Panchatantra.Success Meet.

Tuesday, April 02, 2019

ಮಂಡ್ಯಾ  ಫಲಿತಾಂಶಕ್ಕೆ  ಪಂಚತಂತ್ರ  ನೋಡಬೇಕು           ಮಂಡ್ಯಾ  ಇಂಡಿಯಾ ಅಂತ ಮಾತು, ಟೀಕೆಗಳು ಬರುತ್ತಿದ್ದು, ಚುನಾವಣಾ ಫಲಿತಾಂಶದ ಕಾವು ದಿನದಿಂದ ದಿನಕ್ಕೆ ತಾರಕಕ್ಕೆ ಏರುತ್ತಿದೆ. ಅದರ ಫಲಿತಾಂಶವನ್ನು ‘ಪಂಚತಂತ್ರ’ ಸಿನಿಮಾದಲ್ಲಿ ನೋಡಬಹುದು ಎಂಬುದಾಗಿ ಮಾಹಿತಿ  ಹರಡಿದೆ.  ಸದರಿ ವಿಷಯವನ್ನು  ನಿರ್ದೇಶಕ ಯೋಈಗರಾಜಭಟ್ಟರ  ಬಳಿ  ಪ್ರಸ್ತಾಪಿಸಿದಾಗ  ಅವರಿಂದ ಬಂದ ಉತ್ತರ ಹೀಗಿತ್ತು:           ಈ ಪಾಠಿ ಸುದ್ದಿಯನ್ನು  ಯಾರು ಹಬ್ಬಿಸಿದರೋ ಗೊತ್ತಿಲ್ಲ. ಚುನಾವಣೆಯಲ್ಲಿ  ಸ್ಪರ್ಧಿಸಿರುವ ಇಬ್ಬರ ಮೇಲೂ ಗೌರವವಿದೆ. ಉದ್ದೇಶಪೂರ್ವಕವಾಗಿ ದೃಶ್ಯಗಳನ್ನು  ಸೃಷ್ಟಿಸಿಲ್ಲ. ....

935

Read More...

Premier Padmini.Film Trailer Rel.

Monday, April 01, 2019

ಯುಗಾದಿಗೆ  ಪ್ರೀಮಿಯರ್  ಪದ್ಮಿನಿ ಟ್ರೈಲರ್            ಕಿರುತೆರೆ ಸ್ಟಾರ್ ನಿರ್ಮಾಪಕಿ ಶ್ರುತಿನಾಯ್ಡು ಮೊದಲಬಾರಿ ಹಿರಿತೆರೆಗೆ ನಿರ್ಮಾಣ ಮಾಡಿರುವ ‘ಪ್ರೀಮಿಯರ್ ಪದ್ಮಿನಿ’ ಚಿತ್ರವು ಇದೇ ೨೬ರಂದು ತೆರೆಗೆ ಬರಲಿದೆ.   ಕತೆ,ಚಿತ್ರಕತೆ,ಸಂಭಾಷಣೆ ಬರೆದು  ನಿರ್ದೇಶನ ಮಾಡಿರುವುದು ರಮೇಶ್‌ಇಂದಿರಾ.  ಸಿನಿಮಾದ ಕುರಿತು ಹೇಳುವುದಾದರೆ ಸಂಬಂದಗಳ ಮೇಲೆ ಬದುಕು ಸಾಗಲಿದ್ದು, ಎಲ್ಲರದು  ಬೇರೆ ಬೇರೆ ದಾರಿಯಲ್ಲಿ ಇರುತ್ತದೆ.  ಜೀವನವನ್ನು ಹಗುರವಾಗಿ ತೆಗೆದುಕೊಳ್ಳಬೇಕು. ಕಥನಾಯಕನ ಬಳಿ ಪ್ರೀಮಿಯರ್ ಪದ್ಮಿನಿ ಕಾರು ಇರುತ್ತದೆ.  ಸೆಂಟಿಮೆಂಟ್ ಸಲುವಾಗಿ ಹೊಸ ಕಾರನ್ನು  ಖರೀದಿಸದೆ ಅದರಲ್ಲೇ ಜೀವನ ....

908

Read More...

Jai Kesari Nandana.Film Audio Rel.

Monday, April 01, 2019

ಭಾವನೆ  ಭಾವೈಕ್ಯತೆ  ನಡುವಿನ  ಕಥನ         ಕಳೆದವಾರ ಟಪಿ ಕೈಲಾಸಂ ನಾಟಕವು  ಸಿನಿಮಾವಾಗುತ್ತಿರುವ ಬಗ್ಗೆ ಸುದ್ದಿಯಾಗಿತ್ತು.  ಈಗ ಉತ್ತರ ಕರ್ನಾಟಕ ಭಾಗದಲ್ಲಿ ಯಶಸ್ವಿ  ೬೦೦ ಪ್ರದರ್ಶನ ಕಂಡ ನಾಟಕವೊಂದು  ‘ಜೈ ಕೇಸರಿ ನಂದನ’ ಎನ್ನುವ ಹೆಸರಿನೊಂದಿಗೆ ಸದ್ದಿಲ್ಲದೆ ಚಿತ್ರೀಕರಣವನ್ನು  ಮುಗಿಸಿ ಜನರಿಗೆ ತೋರಿಸಲು ಸಿದ್ದತೆಗಳನ್ನು ಮಾಡಿಕೊಂಡಿದೆ.  ಸಬಿ ಬೋಲೋ ಜೈ ಶ್ರೀ ರಾಮ್ ಅಂತ ಅಡಿಬರಹದಲ್ಲಿ ಹೇಳಿಕೊಂಡಿದೆ.  ೧೯೮೭ರಲ್ಲಿ ನಡೆದ  ಸತ್ಯಕತೆಯನ್ನು ಆಧರಿಸಿದೆ. ಆ ಭಾಗದವರು ಧರ್ಮ ಮತ್ತು ಮೂಡನಂಬಿಕೆ ಮೇಲೆ ಬದುಕನ್ನು  ಸಾಗಿಸುತ್ತಿದ್ದಾರೆ. ಹಾಗಂತ ಹಿಂದೂ  ಮುಸ್ಲಿಂ  ನಡುವಿನ ದ್ವೇಷವನ್ನು ....

1025

Read More...

Londonalli Lambodara.Film Press Meet

Monday, April 01, 2019

  ಲಂಬೋದರನನ್ನು  ಕೈ ಹಿಡಿದ ಪ್ರೇಕ್ಷಕ ಮಹಾಪ್ರಭುಗಳು        ಕಳೆದ ವಾರ ಬಿಡುಗಡೆಯಾದ ‘ಲಂಡನ್‌ನಲ್ಲಿ ಲಂಬೋದರ’ ಹಾಸ್ಯ ಚಿತ್ರವು ಎಲ್ಲಾ ಕಡೆಗಳಿಂದಲೂ ಉತ್ತಮ ಪ್ರಶಂಸೆ ಪಡೆದುಕೊಂಡಿದೆ. ಲಂಡನ್‌ದಲ್ಲಿ ಇಲ್ಲಿಯವರೆಗೂ ೪೦೦ ಪ್ರದರ್ಶನ ಕಂಡಿದ್ದು, ಅಲ್ಲಿನ ಕನ್ನಡಿಗರು ಇಷ್ಟಪಟ್ಟಿದ್ದರಿಂದ ಹೆಚ್ಚಿನ ಕೇಂದ್ರಗಳಲ್ಲಿ  ಜನರಿಗೆ ತೋರಿಸಲು ಯೋಜನೆ ಹಾಕಿಕೊಂಡಿದ್ದಾರೆ. ಪತ್ರಿಕೆಗಳಲ್ಲಿ ಒಳ್ಳೆಯ ವಿಮರ್ಶೆ ಬಂದಿರುವ ಕಾರಣ ಚಿತ್ರಮಂದಿರದ ಗಳಿಕೆ ಹೆಚ್ಚಾಗುತ್ತಿದೆ ಎಂದು ಸಂಗೀತ ನಿರ್ದೇಶಕ ಪ್ರಣವ್ ಮಾದ್ಯಮದವರಲ್ಲಿ ವಿಷಯವನ್ನು ಹಂಚಿಕೊಂಡಿದ್ದಾರೆ.  ಮೈಸೂರು ಹಾಗೂ ಬೆಂಗಳೂರು ಟಾಕೀಸುಗಳಿಗೆ ಭೇಟಿ ....

839

Read More...

Payanigaru.Film Trailor Rel.

Monday, April 01, 2019

ಪಯಣದಲ್ಲಿ  ಸಂತಸ, ಸಮಸ್ಯೆ  ಬರುತ್ತೆ, ಹೋಗುತ್ತೆ          ಸಮಾನ ವಯಸ್ಸಿನವರು ಪ್ರಯಾಣ ಕೈಗೊಂಡರೆ ಅವರ ಅನುಭವಗಳು ಹೇಗಿರುತ್ತೇ? ಸಮಸ್ಯೆಗಳು, ಸುಖ ಇವೆಲ್ಲವುಗಳನ್ನು ‘ಪಯಣಿಗರು’ ಎನ್ನುವ  ಚಿತ್ರದಲ್ಲಿ ತೋರಿಸಲಾಗಿದೆ.  ಸಡಗರ, ಡೀಲ್‌ರಾಜ್ ನಿರ್ದೇಶನ ಮಾಡಿರುವ ರಾಜ್‌ಗೋಪಿ ಕತೆ ಬರೆದು ಮೂರನೇ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.  ಇವರು ಹೇಳುವಂತೆ ಪ್ರತಿಯೊಬ್ಬರ ಜೀವನದಲ್ಲಿ ಪಯಣ ಎನ್ನುವುದು ಇರುತ್ತದೆ.  ಅದು ಎಲ್ಲಿ, ಯಾಕೆ, ಹೇಗೆ ಮುಗಿಯುತ್ತದೆಂದು ನಿಖರವಾಗಿ   ವಿವರಿಸುವುದು ಕಷ್ಟವಾಗುತ್ತದೆ.  ಕತೆಯಲ್ಲಿ  ನಲವತ್ತು ದಾಟಿದ ಐದು ಮಂದಿ ಗೃಹಸ್ಥರು  ....

920

Read More...

Koogi Karedanallo Mahadeva.Film Audio Rel.

Monday, April 01, 2019

ಭಕ್ತಿ ಚಿತ್ರ  ಕೂಗಿ ಕರೆದೆನಲ್ಲೋ  ಮಾದೇವ         ಅಪರೂಪಕ್ಕೆ ಎನ್ನುವಂತೆ ಭಕ್ತಿ ಚಿತ್ರಗಳು ಬರುತ್ತಿದೆ. ಇದರ ಸಾಲಿಗೆ ‘ಕೂಗಿ ಕರೆದೆನಲ್ಲೋ ಮಾದೇವ’ ಸಿನಿಮಾ ಸೇರ್ಪಡೆಯಾಗಿದೆ.  ಕತೆ,ಚಿತ್ರಕತೆ, ಸಂಭಾಷಣೆ, ಸಾಹಿತ್ಯ ನಿರ್ದೇಶನ ಮಾಡಿರುವ ಎ.ನಟಆರಾಧ್ಯ ಒಮ್ಮೆ ಮಲೈ ಮಹದೇಶ್ವರ ಸ್ವಾಮಿ ದರ್ಶನ ಮಾಡಲು ಪಾದಾಯಾತ್ರೆ  ಕೈಗೊಂಡಿದ್ದಾರೆ.    ದಾರಿಯಲ್ಲಿ ನಿತ್ರಾಣರಾಗಿದ್ದ  ಭಕ್ತನಿಗೆ ದೇವರನ್ನು ಕೂಗಿ ಕರೆಯಿರಿ ತಮಗೆ ಶಕ್ತಿ ಬರುತ್ತದೆ ಆಗ ಸ್ವಾಮಿ ದರ್ಶನ ಮಾಡಬಹುದೆಂದು ಹೇಳುತ್ತಾರೆ.  ಆತನು ಕೂಗಿದಾಗ ಅರಿವಿಲ್ಲದಂತೆ ಬೆಟ್ಟ ಹತ್ತುತ್ತಾನೆ.  ಅದರಂತೆ ನಿರ್ದೇಶಕರು ತನಗೆ ಸಿನಿಮಾದಲ್ಲಿ ಕೆಲಸ ....

1412

Read More...

Ekalavya.Film Title Rel.

Sunday, March 31, 2019

ಏಕಲವ್ಯ  ಅಂದರು  ಜೋಗಿ ಪ್ರೇಮ್          ದಿ ವಿಲನ್ ನಂತರ ಜೋಗಿ ಪ್ರೇಮ್ ಯಾವ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ ಎಂಬುದಕ್ಕೆ ‘ಏಕಲವ್ಯ’ ಎಂಬ ಉತ್ತರ ಸಿಕ್ಕಿದೆ.  ಪ್ರಚಾರ ವೈಖರಿಯಲ್ಲಿ ಮೊದಲ ಸ್ಥಾನ ಪಡೆದಿರುವ ಅವರು  ಚಿತ್ರದ ಟೈಟಲ್ ಲಾಂಚ್‌ನ್ನು  ಯುಬಿ ಸಿಟಿಯಲ್ಲಿ ಹಮ್ಮಿಕೊಂಡಿದ್ದರು. ಹದಿನಾರನೇ ಮಹಡಿಯಲ್ಲಿ ಸೇರಿದ್ದ ಗಣ್ಯರ  ಸಮ್ಮುಖದಲ್ಲಿ ಯೋಗರಾಜಭಟ್ಟರು  ಶುಭವಾಗಲಿ ಎಂದಾಗ, ಎದುರಿಗಿದ್ದ ಪ್ರಸ್ಟೀಜ್ ಟವರ‍್ಸ್  ಕಡೆ   ಎಲ್ಲರು ಕತ್ತನ್ನು ಮೇಲಕ್ಕೆ ಹಾಕಿದಾಗ ಡಿಜಿಟಲ್ ಮಾದರಿಯಲ್ಲಿ ಏಕಲವ್ಯ ಶೀರ್ಷಿಕೆ ಕಾಣಿಸಿಕೊಂಡಿತು.          ಗ್ರಾಮೀಣ ಹಿನ್ನಲೆಯಲ್ಲಿ ಬಂದ ....

210

Read More...

White.Short Film

Saturday, March 30, 2019

ನೇತ್ರದಾನ  ಮಹಾದಾನ          ವರನಟ  ಡಾ.ರಾಜ್‌ಕುಮಾರ್ ಬದುಕಿದ್ದಾಗ ಎರಡು ಕಣ್ಣುಗಳನ್ನು ದಾನ ಮಾಡಲು ಒಪ್ಪಂದಕ್ಕೆ ಸಹಿ ಹಾಕಿ, ಅಂದರಿಗೆ ಬಾಳನ್ನು ನೀಡಿ ಎಂದು ಅಭಿಮಾನಿಗಳಿಗೆ ಕರೆ ನೀಡಿದ್ದರು.  ಇಂತಹುದೆ ಪರಿಕಲ್ಪನೆ ಹೊಂದಿರುವ ‘ವೈಟ್’ ಎನ್ನುವ ಐದು ನಿಮಿಷದ ಕಿರುಚಿತ್ರವನ್ನು ರಾಧಿಕಾಪಂಡಿತ್ ಲೋಕಾರ್ಪಣೆ ಮಾಡಿದರು.  ಅವರು ಮಾತನಾಡುತ್ತಾ  ಅಂದತ್ವ ಇರುವವರಿಗೆ ಕಣ್ಣುಗಳು ಅವಶ್ಯ ಇರುತ್ತದೆ. ಕಣ್ಣು ದಾನ ಮಾಡಿ ಎಂದು  ಅರಿವು ಮೂಡಿಸುವ ಶಾರ್ಟ್‌ಫಿಲ್ಮ್  ಚೆನ್ನಾಗಿ ಮೂಡಿಬಂದಿದೆ. ಪ್ರಿಯಾಮಣಿ ಸಂಭಾವನೆ ಪಡೆಯದೆ ನಟಿಸಿರುವುದು ಹೆಮ್ಮೆಯ ವಿಷಯ. ಅಮಿತಾಬ್‌ಬಚ್ಚನ್ ಕಂಠದಾನ ಮಾಡಿರುವುದು ಪ್ಲಸ್ ಪಾಯಿಂಟ್ . ಸುಂದರ ಸಂದೇಶವು ....

255

Read More...

Khanana.Film Trailor Rel.

Saturday, March 30, 2019

                     ಖನನ ಹಾಡುಗಳು ಹೊರಬಂತು         ಸೆಸ್ಪನ್ಸ್, ಥ್ರಿಲ್ಲರ್ ಕತೆ ಹೊಂದಿರುವ ಸಾಲಿಗೆ ‘ಖನನ’ ಅಡಿಬರಹದಲ್ಲಿ ಮರಣ ಶಾಸನ ಚಿತ್ರದ ಶೀರ್ಷಿಕೆಯನ್ನು   ಸಂಸ್ಕ್ರತ ಶಬ್ದಕೋಶದಿಂದ ಆಯ್ಕೆ ಮಾಡಿಕೊಂಡಿದ್ದು,  ಅಗೆಯುವುದು,  ಹೂಳುವುದು ಎಂಬರ್ಥ ಕೊಡುತ್ತದೆ. ಇದನ್ನು ಸಾಮಾನ್ಯವಾಗಿ ಅರಣ್ಯ  ಪ್ರದೇಶದಲ್ಲಿ ಬಳಸಲಾಗುತ್ತದೆ.  ಪ್ರತಿಯೊಬ್ಬರ ಜೀವನದಲ್ಲಿ  ಪ್ರತಿ ದಿವಸ ಅಗೆಯುವುದು  ಇದ್ದೇ ಇರುತ್ತದೆ.  ಅದರ ವಿರುದ್ದ ಹೋರಾಡಲು ಆಗುವುದಿಲ್ಲ ಎಂದರೆ ಬದುಕಲು ಕಷ್ಟವಾಗುತ್ತದೆ. ಮನುಷ್ಯನ ಮನಸ್ಸು ಕ್ಷಣ ಕ್ಷಣ ಬದಲಾವಣೆಗಳು ಆಗುತ್ತಾ ಹೋಗುತ್ತದೆ.  ಪ್ರಾಣಿಗಳಿಗೆ ಇರುವ ....

266

Read More...

Padde Huli.Film Press Meet.

Friday, March 29, 2019

ಪಡ್ಡೆಹುಲಿಯಲ್ಲಿ  ೧೦ ಹಾಡುಗಳು        ಶುರುವಿನಿಂದಲೂ ಪ್ರಚಾರದಲ್ಲಿ ಮೊದಲ ಪಂಕ್ತಿಯಲ್ಲಿರುವ ‘ಪಡ್ಡೆಹುಲಿ’ ಚಿತ್ರದ ಮ್ಯಾಶ್‌ಅಪ್ ಹಾಡುಗಳನ್ನು ಮಾದ್ಯಮದವರಿಗೆ ತೋರಿಸಿದ ನಂತರ, ಐದನೇ ಬಾರಿ ತಂಡವು ಮತ್ತಷ್ಟು ವಿಷಯಗಳನ್ನು  ಹಂಚಿಕೊಂಡಿತು.         ಕತೆ ಚೆನ್ನಾಗಿದ್ದರಿಂದ ನಿರ್ಮಾಣ ಮಾಡಲಾಯಿತು. ಮೂರೇ ದಿವಸ ಸೆಟ್‌ಗೆ ಹೋಗಿದ್ದು, ಶ್ರೇಯಸ್ ಫೈಟ್ ಮಾಡುವುದನ್ನು ನೋಡಿದಾಗ  ಅವರ ಮೇಲೆ ನಂಬಿಕೆ ಬಂತು. ಹೊಸಬ ಅನಿಸಲಿಲ್ಲ.  ಬ್ಯಾಲೆನ್ಸ್  ಅಂತ  ಹೇಳದೆ ನಿರ್ದೇಶಕರು ಕೇಳಿದ್ದನೆಲ್ಲಾ ನೀಡಿದ್ದೇನೆಂದು ಎಂ.ರಮೇಶ್‌ರೆಡ್ಡಿ  ಹೇಳಿದರು.       ಬಸವಣ್ಣ, ಜಿಪಿ.ರಾಜರತ್ನಂ, ಡಿವಿಜಿ, ನಾಗಾರ್ಜುನ, ....

273

Read More...

Jigari Dost.Film Shooting Press Meet.

Thursday, March 28, 2019

ಪ್ರೀತಿಗೂ ಮೀರಿದ್ದು ದೋಸ್ತಿ         ಹಳೆಯ ನಿರ್ಮಾಪಕರುಗಳ ಪೈಕಿ ಸದಾ ಚಿತ್ರಗಳನ್ನು ನಿರ್ಮಾಣ ಮಾಡುತ್ತಿರುವ ಬಿ.ಎನ್.ಗಂಗಾಧರ್ ಅವರ ನೂತನ ಚಿತ್ರ ‘ಜಿಗರಿ ದೋಸ್ತ್’  ಚಿತ್ರೀಕರಣ ಸದ್ಯ ಕನಕಪುರ ರಸ್ತೆ,  ವಡೇರಹಳ್ಳಿ ಬಳಿ ಇರುವ ಖೆಡ್ಡಾ ರೆಸಾರ್ಟ್‌ದಲ್ಲಿ ನಡೆಯುತ್ತಿದೆ.  ಸಿಲಕಾನ್ ಸಿಟಿ ಟ್ರಾಫಿಕ್‌ನಲ್ಲಿ  ೭೫ ನಿಮಿಷ ಪ್ರಯಾಣ ಮಾಡಿ ಮಾದ್ಯಮದವರು ಸೆಟ್‌ಗೆ ಭೇಟಿ ನೀಡಿದಾಗ ತಂಡವು  ಹಲವು ಮಾಹಿತಿಗಳನ್ನು ಹಂಚಿಕೊಂಡಿತು. ಮೋಹನ್, ನಿರ್ದೇಶಕ:  ದೋಸ್ತಿ ಅಂದರೆ ಏನು ಎಂಬುದನ್ನು ಹೇಳಹೊರಟಿದೆ. ನಮಗೆ  ಚಿಕ್ಕಮ್ಮ, ಮಾವ, ಅತ್ತೆ ಕೇಳದೆ ಜನುಮದಿಂದ ಬಂದಿರೋದು. ಸ್ನೇಹ ಎನ್ನುವುದನ್ನು ....

385

Read More...

Weekend.Film Audio Rel.

Wednesday, March 27, 2019

ಟೆಕ್ಕಿಗಳ  ಸರಸ, ವಿರಸ           ಇಂಜಿನಿಯರ್‌ಗಳನ್ನು  ಚಿಕ್ಕದಾಗಿ  ಟೆಕ್ಕಿಗಳು ಅಂತ ಕರೆಯುತ್ತಾರೆ. ಇವರ ಬದುಕು ನೀರಿನ ಮೇಲಿನ ಗುಳ್ಳೆಯಿದ್ದ  ಹಾಗೆ ಅಂತ ಹೇಳುವುದುಂಟು.  ‘ವೀಕೆಂಡ್’ ಎನ್ನುವ ಚಿತ್ರದ ಕತೆಯು ಸಂಪೂರ್ಣ ಇವರದೆ ಆಗಿರುತ್ತದೆ.  ರಚನೆ, ಚಿತ್ರಕತೆ, ಸಂಭಾಷಣೆ ಮತ್ತು ನಿರ್ದೇಶನ ಮಾಡಿರುವ ಶ್ರಿಂಗೇರಿಸುರೇಶ್  ಹೇಳುವಂತೆ ಇವರುಗಳು ಶುರುವಿನಲ್ಲೆ  ೫೦-೧ ಲಕ್ಷ  ವೇತನ ಪಡೆಯಲಿದ್ದು, ದುಡ್ಡಿನ  ಮಹತ್ವ ತಿಳಿದಿರುವುದಿಲ್ಲ.  ಸೋಮವಾರದಿಂದ ಶುಕ್ರವಾರದ ತನಕ ಕಷ್ಟಪಟ್ಟು ಕೆಲಸ ಮಾಡಿ, ಬಾಕಿ ಎರಡು ದಿನಗಳನ್ನು  ಸಾದ್ಯವಾದಷ್ಟು  ಭವಿಷ್ಯವನ್ನು  ಲೆಕ್ಕಿಸದೆ ಸುಖವನ್ನು ....

315

Read More...

Write Karnataka.Press Meet.

Tuesday, March 26, 2019

ಬರಹಗಾರರಿಗೆ  ಸುವರ್ಣಾವಕಾಶ          ಚಿತ್ರ ಮಾಡಲು ಕತೆಗಳ ವೈಕಲ್ಯ ಇದೆ ಎಂದು ನಿರ್ಮಾಪಕರು, ನಿರ್ದೇಶಕರು ಹೇಳುತ್ತಾ ಬಂದಿರುತ್ತಾರೆ. ಕೆಲವು ಪ್ರತಿಭೆಗಳಿಗೆ ಬರೆಯುವ ಕಲೆ ಇದ್ದರೂ ಎಲ್ಲಿಗೆ ಕೊಡುವುದೆಂಬ ದಾರಿ  ತಿಳಿದಿರುವುದಿಲ್ಲ. ಅದಕ್ಕಾಗಿಯೇ  ಸಿದ್ದಿ ಎಂಟರ್‌ಟೈನ್‌ಮೆಂಟ್ಸ್‌ರವರು ‘ರೈಟ್ ಕರ್ನಾಟಕ’  ಅಡಿಬರಹದಲ್ಲಿ ನಿಮ್ಮ ಕಥೆ ನಾವ್ ಕೇಳ್ತೀವಿ.. ಅಂತ ಹೇಳಿಕೊಂಡಿದ್ದು, ಹೊಸ ಬರಹಗಾರರಿಗೆ ವೇದಿಕೆ ಕಲ್ಪಸಿದೆ.  ಅದರನ್ವಯ  ಆಸಕ್ತಿವುಳ್ಳವರು ೨೦೦೦ ಪದಗಳ ಒಳಗೆ ಕನ್ನಡ ಅಥವಾ ಇಂಗ್ಲೀಷಿನಲ್ಲಿ ಮಾತ್ರ  ಯಾವ ರೀತಿಯಲ್ಲಾದರೂ  ಸ್ವಂತ ಕತೆ ಬರೆಯುವ ಅವಕಾಶ ಮಾಡಿಕೊಡಲಾಗಿದೆ.  ಅಪ್ಪಟ ಕತೆಯ ರೂಪದಲ್ಲಿ ಇರತಕ್ಕದ್ದು, ....

251

Read More...

Adisidaata.Film Pooja.

Monday, March 25, 2019

ಆಡಿಸಿದಾತದಲ್ಲಿ  ಪ್ರೇಮದ ಕಾಣಿಕೆ  ಹಾಡು          ಸಾರ್ವಕಾಲಿಕ ಗೀತೆ ‘ಬಾನಿಗೊಂಡು ಎಲ್ಲೆ ಎಲ್ಲಿದೆ’ ಹಾಡು ‘ಪ್ರೇಮದಕಾಣಿಕೆ’ ಚಿತ್ರದಲ್ಲಿ   ಡಾ.ರಾಜ್‌ಕುಮಾರ್  ಧ್ವನಿಯಲ್ಲಿ ಮೂಡಿಬಂದಿತ್ತು.  ಇದೇ  ಹಾಡನ್ನು  ‘ಆಡಿಸಿದಾತ’ ಚಿತ್ರದಲ್ಲಿ ಬಳಸಲು  ಸಂಗೀತ ನಿರ್ದೇಶಕ ಕದ್ರಿಮಣಿಕಾಂತ್ ಯೋಜನೆ ಹಾಕಿಕೊಂಡಿದ್ದಾರೆ. ನಾಯಕ ರಾಘವೇಂದ್ರರಾಜ್‌ಕುಮಾರ್ ೨೫ನೇ ಚಿತ್ರವಾಗಿದ್ದು, ಸದರಿ ಹಾಡಿನಲ್ಲಿ  ಮಾರುಕಟ್ಟೆಗೆ ಬಂದಿರುವ ದುಬಾರಿ ಕಾರನ್ನು  ತೋರಿಸಲಾಗುವುದು.  ಪ್ರತಿಯೊಬ್ಬರ ಜೀವನದಲ್ಲಿ ಶೀರ್ಷಿಕೆಯು ಅನ್ವಯವಾಗುತ್ತದೆ. ಹೊಸ ಕತೆ ಅಲ್ಲದಿದ್ದರೂ ನಿರೂಪಣೆಯಲ್ಲಿ ಹೊಸತನ ....

271

Read More...

Vajramukhi.Film Audio Rel.

Monday, March 25, 2019

ಹಾರರ್  ಕಥನ  ವಜ್ರಮುಖಿ           ಸಿಗಂದೂರು  ದೇವಿ ಕುರಿತ ದೇವರ ಚಿತ್ರ ನಿರ್ಮಾಣ ಮಾಡಿದ್ದ ಶಶಿಕುಮಾರ್.ಪಿ.ಎಮ್ ಈ ಬಾರಿ ದೆವ್ವದ ಸಿನಿಮಾ ‘ವಜ್ರಮುಖಿ’ಗೆ   ರಚನೆ,ಚಿತ್ರಕತೆ ಬರೆದು ಹಣ ಹೊಡಿದ್ದಾರೆ.  ಪ್ರಚಾರದ ಮೊದಲ  ಹಂತವಾಗಿ ಧ್ವನಿಸಾಂದ್ರಿಕೆ ಅನಾವರಣಗೊಂಡಿತು.  ಹಾರರ್,ಪ್ರೀತಿ ಮತ್ತು ತ್ರಿಕೋನಾತ್ಮಕ ಕತೆಯೆಂದು  ಬಣ್ಣಿಸಿಕೊಂಡ ನಿರ್ಮಾಪಕರು ಗೌಪ್ಯತೆಯನ್ನು ಕಾಪಾಡಿಕೊಂಡರು.  ರೋಡ್‌ರೋಮಿಯೋ ನಂತರ ಎರಡನೆ ಇನ್ನಿಂಗ್ಸ್ ಇದಾಗಿದೆ.  ಹಾರರ್ ಅಂದ ಮಾತ್ರಕ್ಕೆ ಯಾವಾಗಲೂ  ದೆವ್ವ ಕಾಣಿಸಿಕೊಳ್ಳುವುದಿಲ್ಲ. ಎಲ್ಲಿ ಬೇಕೋ ಅಷ್ಟು ಮಾತ್ರ ಬರುತ್ತದೆಂದು ಆಡ್ ಫಿಲಿಂ ಮೇಕರ್ ಪಾತ್ರ ಮಾಡಿರುವ ನಾಯಕ ....

266

Read More...

Hanigalu.Film Press Meet.

Monday, March 25, 2019

ಶಾಲೆಯ  ಹುಡುಗರ  ಹನಿಗಳು         ತರಭೇತಿ ಶಾಲೆಯಿಂದ ಹೊರಬರುವ ವಿದ್ಯಾರ್ಥಿಗಳು  ಪ್ರಯತ್ನ ಎನ್ನುವಂತೆ ಸಿನಿಮಾ ಮಾಡುವುದು ವಾಡಿಕೆಯಾಗಿದೆ.  ಅದರಂತೆ. ವಿಜಯ ಫಿಲಿಂ ಇನ್ಸಿಟ್ಯೂಟ್ ವಿದ್ಯಾರ್ಥಿಗಳಿಂದ ಸಿದ್ದಗೊಂಡಿರುವ ‘ಹನಿಗಳು’ ಚಿತ್ರದ ಅಡಿಬರಹದಲ್ಲಿ ಏನನ್ನು ಹೇಳಲು ಹೊರಟಿರುವೆ ಎಂದು ಹೇಳಿಕೊಂಡಿದೆ.  ತರಭೆತಿ ಪಡೆದುಕೊಂಡಿದ್ದು ಒಂದು,  ಚಿತ್ರದಲ್ಲಿ ಕೆಲಸ ಮಾಡಿದ್ದು ಮತ್ತೋಂದು ಎಂದು ತಂಡವು ಹೇಳಿಕೊಂಡಿದೆ.  ಹಳ್ಳಿ ಹುಡುಗನೊಬ್ಬ  ಬೆಂಗಳೂರಿಗೆ ಓದಲು ಬರುತ್ತಾನೆ.  ಇಲ್ಲಿನ ವಾತವರಣ, ಸಂಪರ್ಕದಿಂದ ಏನು ಆಗುತ್ತಾನೆ ಎಂಬುದನ್ನು ಪ್ರೀತಿ, ಹಾಸ್ಯ ಮೂಲಕ ತೋರಿಸಲಾಗಿದೆ.  ಹುಡುಗ ಹುಡುಗಿಯರನ್ನು ....

274

Read More...

Manaroopa.Film Press Meet.

Monday, March 25, 2019

ಮನರೂಪದಲ್ಲಿ  ಗುಮ್ಮಾ  ಏನ್ ಮಾಡ್ತಾನೆ ?        ೧೯೮೧ ರಿಂದ ೨೦೦೦ರ  ಅವಧಿಯಲ್ಲಿ ಹುಟ್ಟಿದ ಮನುಷ್ಯರ ಮನಸ್ಸಿನ ವಿವಿಧ ಛಾಯೆಗಳು ಹೇಗಿರುತ್ತವೆ ಎಂಬುದನ್ನು  ‘ಮನರೂಪ’ ಚಿತ್ರದಲ್ಲಿ ತೋರಿಸುವ  ಪ್ರಯತ್ನ ಮಾಡಿರುವುದು  ನಿರ್ದೇಶಕ, ನಿರ್ಮಾಪಕ ಕಿರಣ್‌ಹೆಗಡೆ. ಇವರು ಸಹ ಇದೇ ಇಸವಿಯಲ್ಲಿ ಜನ್ಮತಾಳಿದ್ದಾರಂತೆ.  ಇದರ ಅನುಭವದಲ್ಲಿ   ಹಾರರ್ ಅಲ್ಲದ, ಸೈಕಲಾಜಿಕಲ್ ಚಿತ್ರಕ್ಕೆ  ಕತೆ, ಸಂಭಾಷಣೆ ಬರೆದಿರುವುದು ವಿಶೇಷ. ಕಾಡಿನ ಹಿನ್ನಲೆಯಲ್ಲಿ ನಡೆಯಲಿರುವುದರಿಂದ ಸಿದ್ದಾಪುರ, ಸಿರ್ಸಿ  ಕಡೆಗಳಲ್ಲಿ ನಲವತ್ತ ಮೂರು ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ.  ಐದು ಸಮಾನ ಮನಸ್ಕರ ಯುವ ತಂಡವೊಂದು ....

285

Read More...

Mooka Vismitha.Film Audio Rel.

Monday, March 25, 2019

ಚಿತ್ರರೂಪದಲ್ಲಿ  ಟಿ.ಪಿ.ಕೈಲಾಸಂ  ನಾಟಕ           ನೈಜ ಘಟನೆ, ಕಾದಂಬರಿಗಳು ಸಿನಿಮಾವಾಗುತ್ತಿರುವುದು ತಿಳಿದಿದೆ. ಅಪರೂಪಕ್ಕೆ ಎನ್ನುವಂತೆ ನಾಟಕಗಳು  ಇದೇ ಹಾದಿಗೆ ಸಾಗುತ್ತಿದೆ. ಇದನ್ನು ಹೇಳಲು ಪೀಠಿಕೆ ಇದೆ. ೧೯೨೦ರಲ್ಲಿ ಟಿ.ಪಿ.ಕೈಲಾಸಂ ಬರೆದಿರುವ ‘ಟೊಳ್ಳುಗಟ್ಟಿ’ ನಾಟಕ ‘ಮೂಕ ವಿಸ್ಮಿತ’ ಚಿತ್ರದ ಹೆಸರಿನೊಂದಿಗೆ ತೆರೆಗೆ ಬರಲು ಸನ್ನಿಹಿತವಾಗಿದೆ.  ಆಗಿನ ಕಾಲದ ಕತೆಗೆ ಪ್ರಸ್ತುತ ಕಾಲಘಟ್ಟದಲ್ಲಿ,  ಮೂರು ತಲೆಮಾರುಗಳು ಹೇಗೆ ತನ್ನ ಪಾತ್ರವನ್ನು ನಿರ್ವಹಿಸುತ್ತೆ. ಒಳ್ಳೆಯದು ಮತ್ತು ಕೆಟ್ಟದ್ದು ಎನ್ನುವ ವ್ಯತ್ಯಾಸಗಳಲ್ಲಿ ಮನುಷ್ಯ ತನ್ನನ್ನು ತಾನು ಹೇಗೆ ....

359

Read More...

Darmasya.Film Audio Rel.

Saturday, March 23, 2019

ಕಲಾವಿದರು  ಸರಿಯಾದ  ಸಮಯದಲ್ಲಿ  ಬಾರದಿದ್ದಲ್ಲಿ  ಬಹಿಷ್ಕರಿಸಿ           ಕಲಾವಿದರು ತಮ್ಮ ಚಿತ್ರದ ಪ್ರಚಾರಕ್ಕೆ ಬರುತ್ತಿಲ್ಲವೆಂದು  ನಿರ್ಮಾಪಕ, ನಿರ್ದೇಶಕರ ಚಿಂತನೆಯಾಗುತ್ತಿದೆ.  ಅದರಂತೆ ‘ಧರ್ಮಸ್ಯ’ ಚಿತ್ರದ ಧ್ವನಿಸಾಂದ್ರಿಕೆ ಅನಾವರಣ ಕಾರ್ಯಕ್ರಮಕ್ಕೆ ನಾಯಕರ ಅನುಪಸ್ಥಿತಿ ಇತ್ತು.  ಮಾದ್ಯಮದವರು ಮೂರು ಗೋಷ್ಟಿಗಳಿಗೆ ಹಾಜರಾಗಿ ನಾಲ್ಕನೆಯದಕ್ಕೆ  ಹೈರಣಾಗಿದ್ದರು.  ನಿಗದಿತ ಸಮಯಕ್ಕಿಂತ ೯೦ ನಿಮಿಷಗಳ ತಡವಾಗಿ ಶುರುವಾಗಿದ್ದಕ್ಕೆ  ಮತ್ತೋಂದು ಕಡೆ ಕೋಪ ಬಂದಿತ್ತು.  ವೇದಿಕೆಗೆ ಬಂದವರೇ ಲಹರಿವೇಲು  ಬೇಸರವನ್ನು  ವ್ಯಕ್ತಪಡಿಸುತ್ತಾ, ಇನ್ನು ಮುಂದೆ  ಕಲಾವಿದರು ಸರಿಯಾದ ....

220

Read More...

Run-2.Film Press Meet.

Saturday, March 23, 2019

ಸಾಗರಿ ನಿರ್ಮಾಪಕರ ರನ್ ೨         ಮೆಂಟಲ್ ಖ್ಯಾತಿಯ ಅರ್ಜುನ್ ಅಭಿನಯದ ‘ರನ್’ ಚಿತ್ರವು ೨೦೧೧ರಲ್ಲಿ ಸಿದ್ದಗೊಂಡು, ಕಾರಣಾಂತರದಿಂದ ಬಿಡುಗಡೆ ಆಗಿರುವುದಿಲ್ಲ. ಈಗ ಅದೇ ಚಿತ್ರದ ನಿರ್ಮಾಪಕ,ನಿರ್ದೇಶಕ ಬಿ.ಎಸ್.ಸಂಜಯ್  ಸದ್ದಿಲ್ಲದೆ ‘ರನ್ ೨’ ಚಿತ್ರವನ್ನು ಮುಗಿಸಿ ಸೆನ್ಸಾರ್ ಮಾಡಿಸಲು  ಅರ್ಜಿ ಸಲ್ಲಿಸಿದ್ದಾರೆ. ಅಡಿಬರಹದಲ್ಲಿ ಬಾರ್ನ್ ಟಫ್ ಎಂದು ಹೇಳಿಕೊಂಡಿದ್ದಾರೆ.  ಸಾಗರಿಯಿಂದ ಬ್ಯಾಡಗಿಮಿರ್ಚಿ ವರೆಗೆ ಹನ್ನೋಂದು  ಚಿತ್ರಗಳಿಗೆ ಆಕ್ಷನ್ ಕಟ್ ಹೇಳಿ, ಹಣ ಹೊಡಿದ್ದ ನಿರ್ಮಾಪಕರಿಗೆ ಸಾಹಸ ಪ್ರಧಾನ ಸಿನಿಮಾ ಮಾಡುವ ಬಯಕೆ ಇದರ ಮೂಲಕ ಈಡೇರಿದೆಯಂತೆ.  ಕತೆಯ ಕುರಿತು ಹೇಳುವುದಾದರೆ ಕಾಲೇಜು  ದಿನಗಳನ್ನು ....

214

Read More...
Copyright@2018 Chitralahari | All Rights Reserved. Photo Journalist K.S. Mokshendra,