Kalagangothri Samsthe.Press Meet.

Tuesday, December 24, 2019

ಗಿನ್ನಿಸ್  ದಾಖಲೆಗೆ  ಮುಖ್ಯ ಮಂತ್ರಿ  ನಾಟಕ         ಸತತ ನಲವತ್ತು ವರ್ಷಗಳ ಕಾಲ ‘ಮುಖ್ಯ ಮಂತ್ರಿ’ ನಾಟಕಕ್ಕೆ ನಿರ್ದೇಶನ ಮಾಡಿರುವ ಡಾ.ಬಿ.ವಿ.ರಾಜರಾಂ ಮತ್ತು  ಅದೇ ಪದವಿಯಲ್ಲಿ ನಟಿಸಿರುವ ಮುಖ್ಯಮಂತ್ರಿ ಚಂದ್ರು  ಇಬ್ಬರ ಸಾರಥ್ಯದಲ್ಲಿ ೭೦೦ನೇ ಯಶಸ್ವಿ  ಪ್ರದರ್ಶನ ಜನವರಿ ನಾಲ್ಕರಂದು ನಡೆಯಲಿದೆ. ಇದಕ್ಕಿಂತ ಹೆಚ್ಚಾಗಿ ವಿಶ್ವದಲ್ಲೇ ನಾಲ್ಕು ದಶಕಗಳ ಅವಧಿಗೆ ಒಂದೇ ನಾಟಕದಲ್ಲಿ ಇವರಿಬ್ಬರೇ ಗುರುತಿಸಿಕೊಂಡಿದ್ದರಿಂದ ಗಿನ್ನಿಸ್ ದಾಖಲೆಗೆ ಅರ್ಹವಾಗುವ ಲಕ್ಷಣಗಳು ಕಂಡುಬಂದಿದೆ.  ೧೯೭೧ರಲ್ಲಿ ಕಲಾಗಂಗೋತ್ರಿ  ರಂಗ ತಂಡವು ಪ್ರಾರಂಭಗೊಂಡು ಇದರ ಮೂಲಕ ಸದರಿ ನಾಟಕವು ಶುರುವಾಗಿತ್ತು. ಅಲ್ಲದೆ ಹಲವಾರು ಪ್ರತಿಭೆಗಳು ಇಲ್ಲಿಂದ ತರಭೇತಿ ಪಡೆದು ....

913

Read More...

Jillka.Film Press Meet.

Tuesday, December 24, 2019

ಎರಡು ಪೀಳಿಕೆಯ ನಡುವಿನ ಅಂತರದ ಜಿಲ್ಕ         ದಕ್ಷಿಣ ಕನ್ನಡ ಜಿಲ್ಲೆಯಿಂದ ಸಾಕಷ್ಟು ಪ್ರತಿಭೆಗಳು ಸ್ಯಾಂಡಲ್‌ವುಡ್‌ದಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. ಅದೇ ಹಾದಿಯಲ್ಲಿ  ಮಂಗಳೂರು ಭಾಗದವರು  ಸತತ ಎರಡು ವರ್ಷ ಶ್ರಮವಹಿಸಿ ‘ಜಿಲ್ಕ’ ಚಿತ್ರವನ್ನು ಮುಗಿಸಿದ್ದಾರೆ. ಶೀರ್ಷಿಕೆ ಪೀಳಿಗೆ ಎನ್ನುವ ಅರ್ಥ ಕೊಡುತ್ತದೆ.  ಆಫ್ರಿಕನ್ ದೇಶದ ಸೋಮಾಲಿ ಭಾಷೆಯಾಗಿದ್ದು,  ಕ್ಯಾಚಿ ಇರಲೆಂದು ಇದೇ ಹೆಸರಿಗೆ ಮಾರುಹೋಗಿದ್ದಾರೆ. ಪಯಣದ ತಲೆಮಾರುಗಳು ಎಂದು ಇಂಗ್ಲೀಷ್ ಅಡಿಬರಹವಿದೆ.  ಪ್ರಸಕ್ತ ಯುವ ಪೀಳಿಗೆಗಳ ಮನಸ್ಸಿನ ಒಳ ಹೊರ ನೋಟದ ಪ್ರೇಮ ಕತೆ ಮತ್ತು ಎರಡು ಕಾಲಘಟ್ಟದ ನಡುವಿನ ಅಂತರದಲ್ಲಿ ಹುಟ್ಟುವ ವಿನೂತನ ತಿರುವುಗಳ ವ್ಯತ್ಯಾಸಗಳು ಬರುತ್ತದೆ.  ....

660

Read More...

Mounam.Film Press Meet.

Tuesday, December 24, 2019

ಮೌನಂ  ಸಮ್ಮತಿ  ಲಕ್ಷಣಂ        ಸಂಸ್ಕ್ರತ ಪದ ‘ಮೌನಂ’ ಎಲ್ಲ ಭಾಷೆಗಳಿಗೂ  ಹೊಂದಿಕೊಳ್ಳುತ್ತದೆ.  ಅದಕ್ಕಾಗಿ ಚಂದನವನದಲ್ಲಿ ಇದೇ ಹೆಸರಿನೊಂದಿಗೆ ಚಿತ್ರವೊಂದು ತೆರೆಗೆ ಬರಲು ಸಜ್ಜಾಗಿದೆ. ನಿಶ್ಯಬ್ದಕ್ಕೂ ಶಬ್ದವಿದೆ ಎಂಬ ಅಡಿಬರಹ ಹಾಗೂ ಭಾರತೀಯ ಚಿತ್ರರಂಗದ ವಿನೂತನ ಸಿನಿಮಾವೆಂದು ಹೇಳಿಕೊಂಡಿದೆ. ಚಿತ್ರದ ಕುರಿತು ಹೇಳುವುದಾದರೆ ನಾವುಗಳು ಬೇರೆಯವರನ್ನು  ಶತ್ರುಗಳು ಅಂತ ನೋಡುತ್ತೇವೆ. ಆದರೆ ನಮ್ಮೊಳಗೆ ಇದರ ಗುಣ ಇರುವುದು ತಿಳಿದಿರುವುದಿಲ್ಲ. ಒಳ್ಳೇದು ಮಾಡಿದರೂ ಕಷ್ಟದಲ್ಲಿ ಸಿಲುಕುತ್ತೇವೆ. ಬುದ್ದಿ, ಜೀವನ ಬೇರೆ ಬೇರೆಯಾಗಿರುತ್ತದೆ. ಅತಿ ಬುದ್ದಿವಂತಿಕೆ ತೋರಿಸಿದರೆ ಏನಾದರೂ ಅವಘಡಗಳು ಸಂಭವಿಸುತ್ತದೆ. ಎಲ್ಲರೂ ತಮ್ಮ ಮಕ್ಕಳು ಒಳ್ಳೆಯ ....

572

Read More...

Blank.Film Teaser Launch.

Monday, December 23, 2019

ಕನಸು ಮತ್ತು ವಾಸ್ತವಗಳ ನಡುವಿನ ಕಥನ         ಕನಕದಾಸರ ‘ನೀ ಮಾಯೆಯೊಳಗೆ’ ಎನ್ನುವ ನುಡಿಯಂತೆ ಹೊಸಬರ ‘ಬ್ಲಾಂಕ್’ ಚಿತ್ರದ ಕತೆಯಾಗಿದೆ. ಮಾದಕ ದ್ರವ್ಯ ವ್ಯಸನಿಗಳು ಇದನ್ನು ತಗೆದುಕೊಂಡಾಗ ಏನಾಗುತ್ತಾರೆ. ಆ ಸಮಯದಲ್ಲಿ ಏನು ಮಾಡುತ್ತಾರೆ? ಅದರ ಪರಿಣಾಮ ಏನಾಗುತ್ತದೆ. ಇದರ ಮೇಲೆ ಕೇಂದ್ರಿಕರಿಸಲಾಗಿದೆ. ಹದಿಮೂರನೆ ಮಹಡಿಯಲ್ಲಿ ನಡೆಯುವಂತ ಕಟ್ಟುಕತೆಯು ಸೈಕಾಲಜಿಕಲ್ ಥ್ರಿಲ್ಲರ್ ಮಾದರಿಯಲ್ಲಿ ಸಾಗುತ್ತದೆ. ಜೊತೆಗೆ ಅರ್ಥಪೂರ್ಣ ಸಂದೇಶ ಹೇಳಲಾಗಿದೆ. ಹಾಗಂತ ಇದರ ಸುತ್ತ ಸಾಗದೆ ಫ್ಯಾಮಿಲಿ ಡ್ರಾಮಾ, ಎಲ್ಲಾ ಜಾನರ್‌ಗಳಿಂದ ತುಂಬಿದ ಚಿತ್ರವಾಗಿದೆ. ಮೈಸೂರಿನ ಎಸ್.ಜಾಯ್ ಇಂಜನಿಯರಿಂಗ್ ಮುಗಿಸಿ  ಬಣ್ಣದ ಮೋಹದಿಂದ ಚಿತ್ರರಂಗದಲ್ಲಿ ಒಂದಷ್ಟು ಅನುಭವಗಳನ್ನು ....

1439

Read More...

Amruthavahini.Film Audio Rel.

Monday, December 23, 2019

ಅಮೃತವಾಹಿನಿಗೆ ಹಿರಿಯ ಕವಿ ನಾಯಕ

       ಹಿರಿಯ ಕವಿ,ಸಾಹಿತಿ ಡಾ.ಹೆಚ್.ಎಸ್.ವೆಂಕಟೇಶಮೂರ್ತಿ ೮೫ನೇ ಕನ್ನಡ ಸಾಹಿತ್ಯ ಪರಿಷತ್‌ಗೆ ಅಧ್ಯಕ್ಷರು  ಮತ್ತು ಫಿಲಿಂ ಫೇರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇದರ ಮಧ್ಯೆ ೭೫ನೇ ವಯಸ್ಸಿನಲ್ಲಿ ‘ಹಸಿರು ರಿಬ್ಬನ್’ಗೆ ಆಕ್ಷನ್ ಹೇಳುವುದರ ಮೂಲಕ ನಿರ್ದೇಶಕರಾಗಿ ಗುರುತಿಸಿಕೊಂಡು, ೭೬ನೇ ವಯಸ್ಸಿಗೆ ‘ಅಮೃತವಾಹಿನಿ’ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಿ ಕಲಾವಿದರಾಗಿದ್ದಾರೆ. ಇದು ಹೃದಯದ ಹಾದಿ ಎಂಬುದರ ಅಡಿಬರಹವಿದೆ. ಸೋಮವಾರ ರೇಣುಕಾಂಬ  ಪ್ರಿವ್ಯೂ ಥಿಯೇಟರ್‌ದಲ್ಲಿ ಹಾಡುಗಳು ಅನಾವರಣಗೊಂಡಿತು. ಈ ಸಂದರ್ಭದಲ್ಲಿ  ಗಣ್ಯರು, ತಂಡವು ಕವಿಗಳ ಗುಣಗಳನ್ನು ತೆರೆದಿಟ್ಟರು.

1239

Read More...

Maduve Oota.Film First Look Launch.

Friday, December 20, 2019

ಭಾರತದ  ಪ್ರಪ್ರಥಮ  ಶೂನ್ಯ  ಬಂಡವಾಳದ  ಚಿತ್ರ       ಇಂದು ಚಂದನವನದಲ್ಲಿ ನಿರ್ಮಾಪಕರು ನಮ್ಮ ಚಿತ್ರಕ್ಕೆ ಲಕ್ಷ, ಕೋಟಿ ಖರ್ಚಾಗಿದೆ ಎಂದು  ಬೊಬ್ಬೆ ಇಡುತ್ತಿದ್ದಾರೆ.  ಪ್ರೀತಿಯೂ ಕಮರ್ಷಿಯಲ್ ಆಗಿರುವ ಕಾಲವಾಗಿದೆ.  ಸೋಜಿಗ ಎನ್ನುವಂತೆ ಯುವ ಸಮಾನ ಮನಸ್ಕರ ಸಿನಿಮಾಮೋಹಿಗಳು ಗಮಕದಿಂದ ಹಣ ಹೂಡದಯೇ ಶ್ರಮದಾನ ಮಾಡುವ  ಮೂಲಕ ‘ಮದುವೆ ಊಟ’ ಚಿತ್ರವನ್ನು  ಸೆನ್ಸಾರ್ ಹಂತಕ್ಕೆ ತಂದು ನಿಲ್ಲಿಸಿದ್ದಾರೆ.  ‘ಉಳ್ಳವರು ಶಿವಾಲಯ ಮಾಡುವರು, ನಾನೇನು ಮಾಡಲಿ ಬಡವನಯ್ಯ’ ಬಸವಣ್ಣನವರ ವಚನ, ಸಿನಿಮಾ ತಯಾರಿಕೆಗೂ ಸಾಮ್ಯತೆ ಇದೆ. ಕಲಾವಿದರು, ಚಿತ್ರೀಕರಣ, ಪೋಸ್ಟ್ ಪ್ರೊಡಕ್ಷನ್ ಇವೆಲ್ಲಾವನ್ನು ಉಚಿತವಾಗಿ ಮಾಡಿರುವುದರ ಬಗ್ಗೆ ಯು ಟ್ಯೂಬ್‌ದಲ್ಲಿ ....

2027

Read More...

Gentleman.Film Press Meet.

Wednesday, December 18, 2019

ಪ್ರತಿಯೊಬ್ಬರಲ್ಲೂ ಜಂಟಲ್‌ಮನ್ ಇರುತ್ತಾರೆ         ಪ್ರಜ್ವಲ್‌ದೇವರಾಜ್ ಅಭಿನಯದ ‘ಜಂಟಲ್‌ಮನ್’ ಚಿತ್ರದ ಟ್ರೈಲರ್ ಬಿಡುಗಡೆಯಾಗಿ ವೈರಲ್ ಆಗಿದೆ.  ಸ್ಲೀಪಿಂಗ್ ಬ್ಯೂಟಿ ಸಿಂಡ್ರೋಮ್ ಎಂಬ ಖಾಯಿಲೆಯನ್ನು ಮೂಲವಾಗಿಟ್ಟುಕೊಂಡ ಕತೆಯಾಗಿದೆ. ಸಾಮಾನ್ಯ ಮನುಷ್ಯನಾದವನು  ದಿನವೊಂದಕ್ಕೆ ಏಳು  ಗಂಟೆ  ನಿದ್ದೆ ಮಾಡುತ್ತಾನೆ. ಈ ಖಾಯಿಲೆಯಿಂದ ಬಳಲುತ್ತಿರುವವರು  ಆರು ಗಂಟೆ ಮಾತ್ರ ಎಚ್ಚರವಿದ್ದು, ಉಳಿದ ಹದಿನೆಂಟು ಘಂಟೆಗಳ ಸಮಯದಲ್ಲಿ ನಿದ್ರೆಗೆ ಜಾರುತ್ತಾರೆ. ಅದಕ್ಕಾಗಿ ಅಡಿಬರಹದಲ್ಲಿ ಕುಂಭಕರ್ಣನೆಂದು ಹೇಳಲಾಗಿದೆ. ಈ ಅವಧಿಯಲ್ಲಿ  ಆಹಾರ ಸೇವನೆ, ಪ್ರೀತಿ, ಹೊಡೆದಾಟ, ಅಳು ಸೇರಿದಂತೆ ಎಲ್ಲವನ್ನು ಮಾಡುವ ಒಂದು ರೀತಿಯ ಅಸಾಮಾನ್ಯ ಮನುಷ್ಯ. ಅವರು ....

1025

Read More...

Dabangg-3.Kannada Film Press Meet.

Tuesday, December 17, 2019

ಟೈಮು  ನಂದು  ಕರ್ನಾಟಕ  ನನ್ನದು  - ಸಲ್ಮಾನ್ ಖಾನ್        ಅದ್ದೂರಿ ಚಿತ್ರ ‘ದಬಾಂಗ್-೩’ ವಿಶ್ವದಾದ್ಯಂತ ಶುಕ್ರವಾರದಂದು ತೆರೆಗೆ ಬರುತ್ತಿರುವುದರಿಂದ ನಾಯಕ ಸಲ್ಮಾನ್‌ಖಾನ್ ಪ್ರಚಾರದ ಕೊನೆ ಹಂತವಾಗಿ ಸಿಲಿಕಾನ್‌ಸಿಟಿಗೆ ಆಗಮಿಸಿದ್ದರು. ಇವರೊಂದಿಗೆ ಸುದೀಪ್, ನಾಯಕಿಯರಾದ ಸೋನಾಕ್ಷಿಸಿನ್ಹಾ, ಸಾಯಿಮಂಜ್ರೆಕರ್, ನಿರ್ದೇಶಕ ಪ್ರಭುದೇವ ಉಪಸ್ತಿತರಿದ್ದು, ಮಾದ್ಯಮದ ಪ್ರಶ್ನೆಗಳಿಗೆ ಉತ್ತರವಾದರು. ಅದರಲ್ಲಿ ಮುಖ್ಯವಾಗಿ ಹೇಳಿದ್ದನ್ನು ಓದುಗರಿಗೆ ಸಾದರಪಡಿಸಲಾಗಿದೆ.         ಸಲ್ಮಾನ್‌ಖಾನ್: ಬೆಂಗಳೂರಿನಲ್ಲಿ ಎಲ್ಲಾ ಭಾಷೆಯ ಚಿತ್ರವನ್ನು ಜನರು ನೋಡುವುದರಿಂದ ಕನ್ನಡದಲ್ಲಿ ಡಬ್ ಮಾಡಲು ಹೇಳಲಾಯಿತು. ಇದು ನನ್ನ ....

995

Read More...

Rakesh.Film Prod and Dir.Press Meet.

Tuesday, December 17, 2019

ನಿರ್ದೇಶಕನಿಗೆ  ನಿರ್ಮಾಪಕನಿಂದ  ತೊಂದರೆಗಳು        ಚಿತ್ರರಂಗದಲ್ಲಿ  ನಿರ್ದೇಶಕ, ನಿರ್ಮಾಪಕ ಸಿನಿಮಾ ಬಿಡುಗಡೆಯಾಗುವರೆಗೂ  ಒಟ್ಟಿಗೆ ಇರುತ್ತಾರೆ. ಅಕಸ್ಮಾತ್ ಫ್ಲಾಪ್  ಕಂಡರೆ ವೈಮನಸ್ಯ,  ದೂರುಗಳು ಬರುವುದಲ್ಲದೆ, ನ್ಯಾಯಲಯದ ಹಂತಕ್ಕೂ ತಲುಪುತ್ತದೆ. ಇಂತಹ ಪ್ರಸಂಗಗಳು ಕೆಲವು ಚಿತ್ರಗಳಿಗೆ ಮಾತ್ರ  ಗತಕಾಲದಿಂದಲೂ ನಡೆದುಕೊಂಡು ಬರುತ್ತಿದೆ. ಅದೇ ರೀತಿ ‘ಪತಿಬೇಕು ಡಾಟ್ ಕಾಮ್’ ಸಿನಿಮಾಕ್ಕೆ ಒದಗಿಬಂದಿದೆ.  ಜೈ ಮಾರುತಿ ಪಿಕ್ಚರ‍್ಸ್ ಮುಖಾಂತರ ಮಂಜುನಾಥ್.ಬಿ, ಶ್ರೀನಿವಾಸ್.ಎಸ್. ಮತ್ತು ನಿರ್ದೇಶಕ ರಾಕೇಶ್ ಮೂವರು ಸೇರಿಕೊಂಡು ಹದಿನೈದು ಲಕ್ಷದಂತೆ ಬಂಡವಾಳ ಹೂಡಿದ್ದಾರೆ. ಒಂದು ವೇಳೆ ಸಿನಿಮಾ ಸೋಲು ಕಂಡರೆ ನಮ್ಮ ಬಂಡವಾಳಕ್ಕೆ ನಾವೇ ....

942

Read More...

Sarvajanikarige Suvarnavakasha.Press Meet.

Monday, December 16, 2019

  ಸುವರ್ಣಾವಕಾಶಕ್ಕೆ ಬಿಡುಗಡೆ ಮಹೂರ್ತ ಫಿಕ್ಸ್         ಸಂಪೂರ್ಣ ಹಾಸ್ಯ ಚಿತ್ರ ‘ಸಾರ್ವಜನಿಕರಿಗೆ ಸುವರ್ಣಾವಕಾಶ’ಕ್ಕೆ ಸೆನ್ಸಾರ್ ಮಂಡಳಿಯು ಪ್ರಶಂಸೆ ವ್ಯಕ್ತಪಡಿಸಿ ಯುಎ ಪ್ರಮಾಣ ಪತ್ರವನ್ನು ದಯಪಾಲಿಸಿದೆ. ಎರಡು ದಿನದಲ್ಲಿ ನಡೆಯುವ ಕಥನವಾಗಿದೆ. ಎಲ್ಲರಿಗೂ ಜೀವನದಲ್ಲಿ ಒಂದು ಅವಕಾಶ ಸಿಗುತ್ತದೆ. ಅದನ್ನು  ಉಪಯೋಗಿಸಿಕೊಂಡು ಯಾವ ರೀತಿ ಬದುಕಿನಲ್ಲಿ ಸುವರ್ಣಾವಕಾಶ ಪಡೆಯುತ್ತಾನೆ. ಕತೆಯಲ್ಲಿ  ನಾಯಕ, ನಾಯಕಿ ಒಂದು ದಿನ ಹೊರಗೆ ಹೋದಾಗ ಕಷ್ಟದಲ್ಲಿ ಸಿಲುಕುತ್ತಾರೆ. ಅದರಿಂದ ಹೊರಬರಲು ಹಣದ ಅವಶ್ಯಕತೆ ಇರುತ್ತದೆ.  ಇದಕ್ಕಾಗಿ ಆತ ಏನು ಉಪಾಯ ಮಾಡುತ್ತಾನೆ? ಮುಂದೆ ಹೇಗೆ ತೊಂದರೆಯಿಂದ ಆಚೆ ಬರುತ್ತಾನೆ ಎಂಬುದು ಸಿನಿಮಾದ ಹೂರಣವಾಗಿದೆ.  ರಿಷಿ ....

987

Read More...

Mukhavaada.Film Press Meet.

Monday, December 16, 2019

ಹೊಸ  ಮುಖವಾಡ         ೮೦ರ ದಶಕದಲ್ಲಿ ರಾಮಕೃಷ್ಣ, ತಾರಾ ಅಭಿನಯದ ‘ಮುಖವಾಡ’ ಸಿನಿಮಾ  ತೆರೆಕಂಡಿತ್ತು. ಈಗ ಅದೇ ಹೆಸರಿನಲ್ಲಿ  ಚಿತ್ರವೊಂದು ಸೆಟ್ಟೇರಿದೆ. ಹಾಗಂತ ಅದಕ್ಕೂ ಇದಕ್ಕೂ ಸಂಬಂದವಿಲ್ಲ. ಸೆಸ್ಪನ್ಸ್, ಥ್ರಿಲ್ಲರ್ ಹಾಗೂ ಕೊಂಚ ಮಟ್ಟಿಗೆ ಹಾರರ್ ಫೀಲ್ ಕೊಡುತ್ತದೆ. ಪ್ರೇಕ್ಷಕ ಕುತೂಹಲ ಅಂದುಕೊಂಡು ಹೋದರೆ, ಅಲ್ಲಿ ಬೇರೆಯದೆ ಅನುಭವ ಆಗುತ್ತಾ ಉದ್ರೇಕಗೊಳಿಸುತ್ತದೆ.  ಒಂದು ರೀತಿಯಲ್ಲಿ ಹುಳ ಬಿಡುತ್ತಾರೆ.  ಯಾರಿಗೆ ಮುಖವಾಡ ಹಾಕಬಹುದು, ಹಾಕಿಸಿಕೊಳ್ಳುವವರು ಯಾರು, ಏನು ಬೇಕಾದರೂ ಮಾಡಬಹುದು. ಇವೆಲ್ಲವು ಸನ್ನಿವೇಶಗಳ ಮೂಲಕ ಸಾಗುತ್ತದೆ.  ಕತೆಗೆ ಪೂರಕವಾಗಿದ್ದರಿಂದ ಇದೇ ಶೀರ್ಷಿಕೆ ಇಡಲಾಗಿದೆ. ಒಟ್ಟಾರೆ ೮-೯ ಪಾತ್ರಗಳು ಇದ್ದರೂ, ....

1103

Read More...

Abhyanjana.Film Show Press Meet.

Monday, December 09, 2019

ನೈಜ ಘಟನೆ ಅಭ್ಯಂಜನ         ವಯಸ್ಸಾದವರು ಖಾಯಿಲೆಗೆ ತುತ್ತಾದಾಗ ನೋಡಿಕೊಳ್ಳುವವರ  ಪರಿಸ್ಥಿತಿ ಅರಿತು, ಅವರ ಮನಸ್ಸು  ನೋಯಿಸದಂತೆ  ಗೌರವದಿಂದ ಪ್ರಾಣ ತೆಗೆಯುವುದನ್ನು ದಯಾಮರಣ ಎನ್ನುತ್ತಾರೆ. ಇದು ಕಾನೂನುಬಾಹಿರವಾಗಿರುವುದರಿಂದ ಹೆಚ್ಚು ಪ್ರಸಿದ್ದಿಯಾಗಿಲ್ಲ. ಆದರೆ ತಮಿಳುನಾಡಿನ ತೇಣಿ ಜಿಲ್ಲೆಯಲ್ಲಿ ಇಂತಹ ಪದ್ದತಿ ಈಗಲೂ  ನಡೆಯುತ್ತಿದೆ ಎಂದು ‘ಅಭ್ಯಂಜನ’ ಚಿತ್ರ ನೋಡಿದಾಗ ತಿಳಿಯುತ್ತದೆ. ಅಲ್ಲಿನ ಸಂಪ್ರದಾಯ ತಲೈಕೂಟಲ್ ರೀತಿಯಲ್ಲಿ ಜೀವ ಹೋಗಿಸುತ್ತಾರೆ. ಅಂದರೆ ಅರಳಣ್ಣೆಯನ್ನು ತಲೆಗೆ ಸವರಿ, ತಣ್ಣೀರಿನಿಂದ ಸ್ನಾನ ಮಾಡಿಸಿದ ನಂತರ, ೫-೬ ಏಳೆನೀರು ಕುಡಿಸುತ್ತಾರೆ. ಇದರಿಂದ ಇಡೀ ದೇಹವು ತಣ್ಣಗಾಗುತ್ತಾ, ಕೊನೆಗೆ ಉಸಿರಾಟ ನಿಂತು ....

1000

Read More...

Vidwath.App Launch.

Saturday, December 14, 2019

ರಮೇಶ್ ಅರವಿಂದ್ ವಿದ್ವತ್ ಅಪ್‌ಗೆ ಬ್ರಾಂಡ್ ಅಂಬಾಸಿಡರ್         ಮನುಷ್ಯನಿಗೆ ಜೀವನದಲ್ಲಿ ಸೈಕಾಲಜಿ ಮತ್ತು ಟೆಕ್ನಾಲಜಿ ಎಂಬ ರೆಕ್ಕೆಗಳು ಅವಶ್ಯಕವಾಗಿರುತ್ತದೆ. ಕುಟುಂಬ, ನಾವು ಕೆಲಸ ಮಾಡುವ ಸ್ಥಳ, ವ್ಯಕ್ತಿಗಳ ಕುರಿತಂತೆ ನಮ್ಮ ಬೇಕು ಬೇಡವನ್ನು ಯಾವ ರೀತಿಯಲ್ಲಿ ವ್ಯಕ್ತಪಡಿಸುತ್ತೇವೆ. ಹಾಗೆಯೇ ಅವರು ನಮಗೆ ಹೇಗೆ ಪೂರೈಸುತ್ತಾರೆ. ಹೀಗೆ ಎರಡು ಜೊತೆಗೆ ಬೆಳೆಯುವುದು ಸೈಕಾಲಜಿ. ನಿಮ್ಮ ಭವಿಷ್ಯ ನಿಮ್ಮಗಳ ಕೈಯಲ್ಲಿದೆ ಎಂದು ಹಿರಿಯರು ಹೇಳುತ್ತಿದ್ದರು. ಈಗ ನಮ್ಮ ಕೈಯಲ್ಲಿ ಇರುವುದು ಮೊಬೈಲ್. ಅದನ್ನು ಯಾವ ರೀತಿ ಉಪಯೋಗಿಸುತ್ತೇವೆ ಎಂಬುದರ ಮೇಲೆ ಭವಿಷ್ಯ ನಿರ್ಧಾರವಾಗುತ್ತದೆ.  ಪ್ರತಿ ಕ್ಷೇತ್ರದಲ್ಲಿ ಅದಕ್ಕೆ ಸಂಬಂದಿಸಿದಂತೆ  ಆಪ್‌ಗಳು ....

982

Read More...

Neural Pruning.App Launch.

Saturday, December 14, 2019

ಉನ್ನತ  ಶಿಕ್ಷಣಕ್ಕೆ  ನ್ಯೂರಲ್ ಪ್ರೂನಿಂಗ್         ಓದುವ ವಿದ್ಯಾರ್ಥಿಗಳಿಗೆ ಹೆಚ್ಚಿನ ಅಂಕ ಪಡೆಯಲು ಟ್ಯೂಷನ್‌ಗೆ ಹೋಗುತ್ತಾರೆ. ತಂತ್ರಜ್ಘಾನ ಬೆಳದಂತೆ ಇವೆಲ್ಲವನ್ನು ಮನೆಯಲ್ಲಿ ಕಲಿಯಬಹುದಾಗಿದೆ. ಅದಕ್ಕೆಂದೆ ‘ನ್ಯೂರಲ್ ಪ್ರೂನಿಂಗ್ ವೆಬ್ ಸೈಟ್’ ಹುಟ್ಟಿಕೊಂಡಿದೆ. ಇದರಲ್ಲಿ  ೧೦ನೇ ತರಗತಿ,  ಪಿಯುಸಿ, ಸ್ಪರ್ಧಾತ್ಮಕ ಪರೀಕ್ಷೆಗಳು, ಇಂಜಿನಿಯರಿಂಗ್ ಮತ್ತು ಮಾಹಿತಿ ತಂತ್ರಜ್ಘಾನ ವ್ಯಾಸಾಂಗ ಮಾಡುವವರಿಗೆ ಸುಲಭವಾಗಿ ಅರ್ಥವಾಗುವಂತೆ  ಪಠ್ಯಪುಸ್ತಕಗಳನ್ನು ಒದಗಿಸಲಾಗಿದೆ. ಇದನ್ನು ನುರಿತ ತರಭೇತಿದಾರರು ಇಲ್ಲಿಯವರೆಗಿನ ಅಂಶಗಳನ್ನು ತೆಗೆದುಕೊಂಡು ಸಿದ್ದಪಡಿಸಿರುವುದು ವಿಶೇಷ. ಇದರಲ್ಲಿ ಯಾವುದೇ ವಿಷಯ ಬೇಕಾದರೂ ಲಭ್ಯವಿರುತ್ತದೆ. ....

447

Read More...

December 24.Film Pooja and Press Meet.

Sunday, December 15, 2019

ವಿಶೇಷ ದಿವಸ ಡಿಸೆಂಬರ್ ೨೪        ಸಸ್ಪೆನ್ಸ್, ಥ್ರಿಲ್ಲರ್, ಹಾರರ್, ಲವ್, ಸೆಂಟಿಮೆಂಟು ಹೀಗೆ ಹಲವು ಅಂಶಗಳನ್ನು ಒಳಗೊಂಡಿರುವ ‘ಡಿಸೆಂಬರ್ ೨೪’ ಚಿತ್ರವು ಮೆಡಿಕಲ್ ರಿಸರ್ಚ್‌ವೊಂದರ ಸುತ್ತ ಸಾಗುತ್ತದೆ. ಕುಣಿಗಲ್ ತಾಲ್ಲೂಕಿನಲ್ಲಿ ಒಂದು ಘಟನೆ ನಡೆಯಿತು. ನವಜಾತ ಶಿಶುವೊಂದು ದಿಢೀರನೆ  ಅಸುನೀಗಿತ್ತು. ಕಾರಣ ಕೇಳಿದಾಗ ವೈದ್ಯರು ‘ಉಸಿರಾಟದ ಸಮಸ್ಯೆಯಾಗಿ ಮಗು ಪ್ರಾಣ ಬಿಟ್ಟಿದೆ’ ಎಂದು ಜಾರಿ ಕೊಳ್ಳುತ್ತಾರೆ.  ಅದಾದ ಮೇಲೂ ಅನೇಕ ಕಡೆ ಇಂಥದ್ದೇ ಘಟನೆ ಮರುಕಳಿಸಿದೆ. ಹುಟ್ಟಿದ ಮಕ್ಕಳು ಜೀವ ಬಿಡುವ ಪ್ರಕರಣಗಳು ಯಾಕೆ ಹೆಚ್ಚಾಗುತ್ತಿವೆ? ಇದಕ್ಕೆ ವೈದ್ಯರು ಹೇಳುವ ಒಂದೇ ಕಾರಣ ವೆಂಟಿಲೇಷನ್ ಸಮಸ್ಯೆ ಅನ್ನೋದು. ಈ ಸಮಸ್ಯೆಗೆ ಕಾರಣ ಹುಡುಕೋದು ....

468

Read More...

Kaalidaasa Kannada Mestru.Film 25 Days.

Saturday, December 14, 2019

ಕಾಳಿದಾಸ  ೨೫  ನಾಟ್‌ಔಟ್        ಪ್ರಚಲಿತ ಕನ್ನಡ ಚಿತ್ರಗಳು ಒಂದೇ  ವಾರಕ್ಕೆ ಎತ್ತಂಗಡಿಯಾಗುತ್ತದೆ. ಆದರೆ ಹಾಸ್ಯ, ಶಿಕ್ಷಣ ವ್ಯವಸ್ಥೆ ಕುರಿತಾದ ‘ಕಾಳಿದಾಸ ಕನ್ನಡ ಮೇಷ್ಟ್ರು’ ಸಿನಿಮಾವು ಸಲೀಸಾಗಿ ಇಪ್ಪತ್ತೈದು ದಿನಗಳನ್ನು ಯಶಸ್ವಿಯಾಗಿ ಪೂರೈಸಿ, ಮುಂದು ವರೆಯುತ್ತಿದೆ. ಇದರ ಕುರಿತಂತೆ ಮಾಹಿತಿ ನೀಡಲು ತಂಡವು ಮಾದ್ಯಮದ ಮುಂದೆ ಹಾಜರಾಗಿತ್ತು.  ಮಾಯಸಂದ್ರಕ್ಕೆ ಹೂರಡುವ ಧಾವಂತದಲ್ಲಿ ಜಗ್ಗೇಶ್ ಮೊದಲು ಮಾತನಾಡಿದ್ದು ಹೀಗೆ:        ಕಾಳಿದಾಸ ದಡ ಸೇರಿದ್ದನೆ. ಕನ್ನಡಿಗರು ಮನಸ್ಸು ಮಾಡಿ ಹೃದಯದಿಂದ ಇಲ್ಲಿಯತನಕ ತೆಗೆದುಕೊಂಡು ಹೋಗಿದ್ದಾರೆ. ಈಗ ಸಾಗರದಾಚೆ ಹೋಗುತ್ತಿರುವುದು ಸಂತಸ ತಂದಿದೆ.   ಮೈಸೂರಿನಲ್ಲಿ ....

390

Read More...

Dial Artist.App Launch.

Saturday, December 14, 2019

ಡಯಲ್  ಆರ್ಟಿಸ್ಟ್‌ದಲ್ಲಿ  ಎಲ್ಲರೂ ಸಿಗುತ್ತಾರೆ        ಚಿತ್ರರಂಗಕ್ಕೆ ಸಂಬಂದಿಸಿದಂತೆ ಕಲಾವಿದರು, ತಂತ್ರಜ್ಘರ ಪೂರ್ಣ ಮಾಹಿತಿಯು ಪುಸ್ತಕ, ಡಿಜಿಟಲ್, ವೆಬ್‌ದಲ್ಲಿ ಲಭ್ಯವಾಗುತ್ತಿತ್ತು. ತಂತ್ರಜ್ಘಾನ ಮುಂದುವರೆದಂತೆ  ಈಗ ‘ಡಯಲ್ ಆರ್ಟಿಸ್ಟ್’ ಆಪ್‌ದಲ್ಲಿ  ಹೆಚ್ಚಿನ ವಿವರಗಳು ಸಿಗಲಿದೆ.  ಅವಕಾಶ ಹುಡುಕುವವರಿಗೆ- ಕೊಡುವವರ ಮಧ್ಯೆ ಇದು ವೇದಿಕೆಯಾಗಿದೆ. ಬರಹಗಾರ ಮತ್ತು ಎರಡು ಚಿತ್ರಗಳನ್ನು ನಿರ್ದೇಶಿಸಿರುವ ಗುರುವೇಂದ್ರಶೆಟ್ಟಿ  ಸಮಾನ ಮನಸ್ಕರೊಂದಿಗೆ ಸೇರಿಕೊಂಡು ಇದನ್ನು ಹುಟ್ಟುಹಾಕಿದ್ದಾರೆ. ಅವರು ಹೇಳುವಂತೆ ಪ್ರಾರಂಭದಲ್ಲಿ ವೆಬ್‌ಸೈಟ್‌ನ್ನು ಶುರು ಮಾಡಿದಾಗ ಪ್ರಶಂಸೆ ವ್ಯಕ್ತವಾಗಿತ್ತು. ಇದರಿಂದ  ಪ್ರೇರಿತಗೊಂಡು ....

417

Read More...

Hudukaata.Film Pooja and Press Meet.

Saturday, December 14, 2019

ಎರಡು  ಭಾಷೆಯ  ಹುಡುಕಾಟ         ಚಂದನವನಕ್ಕೆ ಸಾಕಷ್ಟು ಮಂದಿ ತೆಲುಗಿನಿಂದ ಬರುತ್ತಿದ್ದಾರೆ. ಅಲ್ಲಿನ ನಿರ್ದೇಶಕ, ನಿರ್ಮಾಪಕ, ಕಲಾವಿದರುಗಳು  ಕನ್ನಡ ಸಿನಿಮಾಗಳನ್ನು ಮಾಡುವ ಮೂಲಕ  ಚಿತ್ರರಂಗದಲ್ಲಿ ನೆಲೆಯೂರುವ ಕನಸು ಕಾಣುತ್ತಿದ್ದಾರೆ. ಈಗ ಈ ಸಾಲಿಗೆ ಹೊಸ ಸೇರ್ಪಡೆ ‘ಹುಡುಕಾಟ’. ಹೀಗೊಂದು ಚಿತ್ರವು ಸದ್ದಿಲ್ಲದೆ ಸರಳವಾಗಿ ಮಹೂರ್ತ ಆಚರಿಸಿಕೊಂಡಿದೆ. ಕೇವಲ ಕನ್ನಡವಷ್ಟೇ ಅಲ್ಲದೆ ತಲುಗುದಲ್ಲಿ ತಯಾರಾಗುತ್ತಿದೆ. ಅಭಿಷೇಕ್ ಕನ್ನೆಲೂರಿ, ಮಧುಪ್ರಿಯ ಇಲ್ಲಿನ ಉದ್ಯಮದಲ್ಲಿ ನಾಯಕ, ನಾಯಕಿಯಾಗಿ ಗುರುತಿಸಿಕೊಳ್ಳುತ್ತಿದ್ದಾರೆ. ಬೆಂಗಳೂರಿನ ಪ್ರಜ್ವಲ್‌ಕುಮಾರ್.ಎಸ್, ಪೂಜಿತ ಇವರುಗಳು ಅದೇ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ....

471

Read More...

Nan Guri Warrant.Film Audio Rel.

Friday, December 13, 2019

ತ್ರಿಕೋನ ಸಂಗಮ        ‘ವಾರೆಂಟ್’ ಚಿತ್ರದ ಕುರಿತಂತೆ ಮಾಹಿತಿಯು ಕಳೆದ ವರ್ಷ ಪ್ರಕಟವಾಗಿತ್ತು. ಆಂಗ್ಲ ಶೀರ್ಷಿಕೆ ಇರುವುದರಿಂದ ಸರ್ಕಾರದಿಂದ ಸವಲತ್ತು ಸಿಗುವುದಿಲ್ಲವೆಂಬ ಕಾರಣಕ್ಕೆ ‘ನನ್ನ ಗುರಿ ವಾರೆಂಟ್’ ಅಂತ ಬದಲಾವಣೆ ಮಾಡಲಾಗಿದೆ. ತ್ರಿಕೋನ ಪ್ರೇಮಕತೆ, ಸೆಸ್ಪೆನ್ಸ್, ಥ್ರಿಲ್ಲರ್ ಇರಲಿದೆ. ಮೂರು ಛಾಯಾಗ್ರಾಹಕರು ಮತ್ತು  ಸಂಗೀತ ನಿರ್ದೇಶಕರು ಕೆಲಸ ಮಾಡಿರುವುದು ವಿಶೇಷ.  ನಾವುಗಳು ದುಡ್ಡಿನ ಆಸೆಗೆ ತಪ್ಪು ಮಾಡುತ್ತೇವೆ.  ಅದು ಏನಾಗುತ್ತೆ. ಯಾರೆ ಶಕ್ತಿಶಾಲಿಯಾದವರು ತಪ್ಪು ಮಾಡಿದರೂ ಅದು ತಪ್ಪೇ. ಅದಕ್ಕೆ ಪ್ರತಿಫಲ ಅನುಭವಿಸಲೇ ಬೇಕು. ಒಂದು ಘಟ್ಟದಲ್ಲಿ ಅಪರಾಧ ನಡೆಯುತ್ತದೆ. ಅದನ್ನು ಯಾರು ಮಾಡಿದರು. ಮುಂದೇ ಅದು ಸೇಡಿನಲ್ಲಿ ಸಾಗುತ್ತದೆ. ....

447

Read More...

Dhoom Again.Film Press Meet.

Wednesday, December 11, 2019

ಧೂಮ್ ಎಗೈನ್‌ಗೆ ಎರಡನೇ ಹಂತದ ಚಿತ್ರೀಕರಣ         ‘ಧೂಮ್ ಎಗೈನ್’ ಚಿತ್ರದ ಫಸ್ಟ್‌ಲುಕ್,ಟೀಸರ್‌ನ್ನು ಪುನೀತ್‌ರಾಜ್‌ಕುಮಾರ್  ಅನಾವರಣಗೊಳಿಸಿ ಶುಭ ಹಾರೈಸಿದ್ದರು. ಹೆಸರಿಗೆ ತಕ್ಕಂತೆ ದುಬಾರಿ ಬೈಕ್‌ಗಳು ಪಾತ್ರದಲ್ಲಿ ಕಾಣಿಸಿಕೊಳ್ಳುತ್ತದೆ. ಹಾಗಂತ ಬಾಲಿವುಡ್‌ನಲ್ಲಿ ತೆರೆಕಂಡ ಚಿತ್ರಕ್ಕೂ ಇದಕ್ಕೂ ಸಂಬಂದವಿರುವುದಿಲ್ಲ. ಈಗಾಗಲೇ ಇದೇ ಹೆಸರಿನಲ್ಲಿ ಚಿತ್ರವು ತೆರೆಕಂಡ ಕಾರಣ ಎಗೈನ್ ಪದ ಸೇರಿಸಲಾಗಿದೆ ಅಂತ  ನಿರ್ದೇಶಕ ರಾಜೇಶ್‌ವರ್ಮ ಸ್ಪಷ್ಟಪಡಿಸಿದ್ದಾರೆ. ಅಲ್ಲಿ ಪಾತ್ರಗಳು ನಕರಾತ್ಮಕವಾಗಿದ್ದವು. ಇದರಲ್ಲಿ ಸಕರಾತ್ಮಕವಾಗಿರುತ್ತದೆ.  ಹೆಸರು ಹೇಳಿದಾಕ್ಷಣ ಇದೊಂದು ಬೈಕ್ ಅಥವಾ ಕಾರ್‌ರೇಸ್ ಕುರಿತಾದ ಕತೆ ಇರಬಹುದೆಂಬ ಕುತೂಹಲ ....

435

Read More...
Copyright@2018 Chitralahari | All Rights Reserved. Photo Journalist K.S. Mokshendra,