ದಯಾಳ್ ಹೊಸ ಚಿತ್ರ ತ್ರಯಂಬಕಂ ಐತಿಹಾಸಿಕ, ಪುರಾಣ, ಥ್ರಿಲ್ಲರ್ ಮಾದರಿಯ ಕತೆಯಾಗಿರುವ ‘ತ್ರಯಂಬಕಂ’ ಚಿತ್ರಕ್ಕೆ ದಯಾಳ್ಪದ್ಮನಾಬನ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಮೂಲತ: ಶಿವನ ಭಕ್ತನಾಗಿದ್ದರಿಂದ ಸನ್ನಿವೇಶದಲ್ಲಿ ಶಿವ, ಲಿಂಗ ಅಂಶಗಳು ಹೆಚ್ಚು ಬರುವುದರಿಂದ ಇದೇ ಶೀರ್ಷಿಕೆಯನ್ನು ಇಡಲಾಗಿದೆಯಂತೆ. ಸಮಾಜದಲ್ಲಿ ನಾವುಗಳು ಏನಾದರೂ ಚಟುವಟಿಕೆಗಳನ್ನು ಯಾರು ನೋಡದಂತೆ ಮಾಡುತ್ತಿರುತ್ತವೆ. ಆದರೆ ನಮಗೆ ಅರಿವಿಲ್ಲದೆ ಮೂರನೆಯವರು ನೋಡುತ್ತಿರುತ್ತಾರೆ. ತಂದೆ, ಮಗಳು ಮತ್ತು ಒಬ್ಬ ಹುಡುಗ ಈ ಮೂರು ಪಾತ್ರಗಳು ಸಿನಿಮಾವನ್ನು ತೆಗೆದುಕೊಂಡು ....
ಕ್ಲಾಸಿಕ್ ಪ್ರೇಮ ಕತೆ ಮನಸಿನ ಮರೆಯಲಿ ವಿವಾದ ಮಾಡುವ ನಿರ್ದೇಶಕನೆಂದು ಖ್ಯಾತಿ ಗಳಿಸಿದ್ದ ಆಸ್ಕರ್ಕೃಷ್ಣ ಅದರಿಂದ ಹೊರಬರುವ ಸಲುವಾಗಿ ಈ ಬಾರಿ ಸುಂದರ ಪ್ರೇಮಕತೆಯ ‘ಮನಸಿನ ಮರೆಯಲಿ’ ಚಿತ್ರಕ್ಕೆ ಕತೆ ಬರೆದು ನಿರ್ದೇಶನ ಮಾಡಿದ್ದಾರೆ. ಭೇಟಿ, ಪರಿಚಯ, ಪ್ರೇಮ, ಅಡಚಣೆ ಕ್ಲೈಮಾಕ್ಸ್ಲ್ಲಿ ಒಂದಾಗುವುದು ಎಲ್ಲಾ ಚಿತ್ರಗಳಲ್ಲಿ ಕಾಣಿಸುತ್ತದೆ. ಆದರೆ ಇದರಲ್ಲಿ ಪ್ರೀತಿಯನ್ನು ತಡೆಯಲು ಯಾರು ಇರುವುದಿಲ್ಲ. ಮನುಷ್ಯನ ಮನಸ್ಸಿನಲ್ಲಿ ಎಷ್ಟೋ ವಿಷಯಗಳು ಇರಲಿದ್ದು, ಅದರಲ್ಲೂ ಪ್ರೀತಿ ಅಂತ ಬಂದಾಗ ತುಸು ಹೆಚ್ಚು ಇರುತ್ತದೆ. ಈ ಸಿನಿಮಾದಲ್ಲಿ ಪ್ರೇಮಿಗಳ ಅಭಿಪ್ರಾಯ, ಆಲೋಚನೆ, ಭಾವನೆಗಳು ದ್ವೇಷಿಸುವಂತೆ ....
ಹಳ್ಳಿ ಸೊಗಡಿನ ಕಥನ ‘ವೀರಾಧಿವೀರ’ ಚಿತ್ರವು ಡಾ.ವಿಷ್ಣುವರ್ಧನ್ ಅಭಿನಯದಲ್ಲಿ ಬಿಡುಗಡೆಯಾಗಿತ್ತು. ಕಟ್ ಮಾಡಿದರೆ ಅದೇ ಹೆಸರಿನಲ್ಲಿ ಚಿತ್ರವೊಂದು ಸಿದ್ದಗೊಂಡಿದೆ. ನಿರ್ಮಾಪಕ ಮತ್ತು ಸಿನಿಮಾದ ನಾಯಕ ವಿಷ್ಣುವರ್ಧನ್ ಅಭಿಮಾನಿಯಾಗಿದ್ದರಿಂದ ಇದೇ ಹೆಸರನ್ನು ಇಡಲಾಗಿದೆಯಂತೆ. ಹಳ್ಳಿ ಸೊಗಡು ಕತೆಯಲ್ಲಿ ಕಥಾನಾಯಕ ಸಣ್ಣ ಪುಟ್ಟ ಕಳ್ಳತನ ಮಾಡಿಕೊಂಡಿರುತ್ತಾನೆ. ನಂತರ ಆತನ ಹೃದಯವನ್ನು ಹುಡುಗಿಯೊಬ್ಬಳು ಕದಿಯುತ್ತಾಳೆ. ಅವಳನ್ನು ಒಲಿಸಿಕೊಳ್ಳಲು ಯಾವ ರೀತಿ ಹೋರಾಟ ಮಾಡುತ್ತಾನೆ. ಕ್ಲೈಮಾಕ್ಸ್ದಲ್ಲಿ ಆಕೆ ಸಿಗದಿದ್ದಾಗ, ಎಲ್ಲವನ್ನು ತ್ಯಜಿಸಿ ಹೇಗೆ ಅಘೋರಿಯಾಗುತ್ತಾನೆ ಎಂಬುದು ಒಂದು ಏಳೆಯ ಸಾರಾಂಶವಾಗಿದೆ. ....
ರಾಮಮೂರ್ತಿ ಕ್ಷಮೆ ಕೇಳಿದ ಮಹೇಶ್ಕುಮಾರ್
ಅನಿವಾಸಿ ಭಾರತಿಯರ ಮಹಿರ ಹೊರ ದೇಶದಲ್ಲಿರುವ ಕನ್ನಡಿಗರು ಭಾಷೆಯ ಅಭಿಮಾನದ ಮೇಲೆ ಚಿತ್ರಗಳನ್ನು ನಿರ್ಮಾಣ ಮಾಡುತ್ತಿರುವುದು ಆರೋಗ್ಯಕರ ಬೆಳವಣಿಗೆಯಾಗಿದೆ. ಇದರ ಸಾಲಿಗೆ ‘ಮಹಿರ’ ಸಿನಿಮಾ ಸೇರ್ಪಡೆಯಾಗಿದೆ. ಇಂಜಿನಿಯರ್ ಮಹೇಶ್ಗೌಡ ಲಂಡನ್ದಲ್ಲಿ ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿ ಚಿತ್ರ ಮಾಡುವ ಬಯಕೆಯಿಂದ ಬಿಡುವಿನ ಸಮಯದಲ್ಲಿ ಗೆಳಯರೊಂದಿಗೆ ಚರ್ಚಿಸುತ್ತಾ ಕತೆ ಬರೆದು ಮುಗಿಸಿದ್ದಾರೆ. ಮುಂದೆ ಕೆಲಸಕ್ಕೆ ರಾಜಿನಾಮೆ ನೀಡಿ, ೨೦೧೩ರಲ್ಲಿ ತಾಯ್ನಾಡಿಗೆ ಬಂದು ಸುನಿಲ್ಕುಮಾರ್ದೇಸಾಯಿ ಬಳಿ ನಿರ್ದೇಶನದ ವಿಭಾಗಕ್ಕೆ ಸೇರಿಕೊಂಡಿದ್ದಾರೆ. ....
ಸದ್ಯದಲ್ಲೆ ಪುಟ ೧೦೯ ಆ ಕರಾಳ ರಾತ್ರಿ ಯಶಸ್ವಿ ತಂಡದಿಂದ ಸಿದ್ದಗೊಂಡಿರುವ ‘ಪುಟ ೧೦೯’ ಚಿತ್ರದ ಕತೆಯು ಥ್ರಿಲ್ಲರ್ನಿಂದ ಕೂಡಿದೆ. ಸಿನಿಮಾದಲ್ಲಿ ಹಲವು ವಿಶೇಷತೆಗಳು ಇರಲಿದೆ. ಚಿತ್ರದ ಅವಧಿ ೯೦ ನಿಮಿಷ. ಒಟ್ಟು ೨೫ ಸನ್ನಿವೇಶಗಳು. ಅದರಲ್ಲಿ ೨೪ ಸನ್ನಿವೇಶವು ೨೮ ನಿಮಿಷದಲ್ಲಿ ಕಾಣಿಸಿಕೊಂಡರೆ, ೧ ಸನ್ನಿವೇಶ ೬೨ ನಿಮಿಷಗಳು ತೆಗೆದುಕೊಳ್ಳುತ್ತದೆ. ಎರಡು ಪಾತ್ರಧಾರಿಗಳು ಮಾತನಾಡುತ್ತಾರೆ. ಹಾಗಂತ ನೋಡುಗರಿಗೆ ಬೋರ್ ಆಗದಂತೆ ಹಲವು ಷಾಟ್ಗಳನ್ನು ವಿಭಾಗಿಸಲಾಗಿದೆ. ಎರಡು ಹಾಡುಗಳಿಗೆ ಸಂಗೀತ ಒದಗಿಸಿರುವ ಗಣೇಶ್ನಾರಾಯಣ್ ಹಿನ್ನಲೆ ಸಂಗೀತಕ್ಕೆ ೫೪ ದಿವಸ ....
ಹೋಗಬೇಕಾದರೆ ಇನ್ನೊಬ್ಬರ ಕವಚ ಆಗಿರಿ - ಶಿವರಾಜ್ಕುಮಾರ್ ಸಾಕಷ್ಟು ವರ್ಷಗಳ ನಂತರ ರಿಮೇಕ್ ಚಿತ್ರದಲ್ಲಿ ಅಭಿನಯಿಸಿರುವ ಶಿವರಾಜ್ಕುಮಾರ್ ಅಭಿನಯದ ‘ಕವಚ’ ಚಿತ್ರದ ಟೀಸರ್ ರಮಣ ಮಹರ್ಷಿ ಅಂದರ ಆಶ್ರಮದಲ್ಲಿ ಬಿಡುಗಡೆಗೊಂಡಿತು. ನಾಯಕ ಅಂದನಾಗಿರುವುದರಿಂದ ನಿರ್ಮಾಪಕರ ಅಪೇಕ್ಷಯಂತೆ ಅಂದಮಕ್ಕಳು ತಂಡಕ್ಕೆ ಶುಭ ಹಾರೈಸುವದರೊಂದಿಗೆ ಸಿನಿಮಾದ ಪ್ರಚಾರವನ್ನು ಶುರು ಮಾಡಲಾಯಿತು. ಸರದಿಯಂತೆ ಮೈಕ್ ತೆಗೆದುಕೊಂಡ ನಿರ್ದೇಶಕ ಜಿವಿಆರ್.ವಾಸು ಪ್ರಥಮ ಪ್ರತಿ ಸಿದ್ದಗೊಂಡಿದೆ. ಶಿವಣ್ಣ ಸರ್ ಹನ್ಮಾನ್ ಇದ್ದಂತೆ. ಎಲ್ಲಾ ಪಾತ್ರಕ್ಕೆ ಹೊಂದಿಕೊಳ್ಳುತ್ತಾರೆ. ....
ನಾಲ್ಕು ವರ್ಷದ ಟ್ಯೂಬ್ ಲೈಟ್ ಈಗ ಬೆಳಗುತ್ತಿದೆ ‘ಟ್ಯೂಬ್ ಲೈಟ್’ ಚಿತ್ರದ ಕಲಾವಿದರು, ತಂತ್ರಜ್ಘರು ತಮ್ಮದೇ ಕ್ಷೇತ್ರದಲ್ಲಿ ಬ್ಯುಸಿ ಇದ್ದಾರೆ. ಕತೆ ಬರೆದು ನಿರ್ದೇಶನ ಮಾಡಿರುವ ವೇಣುಗೋಪಾಲ್ ಹೇಳುವಂತೆ ಪ್ರಯಾಣದಲ್ಲಿ ಸಿನಿಮಾ ಸಾಗುವುದರಿಂದ ಹವಮಾನಕ್ಕೆ ಅನುಗುಣವಾಗಿ ಲಡಾಕ್, ಹಿಮಾಲಯ, ಶ್ರೀನಗರ, ಶಾರ್ದೂಲ ಸ್ಥಳಗಳಲ್ಲಿ ಎರಡು ಬಾರಿ ಚಿತ್ರೀಕರಣ ನಡೆಸಲಾದ ಕಾರಣ ತಡವಾಗಿದೆ. ನಾಲ್ಕು ಪಾತ್ರಗಳು ಕತೆಯನ್ನು ತೆಗೆದುಕೊಂಡು ಹೋಗುತ್ತದೆ. ಪ್ರತಿಯೊಬ್ಬರ ಜೀವನದಲ್ಲಿ ದಾರಿ ಇದ್ದೇ ಇರುತ್ತದೆ. ದಾರಿ ....
ಹೊಸಬರ ವಿನೂತನ ಶೀರ್ಷಿಕೆ ಸ್ಯಾಂಡಲ್ವುಡ್ನಲ್ಲಿ ನಾವು ಬಳಸುವ ಪದಗಳು ಶೀರ್ಷಿಕೆಗಳು ಆಗುತ್ತಿದೆ. ಅದರಂತೆ ‘ಸಾರ್ವಜನಿಕರಿಗೆ ಸುವರ್ಣಾವಕಾಶ’ ಚಿತ್ರದ ಮಹೂರ್ತ ಕಂಠೀರವ ಸ್ಟುಡಿಯೋದಲ್ಲಿ ಸರಳವಾಗಿ ನಡೆಯಿತು. ಸಿಂಪಲ್ಸುನಿ, ತೆಲುಗು ಚಿತ್ರಗಳಿಗೆ ಸಹಾಯಕ ನಿರ್ದೇಶನ ಮಾಡಿರುವ ಅನೂಪ್ರಾಮಸ್ವಾಮಿಕಶ್ಯಪ್ ಮಾತನಾಡಿ ಪ್ರಚಲಿತ ಯುಗದಲ್ಲಿ ಎಲ್ಲರೂ ಆಸೆ ಪಡುವ ವಸ್ತುವಿನ ಆಧಾರದ ಮೇಲೆ ಕಾಮಿಡಿ ಡ್ರಾಮ ಚಿತ್ರವು ಸಾಗುತ್ತದೆ. ಕತೆಯಲ್ಲಿ ನಾಯಕ ಆಕೆಯ ಸಲುವಾಗಿ ಏನು ಬೇಕಾದರೂ ಮಾಡಬಲ್ಲವನು. ಒಂದು ಸನ್ನಿವೇಶದಲ್ಲಿ ಸಿಕ್ಕಿಹಾಕಿಕೊಂಡಾಗ ಅವಘಡಗಳು ಬರುತ್ತದೆ. ಅದರಿಂದ ತಪ್ಪಿಸಿಕೊಂಡು ಹೊರಗೆ ಬರ್ತರಾ ....
ಬಿಡುಗಡೆಯಾದ ರಾಂಧವ ಟ್ರೈಲರ್ ಐತಿಹಾಸಿಕ ಆಕ್ಷನ್ ಚಿತ್ರ ‘ರಾಂಧವ’ ಟ್ರೈಲರ್ ಇತ್ತೀಚೆಗೆ ಕಲಾವಿದರ ಸಂಘದಲ್ಲಿ ಅನಾವರಣಗೊಂಡಿತು. ಟ್ರೈಲರ್ಗೆ ಚಾಲನೆ ನೀಡಿದ ಮಾಜಿ ಗೃಹ ಮಂತ್ರಿ ಹಾಗೂ ಶಾಸಕ ಆರ್.ಆಶೋಕ್ ಮಾತನಾಡಿ ಭುವನ್ ಕಷ್ಟಪಟ್ಟು ಮೇಲೆ ಬರುತ್ತಿದ್ದಾರೆ. ಛಾಯಗ್ರಹಣ ಮತ್ತು ಆಕ್ಷನ್ ದೃಶ್ಯಗಳು ಚೆನ್ನಾಗಿ ಮೂಡಿಬಂದಿದೆ. ಪ್ರೇಕ್ಷಕರು ಚಿತ್ರಮಂದಿರ ಮುಂದೆ ದೂಡ್ಡ ಸಾಲು ನಿಲ್ಲುವುದರ ಮೂಲಕ ಯಶಸ್ವಿಗೊಳಿಸಬೇಕೆಂದು ಕೋರಿದರು. ಚಂದನವನವು ಉತ್ತಮ ರೀತಿಯಲ್ಲಿ ಬೆಳೆಯುತ್ತಿದೆ. ಅದರಲ್ಲಿ ಭುವನ್ಗೆ ಒಳ್ಳೆಯದಾಗಲೆಂದು ಶುಭಹಾರೈಸಿದ್ದು ಚೆಲುವಿನ ....
ನಾಲ್ಕು ಭಾಷೆಯ ಭೈರವಗೀತಾ
ಟಗರು ಖ್ಯಾತಿ ಧನಂಜಯ್. ನಾಯಕಿ ಇರಾ ಅಭಿನಯದ ನಾಯಕತ್ವದ ‘ಭೈರವ ಗೀತ’ ಚಿತ್ರವು ನಾಲ್ಕು ಭಾಷೆಗಳಲ್ಲಿ ನಟಿಸಿದ್ದು, ಟ್ರೈಲರ್ ಇತ್ತೀಚೆಗೆ ಜಿಟಿ ಮಾಲ್ದಲ್ಲಿ ಬಿಡುಗಡೆ ಗೊಂಡಿತು. ಟಗರುಗಿಂತ ಕ್ರೂರವಾದ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ನಿರ್ದೇಶಕರ ಆದೇಶದಂತೆ ಲಿಪ್ಲಾಕ್ ದೃಶ್ಯದಲ್ಲಿ ನಟನೆ ಮಾಡಲಾಗಿದೆ. ಮೊದಲಬಾರಿ ಬೇರೆ ಭಾಷೆಯಲ್ಲಿ ಗುರುತಿಸಿಕೊಳ್ಳುತ್ತಿರುವುದು ಖುಷಿ ತಂದಿದೆ ಎಂದು ಧನಂಜಯ್ ಹೇಳಿದರು.
ಹತ್ತು ನಿಮಿಷದ ಚಿತ್ರ ತಮ್ಮ ಪ್ರತಿಭೆಯನ್ನು ತೋರ್ಪಡಿಸಲು ಕಿರುಚಿತ್ರ ಇಂದಿನ ಸಿನಿಮಾಸಕ್ತರಿಗೆ ಕಿರುಚಿತ್ರವು ವೇದಿಕೆಯಾಗಿದೆ. ಧೀರಜ್ ಎಂಬುವರು ‘ದಿ ಗಿಲ್ಟ್’ ಚಿತ್ರ ನಿರ್ದೇಶನ ಮಾಡುವುದರ ಜೊತೆಗೆ ಬೆಂದಕಾಳೂರು ಪಿಕ್ಚರ್ಸ್ ಮೂಲಕ ನಿರ್ಮಾಣ ಮಾಡಿದ್ದಾರೆ. ಪ್ರತಿಯೊಂದು ತೊಂದರೆಗೂ ಪರಿಹಾರ ಇರುತ್ತದೆ. ಆತ್ಮಹತ್ಯೆ ಒಂದೇ ಉತ್ತರವಾಗಿರುವುದಿಲ್ಲ. ಇದರದೆ ಕುರಿತ ಹತ್ತು ನಿಮಿಷದ ಕಿರುಚಿತ್ರಕ್ಕೆ ಹಿನ್ನಲೆ ಧ್ವನಿ ನೀಡಿರುವುದು ಉಗ್ರಂ ಶ್ರೀಮುರುಳಿ. ಹುಟ್ಟು ಎನ್ನುವುದಕ್ಕೆ ಅರ್ಥ ಇದೆ. ಅದರಂತೆ ಸಾವು ಕೂಡ ಕೆಲವು ಸಲ ಪ್ರತಿಷ್ಠೆಯಿಂದ ಆಕಸ್ಮಿಕವಾಗಿ ....
ನವಂಬರ್ ೨೯ಕ್ಕೆ ೨.೦೦ ರಜನಿಕಾಂತ್ ಅಭಿನಯದ ಅದ್ದೂರಿ ಚಿತ್ರ ‘೨.೦’ ಕೊನೆಗೂ ತಮಿಳು, ಹಿಂದಿ, ತೆಲುಗು ಭಾಷೆಯಲ್ಲಿ ೨ಡಿ,೩ಡಿ ಮತ್ತು ೪ಡಿ ವರ್ಷನ್ದಲ್ಲಿ ಸಿದ್ದಗೊಂಡಿದೆ. ಎರಡು ನಿಮಿಷದ ಟ್ರೈಲರ್ ಚೆನ್ನೈನ ಸತ್ಯಂ ಟಾಕೀಸಿನಲ್ಲಿ ಲೋಕಾರ್ಪಣೆಗೊಂಡಿತು. ನಿರ್ದೇಶಕ ಶಂಕರ್ ಹೇಳುವಂತೆ ಇಲ್ಲಿಯವರೆಗೂ ೩ಡಿ ಎಲ್ಲರಿಗೂ ತಿಳಿದಿದೆ. ಚಿತ್ರಮಂದಿರದಲ್ಲಿ ಎಲ್ಲಾ ಕಡೆಗಳಲ್ಲಿ ಸೌಂಡ್ ಸಿಸ್ಟಮ್ ಇರುತ್ತದೆ. ಆದರೆ ಈ ಚಿತ್ರದ ಸೌಂಡ್ ನೋಡುಗರ ಕಾಲುಗಳಿಗೆ ಶಬ್ದ ಬಂದಂತೆ ಭಾಸವಾಗುತ್ತದೆ. ಇದನ್ನೆ ೪ಡಿ ಅಂತ ಕರೆಯಲಾಗುತ್ತದೆ. ಇಡೀ ವಿಶ್ವದ ಸಿನಿಮಾ ಇತಿಹಾಸದಲ್ಲಿ ಇದೇ ಮೊದಲ ಪ್ರಯತ್ನವೆನ್ನಬಹುದಾಗಿದೆ. ರಜನಿ ಸರ್ ....
ಪೋಷಾಕು ಪ್ರಿಯರಿಗೆ ಮತ್ತೋಂದು ಎಫ್ಬಿಬಿ ಮಳಿಗೆ