*ಒಂಬತ್ತು ರಸಗಳು, ಒಂದು ಕಥೆ ಮತ್ತು ಅಂತ್ಯ* ಚಂದನವನದಲ್ಲಿ ಮೊದಲು ಎನ್ನುವಂತೆ ಒಂಬತ್ತು ರಸಗಳು, ಒಂದು ಕಥೆ ಮತ್ತು ಅಂತ್ಯ ಇರುವ *’ರೌಶಾಬಿ’* ಚಿತ್ರದಲ್ಲಿ ತೋರಿಸುವ ಪ್ರಯತ್ನ ಮಾಡಲಾಗಿದೆ. ಸ್ಪೂರ್ತಿ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ಹಾವೇರಿ ಮೂಲದ ಉದ್ಯಮಿ *ಶರಣಪ್ಪ ಅಂಗಡಿ ನಿರ್ಮಾಣ* ಮಾಡಿದ್ದಾರೆ. ನಟ *ಎಸ್.ಆರ್.ಪ್ರಮೋದ್ ಆಕ್ಷನ್ ಕಟ್* ಹೇಳಿರುವ ಆರನೇ ಚಿತ್ರವಾಗಿದೆ. ಪ್ರಚಾರದ ಕೊನೆ ಹಂತವಾಗಿ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ಶ್ರೀ ರೇಣುಕಾಂಬ ಸ್ಡುಡಿಯೋದಲ್ಲಿ ಅದ್ದೂರಿಯಾಗಿ ನಡೆಯಿತು. ಕರ್ನಾಟಕ ನಿರ್ದೇಶಕರ ಸಂಘದ ಅಧ್ಯಕ್ಷ ಎನ್ನಾರ್ಕೆ ವಿಶ್ವನಾಥ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ತಂಡಕ್ಕೆ ಶುಭ ಹಾರೈಸಿದರು. ಹಿರಿಯ ....
'ಕನಸಲು..’ ಆಲ್ಬಮ್ ಹಾಡು ಬಿಡುಗಡೆ ದರ್ಜಿಯ ಪ್ರೇಮಕಥೆ ಹೇಳುವ ’ಕನಸಲು.’ ಆಲ್ಬಮ್ ಹಾಡು ರಿಲೀಸ್ ನವಿರಾದ ಪ್ರೇಮವನ್ನು ಸಾರುವ ಆಲ್ಬಮ್ ಗೀತೆಯೊಂದು ’ಕನಸಲು..’ ಹೆಸರಲ್ಲಿ ಬಿಡುಗಡೆಯಾಗಿದೆ. ಯುವ ಪ್ರತಿಭೆ ಶ್ರೀರಾಮ್ ಗಂಧರ್ವ ಸಾರಥ್ಯದಲ್ಲಿನ ಈ ಹಾಡಿನ ಬಿಡುಗಡೆ ಕಾರ್ಯಕ್ರಮದಲ್ಲಿ ಚಿತ್ರೋದ್ಯಮದ ಯುವ ಪ್ರತಿಭೆಗಳ ಸಂಗಮವೇ ನಡೆದಿತ್ತು. ಕನಸಲು.. ಹಾಡನ್ನು ವೇದಿಕೆ ಮೇಲೆ ಸಾಂಕೇತಿಕವಾಗಿ ಬಿಡುಗಡೆಗೊಳಿಸಿ, ಪರದೆಯ ಮೇಲೆ ಪ್ರದರ್ಶಿಸಲಾಯಿತು. ಅತಿಥಿಯಾಗಿ ಆಗಮಿಸಿ ಶುಭಕೋರಿದ ’ಕಂಗ್ರಾಜುಲೇಶನ್ಸ್ ಬ್ರದರ್ಸ್’ ಚಿತ್ರದ ನಾಯಕ ರಕ್ಷಿತ್ ನಾಗ್ ಮಾತನಾಡಿ, "ಶ್ರೀರಾಮ್ ನಿಮ್ಮ ಕೆಲಸವನ್ನು ಇಷ್ಟಕ್ಕೆ ನಿಲ್ಲಿಸಬೇಡಿ. ಜನ ಬಹಳ ಬೇಗ ....
*-- 'ಚಿಟ್ಟೀ ಅಯೀ ಹೈ’ ಸಂಗೀತ ಕಾರ್ಯಕ್ರಮದ ಪತ್ರಿಕಾಗೋಷ್ಠಿಯ ಸುದ್ದಿ --* (’Chitti Aaye Hai' music event Press meet coverage Press release news) *ಸಂಗೀತ ಹೂರಣ ಹೊತ್ತು ಬರುತ್ತಿದೆ ‘ಚಿಟ್ಟೀ ಆಯೀ ಹೈ’* *ಖ್ಯಾತ ಗಾಯಕಿ ದಿ. ಲತಾ ಮಂಗೇಶ್ಕರ್ ಸವಿ ನೆನಪಿನಲ್ಲಿ ವೈವಿದ್ಯಮಯ ಗೀತೆಗಳ ಸಂಗೀತ ಸಂಜೆ* *ಅಪರೂಪದ ಸುಮಧುರ ಗೀತೆಗಳಿಗೆ ನಟ ಕಂ ನಿರ್ಮಾಪಕ ಕಮಲ್ ರಾಜ್ ವೇದಿಕೆ* *’ಚಿಟ್ಟೀ ಆಯೀ ಹೈ’ ಸಂಗೀತ ಸಂಜೆಯ ಪೋಸ್ಟರ್, ಆಮಂತ್ರಣ ಬಿಡುಗಡೆ* *ಭಾರತದ ವಿಭಿನ್ನ ಸಂಗೀತ ಪ್ರಾಕಾರಗಳನ್ನು ಆಸ್ವಾಧಿಸಲು ಬೆಂಗಳೂರು ಸಜ್ಜು* *’ಚಿಟ್ಟೀ ಆಯೀ ಹೈ’ ಸಂಗೀತ ಸಂಜೆಗೆ ಚಿತ್ರರಂಗ ಮತ್ತು ಸಂಗೀತ ಕ್ಷೇತ್ರದ ಗಣ್ಯರ ದಂಡು* *12 ಸೆ. 2026, ....
*ಉತ್ತರ ಕನ್ನಡ ಜಿಲ್ಲೆಯನ್ನು ಬಣ್ಣಿಸಲು ಪದಗಳು ಸಾಲದು - ಹಿರಿಯ ನಟ ದೊಡ್ಡಣ್ಣ* 1801 ರಿಂದ 2026ರ ವರೆಗಿನ ಮೂರು ಕಾಲಘಟ್ಟ, ಉತ್ತರ ಕನ್ನಡ ಜಿಲ್ಲೆಯ ನೆಲದ ಕಥೆಯನ್ನು ಸಾರುವ *’ಕಾನ್ಧಾರಿ’* ಚಿತ್ರವೊಂದು ತೆರೆಗೆ ಬರಲು ಸಜ್ಜಾಗಿದೆ. ಹಿರಿಯ ನಟ ದೊಡ್ಡಣ್ಣ ಟ್ರೇಲರ್ ಬಿಡುಗಡೆ ಮಾಡಿ, ಜಿಲ್ಲೆಯ ಬಗ್ಗೆ ಸಕರಾತ್ಮಕವಾಗಿ ಖುಷಿ ಹಂಚಿಕೊಂಡರು. ಅಲ್ಲಿನವರೇ ಆಗಿರುವ *ಸುಪ್ರೀತ್ ಹೆಗಡೆ ಸೋಮನಮನೆ ಅವರು ಅಖ್ಯಾನ ಪ್ರೊಡಕ್ಷನ್ ಅಡಿಯಲ್ಲಿ ನಿರ್ಮಾಣ* ಮಾಡಿದ್ದಾರೆ. *ಪರಿಕಲ್ಪನೆ ಮತ್ತು ನಿರ್ದೇಶನ ವಿನಾಯಕ ಹೆಗಡೆ ಬೊಮ್ಮನಳ್ಳಿ* ಅವರದಾಗಿದೆ. ಹಿರಿಯ ನಿರ್ಮಾಪಕ ರಾಕ್ಲೈನ್ ವೆಂಕಟೇಶ್, ಹಿರಿಯ ಐಎಎಸ್ ಅಧಿಕಾರಿ ಸಂಜಯ ಶೆಟ್ಟನ್ನವರ್ ಮತ್ತು ಇತಿಹಾಸಕಾರ ಹಾಗೂ ....
*ಶರಣ್ ಕಂಠಸಿರಿಯಲ್ಲಿ "ನೀ ನಂಗೆ ಅಲ್ಲವಾ" ಚಿತ್ರದ "ಜಿಗಿ ಜಿಕ್ಕ ಜಿಕ್ಕ" ಹಾಡು* . *ಹಾಡು ಬಿಡುಗಡೆ ಮಾಡಿ ಹಾರೈಸಿದ ನವೀನ್ ಶಂಕರ್, ವಿಕಾಶ್ ಉತ್ತಯ್ಯ ಹಾಗೂ ಸಿದ್ದು ಮೂಲಿಮನಿ* . ಸುರಮ್ ಮೂವೀಸ್ ಲಾಂಛನದಲ್ಲಿ ಜಯರಾಮ ದೇವಸಮುದ್ರ ನಿರ್ಮಿಸಿರುವ, ಮನೋಜ್ ಪಿ ನಡಲುಮನೆ ನಿರ್ದೇಶನದ ಹಾಗೂ ರಾಹುಲ್ ಆರ್ಕಟ್, ಕಾಶಿ ಮಾ ನಾಯಕ - ನಾಯಕಿಯಾಗಿ ನಟಿಸಿರುವ "ನೀ ನಂಗೆ ಅಲ್ಲವಾ" ಚಿತ್ರದ ಮೊದಲ ಹಾಡು "ನೋ ನೋ" ಜನಪ್ರಿಯವಾಗಿದೆ. ಇತ್ತೀಚೆಗಷ್ಟೇ ಚಿತ್ರದ ಎರಡನೇ ಹಾಡು "ಜಿಗಿ ಜಿಕ್ಕ ಜಿಕ್ಕ" ಸರಿಗಮ ಯೂಟ್ಯೂಬ್ ಚಾನಲ್ ನಲ್ಲಿ ಬಿಡುಗಡೆಯಾಗಿದೆ. ನಿರ್ದೇಶಕ ಮನೋಜ್ ಪಿ ನಡಲುಮನೆ ....
ಸರ್ಚ್ ಚಿತ್ರಕ್ಕೆ ಕ್ಯಾಮರಾ ಆನ್ ಮಾಡಿದ ಶ್ರೀನಗರ ಕಿಟ್ಟಿ ಸರ್ಚ್ ಮುಹೂರ್ತದಲ್ಲಿ ಸಸ್ಪೆನ್ಸ್ ಕಥೆಯ ಸೂಚನೆ ಖ್ಯಾತ ನಿರ್ದೇಶಕ ಎಸ್.ನಾರಾಯಣ್ ಅವರ ಪುತ್ರ ಪಂಕಜ್ ನಾರಾಯಣ್ ಒಂದು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರದೊಂದಿಗೆ ಮರಳಿದ್ದಾರೆ. ಸರ್ಚ್ ಹೆಸರಿನ ಈ ಚಿತ್ರದ ಮುಹೂರ್ತ ಸಮಾರಂಭ ನಾಗರಬಾವಿ ಮುದ್ದಿನ ಪಾಳ್ಯದ ಲಕ್ಷ್ಮೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ನೆರವೇರಿತು. ಚಿತ್ರದ ನಾಯಕ ಪಂಕಜ್ ಮಾತನಾಡಿ, "ಉಗ್ರಂ ಮುರಳಿ ಅವರು ಈಗಾಗಲೇ ಚಿತ್ರದ ಟೈಟಲ್ ಲಾಂಚ್ ಮಾಡಿಕೊಟ್ಟರು. ಇದೀಗ ಗಣ್ಯರ ಸಮ್ಮುಖದಲ್ಲಿ ಮುಹೂರ್ತ ನೆರವೇರಿದೆ. ಮೊದಲನೆಯದಾಗಿ ಕಥೆಯೇ ನಾನು ಈ ಚಿತ್ರ ಒಪ್ಪಲು ಪ್ರಮುಖ ಕಾರಣ. ಇದು ಒಂದೇ ವಿಷಯವನ್ನು ....
*ಗಣಪನ ಸನ್ನಿದಿಯಲ್ಲಿ ಕಲೀಲಾ ಮುಹೂರ್ತ* *’ಕಲೀಲಾ’* ಚಿತ್ರದ ಮುಹೂರ್ತ ಸಮಾರಂಭವು ಶ್ರೀ ಪಂಚಮುಖಿ ಗಣಪತಿ ದೇವಸ್ಥಾನದಲ್ಲಿ ಅದ್ದೂರಿಯಾಗಿ ನಡೆಯಿತು. ಮೊದಲ ದೃಶ್ಯಕ್ಕೆ ಸ್ಟಾರ್ ನಿರ್ದೇಶಕ ಸಿಂಪಲ್ ಸುನಿ ಕ್ಲಾಪ್ ಮಾಡಿ ತಂಡಕ್ಕೆ ಶುಭ ಹಾರೈಸಿದರು. ಕೆವಿಆರ್ ಪಿಕ್ಚರ್ಸ್ ನಿರ್ಮಾಣದ ಜವಬ್ದಾರಿಯನ್ನು ಹೊತ್ತುಕೊಂಡಿದೆ. ಕೆ.ರಾಘವ್ ಕಥೆ,ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ನಂತರ ಮಾತನಾಡಿದ ನಿರ್ದೇಶಕರು, ಇದೊಂದು ಮಾಸ್ ಕಂಟೆಂಟ್ ಜತೆಗೆ ಅಣ್ಣ ತಂಗಿ ಬಾಂಧವ್ಯವನ್ನು ಹೇಳಲಾಗುತ್ತಿದೆ. ’ಒಂದು ನಿಮಿಷದ ಕೋಪ, ಜೀವನವೆಲ್ಲ ತಾಪ’ ಎಂಬ ಗಾದೆಯಂತೆ ಚಿತ್ರದಲ್ಲಿ ಏನೂ ತಿಳಿಯದ ಮುಗ್ದ ಹುಡುಗನೊಬ್ಬ ಕೋಪದಲ್ಲಿ ತಪ್ಪು ....
*"ಅಮರ್ಥ"ಸಿನಿಮಾವನ್ನು ನಿಮ್ಮೆಲ್ಲರ ಸಹಕಾರದಿಂದ ಸಮರ್ಥವಾಗಿಸಿ ಪ್ರೇಕ್ಷಕರಲ್ಲಿ ಚಿತ್ರತಂಡದ ಮನವಿ* . *ಶ್ರೀನಗರ ಕಿಟ್ಟಿ - ಮೇಘನಾರಾಜ್ ಅಭಿನಯದ ಈ ಚಿತ್ರ ಸೆಪ್ಟೆಂಬರ್18ರಂದು ತೆರೆಗೆ* . . ಪಂಚರಂಗಿ ಫಿಲಂಸ್ ಲಾಂಛನದಲ್ಲಿ ಡಾ|| ಕನ್ಯಾನ ಸದಾಶಿವ ಶೆಟ್ಟಿ ಹಾಗೂ ಗುರು ಹೆಗ್ಡೆ ನಿರ್ಮಸಿರುವ, ಗುರು ಹೆಗ್ಡೆ ಹಾಗೂ ವಿನಯ್ ಪ್ರೀತಮ್ ನಿರ್ದೇಶನದ ಮತ್ತು ಶ್ರೀನಗರ ಕಿಟ್ಟಿ - ಮೇಘನಾರಾಜ್ ನಾಯಕ- ನಾಯಕಿಯಾಗಿ ನಟಿಸಿರುವ "ಅಮರ್ಥ" ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭ ಇತ್ತೀಚಿಗೆ ಅದ್ದೂರಿಯಾಗಿ ನೆರವೇರಿತು. ಹೆಸರಾಂತ ಉದ್ಯಮಿ ಪ್ರಕಾಶ್ ಶೆಟ್ಟಿ ಹಾಗೂ ಖ್ಯಾತ ನಟ ಡಾರ್ಲಿಂಗ್ ....
*ಆರ್ ಚಂದ್ರು ನಿರ್ದೇಶನದ, ಆರ್ ಸಿ ಸ್ಟುಡಿಯೋಸ್ ನಿರ್ಮಾಣದ ಹಾಗೂ ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ನಾಯಕರಾಗಿ ನಟಿಸುತ್ತಿರುವ "ಒರಿಜಿನಲ್ ಮಾನ್ ಸ್ಟರ್" ಪ್ಯಾನ್ ಇಂಡಿಯಾ ಚಿತ್ರಕ್ಕೆ ಅದ್ದೂರಿ ಮುಹೂರ್ತ* . "ತಾಜ್ ಮಹಲ್", " ಚಾರ್ ಮಿನಾರ್", "ಮೈಲಾರಿ" ಹಾಗೂ ಪ್ಯಾನ್ ಇಂಡಿಯಾ "ಕಬ್ಜ" ಸೇರಿದಂತೆ ಅನೇಕ ಯಶಸ್ವಿ ಚಿತ್ರಗಳ ನಿರ್ದೇಶಕ ಆರ್ ಚಂದ್ರು, ಎರಡೂವರೆ ವರ್ಷಗಳ ನಂತರ, "ಒರಿಜಿನಲ್ ....
*ಬಾಲಿವುಡ್ ಗೆ ಅಡಿಯಿಟ್ಟ ಆರ್ ಚಂದ್ರು.* *ಆನಂದ್ ಪಂಡಿತ್ ಅವರ ಜೊತೆಗೂಡಿ ಅದ್ದೂರಿ ಪ್ಯಾನ್ ಇಂಡಿಯಾ ಚಿತ್ರ ನಿರ್ಮಾಣ* . *ಮುಂಬೈನಲ್ಲಿ ಶೀರ್ಷಿಕೆ ಹಾಗೂ ಮೋಷನ್ ಪೋಸ್ಟರ್ ಅನಾವರಣ* . *ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಸೇರಿದಂತೆ ದೇಶದ ಸೂಪರ್ ಸ್ಟಾರ್ ಗಳು ನಟಿಸುತ್ತಿರುವ ಈ ಚಿತ್ರಕ್ಕೆ "ಒರಿಜಿನಲ್ ಮಾನ್ ಸ್ಟರ್"(OM) ಎಂದು ನಾಮಕರಣ* . . ವಿನೂತನ ಪ್ರಯತ್ನಗಳಿಂದ ....
ಸ್ಪಾರ್ಕ್ ನಲ್ಲಿ ಲಾಯರ್ ಪಾತ್ರದಲ್ಲಿ ಜಾಕಿ ಭಾವನಾ ಸ್ಪಾರ್ಕ್ ಮೊಗೆದಷ್ಟು ಮುಗಿಯದ ಹೊಸ ಹೊಸ ಸಂಗತಿಗಳನ್ನು ಹೊರಗಿಡುತ್ತಲೇ ಬಂದಿದೆ. ಇತ್ತೀಚೆಗಷ್ಟೇ ಚಿತ್ರದ ಅದ್ಭುತ ಹಾಡುಗಳನ್ನು ಪರಿಚಯಿಸಲಾಗಿತ್ತು. ಇದೀಗ ವಿಶೇಷ ಪಾತ್ರದಲ್ಲಿ ನಟಿಸಿರುವ ಭಾವನಾರನ್ನು ಸುದ್ದಿಗೋಷ್ಠಿಗೆ ಕರೆಸಿ ಪಾತ್ರದ ಬಗ್ಗೆ ಒಂದಷ್ಟು ಹೊಸ ವಿಚಾರಗಳನ್ನು ಹಂಚಿಕೊಳ್ಳಲಾಯಿತು. ಸ್ಪಾರ್ಕ್ ಶೀರ್ಷಿಕೆಯಂತೆ ಕಥೆಯಲ್ಲೂ ಕೂಡ ಸ್ಪಾರ್ಕ್ ಇದೆ. ಎಲ್ಲ ಪಾತ್ರಗಳಲ್ಲಿಯೂ ಆ ಸ್ಪಾರ್ಕ್ ಇದೆ. ಆ ಕಾರಣದಿಂದಲೇ ನಾನು ಈ ಚಿತ್ರ ಒಪ್ಪಿಕೊಂಡೆ. ನಾನು ಚಾಲೆಂಜಿಂಗ್ ಅನಿಸುವ ಚಿತ್ರಕಥೆ ಇದ್ದಾಗಲೇ ಸಿನಿಮಾ ಒಪ್ಪಿಕೊಳ್ಳುತ್ತೇನೆ. ನಿರ್ದೇಶಕರು ಈ ಪಾತ್ರದ ಬಗ್ಗೆ ಹೇಳಿದಾಗ ನಾನಂತೂ ಇಂಥ ಪಾತ್ರ ಈ ....
ಸಮಾಜದಲ್ಲಿ ಹೆಣ್ಣಿನ ಸಂಕಷ್ಟಗಳ ಸುತ್ತ ಹೆಣೆದ ’ಮುಳ್ಳಿನ ಗುಲಾಬಿ’ ಆಶಾ ಗುರುಲಿಂಗಯ್ಯ ಅವರ ಮುಳ್ಳಿ ಗುಲಾಬಿ ಕಾದಂಬರಿಯನ್ನಾಧರಿಸಿ, ಅದೇ ಹೆಸರಲ್ಲಿ ನಿರ್ಮಾಣವಾಗುತ್ತಿರುವ ಚಿತ್ರಕ್ಕೆ ಸ್ಟೈಲ್ ಶಿವು ಆಕ್ಷನ್ ಕಟ್ ಹೇಳುತ್ತಿದ್ದಾರೆ. ಅಜಯ್ ಗೌಡ, ಆಶಾ, ಗಿರಿಜಾ ಲೋಕೇಶ್, ರೇಖಾದಾಸ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಲಿರುವ "ಮುಳ್ಳಿನ ಗುಲಾಬಿ" ಚಿತ್ರದ ಪ್ರಥಮ ಪತ್ರಿಕಾಗೋಷ್ಠಿ ಇತ್ತೀಚೆಗೆ ನಡೆಯಿತು. ಈ ವೇಳೆ ಮಾತನಾಡಿದ ಲೇಖಕಿ ಕಮ್ ನಾಯಕಿ ಆಶಾ ಗುರುಲಿಂಗಯ್ಯ ಸ್ವದೇಶಿ ದಿಶಾ ಕಂಪನಿ ಸಿಇಓ ಆಗಿ ಕೆಲಸ ಮಾಡುತ್ತಿದ್ದೇನೆ. ಡಿಗ್ರಿ ಓದುವಾಗಲೇ ಕಾದಂಬರಿ ಬರೆಯುವ ಹವ್ಯಾಸವಿತ್ತು. ಕಷ್ಟಪಡುತ್ತಿದ್ದ ಒಬ್ಬ ಹೆಣ್ಣು ....
*ಶ್ರೀಕೃಷ್ಣ ಜನ್ಮಾಷ್ಟಮಿ ದಿನ ಅರಂಭವಾಯಿತು ಶಾನ್ - ಸಾನ್ಯ ಅಯ್ಯರ್ ಅಭಿನಯದ "ವಿಷ್ಣುವಲ್ಲಭ" ಚಿತ್ರ* . *ರುಹಿನಾ ರೆಹಮಾನ್ ನಿರ್ಮಾಣದ ಈ ಚಿತ್ರಕ್ಕೆ ಚಂದ್ರಶೇಖರ್ ಬಂಡಿಯಪ್ಪ ನಿರ್ದೇಶನ* . ಆರ್ ಆರ್ ಫಿಲಂಸ್ ಲಾಂಛನದಲ್ಲಿ ರುಹಿನಾ ರೆಹಮಾನ್ ಅವರು ನಿರ್ಮಿಸುತ್ತಿರುವ, ಚಂದ್ರಶೇಖರ್ ಬಂಡಿಯಪ್ಪ ಅವರ ನಿರ್ದೇಶನದಲ್ಲಿ ಶಾನ್ ಹಾಗೂ ಸಾನ್ಯ ಅಯ್ಯರ್ ನಾಯಕ - ನಾಯಕಿಯಾಗಿ ನಟಿಸುತ್ತಿರುವ "ವಿಷ್ಣುವಲ್ಲಭ" ಚಿತ್ರದ ಮುಹೂರ್ತ ಸಮಾರಂಭ ಶ್ರೀಕೃಷ್ಣ ಜನ್ಮಾಷ್ಟಮಿ ಶುಭದಿನದಂದು ಕಂಠೀರವ ಸ್ಟುಡಿಯೋದಲ್ಲಿ ನೆರವೇರಿತು. ಸಚಿವರಾದ ಜಮೀರ್ ಅಹಮದ್ ಖಾನ್ ಚಿತ್ರದ ಮೊದಲ ಸನ್ನಿವೇಶಕ್ಕೆ ಆರಂಭ ಫಲಕ ತೋರಿದರು. ನಿರ್ಮಾಪಕ ಹಾಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ....
*"ಲವ್ ಟುವರ್ಡ್ಸ್ ಫ್ಯಾಮಿಲಿ" ಹಾಡು ಬಿಡುಗಡೆ ಮಾಡಿದ ಮನೋರಂಜನ್ ರವಿಚಂದ್ರನ್* "ಡಬಲ್ ಇಂಜಿನ್", "ಫಾರೆಸ್ಟ್" ಖ್ಯಾತಿಯ ಚಂದ್ರಮೋಹನ್ ಅವರ ನಿರ್ದೇಶನದ "ಲವ್ ಟುವರ್ಡ್ಸ್ ಫ್ಯಾಮಿಲಿ" ಚಿತ್ರದ "ಕುಂದಾಪುರದ ಹೆಣ್ಣಿವಳು" ಎಂಬ ಹಾಡಿನ ಬಿಡುಗಡೆ ಹಾಗೂ ಪತ್ರಿಕಾಗೋಷ್ಠಿ ಇತ್ತೀಚೆಗೆ ನಡೆಯಿತು. ನಾಗಾರ್ಜುನ ಶರ್ಮ ಅವರ ರಚನೆ, ವಿಜಯ್ ಪ್ರಕಾಶ್ ಗಾಯನ ಹಾಗೂ ಆನಂದಲೀಲಾ ಅವರ ಸಂಗೀತ ಸಂಯೋಜನೆ ಇರುವ ಈ ಹಾಡನ್ನು ನಟ ಮನೋರಂಜನ್ ಅನಾವರಣ ಮಾಡಿ, ಶುಭ ಹಾರೈಸಿದರು. ಈ ಸಂದರ್ಭದಲ್ಲಿ ನಿರ್ದೇಶಕ ಭರ್ಜರಿ ಚೇತನ್ ಕುಮಾರ್, ನಿರ್ದೇಶಕ ಮಹೇಶ್ ಕುಮಾರ್, ನಟ ಮಂಜು ಪಾವಗಡ ಮುಂತಾದವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ....
' *ಕಾಮನ್ ಮ್ಯಾನ್’ 4* *ಹಾಡುಗಳಿಗೆ* *ನಾಲ್ವರು* *ಸೆಲಬ್ರಟಿಗಳಿಂದ ಚಾಲನೆ* * *ಕಾಮನ್ ಮ್ಯಾನ್* ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಿದ ವಿನೋದ್ ಪ್ರಭಾಕರ್, ಉಮಾಶ್ರೀ, ಪ್ರಿಯಾಂಕ ಉಪೇಂದ್ರ, ರಮೇಶ್ ಭಟ್. ಸಾಮಾನ್ಯ ಮನುಷ್ಯನೊಬ್ಬ ರಾಜ್ಯದ ಸಿಎಂ ಆದರೆ ಹೇಗೆ ಆಡಳಿತ ನಡೆಸುತ್ತಾನೆ, ಆತ ಎದುರಿಸುವ ಸವಾಲುಗಳೇನು ಎಂಬುದನ್ನು ಹೇಳುವ ಕಾಮನ್ ಮ್ಯಾನ್ ಇದೇ ತಿಂಗಳ 25ರಂದು ಅದ್ದೂರಿಯಾಗಿ ತೆರೆಗೆ ಬರುತ್ತಿದೆ. ಸೋಷಿಯಲ್ ವರ್ಕರ್ ಎನ್. ನರಸಿಂಹಮೂರ್ತಿ ಅವರು ಈ ಕಥೆ ಬರೆದು ಸುರಭಿ ಫಿಲಂಸ್ ಅಡಿ ನಿರ್ಮಿಸಿದ್ದಾರೆ. ಹಿರಿಯ ನಿರ್ದೇಶಕ ಓಂ ಸಾಯಿಪ್ರಕಾಶ್ ಚಿತ್ರಕಥೆ ಬರೆದು ಆ್ಯಕ್ಷನ್ ಕಟ್ ಹೇಳಿದ್ದಾರೆ. ಪಂಚತಾರಾ ....
"ಹುಲಿಬೀರ"ನ ಹಾಡಿಗೆ ವಿ.ಮನೋಹರ್ ಚಾಲನೆ ಈ ಹಿಂದೆ ಮದರಂಗಿ, ರಂಗ್ ಬಿರಂಗಿ ಚಿತ್ರಗಳನ್ನು ನಿರ್ದೇಶಿಸಿದ್ದ ಮದರಂಗಿ ಮಲ್ಲಿಕಾರ್ಜುನ ಅವರ ನಿರ್ದೇಶನದ ಮತ್ತೊಂದು ಚಿತ್ರ ಹುಲಿಬೀರ. ಬಹುತೇಕ ಉತ್ತರ ಕರ್ನಾಟಕದವರೇ ಸೇರಿ ಮಾಡಿರುವ ಅದೇ ಸೊಗಡಿನ ಚಿತ್ರವಿದು, ಯರ್ರಾಬಿರ್ರಿ ಖ್ಯಾತಿಯ ನಟ ಅಂಜನ್ ಚಿತ್ರದ ನಾಯಕನಾಗಿದ್ದು, ಚೈತ್ರ ತೋಟದ, ವನು ಪಾಟೀಲ್ ಹಾಗೂ ಅಂಜಲಿ ನಾಯಕಿಯರಾಗಿ ನಟಿಸಿದ್ದಾರೆ. ಸಾಯಿಸ್ಟಾರ್ ಸಿನಿಮಾಸ್ ಅಡಿ ದಾವಲ ಸಾಹೇಬ ಹುಣಶೀಮರದ, ಅಶೋಕ್ ಎನ್.(ತುರುವೇಕೆರೆ) ಹಾಗೂ ಸುಜಾತ ಗಿರೀಶ್ ಈ ಚಿತ್ರದ ನಿರ್ಮಾಪಕರು. ಈಗಾಗಲೇ ಹುಟ್ಟಿಬಂದೆ ಹುಲಿಬೀರನಾಗಿ ಹಾಗೂ ಉತ್ತರ ಕರ್ನಾಟಕ ಶೈಲಿಯ ಜಿಗ್ರಿ ದೋಸ್ತ ಜಿಗ್ರಿ ದೋಸ್ತ ....
*ಸೆಪ್ಟೆಂಬರ್ 25 ಕ್ಕೆ ಬೆಳ್ಳಿಪರದೆಗೆ ‘ಪ್ರೇಮದ ಊರಲಿ’ ಲಗ್ಗೆ:* ಹಾಡುಗಳ ಸಂಭ್ರಮದೊಂದಿಗೆ ಪ್ರೇಕ್ಷಕರ ಎದುರು ಬರಲು ಚಿತ್ರತಂಡ ಸಜ್ಜು ಬೆಂಗಳೂರು: ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಮನೋಜ್ ಕುಮಾರ್ ಸಾರಥ್ಯದಲ್ಲಿ ಮೂಡಿಬಂದಿರುವ ನೂತನ ಚಲನಚಿತ್ರ ‘ಪ್ರೇಮದ ಊರಲಿ’ ಸೆಪ್ಟೆಂಬರ್ 25 ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ತೆರೆಕಾಣಲು ಸಜ್ಜಾಗಿದೆ. ಶ್ರೀರಾಮ್ ನಾಯಕನಾಗಿ ನಟಿಸಿರುವ ಈ ಚಿತ್ರದಲ್ಲಿ ನಾಯಕಿಯರಾಗಿ ತಪಸ್ವಿನಿ ಪೂಣಚ್ಚ ಹಾಗೂ ರಮಿಕಾ ಶಿವು ಕಾಣಿಸಿಕೊಂಡಿದ್ದಾರೆ. ರಂಗಾಯಣ ರಘು ಪ್ರಮುಖ ಪಾತ್ರದಲ್ಲಿದ್ದಾರೆ. ಇತ್ತೀಚೆಗೆ ನಡೆದ ಮಾಧ್ಯಮಗೋಷ್ಠಿಯಲ್ಲಿ ಚಿತ್ರದ ಬಿಡುಗಡೆ ದಿನಾಂಕವನ್ನು ಅಧಿಕೃತವಾಗಿ ಘೋಷಿಸಿದ ಚಿತ್ರತಂಡ, ....
'ಸ್ಪಾರ್ಕ್’ ಹಾಡಿಗೆ ಸ್ಟಾರ್ಸ್ ಮಧುರ ಮುಗುಳು ನಗೆ ನಿರಂಜನ್ ಸುಧೀಂದ್ರ ನಟನೆಯ ’ಸ್ಪಾರ್ಕ್’ ಚಿತ್ರದ ’ಮಧುರ ಮುಗುಳುನಗೆ..’ ಹಾಡು ಬಿಡುಗಡೆಯಾಗಿದೆ. ಈ ಗೀತೆಯ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡ ತಾರೆಯರು ಮುಗುಳು ನಗೆ ಬೀರಿದ್ದಾರೆ. ಯಾಕೆಂದರೆ ಈ ರೊಮ್ಯಾಂಟಿಕ್ ಹಾಡಿನಲ್ಲಿ ನಿರಂಜನ್ ಅಷ್ಟೇ ಮುದ್ದಾಗಿ ಕಾಣಿಸಿದ್ದಾರೆ. ಸ್ಟಾರ್ ಕುಟುಂಬದಿಂದ ಬಂದವರು ನಿರಂಜನ್ ಸುಧೀಂದ್ರ. ಹೀಗಾಗಿಯೇ ಚಿಕ್ಕಮ್ಮ ಪ್ರಿಯಾಂಕಾ ಉಪೇಂದ್ರ ಸೇರಿದಂತೆ ಕುಟುಂಬದ ಪ್ರಮುಖರೆಲ್ಲ ಹಾಜರಿದ್ದರು. ಖುದ್ದು ನಿರಂಜನ್ ಅವರ ಅಜ್ಜಿ (ಉಪೇಂದ್ರ ಅವರ ತಾಯಿ) ಅನಸೂಯಮ್ಮ ಈ ಹಾಡನ್ನು ಬಿಡುಗಡೆಗೊಳಿಸಿದರು. ಹಾಡಿನ ಪ್ರದರ್ಶನದ ಬಳಿಕ ಮಾತನಾಡಿದ ಪ್ರಿಯಾಂಕಾ ಅವರು, ....
ಅನಿರೀಕ್ಷಿತ ಅತಿಥಿಗಳು ಟ್ರೇಲರ್ ಗೆ ಪ್ರಮೋದ್ ಶೆಟ್ಟಿ ಮೆಚ್ಚುಗೆ ಇದೇ ಸಪ್ಟೆಂಬರ್ 18ರಂದು ತೆರೆಕಾಣಲಿರುವ ಚಿತ್ರ ಅನಿರೀಕ್ಷಿತ ಅತಿಥಿಗಳು. ಚಿತ್ರದ ಟ್ರೇಲರ್ ರಿಲೀಸ್ ಮಾಡಿದ ಖ್ಯಾತ ನಟ ಪ್ರಮೋದ್ ಶೆಟ್ಟಿ ಬಾಯ್ತುಂಬ ಮೆಚ್ಚುಗೆ ಮಾತುಗಳನ್ನಾಡಿದ್ದಾರೆ. ಈ ಚಿತ್ರತಂಡದವರು ನನಗೆ ರಂಗಭೂಮಿ ದಿನಗಳಿಂದಲೇ ಪರಿಚಯ. ಅದರಲ್ಲೂ ಅನಿರೀಕ್ಷಿತ ಅತಿಥಿಗಳು ಚಿತ್ರದ ಕಾರ್ಯವೈಖರಿ ಬಗ್ಗೆ ಬೇರೆ ಬೇರೆ ಸಿನಿಮಾ ತಂತ್ರಜ್ಞರು ಹೊಗಳಿಕೆಯ ಮಾತನಾಡುತ್ತಿರುವುದು ನಿಜಕ್ಕೂ ಉತ್ತಮ ಸೂಚನೆಯಾಗಿದೆ ಎಂದರು. ಟ್ರೇಲರ್ ನಲ್ಲಿ ಕಾಡಿನ ಮಧ್ಯೆ ಇರುವ ಒಂಟಿಮನೆಯೊಂದನ್ನು ಕಂಡ ಪ್ರಮೋದ್ ಶೆಟ್ಟಿ "ಇದೇ ಮನೆಯಲ್ಲೇ ರಿಷಬ್ ನಟನೆಯ ’ಹೀರೋ’ ಸಿನಿಮಾ ಚಿತ್ರೀಕರಣ ಮಾಡಲಾಗಿತ್ತು. ....
" *ಪ್ಯಾರ್" ತಂದೆ- ಮಗಳ* *ಎಮೋಷನಲ್ ಟೀಸರ್* *ಬಿಡುಗಡೆ* ಎಸ್.ಎಂ. ಪ್ರೊಡಕ್ಷನ್ಸ್ ಲಾಂಛನದಲ್ಲಿ ಹೆಚ್. ಎಸ್. ನಾಗಶ್ರೀ ಅವರ ನಿರ್ಮಾಣದ, ತಂದೆ ಮಗಳ ಬಾಂಧವ್ಯದ ಕಥಾನಕ ಒಳಗೊಂಡ ’ *ಪ್ಯಾರ್* ’ ಚಿತ್ರವೀಗ ಬಿಡುಗಡೆಗೆ ಸಿದ್ದವಾಗಿದೆ. ಎಸ್. ಸುಪ್ರೀತ್ ಕಥೆ, ಚಿತ್ರಕಥೆ ಬರೆದು ಅ್ಯಕ್ಷನ್ ಕಟ್ ಹೇಳಿರುವ ಈ ಚಿತ್ರದಲ್ಲಿ ರಿಶ್ವಿನ್, ರಾಶಿಕಾ ಶೆಟ್ಟಿ ನಾಯಕ, ನಾಯಕಿಯಾಗಿ ನಟಿಸಿದ್ದು, ಕ್ರೇಜಿ ಸ್ಟಾರ್ ರವಿಚಂದ್ರನ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ಈ ಚಿತ್ರದ ಟೀಸರ್ ಬಿಡುಗಡೆ ಸಮಾರಂಭ ನಡೆಯಿತು. ಈಗಾಗಲೇ ರಿಲೀಸಾಗಿರುವ ’ಒಂದೇ ಮಾತಲಿ ಹೇಳೋದಾದರೆ’ ಅತಿಹೆಚ್ಚು ವೀಕ್ಷಣೆಯಾಗಿದೆ. ಪಳನಿ ಡಿ.ಸೇನಾಪತಿ ಅವರ ಸಂಗೀತ, ಕೆಎಸ್.ಚಂದ್ರಶೇಖರ್ ....