Kiss.Film Teaser Rel.

Friday, August 23, 2019

 ‘ಕಿಸ್’ ಟ್ರೇಲರ್ ಬಿಡುಗಡೆ ಮಾಡಿದರು ಯಶ್

ಅಂದು ಬಿ.ಜಿ.ಎಸ್. ಆಡಿಟೋರಿಯಮ್ಮಿನಲ್ಲಿ ಕಿಕ್ಕಿರಿದ ಜನ. ಅದರಲ್ಲೂ ಕಾಜೇಜು ವಿದ್ಯಾರ್ಥಿ ವಿದ್ಯಾರ್ಥಿನಿಯರೇ ತುಂಬಿದ್ದರು. ಅದು ‘ಕಿಸ್’ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭ. ಹೇಳಿ ಕೇಳಿ ‘ಕಿಸ್’ ಚಿತ್ರಕ್ಕೆ ತುಂಟ ತುಟಿಗಳ ಆಟೋಗ್ರಾಫ್ ಅನ್ನೋ ಅಡಿ ಬರಹವಿರುವುದರಿಂದ ಯುವ ಪೀಳಿಗೆಯನ್ನು ಅತಿಹೆಚ್ಚು ಸೆಳೆದುಕೊಂಡಿದೆ. ಇದರ ಜೊತೆಗೆ ಈ ಚಿತ್ರದ ಆಡಿಯೋ ಬಿಡುಗಡೆ ಮಾಡಲು ರಾಕಿಂಗ್ ಸ್ಟಾರ್ ಯಶ್ ಆಗಿಮಿಸಿದ್ದದ್ದು ಅಲ್ಲಿ ನೆರೆದಿದ್ದವರ ಪಾಲಿಗೆ ಸಂಭ್ರಮ ಹೆಚ್ಚಲು ಕಾರಣವಾಗಿತ್ತು.

840

Read More...

Badava Raskal.Film Pooja.

Friday, August 23, 2019

ಅಣ್ಣಾವ್ರ   ಸಂಭಾಷಣೆ  ಸಿನಿಮಾದ  ಶೀರ್ಷಿಕೆ           ವಿಲನ್,ಮೋಸಗಾರರಿಗೆ ‘ಬಡವ ರ‍್ಯಾಸ್ಕಲ್’ ಡೈಲಾಗ್‌ನ್ನು  ಡಾ.ರಾಜ್‌ಕುಮಾರ್ ಹೇಳುತ್ತಿದ್ದರು. ಇದು ಅಭಿಮಾನಿಗಳಿಗೆ ಖುಷಿ ತಂದುಕೊಟ್ಟಿತ್ತು.  ಈ ಪದದ ಪ್ರಸ್ತಾಪ  ಈಗ ಯಾಕೆ ಎಂಬ ಪ್ರಶ್ನೆ  ಮೂಡುವುದು ಸಹಜ. ವಿವರಗಳಿಗಾಗಿ ಮುಂದೆ ಓದುವುದು.  ಪ್ರಸ್ತುತ ಅದೇ ಹೆಸರಿನಲ್ಲಿ ಚಿತ್ರವೊಂದು ಸಿದ್ದಗೊಳ್ಳುತ್ತಿದೆ.  ಟಗರು ಚಿತ್ರದ ಮೂಲಕ ಡಾಲಿ ಎಂದೇ ಖ್ಯಾತರಾಗಿದ್ದ ಧನಂಜಯ್ ಸದ್ಯ ಒಂದಾದ ನಂತರ ಒಂದು ಸಿನಿಮಾಕ್ಕೆ ಸಹಿ ಮಾಡುತ್ತಿದ್ದಾರೆ. ಇವುಗಳ ಮಧ್ಯೆ ಇದನ್ನು ಒಪ್ಪಿಕೊಂಡಿದ್ದು ಅಲ್ಲದೆ ಡಾಲಿ ಪಿಕ್ಚರ‍್ಸ್ ಶುರುಮಾಡಿ ಇದರ ಮೂಲಕ ನಿರ್ಮಾಪಕನ ....

848

Read More...

Prarambha.Film Teaser Rel.

Friday, August 23, 2019

ದರ್ಶನ್  ಕಂಠದಿಂದ  ಪ್ರಾರಂಭಕ್ಕೆ  ಶುಭಾರಂಭ         ಹೊಸಬರು, ಗೆಳಯರ ಚಿತ್ರಕ್ಕೆ ಪ್ರೋತ್ಸಾಹ ಕೊಡುತ್ತಿರುವ ದರ್ಶನ್ ‘ಪ್ರಾರಂಭ’ ಚಿತ್ರದ ಟೀಸರ್‌ಗೆ ಧ್ವನಿ ನೀಡಿದ್ದಾರೆ.  ಪ್ರೀತಿಯಲ್ಲಿ ಅಪಜಯ ಕಂಡಾಗ  ಪ್ರೇಮಿಯಾದವನು ಏನು ಮಾಡುತ್ತಾನೆ. ಎಲ್ಲರ ಮಧ್ಯದಲ್ಲಿ ಎಂತಹ ಘಟನೆಗಳು ನಡೆಯುತ್ತವೆ. ತಪ್ಪುಗಳನ್ನು ಸರಿಪಡಿಸುವ ಸನ್ನಿವೇಶಗಳು ಇರುತ್ತದಂತೆ. ಅದಕ್ಕಾಗಿ ಕೆಟ್ಟ ರೂಢಿಯನ್ನು ತೋರಿಸಿ, ನಂತರ ಒಳ್ಳೇದನ್ನು ಹೇಳುವ ಪ್ರಯತ್ನ ಮಾಡಲಾಗಿದೆ. ಇದೆಲ್ಲಕೂ ಪೂರಕ ಎನ್ನುವಂತೆ ಬದುಕು ಶುರುವಾಗಿದೆ ಅಂತ ಇಂಗ್ಲೀಷ್‌ದಲ್ಲಿ ಅಡಬರಹವಿದೆ. ಮನೋರಂಜನ್‌ರವಿಚಂದ್ರನ್  ಮೂರನೇ ಚಿತ್ರದಲ್ಲಿ ಕುಂಚಕಲಾವಿದ ....

779

Read More...

Karmanye Vadhikaraste.Movie Teaser Rel.

Tuesday, August 20, 2019

ಕೃಷ್ಣನ  ನುಡಿ  ಸಿನಿಮಾದ  ಶೀರ್ಷಿಕೆ         ಕೆಲವು ಚಿತ್ರಗಳು ಕಥೆಯ ಮೂಲಕ ಗಮನ ಸೆಳೆದರೆ ಮತ್ತೆ ಹಲವು ಸಿನಿಮಾಗಳು  ಶೀರ್ಷಿಕೆಯ ಮೂಲಕವೇ ಪ್ರೇಕ್ಷಕರನ್ನು ತಮ್ಮತ್ತ ಸೆಳಯುತ್ತದೆ. ಆ ಸಾಲಿಗೆ  ‘ಕರ್ಮಣ್ಯೇ ವಾಧಿಕಾರಸ್ತೇ’  ಚಿತ್ರ ಸೇರ್ಪಡೆಯಾಗಿದೆ.  ಮಹಾಭಾರತದಲ್ಲಿ ಕೃಷ್ಣ ಹೇಳಿದ ನುಡಿಯು ಟೈಟಲ್ ಆಗಿದೆ.  ಹೆಸರು ಕೇಳಲು ಇಂಪಾಗಿದೆ, ಅರ್ಥಗರ್ಭಿತವು ಇದೆ. ಎಲ್ಲಕ್ಕೂ ಮಿಗಿಲಾದ ಸಾರ್ಥಕತೆಯ ಭಾವವಿದೆ. ಹಾಗಂತ ಇದು ಪೌರಾಣಿಕ ಚಿತ್ರಕ್ಕೆ ಸಂಬಂದಿಸಿಲ್ಲ. ಕತೆಯು ೧೮೫೦ರ ಕಾಲಘಟ್ಟದಿಂದ  ಪ್ರಸಕ್ತ ಮಾಡ್ರರ್ನ್ ಲೋಕಕ್ಕೆ ಹೊಂದಿಕೆಯಾಗುವಂತೆ ಮಾಡಲಾಗಿದೆ.   ಒಂದು ಘಟ್ಟದಲ್ಲಿ ಬೌದ್ದ  ಜನಾಂಗದ ಸನ್ನಿವೇಶ ....

1099

Read More...

Devaru Bekagiddaare.Film Press Meet.

Tuesday, August 20, 2019

ವಿನೂತನ  ಚಿತ್ರ  ದೇವರು  ಬೇಕಾಗಿದ್ದಾರೆ         ಚಾಲಕರು, ಟೈಲರ‍್ಸ್ ಬೇಕಾಗಿದ್ದಾರೆ ಎಂದು ಅಂಗಡಿ, ಕಂಪನಿ ಮುಂದೆ ಬೋರ್ಡ್ ಹಾಕಿರುತ್ತಾರೆ. ಇಲ್ಲೋಂದು ಹೊಸಬರ ತಂಡವೊಂದು ‘ದೇವರು ಬೇಕಾಗಿದ್ದಾರೆ’ ಎನ್ನುವ ಸಿನಿಮಾವನ್ನು ಸಿದ್ದಪಡಿಸಿದ್ದಾರೆ.  ರಸ್ತೆ ಅಪಘಾತದಲ್ಲಿ ತನ್ನ ಕುಟುಂಬದವರನ್ನು ಕಳೆದುಕೊಂಡ ಆರು ತಿಂಗಳ ಮಗು ಅಪ್ಪುವನ್ನು ಊರಿನ ಮುಖ್ಯಸ್ಥ ರಂಗಣ್ಣ ಸಾಕುತ್ತಾರೆ. ಆತನಿಗೆ ಬುದ್ದಿ ಬಂದಾಗ ತನ್ನ ತಂದೆ ತಾಯಿ ದೇವರ ಬಳಿ ಇದ್ದಾರೆಂದು ತಿಳಿದು ದೇವರನ್ನು ಹುಡುಕುತ್ತಾ ಹೊರಡುವ ಕತೆಯೇ ಒಂದು ಏಳೆಯ ಸಾರಾಂಶವಾಗಿದೆ. ಭಾವನೆಗಳ ಸಮೂಹದಲ್ಲಿ ಸನ್ನಿವೇಶಗಳು ಇರಲಿದೆ. ಕೈವಾರ, ಗುಡಿಬಂಡೆ, ಬಾಗೇಪಲ್ಲಿ, ....

884

Read More...

Tripura.Film Press Meet.

Monday, August 19, 2019

ಪರಾರಿ ವೀರ ಶೀರ್ಷಿಕೆ ತ್ರಿಪುರ  ಆಗಿದೆ          ಕೆಲವೊಂದು ಚಿತ್ರವು ಪ್ರಾರಂಭದಲ್ಲಿ ಇರಲಾದ ಶೀರ್ಷಿಕೆ ಮುಕ್ತ್ತಾಯದ ಹಂತಕ್ಕೆ ಬರುವ ಹೊತ್ತಿಗೆ ಬದಲಾವಣೆ ಗೊಳ್ಳುತ್ತದೆ. ಆ ಸಾಲಿಗೆ ‘ತ್ರಿಪುರ’ ಸೇರಿಕೊಂಡಿದೆ.  ತ್ರಿಪುರ ಸುಂದರಿ ೫೦೦ ವರ್ಷಗಳ ಹಿಂದೆ ಎರಡು ಸಾಮ್ರಾಜ್ಯದ ರಾಜರು ಈಕೆಗಾಗಿ ಹಪಿಸುವ, ಯುದ್ದ ಸಾರಿ ಸಾಮ್ರಾಜ್ಯ ಕಳೆದುಕೊಂಡ,  ಕಟ್ ಮಾಡಿದರೆ ಈಗಿನ ಮರ್ಡರ್ ಮಿಸ್ಟ್ರಿಯಲ್ಲಿ ನಿಧಿಯ ಸುತ್ತ ಹೋಗುವ   ಕತೆಯಾಗಿದೆ. ಇದಕ್ಕೆ ಪೂರಕವಾಗಿ ಆದ್ಯ ರಾಣಿಯ ಊರು ಎಂದು ಅಡಿಬರಹದಲ್ಲಿ ಹೇಳಲಾಗಿದೆ. ಕೆ.ಶಂಕರ್ ನಿರ್ದೇಶಕರಾಗಿ ಮೊದಲ ಅನುಭವ. ಗತಕಾಲದ ರಾಣಿ, ಪ್ರಚಲಿತ  ತನಿಖಾದಿಕಾರಿಯಾಗಿ ....

855

Read More...

Udumba.Film Press Meet.

Monday, August 19, 2019

                                        ಕಡಲ ತೀರದ ಕಥನ          ‘ಉಡುಂಬಾ’ ಪ್ರಾಣಿ ಹೆಸರಿನ  ಚಿತ್ರದ ನಾಯಕ ಯಾರ ತಂಟೆಗೂ ಹೋಗೋಲ್ಲ, ತನಗೆ ಅಡ್ಡಿ ಬಂದರೆ ಬಿಡುವುದಿಲ್ಲ ಎನ್ನುವ ಗುಣ ಆತನದ್ದು.  ಕತೆ ಬರೆದು ಮೊದಲಬಾರಿ  ನಿರ್ದೇಶನ ಮಾಡಿರುವ  ಶಿವರಾಜ್ ಚಿತ್ರವನ್ನು ಬಣ್ಣಿಸಿದ್ದು ಈ ರೀತಿ: ಅವನು ಹಠ ಹಿಡಿದು   ಉಡ+ಹುಂಬನಂತೆ ಕಾರ್ಯ ಸಾಧಿಸುತ್ತಾನೆ. ಅದಕ್ಕಾಗಿ ಇದೇ ಹೆಸರನ್ನು ಇಡಲಾಗಿದೆ. ಕಡಲ ತೀರದ ಮೀನು ಮಾರುವ ಜನಾಂಗದ ಬದುಕು ಬವಣೆಗಳನ್ನು ತೋರಿಸಲಾಗಿದೆ.  ಅಲ್ಲಿ ನಡೆಯುವ ಘಟನೆಗಳು, ಜೊತೆಗೊಂದು ಮಧುರವಾದ ಪ್ರೀತಿ ಹುಟ್ಟಿಕೊಂಡಾಗ ಸನ್ನಿವೇಶಗಳು  ತಿರುವು ....

981

Read More...

Ramarjuna.Film Trailor Rel.

Monday, August 19, 2019

                           ನಿರ್ದೇಶಕನ  ಸ್ಥಾನವನ್ನು ಅಲಂಕರಿಸಿದ ಅನೀಶ್‌ತೇಜಶ್ವರ್        ಚಂದನವನದಲ್ಲಿ ತೆರೆ ಮುಂದೆ ರಾರಾಜಿಸಿದ್ದ ನಾಯಕರು ಬಣ್ಣ ಹಚ್ಚುವುದರ ಜೊತೆಗೆ ನಿರ್ದೇಶನ ಮಾಡುತ್ತಿದ್ದಾರೆ.  ಮೊನ್ನೆ ತಾನೆ ನೀನಾಸಂಸತೀಶ್  ನಿರ್ದೇಶನಕ್ಕೆ ಧುಮುಕಿರುವುದು ಸುದ್ದಿಯಾಗಿತ್ತು. ಈಗ ‘ವಾಸು ನಾನು ಪಕ್ಕಾ ಕಮರ್ಷಿಯಲ್’ ಚಿತ್ರ ನಿರ್ಮಾಣ ಮಾಡಿರುವ  ನಾಯಕನಟ ಅನೀಶ್ ತೇಜಶ್ವರ್  ಚೂಚ್ಚಲಬಾರಿ ‘ರಾಮಾರ್ಜುನ’ ಚಿತ್ರಕ್ಕೆ  ಆಕ್ಷನ್ ಕಟ್ ಹೇಳುವುದರ ಜೊತೆಗೆ ನಾಯಕ ಹಾಗೂ ಎರಡನೇ ಬಾರಿ ಬಂಡವಾಳ ಹೂಡುತ್ತಿದ್ದಾರೆ.   ಸದ್ದಿಲ್ಲದೆ ಶೇಕಡ ೮೦ ರಷ್ಟು ಚಿತ್ತೀಕರಣ ಮುಗಿಸಿ ಒಂದು ಹಾಡು,  ....

895

Read More...

Pailwaan.Film Audio Rel.

Sunday, August 18, 2019

ಪೈಲ್ವಾನ್‌ಗೆ  ಪುನೀತ್‌ರಾಜ್‌ಕುಮಾರ್  ಶುಭ ಹಾರೈಕೆ          ರಾಜಕುಮಾರ ಶತದಿನೋತ್ಸವ ಕಾರ್ಯಕ್ರಮದಲ್ಲಿ ಸುದೀಪ್ ಆಗಮಿಸಿ ಪುನೀತ್‌ರಾಜ್‌ಕುಮಾರ್ ಡ್ಯಾನ್ಸ್ ಬಗ್ಗೆ ಮಾತನಾಡಿದ್ದರು. ಈಗ ‘ಪೈಲ್ವಾನ್’ ಚಿತ್ರದ ಧ್ವನಿಸಾಂದ್ರಿಕೆಯನ್ನು ಪುನೀತ್‌ರಾಜ್‌ಕುಮಾರ್ ಬಿಡುಗಡೆ ಮಾಡಿದರು. ನಂತರ ಮಾತನಾಡುತ್ತಾ  ಸುದೀಪ್ ನನ್ನ ಗೆಳೆಯ. ತುಂಬ ಖುಷಿಯಿಂದ ಚಿತ್ರರಂಗದ ಪ್ರೇಕ್ಷಕನಾಗಿ ಆಡಿಯೋ ಲಾಂಚ್ ಮಾಡುತ್ತಿದ್ದೇನೆ. ಹಾಡುಗಳು ಅದ್ಬುತವಾಗಿದೆ. ಚಿತ್ರವು ದೊಡ್ಡ ಮಟ್ಟದಲ್ಲಿ ಹಿಟ್ ಆಗಲಿ, ಅವಕಾಶ ಸಿಕ್ಕರೆ ಇಬ್ಬರೂ ಒಟ್ಟಿಗೆ ಸಿನಿಮಾ ಮಾಡುತ್ತವೆ ಎಂದರು.  ಇದಕ್ಕೆ ಪ್ರತಿಕ್ರಿಯಸಿದ ಸುದೀಪ್ ಅವರೊಂದಿಗೆ ....

846

Read More...

Ravi Bopanna.Film Shooting.

Sunday, August 18, 2019

ಕ್ರೇಜಿ-ಕಿಚ್ಚ  ಒಕ್ಕರೂಲ  ಮಾತುಗಳು

         ಅದೊಂದು ನ್ಯಾಯಲಯದ ಆವರಣ. ವಕೀಲರೊಬ್ಬರನ್ನು ನಾಲ್ವರು ಕಕ್ಷಿದಾರರು ಹಿಂಬಾಲಿಸುತ್ತಾರೆ. ನಂತರ ಎಲ್ಲರೂ ಒಳಗೆ ಹೋಗುವಲ್ಲಿಗೆ ಕಟ್ ಎಂದು ಬ್ರೇಕ್ ಅಂದಾಗ ಎಲ್ಲರೂ ನಿಟ್ಟಿಸಿರು ಬಿಡುತ್ತಾರೆ. ‘ರವಿ ಬೋಪಣ್ಣ’ ಚಿತ್ರಕ್ಕಾಗಿ ಸೆಂಟ್ರಲ್ ಕಾಲೇಜು ಆವರಣವು ಕೋರ್ಟ್ ಕಚೇರಿಯಾಗಿ ಮಾರ್ಪಾಡಾಗಿತ್ತು.  ವಕೀಲರಾಗಿ ಸುದೀಪ್, ಕಕ್ಷಿದಾರರಾಗಿ ಮೋಹನ್, ರಾಮಕೃಷ್ಣ, ರವಿಶಂಕರ್‌ಗೌಡ, ಲಕ್ಷಣ್ ಹಾಗೂ ಸದರಿ ದೃಶ್ಯಕ್ಕೆ  ಸಾರಥ್ಯ ವಹಿಸಿಕೊಂಡಿದ್ದು ನಿರ್ದೇಶಕ ರವಿಚಂದ್ರನ್. ನಂತರ ಎಲ್ಲರೂ ಮಾದ್ಯಮದ ಮುಂದೆ ಆಸೀನರಾದರು.

871

Read More...

Dilmaar.Film Pooja.

Sunday, August 18, 2019

ಗಣಪತಿ ಸನ್ನಿಧಿಯಲ್ಲಿ ‘ದಿಲ್‌ಮಾರ್’ ಚಿತ್ರಕ್ಕೆ ಚಾಲನೆ.

‘ಕೆ.ಜಿ.ಎಫ಼್’ ಚಿತ್ರಕ್ಕೆ ಸಂಭಾಷಣೆ ಬರೆದಿದ್ದ ಎಂ.ಚಂದ್ರಮೌಳಿ ಅವರ ಚೊಚ್ಚಲ ನಿರ್ದೇಶನ 

    ಶ್ರೀವಿಘ್ನೇಶ್ವರ ಸಿನಿಮಾಸ್ ಲಾಂಛನದಲ್ಲಿ ನಾಗರಾಜ್ ಭದ್ರಾವತಿ ಅವರು ನಿರ್ಮಿಸುತ್ತಿರುವ ‘ದಿಲ್‌ಮಾರ್‘ ಚಿತ್ರದ ಮುಹೂರ್ತ ಸಮಾರಂಭ ಮಹಾಲಕ್ಷ್ಮೀ ಲೇಔಟ್‌ನ ಗಣಪತಿ ದೇವಸ್ಥಾನದಲ್ಲಿ ಕಳೆದ ಭಾನುವಾರ ನೆರವೇರಿತು. ಚಿತ್ರದ ಮೊದಲ ಸನ್ನಿವೇಶಕ್ಕೆ ಲಹರಿ ಸಂಸ್ಥೆಯ ವೇಲು ಅವರು ಆರಂಭ ಫಲಕ ತೋರಿದರು. ಸಂಜೀವ್ ಕ್ಯಾಮೆರಾ ಚಾಲನೆ ಮಾಡಿದರು. ಮಹೇಶ್ ಕೆ ಈ ಚಿತ್ರದ ಸಹ ನಿರ್ಮಾಪಕರು.

980

Read More...

Dr.Vishnuvardhan Natakotsava 2019.Press Meet.

Saturday, August 17, 2019

ಡಾ.ವಿಷ್ಣುವರ್ಧನ್  ನಾಟಕೋತ್ಸವ            ಡಾ.ವಿಷ್ಣು ಸೇನಾ ಸಮಿತಿ ಇವರು ಪ್ರತಿ ವರ್ಷ ಸಾಹಸ ಸಿಂಹ ಹುಟ್ಟುಹಬ್ಬ ಸಲುವಾಗಿ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾರೆ. ಎರಡು ವರ್ಷಗಳ ಕೆಳಗೆ ದೆಹಲಿ, ಕಳೆದ ವರ್ಷ ಬೆಂಗಳೂರಿನಲ್ಲಿ  ನಡೆಸಿದ್ದರು.  ಚಿತ್ರರಂಗಕ್ಕೆ ಆಧಾರಸ್ತಂಭ ರಂಗಭೂಮಿ. ಅದಕ್ಕಾಗಿ  ಈ ಬಾರಿ ಪ್ರಪ್ರಥಮ ಎನ್ನುವಂತೆ ‘ಡಾ..ವಿಷ್ಣುವರ್ಧನ ನಾಟಕೋತ್ಸವ’  ಪರಿಕಲ್ಪನೆಯೊಂದಿಗೆ ಕರ್ನಾಟಕದ ವಿವಿಧ ಭಾಗಗಳಾದ ಮೈಸೂರು ಕರ್ನಾಟಕ, ಉತ್ತರ ಕರ್ನಾಟಕ, ಕರಾವಳಿ ಕರ್ನಾಟಕ, ಕಿತ್ತೂರು ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕದಿಂದ ತಲಾ ಒಂದೊಂದು  ನಾಟಕ, ಜೊತೆಗೆ ಯಜಮಾನ್ರ ಗೀತೆಗಳ ಸಂಗೀತ ಸಂಜೆ,  ....

318

Read More...

Mareyade.Kshamisu.Film Press Meet.

Friday, August 16, 2019

ಪ್ರೀತಿಯಲ್ಲಿ  ಒಳ್ಳೇದು  ಕೆಟ್ಟದ್ದು  ಇರುತ್ತದೆ          ಪ್ರೀತಿ ಎಂಬುದು ಕೇವಲ ಯವಜನಾಂಗಕ್ಕೆ ಮಾತ್ರ ಅನ್ವಯಿಸುವುದಿಲ್ಲ. ಪೋಷಕರಾದವರು ಮಕ್ಕಳ ಮೇಲೆ ಒಲವು ತೋರಿಸಬೇಕು. ಮಕ್ಕಳು ತಂದೆ ತಾಯಿರನ್ನು ಪ್ರೀತಿಸಬೇಕು ಎಂಬ ಸಂದೇಶ ಇರುವ ‘ಮರೆಯದೆ ಕ್ಷಮಿಸು’  ಅಡಿಬರಹದಲ್ಲಿ  ನೆನಪಾದರೆ ಅಂತ ಹೇಳಿಕೊಂಡಿರುವ ಹೊಸಬರ ಚಿತ್ರದಲ್ಲಿ ಇದನ್ನು ಹೇಳಲಾಗುತ್ತಿದೆ. ಪ್ರಸಕ್ತ ಸಮಾಜದಲ್ಲಿ ಲವ್ ಎಂಬುದು ಸಾಧಾರಾಣವಾಗುತ್ತಿದೆ. ಇದರಲ್ಲಿ ಒಳ್ಳೇದು, ಕೆಟ್ಟದ್ದು ಇರುತ್ತದೆ. ಬುದ್ದವಂತರಾದವರು ಯಾವುದನ್ನು ಆರಿಸಿಕೊಳ್ಳಬೇಕು. ಜೊತೆಗೆ ಸಮಾಜದ ಆಗುಹೋಗುಗಳು, ಇಲ್ಲಿ ನಡೆಯುವ ನೇರ ಘಟನೆಗಳನ್ನು ಚಿತ್ರಕತೆಗೆ ....

330

Read More...

Tamate.Film Pooja and Press Meet.

Friday, August 16, 2019

ಅಪ್ಪನ  ಕತೆಗೆ  ಮಗನ ನಿರ್ದೇಶನ           ನಟ,ನಿರ್ದೇಶಕ, ನಿರ್ಮಾಪಕ, ಸಂಗೀತಗಾರ ಮದನ್‌ಪಟೇಲ್ ‘ತಮಟೆ’ ಕಾದಂಬರಿಯನ್ನು ಬರೆದಿದ್ದು, ಇಲ್ಲಿಯವರೆಗೂ ೧೦೦೦೦ ಪ್ರತಿಗಳು ಮಾರಾಟವಾಗಿದೆ. ಕತೆಯನ್ನು ಓದಿದ ಪುತ್ರ ಮಯೂರ್‌ಪಟೇಲ್ ಇದೇ ಹೆಸರಿನ ಮೇಲೆ ಚಿತ್ರ ಮಾಡಲು ಆಸಕ್ತಿ ಹೊಂದಿ,  ಮುಖ್ಯ ಪಾತ್ರಕ್ಕೆ ಅಪ್ಪನೇ ಸರಿಯಾದವರು ಎಂದು ಅವರಿಂದ ಚಿತ್ರಕತೆ ಬರೆಸಿ  ಕ್ಯಾಮರಾ ಮುಂದೆ ನಿಲ್ಲಿಸುವಲ್ಲಿ ಸಪಲರಾಗಿದ್ದಾರೆ. ಇಷ್ಟು ದಿವಸ ಅಭಿನಯದ ಅನುಭವ ಪಡೆದುಕೊಂಡಿದ್ದು, ಈಗ  ನಿರ್ದೇಶಕನಾಗಿ ಗುರುತಿಸಿಕೊಳ್ಳುತ್ತಿದ್ದಾರೆ. ಸಮಾಜದ ಧ್ವನಿ, ಹಲಾವರು ಆಯಾಮಗಳನ್ನು ತೋರಿಸುವ ಪ್ರಯತ್ನ ಮಾಡಲಾಗಿದೆ. ಕುಲುವಾಡಿಕೆ ....

319

Read More...

India Vs England.Film Poster Rel.

Thursday, August 15, 2019

ಮಗಳ ಕಥೆಗೆ  ಅಪ್ಪನ  ನಿರ್ದೇಶನ       ಸದಭಿರುಚಿಯ ನಿರ್ದೇಶಕ ನಾಗತ್ತಿಹಳ್ಳಿ ಚಂದ್ರಶೇಖರ್ ಪುತ್ರಿ ಕನಸುನಾಗತ್ತಿಹಳ್ಳಿ ವಿರಚಿತ ಕತೆಯು ‘ಇಂಡಿಯಾ ವರ್ಸಸ್ ಇಂಗ್ಲೆಂಡ್’ ಚಿತ್ರವಾಗಿ ಮೂಡಿಬಂದಿದೆ. ಶೀರ್ಷಿಕೆ ಕೇಳಿದರೆ ಇದೊಂದು  ಕ್ರಿಕೆಟ್ ಆಟ ಇದೆಯಾ ಎಂಬ ಪ್ರಶ್ನೆ ಮೂಡುತ್ತದೆ. ಇದು ಅದಲ್ಲವೆಂದು ಅಡಿಬರಹದಲ್ಲಿ ಹೇಳಲಾಗಿದೆ.  ಮಗಳ ಕತೆಗೆ ಅಪ್ಪ ನಿರ್ದೇಶನ ಮಾಡಿರುವುದು ಚಂದನವನದಲ್ಲಿ ಮೊದಲು ಎನ್ನಬಹುದು. ಪ್ರಚಾರದ ಮೊದಲ ಹಂತವಾಗಿ ರವಿಚಂದ್ರನ್ ಚಿತ್ರದ ಪೋಸ್ಟರ್, ಮೇಕಿಂಗ್‌ನ್ನು ಅನಾವರಣಗೊಳಿಸಿದರು. ನಂತರ ಮಾತನಾಡುತ್ತಾ  ಮೇಷ್ಟ್ರು ಯಾವುದೇ ಹೊಸ ಚಿತ್ರ ಮಾಡುವ ಮುನ್ನ ಇದರ ಕುರಿತಂತೆ ಹೇಳಲು ಭೇಟಿ ....

895

Read More...

Mahishasura.Film Teaser Rel.

Thursday, August 15, 2019

ತಾಳ್ಮೆ  ಸಹನೆ ಕಳೆದುಕೊಂಡವನು  ಮಹಿಷಾಸುರ  ಆಗ್ತಾನೆ        ಹುಟ್ಟುವಾಗ ಯಾರು ಕೆಟ್ಟವರಾಗಿ ಇರುವುದಿಲ್ಲ. ಆದರೆ ತಾಳ್ಮೆ, ಸಹನೆ ಕಳೆದುಕೊಂಡರೆ ದುರುಳರಾಗುತ್ತಾರೆ. ಇಂತಹುದೇ ತ್ರಿಕೋನ ಪ್ರೇಮಕತೆಯುಳ್ಳ ‘ಮಹಿಷಾಸುರ’ ಚಿತ್ರವೊಂದು ಸಿದ್ದಗೊಂಡಿದೆ.  ಇಬ್ಬರು ಹುಡುಗರು, ಒಂದು ಹುಡುಗಿಯು ಒಂದೇ ಊರಿನಲ್ಲಿ ಚಿಕ್ಕಂದಿನಿಂದಲೂ ಸ್ನೇಹಿತರಾಗಿ ಓದುತ್ತಾ ಬೆಳೆದಿರುತ್ತಾರೆ. ಕಾಲಕ್ರಮೇಣ ದೊಡ್ಡವರಾದ ಮೇಲೆ ಆಕೆ ಮೇಲೆ ಇಬ್ಬರಿಗೂ ಒಲವು  ಹುಟ್ಟುತ್ತದೆ. ಇದರಿಂದ ಸ್ನೇಹ ಕಳೆದುಕೊಂಡು  ಮತ್ಸರ ಬೆಳೆಸಿಕೊಳ್ಳುತ್ತಾರೆ. ಕೊನೆಗೆ ಯಾರಿಗೆ ದಕ್ಕುತ್ತಾರೆ. ನಿಮ್ಮೊಳಗಿನ ಪ್ರೀತಿ ಸಿಗದೇ ಇದ್ದಾಗ ....

895

Read More...

Nanna Prakara.Film Audio Rel.

Thursday, August 15, 2019

ದರ್ಶನ್‌ಗೆ ಮದಕರಿನಾಯಕ ಪಾತ್ರ ಮಾಡುವ ಬಯಕೆ       ಕತೆ,ಚಿತ್ರಕತೆ ಬರೆದು ಮೊದಲಬಾರಿ ನಿರ್ದೇಶನ ಮಾಡಿರುವ  ‘ನನ್ನ ಪ್ರಕಾರ’ ಚಿತ್ರದ ಧ್ವನಿಸಾಂದ್ರಿಕೆಯನ್ನು ದರ್ಶನ್ ಲೋಕಾರ್ಪಣೆ ಮಾಡಿದರು. ನಂತರ ನಿರೂಪಕಿ ಕೇಳಿದ ಮೂರು ಪ್ರಶ್ನಗಳಿಗೆ  ದರ್ಶನ್ ಪ್ರಕಾರ ಉತ್ತರ ನೀಡಿದರು. ಯಾವ ಪೌರಾಣಿಕ ಸಿನಿಮಾ ಮಾಡುವ ಬಯಕೆ ಇದೆ. ಮದಕರಿನಾಯಕ. ಸುಯೋಧನ ಪಾತ್ರವು ೧೯೭೦ರಲ್ಲಿ ಬಂದರೆ ಯಾರು ಅದಕ್ಕೆ ಸೂಕ್ತ ಅನಿಸುತ್ತಿದ್ದರು. ಖಂಡಿತ ಡಾ.ರಾಜ್‌ಕುಮಾರ್. ಕೊನೆಯದಾಗಿ ಕಾದಂಬರಿ, ಸಾಮಾಜಿಕ, ಪೌರಾಣಿಕ ಇವುಗಳಲ್ಲಿ ಯಾವ ಜಾನರ್ ಸಿನಿಮಾ ಬರಬೇಕೆಂದು ಬಯಸುವಿರಾ? ಎಲ್ಲಾ ತರಹದ ಒಳ್ಳೆ ಚಿತ್ರಗಳು ಬರಬೇಕು. ಕುರುಕ್ಷೇತ್ರವನ್ನು ....

891

Read More...

Vijayaratha.Movie Press Meet.

Wednesday, August 14, 2019

ಚಿತ್ರಮಂದಿರದಲ್ಲಿ ವಿಜಯರಥ          ‘ವಿಜಯರಥ’ ಚಿತ್ರವು  ಕತೆಯು ಪ್ರಪಂಚದಲ್ಲಿ ಒಂದು ಒಳ್ಳೆ ಕೆಲಸ ಮಾಡಬೇಕು ಅಂದರೆ  ಬೆಕ್ಕಿಗಿಂತ ಜನರು ಅಡ್ಡ ಬರ‍್ತಾರೆ. ನಾವು  ಎರಡು ಸಿದ್ದಾಂತದಲ್ಲಿ ಬದುಕುತ್ತಿದ್ದೇವೆ.  ಅದು ಧರ್ಮ ಮತ್ತು ಕರ್ಮ.  ಗುರಿ ಮುಟ್ಟುವ ಪ್ರಯತ್ನದಲ್ಲಿ ಕೆಳಗಡೆ ಬೀಳುತ್ತಾನೆ. ಅದು ಕರ್ಮ. ಇನ್ನೋಬ್ಬ ಗಮ್ಯ ತಲುಪುತ್ತಾನೆ. ಅದುವೇ ಧರ್ಮ. ಕೆಳಗಡೆ ಬಿದ್ದವನನ್ನು ಕೂಡ ತನ್ನ ಜೊತೆ ಗುರಿಯನ್ನು ಮುಟ್ಟಿಸಲು  ಪ್ರಯತ್ನ ಮಾಡುವ  ಕಥಾನಾಯಕನಿಗೆ ಮೂರನೇ ರೂಪ ಕಾಣಿಸುತ್ತದೆ.  ಯಾರಿಗೂ ಕಾಣಲಾರದ ತೃತೀಯ ಶಕ್ತಿ ಏನು ?  ಪ್ರತಿ ಹತ್ತು ನಿಮಿಷಕ್ಕೊಮ್ಮೆ ತಿರುವು ಇರಲಿದೆ.  ಉಪಕತೆಯ ಒಂದು ಭಾಗದಲ್ಲಿ ೬೦೦ ಸಕೆಂಡ್‌ಗಳ ಕಾಲ ....

850

Read More...

Naaku Muka.Movie Press Meet.

Wednesday, August 14, 2019

ನಾಲ್ಕು  ಮುಖಗಳ  ಕಥನ        ‘ನಾಕುತಂತಿ’ ಯಶಸ್ವಿ ಧಾರವಾಹಿ ನಂತರ, ಈಗ ಹಿರಿತೆರೆಗೆ ‘ನಾಕುಮುಖ’ ಎನ್ನುವ ಸಿನಿಮಾವೊಂದು ಸದ್ದಿಲ್ಲದೆ ಮಡಕೇರಿ, ಬೆಂಗಳೂರು ಕಡೆಗಳಲ್ಲಿ ಚಿತ್ರೀಕರಣ ನಡೆಸಿದೆ.  ಪ್ರೆಸ್, ಪಾಲಿಟಿಶಿಯನ್, ಪೋಲೀಸ್ ಮತ್ತು ಫ್ಯಾಮಲಿ ಇವುಗಳನ್ನು ಶೀರ್ಷಿಕಗೆ ಹೋಲಿಸಲಾಗಿದೆ.   ಚಿತ್ರದಲ್ಲಿ ಪ್ರತಿಯೊಂದು ಪಾತ್ರಗಳು ಬೇರೆ ತರಹ ಕಾಣಿಸುತ್ತವೆ. ಮುಂದೆ ಅಂತ ನೋಡುವಾಗ ಬೇರೆ ರೀತಿಯ ಇನ್ನೋಂದು, ಮತ್ತೋಂದು ಮುಖ  ಕಾಣಸಿಕೊಂಡು ಇದಮಿತ್ಥಂ ಅನಿಸುತ್ತದೆ.  ಯಾರು, ಯಾವ ಪಾತ್ರಗಳನ್ನು ಒಂದೇ ಮುಖದಲ್ಲಿ ನೋಡುವುದು ಕಷ್ಟವಾಗುತ್ತದೆ.  ಮಡಕೇರಿಯಲ್ಲಿ ನಡೆಯುವ ಮರ್ಡರ್ ಮಿಸ್ಟರಿ ಕತೆಯಲ್ಲಿ ಸೆಸ್ಪೆನ್ಸ್, ....

1267

Read More...

Aa Dhrushya.Film Teaser Rel.

Tuesday, August 13, 2019

ದೃಶ್ಯಂ  ನಂತರ ಆ ದೃಶ್ಯಂ           ಒಂದು ಹೆಸರಿನ ಮೇಲೆ ಚಿತ್ರವೊಂದು ಯಶಸ್ಸು ಕಂಡರೆ, ಅದೇ ಹೆಸರಿಗೆ ಹಿಂದೆ,ಮುಂದೆ  ಹೊಸ ಪದಗಳನ್ನು ಸೇರಿಸಿಕೊಂಡು ಬರುವ ಸಿನಿಮಾಗಳಿಗೇನು ಬರವಿಲ್ಲ. ಆ ಸಾಲಿಗೆ ‘ಆ ದೃಶ್ಯಂ’  ಸೆಸ್ಪನ್ಸ್, ಥ್ರಿಲ್ಲರ್  ಸಿನಿಮಾವು  ಸೇರ್ಪಡೆಯಾಗುತ್ತದೆ.  ‘ಧ್ರುವಂಗಳ್ ೧೬’ ತಮಿಳು ಚಿತ್ರದ ಕತೆಯನ್ನು ಕನ್ನಡಿಕರಣಗೊಳಿಸಲಾಗಿದೆ. ಮೊದಲ ಚಿತ್ರದಲ್ಲಿ ರವಿಚಂದ್ರನ್ ಪೋಲೀಸ್‌ರಿಂದ  ಹೊಡೆಸಿಕೊಂಡಿದ್ದರು. ಇದರಲ್ಲಿ ತನಿಖಾದಿಕಾರಿಯಾಗಿ ಅಪರಾದಿಗಳನ್ನು ಕಂಡಿ ಹಿಡಿಯುವ ಪಾತ್ರದಲ್ಲಿ ನಟಿಸಿದ್ದಾರೆ. ಅದೇ ಜಾನರ್‌ನ ಮತ್ತೋಂದು ಚಿತ್ರವೆಂದು ಕ್ರೇಜಿಸ್ಟಾರ್ ಬಣ್ಣಿಸಿಕೊಳ್ಳುತ್ತಾರೆ. ....

898

Read More...
Copyright@2018 Chitralahari | All Rights Reserved. Photo Journalist K.S. Mokshendra,