Kaapi Katte.Movie Audio Rel.

Saturday, November 30, 2019

ಹೊರಬಂತು ಕಾಪಿಕಟ್ಟೆ ಹಾಡುಗಳು        ಗುರುಶಿಷ್ಯರು, ಬೊಂಬಾಟ್‌ಹೆಂಡ್ತಿ, ನಗೆಬಾಂಬ್ ಚಿತ್ರಗಳಲ್ಲಿ ಬಹುತೇಕ ಹಾಸ್ಯ ಕಲಾವಿದರು ಜನರನ್ನು ನಗಿಸಿದ್ದರು. ಅದಕ್ಕಿಂತಲೂ ಹೆಚ್ಚು, ಚಂದನವನದ ಇತಿಹಾಸದಲ್ಲಿ ಮೊದಲು ಎನ್ನುವಂತೆ ಚಿತ್ರರಂಗದ ಮುವತ್ತೈದು ಹಿರಿ, ಕಿರಿ ಹಾಸ್ಯ ಕಲಾವಿದರನ್ನು ಒಂದೇ ತೆರೆ ಮೇಲೆ ನೋಡುವ ಅವಕಾಶವು ‘ಕಾಪಿ ಕಟ್ಟೆ’ ಚಿತ್ರದಲ್ಲಿ ಸಿಗಲಿದೆ.  ಮೂಲತ: ನೃತ್ಯ ನಿರ್ದೇಶಕರಾಗಿರುವ ಕಪಿಲ್ ಮೂರನೇ ಪ್ರಯತ್ನದಲ್ಲಿ ಸಂಪೂರ್ಣ ಹಾಸ್ಯ ಕಲಾವಿದರ ಮೇಲೆ ಕತೆಯನ್ನು ಬರೆದು ನಿರ್ದೇಶನ ಮಾಡಿದ್ದಾರೆ. ಜಿ.ರಾಘವೇಂದ್ರ ಅವರಿಗೆ ನಿರ್ಮಾಣ ಹೊಸ ಅನುಭವ.          ಹಿರಿಯ ನಾಗರಿಕರ ಮನಸ್ಥಿತಿ ಯಾವ ರೀತಿ ಇರುತ್ತದೆ.  ಈ ವಯಸ್ಸು ....

554

Read More...

Elli Nanna Vilasa.Film Audio Rel.

Thursday, November 28, 2019

ಸ್ವಯಂ  ವಿಳಾಸ  ಹುಡುಕಿಕೊಂಡು  ಹೋದಾಗ          ಚಂದನವನಕ್ಕೆ ಸಾಕಷ್ಟು ಹೊಸಬರು  ಸಿನಿಮಾ  ನಿರ್ಮಾಣ ಮಾಡುವ ಮೂಲಕ ಚಿತ್ರರಂಗದಲ್ಲಿ ನೆಲೆಯೂರುವ ಕನಸು ಕಾಣುತ್ತಿದ್ದಾರೆ. ಈಗ ಆ ಸಾಲಿಗೆ ಉತ್ತರ ಕರ್ನಾಟಕದವರಿಂದ ‘ಎಲ್ಲಿ ನನ್ನ ವಿಳಾಸ’ ಚಿತ್ರವೊಂದು ಸದ್ದಿಲ್ಲದೆ  ತಾಳಿಕೋಟೆ, ಯಲ್ಲಾಪುರ, ಸಿರ್ಸಿ, ಬೆಂಗಳೂರು, ಮಂಗಳೂರು,ಉಡುಪಿ,  ಹುಣಸಗಿ ಕಡೆಗಳಲ್ಲಿ ಚಿತ್ರೀಕರಣವನ್ನು  ಮುಗಿಸಿದ್ದಾರೆ. ಕೇವಲ ಕನ್ನಡವಷ್ಟೇ ಅಲ್ಲದೇ, ತಮಿಳು ಭಾಷೆಯಲ್ಲಿ ಸಿದ್ದಗೊಂಡಿದೆ. ವಿಶ್ವದಲ್ಲಿ  ಅಪ್ಪ-ಅಮ್ಮನಿಗೆ  ಬೆಲೆಕಟ್ಟಲಾಗದು. ನಾವು ಹುಟ್ಟಿದ ಮೇಲೆ  ತಂದೆ ತಾಯಿ ವಿಳಾಸವೇ  ನಮ್ಮ ವಿಳಾಸವಾಗಿರುತ್ತದೆ ಹಾಗೂ ಅವರಿಗೆ ನಾವೇ ಪ್ರೀತಿಯ ....

1371

Read More...

Avane Srimannarayana.Film Trailer Launch.

Thursday, November 28, 2019

ನಾರಾಯಣ ಲುಕ್  ನೋಡಿದವರಿಗೆ  ಕಿಕ್         ಅಂತೂ ಕೊನೆಗೂ ‘ಅವನೇ ಶ್ರೀಮನ್ನಾರಾಯಣ’ ಚಿತ್ರದ ಕನ್ನಡ, ತೆಲುಗು, ತಮಿಳು, ಮಲೆಯಾಳಂ ಮತ್ತು ಹಿಂದಿ ಭಾಷೆಯಲ್ಲಿ ಸಿದ್ದಗೊಂಡಿರುವ ಮೂರು ನಿಮಿಷ ಮೂವತ್ತು ಸೆಕೆಂಡ್ ತುಣುಕುಗಳು ಶಂಕರ್‌ನಾಗ್ ಚಿತ್ರಮಂದಿರಲ್ಲಿ ಪ್ರದರ್ಶನಗೊಂಡಿತು. ಬಿಡುಗಡೆಯಾದ ಕೆಲವೇ ನಿಮಿಷಗಳಲ್ಲಿ ಲಕ್ಷಾಂತರ ಜನರು ವೀಕ್ಷಣೆ ಮಾಡಿದ್ದು, ಅದು ಚಿತ್ರದ ಮೇಲಿರುವ ನಿರೀಕ್ಷೆ ಸಾಬೀತು ಮಾಡಿದೆ. ಮೂರು ವರ್ಷ ಸಮಯ ತೆಗೆದುಕೊಂಡಿದ್ದಕ್ಕೆ  ತಂಡವು ಹಲವು ಮಾಹಿತಿಗಳನ್ನು  ಬಿಚ್ಚಿಟ್ಟಿತ್ತು.  ಕಾಲ್ಪನಿಕ ಕತೆಯಲ್ಲಿ ರಕ್ಷಿತ್‌ಶಟ್ಟಿ ಪೋಲೀಸ್ ಅಧಿಕಾರಿಯಾಗಿ ಇನ್ನೂರು ದಿನ ಕೆಲಸ ಮಾಡಿದ್ದಾರೆ. ನಾಯಕಿ ಶಾನ್ವಿಶ್ರೀವಾತ್ಸವ್ ೫೫, ಅಚ್ಯುತಕುಮಾರ್ ....

1124

Read More...

Shubam.Book Rel.

Wednesday, November 27, 2019

ಶುಭಂ  ಪುಸ್ತಕಕ್ಕೆ  ಸುದೀಪ್  ಪ್ರಶಂಸೆ

          ಬರವಣಿಗೆ ಒಂದು ಕಲೆಯಾದರೆ, ಓದುವುದು ಮತ್ತೋಂದು ಕಲೆಯಾಗಿರುತ್ತದೆಂದು ಸುದೀಪ್ ಅಭಿಪ್ರಾಯ ವ್ಯಕ್ತಪಡಿಸಿದರು. ಅವರು ಹಿರಿಯ ಸಿನಿಮಾ ಪತ್ರಕರ್ತ ಗಣೇಶ್ ಕಾಸರಗೂಡು ಬರೆದಿರುವ ‘ಶುಭಂ’ ಪುಸ್ತಕವನ್ನು ಬಿಡುಗಡೆ ಮಾಡಿ ಮಾತನಾಡುತ್ತಿದ್ದರು.  ಚಿತ್ರರಂಗದ ಬಗ್ಗೆ ಪುಸ್ತಕದಲ್ಲಿ ಒಳ್ಳೆಯ ಅಂಶಗಳಿವೆ. ಸಂಪೂರ್ಣ ಮಾಹಿತಿಗಳನ್ನು ಮೊಬೈಲ್‌ನಲ್ಲಿ ಟೈಪ್ ಮಾಡಿರುವುದು   ಅಷ್ಟು ಸುಲಭವಲ್ಲ. ಇದಕ್ಕೆ ತಾಳ್ಮೆ ಬೇಕು. ಅದು ಅವರಲ್ಲಿ ಇದೆ ಎಂದರು.

1113

Read More...

Katha Sangama.Movie Press Meet.

Wednesday, November 27, 2019

ಚಿತ್ರಬ್ರಹ್ಮನ ಹುಟ್ಟುಹಬ್ಬಕ್ಕೆ  ಕಥಾ ಸಂಗಮ ಪ್ರೀಮಿಯರ್ ಷೋ       ಪುಟ್ಟಣ್ಣ ಕಣಗಾಲ್ ಹುಟ್ಟುಹಬ್ಬಕ್ಕೆ ಉಡುಗೊರೆ ನೀಡಲು ‘ಕಥಾ ಸಂಗಮ’ ಚಿತ್ರವನ್ನು ಅವರೊಂದಿಗೆ ಕೆಲಸ ಮಾಡಿದ ಕಲಾವಿದರು, ತಂತ್ರಜ್ಘರಿಗೆ ಭಾನುವಾರದಂದು ವಿಶೇಷ ಪ್ರದರ್ಶನ ಏರ್ಪಡಿಸಲು ರಿಶಬ್‌ಶೆಟ್ಟಿ ಯೋಜನೆ ಹಾಕಿಕೊಂಡಿದ್ದರೆ.  ಏಳು ನಿರ್ದೇಶಕರು, ಛಾಯಾಗ್ರಾಹಕರು, ಸಂಗೀತ ನಿರ್ದೇಶಕರು ಒಕ್ಕರೂಲದಿಂದ ಕೆಲಸ ಮಾಡಿದ್ದು  ಪ್ರತಿ ಕಿರುಚಿತ್ರವು ಅಂದಾಜು ೧೮-೨೦ ನಿಮಿಷ, ಪ್ರತಿಯೊಂದಕ್ಕೂ ಶೀರ್ಷಿಕೆ ಇರಲಿದ್ದು, ಒಟ್ಟಾರೆ ಕಥಾಸಂಗಮವಾಗಿದೆ. ಮೊದಲನೆಯದು  ಮಂಗಳೂರು  ಪಟ್ಟಣದ ಹಿನ್ನಲೆಯಾಗಿದೆ. ಆರಾಮಾಗಿ ಇದ್ದ ಹುಡುಗನ ಬದುಕು ಒಂದು ಘಟನೆಯಿಂದ ಹೇಗೆ ಬದಲಾಗುತ್ತಾನೆ.  ....

1032

Read More...

Kaalidaasa Kannada Mestru.Film Success Meet.

Tuesday, November 26, 2019

ಮತ್ತೋಮ್ಮೆ ನಿರ್ದೇಶಕ  ಸ್ಥಾನದಲ್ಲಿ  ಜಗ್ಗೇಶ್         ಶುಕ್ರವಾರದಂದು ಬಿಡುಗಡೆಯಾದ  ‘ಕಾಳಿದಾಸ ಕನ್ನಡ ಮೇಷ್ಟ್ರು’ ಚಿತ್ರಕ್ಕೆ ಎಲ್ಲಾ ಕಡೆಗಳಿಂದ ಅದ್ಬುತ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಗಳಿಕೆಯಲ್ಲೂ ಚೇತರಿಸಿಕೊಳ್ಳುತ್ತಿದೆ. ಇದರಿಂದ ಸಂತಸಗೊಂಡಿರುವ ನಿರ್ಮಾಪಕರು ಸಣ್ಣದೊಂದು ಸಂತೋಷಕೂಟವನ್ನು ಏರ್ಪಾಟು ಮಾಡಿ ಎಲ್ಲವನ್ನು ಹೇಳಿಕೊಂಡರು. ಸರದಿಯಂತೆ ಮೈಕ್ ತೆಗೆದುಕೊಂಡ ಸಾಹಿತಿ,ನಿರ್ದೇಶಕ ಕವಿರಾಜ್ ಮಾತನಾಡಿ ಬಿಡುಗಡೆ ದಿನ ಜನರು ಟಾಕೀಸಿನಲ್ಲಿ ಕಡಿಮೆ ಇರುವುದನ್ನು ಕಂಡು ಇನ್ನು ಮುಂದೆ ಹಾಡು ಬರೆಯಲಿಕ್ಕೆ ಲಾಯಕ್ಕು ಎಂದು ನಿರ್ಧಾರ ಮಾಡಿದ್ದೆ. ಮಾರನೆ ದಿವಸ ಪತ್ರಿಕೆಗಳಲ್ಲಿ ಬಂದ ವಿಮರ್ಶೆ ನೋಡಿ ಸಮಾಧಾನ ಬಂದು ನಿರ್ಣಯ ....

1060

Read More...

Film RH 100.Film Press Meet.

Tuesday, November 26, 2019

ಪತ್ರಿಕೋದ್ಯಮ  ವಿದ್ಯಾರ್ಥಿಗಳ ಕಥನ          ಪ್ರಚಲಿತ ವಿದ್ಯಾಮಾನದಲ್ಲಿ ಜನರು ಹಾರರ್ ಚಿತ್ರಗಳನ್ನು ಇಷ್ಟಪಡುತ್ತಾರೆ. ಅದಕ್ಕಾಗಿ ಸಾಕಷ್ಟು ಸಿನಿಮಾಗಳು ಇದೇ ಮಾದರಿಯಲ್ಲಿ ಬಂದಿದೆ, ಬರುತ್ತಲೇ ಇದೆ. ಈ ಸಾಲಿಗೆ ‘ಆರ್‌ಹೆಚ್ ೧೦೦’ ಸೇರ್ಪಡೆಯಾಗಿದೆ. ನಿಜವಾದ ಘಟನೆಗಳಿಂದ ಪ್ರೇರಿತವಾಗಿದ್ದು ಅಂತ ಅಡಿಬರಹದಲ್ಲಿ ಹೇಳಿಕೊಂಡಿರುವ ಚಿತ್ರದ ಕತೆಯಲ್ಲಿ ಆರು ಪತ್ರ್ರಿಕೋದ್ಯಮ ವಿದ್ಯಾರ್ಥಿಗಳು ಕಾಡಿನಲ್ಲಿ ಏನೋ ನಡಿತಿದೆ ಎಂದು ಸಂಶೋಧನೆ ಮಾಡಲು ದಟ್ಟ ಅರಣ್ಯಕ್ಕೆ ತೆರಳುತ್ತಾರೆ. ಅಲ್ಲಿ ಆದಂಥ ಅನುಭವಗಳು ಯಾವ ರೀತಿ ಇರುತ್ತದೆ. ನೋಡುಗನಿಗೆ ಪ್ರತಿ ದೃಶ್ಯವು ಭಯ ಹುಟ್ಟುವಂತೆ ಮಾಡಿಸುತ್ತದೆ. ಇದರ ಜೊತೆಗೆ ಸಾಮಾಜಿಕ ಕಳಕಳಿ ಇರುವ ಅಂಶಗಳು ಇರಲಿದೆ. ....

1113

Read More...

Brahmachari.Film Rel On 29th Nove 2019.

Tuesday, November 26, 2019

ಬ್ರಹ್ಮಚಾರಿ ಹೊಸತನ, ಹೊಸ ವಿಷಯಗಳು           ಹಾಸ್ಯ ಚಿತ್ರ ‘ಬ್ಯಹ್ಮಚಾರಿ’ ಚಿತ್ರದಲ್ಲಿ ಹಲವು ಹೊಸತನದ ವಿಷಯಗಳು ತುಂಬಿಕೊಂಡಿದೆ.  ಉದಯ್.ಕೆ.ಮೆಹ್ತಾ  ದಶಕದ ಅನುಭವದಲ್ಲಿ  ಎಂಟನೇ ನಿರ್ಮಾಣದ ಚಿತ್ರಕ್ಕೆ ಕಾಶಿನಾಥ್ ಚಿತ್ರಗಳ ಪ್ರೇರಣೆಯಿಂದ ಕತೆ ಬರೆದಿದ್ದಾರೆ. ಮೊದಲಬಾರಿ ಕರ್ನಾಟಕದಾದ್ಯಂತ ಚಿತ್ರವನ್ನು ಕೆ.ಆರ್.ಜಿ ಸ್ಟುಡಿಯೋದವರು ವಿತರಣೆ ಮಾಡುತ್ತಿದ್ದು, ನಿರ್ಮಾಪಕರು ಲಾಭದಲ್ಲಿ ಇದ್ದಾರೆ.  ಭರ್ಜರಿ ಚೇತನ್‌ಕುಮಾರ್ ಸಾಹಿತ್ಯ, ಧರ್ಮವಿಶ್ ಸಂಗೀತದ ‘ಹಿಡ್‌ಕೋ ಹಿಡ್‌ಕೋ’ ಹಾಡನ್ನು ಹತ್ತು ಲಕ್ಷ ಜನ ವೀಕ್ಷಿಸಿದ್ದಾರೆ. ಸೆನ್ಸಾರ್‌ನಿಂದ ಯಾವುದೇ ದೃಶ್ಯ ಮ್ಯೂಟ್ ಮಾಡದೆ, ಆಕ್ಷೇಪಿಸದೆ ಶುದ್ದ ಯುಎ ಪ್ರಮಾಣಪತ್ರ ....

1144

Read More...

Kiruminkanaja.Film Press Meet.

Tuesday, November 26, 2019

ಪೆನ್ ಡ್ರೈವ್  ಕನ್ನಡದಲ್ಲಿ ಕಿರು  ಮಿನ್ಕಣಜ         ಕಿರು ಅನ್ನುವದಕ್ಕೆ ಅರ್ಥ ಎಲ್ಲರಿಗೂ ತಿಳಿದಿದೆ. ಆದರೆ ಮಿನ್ಕಣಜ ಪದಕ್ಕೆ ತಾತ್ಪರ್ಯ  ಸಿಗುವುದಿಲ್ಲ. ಇವರೆಡು ಸೇರಿಕೊಂಡಿರುವ ‘ಕಿರು ಮನ್ಕಣಜ’ ಚಿತ್ರವೊಂದು ತೆರೆಗೆ ಬರಲು ಸಜ್ಜಾಗಿದೆ. ಶೀರ್ಷಿಕೆ ಅರ್ಥ ವಸ್ತುವಿನ ಹೆಸರು ಆಗುತ್ತದೆ. ಆಂಗ್ಲ ಭಾಷೆಯಲ್ಲಿ ಪೆನ್ ಡ್ರೈವ್ ಎನ್ನುತ್ರಾರೆ. ಮೀನು ಚಿಕ್ಕದಾಗಿದ್ದರೂ ಅದರ ಹೊಟ್ಟೆ ಒಳಗೆ ಎಷ್ಟು ಮೊಟ್ಟೆಗಳು ಇರುತ್ತದೆಂದು ಯಾರು ಅಂದಾಜು ಮಾಡಲಿಕ್ಕೆ ಆಗುವುದಿಲ್ಲ. ಅದೇ ರೀತಿ ಪೆನ್ ಡ್ರೈವ್ ಒಬ್ಬೋಬ್ಬರ ಜೀವನದಲ್ಲಿ ಇರುತ್ತದೆ. ಅದಕ್ಕೆ ಪುರಾವೆಗಳು ಏನು ಬೇಕಾದರೂ ಇರಬಹುದು. ಪ್ರತಿಯೊಬ್ಬರಲ್ಲಿ ಅದು ಆಳವಾಗಿ ತುಂಬಿರುತ್ತದೆ. ಇದೇ ರೀತಿ ....

1087

Read More...

Film-i1.Film Trailer Rel.

Monday, November 25, 2019

  ಐ ೧ಗೆ ಸುದೀಪ್ ಸಾಥ್       ಹೊಸಬರ ಚಿತ್ರಕ್ಕೆ ಸದಾ ಬೆಂಬಲ ನೀಡುತ್ತಿರುವ ಸುದೀಪ್ ‘ಐ೧’ ಚಿತ್ರದ ಟ್ರೈಲರ್‌ನ್ನು ಬಿಡುಗಡೆ ಮಾಡಿದರು. ನಂತರ ಮಾತನಾಡುತ್ತಾ ಒಂದು ಕಾಲದಲ್ಲಿ ನಾನು ಸಹ ಹೊಸಬನಾಗಿದ್ದಾಗ ಹೀಗೆ ವೇದಿಕೆ ಮೇಲೆ ನಿಂತಿದ್ದೆ. ನೀವುಗಳು ನಾಳೆ ಏನಾಗ್ತಿರೆಂದು ಹೇಳಲಿಕ್ಕೆ ಆಗದು.  ತುಣುಕುಗಳನ್ನು ನೋಡಿದಾಗ ಪರಿಕಲ್ಪನೆ ಚೆನ್ನಾಗಿ ಬಂದಿದೆ. ಒಂದು ಜಾಗದಲ್ಲಿ ನಡೆಯುತ್ತದೆ ಎಂದು ತಿಳಿದುಬಂದಿದೆ. ಶಿಕ್ಷಕಿ ನಿರ್ಮಾಣದ ಕಡೆಗೆ ಬಂದಿದ್ದಾರೆ ಒಳ್ಳೆಯದಾಗಲಿ ಎಂದರು.  ಚಿತ್ರದ ಕತೆಯಲ್ಲಿ  ಮೂವರು ಅಮಾಯಕ ಹುಡುಗರನ್ನು ಒಬ್ಬನು  ಟೆಂಪೋ ಟ್ರಾವಲ್ (ಟಿಟಿ)ದಲ್ಲಿ ಬಂದಿಯಾಗಿಸುತ್ತಾನೆ. ಅದನ್ನು ಮಾಡಲು ಕಾರಣವಾದರೂ ಏನು? ....

528

Read More...

Gulal.com.Film Press Meet.

Monday, November 25, 2019

ಗುಲಾಲ್‌ದಲ್ಲಿ ಹುಡುಗಿ ಹಾಡು ವೈರಲ್           ಚಿತ್ರ ಬಿಡುಗಡೆ ಮುಂಚೆ ಹಾಡುಗಳು ಹಿಟ್ ಆದರೆ ಅದು ಮೊದಲ ಯಶಸ್ಸು ಎಂದು ಹೇಳುತ್ತಾರೆ. ಅದರಂತೆ ‘ಗುಲಾಲ್.ಕಾಂ’ ಚಿತ್ರದ ‘ಹುಡುಗಿ ಹುಡುಗಿ’ ಗೀತೆಯು ಹದಿನೈದು ದಿನದೊಳಗೆ ಮೂರುವರೆ ಲಕ್ಷ ಜನರು ವೀಕ್ಷಿಸಿ ವೈರಲ್ ಆಗಿದೆ. ಇದರಿಂದ ಗೀತೆಗೆ ಧ್ವನಿಯಾಗಿರುವ ನಿರ್ಮಾಪಕ ಡಾ.ಗೋಪಾಲಕೃಷ್ಣಹವಲ್ದಾರ ಅವರಿಗೆ ಖುಷಿ ಆಗಿದೆ.  ಉತ್ತರ ಕರ್ನಾಟಕ ಭಾಗದಲ್ಲಿ ಹುಟ್ಟಿದಾಗ ಗುಲಾಲ್ ಬಣ್ಣ ಹಾರಿಸ್ತಾರೆ, ಸತ್ತಾಗ ಗೌರವ ಸಲ್ಲಿಸಲು ಇದನ್ನೆ ಏರಿಸ್ತಾರೆ. ಬದುಕಲ್ಲಿ ಸಾವು ಅಂದರೆ ಕಷ್ಟ, ಹುಟ್ಟುಗೆ ಅರ್ಥ ಸುಖ ಕೊಡುತ್ತದೆ. ಇವೆರಡನ್ನು ಬಿಂಬಿಸುವುದೇ ಕತೆಯಾಗಿದೆ. ಬೆಂಗಳೂರು, ಬೆಳಗಾಂ,ಕಿತ್ತೂರು  ಮುಂತಾದ ....

867

Read More...

Directors Association.Press Meet.

Monday, November 25, 2019

ನಿರ್ದೇಶಕರ  ಸಂಘಕ್ಕೆ  ನೂತನ  ಸಾರಥಿ

        ಕಳೆದೆರಡು ವರ್ಷದಿಂದ ಸಾಹಿತಿ,ನಿರ್ದೇಶಕ ಡಾ.ನಾಗೇಂದ್ರಪ್ರಸಾದ್ ನಿರ್ದೇಶಕರ ಸಂಘಕ್ಕೆ ಅಧ್ಯಕ್ಷರಾಗಿದ್ದರು. ಮೊನ್ನೆ ನಡೆದ ಸರ್ವಸದಸ್ಯರ ಸಭೆಯಲ್ಲಿ  ಹಾಲಿ ಅಧ್ಯಕ್ಷರು  ವಿಸರ್ಜನೆ ಮಾಡಿದ್ದರಿಂದ ಟಿ.ಶಿ.ವೆಂಕಟೇಶ್  ಅಧ್ಯಕ್ಷ  ಸ್ಥಾನಕ್ಕೆ ಅವಿರೋಧವಾಗಿ  ಆಯ್ಕೆಯಾಗಿದ್ದಾರೆ. 

453

Read More...

Naane Raja.Film Press Meet.

Monday, November 25, 2019

 

        

ಬರುತ್ತಿದ್ದಾನೆ ನಾನೇ ರಾಜ

        ‘ನಾನೇ ರಾಜ’ ಚಿತ್ರವು  ಮನರಂಜನೆ, ಸಾಹಸ ಮತ್ತು ಪ್ರೀತಿ ಕತೆ ಹೊಂದಿದೆ. ಅಜ್ಜಿಯ ಮುದ್ದಿನ ಮೊಮ್ಮಗ, ಸ್ನೇಹಿತರ ಅಚ್ಚುಮೆಚ್ಚಿನ ಗೆಳೆಯ ರಾಜ, ಮನೆಗೆ ಮಾರಿ ಊರಿಗೆ ಉಪಕಾರಿ ಎನ್ನುವ ಹಾಗೆ ಯಾರೇ ಯಾವ ಸಮಯದಲ್ಲೂ ಸಹಾಯ ಕೇಳಿದರೂ ಮುಂದಾಗುವ ಅಪಾಯವನ್ನು ಲೆಕ್ಕಿಸದೆ ಸಹಾಯ ಮಾಡುವ ಗುಣವುಳ್ಳವನು.  ಅಕಸ್ಮಾತ್ ಸಿಕ್ಕ ಹುಡುಗಿಯೊಬ್ಬಳು  ತನ್ನ ಕಷ್ಟವನ್ನು ಹೇಳಿ ಸಹಾಯವನ್ನು ಮಾಡಲು ಕೋರಿಕೊಳ್ಳುತ್ತಾಳೆ. ಅವಳನ್ನು ರಕ್ಷಿಸಲು ಹೋಗಿ ತಾನೇ ಕಷ್ಟಕ್ಕೆ ಸಿಲುಕುತ್ತಾನೆ. ಅವೆಲ್ಲಾವನ್ನು ಎದುರಿಸಿ, ಹೋರಾಡಿ ಹೇಗೆ ಹೊರಬರುತ್ತಾ ನೆಂಬುದು ಒಂದು ಏಳೆಯ ಸಾರಾಂಶವಾಗಿದೆ.

463

Read More...

Tempar.Film Pooja and Press Meet.

Monday, November 25, 2019

ಟೆಂಪರ್ ಹುಡುಗನ ಬದುಕು ಬವಣೆ         ಪ್ರತಿಭೆ ಇರುವವರು  ಒಂದು ಕ್ಷೇತ್ರದಲ್ಲಿ ಗುರುತಿಸಿಕೊಂಡ ನಂತರ ಅವರ ಗುರಿ ಆಕ್ಷನ್ ಕಟ್ ಹೇಳುವುದು. ಇದರಲ್ಲಿ ಕೊರಿಯೋಗ್ರಾಫರ್, ಛಾಯಾಗ್ರಾಹಕ, ಸಂಗೀತ ನಿರ್ದೇಶಕ, ಸಂಕಲನಕಾರ ಇವರೆಲ್ಲರೂ ಸದ್ಯ  ನಿರ್ದೇಶಕ ಸ್ಥಾನವನ್ನು ಅಲಂಕರಿಸಿದ್ದಾರೆ. ಈ ಸರಪಣಿಗೆ ಸಾಹಿತಿ ಮಂಜುಕವಿ ಸೇರ್ಪಡೆಯಾಗಿದ್ದಾರೆ.  ‘ಟೆಂಪರ್’ ಚಿತ್ರಕ್ಕೆ ರಚನೆ,ಚಿತ್ರಕತೆ, ಸಾಹಿತ್ಯ,ಸಂಭಾಷಣೆ  ಬರೆದು ನಿರ್ದೇಶನ ಮಾಡುತ್ತಿದ್ದಾರೆ.  ಕತೆಯಲ್ಲಿ ಆತನಿಗೆ ಅಪ್ಪ-ಅಮ್ಮ-ತಂಗಿ ಜೊತೆಗೆ ಕಷ್ಟ ಸುಖ ಹಂಚಿಕೊಳ್ಳಲು ಇಬ್ಬರು  ಪ್ರಾಣ ಸ್ನೇಹಿತರು. ಬಾಲ್ಯದಿಂದಲೂ ಯಾರೇ ತಪ್ಪು ಮಾಡಿದರೂ ಅದಕ್ಕೆ ತಕ್ಕಂತೆ ನ್ಯಾಯ ಒದಗಿಸೋ ಗುಣವುಳ್ಳವನು.  ಮುಂದೆ ....

489

Read More...

Mookajjiya Kanasugalu.Film Press Meet.

Saturday, November 23, 2019

ಉತ್ತಮ  ಚಿತ್ರಗಳನ್ನು  ಜನರಿಗೆ  ತಲುಪಿಸುವುದು  ಸವಾಲಿನ  ಕೆಲಸ         ಹಿರಿಯ ಸಾಹಿತಿ ಡಾ.ಶಿವರಾಮಕಾರಂತರು ೧೯೬೮ರಲ್ಲಿ ಬರೆದ ‘ಮೂಕಜ್ಜಿಯ ಕನಸುಗಳು’ ಕಾದಂಬರಿ ರೂಪದಲ್ಲಿ ಪ್ರಕಟಗೊಂಡಿತ್ತು. ಇದೇ ಕೃತಿಗೆ ಜ್ಘಾನಪೀಠ ಪ್ರಶಸ್ತಿ ಲಭಿಸಿ ಐವತ್ತು ವರ್ಷವಾಗಿದೆ.  ಅಲ್ಲದೆ  ಪಠ್ಯಪುಸ್ತಕವಾಗಿ ಬಂದಿತ್ತು.  ಆ ಕಾಲಕ್ಕೆ ಸ್ತ್ರೀ ಸ್ವಾತಂತ್ರ ಪ್ರತಿನಿಧಿಯಾಗಿ ಮೂಕಜ್ಜಿಗೆ ಒಂದು ಅತೀಂದ್ರಿಯ ಶಕ್ತಿಯನ್ನು ಕೊಟ್ಟು, ಅವಳ ಕನಸುಗಳ ಮೂಲಕ ಮಾನವ ಇತಿಹಾಸದ ದೃಶ್ಯಗಳನ್ನು ಮೂರ್ತಿಕರಿಸುವ ಕಲ್ಪನೆಯನ್ನು ಕೃತಿಯಲ್ಲಿ ಹೇಳಿದ್ದರು. ಅದು ಪ್ರಸಕ್ತ  ಕಾಲಘಟ್ಟಕ್ಕೆ ಅನ್ವಯವಾಗುತ್ತದೆ. ಇಂತಹ ಮೇರು ಕಾದಂಬರಿಯು ಚಿತ್ರರೂಪದಲ್ಲಿ ಬರಲು ....

461

Read More...

Om Shree Swastik.Film Teeser Rel.

Saturday, November 23, 2019

ಮೂರು  ಚಿಹ್ನೆಯ  ಚಿತ್ರ           ಉಪೇಂದ್ರ ಓಂ, ಸ್ವಸ್ತಿಕ್ ಚಿತ್ರಗಳನ್ನು ಚಿಹ್ನೆಯ ಮೂಲಕ ಶೀರ್ಷಿಕೆಯಾಗಿ ಬಳಸಿಕೊಂಡಿದ್ದರು.  ಇದರಲ್ಲಿ ಒಂದು ಹೆಸರು ಮಾಡಿದರೆ, ಮತ್ತೋಂದು ಸಾಧಾರಣ ಅನಿಸಿಕೊಂಡಿತ್ತು. ಈಗ ಹಿರಿಯ ನಿರ್ದೇಶಕ ಪುಟಾಣೆ ರಾಮರಾವ್ ಇನ್ನೋಂದು  ಹೆಜ್ಜೆ ಮುಂದಕ್ಕೆ  ಹೋಗಿ ‘ಓಂ ಶ್ರೀ ಸ್ವಸ್ತಿಕ್’ ಹೆಸರುಗಳನ್ನು ಚಿಹ್ಮೆಗಳೊಂದಿಗೆ ಹೆಸರಿನಲ್ಲಿ  ಗುರುತಿಸಿಕೊಂಡು  ನಿರ್ಮಾಣ ಮಾಡಿದ್ದಾರೆ. ತ್ರಿಸಂಗಮ ಹಂಗಾಮವೆಂದು ಉಪಶೀರ್ಷಿಕೆಯಾಗಿ ಹೇಳಿಕೊಂಡಿದೆ.  ಹೊಸಕೋಟೆ, ರಾಮೋಹಳ್ಳಿ ಕಡೆಗಳಲ್ಲಿ ಶೇಕಡ ೭೫ರಷ್ಟು ಚಿತ್ರೀಕರಣ ಮುಗಿಸಿ, ಎರಡು ಹಾಡುಗಳು, ಸಾಹಸ ಮತ್ತು ಮಾತಿನ ಭಾಗದ ಕೆಲಸವನ್ನು ಉಳಿಸಿಕೊಂಡಿದೆ. ಅಡಿಬರಹದಲ್ಲಿ ....

1170

Read More...

Krutha.Film Press Meet.

Friday, November 22, 2019

ಹೊಸಬರ  ಕೃಥ        ಇದಂ ಕೃತ್ಯಂ ಎಂದು ಹಿರಿಯರು ಹೇಳುತ್ತಾರೆ. ಈಗ ಹೊಸಬರ ತಂಡವೊಂದು ಸೇರಿಕೊಂಡು ‘ಕೃಥ’ ಎನ್ನುವ ಚಿತ್ರವನ್ನು ಸದ್ದಿಲ್ಲದೆ ಬೆಂಗಳೂರು, ಮಂಗಳೂರು ಕಡೆಗಳಲ್ಲಿ ಎರಡು ಹಂತದಂತೆ ಚಿತ್ರೀಕರಣ ಮುಗಿಸಿದ್ದಾರೆ. ಮೊದಲು ‘ಡು ಇಟ್’ ಹೆಸರು ಇಡಲು  ಚಿಂತನೆ ನಡೆಸಿದ್ದರು.  ಅದು ಸರಿಬರುವುದಿಲ್ಲವೆಂದು ಕೊನೆಗೆ ಮೇಲಿನಂತೆ  ಸಂಸ್ಕ್ರತ ಶೀರ್ಷಿಕೆಯನ್ನು ಬಳಸಿಕೊಂಡಿದ್ದಾರೆ. ಒಂದು ರಾತ್ರಿಯಲ್ಲಿ ನಡೆಯುವ ಕತೆಯಲ್ಲಿ ನಾಲ್ಕು ವರ್ಷ ಮಗುವಿನೊಂದಿಗೆ ಶಕ್ತಿಶಾಲಿ ತಾಯಿ ಗಂಡನಿಲ್ಲದ ಸಂದರ್ಭದಲ್ಲಿ ಎದುರಾದ ಸಮಸ್ಯೆಯನ್ನು ಹೇಗೆ ನಿಭಾಯಿಸುತ್ತಾಳೆ  ಎಂಬುದನ್ನು ಸೆಸ್ಪನ್ಸ್, ಥ್ರಿಲ್ಲರ್ ಮೂಲಕ ೧೧೦ ನಿಮಿಷದಲ್ಲಿ ತೋರಿಸಲಾಗಿದೆ. ‘ಧನಂ ....

457

Read More...

Alidu Ulidavaru.Movie Trailer Rel.

Wednesday, November 20, 2019

ಪ್ರೀತಿ ಮತ್ತು  ಭಯದ ಸಂವೇದನೆಗಳು          ಪ್ರೀತಿ ಇದ್ದಾಗ ಚಿಕ್ಕದೊಂದು ಭಯ ಇರುತ್ತದೆ. ಆ ಭಯವು ನಮಗೆ ಜವಬ್ದಾರಿ ಕೊಡುತ್ತದೆ. ಅಂತಹ ಜವಬ್ದಾರಿಯು ಚೆನ್ನಾಗಿರುತ್ತದೆ. ಹುಟ್ಟು-ಸಾವು, ನೋವು-ನಲಿವು. ಕಾಣಿಸುವುದರ ಬಗ್ಗೆ ಯಾರು ಚಿಂತೆ ಮಾಡೋಲ್ಲ. ಅದೇ ಕಾಣದೇ ಇರುವುದರ ಕುರಿತಂತೆ ಭ್ರಮೆ-ಹೆದರಿಕೆ ಆವರಿಸುತ್ತದೆ. ಇರೋದು ಯಾಕಿಂಗೆ, ಇಲ್ಲದೆ ಇರೋದು ಯಾಕಿಲ್ಲ. ಬದುಕಿನಲ್ಲಿ ವಿಚಿತ್ರ ಅಂದರೆ ಇವೆಲ್ಲವೂ ಸಂಘಟಿತವಾಗಿ  ಬರುತ್ತದೆ. ಇಂತಹ ಅಂಶಗಳು ‘ಅಳಿದು ಉಳಿದವರು’ ಚಿತ್ರದಲ್ಲಿ ತೋರಿಸುವ ಪ್ರಯತ್ನ ಮಾಡಲಾಗಿದೆ. ಅನಂತ್ ವರ್ಸಸ್ ನುಸ್ರತ್ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳಿದ್ದ  ಸುಧೀರ್‌ಶ್ಯಾನ್‌ಭೋಗ್  ‘ಬದುಕು ಜಟಾಕ ಬಂಡಿ’ ರಿಯಾಲಿಟಿ ....

452

Read More...

Dhandupalya-4.Film Success Meet.

Wednesday, November 20, 2019

ಪ್ರತಿಭೆ  ಸಾಬೀತು ಪಡಿಸಲು  ಚಿತ್ರ  ನಿರ್ಮಾಣ        ಹಿಂದಿನ ದಂಡು ಪಾಳ್ಯ ನಿರ್ಮಾಣ ಮಾಡಿದ್ದ ವೆಂಕಟ್ ಅವರಿಗೆ ನಿರ್ದೇಶಕರಿಂದ ದ್ರೋಹ,ಮೋಸ ಆಗಿತ್ತು.  ಇವರಿಗೇನು ಗೊತ್ತಿಲ್ಲವೆಂದು ಆ ಸಮಯದಲ್ಲಿ ಆಟ ಆಡಿಸಿದ್ದಾರೆ. ನಾನೇನು ಕಮ್ಮಿ ಇಲ್ಲ. ನನ್ನಲ್ಲೂ ಪ್ರತಿಭೆ ಎಂದು ತೋರಿಸುವ ಸಲುವಾಗಿ ‘ದಂಡು ಪಾಳ್ಯಂ-೪’  ಚಿತ್ರಕ್ಕೆ ಕತೆ,ಚಿತ್ರಕತೆ ಬರೆದು ಬಂಡವಾಳ ಹಾಕಿದ್ದೇನೆಂದು ಸಂತೋಷಕೂಟದಲ್ಲಿ  ಅನ್ನದಾತರು  ಅಂತರಾಳದ ನೋವನ್ನು ಮಾದ್ಯಮದ ಎದುರು ಹೇಳಿಕೊಂಡರು.  ಇನ್ನು ಖುಷಿಯ ವಿಚಾರ ಅಂದರೆ,  ಎಸಿಪಿ ಯಾಗಿ ಕಾಣಿಸಿಕೊಂಡಿದ್ದರಿಂದ  ಒಂದರೆಡು ಚಿತ್ರಗಳಲ್ಲಿ ಅಭಿನಯಿಸಲು ಕರೆ ಬಂದಿದೆ.  ಸ್ಟಾರ್ ನಟರ  ಕಾಲ್‌ಶೀಟ್ ಸಿಕ್ಕಿದೆ. ಇದರ ನಂತರ ....

702

Read More...

Dhruva Sarja.Marriage Press Meet.

Sunday, November 17, 2019

 ನವೆಂಬರ್ ೨೪ರಂದು ಆಕ್ಷನ್ ಪ್ರಿನ್ಸ್ ಮದುವೆ        ಸ್ಟಾರ್ ನಟ ಧ್ರುವಸರ್ಜಾ ಅವರ ಮದುವೆಯು  ಪ್ರೇರಣಶಂಕರ್ ಅವರೊಂದಿಗೆ ನಡೆಯಲಿದೆ.   ಹನ್ನೆರಡು ಇಂಚು ಉದ್ದ, ಮೂರೂವರೆ ಇಂಚು ಎತ್ತರದ ಆಹ್ವಾನಪತ್ರಿಕೆಯಲ್ಲಿ  ಸರ್ಜಾ ಕುಟುಂಬವು ಆಹ್ವಾನಿಸುತ್ತಿದೆ ಎನ್ನುವ ಎರಡು ಬಾಟಲ್‌ಗಳ ಪೈಕಿ ಒಂದರಲ್ಲಿ ಅಕ್ಕಿ, ಚಾಕಲೇಟ್, ಹರಿಶಿನ-ಕುಂಕುಮ, ಎರಡನೆಯದಲ್ಲಿ ಕೇಸರಿ ಬಣ್ಣ ಇರುವ ಸಣ್ಣದಾದ ಪ್ಯಾಕೆಟ್. ಮತ್ತೋಂದು ಕಡೆ ಹರಿಶಿನಕೊಂಬು, ಹಸಿರುಬಣ್ಣದ ಗಾಜಿನ ಬಳೆ, ಮರದಲ್ಲಿ ಮಾಡಲಾದ ಚಿಕ್ಕದಾದ ಪೆಂಡೆಂಟ್. ಒಂದು  ಪುಟ ಪೂರ್ತಿ ಹಳೇಬೀಡು ಗೋಪುರಗಳ  ಮಧ್ಯೆ ವಧು-ವರ ನಿಂತಿರುವ ಭಾವಚಿತ್ರ. ಆಹ್ವಾನ ಪತ್ರಿಕೆಯಲ್ಲಿ ಸಂಪೂರ್ಣ ಮದುವೆ ವಿವರ, ....

448

Read More...
Copyright@2018 Chitralahari | All Rights Reserved. Photo Journalist K.S. Mokshendra,