Kootigobba-3.Film Press Meet.

Wednesday, October 16, 2019

ಕೋಟಿಗೊಬ್ಬ ೩ ಚಿತ್ರೀಕರಣದಲ್ಲಿ ನಡೆದ ಘಟನೆಗೆ ನಿರ್ಮಾಪಕರ  ಸ್ಪಷ್ಟನೆ         ಸುದೀಪ್ ಅಭಿನಯದ ‘ಕೋಟಿಗೊಬ್ಬ ೩’ ಸಿನಿಮಾದ ಚಿತ್ರೀಕರಣದಲ್ಲಿ ನಡೆದ ಘಟನೆ ಕುರಿತಂತೆ  ವಾಹಿನಿ, ಪತ್ರಿಕೆಗಳಲ್ಲಿ  ಗೊಂದಲದ  ಸುದ್ದಿ  ಬಂದ ಕಾರಣ, ನಿರ್ಮಾಪಕ ಸೂರಪ್ಪಬಾಬು ಇದೆಲ್ಲಾದಕ್ಕೂ ಸ್ಪಷ್ಟವಾದ ಮಾಹಿತಿಗಳನ್ನು ನೀಡುತ್ತಾ ಹೋದರು. ಒಂದಷ್ಟು ಭಾಗದ ಚೇಸಿಂಗ್ ದೃಶ್ಯವನ್ನು ಪೋಲೇಂಡ್‌ದಲ್ಲಿ ಚಿತ್ರೀಕರಿಸಬೇಕಾಗಿತ್ತು. ಈ ನಿಟ್ಟಿನಲ್ಲಿ  ಹ್ಯಾರಿಸ್ ಮೂಲಕ ಬಾಂಬೆ ಮೂಲದ ಅಜಯ್‌ಪಾಲ್ ಹಾಗೂ ಸಂಜಯ್‌ಪಾಲ್ ಅವರ ಕಂಪೆನಿ ಪರಿಚಯವಾಯಿತು. ಇವರನ್ನು ಸಂಪರ್ಕಿಸಿ ಚಿತ್ರದ ಕುರಿತಂತೆ ಪೂರ್ಣ ಮಾಹಿತಿ ನೀಡಲಾಯಿತು. ನಮ್ಮ ಯೋಜನೆಯಂತೆ ....

887

Read More...

Siddi Seere.Film Press Meet.

Wednesday, October 16, 2019

ನೈಜ ಘಟನೆಗಳ ಸಿದ್ದಿ ಸೀರೆ          ಕನ್ನಡ ಚಿತ್ರಗಳು ಇತ್ತೀಚೆಗೆ ಬೇರೆ ರಾಜ್ಯಗಳಲ್ಲಿ ಪ್ರಶಸ್ತಿಗಳನ್ನು ಬಾಚಿಕೊಳ್ಳುತ್ತಿರುವುದು ಚಂದನವನಕ್ಕೆ ಸಂತಸ ತಂದಿದೆ.  ಆ ಸಾಲಿಗೆ ‘ಸಿದ್ದಿ ಸೀರೆ’ ಸೇರ್ಪಡೆಯಾಗುತ್ತದೆ.  ಸಿನಿಮಾವು ನ್ಯೂಯಾರ್ಕ್ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡು ಒಂಬತ್ತು ವಿಭಾಗದಲ್ಲಿ ಪ್ರಶಸ್ತಿಗೆ ಅರ್ಹವಾಗಿದೆ.  ದಲಿತ ಮಹಿಳೆಯೊಬ್ಬಳು ತನಗೆ ಸದ್ಗತಿ ದೊರಕಿಸುವ ಒಂದು ಸೀರೆಗಾಗಿ ಹೋರಾಟ ಮಾಡುವುದು ಒಂದು ಏಳಯ ಕತೆಯಾಗಿದೆ. ೯೦ರ ದಶಕದಲ್ಲಿ ಚಾಮರಾಜನಗರ ಬಳಿ ಇರುವ ಮಿರ್ಲೆ ಎಂಬ ಗ್ರಾಮದಲ್ಲಿ ನಡೆದಂತ ಸತ್ಯ ಘಟನೆ ಚಿತ್ರರೂಪಕ್ಕೆ ಬಂದಿದೆ.  ಆಗಿನ ಕಾಲದಲ್ಲಿ ಹಿರಿಯ ಮಹಿಳೆ ನಿಧನ ....

832

Read More...

Aahyaksha in America.Film Success Meet.

Wednesday, October 16, 2019

ಹದಿನೈದನೇ  ದಿನದ  ಖುಷಿಯಲ್ಲಿ  ಅಧ್ಯಕ್ಷ        ‘ಅಧ್ಯಕ್ಷ ಇನ್ ಅಮೇರಿಕಾ’ ಚಿತ್ರತಂಡವು ಮತ್ತೋಮ್ಮೆ ಖುಷಿಯನ್ನು ಹಂಚಿಕೊಳ್ಳಲು ಮಾದ್ಯಮದ ಮುಂದೆ ಹಾಜರಾಗಿತ್ತು. ಗ್ರ್ಯಾಂಡ್ ಹದಿನೈದನೇ ದಿನ ಎಂಬ ಪೋಸ್ಟರ್ ರಾರಾಜಿಸುತ್ತಿತ್ತು. ನಾಯಕ ಮತ್ತು ನಾಯಕಿ ವಾಹಿನಿಗೆ ಹೋಗಲು ಸಿದ್ದರಾಗಿದ್ದರಿಂದ ಎಲ್ಲರೂ ತುರಾತುರಿಯಲ್ಲಿ ಮಾತನಾಡಿದರು. ಮೈಕ್ ತೆಗೆದುಕೊಂಡ ಶರಣ್ ನಿಮ್ಮಿಂದ ನಾವುಗಳು ಇಲ್ಲಿಯ ತನಕ ಬಂದಿದ್ದೇವೆ. ಜನ ಇದ್ದರೆ ನಾವು. ನಿರ್ಮಾಪಕರು ಖರ್ಚು ಮಾಡಿ ಒಳ್ಳೆ ಚಿತ್ರ ನೀಡಿದ್ದಾರೆ. ಪೀಪಲ್ ಮೀಡಿಯಾ  ಫ್ಯಾಕ್ಟರಿ ವತಿಯಿಂದ ನಿರ್ಮಾಣವಾಗಿದ್ದ ಮೊದಲ ಸಿನಿಮಾಗೆ ಯಶಸ್ಸು ಸಿಕ್ಕಿದೆ ಎಂದರು.  ಎಲ್ಲೆ ಹೋದರೂ ಪ್ರತಿಕ್ರಿಯೆ ಚೆನ್ನಾಗಿ ಸಿಕ್ಕಿದೆ. ....

861

Read More...

Billgates.Film Audio Rel.

Tuesday, October 15, 2019

 ಬಿಲ್‌ಗೇಟ್ಸ್ ಹಾಡುಗಳ ಸಮಯ          ಮೈಕ್ರೋಸಾಫ್ಟ್ ಪಿತಾಮಹ ‘ಬಿಲ್‌ಗೇಟ್ಸ್’ ಎಲ್ಲರಿಗೂ ತಿಳಿದಿದೆ. ಸ್ಯಾಂಡಲ್‌ವುಡ್‌ದಲ್ಲಿ ಇದೇ ಹೆಸರಿನ ಚಿತ್ರವೊಂದು ಬಿಡುಗಡೆಗೆ ಸಿದ್ದವಾಗಿದೆ. ಹಾಗಂತ ಇದು ಅವರ ಕುರಿತಾದ ಕತೆ ಆಗಿರುವುದಿಲ್ಲ. ಹಳ್ಳಿಯಲ್ಲಿ ಪಾಂಡು-ಗಿರಿ ಆತ್ಮೀಯ ಸ್ನೇಹಿತರು. ಊರು ಮತ್ತು ಶಾಲೆಯಲ್ಲಿ ಎಂಟನೇ ತರಗತಿ ಓದುತ್ತಿರುವಾಗಲೇ  ತರಲೆ, ತುಂಟಾಟ  ಮಾಡುತ್ತಿರುತ್ತಾರೆ. ಒಮ್ಮೆ ಶಿಕ್ಷಕರು ಇವರ ಅವಾಂತರಗಳನ್ನು ಕಂಡು ಶಿಕ್ಷೆ ನೀಡಿ ಬುದ್ದಿವಾದ ಹೇಳುತ್ತಾ ಶೀರ್ಷಿಕೆ ಬಗ್ಗೆ ವಿವರಣೆ ಕೊಡುತ್ತಾರೆ. ಆವಾಗ ಇವರ ವಿಷಯ ಕೇಳಿ ತಾವು ಅವರಂತೆ ಆಗಬೇಕೆಂದು ಬೆಂಗಳೂರಿಗೆ ಬರುತ್ತಾರೆ. ಇಲ್ಲಿಗೆ ಬಂದಾಗ ಏನೇನು ನಡೆಯುತ್ತದೆ. ....

919

Read More...

Bharaate.Film Rel Press Meet.

Tuesday, October 15, 2019

ಅಚ್ಚರಿಗಳ ಗುಚ್ಚ ಭರ ಭರ ಭರಾಟೆ         ಶ್ರೀಮುರಳಿ ಇದ್ದ ಕಡೆ ಸಕರಾತ್ಮಕ ಕಂಪನ ಇರುತ್ತದೆ. ಇಡೀ ತಂಡವನ್ನು ನಾಯಕಂತೆ ನಡೆಸಿಕೊಂಡು ಹೋಗುತ್ತಾರೆ. ಹೀಗೆಲ್ಲಾ ಮಾತುಗಳಿಂದ ತಾರಾ ಅವರನ್ನು ಹೊಗಳುತ್ತಿರುವಾಗ ತಣ್ಣಗೆ ಕುಳಿತಿದ್ದ  ಶ್ರೀಮುರಳಿ ಮಾತ್ರ ಅಂಜಿಕೆಯಿಂದ ಸಣ್ಣದೊಂದು ನಗು ಚೆಲ್ಲಿದರು. ಇದು ಆಗಿದ್ದು ‘ಭರಾಟೆ’ ಚಿತ್ರದ ಬಿಡುಗಡೆಪೂರ್ವ ಸುದ್ದಿಗೋಷ್ಟಿಯ ಸಂದರ್ಭದಲ್ಲಿ. ಇದೇ ೧೮ರಂದು ಸುಮಾರು ೩೦೦ ಕೇಂದ್ರಗಳಲ್ಲಿ ಸಿನಿಮಾವು ಅಬ್ಬರಿಸಲಿದೆ. ಅದಕ್ಕಾಗಿ  ಚಿತ್ರತಂಡವು ಮಾದ್ಯಮದ ಮುಂದೆ ಬಂದು ಮಾತನಾಡಿತು.         ಸರದಿಯಂತೆ ಮೈಕ್ ತೆಗೆದುಕೊಂಡ ಸಾಯಿಕುಮಾರ್ ಇಲ್ಲಿಯವರೆಗೂ ಆಕ್ಷನ್, ....

833

Read More...

Star Kannadiga.Film Press Meet.

Tuesday, October 15, 2019

ಸ್ಟಾರ್ ಕನ್ನಡಿಗನಿಗೆ ಸಂಘಗಳಿಂದ ಪ್ರೋತ್ಸಾಹ         ಹೊಸಬರೇ ಸೇರಿಕೊಂಡು ‘ಸ್ಟಾರ್ ಕನ್ನಡಿಗ’ ಅಡಿಬರಹದಲ್ಲಿ ಬೋಲೋ ಕನ್ನಡಿಗಾ ಕೀ ಜೈ, ಇದು ಕನ್ನಡಿಗನ ಕಥೆ  ಎಂದು ಹೇಳಿಕೊಂಡರುವ  ಚಿತ್ರವನ್ನು ಸಿದ್ದಪಡಿಸಿದ್ದಾರೆ. ಸಿನಿಮಾದೊಳಗೊಂದು ಸಿನಿಮಾ ಕತೆ ಇರುವುದು ವಿಶೇಷ.  ಯುವಕರ ತಂಡವೊಂದು ಚಿತ್ರ ಮಾಡಲು ತಯಾರಿ ನಡೆಸುತ್ತಿರುವಾಗ, ದಾರಿಯಲ್ಲಿ ಹುಡುಗಿಯೊಬ್ಬಳು ಸಿಗುತ್ತಾಳೆ. ಇದರಿಂದ ಅವರ ಆಕಾಂಕ್ಷೆಗಳು ಬೇರೆ ಕಡೆಗೆ ವಾಲುತ್ತದೆ. ಅಂತಿಮವಾಗಿ ಪ್ರೀತಿ, ಬದುಕು ಇದರಲ್ಲಿ ಯಾವುದು ಗೆಲ್ಲುತ್ತೆ  ಎಂಬುದು ಒಂದು ಏಳೆಯ ಸಾರಾಂಶವಾಗಿದೆ.  ಪವರ್‌ಸ್ಟಾರ್, ಛಾಲೆಂಜಿಂಗ್ ಸ್ಟಾರ್, ರಾಕಿಂಗ್ ಸ್ಟಾರ್. ಎಲ್ಲಾ ಸ್ಟಾರ್ ....

876

Read More...

Muthu Kumara.Film Press Meet.

Monday, October 14, 2019

ಸಾವಯವ  ಕೃಷಿ  ಮತ್ತು  ಪ್ರೀತಿಯ  ಕಥನ         ಹಳ್ಳಿಯಲ್ಲಿ ನಡೆಯುವ ನವಿರಾದ ಪ್ರೇಮ ಕತೆ ಮತ್ತು ಸಾವಯವ ಕೃಷಿ ಕುರಿತಂತೆ ಅರಿವು ಮೂಡಿಸುವ ‘ಮುತ್ತುಕುಮಾರ’  ಚಿತ್ರವು ಬಿಡುಗಡೆಯ ಅಂಚಿನಲ್ಲಿದೆ. ನಮ್ಮೂರ ರಾಜಕುಮಾರನೆಂದು ಅಡಿಬರಹದಲ್ಲಿ ಹೇಳಿಕೊಂಡಿದೆ.  ಸಿನಿಮಾ ಕುರಿತು ಹೇಳುವುದಾದರೆ ಪ್ರೌಡ ವಯಸ್ಸಿನಲ್ಲಿರುವಾಗಲೇ ಇಬ್ಬರಿಗೂ ಪ್ರೀತಿ ಚಿಗುರುತ್ತದೆ. ಆಕೆ ಹಳ್ಳಿಯನ್ನು ಹಚ್ಚಹಸಿರಾಗಿಸಬೇಕು. ಸಾವಯವ ಕೃಷಿಯನ್ನು ಮಾಡಬೇಕು. ಯಾವುದೇ ರಸಾಯನಿಕವನ್ನು ಬೆರಸದೆ ಬೆಳೆಯನ್ನು ತೆಗೆಯಬೇಕೆಂಬ ಬಯಕೆಯಿಂದ ಉನ್ನತ ಶಿಕ್ಷಣಕ್ಕಾಗಿ ಪಟ್ಟಣಕ್ಕೆ ಬರುತ್ತಾಳೆ. ಆಕೆಯು ಬರುವವರೆಗೂ ಈತನು ಕಾಯುತ್ತಾನೆ. ....

847

Read More...

19 Age is Nonsense.Film Audio Rel.

Monday, October 14, 2019

೧೯ರ ವಯಸ್ಸು  ಹಿರಿಯರಿಗೆ  ನಾನ್ಸೆನ್ಸ್?         ಹೊಸಬರ ’೧೯ ಏಜ್ ಈಸ್ ನಾನ್ಸೆನ್ಸ್?’ ಚಿತ್ರವು ಸಿದ್ದಗೊಂಡಿದೆ. ಹತ್ತೋಂಬತ್ತರ ಹದಿಹರೆಯದ ವಯಸ್ಸಿನವರಿಗೆ ತಾವು ಏನು ಮಾಡಿದರೂ ಸರಿ ಅಂದುಕೊಳ್ಳುತ್ತಾರೆ.  ಪೋಷಕರಿಗೆ ಮಕ್ಕಳು ಮಾಡುವುದು ನಾನ್ಸೆನ್ಸ್  ಅನಿಸುತ್ತದೆ. ಗತಕಾಲದಲ್ಲಿ ಹೆಣ್ಣು ಮಕ್ಕಳು ಋತಿಮತಿ ಆಗುವ ಮುಂಚೆ ಮದುವೆ ಮಾಡುತ್ತಿದ್ದರು.  ಗಂಡು ಹೆಣ್ಣು ಎಂಬ ತಾರತಮ್ಯವಿತ್ತು.  ಈಗ ಕಾಲ ಬದಲಾಗಿದೆ. ವಯಸ್ಸು  ನೋಡಿಕೊಂಡು ಮುಂದಕ್ಕೆ ಹೆಜ್ಜೆ ಇಡುತ್ತಾರೆ. ಇಬ್ಬರು ಸರಿಸಮಾನರು.  ಹುಡುಗ ವಿಧುರನಾದರೆ ಮತ್ತೋಂದು ತಾಳಿ ಕಟ್ಟುವಾಗ, ವಿಧುವೆಗೆ ಯಾಕೆ ಈ ನಿರ್ಭಂದ?.  ತಂದೆ ತಾಯಿ ....

743

Read More...

Ranganayaki.Movie Audio Rel.

Monday, October 14, 2019

ಕನ್ನಡ ದಿನದಂದು ರಂಗನಾಯಕಿ ಬರ‍್ತಾರೆ      ಇಂಡಿಯನ್ ಪನೋರಮಾ  ಅಂತರಾಷ್ಟ್ರೀಯ ಫಿಲಿಂ ಸ್ಫರ್ಧೆ ೨೦೧೯ರಲ್ಲಿ ಮೊದಲಬಾರಿ ಕನ್ನಡ ಚಿತ್ರ ಪ್ರದರ್ಶನಕ್ಕೆ ಅರ್ಹವಾಗಿರುವುದು  ‘ರಂಗನಾಯಕಿ’  ಸಿನಿಮಾ. ಇದರಿಂದ ಚಂದನವನಕ್ಕೆ ಗೌರವ ಸಿಕ್ಕಂತೆ ಆಗಿದೆ. ಅಲ್ಲದೆ ಡಿಜಿಟಲ್ ವೇದಿಕೆಯಲ್ಲಿ ಗುರುತಿಸಿಕೊಳ್ಳುವುದರಿಂದ ನಿರ್ಮಾಪಕರಿಗೆ  ಹೆಚ್ಚಿನ ಅನುಕೂಲವಾಗುತ್ತದೆಂದು ರಚನೆ,ನಿರ್ದೇಶಕ ದಯಾಳ್‌ಪದ್ಮನಾಬನ್ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದರು.  ದೆಹಲಿಯಲ್ಲಿ ನಡೆದ ನಿರ್ಭಯ ಕೇಸ್‌ನಲ್ಲಿ ನ್ಯಾಯಲಯ ದುರಳರಿಗೆ ಶಿಕ್ಷಿ ವಿಧಿಸಿದ್ದರೂ, ಆಕೆಯ ಸಾವು ಭಾರಿ ಸುದ್ದಿಯಾಗಿತ್ತು. ಊಹಿಸುವಂತೆ ಆಕೆಯು ಬದುಕಿದ್ದರೆ ಯಾವ ....

375

Read More...

Andavada.Film Trailer Rel.

Monday, October 14, 2019

ಅಕ್ಟೋಬರ್ ೨೫ರಂದು ಅಂದವಾದ         ‘ಯು’ ಪ್ರಮಾಣಪತ್ರ ಪಡೆದುಕೊಂಡಿರುವ ‘ಅಂದವಾದ’ ಚಿತ್ರದ ಅಡಿಬರಹದಲ್ಲಿ ಕೇವಲ ಪ್ರೀತಿ ಮತ್ತು ಪ್ರೀತಿ ಎಂದು ಇಂಗ್ಲೀಷ್‌ದಲ್ಲಿ ಹೇಳಿಕೊಂಡಿದೆ. ಮಳೆ ಹಾಗೂ ಮಂಜಿನಲ್ಲಿ ಶೇಕಡ ೯೦ರಷ್ಟು ಚಿತ್ರೀಕರಣಗೊಂಡಿದೆ. ಇದೂವರೆಗೂ ಯಾರು ಕ್ಯಾಮಾರ ಇಡದ ಜಾಗದಲ್ಲಿ ಸೆರೆಹಿಡಿದಿರುವುದು ವಿಶೇಷ. ಇಲ್ಲಿವರೆಗೂ ತಿಳಿಸದ ಅರ್ಥಪೂರ್ಣ ಸಂದೇಶವಿದೆ. ವಾಹಿನಿಗಳಲ್ಲಿ ಬಿತ್ತರಗೊಂಡ  ಕೆಲವೊಂದು ಘಟನೆಗಳನ್ನು ಹೆಕ್ಕಿಕೊಂಡು ಅದನ್ನು ಚಿತ್ರರೂಪಕ್ಕೆ ತರಲಾಗಿದೆ. ಹುಡುಗ-ಹುಡುಗಿ ಹುಟ್ಟುತ್ತಾರೆ,ಸಾಯುತ್ತಾರೆ. ಇದರ ಮಧ್ಯೆ ಮಳೆಯಲ್ಲೇ ನಡೆಯುವ ಸುಂದರ ಪ್ರೇಮ ಕತೆ ಇದಾಗಿದೆ. ಪಾತ್ರಗಳು ಹಾಗೂ ....

356

Read More...

G Accademy.Inaguration.

Monday, October 14, 2019

ನಮ್ಮ ಉದ್ದೇಶ ತಪ್ಪು ದಾರಿಗೆ ಹೋಗಬಾರದು - ಶ್ರೀಮುರಳಿ         ಇಂದಿನ ಸಿನಿಮಾಸಕ್ತರಿಗೆ ತರಭೇತಿ ಎನ್ನುವುದು ಮುಖ್ಯವಾಗಿರುತ್ತದೆ. ಇದು ಯಾವಗಲೂ ಸಕರಾತ್ಮಕವಾಗಿ  ಕಂಪನ ಹೊಂದಿರಬೇಕೆಂದು  ಶ್ರೀಮುರಳಿ ಅಭಿಪ್ರಾಯಪಟ್ಟರು. ಅವರು  ನಿರ್ದೇಶಕ ಮತ್ತು ನಿರ್ಮಾಪಕ ಗುರುದೇಶಪಾಂಡೆ ಸಾರಥ್ಯದ ‘ಜಿ ಅಕಾಡಮಿ’ ಶಾಲೆಯನ್ನು ಉದ್ಗಾಟಿಸಿ ಮಾತನಾಡುತ್ತಿದ್ದರು. ಯಾವುದು ಸರಿ ಅದನ್ನು ಆಯ್ಕೆ ಮಾಡಿಕೊಳ್ಳಬೇಕು. ತಪ್ಪು ಅನ್ನುವುದನ್ನು ಮಾಡಬಾರದು. ನಮ್ಮ ಉದ್ದೇಶ ಪೋಷಕರಿಗೆ ಗೌರವ ಕೊಡಬೇಕು. ಅವರ ಮಾರ್ಗದರ್ಶನವನ್ನು ಪೂರ್ಣಗೊಳಿಸಿ, ಯಾವುದೇ ಅಡತಡೆ ಬಂದರೂ ಅದನ್ನು ಎದುರಿಸಿ ನಮ್ಮನ್ನು ನಾವಾಗಿ ....

364

Read More...

Krantipura.Film and Webseries Audio and Trir Rel.

Sunday, October 13, 2019

ಸಿನಿಮಾ ಶೈಲಿಯಲ್ಲಿ ‘ಕ್ರಾಂತಿಪುರ’ ಟ್ರೈಲರ್ ಬಿಡುಗಡೆ           ಒಂದು ಸಿನಿಮಾ ನಿರ್ಮಾಣ/ನಿರ್ದೇಶನ ಮಾಡಬೇಕೆಂದರೆ ಅದಕ್ಕೆ ತಕ್ಕಂತೆ ಸಿದ್ದತೆಗಳನ್ನು ಮಾಡಿಕೊಳ್ಳುವುದು ಮುಖ್ಯವಾಗಿರುತ್ತದೆ. ಕಿರುಚಿತ್ರಗಳನ್ನು ಮಾಡುವುದು ವೆಬ್ ಸಿರೀಸ್ ಮಾಡುವುದು ಇದರಲ್ಲಿ ಯಶಸ್ವಿಯಾದ ಮೇಲೆ ಸಿನಿಮಾ ಮಾಡಲು ಕೈಹಾಕಿದರೆ ಆ ಚಿತ್ರ ಯಶಸ್ವಿಯಾಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಭವಿಷ್ಯದಲ್ಲಿ ಹಲವಾರು ಚಲನಚಿತ್ರಗಳನ್ನು ನಿರ್ಮಿಸುವ ಉದ್ದೇಶ ಹೊಂದಿರುವ ಡಾ|| ಸಂಜಯಗೌಡ ಅದಕ್ಕೆ ಪೂರ್ವಭಾವಿಯಾಗಿ ಕ್ರಾಂತಿಪುರ ಎಂಬ ವೆಬ್ ಸಿರೀಸ್ ಒಂದನ್ನು ನಿರ್ಮಿಸಿದ್ದಾರೆ. ಆ ಚಿತ್ರದ ಟ್ರೈಲರ್ ಹಾಗೂ ಆಡಿಯೋ ಬಿಡುಗಡೆ ಕಾರ್ಯಕ್ರಮ ....

375

Read More...

GPS(8 Mins Short Movie).

Saturday, October 12, 2019

  ಮನಸ್ಸನ್ನು  ತಟ್ಟುವ  ಜಿಪಿಎಸ್        ಚಿತ್ರರಂಗಕ್ಕೆ ಬರುವವರಿಗೆ ಕಿರುಚಿತ್ರವು ವೇದಿಕೆಯಾಗುತ್ತಿದೆ. ಇದರಲ್ಲಿ ಗುರುತಿಸಿಕೊಂಡವರು ಸಿನಿಮಾ ಮಾಡಲು ಅವಕಾಶಗಳು ಸಿಗುತ್ತದೆ. ಅದರಂತೆ ಯುವಕರೇ ಸೇರಿಕೊಂಡು ‘ಜಿಪಿಎಸ್’ ಎನ್ನುವ ಹದಿನೆಂಟು ನಿಮಿಷದ ಚಿತ್ರವನ್ನು ಸಿದ್ದಪಡಿಸಿದ್ದಾರೆ. ಹಗಲು ರಾತ್ರಿ ಎನ್ನದೆ ದುಡಿಯುವ ಕ್ಯಾಬ್ ಚಾಲಕ ಮೂರು ದಿನದಿಂದ ಮನೆಗೆ ಹೋಗಿರುವುದಿಲ್ಲ.  ಜಿಪಿಎಸ್ (ಗ್ಲೋಬಲ್ ಪೊಸಿಷನಲ್ ಸಿಸ್ಟಮ್) ಬಳಸಿಕೊಂಡು ರಾತ್ರಿ ಹೊತ್ತಿನಲ್ಲಿ ಗ್ರಾಹಕರನ್ನು ಕರೆದುಕೊಂಡು ಹೋಗುತ್ತಿರುವ ಸಂದರ್ಭದಲ್ಲಿ ಪತ್ನಿ ಕರೆ ಮಾಡಿದಾಗ ಕೋಪದಿಂದ ಉತ್ತರ ನೀಡಿರುತ್ತಾನೆ. ಈ ಸಂದರ್ಭದಲ್ಲಿ ಮೊಬೈಲ್ ಬ್ಯಾಟರಿ ಕೊನೆ ಹಂತದಲ್ಲಿದ್ದು, ಆಫ್ ....

342

Read More...

Gantu Moote.Movie Press Meet.

Saturday, October 12, 2019

ಗಂಟುಮೂಟೆ ನಾಲ್ಕು ಭಾಷೆಗೆ ರಿಮೇಕ್            ಎಸ್‌ಎಸ್‌ಎಲ್‌ಸಿ ಓದುತ್ತಿರುವ ಹದಿನಾರರ ಹುಡುಗಿಯ ದೃಷ್ಟಿಕೋನದಲ್ಲಿ ಹೆಣೆದ ನವಿರಾದ, ನೈಜ ಹಾಗೇ ಅಷ್ಟೇ ತೀವ್ರತೆಯಿಂದ ಕೂಡಿದ ಭಾವದ ತುಡಿತಗಳ ಸಮ್ಮಿಲದಿಂದ ಕೂಡಿದ ಚಿತ್ರ ‘ಗಂಟುಮೂಟೆ’  ಪ್ರದರ್ಶನವಾದ ಕಡೆಗಳಲ್ಲಿ ಪ್ರಶಸ್ತಿಯನ್ನು ಬಾಚಿಕೊಂಡಿದೆ. ೨೦೧೯ರ ನ್ಯೂಯಾರ್ಕ್ ಇಂಡಿಯನ್ ಫಿಲಿಂ ಫಿಸ್ಟಿವಲ್‌ದಲ್ಲಿ ಉತ್ತಮ ಚಿತ್ರಕತೆ ಪಡೆದುಕೊಂಡ ಮೊದಲ ಕನ್ನಡ ಸಿನಿಮಾವಾಗಿದೆ. ಕೆನಡಾ, ಆಸ್ಟ್ರೇಲಿಯಾ, ಯುಎಸ್ ಇಟಲಿ ಮುಂತಾದ ದೇಶದ ಹಲವಾರು ಚಿತ್ರೋತ್ಸವಗಳಲ್ಲಿ ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ಸುದೀಪ್ ಟ್ವಿಟರ್ ಮೂಲಕ ಪ್ರೋತ್ಸಾಹ ಕೊಡುತ್ತಿದ್ದಾರೆ. ....

330

Read More...

G Academy.Press Meet.

Saturday, October 12, 2019

ಜಿ ಅಕಾಡಮಿ ಶಾಲೆಗೆ ಚಾಲನೆ         ಬಣ್ಣದ ಲೋಕ ಎಂತಹವರನ್ನು ಸೆಳಯುತ್ತದೆ ಎಂಬುದಕ್ಕೆ  ನಿರ್ಮಾಪಕರು, ನಿರ್ದೇಶಕರು, ಕಲಾವಿದರು, ತಂತ್ರಜ್ಘರು ಕಾಂಗ್ರೇಸ್ ಗಿಡದಂತೆ ಬರುತ್ತಿರುವುದು ಸಾಕ್ಷಿಯಾಗಿದೆ. ಇದರಲ್ಲಿ ಅನುಭವ, ತರಭೇತಿ ಪಡೆಯದೇ ನೇರ ಆಕಾಡಕ್ಕೆ ಇಳಿಯುತ್ತಿರುವುದರಿಂದ ಮೊದಲ ಯತ್ನದಲ್ಲೆ ಸೋಲನ್ನು ಕಾಣುತ್ತಾರೆ. ಅದರಲ್ಲೂ ನಟನೆ, ತಾಂತ್ರಿಕತೆಗೆ ಮೇಲಿನ ಎರಡು  ಅಂಶಗಳು ಅವಶ್ಯಕವಾಗಿರುತ್ತದೆ. ಬಿಜಾಪುರ ಜಿಲ್ಲೆ, ತಾಳಿಕೋಟೆ ಸಮೀಪ ಇರುವ ನಾಗೂರು ಗ್ರಾಮದ ಗುರುದೇಶಪಾಂಡೆ ಇಂತಹುದೆ ಕನಸನ್ನು ಹೊತ್ತುಕೊಂಡು ಗಾಂಧಿನಗರಕ್ಕೆ ಬಂದಿದ್ದಾರೆ. ನಂತರ ಡೈರಕ್ಷನ್ ಕೋರ್ಸ್ ಮುಗಿಸಿ ಒಂದಷ್ಟು ಚಿತ್ರಗಳಿಗೆ ಕಲಾ ....

356

Read More...

Syeraa.Film Success Meet.

Friday, October 11, 2019

ಸೈರಾ  ಕನ್ನಡ ಚಿತ್ರವನ್ನು  ನಮ್ಮವರು ಪ್ರೀತಿಸಿದರು - ಸುದೀಪ್         ಮೆಗಾಸ್ಟಾರ್ ಚಿರಂಜೀವಿ ಅಭಿನಯದ ‘ಸೈರಾ’ ಚಿತ್ರವು ಕನ್ನಡದಲ್ಲಿ ಡಬ್ಬಿಂಗ್ ಆಗಿ ಕಳೆದ ವಾರ ಬಿಡುಗಡೆಗೊಂಡಿತ್ತು.  ಎಲ್ಲಾ ಕಡೆಗಳಿಂದಲೂ ಒಳ್ಳೆಯ ಪ್ರತಿಕ್ರಿಯೆ, ಉತ್ತಮ ಗಳಿಕೆ ಕಂಡು ಬರುತ್ತಿರುವುದರಿಂದ ಒಂದಷ್ಟು ಮಾಹಿತಿ ನೀಡಲು ಸುದೀಪ್ ನಿರ್ದೇಶಕರೊಂದಿಗೆ ಮಾದ್ಯಮದವರನ್ನು  ಭೇಟಿ ಮಾಡಿದರು.  ಅವರು ಹೇಳುವಂತೆ ಚಿರಂಜೀವಿ ಅವರಂತಹ ದೊಡ್ಡ ನಟರ ಚಿತ್ರದಲ್ಲಿ ನಾನಿರುವುದೇ ನನಗೆ ಸಿಕ್ಕ ಗೌರವ.  ಕರ್ನಾಟಕದಲ್ಲಿ ಚಿತ್ರ ನೋಡಲು ಬರುವ ನೂರು ಮಂದಿಯಲ್ಲಿ ಇಪ್ಪತ್ತು ಮಂದಿ ನನಗಾಗಿ ಬಂದರೆ ಅದು ....

343

Read More...

Ranga Naayaka.Film Teaser Rel.

Tuesday, October 08, 2019

ಜಗ್ಗೇಶ್  ಈಗ  ರಂಗನಾಯಕ        ನಿರ್ದೇಶಕ ಗುರುಪ್ರಸಾದ್, ಜಗ್ಗೇಶ್ ಕಾಂಬಿನೇಶನ್‌ದಲ್ಲಿ ಮಠ,  ಎದ್ದೇಳು ಮಂಜುನಾಥ ಚಿತ್ರಗಳು ಬಿಡುಗಡೆಗೊಂಡು ಇಬ್ಬರಿಗೂ ಹೆಸರು ತಂದುಕೊಟ್ಟಿತ್ತು. ಹ್ಯಾಟ್ರಿಕ್ ಎನ್ನುವಂತೆ ಮೂರನೇ ಬಾರಿ ಇವರದೇ ಜುಗಲ್‌ಬಂದಿಯಲ್ಲಿ ‘ರಂಗನಾಯಕ’ ಸಿನಿಮಾವೊಂದು ಸೆಟ್ಟೇರುತ್ತಿದೆ. ವಾಗ್ಮಿ, ವಿನೂತನ ಎನ್ನುವ ನಿರ್ದೇಶಕರ ಬತ್ತಳಿಕೆಯಿಂದ ಮೂಡಿ ಬಂದ ತುಣುಕುಗಳು ಪ್ರದರ್ಶನಗೊಂಡಿತು.  ಯಕ್ಷಗಾನ ಕಲಾವಿದರು  ಕಾಣುವ  ಅದೇ ಧಾಟಿಯಲ್ಲಿ ಬರುವ ಸಾಲುಗಳಾದ ಕತೆ,ಚಿತ್ರಕತೆ, ಮಿಕ್ಕಲ್ಲವು ಸಿದ್ದಗೊಂಡಿಲ್ಲ. ಎಲ್ಲವನ್ನು ತಿಳಿಸುತ್ತೇವೆ. ಮುಂದಿನ  ವರ್ಷ ಸಿನಿಮಾ ತೋರಿಸುತ್ತೇವೆ ಎಂಬುದು ಕೇಳಿಬಂತು.  ....

852

Read More...

Adyaksha in America.Film Success Meet.

Sunday, October 06, 2019

            ಅಮೇರಿಕಾದ ಅಧ್ಯಕ್ಷ  ಫುಲ್ ಖುಷ್        ಶುಕ್ರವಾರ ತೆರೆಕಂಡ ‘ಅಧ್ಯಕ್ಷ ಇನ್ ಅಮೇರಿಕಾ’ ಚಿತ್ರವು ಕೋಟಿ ಕೋಟಿ ಗಳಿಕೆ ಬರುತ್ತಿರುವ ಕಾರಣ ಅನ್ನದಾತರು ಸಣ್ಣದೊಂಡು ಸಂತೋಷಕೂಟ ಏರ್ಪಾಟು ಮಾಡಿದ್ದರು. ನಿರ್ಮಾಪಕ ಟಿ.ಜಿ.ವಿಶ್ವಪ್ರಸಾದ್ ಮಾತನಾಡಿ ತೆಲುಗುದಲ್ಲಿ ಈ  ಮಟ್ಟದ ಪ್ರಶಂಸೆ ಬಂದಿರಲಿಲ್ಲ. ಕನ್ನಡದಲ್ಲಿ ಅಂದುಕೊಂಡಿದ್ದಕ್ಕಿಂತ ಹೆಚ್ಚಾಗಿ ಆಗಿದೆ. ಆದರೆ ಪೈರಸಿಯಿಂದ ತೊಂದರೆ ಆಗುತ್ತಿದೆ. ಹೈದರಬಾದ್ ತಂಡದವರು  ಸಾಮಾಜಿಕ ಜಾಲತಾಣದಲ್ಲಿ ಚಿತ್ರ ಬಂದ ತಕ್ಷಣ ತೆಗದುಹಾಕುತ್ತಿದ್ದಾರೆ. ಇಂತಹ ದುರಳರನ್ನು ಕಂಡುಹಿಡಿದು ಶಿಕ್ಷಿಸಬೇಕೆಂದು  ಕೋರಿದರು.  ಶರಣ್ ನಟನೆಗೆ ನಿರ್ದೇಶನ ಮಾಡಿದ್ದು ಯೋಗ, ಸಕ್ಸಸ್ ಕಂಡಿದ್ದು ....

862

Read More...

Elidde Llli Tanaka.Film Press Meet.

Sunday, October 06, 2019

            ಮಾತಿನ ಕಟ್ಟೆಯಲ್ಲಿ ಎಲ್ಲಿದ್ದೇ ಇಲ್ಲಿ ತನಕ         ಸೃಜನ್‌ಲೋಕೇಶ್ ನಿರ್ಮಾಣ, ನಾಯಕತ್ವದ ‘ಎಲ್ಲಿದ್ದೇ ಇಲ್ಲಿ ತನಕ’ ಚಿತ್ರದ ಬಿಡುಗಡೆಪೂರ್ವ ಸುದ್ದಿಗೋಷ್ಟಿಯಲ್ಲಿ ತಂಡವು ಸಾಕಷ್ಟು ವಿಷಯಗಳನ್ನು ಹಂಚಿಕೊಂಡಿತು. ಮೈಕ್ ತೆಗೆದುಕೊಂಡ ಟಾಕಿಂಗ್ ಸ್ಟಾರ್ ಹಣ ಹೂಡಿರುವುದಕ್ಕೆ ಚಿಂತೆ ಇಲ್ಲ.  ತೆರೆಗೆ ಬರುತ್ತಿರುವ ಕಾರಣ ದುಗುಡ ಶುರುವಾಗುತ್ತಿದೆ. ತಾತ ಸುಬ್ಬಯ್ಯ ನಾಯ್ಡು ಹೆಸರಿನಲ್ಲಿ ನೀಡುವ ಪ್ರಶಸ್ತಿ  ಪಡೆಯುವ ಬಯಕೆ ಇದೆ. ಅವರು ಕೊನೆಗಾಲದಲ್ಲಿ ಕಷ್ಟದಲ್ಲಿ ಇದ್ದರು, ಅಪ್ಪ ನಿರ್ಮಾಣ ಮಾಡುವಾಗ ರಕ್ತದೊತ್ತಡ ಹೆಚ್ಚಾಗಿತ್ತು ಎಂದು ತಿಳಿದಿದ್ದೆ. ಸಿನಿಮಾದಲ್ಲಿ ನಾಯಕಿ ಅಮ್ಮ, ಮತ್ತು ಹರಿಪ್ರಿಯಾ. ಛಾಯಾಗ್ರಾಹಕ ....

869

Read More...

Lungi.Film Press Meet.

Saturday, October 05, 2019

  ಅಕ್ಟೋಬರ್ ೧೧ಕ್ಕೆ ಲುಂಗಿ ದರ್ಶನ           ವಿದ್ಯಾವಂತ ಯುವಕನೊಬ್ಬ ವಿದೇಶದಲ್ಲಿ ಕೆಲಸ ಸಿಕ್ಕರೂ ಹೋಗದೆ, ತನ್ನ ನೆಲದಲ್ಲೇ ಏನಾದರೂ ಸಾಧನೆ ಮಾಡಬೇಕಂಬ ಹಂಬಲದಿಂದ ಬಟ್ಟೆ  ಉದ್ಯಮವನ್ನು ಶುರು ಮಾಡುತ್ತಾನೆ. ಅದುವೇ ‘ಲುಂಗಿ’ ಸಿನಿಮಾದ ಒನ್ ಲೈನ್ ಸ್ಟೋರಿ. ರೋಮಾಂಟಿಕ್ ಕಾಮಿಡಿ ಕತೆಯನ್ನು ಯುವಜನಾಂಗದವರಿಗೆ ಅಂತಲೇ ಹಣೆಯಲಾಗಿದೆ. ಕರಾವಳಿ ಸೊಗಡಿನ ಕತೆಯಾಗಿದ್ದರಿಂದ ಆ ಭಾಗದಲ್ಲೆ ಚಿತ್ರೀಕರಣ ನಡೆಸಲಾಗಿದೆ. ಅಲ್ಲಿನ ಸಂಸ್ಕ್ರತಿ, ಸೊಗಡು, ಸೊಬಗು ಹೇರಳವಾಗಿದೆ. ಅರ್ಜುನ್‌ಲುಯಿಸ್ ಮತ್ತು  ಅಕ್ಷಿತ್‌ಶೆಟ್ಟಿ ಜಂಟಿಯಾಗಿ ನಿರ್ದೇಶನ ಮಾಡಿದ್ದಾರೆ.  ಈ ಪೈಕಿ ಅರ್ಜುನ್ ಚಿತ್ರಕತೆ, ಸಂಭಾಷಣೆ ಜೊತೆಗೆ ಸಾಹಿತ್ಯ ....

890

Read More...
Copyright@2018 Chitralahari | All Rights Reserved. Photo Journalist K.S. Mokshendra,