Arathigobba Keerathigobba.Searial Press Meet.

Wednesday, December 18, 2019

725

ಕಿರುತೆರೆಗೆ  ಹಿರಿಯ  ನಟಿ ಉಮಾಶ್ರೀ

       ಮಾಜಿ ಸಚಿವೆ, ನಟಿ ಉಮಾಶ್ರೀ ಆರು ವರ್ಷಗಳ ಕಾಲ ರಾಜಕೀಯದಲ್ಲಿ ತೊಡಗಿಕೊಂಡಿದ್ದರಿಂದ  ಬಣ್ಣದಲೋಕದಿಂದ ದೂರ ಇದ್ದರು. ಈಗ ‘ಆರತಿಗೊಬ್ಬ ಕೀರ್ತಿಗೊಬ್ಬ’ ಮೆಘಾ ಧಾರವಾಹಿ ಮೂಲಕ ನಟನೆಗೆ ಮರಳಿದ್ದಾರೆ. ಅವರು ಹೇಳುವಂತೆ ಅಭಿನಯದಲ್ಲಿ ರಂಗಭೂಮಿ, ಹಿರಿತೆರೆ, ಕಿರುತೆರೆ ಎಂಬ ಭೇದಭಾವ ತಿಳಿದಿಲ್ಲ.  ಮಂತ್ರಿಯಾಗಿದ್ದಾಗಲೂ ಅವಕಾಶಗಳು ಬಂದಿತ್ತು. ಸಮಯದ ಅಭಾವದಿಂದ ನಿರಾಕರಿಸಿದ್ದೆ. ಶೀರ್ಷಿಕೆ ಹೇಳುವಂತೆ ಇಬ್ಬರು ಅಣ್ಣ ತಮ್ಮಂದಿರ ಅವಳಿ-ಜವಳಿ ಹುಡುಗರ ಕತೆಯಾಗಿದೆ. ವಿಜಯ್ ಮುಂಬಯಿ ದೊಡ್ಡ ಆಸ್ಪತ್ರೆಯಲ್ಲಿ ವೈದ್ಯ, ನೋವಿಗೆ ಸ್ಪಂದಿಸುವ ಗುಣ ಹೊಂದಿದ್ದು, ಸದಾ ಹಸನ್ಮುಖಿಯಾಗಿರುತ್ತಾನೆ. ಮತ್ತೋಂದು ಕಡೆ ಹಳ್ಳಿಯಲ್ಲಿ ರಗಡ್ ಲುಕ್ ಹೊಂದಿರುವ ಅಜಯ್ ನಂ.೧ ಕಿರಾತಕ. ಬೇರಯವರನ್ನು ಯಾಮಾರಿಸುತ್ತಾ  ಬಿಂದಾಸ್ ಜೀವನ ನಡೆಸುತ್ತಿರುತ್ತಾನೆ.

       ಹಳ್ಳಿ ಹುಡುಗಿ ಆರತಿ ಮುಗ್ದ ಮನಸ್ಸಿನವಳು. ಎಲ್ಲರ ಕಷ್ಟಕ್ಕೆ  ಮರುಗುವವಳು. ಇನ್ನೋಂದು ಕಡೆ ಕೀರ್ತಿ ಗತ್ತಿನವಳು, ಬುದ್ದಿವಂತೆ, ಕೆಲಸದಲ್ಲಿ ಮೀರಿಸುವವರಿಲ್ಲ. ಒಂದು ಘಟನೆಯಲ್ಲಿ ಅಣ್ಣ ತಮ್ಮ ಹೇಗೆ ಬೇರೆಯಾಗುತ್ತಾರೆ. ಮತ್ತೆ ಇಬ್ಬರೂ ಹತ್ತಿರವಾಗುತ್ತಿದ್ದರೂ ಸಂಬಂದ ತಿಳಿದಿರುವುದಿಲ್ಲ. ಇವರಿಬ್ಬರಿಗೆ ಆರತಿ, ಕೀರ್ತಿ ಯಾರು ಒಲಿಯುತ್ತಾರೆ ಅಂತ ತಿಳಿಯಲು ಸೀರಿಯಲ್ ನೋಡಬೇಕು.  ಮನೆಯೊಂದು ಮೂರು ಬಾಗಿಲು, ಅಗ್ನಿಸಾಕ್ಷಿ ಹಿಟ್ ಸೀರಿಯಲ್‌ಗೆ ಆಕ್ಷನ್ ಕಟ್ ಹೇಳಿದ್ದ ಮೈಸೂರು ಮಂಜು ನಿರ್ದೇಶನ ಮಾಡುವ ಜೊತೆಗೆ ಪರಿಣಿಕ ಪ್ರೊಡಕ್ಷನ್ಸ್ ಮೂಲಕ ನಿರ್ಮಾಣ ಮಾಡುತ್ತಿದ್ದಾರೆ.  ಪೂರ್ಣಚಂದ್ರತೇಜಸ್ವಿ  ದ್ವಿಪಾತ್ರದಲ್ಲಿ ನಾಯಕನಾಗಿ ಅಭಿನಯಿಸುತ್ತಿದ್ದಾರೆ.

      ನಾಯಕಿಯರಾಗಿ ದೀಪಿಕಾ ಮತ್ತು ಮೇಘನಾಶಣೈ. ತಾಯಿ ಪಾತ್ರದಲ್ಲಿ ಉಮಾಶ್ರೀಗೆ ಜೋಡಿಯಾಗಿ ಅನಂತವೇಲು. ದತ್ತು ಪೋಷಕರಾಗಿ ಚಿತ್ಕಲಾಬಿರಾದಾರ್-ಶ್ರೀನಾಥ್‌ವಸಿಸ್ಟ, ಉಳಿದಂತೆ ಮೂಗುಸುರೇಶ್,  ನೆ.ಲನರೇಂದ್ರಬಾಬು, ಜಯಮ್ಮ, ಸುಜಾತ, ಗಜೇಂದ್ರ, ದೊರೇಸ್‌ಬಾಬು, ಸುನಿಲ್ ಕುಲಕರ್ಣೀ, ಮಾನ್ವಿತಾ, ಅರ್ಚನಾಕೊಟ್ಟಿಗೆ, ಭರತ್ ಮುಂತಾದವರ ನಟನೆ ಇದೆ. ಸಂಕಲನ ಗುರುಮೂರ್ತಿಹೆಗ್ಗಡೆ, ಛಾಯಾಗ್ರಹಣ ಭೋಗರಾಜ್-ಗುರುಸ್ವಾಮಿಕುಪ್ಯ ಅವರದಾಗಿದೆ. ಸೋಮವಾರದಿಂದ  ಶುಕ್ರವಾರದವರೆಗೆ  ಡಿಸೆಂಬರ್ ೨೩ರಿಂದ  ಸ್ಟಾರ್ ಸುವರ್ಣದಲ್ಲಿ  ಸಂಜೆ ೬.೩೦ಕ್ಕೆ  ಪ್ರಸಾರವಾಗಲಿದೆ.

 

Copyright@2018 Chitralahari | All Rights Reserved. Photo Journalist K.S. Mokshendra,