾರೆ. ....
*'ಯಾವ ಮೋಹನ ಮುರಳಿ ಕರೆಯಿತು’ ಟ್ರೇಲರ್ ಬಿಡುಗಡೆ.* *ಸಸ್ಪೆನ್ಸ್, ಥ್ರಿಲ್ಲರ್ ಹಾಗೂ ಭಾವನಾತ್ಮಕ ಕಥೆಯ ಚಿತ್ರ ಮಾರ್ಚ್ 27ರಂದು ತೆರೆಗೆ.* ಪ್ರಕೃತಿ ಪ್ರೊಡಕ್ಷನ್ ಬ್ಯಾನರ್ ನಲ್ಲಿ ಶರಣಪ್ಪ ಗೌರಮ್ಮ ಮೊದಲಬಾರಿಗೆ ನಿರ್ಮಾಣ ಮಾಡಿರುವ ’ಯಾವ ಮೋಹನ ಮುರಳಿ ಕರೆಯಿತು’ ಸಿನಿಮಾ ಬಿಡುಗಡೆಗೆ ದಿನಗಣನೆ ಆರಂಭವಾಗಿದ್ದು, ಇದೇ ಮಾರ್ಚ್ 27ರಂದು ರಾಜ್ಯಾದ್ಯಂತ ಬಿಡುಗಡೆ ಆಗುತ್ತಿದೆ. ಹಾಗಾಗಿ ಇತ್ತೀಚೆಗೆ ಈ ಚಿತ್ರದ ಟ್ರೇಲರ್ ಬಿಡುಗಡೆ ಆಗಿದ್ದು ಜಾಲತಾಣದಲ್ಲಿ ಪ್ರೇಕ್ಷಕರಿಂದ ಪ್ರಶಂಸೆ ಪಡೆಯುತ್ತಿದೆ. ರಷ್ಯಾದಲ್ಲಿ ನಡೆದ ಇಂಟರ್ ನ್ಯಾಶನಲ್ ಕಿಕ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಮೆಡಲ್ ಪಡೆದಿರುವ ಶರಣಪ್ಪ ಅವರು ವೃತ್ತಿಯಲ್ಲಿ ವಕೀಲರು. ರಿಯಲ್ ಎಸ್ಟೇಟ್ ....
ಮೇ 30ರಂದು ‘ಕ್ರೇಜಿ ಬ್ರಹ್ಮ’ ರವಿಚಂದ್ರನ್-ಹಂಸಲೇಖರ 40 ವರ್ಷಗಳ ಸಂಗೀತ ಪಯಣದ ಸಂಭ್ರಮ ಕನ್ನಡ ಚಿತ್ರರಂಗ ಕಂಡ ಅದ್ಭುತ ತಂತ್ರಜ್ಞ ಜೋಡಿ ಎಂದರೆ ರವಿಚಂದ್ರನ್ ಮತ್ತು ಹಂಸಲೇಖ ಅವರದ್ದು. 80-90ರ ದಶಕದಲ್ಲಿ ರವಿಚಂದ್ರನ್ ನಿರ್ದೇಶನದ ಮತ್ತು ಹಂಸಲೇಖ ಸಂಗೀತ ನಿರ್ದೇಶನದ ಚಿತ್ರಗಳು ದೊಡ್ಡ ಮಟ್ಟಿಗೆ ಯಶಸ್ಸು ಕಂಡಿದ್ದು ಎಲ್ಲರಿಗೂ ಗೊತ್ತೇ ಇದೆ. ಈ ಜೋಡಿಯ ಹೆಸರೇ ಸಾಕಾಗಿತ್ತು, ಒಂದು ಚಿತ್ರಕ್ಕೆ ಪ್ರೇಕ್ಷಕರನ್ನು ಸೆಳೆಯುವುದಕ್ಕೆ. ಅಂಥ ಜನಪ್ರಿಯ ಮತ್ತು ಯಶಸ್ವಿ ಜೋಡಿಯು, 2000ದ ನಂತರ ಕಾರಣಾಂತರಗಳಿಂದ ಜೊತೆಯಾಗಿ ಕೆಲಸ ಮಾಡದಿರಬಹುದು. ಆದರೆ, ಇಂದಿಗೂ ಅವರು ಮಾಡಿದ ಹಾಡುಗಳ ಮೋಡಿಯಿಂದ ಕನ್ನಡಿಗರು ಹೊರಬರುವುದಕ್ಕೆ ಸಾಧ್ಯವಾಗಿಲ್ಲ. ರವಿಚಂದ್ರನ್ ....
*ಪ್ಯಾನ್ ಇಂಡಿಯಾ ಅಚ್ಯುತ ಅವತಾರಂ* ಸೈಬರ್ ಥ್ರಿಲ್ಲರ್ ಅಂಶಗಳನ್ನು ಒಳಗೊಂಡಿರುವ *’ಅಚ್ಯುತ ಅವತಾರಂ’* ಚಿತ್ರದ ಫಸ್ಟ್ ಲುಕ್ ಹೊರಬಂದು ಸದ್ದು ಮಾಡಿತ್ತು. ಇದರ ಪ್ರೇರಣೆಯಿಂದಲೇ ಈಗ ಎರಡನೇ ನೋಟವನ್ನು ಅನಾವರಣಗೊಳಿಸಿದ್ದಾರೆ. 2016ರಂದು ಟೆಂಟ್ ಸಿನಿಮಾದಲ್ಲಿ ಮೆಚ್ಚುಗೆ ಪಡೆದು ನಾಗತ್ತಿಹಳ್ಳಿ ಶಿಷ್ಯನೆಂದು ಗುರುತಿಸಿಕೊಂಡಿರುವ ಬೆಂಗಳೂರು ಮೂಲದ ಪುನೀತ್ ಕನ್ನಡ ಮತ್ತು ತಮಿಳು ಚಿತ್ರಗಳಲ್ಲಿ ಹತ್ತು ವರ್ಷಕ್ಕೂ ಮೇಲ್ಪಟ್ಟು ಕೆಲಸ ಮಾಡಿ ಅನುಭವ ಪಡೆದುಕೊಂಡಿದ್ದಾರೆ. ಇದರ ಪ್ರತಿಫಲವೇ ಈ ಸಿನಿಮಾಕ್ಕೆ ನಿರ್ದೇಶನದ ಜವಬ್ದಾರಿಯನ್ನು ಹೊತ್ತುಕೊಂಡಿರುವುದು ಹೊಸ ಅನುಭವ. ರಾಯ್ರಾ ವೆಂಚರ್ಸ್ನ ರಮೇಶ್.ಸಿ.ರುದ್ರಮೂರ್ತಿ ಮತ್ತು ....
*ಯುಗಾದಿ ಹಬ್ಬಕ್ಕೆ "ಕ್ಯಾಲೆಂಡರ್" ಟ್ರೇಲರ್ ಬಿಡುಗಡೆ* . ಈ ಹಿಂದೆ "ಸ್ವಾರ್ಥ ರತ್ನ" ಸೇರಿದಂತೆ ಎರಡು ಸಿನಿಮಾಗಳಲ್ಲಿ ನಾಯಕನಾಗಿ ನಟಿಸಿದ್ದ ಆದರ್ಶ ಗುಂಡುರಾಜ್ ಅಭಿನಯದ "ಕ್ಯಾಲೆಂಡರ್" ಚಿತ್ರದ ಟ್ರೇಲರ್ ಯುಗಾದಿ ಹಬ್ಬದ ಸಂದರ್ಭದಲ್ಲಿ ಬಿಡುಗಡೆಯಾಗಿದೆ. ಚಿತ್ರ ಏಪ್ರಿಲ್ 3 ರಂದು ಬಿಡುಗಡೆಯಾಗಲಿದೆ. ಟ್ರೇಲರ್ ಬಿಡುಗಡೆ ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು. ಯುಗಾದಿ ಎಂದರೆ ಹೊಸವರ್ಷ ಆರಂಭ. ಈ ಸಂದರ್ಭದಲ್ಲಿ "ಕ್ಯಾಲೆಂಡರ್" ಚಿತ್ರದ ಟ್ರೇಲರ್ ಬಿಡುಗಡೆಯಾಗುತ್ತಿರುವುದು ವಿಶೇಷ. ಇದೊಂದು ಮಹಿಳಾ ಪ್ರಧಾನ ಚಿತ್ರ. ಕುಟುಂಬ ಸಮೇತ ನೋಡಲೇ ಬೇಕಾದ ಚಿತ್ರವೂ ಹೌದು. ನನ್ನದು ಈ ಚಿತ್ರದಲ್ಲಿ ವೈದ್ಯನ ....
*ಟ್ರೇಲರ್ ನಲ್ಲೇ ಗಮನ ಸೆಳೆದ "ಪ್ರೇಮಿ" ಏಪ್ರಿಲ್ 3 ರಂದು ಚಿತ್ರಮಂದಿರಗಳತ್ತ* . . ಶ್ರೀ ಗುರು ಕರಿಬಸವೇಶ್ವರ ಪ್ರೊಡಕ್ಷನ್ ಲಾಂಛನದಲ್ಲಿ ಬಿ.ಸಿದ್ದಲಿಂಗಯ್ಯ ಅವರು ನಿರ್ಮಿಸಿರುವ ಹಾಗೂ ಎಸ್ ಪ್ರದೀಪ್ ವರ್ಮ ಅವರು ನಿರ್ದೇಶಿಸಿರುವ ಹಾಗೂ ಅದ್ವಿಕ್ ನಾಯಕನಾಗಿ ನಟಿಸಿರುವ "ಪ್ರೇಮಿ" ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭ ಇತ್ತೀಚೆಗೆ ಅದ್ದೂರಿಯಾಗಿ ನೆರವೇರಿತು. ನಿರ್ಮಾಪಕ ಭಾ.ಮ.ಹರೀಶ್, ನಿರ್ದೇಶಕ ಸತ್ಯ ಹಾಗೂ ಪಿ.ಆರ್.ಓ ಸುಧೀಂದ್ರ ವೆಂಕಟೇಶ್ ಅವರು ಮತ್ತು ನೃತ್ಯ ನಿರ್ದೇಶಕ ಟಗರು ರಾಜು ಮಾಸ್ಟರ್ ಟ್ರೇಲರ್ ಅನಾವರಣ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. A2 music ಯೂಟ್ಯೂಬ್ ಚಾನಲ್ ನಲ್ಲಿ ಬಿಡುಗಡೆಯಾಗಿರುವ "ಪ್ರೇಮಿ" ಚಿತ್ರದ ಟ್ರೇಲರ್ ಗೆ ....
*ಮಾರ್ಚ್ 27 ಕ್ಕೆ "ಆಯಧ" ಹಿಡಿದು ಬರಲಿದ್ದಾರೆ ದೇವರಾಜ್ ಕುಮಾರ್* . *ಟ್ರೇಲರ್ ನಲ್ಲೇ ಮೋಡಿ ಮಾಡಿದೆ ಆಕ್ಷನ್ ಥ್ರಿಲ್ಲರ್ ಫ್ಯಾಮಿಲಿ ಡ್ರಾಮ ಕಥಾಹಂದರ ಹೊಂದಿರುವ ಈ ಚಿತ್ರ* . ದೇವರಾಜ್ ....
ಸರ್ಸೇ ನಿನ್ನ ಸೆರಗಾ ಸರ್ಸೇ ಎಂದ ಬಾಲಿವುಡ್ ದಿವಾ ನೋರಾ ಫತೇಹಿ 'ಕೆಡಿ’ ನಾಲ್ಕನೇ ಹಾಡಿಗೆ ಚಾಲನೆ ನೀಡಿದ ರಕ್ಷಿತಾ ಪ್ರೇಮ್ ಜೋಗಿ ಪ್ರೇಮ್ ನಿರ್ದೇಶನದ ಹಾಗೂ ಆಕ್ಷನ್ಪ್ರಿನ್ಸ್ ದ್ರುವ ಸರ್ಜಾ ನಟನೆಯ ಪ್ಯಾನ್ ಇಂಡಿಯಾ ಚಿತ್ರ ಕೆಡಿ. ಈ ವರ್ಷದ ಬಹು ನಿರೀಕ್ಷಿತ ಕೆಡಿ ಸಿನಿಮಾದ ನಾಲ್ಕನೇ ಹಾಡು ಸರ್ಸೇ ಸರ್ಸೇ ನಿನ್ನ ಸೆರಗಾ ಸರಿಸೇ ಎಂಬ ಡಾನ್ಸ್ ನಂಬರ್ ಹಾಡಿನ ಲಿರಿಕಲ್ ವಿಡಿಯೋ ಬಿಡುಗಡೆ ಕಾರ್ಯಕ್ರಮ ಶನಿವಾರ ಎ.ಎಂ.ಬಿ. ಸಿನಿಮಾಸ್ ನಲ್ಲಿ ನಡೆಯಿತು. ವೇದಿಕೆ ಮೇಲೆ ಸರ್ಸೇ ಹಾಡಲ್ಲಿ ಹೆಜ್ಜೆ ಹಾಕಿದ ಬಾಲಿವುಡ್ ನಟಿ ನೋರಾ ಫತೇಹಿ, ನಿರ್ದೇಶಕ ಪ್ರೇಮ್, ದ್ರುವ ಸರ್ಜಾ, ರಕ್ಷಿತಾಪ್ರೇಮ್, ನಾಯಕಿ ರೀಶ್ಮಾ ನಾಣಯ್ಯ, ಕಾರ್ಯಕಾರಿ ....
*— ‘ಪೊಲೀಸ್ ಕಂಪ್ಲೈಂಟ್’ ಚಿತ್ರದ ಟೀಸರ್ ಮತ್ತು ಹಾಡು ಬಿಡುಗಡೆ ಪತ್ರಿಕಾಗೋಷ್ಟಿಯ ಸುದ್ದಿ —* (Police Complaint Cinema Teaser & Song Release Press meet News) *ಹೊರಬಂತು ‘ಪೊಲೀಸ್ ಕಂಪ್ಲೈಂಟ್’ ಟೀಸರ್ ಮತ್ತು ಹಾಡು* *’ಪೊಲೀಸ್ ಕಂಪ್ಲೈಂಟ್’ಗೆ ಪ್ರೇಮಾ ವಿಟ್ನೆಸ್!* *ಪ್ರೇಮಾ ಸಾಕ್ಷಿಯಾದ ‘ಪೊಲೀಸ್ ಕಂಪ್ಲೈಂಟ್’ ಟೀಸರ್!* *’ಪೊಲೀಸ್ ಕಂಪ್ಲೈಂಟ್’ನಲ್ಲಿ ವರಲಕ್ಷ್ಮೀ-ರಾಗಿಣಿ ಆ್ಯಕ್ಷನ್ ಕಹಾನಿ* *ಕನ್ನಡ ಮತ್ತು ತೆಲುಗಿನಲ್ಲಿ ತೆರೆಕಾಣಲಿದೆ ‘ಪೊಲೀಸ್ ಕಂಪ್ಲೈಂಟ್’* *ಆ್ಯಕ್ಷನ್ ಜೊತೆಗೊಂದು ಹಾರರ್ ಥ್ರಿಲ್ಲರ್ ಸ್ಟೋರಿ’* *’ಪೊಲೀಸ್ ಕಂಪ್ಲೈಂಟ್’ ಟೀಸರಿಗೆ ಪ್ರೇಮಾ ಸಾಥ್* ....
*ʼಸಂಗೀತ ಬಾರ್ ಅಂಡ್ ರೆಸ್ಟೋರೆಂಡ್ʼ ಚಿತ್ರೀಕರಣ ಪೂರ್ಣ ಪತ್ರಿಕಾ ಪ್ರಕಟಣೆ* (Sangeeta Bar and Restaurant Cinema Press release -01 for Print, Web & TV) *ʼಬಾರ್ʼನಲ್ಲಿ ಶೂಟಿಂಗ್ ಕಂಪ್ಲೀಟ್!* *ʼದೇವರ ತಾಣʼದಲ್ಲಿ ಚಿತ್ರೀಕರಣ ಸಂಪೂರ್ಣ!* *ಪೋಸ್ಟ್ ಪ್ರೊಡಕ್ಷನ್ ಕಡೆಗೆ ʼಸಂಗೀತ ಬಾರ್ ಅಂಡ್ ರೆಸ್ಟೋರೆಂಟ್ʼ* *ʼಬಾರ್ʼನಲ್ಲಿ ಕೋಮಲ್ ಕಮಾಲ್...* ಬೆಂಗಳೂರು, ಮಾರ್ಚ್ 09; ಸೆನ್ಸೇಶನಲ್ ಸ್ಟಾರ್ ಕೋಮಲ್ ಕುಮಾರ್, ಮೇಘನಾ ರಾಜ್, ಅನುಷಾ ರೈ ಮುಖ್ಯಭೂಮಿಕೆಯಲ್ಲಿ ಅಭಿನಯಿಸುತ್ತಿರುವ ʼಸಂಗೀತ ಬಾರ್ ಅಂಡ್ ರೆಸ್ಟೋರೆಂಟ್ʼ ಚಿತ್ರದ ಚಿತ್ರೀಕರಣ ಇತ್ತೀಚೆಗೆ ಪೂರ್ಣಗೊಂಡಿದೆ. ʼಸಂಗೀತ ಬಾರ್ ಅಂಡ್ ....
'ಕೋಟಿಗೊಬ್ಬ’ನ ಬೆಳ್ಳಿಹಬ್ಬ ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಅಭಿನಯದ ಕೋಟಿಗೊಬ್ಬ ಚಿತ್ರ ಬಿಡುಗಡೆಯಾಗಿ 25 ವರ್ಷಗಳಾಗಿದೆ. ಈ ಸಂದರ್ಭದಲ್ಲಿ ಆ ಚಿತ್ರದ ನಿರ್ಮಾಪಕ ಸೂರಪ್ಪಬಾಬು ಅವರು ಒಂದು ಅವಿಸ್ಮರಣೀಯ ಸಮಾರಂಭವನ್ನು ಆಯೋಜಿಸಿದ್ದರು. ಈ ವೇದಿಕೆಯಲ್ಲಿ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ, ನಿರ್ದೇಶಕ ನಾಗಣ್ಣ, ಹಿರಿಯನಟ ದೇವರಾಜ್, ಉಪೇಂದ್ರ, ಪ್ರಿಯಾಂಕಾ ಉಪೇಂದ್ರ, ಗೋಲ್ಡನ್ ಸ್ಟಾರ್ ಗಣೇಶ್, ಸಾಹಿತಿ ಕೆ.ಕಲ್ಯಾಣ್ ಹಾಗೂ ಇತರರು ಉಪಸ್ಥಿತರಿದ್ದರು. ಅತಿಥಿಗಳನ್ನು ಸ್ವಾಗತಿಸಿದ ನಿರ್ಮಾಪಕ ಸೂರಪ್ಪಬಾಬು ಅವರು ತಮ್ಮ ಹಾಗೂ ವಿಷ್ಣುವರ್ಧನ್ ಅವರ ಜತೆಗಿನ ಸಂಬಂಧ ಹೇಗಿತ್ತು, ಅವರು ತನ್ನನ್ನು ಎಷ್ಟು ಇಷ್ಟಪಡುತ್ತಿದ್ದರು ಎಂಬ ಬಗ್ಗೆ ....
'ಮಹಾ ಕಾಳಿಪುತ್ರ’ ಶೀರ್ಷಿಕೆ ಬಿಡುಗಡೆ * ರೈತನಿಂದ ಸೈನಿಕನವರೆಗೆ ಸಾಗುವ ಕಥೆ... ತಿರುಪತಿ ತಿರುಮಲ ಪ್ರೊಡಕ್ಷನ್ಸ್ ಮೂಲಕ ಗಿರೀಶ್ ಎಸ್.ಎಂ. ಅವರು ನಿರ್ಮಿಸುತ್ತಿರುವ ನೂತನ ಚಿತ್ರ ಮಹಾಕಾಳಿ ಪುತ್ರ. ಗಿರೀಶ್ ಅವರೇ ನಿರ್ದೇಶಿಸುತ್ತಿರುವ ಈ ಚಿತ್ರದ ಟೈಟಲ್ ಲಾಂಚ್ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಗಿರೀಶ್ ಗೌಡ ಈ ಚಿತ್ರಕ್ಕೆ ಚಿತ್ರಕಥೆ ಬರೆದು ನಿರ್ದೇಶನದಲ್ಲಿ ಸಹಕಾರ ನೀಡುತ್ತಿದ್ದಾರೆ. ಈ ಚಿತ್ರದ ನಾಯಕ, ನಿರ್ಮಾಪಕ, ನಿರ್ದೇಶಕ ಗಿರೀಶ್ ಎಸ್.ಎಂ. ಮಾತನಾಡಿ ಮೂಲತಃ ನಾನೊಬ್ಬ ರೈತ. ಆ ರೈತನ ಬಗ್ಗೆ ಸಿನಿಮಾ ಮಾಡಲು ಬಂದಿದ್ದೇನೆ. ಇದು ನನ್ನ ಮೊದಲ ಚಿತ್ರ. ಟೈಟಲ್ ಬಗ್ಗೆ ಹೇಳಬೇಕೆಂದರೆ, ಮಹಾಕಾಳಿಪುತ್ರ ಎಂದರೆ ದೈವರ ಆರಾಧಕ, ರೈತರು ....
*ಕುತೂಹಲ ಮೂಡಿಸಿದೆ ತನುಷ್ ಶಿವಣ್ಣ ಅಭಿನಯದ "ಬಾಸ್" ಚಿತ್ರದ ಫಸ್ಟ್ ಲುಕ್ ಟೀಸರ್.* . *ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ವಿ.ಲವ ನಿರ್ದೇಶನ* . ಸಿರಿ ಪ್ರೊಡಕ್ಷನ್ಸ್ ನಿರ್ಮಾಣದ, ವಿ.ಲವ ನಿರ್ದೇಶನದಲ್ಲಿ ತನುಷ್ ಶಿವಣ್ಣ ನಾಯಕನಾಗಿ ನಟಿಸಿರುವ "ಬಾಸ್" ಚಿತ್ರದ ಫಸ್ಟ್ ಲುಕ್ ಟೀಸರ್ ಬಿಡುಗಡೆಯಾಗಿದೆ. ಟೀಸರ್ ಕುತೂಹಲ ಮೂಡಿಸಿದ್ದು, ಅಧಿಕ ಸಂಖ್ಯೆಯಲ್ಲಿ ....
*ವಸಿಷ್ಠ ಸಿಂಹ ಅಭಿನಯದ ‘ಕಡಲ್ ಕೋಟೆ’ ಚಿತ್ರ ಪ್ರಾರಂಭ* ಶ್ರೀ ಕ್ಷೇತ್ರ ಗಣೇಶಪುರದ ಶ್ರೀ ಮಹಾ ಗಣಪತಿ ದೇವಸ್ಥಾನದಲ್ಲಿ ಅದ್ದೂರಿ ಚಾಲನೆ. ಜಾನಕಿ ಕಂಬೈನ್ಸ್ ಲಾಂಛನದಲ್ಲಿ ಧರ್ಮೇಂದ್ರ ನಿರ್ಮಿಸುತ್ತಿರುವ, ರಂಜಿತ್ ಕುಮಾರ್ ಗೌಡ ಕಥೆ-ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಮತ್ತು ವಸಿಷ್ಠ ಸಿಂಹ ನಾಯಕನಾಗಿ ಅಭಿನಯಿಸುತ್ತಿರುವ ‘ಕಡಲ್ ಕೋಟೆ’ ಚಿತ್ರದ ಮುಹೂರ್ತ ಇತ್ತೀಚೆಗೆ, ಸುರತ್ಕಲ್ನ ಶ್ರೀ ಕ್ಷೇತ್ರ ಗಣೇಶಪುರದ ಶ್ರೀ ಮಹಾ ಗಣಪತಿ ದೇವಸ್ಥಾನದಲ್ಲಿ ವಿದ್ಯುಕ್ತವಾಗಿ ನಡೆಯಿತು. ಖ್ಯಾತ ಭಾಗವತರಾದ ಪಟ್ಲ ಸತೀಶ್ ಶೆಟ್ಟಿ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿದರೆ, ಮಂಗಳೂರಿನ ಲೋಕಾಯುಕ್ತ ಎಸ್.ಪಿ ಯಾಗಿರುವ ಬಿ.ಪಿ. ದಿನೇಶ್ ....
ಬಿಡುಗಡೆಯಾಯ್ತು ಲವ್ಮಾಕ್ಟೇಲ್೩ ಚಿತ್ರದ ಟ್ರೈಲರ್! ಡಾರ್ಲಿಂಗ್ ಕೃಷ್ಣ ನಿರ್ದೇಶನ ಮಾಡಿ ನಟಿಸಿರುವ ಚಿತ್ರ ಲವ್ ಮಾಕ್ಟೇಲ್೩. ಮಾರ್ಚ್ ೧೯ರಂದು ಬಿಡುಗಡೆಗೊಳ್ಳಲಿರುವ ಈ ಚಿತ್ರದ ಟ್ರೈಲರ್ ಇದೀಗ ಬಿಡುಗಡೆಗೊಂಡಿದೆ. ಲವ್ ಮಾಕ್ಟೇಲ್ ಮೊದಲ ಆವೃತ್ತಿಯ ಟ್ರೈಲರ್ ಅನ್ನು ಕಿಚ್ಚಾ ಸುದೀಪ್ ಬಿಡುಗಡೆಗೊಳಿಸಿದ್ದರು. ಎರಡನೇ ಆವೃತ್ತಿಯ ಟ್ರೈಲರ್ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಕಡೆಯಿಂದ ಬಿಡುಗಡೆಗೊಂಡಿತ್ತು. ಆದರೆ, ಮೂರನೇ ಆವೃತ್ತಿಯ ಈ ಟ್ರೈಲರ್ ಅನ್ನು ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಪುತ್ರಿ ಪರಿ ಬಿಡುಗಡೆಗೊಳಿಸಿರುವುದು ವಿಶೇಷ. ಈ ಟ್ರೈಲರ್ ಬಿಡುಗಡೆಯ ಪತ್ರಿಕಾಗೋಷ್ಠಿಯಲ್ಲಿ ನಿರ್ದೇಶಕ ಹಾಗೂ ಈ ಚಿತ್ರಕ್ಕೊಂದು ಹಾಡನ್ನು ಬರೆದಿರುವ ಶಶಾಂಕ್ ಮತ್ತು ....
ಮಾರ್ಚ್ 19ರಂದು ಬಿಡುಗಡೆಗೊಳ್ಳಲಿದೆ ಲವ್ ಮಾಕ್ಟೇಲ್3!
ರಾಕಿಂಗ್ ಸ್ಟಾರ್ ಯಶ್ ನಟನೆಯ ಟಾಕ್ಸಿಕ್ ಚಿತ್ರದ ಬಿಡುಗಡೆ ದಿನಾಂಕ ಮುಂದಕ್ಕೆ ಹೋಗುತ್ತಲೇ, ಆ ದಿನಾಂಕದಂದು ಲವ್ ಮಾಕ್ಟೇಲ್3 ಚಿತ್ರವನ್ನು ಬಿಡುಗಡೆಗೊಳಿಸಲು ಡಾರ್ಲಿಂಗ್ ಕೃಷ್ಣ ಅಣಿಯಾಗಿದ್ದಾರೆ. ಯುಗಾದಿಯ ರಜೆ, ಅದರ ಬೆನ್ನಲ್ಲಿಯೇ ಶುರುವಾಗೋ ವೀಕೆಂಡ್ ಸೇರಿದಂತೆ ಮಾರ್ಚ್ 19 ಎಲ್ಲ ರೀತಿಯಿಂದಲೂ ಸಕಾರಾತ್ಮಕವಾಗಿರುವ ಮುಹೂರ್ತ. ಅಂಥಾ ದಿನಾಂಕದಂದು ಟಾಕ್ಸಿಕ್ ಬಿಡುಗಡೆಗೊಳ್ಳದಿದ್ದರೂ, ಅದೇ ದಿನ ಲವ್ ಮಾಕ್ಟೇಲ್ ಚಿತ್ರವನ್ನು ತೆರೆಗಾಣಿಸಲು ಕೆವಿಎನ್ ಸಂಸ್ಥೆ ತೀರ್ಮಾನಿಸಿದೆ.