ಲೈಫ್ ಟುಡೆ ಚಿತ್ರದ ನೀನೊಬ್ಬಳೆ ಹಾಡು ಬಿಡುಗಡೆ ಮಾಡಿದ ಡಾ ನಾಗೇಂದ್ರ ಪ್ರಸಾದ್ " ಲೈಫ್ ಟುಡೆ" ಚಿತ್ರದ " ನೀನೊಬ್ಬಳೆ..." ಹಾಡು ಬಿಡುಗಡೆಯಾಗಿದೆ. ನಾಯಕ ಕಿರಣ್ ಆದಿತ್ಯ ಮತ್ತು ನಟಿ ಲೇಖಾ ಚಂದ್ರ ಕಾಣಿಸಿಕೊಂಡಿರುವ ಹಾಡು ಗಮನ ಸೆಳೆದಿದ್ದು ಚಿತ್ರ ಶೀಘ್ರದಲ್ಲಿ ಬಿಡುಗಡೆಗೆ ಸಜ್ಜಾಗಿದೆ ಹಿರಿಯ ಗೀತರಚನೆಕಾರ ಹಾಗು ನಿರ್ದೇಶಕ ಡಾ. ನಾಗೇಂದ್ರ ಪ್ರಸಾದ್ ಅವರೇ ಬರೆದಿರುವ ಹಾಡನ್ನು ಬಿಡುಗಡೆ ಮಾಡಿ ಶುಭ ಹಾರೈಸಿದರು. ಕಾಂತ ಕನ್ನಲ್ಲಿ ನಿರ್ದೇಶನವಿರುವ ಚಿತ್ರಕ್ಕೆ ಮೇಘನಾ ಪ್ರದೀಪ್ ಬಂಡವಾಳ ಹಾಕಿದ್ದಾರೆ. ಶ್ರೀಧರ್ ಸಂಭ್ರಮ್ ಸಂಗೀತ ಚಿತ್ರಕ್ಕಿದೆ ಡಾ.ನಾಗೇಂದ್ರ ಪ್ರಸಾದ್ ಮಾತನಾಡಿ ,ಇಡೀ ಸಿನಿಮಾ ಪ್ರೀತಿಯ ಸುತ್ತ ಕಥೆ ಸಾಗಲಿದೆ. ....
*ಇಂದ್ರಲೋಕದ ಚಂದ್ರಿಕೆಯಂತೆ ಕಂಡ ರಾಗಿಣಿ* *ಇಂದ್ರಲೋಕಕ್ಕೆ ರಾಗಿಣಿ ಈಗ ಪಟ್ಟದರಸಿ* ಹಾಡುಗಳನ್ನ ಕೇಳ್ತಾ ಇದ್ದರೆ ಮನಸ್ಸಿಗೆ ಮುದ ನೀಡಬೇಕು, ಕಿವಿಗೆ ಹಿತ ವೆನಿಸಬೇಕು. ಆ ರೀತಿ ಇರಬೇಕು ಸಾಹಿತ್ಯ. ಅಷ್ಟು ಇಂಪಾದ ಸಾಹಿತ್ಯವನ್ನ ನೀಡಿರೋದು ಮದನಿಕ ಚಿತ್ರತಂಡ. ಹೌದು ಮದನಿಕ ಸಿನಿಮಾದಿಂದ ಕಾನನಗಳ ಕನ್ನಿಕಾ, ಇಂದ್ರಲೋಕ ಚಂದ್ರಿಕಾ, ಪಟ್ಟದರಸಿಯಾದಳೀಗಾ ಮದನಿಕ ಎಂಬ ಹಾಡು ರಿಲೀಸ್ ಆಗಿದೆ. ಈ ಹಾಡಲ್ಲಿ ರಾಗಿಣಿ ದ್ವಿವೇದಿ ಅಪ್ಸರೆಯಂತೆ ಕಾಣಿಸ್ತಾ ಇದ್ದಾರೆ. ಗೊಂಬೆಗಳಂತೆ ಈ ಹಾಡಿನಲ್ಲಿ ರಾಜ-ರಾಣಿ, ಸೇವಕಿಯರನ್ನ ಸೃಷ್ಟಿ ಮಾಡಲಾಗಿದೆ. ರಾಜನಂತೆ ದೇವ್ ಗಿಲ್ ಕಾಣಿಸಿಕೊಂಡಿದ್ದಾರೆ. ಅರಮನೆಯ ಬ್ಯಾಕ್ ಡ್ರಾಪ್ ನಲ್ಲಿ ಹಾಡನ್ನ ಶೂಟ್ ಮಾಡಲಾಗಿದೆ. ದೇವಲೋಕದ ಸೃಷ್ಟಿಯಂತೆ ....
*ಟ್ರೇಲರ್ ನಲ್ಲೇ ಗಮನ ಸೆಳೆದ "ಕ್ಷಮೆಯಿರಲಿ ತಂದೆ"* . *ಈ ಚಿತ್ರದ ಮೂಲಕ ನಿರ್ಮಾಣ ಹಾಗೂ ನಿರ್ದೇಶನಕ್ಕೆ ನಟ ಎಂ.ಎನ್ ಸುರೇಶ್ ಎಂಟ್ರಿ* . ರಂಗಭೂಮಿ, ಕಿರುತೆರೆ, ಹಿರಿತೆರೆ ಕಲಾವಿದರಾಗಿ ಕಳೆದ ಮೂರು ದಶಕಗಳಿಂದ ಜನಪ್ರಿಯರಾಗಿರುವ ಎಂ ಎನ್ ಸುರೇಶ್ (ಮೂಗ್ ಸುರೇಶ್ ) ಈಗ ನಿರ್ಮಾಪಕ ಹಾಗೂ ನಿರ್ದೇಶಕನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ತಮ್ಮ ಮೊದಲ ನಿರ್ಮಾಣ ಹಾಗೂ ನಿರ್ದೇಶನದ ಚಿತ್ರಕ್ಕೆ " ಕ್ಷಮೆಯಿರಲಿ ತಂದೆ" ಎಂದು ಹೆಸರಿಟ್ಟಿದ್ದಾರೆ. ಈಗಾಗಲೇ ಚಿತ್ರೀಕರಣ ಮುಗಿಸಿ ಜೂನ್ 12ರಂದು ತೆರೆಗೆ ಬರಲು ಸಿದ್ದವಾಗಿರುವ ಈ ಚಿತ್ರದ ಮೋಷನ್ ಪೋಸ್ಟರ್, ಟ್ರೇಲರ್ ಹಾಗೂ ಲಿರಿಕಲ್ ವಿಡಿಯೋ ಇತ್ತೀಚೆಗೆ ....
ಮದ್ದಾನೆ ಟ್ರೈಲರ್ ಬಿಡುಗಡೆ ಈ ಹಿಂದೆ ಎಮ್ಮೆ ತಿಮ್ಮ, ಮೊದಲಮಳೆ ಚಿತ್ರಗಳನ್ನು ನಿರ್ದೇಶಿಸಿದ್ದ ಕೆ.ರಾಜ್ ಶರಣ್ ಅವರ ನಿರ್ದೇಶನದ ಮೂರನೇ ಚಿತ್ರ ಮದ್ದಾನೆ. ಎಲ್.ಎಂ. ಫಿಲಂಸ್ ಮೂಲಕ ಲತಾ ಮೂರ್ತಿ ಅವರ ನಿರ್ಮಾಣದ ಈ ಚಿತ್ರದಲ್ಲಿ ಆರ್ಯ ನಾಯಕನಾಗಿ ನಟಿಸಿದ್ದಾರೆ. ಸಹ-ನಿರ್ಮಾಪಕರಾಗಿ ಡಾ. ಮಾರುತಿ ಎನ್. ಈ. ಕೈಜೋಡಿಸಿದ್ದಾರೆ. ಬಿಡುಗಡೆಗೆ ಸಿದ್ದವಾಗಿರುವ ಈ ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕ ರಾಜ್ ಶರಣ್, ಮದ್ದಾನೆ ಎಂದರೆ ಆ್ಯಂಗ್ರಿ ಎಲಿಫೆಂಟ್, ಅದರಬಳಿ ಯಾರೂ ಹೋಗಲು ಸಾಧ್ಯವಿಲ್ಲ. ಆನೆ ರೀತಿಯ ವ್ಯಕ್ತಿ ಹೇಗೆ ಮದ್ದಾನೆಯಾಗಿ ಪರಿವರ್ತನೆಯಾಗ್ತಾನೆ? ಎಂದು ಈ ಚಿತ್ರದಲ್ಲಿ ಹೇಳಿದ್ದೇವೆ. ....
*ಬೆಂಗಳೂರಿನಲ್ಲಿ ’ಪೆದ್ದಿ’ ಪ್ರಮೋಷನ್..ರಾಮ್ ಚರಣ್ ಗೆ ರಾಷ್ಟ್ರಪ್ರಶಸ್ತಿ ಕೊಡ್ಬೇಕು ಎಂದ ಶಿವಣ್ಣ* ಗ್ಲೋಬಲ್ ಸ್ಟಾರ್ ರಾಮ್ ಚರಣ್ ನಟನೆಯ ಬಹು ನಿರೀಕ್ಷಿತ ಪೆದ್ದಿ ಸಿನಿಮಾದ ಪ್ರಚಾರ ಜೋರಾಗಿದೆ. ಮುಂಬೈನಲ್ಲಿ ಅದ್ದೂರಿಯಾಗಿ ಟ್ರೇಲರ್ ಲಾಂಚ್ ಮಾಡಿದ್ದ ಚಿತ್ರತಂಡ ನಿನ್ನೆ ಬೆಂಗಳೂರಿನಲ್ಲಿ ಸಿನಿಮಾದ ಪ್ರಚಾರ ನಡೆದಿದ್ದಾರೆ. ನಗರದ ಖಾಸಗಿ ಹೋಟೆಲ್ ನಲ್ಲಿ ಸುದ್ದಿ ಗೋಷ್ಟಿ ನಡೆಯಿತು. ನಟ ರಾಮ್ ಚರಣ್ ತೇಜಾಗೆ ನಟಿ ಜಾಹ್ನವಿ ಕಪೂರ್ ಹಾಗೂ ಈ ಚಿತ್ರದಲ್ಲಿ ವಿಶೇಷ ಪಾತ್ರ ಮಾಡಿರುವ ಶಿವರಾಜ್ ಕುಮಾರ್ ಸಾಥ್ ನೀಡಿದರು. ನಟ ರಾಮ್ ಚರಣ್ ತೇಜಾ ಮಾತನಾಡಿ, ಪೆದ್ದಿ ಸಿನಿಮಾದಲ್ಲಿ ಶಿವಣ್ಣ ಸಾರ್ ನನ್ನ ಗುರು ಪಾತ್ರ ಮಾಡಿದ್ದಾರೆ. ಅವರು ಈ ಪಾತ್ರ ಮಾಡಿದ್ದು ನನಗೆ ....
*ಜೂನ್ 20 ರಂದು ಮಂತ್ರಾಲಯದ ರಾಯರ ಸನ್ನಿಧಿಯಲ್ಲೇ ಅದ್ದೂರಿಯಾಗಿ ಬಿಡುಗಡೆಯಾಗಲಿದೆ "ರಾಯರ ದರ್ಶನ" ಆಲ್ಬಂ ಸಾಂಗ್* . *ಆಗಸ್ಟ್ ನಲ್ಲಿ TNIT ಮಾಧ್ಯಮ ಪ್ರಶಸ್ತಿ ಪ್ರದಾನ..* ಕಲಿಯುಗದ ಕಾಮಧೇನು ಕಲ್ಪವೃಕ್ಷರೆಂದೆ ಖ್ಯಾತರಾದ ಮಂತ್ರಾಲಯದ ಗುರು ಶ್ರೀರಾಘವೇಂದ್ರಸ್ವಾಮಿಗಳ ಕುರಿತು ಈವರೆಗೂ ಸಾಕಷ್ಟು ಭಕ್ತಿಗೀತೆಗಳು ಹಾಗೂ ಆಲ್ಬಂ ಸಹ ಬಂದಿದೆ. ಆದರೆ ಈವರೆಗೂ ಯಾರು ಹೇಳದ ಹಾಗೂ ತೋರಿಸದ ರಾಯರ ಬಗ್ಗೆಗಿನ ಕೆಲವು ವಿಶೇಷ ವಿಷಯಗಳು ಹಾಗೂ ಮಂತ್ರಾಲಯದಲ್ಲಿ ರಾಯರಿಗೆ ವರ್ಷಾವಧಿ ನಡೆಯುವ ವಿಶೇಷ ಉತ್ಸವಗಳನ್ನು ಕಣ್ತುಂಬಿಕೊಳ್ಳುವ "ರಾಯರ ದರ್ಶನ" ಆಲ್ಭಂ ಬಿಡುಗಡೆಗೆ ಸಿದ್ದವಾಗಿದೆ. ಲಕ್ಷ್ಮೀ ಗಣೇಶ ಪ್ರೊಡಕ್ಷನ್ಸ್ ....
'ದೊಡ್ಮನ್ಸ’ ಸಿನಿಮಾದ ಡ್ಯುಯೆಟ್ ಸಾಂಗ್ ರಿಲೀಸ್ ವೇದಿಕ್ ಕಾಸ್ಮೋಸ್ ಬ್ಯಾನರ್ ಅಡಿಯಲ್ಲಿ , ಶರತ್ ಕೃಷ್ಣ ನಿರ್ದೇಶನದಲ್ಲಿ ಶರತ್ ಕೃಷ್ಣ ಮತ್ತು ರೇಷ್ಮಾ, ಶಿಲ್ಪಾ ಮುಖ್ಯ ಪಾತ್ರದಲ್ಲಿ ನಟಿಸಿರುವ "ದೊಡ್ಮನ್ಸ" ಚಿತ್ರದ ಪ್ರಣಯ ಗೀತೆ ರಿಲೀಸ್ ಆಗಿದೆ. ಬೀಚ್ ನಂತೆ ಕಾಣುವ ಸಾಲ್ಟ್ ಇರುವ ಜಾಗದಲ್ಲಿ ನಡುವಲ್ಲಿ, ಆ ನೀರಿನ ಸದ್ದಲ್ಲಿ, ಪ್ರೇಮಿಗಳಿಬ್ಬರ ಗೀತೆ ಮನಸ್ಸಿಗೆ ಮುದ ನೀಡುವಂತೆ ಇದೆ. ಶರತ್ ಹಾಗೂ ರೇಷ್ಮಾ ಕೆಮಿಸ್ಟ್ರಿ ಅದ್ಭುತವಾಗಿ ಕಾಣಿಸಿದೆ. ಗುಜರಾತ್ ನಲ್ಲಿ ಶೂಟ್ ಮಾಡಲಾಗಿದೆ. ಈ ಸಂಬಂಧ ನಿರ್ದೇಶಕ ಶರತ್ ಕೃಷ್ಣ ಮಾತನ್ನಾಡಿ, ದೊಡ್ಮನ್ಸ ಎಂಬ ಟೈಟಲ್ ನೋಡೋಕೆ ಖುಷಿಯಾಗುತ್ತೆ. ವಿಷ್ಣು ಸರ್ ಗೆ ಇದ್ದ ಟೈಟಲ್ ನಮಗೆ ....
'ಮೃತ್ಯುದೇವತೆ’ ನಮ್ಮಾವ ಮಾದೇವ ಹಾಡು ಈಗಿನ ಸಮಾಜದಲ್ಲಿ ಮಹಿಳೆ ಯಾವರೀತಿ ಟ್ರ್ಯಾಪ್ ಅಗಿ ವಂಚಕರ ಜಾಲದಲ್ಲಿ ಸಿಲುಕಿಕೊಳ್ಳುತ್ತಾಳೆ, ನಂತರ ಅದರಿಂದ ಹೊರಬರಲು ಹೇಗೆ ಪ್ರಯತ್ನಿಸುತ್ತಾಳೆ, ಅಂಥವರಿಗೆ ಶಿಕ್ಷಿಸಲು ಯಾವ ಅವತಾರ ಎತ್ತುತ್ತಾಳೆ ಎಂದು ಮೃತ್ಯುದೇವತೆ ಚಿತ್ರದ ಮೂಲಕ ಹೇಳಲು ಪ್ರಯತ್ನಿಸಿದ್ದಾರೆ ನಿರ್ದೇಶಕ ನವೀನ್ ಮಹಾದೇವ್. ಟ್ರ್ಯಾಪ್ ಗೆ ಒಳಗಾದ ಮೂವರು ಹೆಣ್ಣು ಮಕ್ಕಳ ಕಥೆಯಿದು. ಮಹಿಳಾ ಪ್ರಧಾನ ಕಥಾಹಂದರ ಇಟ್ಟುಕೊಂಡು ನವೀನ್ ಮಹಾದೇವ್ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಬರೆದು ನಿರ್ದೇಶಿಸಿದ್ದಾರೆ. ಜತೆಗೆ ನಟನೆ ಕೂಡ ಮಾಡಿದ್ದಾರೆ. ಈ ಚಿತ್ರದ ನಮ್ಮಾವ ಮಾದೇವ ಎಂಬ ಹಾಡಿನ ಬಿಡುಗಡೆ ಕಾರ್ಯಕ್ರಮ ನಡೆಯಿತು. ....
‘ಕಂಟ್ರಿ ಮೇಡ್ - ಭಾಗ 2’ ಟೀಸರ್ ಬಿಡುಗಡೆ ಅರವಿಂದ್ ಕೌಶಿಕ್ ನಟನೆ, ನಿರ್ದೇಶನದ ಗ್ಯಾಂಗ್ಸ್ಟರ್ ಚಿತ್ರ ‘ಅರ್ಧಂಬರ್ಧ ಪ್ರೇಮಕಥೆ’ ಚಿತ್ರದ ನಂತರ ನಟ-ನಿರ್ದೇಶಕ ಅರವಿಂದ್ ಕೌಶಿಕ್ ಸದ್ದಿಲ್ಲದೆ ಒಂದು ಚಿತ್ರ ಮಾಡಿ ಮುಗಿಸಿದ್ದಾರೆ. ಇದುವರೆಗೂ ಬೇರೆಬೇರೆ ಜಾನರ್ಗಳ ಚಿತ್ರ ಮಾಡಿದ್ದ ಅವರು, ಇದೇ ಮೊದಲ ಬಾರಿಗೆ ಒಂದು ಗ್ಯಾಂಗ್ಸ್ಟರ್ ಕಥೆಯೊಂದನ್ನು ನಿರ್ದೇಶಿಸಿದ್ದಾರೆ. ಅದೇ ‘ಕಂಟ್ರಿ ಮೇಡ್ - ಭಾಗ 2’. ಈಗಾಗಲೇ ಚಿತ್ರದ ಚಿತ್ರೀಕರಣ ಮುಗಿದಿದ್ದು, ಚಿತ್ರ ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಈ ಮಧ್ಯೆ, ಚಿತ್ರದ ಟೀಸರ್ ಬಿಡುಗಡೆ ಮಾಡಿದ್ದಾರೆ ಅರವಿಂದ್. ‘ಕಂಟ್ರಿ ಮೇಡ್ - ಭಾಗ 2’ ಚಿತ್ರದ ಟೀಸರ್ ಬಿಡುಗಡೆ ....
*ಹೊಸತಂಡದ ಹೊಸಪ್ರಯತ್ನ "ಕೀರ್ತಿ ಐ ಲವ್ ಯು"* . *ಸಿರಿ ಮ್ಯೂಸಿಕ್ ಮೂಲಕ "ಮುದ್ದಾದ ಮೂಗುತಿ" ಹಾಡು ಬಿಡುಗಡೆ ಮಾಡಿ ಚಿತ್ರದ ಪ್ರಚಾರಕ್ಕೆ ಚಾಲನೆ ನೀಡಿದ ಚಿತ್ರತಂಡ* . ಕನ್ನಡದಲ್ಲಿ ಪ್ರೀತಿಯ ಕುರಿತಾದ ಅನೇಕ ಚಿತ್ರಗಳು ಬಂದಿದೆ. ಆದರೆ ಒಂದರ ಹಾಗೆ ಒಂದು ಇಲ್ಲ. ಅದೇ ರೀತಿ ಹೊಸತಂಡವೊಂದು "ಕೀರ್ತಿ ಐ ಲವ್ ಯು" ಎಂಬ ಲವ್ ಜಾನರ್ ನ ಚಿತ್ರವನ್ನು ತೆರೆಯ ಮೇಲೆ ತರುತ್ತಿದೆ. ಪೂಜಿತ ಎಸ್ ರಾವ್ ನಿರ್ಮಾಣದಲ್ಲಿ, ನಿರಂಜನ್ ಆರಾಧ್ಯ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರದ ನಾಯಕನಾಗಿ ಪ್ರಜ್ಯೋತ್ ಎಸ್ ರಾವ್ ನಟಿಸಿದ್ದಾರೆ. ನಿಧಿ ಗೌಡ ಈ ಚಿತ್ರದ ನಾಯಕಿ. ಇತ್ತೀಚೆಗೆ ಈ ಚಿತ್ರದ ಮೊದಲ ಹಾಡು "ಮುದ್ದಾದ ಮೂಗುತಿ" ಬಿಡುಗಡೆ ಮಾಡುವ ....
*ನೀನಿದ್ದರೆ ಆಲ್ಬಂ ಹಾಡು ಬಿಡುಗಡೆ* ಮೊಗಾಚಿ ಲಾರಂ ಕ್ರಿಯೇಶನ್ ಅಡಿಯಲ್ಲಿ ಸಿದ್ದಗೊಂಡಿರುವ *’ನೀನಿದ್ದರೆ’* 5.52 ನಿಮಿಷದ ಆಲ್ಬಂ ಸಾಂಗ್ ಸಿರಿ ಮ್ಯೂಸಿಕ್ ಸಂಸ್ಥೆಯು ಹೊರತಂದಿದೆ. ಹಿರಿಯ ನಟ ರಮೇಶ್ ಭಟ್ ಹಾಡನ್ನು ಲೋಕಾರ್ಪಣೆಗೊಳಿಸಿ ತಂಡಕ್ಕೆ ಶುಭ ಹಾರೈಸಿದರು ಈ ಸಂದರ್ಭದಲ್ಲಿ ಮಾತನಾಡುತ್ತಾ, ನಿರ್ಮಾಪಕರು ನನ್ನನ್ನು ಫಾದರ್ ಅಂತ ಸಂಭೋದಿಸುತ್ತಾರೆ. ಆದರೆ ನನಗೆ ಅವರು ಗಾಡ್ಫಾದರ್. ಮಂಗಳೂರಿಗೆ ಶೂಟಿಂಗ್ ಅಂತ ಹೋದಾಗ, ತಪ್ಪದೆ ಭೇಟಿಯಾಗುವುದು ಅಲ್ಲದೆ ಉಡುಗೊರೆ ನೀಡುತ್ತಾರೆ. ಇಂತಹವರ ಋಣ ತೀರಿಸಲು ಬ್ಯುಸಿ ಇದ್ದರೂ ಬಂದಿರುವೆ. ಸದ್ಯ ವೆಬ್ ಸೀರೀಸ್ದಲ್ಲಿ ಅಭಿನಯಿಸುತ್ತಿದ್ದೇನೆಂದು ಹೇಳಿ ರಮೇಶ್ಭಟ್ ನಿರ್ಗಮಿಸಿದರು. ಇದೇ ಸಮಯದಲ್ಲಿ ....
*ನಿರ್ಮಾಣ ಸಂಸ್ಥೆ ತೆರೆದ ನಟಿ ಮೈತ್ರಿಯಾಗೌಡ* ಬಣ್ಣದಲೋಕಕ್ಕೆ ಒಮ್ಮೆ ಬಂದರೆ ಅದರಿಂದ ಹೊರಬರವುದು ಅಷ್ಟು ಸುಲಭವಾಗಿರುವುದಿಲ್ಲ. ಕೆಲವರು ನಟನೆಯಿಂದ ದೂರ ಉಳಿದರೂ, ಇದೇ ಕ್ಷೇತ್ರದಲ್ಲಿ ಏನಾದರೂ ಒಂದು ಕಾರ್ಯದಲ್ಲಿ ತೊಡಗಿಕೊಳ್ಳುತ್ತಾರೆ. ಆ ಸಾಲಿಗೆ ನಟಿ *ಮೈತ್ರಿಯಾಗೌಡ* ಸೇರಿಕೊಳ್ಳುತ್ತಾರೆ. ’ಮೌರ್ಯ’ ಚಿತ್ರದಲ್ಲಿ ಪುನೀತ್ ರಾಜ್ಕುಮಾರ್ ತಂಗಿಯಾಗಿ ಪರಿಚಯಗೊಂಡು, ನಂತರ 8 ಸಿನಿಮಾಗಳಿಗೆ ನಾಯಕಿಯಾಗಿ ನಟಿಸಿದ್ದರು. ಕಾರಣಾಂತರದಿಂದ ಅಭಿನಯಕ್ಕೆ ಬ್ರೇಕ್ ನೀಡಿ ಸಾಮಾಜಿಕ ಸೇವೆ ಕಡೆ ಗಮನ ಹರಿಸಿದ್ದರು. ಈಗ *’ಮೈತ್ರಿಯಾ ಗ್ಲೋಬಲ್ ಟ್ರಸ್ಟ್’* ಮೂಲಕ ಚಿತ್ರ ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಇದರ ಮೊದಲ ಹಂತವಾಗಿ ನಟ ....
*'ಸರ್ಕಾರಿ ನ್ಯಾಯಬೆಲೆ ಅಂಗಡಿ’ಗೆ ಶಾಸಕ ಎಸ್. ಆರ್. ವಿಶ್ವನಾಥ್ ಸಾಥ್* *ಕುಮಾರ ಬಂಗಾರಪ್ಪ ಪಾತ್ರದ ’ಸರ್ಕಾರಿ ನ್ಯಾಯಬೆಲೆ ಅಂಗಡಿ’ ಚಿತ್ರದ ಕ್ಯಾರೆಕ್ಟರ್ ಟೀಸರ್ ರಿಲೀಸ್* *ಸಾಮಾಜಿಕ ಕಳಕಳಿಯ ’ಸರ್ಕಾರಿ ನ್ಯಾಯಬೆಲೆ ಅಂಗಡಿ’ ಚಿತ್ರಕ್ಕೆ ಶಾಸಕ ಎಸ್. ಆರ್. ವಿಶ್ವನಾಥ್ ಮೆಚ್ಚುಗೆ* *’ಸರ್ಕಾರಿ ನ್ಯಾಯಬೆಲೆ ಅಂಗಡಿ’ ಚಿತ್ರದ ಕ್ಯಾರೆಕ್ಟರ್ ಟೀಸರ್ ಬಿಡುಗಡೆ* *ಪೋಸ್ಟ್ ಪ್ರೊಡಕ್ಷನ್ ಕೆಲಸ ಮುಗಿಸಿ ತೆರೆಗೆ ಬರಲು ತಯಾರಾದ ’ಸರ್ಕಾರಿ ನ್ಯಾಯಬೆಲೆ ಅಂಗಡಿ’ ಚಿತ್ರ* ’ಸರ್ಕಾರಿ ನ್ಯಾಯಬೆಲೆ ಅಂಗಡಿ’ ಹೀಗೊಂದು ಹೆಸರಿನಲ್ಲಿ ಕನ್ನಡದಲ್ಲಿ ಸಿನಿಮಾವೊಂದು ತೆರೆಗೆ ಬರುತ್ತಿರುವುದು ನಿಮಗೆ ಗೊತ್ತಿರಬಹುದು. ಇದೀಗ ಈ ....
*ಉಪೇಂದ್ರ ರಿ-ರೀಲೀಸ್* *ಸಿನ್ಮಾ ನೋಡಿ 1ಕೋಟಿ ಗೆಲ್ಲಿ* *ಉಪೇಂದ್ರ ಪ್ರಶ್ನೆಗೆ ತಕ್ಕ ಉತ್ತರ ಕೊಟ್ಟ ಪ್ರೇಕ್ಷಕರಿಗೆ ಆ ಶೋ ಕಲೆಕ್ಷನ್ ಹಣ ಬಹುಮಾನ* *ಉಪೇಂದ್ರ ಚಿತ್ರದ 25ನೇ ದಿನದ ಪ್ರದರ್ಶನದಂದು ಸರಿಯಾದ ಉತ್ತರಕೊಟ್ಟ ಪ್ರೇಕ್ಷಕನಿಗೆ 1ಕೋಟಿ ಬಹುಮಾನ* ISH MYRA Producer ಕಂಪನಿ ಅಡಿಯಲ್ಲಿ ಪರಮೇಶ್ವರ್ ಬಿ ಕನ್ನಡ ಪ್ರೇಕ್ಷಕರಿಗೆ ಹೊಸದೊಂದು ಆಫರ್ ಕೊಟ್ಟಿದ್ದಾರೆ. ಅದು ಉಪೇಂದ್ರ ಸಿನಿಮಾವನ್ನ ರಿ- ರಿಲೀಸ್ ಮಾಡೋ ಮೂಲಕ. ಈ ವಿಚಾರವನ್ನ ಮಾಧ್ಯಮಕ್ಕೆ ಮೊದಲು ತಿಳಿಸುವ ಉದ್ದೇಶದಿಂದ ಇಂದು ಪತ್ರಿಕಾಗೋಷ್ಠಿ ಕರೆದಿದ್ದ ಪರಮೇಶ್ವರ್ ಥೇಟ್ ಉಪೇಂದ್ರರಂತೆ ತಲೆಗ್ ಹುಳ ಬಿಟ್ಟಿದ್ದಾರೆ. ಆಸಾಧ್ಯ ಅನ್ನೋದನ್ನ ಸಾಧ್ಯ ಮಾಡ್ತೀವಿ ನಂಬಿ ಅಂತ ....
*ತಿಕ್ಲುರಾಮ ಸಿನಿಮಾದ ಪುಸ್ತಕ ಬಿಡುಗಡೆ* ಪರಿಸರ ಪ್ರೇಮಿ, ಹೃದಯಸ್ಪರ್ಶಿ ಕಥೆಯನ್ನು ಹೊಂದಿರುವ *’ತಿಕ್ಲುರಾಮ’* ಡಾ.ನಟರಾಜ ವಿರಚಿತ ಕಾದಂಬರಿಯಾಗಿದ್ದು ಸಿನಿಮಾರೂಪದಲ್ಲಿ ಬರುತ್ತಿದೆ. ಈಗಾಗಲೇ ಶೇಕಡ 40ರಷ್ಟು ಚಿತ್ರೀಕರಣ ನಡೆದಿದೆ. ಮೊನ್ನೆಯಷ್ಟೇ ಕಾದಂಬರಿ ಬಿಡುಗಡೆ ಸಮಾರಂಭವು ಮಂತ್ರಿ ಮಾಲ್ದಲ್ಲಿ ಅದ್ದೂರಿಯಾಗಿ ನಡೆಯಿತು. ಪದ್ಮಶ್ರೀ ಡಾ.ದೊಡ್ಡರಂಗೇಗೌಡ, ನಟ ನಿರ್ದೇಶಕ ಕೆ.ಸುಚೇಂದ್ರಪ್ರಸಾದ್, ಸಾಹಿತಿ ಮತ್ತು ನಿರ್ದೇಶಕ ಬಿ.ಶಿವಾನಂದ, ಡಾ.ಭರತ್ ಮುಂತಾದವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ ತಂಡಕ್ಕೆ ಶುಭ ಹಾರೈಸಿದರು. ಇನ್ನು ಸಿನಿಮಾಕ್ಕೆ ಮಂಜುಕವಿ ನಿರ್ದೇಶನ ಜವಬ್ದಾರಿಯನ್ನು ಹೊತ್ತುಕೊಂಡಿದ್ದು, ಡಾ.ರಾಜವೀರ್ ....
ಎಐ ಆಧಾರಿತ "ಗರುಡ" ಚಿತ್ರದ ಟ್ರೈಲರ್ ಬಿಡುಗಡೆ ಇತ್ತೀಚಿನ ದಿನಗಳಲ್ಲಿ ಪ್ರತಿ ಕ್ಷೇತ್ರದಲ್ಲೂ ಎಐ ತಂತ್ರಜ್ಞಾನ ಹೆಚ್ಚು ಹೆಚ್ಚು ಬಳಕೆಯಾಗುತ್ತಿದೆ, ಮುಂದಿನ ಕಾಲಘಟ್ಟದಲ್ಲಿ ಅದು ಜನರ ಮತ್ತು ಮಕ್ಕಳ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತೆ, ಅದು ಜನರಿಗೆ ಮಾರಕವಾಗುತ್ತಾ ಅಥವಾ ಉಪಯುಕ್ತವಾಗುತ್ತಾ ಎಂಬ ಕಂಟೆಂಟ್ ಆಧರಿಸಿ ತಯಾರಾಗಿರುವ ಚಿತ್ರ ಗರುಡ. ಶೈವಂ ಫಿಲಂಸ್ ಮೂಲಕ ಕಿರಣ್ ಎಸ್. ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ. ಜತೆಗೆ ಕಥೆ, ಚಿತ್ರಕಥೆ ಬರೆದು ನಿರ್ದೇಶನದ ಜತೆ ಛಾಯಾಗ್ರಾಹಕರಾಗಿಯೂ ಕೆಲಸ ಮಾಡಿದ್ದಾರೆ. ಬಿಡುಗಡೆಗೆ ಸಿದ್ದವಾಗಿರುವ ಈ ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಈ ಸಂದರ್ಭದಲ್ಲಿ ಚಿತ್ರದ ನಾಯಕ, ....
ವೀರಗಾಸೆ ಹಿನ್ನೆಲೆಯ 'ರುದ್ರಾಭಿಷೇಕಂ’ ಹೃದಯದ ಹಾಡು ಬಿಡುಗಡೆ ನಮ್ಮ ಸಾಂಸ್ಕೃತಿಕ ಪರಂಪರೆಗಳಲ್ಲಿ ಒಂದಾದ ವೀರಗಾಸೆ ಕಲೆಯನ್ನು ಆರಾಧಿಸುತ್ತ ಬಂದಿರುವ ಕುಟುಂಬ ಹಾಗೂ ವೀರಭದ್ರ ದೇವರ ಇತಿಹಾಸವನ್ನು ಹೇಳುವ ಚಿತ್ರ ರುದ್ರಾಭಿಷೇಕಂ. ವಸಂತ್ ಕುಮಾರ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿರುವ ಈ ಚಿತ್ರದಲ್ಲಿ ವಿಜಯ ರಾಘವೇಂದ್ರ, ಪ್ರಿಯಾಕಾ ತಿಮ್ಮೇಶ್ ನಾಐಕ, ನಾಯಕಿಯಾಗಿ ನಟಿಸಿದ್ದಾರೆ. ಈಗಾಗಲೇ ಚಿತ್ರದ ಶೂಟಿಂಗ್ ಹಾಗೂ ಪೋಸ್ಟ್ ಪ್ರೊಡಕ್ಷನ್ ಮುಗಿದಿದ್ದು, ಇತ್ತೀಚೆಗೆ ಹಾಡೊಂದರ ಬಿಡುಗಡೆ ಸಮಾರಂಭ ನಡೆಯಿತು. ಹಾಪ್ ಕಾಮ್ಸ್ ಅಧ್ಯಕ್ಷರಾದ ಚಂದ್ರೇಗೌಡ ಅವರು ಈ ಸಾಂಗ್ ಲಾಂಚ್ ಮಾಡಿ ಶುಭ ಹಾರೈಸಿದರು. ಚಿನ್ನಾರಿ ....
*ಬಿ.ಅಜನೀಶ್ ಲೋಕನಾಥ್ ನೇತೃತ್ವದಲ್ಲಿ ಕನ್ನಡದ ಮೊದಲ ಲೈವ್ ಇನ್ ಕಾನ್ಸರ್ಟ್* *ಇದೇ ತಿಂಗಳ 16ರಂದು ಬಿ.ಅಜನೀಶ್ ಲೋಕನಾಥ್ ಮ್ಯೂಸಿಕ್ ಕಾನ್ಸರ್ಟ್* ಕನ್ನಡದ ಸ್ಟಾರ್ ಸಂಗೀತ ನಿರ್ದೇಶಕರ ಪಟ್ಟಿಯಲ್ಲಿ ಪ್ರಮುಖರಾಗಿರುವ ಅಜನೀಶ್ ಲೋಕನಾಥ್. ‘ಉಳಿದವರು ಕಂಡಂತೆ’ ಚಿತ್ರದ ಮೂಲಕ ಖ್ಯಾತರಾಗಿ ‘ರಂಗಿತರಂಗ’, ‘ವಿಕ್ರಾಂತ್ ರೋಣ’, ‘ಕಿರಿಕ್ ಪಾರ್ಟಿ’, ‘ಅಕಿರ’, ‘ಅವನೇ ಶ್ರೀಮನ್ನಾರಾಯಣ’, ‘ಬೆಲ್ ಬಾಟಂ’, ‘ಕಾಂತಾರ’, ಮಾರ್ಕ್ ಸೇರಿದಂತೆ ಹಲವು ಸೂಪರ್ ಹಿಟ್ ಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡಿ ಜನಪ್ರಿಯರಾದವರು. ಕನ್ನಡ ಮಾತ್ರವಲ್ಲ ಪರಭಾಷೆಯಲ್ಲಿಯೂ ಬ್ಯುಸಿಯಾಗಿರುವ ಅಜನೀಶ್ ಲೋಕನಾಥ್ ಇದೀಗ ....
*"ಸೆಪ್ಟೆಂಬರ್ 21" ಚಿತ್ರಕ್ಕೆ ರಿಯಲ್ ಸ್ಟಾರ್ ಉಪೇಂದ್ರ ಸಾಥ್* . *ಪ್ರಿಯಾಂಕ ಉಪೇಂದ್ರ ಅಭಿನಯದ ಹಾಗೂ ಕರೆನ್ ಕ್ರಿಷ್ಠಿ ಸುವರ್ಣ ....
*’ಶೋಧ’ ಚಿತ್ರಕ್ಕೆ ಮುಹೂರ್ತ* *ಸೆಟ್ಟೇರಿತು ಸಸ್ಪೆನ್ಸ್-ಕ್ರೈಂ ಥ್ರಿಲ್ಲರ್ ‘ಶೋಧ’* *ಎಂ. ಡಿ. ಕೌಶಿಕ್ ‘ಶೋಧ’ಕ್ಕೆ ಧವನ್ ಸೋಹ ಸಾಥ್* *’ಶೋಧ’ನೆಗೆ ಹೊರಟ ‘ಫ್ಲೆಮಿಂಗೋ’ ಸ್ಟುಡೆಂಟ್ಸ್* *ನಟನೆ ತರಬೇತಿಯ ಜೊತೆಗೆ ನಿರ್ಮಾಣಕ್ಕೂ ಸೈ ಎಂದ ಧವನ್ ಸೋಹ* *ಎಂ. ಡಿ. ಕೌಶಿಕ್ ನಿರ್ದೇಶನದ ‘ಶೋಧ’ ಚಿತ್ರಕ್ಕೆ ಚಾಲನೆ* ‘ಸ್ಕಂದ ಫಿಲಂ ಹೌಸ್’ ಹಾಗೂ ‘ಫ್ಲೆಮಿಂಗೋ ಸೆಲೆಬ್ರಿಟೀಸ್ ವರ್ಲ್ಡ್ ಫಿಲಂ ಅಕಾಡೆಮಿ’ ಸಹಯೋಗದಲ್ಲಿ ನಿರ್ಮಾಣವಾಗುತ್ತಿರುವ ‘ಶೋಧ’ ಚಿತ್ರದ ಮುಹೂರ್ತ ಬೆಂಗಳೂರಿನ ರಾಜಾಜಿನಗರದ ಶ್ರೀದಂಡಪಾಣಿ (ಮುರುಘ) ದೇವಸ್ಥಾನದಲ್ಲಿ ನೆರವೇರಿತು. ಸುಮಾರು ಒಂದೂವರೆ ದಶಕಗಳಿಂದ ....