ಪಕ್ಕಾ ಎಂಟರ್ಟೈನ್ಮೆಂಟ್ ’ಗೋಲ್ಮಾಲ್ ಗ್ಯಾಂಗ್’ ಟೀಸರ್ ರಿಲೀಸ್ ಸಿನಿಮಾ ಅಂದ್ರೆನೆ ಮನರಂಜನೆ. ಆ ಮನರಂಜನೆಗಾಗಿಯೇ ಜನ ಕಾಯ್ತಾ ಇರುತ್ತಾರೆ. ನಕ್ಕು ಮನಸ್ಸನ್ನ ಕೂಲ್ ಆಗಿಸಿಕೊಳ್ಳುವಂತ ಸಿನಿಮಾವೊಂದು ಸಿದ್ಧವಾಗುತ್ತಿದೆ. ಅದರ ಹೆಸರೇ ಗೊಲ್ಮಾಲ್ ಗ್ಯಾಂಗ್. ಇದೀಗ ಒಂದೊಳ್ಳೆ ಟೀಸರ್ ರಿಲೀಸ್ ಆಗಿದ್ದು, ಸಿನಿಮಾದ ಮೇಲೆ ಭರವಸೆ ಮೂಡಿಸಿದೆ. ಶಾಂತ್ವು ಯೂನಿವರ್ಸಲ್ ಪಿಕ್ಚರ್ ಬ್ಯಾನರ್ ನಡಿ ಸತೀಶ್ ಚಂದ್ರ ಅವರು ನಿರ್ಮಾಣ ಮಾಡಿದ್ದಾರೆ. ನಿರ್ದೇಶಕ ಶಿವಕುಮಾರ್ ಮಾತನ್ನಾಡುತ್ತಾ, ಈ ಸಿನಿಮಾಗೆ ನಿರ್ಮಾಪಕರು ಬಹಳಷ್ಟು ಹೆಲ್ಪ್ ಮಾಡಿದ್ದಾರೆ. ಪ್ರತಿಯೊಂದಕ್ಕೂ ಬೆನ್ನೆಲುಬಾಗಿ ನಿಂತವರು, ತಪ್ಪು ಮಾಡಿದಾಗ ತಿದ್ದಿದವರು. ಈ ಸಿನಿಮಾದಲ್ಲಿ ಏನಿಲ್ಲ ....
ದೊಡ್ಮನ್ಸ ಪವರ್ ಪ್ಯಾಕ್ಡ್ ಟ್ರೇಲರ್ ರಿಲೀಸ್
ವೇದಿಕ್ ಕಾಸ್ಮೋಸ್ ಬ್ಯಾನರ್ ಅಡಿಯಲ್ಲಿ , ಶರತ್ ಕೃಷ್ಣ ನಿರ್ದೇಶನದಲ್ಲಿ ಶರತ್ ಕೃಷ್ಣ ಮತ್ತು ರೇಷ್ಮಾ, ಶಿಲ್ಪಾ ಮುಖ್ಯ ಪಾತ್ರದಲ್ಲಿ ನಟಿಸಿರುವ "ದೊಡ್ಮನ್ಸ" ಚಿತ್ರದ ಟ್ರೇಲರ್ ರಿಲೀಸ್ ಆಗಿದೆ. ಪಕ್ಕಾ ಆಕ್ಷನ್ ಪ್ಯಾಕ್ಡ್ ಸಿನಿಮಾ ಅನ್ನೋದನ್ನ ಈ ಟ್ರೇಲರ್ ತೋರಿಸಿಕೊಟ್ಟಿದೆ. ಹೀರೋ ಮಾಸ್ ಅವತಾರ, ಫೈಟ್ ಸೀನ್ ಗಳು ಟ್ರೇಲರ್ ನಲ್ಲಿಯೇ ಮಾಸ್ ಪ್ರಿಯರ ಗಮನ ಸೆಳೆದಿದೆ. ಇನ್ನು ಒಂದು ಇನ್ನೊಸೆಂಟ್ ಲವ್ ಕೂಡ ಅನಾವರಣವಾಗಿದೆ. ಸಿನಿಮಾ ಬಗ್ಗೆ ಒಂದೊಳ್ಳೆ ಭರವಸೆಯನ್ನ ಈ ಟ್ರೇಲರ್ ಮೂಡಿಸಿದೆ.
" *ಭಾಯ್ಸ್ ನೆವರ್* *ಕಾಂಪ್ರಮೈಸ್* " *ಟೀಸರ್ - ಬಾಯ್ಸ್* *ಆಂಥೆಮ್ ಬಿಡುಗಡೆ* ಈ ಹಿಂದೆ ಜಸ್ಟ್ ಮದ್ವೇಲಿ, ರಾಜಣ್ಣನ ಮಗ ಚಿತ್ರಗಳನ್ನು ನಿರ್ಮಿಸಿದ್ದ ಹರೀಶ್ ಜಲಗೆರೆ ಅವರು ಇದೀಗ ನಿರ್ದೇಶನಕ್ಕೆ ಕೈ ಹಾಕಿದ್ದಾರೆ. ’ಬಾಯ್ಸ್ ನೆವರ್ ಕಾಂಪ್ರಮೈಸ್’ಎಂಬ ಚಿತ್ರಕ್ಕೆ ಅವರೇ ಆಕ್ಷನ್ ಕಟ್ ಹೇಳಿದ್ದಾರೆ. ಹರೀಶ್ ಜಲಗೆರೆ ಅವರ ಹಿಂದಿನ ಎರಡೂ ಚಿತ್ರಗಳನ್ನು ನಿರ್ದೇಶಿಸಿದ್ದ ಕೋಲಾರ ಸೀನು ಅವರು ಹರೀಶ್ ಅವರ ಹೊಸ ಸಾಹಸಕ್ಕೆ ಜತೆಯಾಗಿದ್ದಾರೆ. ಹಾರರ್ ಕಾಮಿಡಿ ಕಥಾಹಂದರ ಒಳಗೊಂಡ ಈ ಚಿತ್ರದ ಟೀಸರ್ ಹಾಗೂ ಬಾಯ್ಸ್ ಆಂಥೆಮ್ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ವಿಶೇಷವಾಗಿ ಈ ಚಿತ್ರದಲ್ಲಿ ಸಾಮ್ರಾಟ್, ನಕ್ಷತ್ರ, ಸುಪ್ರಿತ್ ....
ಅಭಿನಯ ಸರಸ್ವತಿ ಶೃತಿ ಅವರ 175ನೇ ಸಿನಿಮಾ ಮುಹೂರ್ತ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ’ಮದರ್’ ಅಭಿನಯ ಸರಸ್ವತಿ ಶೃತಿ ಅವರ 175ನೇ ಸಿನಿಮಾಗೆ ಇಂದು ಮುಹೂರ್ತ ನೆರವೇರಿದೆ. ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ಮದರ್ ನೆರವೇರಿದೆ. ವಿನೋದ್ ಪ್ರಭಾಕರ್ ಅವರು ಮುಹೂರ್ತಕ್ಕೆ ಬಂದು ಶುಭ ಹಾರೈಸಿದ್ದಾರೆ. ನಾಗತಿಹಳ್ಳಿ ಚಂದ್ರಶೇಖರ್ ಕ್ಲಾಪ್ ಮಾಡಿ ಹಾರೈಸಿದ್ದಾರೆ. ಇದೇ ವೇಳೆ ನಿರ್ದೇಶಕ ರಾಕೇಶ್ ಮಾತನ್ನಾಡಿ, ಮದರ್ ತುಂಬಾ ಪವರ್ ಫುಲ್ ಕಥೆ. ಮಂಡ್ಯದ ಅನಕ್ಷರಸ್ಥ ಮಹಿಳೆ ಸಂಸಾರ ಕಾಪಾಡುವುದಕ್ಕೆ ಹೋರಾಟ ಮಾಡುವ ಕಥೆಯೇ ಮದರ್. ಶೃತಿ ಅವರು ಅಳಿಸುವುದಿಲ್ಲ. ಇಲ್ಲಿ ಶೃತಿ ಅವರನ್ನು ಬೇರೆಯದ್ದೇ ರೀತಿಯಲ್ಲಿ ಕಾಣಬಹುದು. ರಗಡ್ ಲುಕ್ ನಲ್ಲಿ ಕಾಣಿಸ್ತಾರೆ. 35 ....
"ಊರಬ್ಬ"ದಲ್ಲಿ ಜಾತ್ರೆಯ ನೈಜದೃಶ್ಯ ಶಾಸಕ ರಂಗನಾಥ್ ರಿಂದ ಟ್ರೈಲರ್ ಬಿಡುಗಡೆ ಮಾಗಡಿ ತಾಲ್ಲೂಕಿನ ಸುಪ್ರಸಿದ್ದ ಉಜ್ಜಿನಿ ಚೌಡೇಶ್ವರಿ ಜಾತ್ರೆ, ಅದರ ಹಿನ್ನೆಲೆಯಲ್ಲಿ ನಡೆಯುವ ಕಥೆ ಇಟ್ಟುಕೊಂಡು ನಿರ್ದೇಶಕ ಲಕ್ಕಿ ಶಂಕರ್ "ಊರಬ್ಬ" ಎಂಬ ಚಿತ್ರವನ್ನು ಕಟ್ಟಿಕೊಟ್ಟಿದ್ದಾರೆ. ಒನ್ಸ್ ಮೋರ್ ಕೌರವ ಖ್ಯಾತಿಯ ನರೇಶ್ ಗೌಡ, ತನಿಷಾ ಕುಪ್ಪಂಡ, ಪಾಯಲ್ ಚಂಗಪ್ಪ, ಸಿದ್ದು ಮೂಲಿಮನಿ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭ ಇತ್ತೀಚೆಗೆ ನಡೆಯಿತು. ಕುಣಿಗಲ್ ಶಾಸಕ ರಂಗನಾಥ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಟ್ರೈಲರ್ ಲಾಚ್ ಮಾಡಿ ಶುಭ ಹಾರೈಸಿದರು. ಜಾತ್ರೆಯ ನೈಜ ದೃಶ್ಯಗಳನ್ನು ಎಂ.ಡಿ.ಶ್ರೀಧರ್, ಹೆಚ್.ವಾಸು, ....
ಬಲರಾಮನ ದಿನಗಳು "ಕ್ವಾಟರ್ರು" ಹಾಡಿಗೆ ತಾರಾ ಅನುರಾಧಾ ಚಾಲನೆ ಕೆಎಂ ಚೈತನ್ಯ ಅವರ ನಿರ್ದೇಶನದ, ಬಲರಾಮನ ದಿನಗಳು ಚಿತ್ರದ ರೇಟ್ರೋ ಶೈಲಿಯ ಕ್ವಾಟರ್ರು ಹಾಡನ್ನು ಹಿರಿಯನಟಿ ತಾರಾ ಅನುರಾಧಾ ಅವರು ಬಿಡುಗಡೆ ಮಾಡಿದರು. ಸಂತೋಷ್ ನಾರಾಯಣನ್ ಅವರ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದಿರೋ ಈ ಹಾಡಿಗೆ ನಟಿ ವಂದಿತಾಗೌಡ ಹೆಜ್ಜೆ ಹಾಕಿದ್ದಾರೆ, ವಿನೋದ್ ಪ್ರಭಾಕರ್, ಪ್ರಿಯಾ ಆನಂದ್ ಅಭಿನಯದ ಈ ಚಿತ್ರವನ್ನು ಪದ್ಮಾವತಿ ಜಯರಾಮ್ ಹಾಗೂ ಶ್ರೇಯಸ್ ಅವರು ನಿರ್ಮಿಸಿದ್ದಾರೆ, ಈ ವೇಳೆ ನಟಿ ತಾರಾ ಮಾತನಾಡುತ್ತ ಈ ಪೆಪ್ಪಿ ಸಾಂಗ್ ತುಂಬಾ ಚನ್ನಾಗಿದೆ, ಶ್ರೇಯಸ್ ತುಂಬಾ ಪ್ಯಾಷನ್ ಇರೋ ನಿರ್ಮಾಪಕ. ಆತನಿಗೆ ವಿನೋದ್ ಕಂಡರೆ ತುಂಬಾ ಪ್ರೀತಿ, ಅಲ್ಲದೆ ಪದ್ಮಮ್ಮ ಕೂಡ ಒಳ್ಳೇ ....
*"ನಮ್ಮ ರೇಂಜ್ ರೋವರ್" ನಲ್ಲಿ ಸುಮಧುರ ಹಾಡುಗಳು* . ಸಿ.ಎಮ್.ಎಮ್ ಹಿಂದೂಸ್ತಾನ್ ಫಿಲಂಸ್ ಲಾಂಛನದಲ್ಲಿ ಡಾ||ಮೌಲಾ ಶರೀಫ್ ಸಿ.ಕೆ ನಿರ್ಮಿಸಿರುವ ಹಾಗೂ ಓ.ಎಸ್.ಆರ್ ಕುಮಾರ್ ನಿರ್ದೇಶಿಸಿರುವ "ನಮ್ಮ ರೇಂಜ್ ರೋವರ್" ಚಿತ್ರದ ಹಾಡುಗಳು ಹಾಗೂ ಟೀಸರ್ ಬಿಡುಗಡೆ ಸಮಾರಂಭ ಇತ್ತೀಚೆಗೆ ಅದ್ದೂರಿಯಾಗಿ ನೆರವೇರಿತು. ಕೂಡಲಸಂಗಮದ ಪೂಜ್ಯ ಶ್ರೀಸಂಗಮಾನಂದ ಸ್ವಾಮಿಗಳು, ಮಾಜಿ ಶಾಸಕರಾದ ರಾಜಣ್ಣ, ಉದ್ಯಮಿ ವೀರಭದ್ರಾಚಾರಿ, ನಟ ಸಂಪೂರ್ಣೇಶ್ ಬಾಬು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಉಪಾಧ್ಯಕ್ಷರಾದ ಕಿಶೋರ್ ಕುಮಾರ್, ನಿರ್ಮಾಪಕರ ಸಂಘದ ಕಾರ್ಯದರ್ಶಿ ರಮೇಶ್ ಯಾದವ್, ವಿತರಕರಾದ ರಮೇಶ್ ಬಾಬು ಹಾಗೂ ನಿರ್ಮಾಪಕರ ಸಂಘದ ಮಾಜಿ ....
*ಇವರೇ ನಮ್ಮ ಮಹಾನ್ ಕಿಲಾಡಿಗಳು* ಟ್ಯಾಲೆಂಟ್ ಎನ್ನುವುದು ಯಾರೊಬ್ಬರ ಸ್ವತ್ತು ಅಲ್ಲ. ಈ ಹಿಂದೆ ’ಕಾಮಿಡಿ ಕಿಲಾಡಿಗಳು’ ರಿಯಾಲಿಟಿ ಷೋ ಮೂಲಕ ಹಲವು ಪ್ರತಿಭೆಗಳು ಬೆಳಕಿಗೆ ಬಂದರು. ಆ ಸಾಲಿನಲ್ಲಿ ಮಿಂಚು, ಪ್ರವೀಣ್ ಗಸ್ತಿ ಗೋಕಾಕ್ ಮತ್ತು ಚಿದಂಬರ ಪೂಜಾರಿ ಕಣ್ಣ ಮುಂದೆ ಕಾಣುತ್ತಾರೆ. ಇವರುಗಳ ಬತ್ತಳಿಕೆಯಿಂದ *’ಮಹಾನ್ ಕಿಲಾಡಿ’* ಎಂಬ ರಿಯಾಲಿಟಿ ಷೋ ಶುರುವಾಗಿದೆ. ’ಟ್ಯಾಲೆಂಟ್ ನಿಮ್ಮದು ವೇದಿಕೆ ನಮ್ಮದು’ ಎಂಬ ಅಡಿಬರಹ ಇರಲಿದೆ. ಪ್ರಚಾರದ ಮೊದಲ ಹಂತವಾಗಿ ಪೋಸ್ಟರ್, ಟೈಟಲ್ ಸಾಂಗ್ ಮತ್ತು ಟ್ರೇಲರ್ ಬಿಡುಗಡೆ ಸಮಾರಂಭವು ಶ್ರೀ ರೇಣುಕಾಂಬ ಸ್ಟುಡಿಯೋದಲ್ಲಿ ಅದ್ದೂರಿಯಾಗಿ ನಡೆಯಿತು. ವಿಧಾನ ಪರಿಷತ್ ಸದಸ್ಯರಾದ ಟಿ.ಶರವಣ, ....
*ಉತ್ತರ ಮತ್ತು ಅಭ್ಯಂಜನ ಟ್ರೇಲರ್ ಬಿಡುಗಡೆ* ಚಂದನವನದಲ್ಲಿ ಅಪರೂಪದಲ್ಲಿ ಅಪರೂಪ ಎನ್ನುವಂತೆ *’ಉತ್ತರ’* ಮತ್ತು *’ಅಭ್ಯಂಜನ’* ಚಿತ್ರಗಳ ಟ್ರೇಲರ್ ಲೋಕಾರ್ಪಣೆ ಸಮಾರಂಭವು ಶ್ರೀ ರೇಣುಕಾಂಬ ಸ್ಟುಡಿಯೋದಲ್ಲಿ ನಡೆಯಿತು. ಹಿರಿಯ ನಟ ಸುಂದರರಾಜ್ ಮತ್ತು ಡಾ.ರಾಜ್ ಕುಟುಂಬದ ಗೋವಿಂದರಾಜ್ ದಂಪತಿಗಳು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು. ಇದರಲ್ಲಿ ಹಾಡುಗಳು ರಹಿತ ಹಲವು ವಿಶೇಷತೆಗಳು ಇರುವುದು ಕಾಕತಾಳೀಯವಾಗಿದೆ. *ಎರಡು ಸಿನಿಮಾಗಳ ನಿರ್ಮಾಪಕರು, ನಿರ್ದೇಶಕರು, ನಾಯಕ, ಸಿರಿ ಮ್ಯೂಸಿಕ್ ಟ್ರೇಲರ್ ಹಕ್ಕುಗಳನ್ನು ಖರೀದಿಸಿರುವುದು, ಪುರೋಹಿತ ಫಿಲಂಸ್ರವರು ಒಂದೇ ದಿನ ಬಿಡುಗಡೆ ಮಾಡುತ್ತಿರುವುದು, ಭಾರತೀಯ ....
*ಹೊಸಬರ ‘ಕ್ಷೇತ್ರಪಾಲ’ ಚಿತ್ರದ ಶೀರ್ಷಿಕೆ ಅನಾವರಣ* *ತೆರೆಗೆ ಬರಲು ತಯಾರಾಗುತ್ತಿದ್ದಾನೆ ‘ಕ್ಷೇತ್ರಪಾಲ’* *ಹೊರಬಂತು ‘ಕ್ಷೇತ್ರಪಾಲ’ ಚಿತ್ರದ ಟೈಟಲ್ ಮತ್ತು ಮೋಶನ್ ಪೋಸ್ಟರ್* *ನ್ಯಾಯ, ಧರ್ಮದ ರಕ್ಷಣೆ ‘ಕ್ಷೇತ್ರಪಾಲ’ನ ಹೊಣೆ!* *ಹೊಸ ಪ್ರತಿಭೆಗಳ ಪ್ರಯತ್ನದಲ್ಲಿ ‘ಕ್ಷೇತ್ರಪಾಲ’ ತೆರೆಗೆ* ಕರ್ನಾಟಕದ ಕರಾವಳಿಯ ಸೊಗಡು, ಅಲ್ಲಿನ ವಿಚಾರ-ಆಚಾರ, ಆಚರಣೆಗಳ ಸುತ್ತ ಈಗಾಗಲೇ ಹಲವು ಸಿನಿಮಾಗಳು ತೆರೆಗೆ ಬಂದು ಯಶಸ್ವಿಯಾಗಿವೆ. ಈಗ ಕರಾವಳಿ ಸೊಗಡಿನ ಅಂಥದ್ದೇ ಮತ್ತೊಂದು ಚಿತ್ರ ತೆರೆಗೆ ಬರಲು ತಯಾರಾಗುತ್ತಿದೆ. ಅಂದಹಾಗೆ, ಆ ಚಿತ್ರದ ಹೆಸರು ‘ಕ್ಷೇತ್ರಪಾಲ’. ಕರಾವಳಿಯ ಪ್ರತೀತಿಯಂತೆ, ಪ್ರತಿ ....
ನಿರ್ಮಾಪಕರ ಹುಟ್ಟುಹಬ್ಬದಲ್ಲಿ 'ಕಾಮನ್ ಮ್ಯಾನ್’ ಮೋಷನ್ ಫೋಸ್ಟರ್ ಒಬ್ಬ ಸಾಮಾನ್ಯ ಲಾಯರ್ ರಾಜ್ಯದ ಮುಖ್ಯಮಂತ್ರಿ ಹೇಗಾಗ್ತಾನೆ ಎಂದು ಹೇಳುವ ಚಿತ್ರ ಕಾಮನ್ ಮ್ಯಾನ್. ಸಮಾಜ ಸೇವಕ ಎನ್. ನರಸಿಂಹಮೂರ್ತಿ ಅವರು ಕಥೆ ಬರೆದು ಸುರಭಿ ಫಿಲಂಸ್ ಅಡಿ ನಿರ್ಮಾಣ ಮಾಡಿರುವ ಈ ಚಿತ್ರಕ್ಕೆ ಹಿರಿಯ ನಿರ್ದೇಶಕ ಓಂ ಸಾಯಿಪ್ರಕಾಶ್ ಅವರು ಚಿತ್ರಕಥೆ ಬರೆದು ಆ್ಯಕ್ಷನ್ ಕಟ್ ಹೇಳಿದ್ದಾರೆ. ನಿರ್ಮಾಪಕರ ಹುಟ್ಟುಹಬ್ಬದ ಸಂದರ್ಭದಲ್ಲಿ ಈ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆ ಸಮಾರಂಭ ಆಯೋಜಿಸಲಾಗಿತ್ತು. ಕೆರೆಬೇಟೆ ಖ್ಯಾತಿಯ ಗೌರೀಶಂಕರ್ ಚಿತ್ರದ ನಾಯಕನಾಗಿ ನಟಿಸಿದ್ದಾರೆ. ವಿನಯ ಚಂದ್ರ ಅವರ ಸಂಗೀತ, ಜೆ.ಜಿ.ಕೃಷ್ಣ, ದೀಪಕ್ ಕುಮಾರ್ ಅವರ ಛಾಯಾಗ್ರಹಣ, ....
'ಡೆಡ್ಲಿ ಕಿಲ್ಲರ್’ ಟ್ರೈಲರ್ ಗೆ ರಾಗಿಣಿ ದ್ವಿವೇದಿ ಚಾಲನೆ ಪೊಲೀಸ್ ಸ್ಟೋರಿ ನಂತರ ಸುಮಾರು 15 ವರ್ಷಗಳಾದ ಮೇಲೆ ಸಾಹಸ ನಿರ್ದೇಶಕ ಥ್ರಿಲ್ಲರ್ ಮಂಜು ಮತ್ತೊಮ್ಮೆ ಆ್ಯಕ್ಷನ್ ಕಟ್ ಹೇಳಿರುವ ಚಿತ್ರ ಡೆಡ್ಲಿ ಕಿಲ್ಲರ್. ಕೀರ್ತಿ ಸಿಲ್ವರ್ ಸ್ಕ್ರೀನ್ ಹಾಗೂ ವೇದಿಕ್ ಕಾಸ್ಮಾಸ್ ಬ್ಯಾನರ್ ಅಡಿ ಪ್ರಶಾಂತ್ ಟಿ.ತಂಬ್ರಳ್ಳಿಮಠ ಅವರು ನಿರ್ಮಿಸಿರುವ ಈ ಚಿತ್ರದಲ್ಲಿ ಸಂಭ್ರಮ ಖ್ಯಾತಿಯ ನಟ ಅಭಯ್ವೀರ್ ಹಾಗೂ ನಿವೀಕ್ಷಾ ನಾಯಕ, ನಾಯಕಿಯಾಗಿ ನಟಿಸಿದ್ದಾರೆ. ಆಕ್ಚನ್, ಸಸ್ಪೆನ್ಸ್, ಥ್ರಿಲ್ಲರ್ ಜತೆ ಹಾರರ್ ಹಿನ್ನೆಲೆಯನ್ನು ಹೊಂದಿರುವ ಈ ಚಿತ್ರ ಬಿಡುಗಡೆಗೆ ಸಿದ್ದವಾಗಿದೆ. ಇತ್ತೀಚೆಗೆ ಈ ಚಿತ್ರದ ಟ್ರೈಲರನ್ನು ನಟಿ ರಾಗಿಣಿ ದ್ವಿವೇದಿ ಅವರು ....
*ಟೀಸರ್ ನಲ್ಲೇ ಮೋಡಿಮಾಡಿದೆ "ನೀ ನಂಗೆ ಅಲ್ಲವಾ"* . ಸುರಮ್ ಮೂವೀಸ್ ಲಾಂಛನದಲ್ಲಿ ಜಯರಾಮ ದೇವಸಮುದ್ರ ನಿರ್ಮಿಸಿರುವ, ಮನೋಜ್ ಪಿ ನಡಲುಮನೆ ನಿರ್ದೇಶನದ ಹಾಗೂ ರಾಹುಲ್ ಆರ್ಕಟ್, ಕಾಶಿ ಮಾ ನಾಯಕ - ನಾಯಕಿಯಾಗಿ ನಟಿಸಿರುವ "ನೀ ನಂಗೆ ಅಲ್ಲವಾ" ಚಿತ್ರದ ಟೀಸರ್ ಬಿಡುಗಡೆ ಸಮಾರಂಭ ಇತ್ತೀಚಿಗೆ ಅದ್ದೂರಿಯಾಗಿ ನೆರವೇರಿತು. ಕ.ರಾ.ವೇ ಅಧ್ಯಕ್ಷರಾದ ಪ್ರವೀಣ್ ಶೆಟ್ಟಿ ಹಾಗೂ ಹೆಸರಾಂತ ನಿರ್ದೇಶಕ ಪವನ್ ಒಡೆಯರ್ ಟೀಸರ್ ಬಿಡುಗಡೆ ಮಾಡಿ ಚಿತ್ರಕ್ಕೆ ಶುಭ ಕೋರಿದರು. "ಸರಿಗಮಪ" ಯೂಟ್ಯೂಬ್ ಚಾನಲ್ ನಲ್ಲಿ ಈ ಟೀಸರ್ ಬಿಡುಗಡೆಯಾಗಿದ್ದು, ಮೆಚ್ಚುಗೆಯ ಜೊತೆಗೆ ಅಧಿಕ ಸಂಖ್ಯೆಯಲ್ಲಿ ....
*"ಬಾಸ್" ಚಿತ್ರಕ್ಕೆ ಸಿವಿಲ್ ನ್ಯಾಯಾಲಯ ನೀಡಿದ್ದ ತಡೆಯಾಜ್ಞೆ ತೆರವು* ....
*ಟ್ರೈಲರ್ ಹಾಗೂ ವಿಡಿಯೋ ಹಾಡುಗಳ ಮೂಲಕ ಎಲ್ಲರ ಗಮನ ಸೆಳೆದಿರುವ "ಪಂಚಮುಖಿ" ಜೂನ್ 26 ರಂದು ಬಿಡುಗಡೆ* .
ಎಸ್ ಪಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಾಣವಾಗಿರುವ, ಚಂದ್ರು ಆಚಾರ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನದ ಜೊತೆಗೆ ನಾಯಕನಾಗಿಯೂ ನಟಿಸಿರುವ "ಪಂಚಮುಖಿ" ಚಿತ್ರದ ಟ್ರೈಲರ್ ಹಾಗೂ ವಿಡಿಯೋ ಹಾಡುಗಳು ಸಿರಿ ಮ್ಯೂಸಿಕ್ ಮೂಲಕ ಬಿಡುಗಡೆಯಾಗಿದೆ. ಚಿತ್ರ ಜೂನ್ 26 ರಂದು ತೆರೆಗೆ ಬರುತ್ತಿದೆ. ಚಿತ್ರದ ಕುರಿತು ಹೆಚ್ಚಿನ ಮಾಹಿತಿ ನೀಡಲು ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡದ ಸದಸ್ಯರು ಮಾತನಾಡಿದರು
*ರೈತರ ಮಕ್ಕಳಿಗೆ ಹೆಣ್ಣು ಕೊಡಿ ಟ್ರೇಲರ್ ಮತ್ತು ಹಾಡುಗಳು ಬಿಡುಗಡೆ* *’ರೈತರ ಮಕ್ಕಳಿಗೆ ಹೆಣ್ಣು ಕೊಡಿ’* ಚಿತ್ರದ ಟ್ರೇಲರ್ ಮತ್ತು ನಾಲ್ಕು ಹಾಡುಗಳ ಬಿಡುಗಡೆ ಕಾರ್ಯಕ್ರಮ ಶ್ರೀ ರೇಣುಕಾಂಬ ಸ್ಟುಡಿಯೋದಲ್ಲಿ ಅದ್ದೂರಿಯಾಗಿ ನಡೆಯಿತು. *ಕೆಂಪರಾಮ್ ಹೆಡಿಯಾಲ ಚಿತ್ರಕ್ಕೆ ಕಥೆ,ಚಿತ್ರಕಥೆ, ಸಂಭಾಷಣೆ, ಸಾಹಿತ್ಯ, ನಿರ್ದೇಶನ ಮಾಡುವ ಜತೆಗೆ ಮೆಲ್ಲುಲಿಗಾನ ಪ್ರೊಡಕ್ಷನ್ಸ್ ಅಡಿಯಲ್ಲಿ ನಿರ್ಮಾಣ* ಮಾಡಿರುವುದು ಹೊಸ ಅನುಭವ. ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕರು, ನಾನು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಇಲಾಖೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿರುತ್ತೇನೆ. ಮುಂದೆ ಸಿನಿಮಾ ಮಾಡಬೇಕೆಂದು ನಿರ್ಧರಿಸಿದಾಗ ....
*ಟೀಸರ್ ಹಾಗೂ ಹಾಡುಗಳಲ್ಲಿ "ನನ್ನ ಮಗಳೇ ಸೂಪರ್ ಸ್ಟಾರ್"* ಹನಿ ಫಿಲಂಸ್ ಲಾಂಛನದಲ್ಲಿ ಎನ್ ಎ ಶಿವಕುಮಾರ್(ಕುಮಾರ್ ನೊಣವಿನಕೆರೆ) ನಿರ್ಮಿಸಿರುವ, ಆಯುರ್ ನಿರ್ದೇಶಿಸಿರುವ ಹಾಗೂ ಖಾಸಗಿ ವಾಹಿನಿಯೊಂದರಲ್ಲಿ ಪ್ರಸಾರವಾಗಿದ್ದ ಜನಪ್ರಿಯ ಧಾರಾವಾಹಿ "ಸೀತಾರಾಮ" ಸೀರಿಯಲ್ ನ ಮೂಲಕ ನೋಡುಗರ ಮನ ಗೆದ್ದಿದ್ದ ಬೇಬಿ ರೀತು ಸಿಂಗ್ ಪ್ರಮುಖಪಾತ್ರದಲ್ಲಿ ನಟಿಸಿರುವ ಮತ್ತು "ಭಜರಂಗಿ ೨" ಚಿತ್ರದ ಖ್ಯಾತಿಯ ಚೆಲುವರಾಜ್ ಹಾಗು ಸಂಭ್ರಮಶ್ರೀ ನಾಯಕ - ನಾಯಕಿಯಾಗಿ ಅಭಿನಯಿಸಿರುವ "ನನ್ನ ಮಗಳೇ ಸೂಪರ್ ಸ್ಟಾರ್" ಚಿತ್ರದ ಟೀಸರ್ ಹಾಗೂ ಹಾಡುಗಳ ಅನಾವರಣ ಸಮಾರಂಭ ಇತ್ತೀಚೆಗೆ ನೆರವೇರಿತು. ಕರ್ನಾಟಕ ....
*ಶೀರ್ಷಿಕೆ ಅನಾವರಣ ಮಾಡಿ "ಕಿರುನಗೆ" ಬೀರಿದ ಚಿತ್ರತಂಡ** . ಹರ್ಷಿಣಿ ಸಿನಿಮಾಸ್ ಲಾಂಛನದಲ್ಲಿ ಲತಾಶ್ರೀ ಡಿ.ಸಿ ಅವರು ನಿರ್ಮಿಸಿರುವ ಹಾಗೂ ಅಶೋಕ್ ಕಡಬ ನಿರ್ದೇಶನದ ನೂತನ ಚಿತ್ರದ ಶೀರ್ಷಿಕೆ ಅನಾವರಣ ಸಮಾರಂಭ ಇತ್ತೀಚೆಗೆ ಅದ್ದೂರಿಯಾಗಿ ನೆರವೇರಿತು. ಚಿತ್ರಕ್ಕೆ "ಕಿರುನಗೆ" ಎಂದು ಹೆಸರಿಡಲಾಗಿದೆ. ಡಾ||ರಾಜಕುಮಾರ್ ಪುತ್ರಿ ಲಕ್ಷ್ಮಿ ಗೋವಿಂದರಾಜು ಹಾಗೂ ಅಳಿಯ ಎಸ್ ಎ ಗೋವಿಂದರಾಜು ಅವರು ಶೀರ್ಷಿಕೆ ಅನಾವರಣ ಮಾಡಿ, ಚಿತ್ರತಂಡಕ್ಕೆ ಶುಭ ಕೋರಿದರು. ನಿರ್ದೇಶಕರ ಸಂಘದ ಅಧ್ಯಕ್ಷರಾದ ಎನ್ನಾರ್.ಕೆ ವಿಶ್ವನಾಥ್, ನಟ ಷಣ್ಮುಖ ಹಾಗೂ ಯುವ ಕಾಂಗ್ರೆಸ್ ಮುಖಂಡ ಅಶೋಕ್ ಭೀಮಾನಾಯಕ್ ಅವರು ಸಹ ಸಮಾರಂಭಕ್ಕೆ ಅತಿಥಿಗಳಾಗಿ ಆಗಮಿಸಿ ಚಿತ್ರ ....
"*ಕೊರಗಜ್ಜ*"ಚಿತ್ರ: *ನಿರ್ದೇಶಕ ಸುಧೀರ್ ಅತ್ತಾವರ್ ಗೆ ಐಶಾರಾಮಿ ಫ್ಲಾಟ್ ಗಿಫ್ಟ್ ನೀಡಿದ ನಿರ್ಮಾಪಕ*! ಕಳೆದ ಜನವರಿ ತಿಂಗಳಲ್ಲಿ ಬಿಡುಗಡೆಗೆ ಸರ್ವ ಸನ್ನದ್ದವಾಗಿ, ಝೀ ಮ್ಯೂಸಿಕ್ ಬ್ಯಾನರ್ ಅಡಿ ಭರ್ಜರಿ ಆಡಿಯೋ ಲಾಂಚ್ ಕೂಡಾ ಮಾಡಿದ್ದ, ಸುಧೀರ್ ಅತ್ತಾವರ್ ನಿರ್ದೇಶನದ *ಕೊರಗಜ್ಜ* ಚಿತ್ರವನ್ನು ,ಕೊನೇ ಗಳಿಗೆಯಲ್ಲಿ ಧಿಡೀರ್ ಎಂದು ಚಿತ್ರವು 3D ಯಾಗಿ ಮಾರ್ಪಡಿಸುವ ದೊಡ್ಡ ಸುದ್ದಿ ಕೊಟ್ಟು ಬಿಡುಗಡೆಯನ್ನು ಮುಂದೂಡಿತು. ಈಗ ಕೊಚ್ಚಿ ಮತ್ತು ಚೆನ್ನೈ ನಲ್ಲಿ ಚಿತ್ರದ 3ಡಿ ಕೆಲಸ ಭರದಿಂದ ಸಾಗುತ್ತಿದೆ. ಚಿತ್ರವು ತಾಂತ್ರಿಕವಾಗಿ ಯಾವುದೇ ಅಂತರಾಷ್ಟ್ರೀಯ ಮಟ್ಟದ ಸಿನಿಮಾಗೂ ಕಡಿಮೆ ಇಲ್ಲ ಎನ್ನುವ ಹಾಗೆ ಚಿತ್ರ ಮೂಡಿ ಬರುತ್ತಿದೆ ಎನ್ನುವ ವಿಷಯವನ್ನು ....
ಲೈಫ್ ಟುಡೆ ಚಿತ್ರದ ನೀನೊಬ್ಬಳೆ ಹಾಡು ಬಿಡುಗಡೆ ಮಾಡಿದ ಡಾ ನಾಗೇಂದ್ರ ಪ್ರಸಾದ್ " ಲೈಫ್ ಟುಡೆ" ಚಿತ್ರದ " ನೀನೊಬ್ಬಳೆ..." ಹಾಡು ಬಿಡುಗಡೆಯಾಗಿದೆ. ನಾಯಕ ಕಿರಣ್ ಆದಿತ್ಯ ಮತ್ತು ನಟಿ ಲೇಖಾ ಚಂದ್ರ ಕಾಣಿಸಿಕೊಂಡಿರುವ ಹಾಡು ಗಮನ ಸೆಳೆದಿದ್ದು ಚಿತ್ರ ಶೀಘ್ರದಲ್ಲಿ ಬಿಡುಗಡೆಗೆ ಸಜ್ಜಾಗಿದೆ ಹಿರಿಯ ಗೀತರಚನೆಕಾರ ಹಾಗು ನಿರ್ದೇಶಕ ಡಾ. ನಾಗೇಂದ್ರ ಪ್ರಸಾದ್ ಅವರೇ ಬರೆದಿರುವ ಹಾಡನ್ನು ಬಿಡುಗಡೆ ಮಾಡಿ ಶುಭ ಹಾರೈಸಿದರು. ಕಾಂತ ಕನ್ನಲ್ಲಿ ನಿರ್ದೇಶನವಿರುವ ಚಿತ್ರಕ್ಕೆ ಮೇಘನಾ ಪ್ರದೀಪ್ ಬಂಡವಾಳ ಹಾಕಿದ್ದಾರೆ. ಶ್ರೀಧರ್ ಸಂಭ್ರಮ್ ಸಂಗೀತ ಚಿತ್ರಕ್ಕಿದೆ ಡಾ.ನಾಗೇಂದ್ರ ಪ್ರಸಾದ್ ಮಾತನಾಡಿ ,ಇಡೀ ಸಿನಿಮಾ ಪ್ರೀತಿಯ ಸುತ್ತ ಕಥೆ ಸಾಗಲಿದೆ. ....