Punyathgitheeru.Film Press Meet.

Monday, August 26, 2019

                          ದಾರಿ ಬಿಡಿ  ಪುಣ್ಯಾತ್‌ಗಿತ್ತೀರು ಬರುತ್ತಿದ್ದಾರೆ          ಹೆಣ್ ಮಕ್ಕಳೇ ಸ್ಟ್ರಾಂಗ್ ಗುರು ಎನ್ನುವಂತೆ ‘ಪುಣ್ಯಾತ್‌ಗಿತ್ತೀರು’ ಸಿನಿಮಾದಲ್ಲಿ ನಾಯಕರಹಿತ, ನಾಲ್ವರು ಹುಡುಗಿಯರು ಮಾಸ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ನೆಲ ಡೊಂಕಿದ್ರು ಕುಣಿತೀವಿ ಅಂತ ಅಡಿಬರಹದಲ್ಲಿ ಹೇಳಿಕೊಂಡಿದೆ.  ರಚನೆ, ನಿರ್ದೇಶನ ಮಾಡಿರುವುದು ರಾಜ್.ಬಿ.ಎನ್.  ಕತೆಯ ಕುರಿತು ಹೇಳುವುದಾದರೆ  ಪಿಜಿದಲ್ಲಿ ಉಳಿದುಕೊಂಡಿದ್ದ ನಾಲ್ವರು ಅನಾಥ ಹುಡುಗಿಯರು  ಮೋಸ ಮಾಡುತ್ತಾ ಜೀವನ ಸಾಗಿಸುತ್ತಿರುತ್ತಾರೆ. ಒಂದು ಘಟನೆ ನಡೆದಾಗ, ಅವರ ಗುಣಗಳು ಬದಲಾಗಿ ಸಮಾಜಕ್ಕೆ ಒಳ್ಳೆ ಕೆಲಸ ....

360

Read More...

Tamas.Film Pooja and Press Meet.

Monday, August 26, 2019

ಅಂದು  ತಮಸ್ಸು  ಇಂದು  ತಮಸ್           ಶಿವರಾಜ್‌ಕುಮಾರ್ ಅಭಿನಯದಲ್ಲಿ ‘ತಮಸ್ಸು’ ಚಿತ್ರವೊಂದು ತೆರೆಕಂಡು ಹಿಟ್ ಆಗಿತ್ತು.  ದಶಕಗಳ ನಂತರ ಈಗ ‘ತಮಸ್’ ಎನ್ನುವ ಸಿನಿಮಾ ಸೆಟ್ಟೇರಿದೆ.  ಎರಡು ಶೀರ್ಷಿಕೆಗೂ ಕತ್ತಲು ಅರ್ಥ ಕೊಡಲಿದ್ದು, ಹೊಸ ಚಿತ್ರದ ಪದ ಸಂಸ್ಕ್ರತದಲ್ಲಿ ಇದೆಯಂತೆ. ವಿಜಯಲಕ್ಷೀ ಮಂಜುನಾಥರೆಡ್ಡಿ ಕಾದಂಬರಿ ಆಧಾರಿತದಲ್ಲಿ  ತ್ರಿಕೋನ ಪ್ರೇಮಕತೆ ಇರುವುದು ವಿಶೇಷ. ಕುರುಡನೊಬ್ಬ ಅಂದರ ಆಶ್ರಮದಿಂದ ಸ್ವಾಬಲಂಬಿಯಾಗಿ ಬದುಕಲು ಹೊರಬರುತ್ತಾನೆ. ಸರ್ಕಾರವು ನೀಡುವ ಮಾಶಾಸನ ಜೊತೆಗೆ ತನ್ನಲ್ಲಿರುವ  ಸಾಹಿತ್ಯದ ಪ್ರತಿಭೆಯಿಂದ ಜೀವನ ನಡೆಸುತ್ತಾನೆ. ಚಿಕ್ಕಂದಿನಿಂದಲೂ ಇವನೊಂದಿಗೆ ಇರುವ ....

362

Read More...

Fan.Film Success Meet.

Monday, August 26, 2019

ಫ್ಯಾನ್‌ಗೆ  ಜನರು  ಅಭಿಮಾನಿಗಳಾದರು         ಅಭಿಮಾನಿಯ ಅಭಿಮಾನದ ಕತೆ ಅಂತ ಹೇಳಿಕೊಂಡಿರುವ ‘ಫ್ಯಾನ್’ ಚಿತ್ರಕ್ಕೆ ಎಲ್ಲಾ ಕಡೆಗಳಿಂದ ಪ್ರಶಂಸೆ ವ್ಯಕ್ತವಾಗಿದೆ. ಇದರ ಖುಷಿಯಲ್ಲೆ ತಂಡವು ನಾಲ್ಕು ದಿನಗಳ ನಂತರ ಚಿತ್ರದ ಬೆಳವಣಿಗೆಗಳ ಕುರಿತಂತೆ ಮಾತನಾಡಿಕೊಂಡಿತು. ನಿರ್ಮಾಪಕರ ಪರವಾಗಿ ಆಗಮಿಸಿದ್ದ  ಕಾರ್ಯಕಾರಿ ನಿರ್ಮಾಪಕ ರಾಜಮುಡಿದತ್ತ ಮಾತನಾಡಿ ಪ್ರಾರಂಭದಿಂದಲೇ ಒಳ್ಳೆ ಒಪನಿಂಗ್ ತೆಗೆದುಕೊಂಡಿದೆ. ಮಾದ್ಯಮದವರು ಉತ್ತಮ ವಿಮರ್ಶೆ ಬರೆದಿರುವುದರಿಂದ ಇದಕ್ಕೆಲ್ಲಾ ಕಾರಣವಾಗಿದೆ.  ನೆರೆಹಾವಳಿಗೆ ಸಹಾಯ ಮಾಡಲು ತಂಡವು ಯೋಜನೆ ಹಾಕಿಕೊಂಡಿದೆ. ಇದಕ್ಕಾಗಿ ಬ್ಯಾಂಕ್ ಖಾತೆಯನ್ನು ತೆರೆಯಲಾಗಿದೆ. ಕಷ್ಟದಲ್ಲಿರುವ ಜನರಿಗೆ ....

311

Read More...

Ellidde Illi Tanaka.Film Audio Rel.

Sunday, August 25, 2019

ತಾಯಂದಿರುಗಳಿಂದ ಹಾಡುಗಳ  ಅನಾವರಣ         ಹುಟ್ಟಿದ ತಕ್ಷಣ ಕಂದನ ಅಳು ಸಂಗೀತವಾಗಿರುತ್ತದೆ. ಇದಕ್ಕೆ ಕಾರಣರಾಗಿರುವುದು ತಂದೆ-ತಾಯಿ. ಅದಕ್ಕಾಗಿ ಕಲಾವಿದರು, ತಂತ್ರಜ್ಘರ ಅಮ್ಮಂದಿರು  ನಮ್ಮ ಚಿತ್ರದ ಲಿರಿಕಲ್ ಹಾಡುಗಳನ್ನು ಬಿಡುಗಡೆ ಮಾಡುವ ವಿನೂತನ ಪರಿಕಲ್ಪನೆ ಅಂತ ನಟ,ನಿರ್ಮಾಪಕ ಸೃಜನ್‌ಲೋಕೇಶ್ ತಮ್ಮದೆ  ಲೋಕೇಶ್ ಪ್ರೊಡಕ್ಷನ್ಸ್  ಮೊದಲ  ಕಾಣಿಕೆ ‘ಎಲ್ಲಿದ್ದೆ  ಇಲ್ಲಿ ತನಕ’ ಚಿತ್ರದ ಕಾರ್ಯಕ್ರಮದಲ್ಲಿ ಹೇಳುತ್ತಾ  ಮೈಕನ್ನು ಎಲ್ಲರಿಗೂ ಹಸ್ತಾಂತರಿಸಿದರು.        ಹೊರಗಡೆ ಟಾಕಿಂಗ್ ಸ್ಟಾರ್ ಅಂತ ಕರೆಸಿಕೊಂಡಿರುವ ಸೃಜನ್ ಮನೆಯಲ್ಲಿ ಮಿತಭಾಷಿ. ಅವನು ಎತ್ತರಕ್ಕೆ ಬೆಳೆಯಬೇಕೆಂದು ಯಜಮಾನರ ಆಸೆ ಇತ್ತು. ....

792

Read More...

Sugandi.Film Audio Rel.

Sunday, August 25, 2019

ಸುಗಂಧಮಯ  ಗೀತೆಗಳು

ಪ್ರಶಸ್ತಿ ವಿಜೇತ ನಿರ್ದೇಶಕ ಜಿ.ಮೂರ್ತಿಕತೆ,ಚಿತ್ರಕತೆ ಬರೆದುಆಕ್ಷನ್‌ಕಟ್ ಹೇಳಿರುವ ‘ಸುಗಂಧಿ’ ಹಾಡುಗಳು ಭಾನುವಾರದಂದು ನಿರ್ದೇಶಕರ ಶಾಲೆಯಆವರಣದಲ್ಲಿ ಬಿಡುಗಡೆಗೊಂಡಿತು. ತಾಯಿ ಪಾತ್ರ ನಿರ್ವಹಿಸಿರುವ ವಿನಯಾಪ್ರಸಾದ್ ಮಾತನಾಡಿಅಭಿರುಚಿಇರುವಚಿತ್ರವಾಗಿದೆ.ಮಗಳನ್ನು ಸಮಾಧಾನ ಪಡಿಸುವಒಂದುಗೀತೆ ನನಗಂತಲೇ ಬರೆಸಲಾಗಿದೆ. ಬಿಕ್ಕವಳಿದ್ದಾಗ ಶಿವರಾಮಕಾರಂತ ಅವರನ್ನು ನೋಡಿದ  ನೆನಪು. ಇಂದುಅವರುಜೀವನದಗಾಥೆಯಲ್ಲಿ ನಟಿಸಿರುವುದು ಸಂತಸತಂದಿದೆಎಂದರು.

1050

Read More...

Girki.Film Pooja and Press Meet.

Sunday, August 25, 2019

ಭಟ್ಟರ  ಶಿಷ್ಯನ  ಗಿರ್ಕಿ        ವಿಕಟಕವಿ, ನಿರ್ದೇಶಕ ಯೋಗರಾಜಭಟ್ಟರ ಕ್ಯಾಂಪಿನಿಂದ ಮತ್ತೋಬ್ಬ ಪ್ರತಿಭಾವಂತ ಹುಡುಗ ವೀರೇಶ್.ಪಿ.ಎಂ. ‘ಗಿರ್ಕಿ’ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.  ಕತೆಯು ಲವ್, ಕಾಮಿಡಿ, ಸೆಸ್ಪೆನ್ಸ್, ಥ್ರಿಲ್ಲರ್ ಇರಲಿದ್ದು,  ಇದರ ಮಧ್ಯೆ ಸುತ್ತುವುದರಿಂದ ಶೀರ್ಷಿಕೆ ಇದೇ ಸೂಕ್ತವಾಗಿದೆ ಅಂತ ಇದನ್ನೆ ಇಡಲಾಗಿದೆ. ಜೊತೆಗೊಂದು ಅರ್ಥಪೂರ್ಣ ಸಂದೇಶ ಹೇಳಿದ್ದು ಅದನ್ನು ಚಿತ್ರಮಂದಿರದಲ್ಲಿ ನೋಡಬೇಕು ಅಂತ ನಿರ್ದೆಶಕರು ಹೇಳುತ್ತಾರೆ.  ಹಾಸ್ಯ, ಪೋಷಕ ಪಾತ್ರಗಳಲ್ಲಿ  ಹೆಸರು ಮಾಡಿರುವ ತರಂಗವಿಶ್ವ ದಪ್ಪೆದಾರನಾಗಿ ವಜ್ರಮುನಿ ಹೆಸರಿನಲ್ಲಿ ಪ್ರಥಮ ಬಾರಿ ನಾಯಕನಾಗಿ ಬಡ್ತಿ ಪಡೆಯುತ್ತಿದ್ದಾರೆ.  ....

751

Read More...

Krishna Talkies.Film Press Meet.

Saturday, August 24, 2019

ಪತ್ರಕರ್ತನಾಗಿ  ಅಜಯ್‌ರಾವ್         ಲವರ್ ಬಾಯ್, ಆಕ್ಷನ್ ಹುಡುಗನಾಗಿದ್ದ  ಅಜಯ್‌ರಾವ್ ಮೊದಲ ಬಾರಿ ಪತ್ರಕರ್ತನಾಗಿ ‘ಕೃಷ್ಣ ಟಾಕೀಸ್’ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.  ೧೯೯೫ರಂದು ಲಕ್ನೋ ಚಿತ್ರಮಂದಿರದಲ್ಲಿ ನಡೆದ ನೈಜ ಘಟನೆ ಮತ್ತು ಕೃಷ್ಣ  ಸೀರೀಸ್‌ದಲ್ಲಿ ೫ನೇ ಚಿತ್ರವಾಗಿರುವುದು ವಿಶೇಷ. ಸಾಹಿತಿ,ನಿರ್ದೇಶಕ ಆನಂದಪ್ರಿಯ ಈ ಸಿನಿಮಾದ ಮೂಲಕ ವಿಜಯಾನಂದ್ ನಾಮಕರಣದೊಂದಿಗೆ ಆಕ್ಷನ್ ಕಟ್ ಹೇಳಿದ್ದಾರೆ. ಕಥನಾಯಕ ಇಲ್ಲಿನ ಒತ್ತಡಗಳಿಂದ ಬೇಸತ್ತು, ಸ್ವಲ್ಪ ದಿನಗಳ ಮಟ್ಟಿಗೆ ತನ್ನ ಹಳ್ಳಿಗೆ ಹೋಗುತ್ತಾನೆ. ಅಲ್ಲಿಗೆ ಹೋದಾಗ ಭ್ರಮೆ, ಸತ್ಯಾಂಶಗಳು ನೇರ, ಪರೋಕ್ಷವಾಗಿ ಸಂಬಂದ ಕಲ್ಪಿಸುತ್ತದೆ. ಸಾಮಾಜಿಕ ಕಳಕಳಿಯಿಂದ ಏನು ಎಂಬುದನ್ನು ....

762

Read More...

Kiss.Film Teaser Rel.

Friday, August 23, 2019

 ‘ಕಿಸ್’ ಟ್ರೇಲರ್ ಬಿಡುಗಡೆ ಮಾಡಿದರು ಯಶ್

ಅಂದು ಬಿ.ಜಿ.ಎಸ್. ಆಡಿಟೋರಿಯಮ್ಮಿನಲ್ಲಿ ಕಿಕ್ಕಿರಿದ ಜನ. ಅದರಲ್ಲೂ ಕಾಜೇಜು ವಿದ್ಯಾರ್ಥಿ ವಿದ್ಯಾರ್ಥಿನಿಯರೇ ತುಂಬಿದ್ದರು. ಅದು ‘ಕಿಸ್’ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭ. ಹೇಳಿ ಕೇಳಿ ‘ಕಿಸ್’ ಚಿತ್ರಕ್ಕೆ ತುಂಟ ತುಟಿಗಳ ಆಟೋಗ್ರಾಫ್ ಅನ್ನೋ ಅಡಿ ಬರಹವಿರುವುದರಿಂದ ಯುವ ಪೀಳಿಗೆಯನ್ನು ಅತಿಹೆಚ್ಚು ಸೆಳೆದುಕೊಂಡಿದೆ. ಇದರ ಜೊತೆಗೆ ಈ ಚಿತ್ರದ ಆಡಿಯೋ ಬಿಡುಗಡೆ ಮಾಡಲು ರಾಕಿಂಗ್ ಸ್ಟಾರ್ ಯಶ್ ಆಗಿಮಿಸಿದ್ದದ್ದು ಅಲ್ಲಿ ನೆರೆದಿದ್ದವರ ಪಾಲಿಗೆ ಸಂಭ್ರಮ ಹೆಚ್ಚಲು ಕಾರಣವಾಗಿತ್ತು.

820

Read More...

Badava Raskal.Film Pooja.

Friday, August 23, 2019

ಅಣ್ಣಾವ್ರ   ಸಂಭಾಷಣೆ  ಸಿನಿಮಾದ  ಶೀರ್ಷಿಕೆ           ವಿಲನ್,ಮೋಸಗಾರರಿಗೆ ‘ಬಡವ ರ‍್ಯಾಸ್ಕಲ್’ ಡೈಲಾಗ್‌ನ್ನು  ಡಾ.ರಾಜ್‌ಕುಮಾರ್ ಹೇಳುತ್ತಿದ್ದರು. ಇದು ಅಭಿಮಾನಿಗಳಿಗೆ ಖುಷಿ ತಂದುಕೊಟ್ಟಿತ್ತು.  ಈ ಪದದ ಪ್ರಸ್ತಾಪ  ಈಗ ಯಾಕೆ ಎಂಬ ಪ್ರಶ್ನೆ  ಮೂಡುವುದು ಸಹಜ. ವಿವರಗಳಿಗಾಗಿ ಮುಂದೆ ಓದುವುದು.  ಪ್ರಸ್ತುತ ಅದೇ ಹೆಸರಿನಲ್ಲಿ ಚಿತ್ರವೊಂದು ಸಿದ್ದಗೊಳ್ಳುತ್ತಿದೆ.  ಟಗರು ಚಿತ್ರದ ಮೂಲಕ ಡಾಲಿ ಎಂದೇ ಖ್ಯಾತರಾಗಿದ್ದ ಧನಂಜಯ್ ಸದ್ಯ ಒಂದಾದ ನಂತರ ಒಂದು ಸಿನಿಮಾಕ್ಕೆ ಸಹಿ ಮಾಡುತ್ತಿದ್ದಾರೆ. ಇವುಗಳ ಮಧ್ಯೆ ಇದನ್ನು ಒಪ್ಪಿಕೊಂಡಿದ್ದು ಅಲ್ಲದೆ ಡಾಲಿ ಪಿಕ್ಚರ‍್ಸ್ ಶುರುಮಾಡಿ ಇದರ ಮೂಲಕ ನಿರ್ಮಾಪಕನ ....

832

Read More...

Prarambha.Film Teaser Rel.

Friday, August 23, 2019

ದರ್ಶನ್  ಕಂಠದಿಂದ  ಪ್ರಾರಂಭಕ್ಕೆ  ಶುಭಾರಂಭ         ಹೊಸಬರು, ಗೆಳಯರ ಚಿತ್ರಕ್ಕೆ ಪ್ರೋತ್ಸಾಹ ಕೊಡುತ್ತಿರುವ ದರ್ಶನ್ ‘ಪ್ರಾರಂಭ’ ಚಿತ್ರದ ಟೀಸರ್‌ಗೆ ಧ್ವನಿ ನೀಡಿದ್ದಾರೆ.  ಪ್ರೀತಿಯಲ್ಲಿ ಅಪಜಯ ಕಂಡಾಗ  ಪ್ರೇಮಿಯಾದವನು ಏನು ಮಾಡುತ್ತಾನೆ. ಎಲ್ಲರ ಮಧ್ಯದಲ್ಲಿ ಎಂತಹ ಘಟನೆಗಳು ನಡೆಯುತ್ತವೆ. ತಪ್ಪುಗಳನ್ನು ಸರಿಪಡಿಸುವ ಸನ್ನಿವೇಶಗಳು ಇರುತ್ತದಂತೆ. ಅದಕ್ಕಾಗಿ ಕೆಟ್ಟ ರೂಢಿಯನ್ನು ತೋರಿಸಿ, ನಂತರ ಒಳ್ಳೇದನ್ನು ಹೇಳುವ ಪ್ರಯತ್ನ ಮಾಡಲಾಗಿದೆ. ಇದೆಲ್ಲಕೂ ಪೂರಕ ಎನ್ನುವಂತೆ ಬದುಕು ಶುರುವಾಗಿದೆ ಅಂತ ಇಂಗ್ಲೀಷ್‌ದಲ್ಲಿ ಅಡಬರಹವಿದೆ. ಮನೋರಂಜನ್‌ರವಿಚಂದ್ರನ್  ಮೂರನೇ ಚಿತ್ರದಲ್ಲಿ ಕುಂಚಕಲಾವಿದ ....

763

Read More...

Karmanye Vadhikaraste.Movie Teaser Rel.

Tuesday, August 20, 2019

ಕೃಷ್ಣನ  ನುಡಿ  ಸಿನಿಮಾದ  ಶೀರ್ಷಿಕೆ         ಕೆಲವು ಚಿತ್ರಗಳು ಕಥೆಯ ಮೂಲಕ ಗಮನ ಸೆಳೆದರೆ ಮತ್ತೆ ಹಲವು ಸಿನಿಮಾಗಳು  ಶೀರ್ಷಿಕೆಯ ಮೂಲಕವೇ ಪ್ರೇಕ್ಷಕರನ್ನು ತಮ್ಮತ್ತ ಸೆಳಯುತ್ತದೆ. ಆ ಸಾಲಿಗೆ  ‘ಕರ್ಮಣ್ಯೇ ವಾಧಿಕಾರಸ್ತೇ’  ಚಿತ್ರ ಸೇರ್ಪಡೆಯಾಗಿದೆ.  ಮಹಾಭಾರತದಲ್ಲಿ ಕೃಷ್ಣ ಹೇಳಿದ ನುಡಿಯು ಟೈಟಲ್ ಆಗಿದೆ.  ಹೆಸರು ಕೇಳಲು ಇಂಪಾಗಿದೆ, ಅರ್ಥಗರ್ಭಿತವು ಇದೆ. ಎಲ್ಲಕ್ಕೂ ಮಿಗಿಲಾದ ಸಾರ್ಥಕತೆಯ ಭಾವವಿದೆ. ಹಾಗಂತ ಇದು ಪೌರಾಣಿಕ ಚಿತ್ರಕ್ಕೆ ಸಂಬಂದಿಸಿಲ್ಲ. ಕತೆಯು ೧೮೫೦ರ ಕಾಲಘಟ್ಟದಿಂದ  ಪ್ರಸಕ್ತ ಮಾಡ್ರರ್ನ್ ಲೋಕಕ್ಕೆ ಹೊಂದಿಕೆಯಾಗುವಂತೆ ಮಾಡಲಾಗಿದೆ.   ಒಂದು ಘಟ್ಟದಲ್ಲಿ ಬೌದ್ದ  ಜನಾಂಗದ ಸನ್ನಿವೇಶ ....

1079

Read More...

Devaru Bekagiddaare.Film Press Meet.

Tuesday, August 20, 2019

ವಿನೂತನ  ಚಿತ್ರ  ದೇವರು  ಬೇಕಾಗಿದ್ದಾರೆ         ಚಾಲಕರು, ಟೈಲರ‍್ಸ್ ಬೇಕಾಗಿದ್ದಾರೆ ಎಂದು ಅಂಗಡಿ, ಕಂಪನಿ ಮುಂದೆ ಬೋರ್ಡ್ ಹಾಕಿರುತ್ತಾರೆ. ಇಲ್ಲೋಂದು ಹೊಸಬರ ತಂಡವೊಂದು ‘ದೇವರು ಬೇಕಾಗಿದ್ದಾರೆ’ ಎನ್ನುವ ಸಿನಿಮಾವನ್ನು ಸಿದ್ದಪಡಿಸಿದ್ದಾರೆ.  ರಸ್ತೆ ಅಪಘಾತದಲ್ಲಿ ತನ್ನ ಕುಟುಂಬದವರನ್ನು ಕಳೆದುಕೊಂಡ ಆರು ತಿಂಗಳ ಮಗು ಅಪ್ಪುವನ್ನು ಊರಿನ ಮುಖ್ಯಸ್ಥ ರಂಗಣ್ಣ ಸಾಕುತ್ತಾರೆ. ಆತನಿಗೆ ಬುದ್ದಿ ಬಂದಾಗ ತನ್ನ ತಂದೆ ತಾಯಿ ದೇವರ ಬಳಿ ಇದ್ದಾರೆಂದು ತಿಳಿದು ದೇವರನ್ನು ಹುಡುಕುತ್ತಾ ಹೊರಡುವ ಕತೆಯೇ ಒಂದು ಏಳೆಯ ಸಾರಾಂಶವಾಗಿದೆ. ಭಾವನೆಗಳ ಸಮೂಹದಲ್ಲಿ ಸನ್ನಿವೇಶಗಳು ಇರಲಿದೆ. ಕೈವಾರ, ಗುಡಿಬಂಡೆ, ಬಾಗೇಪಲ್ಲಿ, ....

864

Read More...

Tripura.Film Press Meet.

Monday, August 19, 2019

ಪರಾರಿ ವೀರ ಶೀರ್ಷಿಕೆ ತ್ರಿಪುರ  ಆಗಿದೆ          ಕೆಲವೊಂದು ಚಿತ್ರವು ಪ್ರಾರಂಭದಲ್ಲಿ ಇರಲಾದ ಶೀರ್ಷಿಕೆ ಮುಕ್ತ್ತಾಯದ ಹಂತಕ್ಕೆ ಬರುವ ಹೊತ್ತಿಗೆ ಬದಲಾವಣೆ ಗೊಳ್ಳುತ್ತದೆ. ಆ ಸಾಲಿಗೆ ‘ತ್ರಿಪುರ’ ಸೇರಿಕೊಂಡಿದೆ.  ತ್ರಿಪುರ ಸುಂದರಿ ೫೦೦ ವರ್ಷಗಳ ಹಿಂದೆ ಎರಡು ಸಾಮ್ರಾಜ್ಯದ ರಾಜರು ಈಕೆಗಾಗಿ ಹಪಿಸುವ, ಯುದ್ದ ಸಾರಿ ಸಾಮ್ರಾಜ್ಯ ಕಳೆದುಕೊಂಡ,  ಕಟ್ ಮಾಡಿದರೆ ಈಗಿನ ಮರ್ಡರ್ ಮಿಸ್ಟ್ರಿಯಲ್ಲಿ ನಿಧಿಯ ಸುತ್ತ ಹೋಗುವ   ಕತೆಯಾಗಿದೆ. ಇದಕ್ಕೆ ಪೂರಕವಾಗಿ ಆದ್ಯ ರಾಣಿಯ ಊರು ಎಂದು ಅಡಿಬರಹದಲ್ಲಿ ಹೇಳಲಾಗಿದೆ. ಕೆ.ಶಂಕರ್ ನಿರ್ದೇಶಕರಾಗಿ ಮೊದಲ ಅನುಭವ. ಗತಕಾಲದ ರಾಣಿ, ಪ್ರಚಲಿತ  ತನಿಖಾದಿಕಾರಿಯಾಗಿ ....

835

Read More...

Udumba.Film Press Meet.

Monday, August 19, 2019

                                        ಕಡಲ ತೀರದ ಕಥನ          ‘ಉಡುಂಬಾ’ ಪ್ರಾಣಿ ಹೆಸರಿನ  ಚಿತ್ರದ ನಾಯಕ ಯಾರ ತಂಟೆಗೂ ಹೋಗೋಲ್ಲ, ತನಗೆ ಅಡ್ಡಿ ಬಂದರೆ ಬಿಡುವುದಿಲ್ಲ ಎನ್ನುವ ಗುಣ ಆತನದ್ದು.  ಕತೆ ಬರೆದು ಮೊದಲಬಾರಿ  ನಿರ್ದೇಶನ ಮಾಡಿರುವ  ಶಿವರಾಜ್ ಚಿತ್ರವನ್ನು ಬಣ್ಣಿಸಿದ್ದು ಈ ರೀತಿ: ಅವನು ಹಠ ಹಿಡಿದು   ಉಡ+ಹುಂಬನಂತೆ ಕಾರ್ಯ ಸಾಧಿಸುತ್ತಾನೆ. ಅದಕ್ಕಾಗಿ ಇದೇ ಹೆಸರನ್ನು ಇಡಲಾಗಿದೆ. ಕಡಲ ತೀರದ ಮೀನು ಮಾರುವ ಜನಾಂಗದ ಬದುಕು ಬವಣೆಗಳನ್ನು ತೋರಿಸಲಾಗಿದೆ.  ಅಲ್ಲಿ ನಡೆಯುವ ಘಟನೆಗಳು, ಜೊತೆಗೊಂದು ಮಧುರವಾದ ಪ್ರೀತಿ ಹುಟ್ಟಿಕೊಂಡಾಗ ಸನ್ನಿವೇಶಗಳು  ತಿರುವು ....

961

Read More...

Ramarjuna.Film Trailor Rel.

Monday, August 19, 2019

                           ನಿರ್ದೇಶಕನ  ಸ್ಥಾನವನ್ನು ಅಲಂಕರಿಸಿದ ಅನೀಶ್‌ತೇಜಶ್ವರ್        ಚಂದನವನದಲ್ಲಿ ತೆರೆ ಮುಂದೆ ರಾರಾಜಿಸಿದ್ದ ನಾಯಕರು ಬಣ್ಣ ಹಚ್ಚುವುದರ ಜೊತೆಗೆ ನಿರ್ದೇಶನ ಮಾಡುತ್ತಿದ್ದಾರೆ.  ಮೊನ್ನೆ ತಾನೆ ನೀನಾಸಂಸತೀಶ್  ನಿರ್ದೇಶನಕ್ಕೆ ಧುಮುಕಿರುವುದು ಸುದ್ದಿಯಾಗಿತ್ತು. ಈಗ ‘ವಾಸು ನಾನು ಪಕ್ಕಾ ಕಮರ್ಷಿಯಲ್’ ಚಿತ್ರ ನಿರ್ಮಾಣ ಮಾಡಿರುವ  ನಾಯಕನಟ ಅನೀಶ್ ತೇಜಶ್ವರ್  ಚೂಚ್ಚಲಬಾರಿ ‘ರಾಮಾರ್ಜುನ’ ಚಿತ್ರಕ್ಕೆ  ಆಕ್ಷನ್ ಕಟ್ ಹೇಳುವುದರ ಜೊತೆಗೆ ನಾಯಕ ಹಾಗೂ ಎರಡನೇ ಬಾರಿ ಬಂಡವಾಳ ಹೂಡುತ್ತಿದ್ದಾರೆ.   ಸದ್ದಿಲ್ಲದೆ ಶೇಕಡ ೮೦ ರಷ್ಟು ಚಿತ್ತೀಕರಣ ಮುಗಿಸಿ ಒಂದು ಹಾಡು,  ....

874

Read More...

Pailwaan.Film Audio Rel.

Sunday, August 18, 2019

ಪೈಲ್ವಾನ್‌ಗೆ  ಪುನೀತ್‌ರಾಜ್‌ಕುಮಾರ್  ಶುಭ ಹಾರೈಕೆ          ರಾಜಕುಮಾರ ಶತದಿನೋತ್ಸವ ಕಾರ್ಯಕ್ರಮದಲ್ಲಿ ಸುದೀಪ್ ಆಗಮಿಸಿ ಪುನೀತ್‌ರಾಜ್‌ಕುಮಾರ್ ಡ್ಯಾನ್ಸ್ ಬಗ್ಗೆ ಮಾತನಾಡಿದ್ದರು. ಈಗ ‘ಪೈಲ್ವಾನ್’ ಚಿತ್ರದ ಧ್ವನಿಸಾಂದ್ರಿಕೆಯನ್ನು ಪುನೀತ್‌ರಾಜ್‌ಕುಮಾರ್ ಬಿಡುಗಡೆ ಮಾಡಿದರು. ನಂತರ ಮಾತನಾಡುತ್ತಾ  ಸುದೀಪ್ ನನ್ನ ಗೆಳೆಯ. ತುಂಬ ಖುಷಿಯಿಂದ ಚಿತ್ರರಂಗದ ಪ್ರೇಕ್ಷಕನಾಗಿ ಆಡಿಯೋ ಲಾಂಚ್ ಮಾಡುತ್ತಿದ್ದೇನೆ. ಹಾಡುಗಳು ಅದ್ಬುತವಾಗಿದೆ. ಚಿತ್ರವು ದೊಡ್ಡ ಮಟ್ಟದಲ್ಲಿ ಹಿಟ್ ಆಗಲಿ, ಅವಕಾಶ ಸಿಕ್ಕರೆ ಇಬ್ಬರೂ ಒಟ್ಟಿಗೆ ಸಿನಿಮಾ ಮಾಡುತ್ತವೆ ಎಂದರು.  ಇದಕ್ಕೆ ಪ್ರತಿಕ್ರಿಯಸಿದ ಸುದೀಪ್ ಅವರೊಂದಿಗೆ ....

826

Read More...

Ravi Bopanna.Film Shooting.

Sunday, August 18, 2019

ಕ್ರೇಜಿ-ಕಿಚ್ಚ  ಒಕ್ಕರೂಲ  ಮಾತುಗಳು

         ಅದೊಂದು ನ್ಯಾಯಲಯದ ಆವರಣ. ವಕೀಲರೊಬ್ಬರನ್ನು ನಾಲ್ವರು ಕಕ್ಷಿದಾರರು ಹಿಂಬಾಲಿಸುತ್ತಾರೆ. ನಂತರ ಎಲ್ಲರೂ ಒಳಗೆ ಹೋಗುವಲ್ಲಿಗೆ ಕಟ್ ಎಂದು ಬ್ರೇಕ್ ಅಂದಾಗ ಎಲ್ಲರೂ ನಿಟ್ಟಿಸಿರು ಬಿಡುತ್ತಾರೆ. ‘ರವಿ ಬೋಪಣ್ಣ’ ಚಿತ್ರಕ್ಕಾಗಿ ಸೆಂಟ್ರಲ್ ಕಾಲೇಜು ಆವರಣವು ಕೋರ್ಟ್ ಕಚೇರಿಯಾಗಿ ಮಾರ್ಪಾಡಾಗಿತ್ತು.  ವಕೀಲರಾಗಿ ಸುದೀಪ್, ಕಕ್ಷಿದಾರರಾಗಿ ಮೋಹನ್, ರಾಮಕೃಷ್ಣ, ರವಿಶಂಕರ್‌ಗೌಡ, ಲಕ್ಷಣ್ ಹಾಗೂ ಸದರಿ ದೃಶ್ಯಕ್ಕೆ  ಸಾರಥ್ಯ ವಹಿಸಿಕೊಂಡಿದ್ದು ನಿರ್ದೇಶಕ ರವಿಚಂದ್ರನ್. ನಂತರ ಎಲ್ಲರೂ ಮಾದ್ಯಮದ ಮುಂದೆ ಆಸೀನರಾದರು.

855

Read More...

Dilmaar.Film Pooja.

Sunday, August 18, 2019

ಗಣಪತಿ ಸನ್ನಿಧಿಯಲ್ಲಿ ‘ದಿಲ್‌ಮಾರ್’ ಚಿತ್ರಕ್ಕೆ ಚಾಲನೆ.

‘ಕೆ.ಜಿ.ಎಫ಼್’ ಚಿತ್ರಕ್ಕೆ ಸಂಭಾಷಣೆ ಬರೆದಿದ್ದ ಎಂ.ಚಂದ್ರಮೌಳಿ ಅವರ ಚೊಚ್ಚಲ ನಿರ್ದೇಶನ 

    ಶ್ರೀವಿಘ್ನೇಶ್ವರ ಸಿನಿಮಾಸ್ ಲಾಂಛನದಲ್ಲಿ ನಾಗರಾಜ್ ಭದ್ರಾವತಿ ಅವರು ನಿರ್ಮಿಸುತ್ತಿರುವ ‘ದಿಲ್‌ಮಾರ್‘ ಚಿತ್ರದ ಮುಹೂರ್ತ ಸಮಾರಂಭ ಮಹಾಲಕ್ಷ್ಮೀ ಲೇಔಟ್‌ನ ಗಣಪತಿ ದೇವಸ್ಥಾನದಲ್ಲಿ ಕಳೆದ ಭಾನುವಾರ ನೆರವೇರಿತು. ಚಿತ್ರದ ಮೊದಲ ಸನ್ನಿವೇಶಕ್ಕೆ ಲಹರಿ ಸಂಸ್ಥೆಯ ವೇಲು ಅವರು ಆರಂಭ ಫಲಕ ತೋರಿದರು. ಸಂಜೀವ್ ಕ್ಯಾಮೆರಾ ಚಾಲನೆ ಮಾಡಿದರು. ಮಹೇಶ್ ಕೆ ಈ ಚಿತ್ರದ ಸಹ ನಿರ್ಮಾಪಕರು.

960

Read More...

Dr.Vishnuvardhan Natakotsava 2019.Press Meet.

Saturday, August 17, 2019

ಡಾ.ವಿಷ್ಣುವರ್ಧನ್  ನಾಟಕೋತ್ಸವ            ಡಾ.ವಿಷ್ಣು ಸೇನಾ ಸಮಿತಿ ಇವರು ಪ್ರತಿ ವರ್ಷ ಸಾಹಸ ಸಿಂಹ ಹುಟ್ಟುಹಬ್ಬ ಸಲುವಾಗಿ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾರೆ. ಎರಡು ವರ್ಷಗಳ ಕೆಳಗೆ ದೆಹಲಿ, ಕಳೆದ ವರ್ಷ ಬೆಂಗಳೂರಿನಲ್ಲಿ  ನಡೆಸಿದ್ದರು.  ಚಿತ್ರರಂಗಕ್ಕೆ ಆಧಾರಸ್ತಂಭ ರಂಗಭೂಮಿ. ಅದಕ್ಕಾಗಿ  ಈ ಬಾರಿ ಪ್ರಪ್ರಥಮ ಎನ್ನುವಂತೆ ‘ಡಾ..ವಿಷ್ಣುವರ್ಧನ ನಾಟಕೋತ್ಸವ’  ಪರಿಕಲ್ಪನೆಯೊಂದಿಗೆ ಕರ್ನಾಟಕದ ವಿವಿಧ ಭಾಗಗಳಾದ ಮೈಸೂರು ಕರ್ನಾಟಕ, ಉತ್ತರ ಕರ್ನಾಟಕ, ಕರಾವಳಿ ಕರ್ನಾಟಕ, ಕಿತ್ತೂರು ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕದಿಂದ ತಲಾ ಒಂದೊಂದು  ನಾಟಕ, ಜೊತೆಗೆ ಯಜಮಾನ್ರ ಗೀತೆಗಳ ಸಂಗೀತ ಸಂಜೆ,  ....

301

Read More...

Mareyade.Kshamisu.Film Press Meet.

Friday, August 16, 2019

ಪ್ರೀತಿಯಲ್ಲಿ  ಒಳ್ಳೇದು  ಕೆಟ್ಟದ್ದು  ಇರುತ್ತದೆ          ಪ್ರೀತಿ ಎಂಬುದು ಕೇವಲ ಯವಜನಾಂಗಕ್ಕೆ ಮಾತ್ರ ಅನ್ವಯಿಸುವುದಿಲ್ಲ. ಪೋಷಕರಾದವರು ಮಕ್ಕಳ ಮೇಲೆ ಒಲವು ತೋರಿಸಬೇಕು. ಮಕ್ಕಳು ತಂದೆ ತಾಯಿರನ್ನು ಪ್ರೀತಿಸಬೇಕು ಎಂಬ ಸಂದೇಶ ಇರುವ ‘ಮರೆಯದೆ ಕ್ಷಮಿಸು’  ಅಡಿಬರಹದಲ್ಲಿ  ನೆನಪಾದರೆ ಅಂತ ಹೇಳಿಕೊಂಡಿರುವ ಹೊಸಬರ ಚಿತ್ರದಲ್ಲಿ ಇದನ್ನು ಹೇಳಲಾಗುತ್ತಿದೆ. ಪ್ರಸಕ್ತ ಸಮಾಜದಲ್ಲಿ ಲವ್ ಎಂಬುದು ಸಾಧಾರಾಣವಾಗುತ್ತಿದೆ. ಇದರಲ್ಲಿ ಒಳ್ಳೇದು, ಕೆಟ್ಟದ್ದು ಇರುತ್ತದೆ. ಬುದ್ದವಂತರಾದವರು ಯಾವುದನ್ನು ಆರಿಸಿಕೊಳ್ಳಬೇಕು. ಜೊತೆಗೆ ಸಮಾಜದ ಆಗುಹೋಗುಗಳು, ಇಲ್ಲಿ ನಡೆಯುವ ನೇರ ಘಟನೆಗಳನ್ನು ಚಿತ್ರಕತೆಗೆ ....

310

Read More...
Copyright@2018 Chitralahari | All Rights Reserved. Photo Journalist K.S. Mokshendra,