Film 100.Film Shooting Press Meet.

Tuesday, November 12, 2019

ಕೊನೆ ಹಂತದ  ಚಿತ್ರೀಕರಣದಲ್ಲಿ  ೧೦೦        ಪ್ರಚಲಿತ ಸಮಾಜದಲ್ಲಿ ಬೆಂಕಿ,ಚಾಕು, ಅಧಿಕಾರ, ಸೋಷಿಯಲ್ ಮೀಡಿಯಾ ಇದೆಲ್ಲದರ ಪರಿಣಾಮ ಯಾರ ಕೈಯಲ್ಲಿ ಅಂತ ನಿರ್ಧಾರವಾಗುತ್ತದೆ.  ಬೆಂಕಿ ತಪ್ಪಾದವರಿಂದ ಆದಾಗ ಹೊತ್ತಿಕೊಳ್ಳುತ್ತದೆ. ಚಾಕು ತಪ್ಪಾದವರ ಕೈಯಲ್ಲಿ ಸಿಕ್ಕರೆ ರಕ್ತದ ನದಿ ಹರಿಯುತ್ತದೆ.  ಅಧಿಕಾರ ತಪ್ಪಾದವರಿಗೆ ನೀಡಿದರೆ ಇತಿಹಾಸ ಬದಲಾಗುತ್ತದೆ. ಕೊನೆಯದಾಗಿ ಮುಖ್ಯವಾದುದು ಸಾಮಾಜಿಕ ಜಾಲತಾಣ. ತಪ್ಪಾದ ಕೈಯಲ್ಲಿ ಇದ್ದು, ಅದನ್ನು ದುರಪಯೋಗ ಪಡಿಸಿಕೊಂಡಾಗ ವಿಪರೀತ ಅನಾಹುತಗಳು ನಡೆಯುತ್ತದೆ. ಅಂತ ಕತೆಯೇ ‘೧೦೦’ ಚಿತ್ರ. ಇದನ್ನು ಕೆಟ್ಟಚಾಳಿಗೆ  ಉಪಯೋಗಿಸುವ ದುರಳವ್ಯಕ್ತಿಯಾಗಿ ಹೊಸ ಪ್ರತಿಭೆ ವಿಶ್ವ.  ಇವನನ್ನು ಸಂಹಾರ ಮಾಡುವ ....

392

Read More...

3rd Class.Film Audio Rel.

Tuesday, November 12, 2019

                                ಶೀರ್ಷಿಕೆ ಥರ್ಡ್ ಕ್ಲಾಸ್, ಕತೆ ಫಸ್ಟ್ ಕ್ಲಾಸ್         ವಿಭಿನ್ನ ಟೈಟಲ್  ‘ಥರ್ಡ್ ಕ್ಲಾಸ್’ ಕೇಳಿದಾಕ್ಷಣ  ಇದೊಂದು ಆ ತರಹದ  ಸಿನಿಮಾ ಅಂದುಕೊಳ್ಳಬಹುದು. ಹಣೆಬರಹಕ್ಕೆ  ಯಾರು ಹೊಣೆ ಅಂತ ಉಪಶೀರ್ಷಿಕೆಯಲ್ಲಿ ಹೇಳಿಕೊಂಡಿದೆ. ಹೆಸರು  ಈ ರೀತಿ ಇದ್ದರೂ ಕತೆ ಫಸ್ಟ್ ಕ್ಲಾಸ್ ಆಗಿದೆ ಅಂತ ಕತೆ ಬರೆದು ಮೊದಲಬಾರಿ ನಾಯಕ ಜೊತೆಗೆ ನಿರ್ಮಾಣ ಮಾಡಿರುವ  ನಮ್‌ಜಗದೀಶ್  ಬಣ್ಣಿಸಿಕೊಂಡರು. ಮೂರು ವಿಧದ ಜೀವನ ಶೈಲಿಯಾದ ಗ್ಯಾರೇಜು, ಸಿರಿತನ, ಮಧ್ಯಮವರ್ಗ ಇವುಗಳನ್ನು ಸಮಾಜವು  ಹೇಗೆ ನೋಡುತ್ತದೆ ಎಂಬುದನ್ನು ಹೇಳಲಾಗಿದೆ.  ಜೀವನದಲ್ಲಿ ಯಾವುದೇ ತಪ್ಪುಗಳು, ....

461

Read More...

Daaki Tappida Maga.Film Re-Rel.

Tuesday, November 12, 2019

ಮತ್ತೋಮ್ಮೆ  ತೆರೆ  ಮೇಲೆ  ಕ್ಲಾಸಿಕ್ ಸಿನಿಮಾ

         ಚಿಕ್ಕ ವಯಸ್ಸಿನಲ್ಲಿ ಮಕ್ಕಳು ಯಾವ ರೀತಿಯಲ್ಲಿ  ಬೆಳಯುತ್ತಾರೆ. ಒಳ್ಳೆಯ ದಾರಿಯಲ್ಲಿ ಹೋಗುವವನು ವಿದ್ಯಾವಂತ, ಕೆಟ್ಟ ಕೆಲಸ ಕಲಿತವನು ಮೋಸಗಾರನಾಗುತ್ತಾನೆ. ಇಂತಹುದೇ ವಿಷಯವನ್ನು ತೆಗೆದುಕೊಂಡ ‘ದಾರಿ ತಪ್ಪಿದ ಮಗ’ ಚಿತ್ರವು ೭೦ರ ದಶಕದಲ್ಲಿ ಬಿಡುಗಡೆಗೊಂಡು  ಸೂಪರ್ ಹಿಟ್ ಆಗಿತ್ತು. ಡಾ.ರಾಜ್‌ಕುಮಾರ್ ದ್ವಿ ಪಾತ್ರದಲ್ಲಿ ಅಭಿನಯಿಸಿದ್ದರು. ಆರತಿ, ಜಯಮಾಲ, ಮಂಜುಳ ನಾಯಕಿಯರು. ತೂಗದೀಪಶ್ರೀನಿವಾಸ್, ವಜ್ರಮುನಿ, ಅಶ್ವಥ್ ಮುಂತಾದವರು ನಟಿಸಿದ್ದರು. ಕೆಸಿಎನ್.ಗೌಡ ನಿರ್ಮಾಣ, ಪಕೇಟಿಶಿವರಾಂ ನಿರ್ದೇಶನದಲ್ಲಿ ಜಿ.ಕೆ.ವೆಂಕಟೇಶ್ ಸಂಗೀತದ ಎಲ್ಲಾ ಹಾಡಗಳು ಇಂದಿಗೂ ಆಲಿಸುವಂತಿದೆ.  

399

Read More...

Aayushmanbhava.Movie Rel Press Meet.

Monday, November 11, 2019

ಬಿಡುಗಡೆ ಹೊಸ್ತಿಲಿನಲ್ಲಿ ಆಯುಷ್ಮಾನ್‌ಭವ          ಶಿವರಾಜ್‌ಕುಮಾರ್, ರಚಿತಾರಾಮ್ ಜೋಡಿಯ ‘ಆಯುಷ್ಮಾನ್‌ಭವ’ ಚಿತ್ರದ ಕತೆಯು ತುಂಬಿದ ಕುಟುಂಬ ಮನೆಯಲ್ಲಿ ಇದ್ದರೆ ದೇಶ. ಅದೇ ಶೀರ್ಷಿಕೆಯಾಗಿದೆ. ಮನುಷ್ಯನ  ಬದುಕಿನ ಪಯಣದಲ್ಲಿ ಭಾವನೆಗಳು ಬರುತ್ತವೆ. ಅದು ಒಳ್ಳೇದು,ಕೆಟ್ಟದ್ದು ಇರುತ್ತದೆ. ಅದರಲ್ಲಿ ಸಿಲುಕಿಕೊಂಡು ಹೇಗೆ ಒದ್ದಾಡುತ್ತಾ, ತಪ್ಪು ಮಾಡಿದಂತೆ ಭಾಸವಾಗುತ್ತದೆ ಎಂಬುದು ಸಾರಾಂಶವಾಗಿದೆ. ತಾರಗಣದಲ್ಲಿ ಅನಂತ್‌ನಾಗ್, ಸುಹಾಸಿನಿ, ಶಿವಾಜಿಪ್ರಭು, ಜೈಜಗದೀಶ್, ವೀಣಾಸುಂದರ್,  ಯಶಸ್‌ಶೆಟ್ಟಿ, ನಿಧಿಸುಬ್ಬಯ್ಯ, ಸಾಧುಕೋಕಿಲ ಮುಂತಾದವರು ನಟಿಸಿದ್ದಾರೆ. ಐದು ಹಾಡುಗಳಿಗೆ ಗುರುಕಿರಣ್ ಸಂಗೀತ ಸಂಯೋಜಿಸಿರುವ ನೂರನೇ ಚಿತ್ರವಾಗಿರುವುದು ....

375

Read More...

Raa.Film Press Meet.

Monday, November 11, 2019

ನಾಯಕನ  ಹೆಸರು ಹೇಳಿ  ಬಹುಮಾನ ಗೆಲ್ಲಿ         ಯಾವುದೇ ಚಿತ್ರವು ಜನರಿಗೆ ತಲುಪಬೇಕಾದರೆ ಪ್ರಚಾರ ಬಹು ಮುಖ್ಯವಾಗಿರುತ್ತದೆ. ಇದಕ್ಕೆಂದೆ ಹಲವು ಬಗೆಯ ಯೋಚನೆ, ಆಲೋಚನೆಗಳನ್ನು ಮಾಡುತ್ತಾರೆ. ಇದರಲ್ಲಿ ಯಶಸ್ಸು ಎನ್ನುವುದು ಬಿಡುಗಡೆ ನಂತರ ಗೊತ್ತಾಗುತ್ತದೆ. ಆ ಸಾಲಿಗೆ ‘ರಾ’ ಚಿತ್ರವೊಂದು ಸೇರಿಕೊಂಡಿದೆ.  ಈಗಾಗಲೇ ಶೇಕಡ ೮೦ರಷ್ಟು ಚಿತ್ರೀಕರಣ ಸದ್ದಿಲ್ಲದೆ  ಮುಗಿದಿದೆ. ಕಥಾನಾಯಕ, ನಾಯಕನ ಹೆಸರು ರಾ ಅಕ್ಷರದಲ್ಲಿ ಇರಲಿದೆ. ಟೈಟಲ್‌ನ್ನು ಜನರ ಮನಸ್ಸಿನಲ್ಲಿ ಕೂರಿಸಬೇಕು. ನಾಯಕನ ಪರಿಚಯವಾಗಬಾರದೆಂದು ಪೋಸ್ಟರ್‌ದಲ್ಲಿ ಹೆಸರು ಹೇಳಿ ಬಹುಮಾನ ಗೆಲ್ಲಿ ಅಂತ ಹೇಳಿಕೊಂಡಿದ್ದಾರೆ.  ಲಕ್ಕಿ ಡಿಪ್ ಮೂಲಕ ಸರಿಯಾದ ಉತ್ತರ ನೀಡಿದವರಿಗೆ ಹಣ ನೀಡಲಾಗುವುದು. ....

426

Read More...

Jan Dhan.Film Audio Rel.

Monday, November 11, 2019

ಅಪನಗಧೀಕರಣದ  ಸತ್ಯ  ಘಟನೆಗಳು          ಕೇಂದ್ರ ಸರ್ಕಾರವು  ರೂ.೨೦೦೦ ಮತ್ತು ರೂ.೫೦೦ ಬೆಲೆಯ ನೋಟುಗಳನ್ನು ೨೦೧೬ರಲ್ಲಿ ಅಪನಗದಿಕರಣಗೊಳಿಸಿತು, ಈ ಸಂದರ್ಭದಲ್ಲಿ  ಜನಸಾಮಾನ್ಯರು ಯಾವ ರೀತಿ ಸಮಸ್ಯೆಗೆ ಒಳಪಟ್ಟರು. ಕಾಳಧನಿಕರು ಬಡವರನ್ನು ಹೇಗೆ ಉಪಯೋಗಿಸಿಕೊಂಡರು ಎಂಬುದು ಎಲ್ಲರೂ ನೋಡಿದ್ದು, ಕೇಳಿದ್ದು ಆಗಿದೆ.  ಅದಕ್ಕಿಂತಲೂ ಭಿನ್ನವಾದ ಒಂದಷ್ಟು ಸಂಗತಿಗಳನ್ನು ‘ಜನ್‌ಧನ್’ ಸಿನಿಮಾದಲ್ಲಿ ತೋರಿಸುವ ಪ್ರಯತ್ನ ಮಾಡಲಾಗಿದೆ.  ಇದಕ್ಕೆ ಪೂರಕವಾಗಿ ಬೆಂಗಳೂರು  ಟು ಚಿತ್ರದುರ್ಗವೆಂದು ಅಡಿಬರಹದಲ್ಲಿ  ಹೇಳಿಕೊಂಡಿದೆ. ಹಾಗಂತ  ತಂಡವು ಏಕಾಏಕಿ ಮಾಹಿತಿ  ಕಲೆ ಹಾಕಿಲ್ಲ.  ಅಡಿಪಾಯದಲ್ಲಿ ಸಂಶೋಧನೆ ನಡೆಸಿ ಮತ್ತಷ್ಟು ವಿಷಯಗಳನ್ನು ....

403

Read More...

Raja Lakshmi.Movie Press Meet.

Monday, November 11, 2019

ರಾಜಲಕ್ಷೀಗೆ ನಾಯಕನ ಆವಜ್ಘೆ         ಚಂದನವನದಲ್ಲಿ ಕಲಾವಿದರು ಪ್ರಚಾರಕ್ಕೆ ಗೈರು ಹಾಜರಾಗುತ್ತಿರುವುದರಿಂದ ಆಯಾ ಚಿತ್ರಕ್ಕೆ ಪೆಟ್ಟು ಬೀಳುತ್ತಿರುವುದು ಇತ್ತೀಚಿಗೆ ಗಮನಕ್ಕೆ ಬಂದಿದೆ. ಆ ಸಾಲಿಗೆ ‘ರಾಜಲಕ್ಷೀ’ ಚಿತ್ರ ಸೇರ್ಪಡೆಯಾಗಿದೆ. ಬಿಡುಗಡೆಪೂರ್ವ ಸುದ್ದಿಗೋಷ್ಟಿಯಲ್ಲಿ ನಿರ್ಮಾಪಕ ಎಸ್.ಕೆ.ಮೋಹನ್‌ಕುಮಾರ್ ಬಹಿರಂಗವಾಗಿ ನಾಯಕ ನವೀನ್‌ತೀರ್ಥಹಳ್ಳಿ ಮೇಲೆ ಬೇಸರ ವ್ಯಕ್ತಪಡಿಸಿ, ಪೋಷಕ ನಟರುಗಳೇ ನಮ್ಮ ಚಿತ್ರದ ಸ್ಟಾರ್‌ಗಳು. ಇಂತಹ ನಾಯಕರು ಚಿತ್ರರಂಗಕ್ಕೆ ಮಾರಕ. ಸ್ಟಾರ್ ನಟರಿಗೆ ಫ್ಯಾನ್ಸ್  ಇರುವುದು ಸಹಜ. ಆದರೆ ಮೊದಲು ಎನ್ನುವಂತೆ  ನಮ್ಮ ಚಿತ್ರಕ್ಕೆ ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ. ಪ್ರತಿ ಜಿಲ್ಲೆಯಲ್ಲಿ ಖುದ್ದು ....

465

Read More...

Kaurya.Movie Audio Rel.

Saturday, November 09, 2019

                           ಶಂಕರ್‌ನಾಗ್ ವರ್ಧಂತಿಗೆ ಹಾಡು        ಟೆಕ್ಕಿಗಳಾದ ಯುವಕರ ತಂಡವೊಂದು ರಜಾ ದಿನಗಳಲ್ಲಿ ಅನಿಲ್‌ರಾಜಪ್ಪ ಸಾರಥ್ಯದಲ್ಲಿ ಟೀಂ ಶಂಕರ್‌ನಾಗ್ ತಂಡವನ್ನು ಶುರುಮಾಡಿ, ಇವರ ಹುಟ್ಟುಹಬ್ಬದಂದು ವಿಶೇಷ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಾ ಬಂದಿದೆ. ಈಗ ಇದೇ ತಂಡದಿಂದ ‘ಕೌರ್ಯ’ ಎನ್ನುವ ಆಕ್ಷನ್,ಥ್ರಿಲ್ಲರ್, ಸೆಸ್ಪನ್ಸ್, ಅಪರಾಧ ಹಾಗೂ  ತನಿಖೆ ಕುರಿತ ಚಿತ್ರವೊಂದು ಸದ್ದಿಲ್ಲದೆ ಶೇಕಡ ೭೦ರಷ್ಟು ಚಿತ್ರೀಕರಣ ಬೆಂಗಳೂರು ಸುತ್ತ,ಮುತ್ತ ನಡೆಸಿದ್ದಾರೆ.  ಪ್ರಚಾರದ ಮೊದಲ ಹಂತವಾಗಿ ನವೆಂಬರ್ ೯ ಶಂಕರ್‌ನಾಗ್ ಹುಟ್ಟಹಬ್ಬದಂದು ಅವರದೇ ಚಿತ್ರದ ಹೆಸರುಗಳ ಸಾಹಿತ್ಯ ಇರುವ ಲಿರಿಕಲ್ ....

425

Read More...

Gulal.Film Audio Rel.

Saturday, November 09, 2019

ಐವರು  ಹುಡುಗರ  ಯಶೋಗಾಥೆ  ಗುಲಾಲ್         ಉತ್ತರ ಕರ್ನಾಟಕ ಭಾಗದಲ್ಲಿ ಹುಟ್ಟಿದಾಗ ಗುಲಾಲ್ ಬಣ್ಣ ಹಾರಿಸ್ತಾರೆ, ಸತ್ತಾಗ ಗೌರವ ಸಲ್ಲಿಸಲು ಇದನ್ನೆ ಏರಿಸ್ತಾರೆ. ಬದುಕಲ್ಲಿ ಸಾವು ಅಂದರೆ ಕಷ್ಟ, ಹುಟ್ಟುಗೆ ಅರ್ಥ ಸುಖ ಕೊಡುತ್ತದೆ. ಇವೆರಡನ್ನು ಬಿಂಬಿಸುವ ‘ಗುಲಾಲ್.ಡಾಟ್ ಕಾಮ್’ ಚಿತ್ರವೊಂದು ಬೆಂಗಳೂರು, ಬೆಳಗಾಂ,ಕಿತ್ತೂರು  ಮುಂತಾದ ಕಡೆಗಳಲ್ಲಿ ಚಿತ್ರೀಕರಣ ನಡೆದಿದೆ.   ‘ಈ  ಸಲ ... ನಮ್ದೆ’  ಅಂತ ಅಡಿಬರಹದಲ್ಲಿ ಹೇಳಿಕೊಂಡಿದೆ. ಪ್ರತಿಯೊಬ್ಬರ ಬದುಕಿನಲ್ಲಿ ನೋವು-ಸಾವು, ಕಷ್ಟ-ಸುಖ ಇರುತ್ತದೆ. ಆ ಒಂದು ಪಯಣವೇ ಶೀರ್ಷಿಕೆಯಾಗಿದೆ. ದೇವರು ಪ್ರತಿಯೊಬ್ಬರಿಗೂ ಶಕ್ತಿ ಕೊಟ್ಟಿರುತ್ತಾನೆ. ಅದನ್ನು ಗುರುತಿಸಲು ಗುರು ಅಂತ ಒಬ್ಬರು ಇರಬೇಕು.  ....

1644

Read More...

Bhagyashree.Film Rel On 15th Nove 2019.

Saturday, November 09, 2019

ಬಾಲ್ಯ ವಿವಾಹ ನಿರ್ಮೂಲನ ಮಾಡುವ ಭಾಗ್ಯಶ್ರೀ          ಪಟ್ಟಣದಲ್ಲಿ ಬಾಲ್ಯ ವಿವಾಹ ಕಡಿಮೆಯಾಗಿದೆ. ಆದರೆ ಗ್ರಾಮಾಂತರ ಪ್ರದೇಶ ಅದರಲ್ಲೂ ಹಳ್ಳಿಗಳಲ್ಲಿ ಈಗಲೂ ಚಾಲ್ತಿಯಲ್ಲಿದೆ. ಇದನ್ನು ತಡೆಗಟ್ಟಬೇಕೆಂದು ಹೇಳುವ ‘ಭಾಗ್ಯಶ್ರೀ’ ಚಿತ್ರವೊಂದು ಬಿಡುಗಡೆಗೆ ಸಿದ್ದವಾಗಿದೆ. ಮೂರು ದಶಕಕ್ಕೂ ಹೆಚ್ಚು ಕಾಲ ಚಿತ್ರರಂಗದಲ್ಲಿ ಅನುಭವ ಪಡೆದುಕೊಂಡಿರುವ ಎಸ್.ಮಲ್ಲೇಶ್ ವಿರಚಿತ ‘ಭಾಗ್ಯ’ ಕಿರು ಕಾದಂಬರಿಯು ಅವರದೇ ಚಿತ್ರಕತೆ, ನಿರ್ದೇಶನ ಇರುವುದು ವಿಶೇಷ. ಪತ್ರಿಕೆಗಳಲ್ಲಿ ಬಂದಂತ ಸುದ್ದಿಗಳನ್ನು ಕಲೆ ಹಾಕಿ ಇದಕ್ಕೊಂದು ರೂಪ ನೀಡಿದ್ದಾರೆ. ಕತೆಯಲ್ಲಿ ಶಾಲೆಗೆ ಹೋಗುತ್ತಿರುವ ಪುಟ್ಟ ಬಾಲಕಿಗೆ ವಿವಾಹ ಮಾಡಲು  ನಿರ್ಣಯ ತೆಗೆದುಕೊಳ್ಳುತ್ತಾರೆ. ಇದನ್ನು ....

414

Read More...

Jigri Dosth.Movie Audio Rel.

Friday, November 08, 2019

ಪ್ರೀತಿಗೂ ಮೀರಿದ್ದು ದೋಸ್ತಿ          ಗೆಳತನದ ಮೌಲ್ಯ ಸಾರುವ ‘ಜಿಗ್ರಿ ದೋಸ್ತ್’ ಚಿತ್ರದ ಆಡಿಯೋ ಸಿಡಿಯನ್ನು ಪುನೀತ್‌ರಾಜ್‌ಕುಮಾರ್ ಮತ್ತು ಮಾಜಿ ಸಚಿವ ಟಿ.ಬಿ.ಜಯಚಂದ್ರ ಅನಾವರಣಗೊಳಿಸಿದರು. ಪುನೀತ್ ಮಾತನಾಡಿ ನಿರ್ಮಾಪಕರು ಅಮ್ಮನಿಗೆ, ನಿರ್ದೇಶಕರು ನನಗೆ ಪರಿಚಯದವರು. ಅದಕ್ಕಾಗಿ ಬರಬೇಕಾಯಿತು. ೨೭ ಚಿತ್ರಗಳನ್ನು ನಿರ್ಮಾಣ ಮಾಡಿರುವುದು ಸುಲಭದ ಮಾತಲ್ಲ. ಕಲಾವಿದರು ತಂಡಕ್ಕೆ ಒಳ್ಳೆಯದಾಗಲಿ ಎಂದರು.       ಯುವಕನಾಗಿದ್ದಾಗ ಡಾ.ರಾಜ್‌ಕುಮಾರ್ ಅಭಿಮಾನಿಯಾಗಿದ್ದೆ. ಅವರು ಇಟ್ಟ ಹೆಜ್ಜೆಯಂತೆ ಶಿವಣ್ಣ, ಪುನೀತ್ ನಡೆಸಿಕೊಂಡು ಹೋಗುತ್ತಿದ್ದಾರೆ.  ಭಾರತೀಯ  ಸಿನಿಮಾರಂಗದಲ್ಲಿ  ಉತ್ತಮ ಸಿನಿಮಾ, ಸಾಹಿತ್ಯ ಬರುತ್ತಿರುವುದು  ....

480

Read More...

Nam Gani B.Com.Film Rel On 15th Nove 2019.

Monday, November 11, 2019

ಚಿತ್ರಮಂದಿರದಲ್ಲಿ  ನಮ್ ಗಣಿ ಬಿ.ಕಾಂ ಪಾಸ್      ಸೆಕೆಂಡ್ ಆಫ್ ನಿರ್ಮಾಣ ಮಾಡಿರುವ ಯು.ಎಸ್.ನಾಗೇಶ್‌ಕುಮಾರ್ ಎರಡನೆ ಪ್ರಯತ್ನ ಎನ್ನುವಂತೆ ಆಶಾಭಾವನೆಯಿಂದ ‘ನಮ್ ಗಣಿ ಬಿ.ಕಾಂ ಪಾಸ್’  ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.  ಗಣಿ ಅಂದ ಮಾತ್ರಕ್ಕೆ ಬಳ್ಳಾರಿ ಗಣಿಧಣಿಗಳ ಕತೆ ಇರುವುದಿಲ್ಲ.  ಬಿ.ಕಾಂ ಮುಗಿಸಿರುವ ಗಣಿ ನಿರುದ್ಯೋಗಿಯಾಗಿ ಮೂರು ವರ್ಷ ಉಡಾಳತನದಿಂದ ಇರುತ್ತಾನೆ. ಇದರಿಂದ ಎಲ್ಲಾ ಕಡೆಗಳಿಂದಲೂ ಅಪಮಾನ, ಅವಮಾನಗಳನ್ನು ಎದುರಿಸುತ್ತಿರುತ್ತಾನೆ.  ಮುಂದೆ ಗೆಳಯನೊಂದಿಗೆ ವ್ಯಾಪಾರ ಮಾಡಲು ಹತ್ತು ಲಕ್ಷ ಅವಶ್ಯವಾಗಿರುತ್ತದೆ,  ನಂತರ ಹಣವನ್ನು ಯಾವ ರೀತಿ ಸಂಪಾದಿಸುತ್ತಾರೆ. ಅದರಿಂದ ಹೇಗೆ ಅಭಿವೃದ್ದಿಗೊಳ್ಳುತ್ತಾರೆ ಎಂಬುದನ್ನು  ....

913

Read More...

Mane Maratakkide.Film Rel On 15th 2019.

Saturday, November 09, 2019

ಹಾರರ್  ಕಾಮಿಡಿ  ಸಮ್ಮಿಲನ         ಹಾರರ್ ಚಿತ್ರವೆಂದರೆ ಅಲ್ಲಿ ಬೇರೆ ಯಾವುದಕ್ಕೆ ಅವಕಾಶ ಇರುವುದಿಲ್ಲ. ಅದರಂತೆ ಕಾಮಿಡಿ ಅಂದರೆ ನಗು ಬಿಟ್ಟು ಬೇರೇನೂ ಸಿಗುವುದಿಲ್ಲ. ಹೊಸತು ಎನ್ನುವಂತೆ  ‘ಮನೆ ಮಾರಾಟಕ್ಕಿದೆ’ ಅಡಿ ಬರಹದಲ್ಲಿ ದೆವ್ವಗಳೇ  ಎಚ್ಚರಿಕೆ  ಎಂದು ಹೇಳಿಕೊಂಡಿರುವ ಚಿತ್ರದಲ್ಲಿ ಇವರೆಡು ಒಂದರ ನಂತರ ಸನ್ನಿವೇಶಗಳಲ್ಲಿ ಮೂಡಿಬಂದಿದೆ. ಶಶಿರ, ಶ್ರೀಕಂಠ, ಶ್ರಾವಣಿ ಸುಬ್ರಮಣಿ, ಪಟಾಕಿ ಚಿತ್ರಗಳ ನಿರ್ದೇಶಕ ಮಂಜುಸ್ವರಾಜ್ ಈ ಬಾರಿ ಎರಡು ಅಂಶಗಳನ್ನು ಸೇರಿಸಿಕೊಂಡು ಕತೆ ಹಣೆಯಲು ತೆಲುಗು ಚಿತ್ರ ಸ್ಪೂರ್ತಿಯಂತೆ. ಬಾರ್‌ನಲ್ಲಿ ಕ್ಯಾಶಿಯರ್ ಆಗಿರುವ ಚಿಕ್ಕಣ್ಣ, ಎಣ್ಣೆ ಪ್ರಿಯಾ ಸಾಧುಕೋಕಿಲ, ಇರಳು ಗಣ್ಣಿನ ಎಟಿಎಂ ಸೆಕ್ಯುರಿಟಿ ಗಾರ್ಡ್ ....

882

Read More...

Katha Sangama.Film Trailer Launch.

Monday, November 04, 2019

ವೈರಲ್ ಆಯ್ತು ಕಥಾ ಸಂಗಮ ಟ್ರೈಲರ್        ಏಳು ನಿರ್ದೇಶಕರು, ಛಾಯಾಗ್ರಾಹಕರು, ಸಂಗೀತ ನಿರ್ದೇಶಕರು ಒಕ್ಕರೂಲದಿಂದ ಕೆಲಸ ಮಾಡಿರುವ ‘ಕಥಾ ಸಂಗಮ’ ಸಿನಿಮಾದಲ್ಲಿ  ಪ್ರತಿ ಕಿರುಚಿತ್ರವು ಅಂದಾಜು ೧೮-೨೦ ನಿಮಿಷ, ಪ್ರತಿಯೊಂದಕ್ಕೂ ಶೀರ್ಷಿಕೆ ಇರಲಿದ್ದು, ಒಟ್ಟಾರೆ ಕಥಾಸಂಗಮವಾಗಿದೆ. ಮೊದಲನೆಯದು  ಮಂಗಳೂರು  ಪಟ್ಟಣದ ಹಿನ್ನಲೆಯಾಗಿದೆ. ಆರಾಮಾಗಿ ಇದ್ದ ಹುಡುಗನ ಬದುಕು ಒಂದು ಘಟನೆಯಿಂದ ಹೇಗೆ ಬದಲಾಗುತ್ತಾನೆ.  ಎರಡನಯದು  ಸಿಲಿಕಾನ್ ಸಿಟಿಯ ಬದುಕು ಹೇಗಿರುತ್ತದೆ.  ಸಂಬಂದಗಳ ಮೌಲ್ಯಗಳನ್ನು ತೋರಿಸಲಾಗಿದೆ. ಮೂರನೆಯದು  ವಿಮಾ ಕಚೇರಿಯಲ್ಲಿ ಒಂದು ದಿವಸ  ಮುಂಚೆ  ನಿವೃತ್ತಿಯಾಗುವ ನೌಕರನ ಚಡಪಡಿಕೆಯನ್ನು  ಹೇಳಲಾಗಿದೆ. ಇಬ್ಬರು  ಸಮಸ್ಯೆಗೆ ....

962

Read More...

Brahmachari.Film Trailer Launch.

Monday, November 04, 2019

ವೈಯಕ್ತಿಕ ಸಮಸ್ಯೆಯನ್ನು ಹೇಳಿಕೊಳ್ಳುವ ಬ್ರಹ್ಮಚಾರಿ           ಹಾಸ್ಯ ಚಿತ್ರ ‘ಬ್ಯಹ್ಮಚಾರಿ’ ಚಿತ್ರದ ಟೀಸರ್‌ದಲ್ಲಿ ಕತೆಯ ಒಂದು ಏಳೆಯನ್ನು ತೋರಿಸಿದ್ದು ವೈರಲ್ ಆಗಿತ್ತು. ಈಗ ಪಾತ್ರಗಳ ಪರಿಚಯ ಮಾಡಿಸಲು  ತುಣುಕುಗಳು  ಬಿಡುಗಡೆಯಾಗಿದೆ. ಏನು ತಪ್ಪು ಮಾಡದೆ ಇದ್ದವನಿಗೆ ಕಷ್ಟಗಳು ಎದುರಾಗುತ್ತವೆ. ಪ್ರಸಕ್ತ ಸಮಾಜದಲ್ಲಿ ಹಲವರಿಗೆ ವೈಯಕ್ತಿಕ ಸಮಸ್ಯೆಗಳನ್ನು ಇತರರೊಂದಿಗೆ ಹಂಚಿಕೊಳ್ಳುವುದು ಮುಜುಗರ ಅನಿಸುತ್ತದೆ. ಇದರಿಂದ ಅಂತರಾಳದಲ್ಲಿ ವೇದನೆ ಅನುಭವಿಸುತ್ತಿರುತ್ತಾರೆ. ಇವುಗಳ ಪರಿಹಾರಕ್ಕೆ ಹುಡುಕಿಕೊಂಡು ಹೋಗುವಾಗ ಬೇರೊಂದು ವಿಷಯದ ಪಯಣವು ತೆರೆದುಕೊಳ್ಳುತ್ತದೆ.  ಸನ್ನಿವೇಶಗಳು ಕಾಮಿಡಿಯಾಗಿರುವುದರಿಂದ ಕುಟುಂಬಸಮೇತ ....

950

Read More...

Ranabhoomi.Film Press Meet.

Monday, November 04, 2019

                             ಚಿತ್ರಮಂದಿರದಲ್ಲಿ ರಣಭೂಮಿ         ಹುಟ್ಟು ಅನಿವಾಯವಾದ್ರು... ಸಾವು ಚರಿತ್ರೆ ಆಗಬೇಕು... ಎಂದು ಅಡಿಬರಹದಲ್ಲಿರುವ ‘ರಣಭೂಮಿ’ ಚಿತ್ರಕ್ಕೆ ಬರವಣಿಗೆ,ಚಿತ್ರಕತೆ, ಸಂಭಾಷಣೆ, ನಿರ್ದೇಶನ ಮಾಡಿರುವ  ಚಿರಂಜೀವಿದೀಪಕ್  ಮಾನಸಿ ಫಿಲ್ಮ್ಸ್ ಮುಖಾಂತರ ನಿರ್ಮಾಣ ಮಾಡಿದ್ದಾರೆ. ಜೋಕಾಲಿ ನಂತರ ಇದಕ್ಕಿಂತಲೂ ಒಳ್ಳೆ ಚಿತ್ರ ಕೊಡಬೇಕೆಂಬ ಗಮ್ಯದಿಂದ ಸಾಹಸಕ್ಕೆ ಕೈ ಹಾಕಿದ್ದಾರೆ.  ನಲವತ್ತೈದು ದಿನಗಳ ಕಾಲ ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. ಅದರಲ್ಲೂ ಎರಡು ದಿನ ಮಾತ್ರ ಬೆಳಗಿನ ಹೊತ್ತು, ಉಳಿದಂತೆ ರಾತ್ರಿ ವೇಳೆಯಲ್ಲಿ  ಸೆರೆಹಿಡಿಯಲಾಗಿದೆ.  ಸೆಸ್ಪನ್ಸ್, ಹಾರರ್, ....

936

Read More...

Relax Satya.Film Press Meet.

Monday, November 04, 2019

ರಿಲಾಕ್ಸ್,  ಕೂಲ್  ಸತ್ಯ        ಕ್ರೈಂ, ಥ್ರಿಲ್ಲರ್ ಹಾಗೂ ಕಾಮಡಿ ಜಾನರ್ ಹೊಂದಿರುವ ‘ರಿಲ್ಯಾಕ್ಸ್ ಸತ್ಯ’ ಚಿತ್ರವೊಂದು ತೆರೆಗೆ ಬರಲು ಸಜ್ಜಾಗಿದೆ. ಬದುಕಿನಲ್ಲಿ ಮನುಷ್ಯನ ಭಾವನೆಗಳು ಗರಿಷ್ಟ ಮಟ್ಟಕ್ಕೆ  ತಲುಪುತ್ತದೆ. ಈ ಹಂತದಲ್ಲಿ ಹತಾಶಗೆ ಒಳಗಾದಾಗ ಆತನ ಅಂತರಾಳದ ಮನಸ್ಸು  ಗೊಂದಲ ಬೇಡ, ರಿಲಾಕ್ಸ್‌ವೆಂದು ಹೇಳುತ್ತಿರುತ್ತದೆ. ಮುಂದೇನು ಎಂಬುದನ್ನು ನಿರ್ದೇಶಕ ನವೀನ್‌ರೆಡ್ಡಿ ಕುತೂಹಲ ಕಾಯ್ದಿರಿಸಿದ್ದಾರೆ. ಅಖಿರಾ ನಿರ್ದೇಶನ ಮಾಡಿರುವ ಇವರಿಗೆ ಎರಡನೆ ಅನುಭವ. ವಾಹನ ಚಾಲನ ತರಭೇತಿ  ಶಾಲೆಯಲ್ಲಿ ಶಿಕ್ಷಕನಾಗಿ ಕಾಣಿಸಿಕೊಂಡಿರುವ ಪ್ರಭುಮುಂಡೇಕರ್ ನಾಯಕ. ನಂದೇ, ನನ್ನಲೇ, ನನ್ನಿಂದ ಎಂದು ಸ್ವಗತವಾಗಿ ಮಾತನಾಡಿಕೊಳ್ಳುವ ಪಾತ್ರ. ....

919

Read More...

Film i1.Film Trailer Rel.

Tuesday, November 05, 2019

  ಕುತೂಹಲ ಕೆರಳಿಸುವ ಐ೧        ತಂತ್ರಜ್ಘಾನ ಬೆಳೆದಂತೆ ಪ್ರಸಕ್ತ ಯುವ ತಂತ್ರಜ್ಘರು ಹೊಸ ಬಗೆಯ ಚಿತ್ರಗಳನ್ನು ಕೊಡುತ್ತಿದ್ದಾರೆ.  ಇದರಲ್ಲಿ ಕೆಲವು ಯಶಸ್ವಿಯಾಗುತ್ತಿರುವುದು ನಮ್ಮ ಕಣ್ಣ ಮುಂದಿದೆ. ಈ ಸಾಲಿಗೆ ಕೊಂಡಿಯಾಗಿ ಯು ಪ್ರಮಾಣ ಪತ್ರ ಪಡೆದುಕೊಂಡಿರುವ  ‘ಐ ೧’ ಚಿತ್ರವು ಸೇರ್ಪಡೆಯಾಗಿದೆ. ಸದ್ಯ ಬಿಗ್‌ಬಾಸ್ ಮನೆಯಲ್ಲಿ ಹದಿನೈದು  ಸ್ಪರ್ಧಿಗಳು ಲಾಕ್ ಆಗಿದ್ದಾರೆ. ಅದರಂತೆ ಚಿತ್ರದ ಕತೆಯಲ್ಲಿ  ಮೂವರು ಅಮಾಯಕ ಹುಡುಗರನ್ನು ಒಬ್ಬನು  ಟೆಂಪೋ ಟ್ರಾವಲ್ (ಟಿಟಿ)ದಲ್ಲಿ ಬಂದಿಯಾಗಿಸುತ್ತಾನೆ. ಅದನ್ನು ಮಾಡಲು ಕಾರಣವಾದರೂ ಏನು? ಕೆಟ್ಟ ಮನುಷ್ಯರು ಎಷ್ಟು ಕೆಟ್ಟತನ ಮಾಡುತ್ತಾ ಇದ್ದರೂ, ಅದನ್ನು ವೀಕ್ಷಣೆ ಮಾಡೋ ಒಬ್ಬ ವ್ಯಕ್ತಿ ಅವನ ....

924

Read More...

Naanu Nan Jaanu.Film Press Meet.

Tuesday, November 05, 2019

ಪ್ರೀತಿ ಕಥನ ನಾನು ನನ್  ಜಾನು         ಬದುಕೇ ಚೆಂದ  ಇನ್ನು  ಅಂತ ಅಡಿಬರಹದಲ್ಲಿ ಹೇಳಿಕೊಂಡಿರುವ  ‘ನಾನು ನನ್ ಜಾನು’ ಚಿತ್ರದ ಕತೆಯು ಶೀರ್ಷಿಕೆ ಹೇಳುವಂತೆ ಸುಂದರ ಪ್ರೇಮ ಕತೆ ಜೊತೆಗೆ ತೆಳು ಹಾಸ್ಯ ಇರಲಿದೆ. ಒಬ್ಬನು ಸಾಧನೆ ಮಾಡಲು ಹೋಗುವಾಗ ಅವನಿಗೆ ಉತ್ತೇಜನ ಕೊಡುವ ಬದಲು  ನಿಂದನೆ ಮಾಡುತ್ತಾರೆ. ಆಡೋ ಜನರು ಕಡೆಗಣಿಸಿದರೂ ಕೊನೆಗೂ ತಾನು ಅಂದುಕೊಂಡಿದ್ದನ್ನು ಸಾಧಿಸುವ ಹೊತ್ತಿಗೆ ಎಲ್ಲವನ್ನು ಕಳೆದುಕೊಂಡಿರುತ್ತಾನೆ. ದುಡಿಮೆ ಮಾಡೋರಿಕೆ ಸಿಗೋ ಬೆಲೆ ಸಾಧನೆ ಮಾಡೋರಿಕೆ ಸಿಗೋಲ್ಲ. ಸಾಧನೆ ಮಾಡಿದ ಮೇಲೆ ಸಿಗೋಬೆಲೆ ಸತ್ತರೂ ಕಮ್ಮಿ ಆಗೊಲ್ಲ. ಸಾಧನೆ ಮಾಡೋ ಮುಂಚೆ ಈ ಸಮಾಜ ಆಡೋ ಮಾತಿಂದ ನಾವು ಏನೆಲ್ಲಾ ಕಳೆದುಕೊಳ್ತವೆ ಎಂಬುದು ಸಾರಾಂಶವಾಗಿದೆ. ....

990

Read More...

Ranahedi.Movie Rel Press Meet.

Tuesday, November 05, 2019

ರೈತಾಪಿ ಜನಗಳ ಬದುಕು ಬವಣೆ           ಯಾವುದೇ ಸರ್ಕಾರ ಬರಲಿ ರೈತರ ಬದುಕು ಅಸನಾಗಿಲ್ಲ. ಇಂತಹುದೆ ಕತೆಯುಳ್ಳ ‘ರಣಹೇಡಿ’ ಚಿತ್ರವೊಂದು ತೆರೆಗೆ ಬರಲು ಸಿದ್ದಗೊಂಡಿದೆ.  ಶೀರ್ಷಿಕೆ ಕೇಳಿದರೆ ಮಾಸ್ ಸಿನಿಮಾ ಅಂದುಕೊಳ್ಳಬಹುದು. ಆದರೆ ಪೋಸ್ಟರ್‌ನ ಟೈಟಲ್ ಕಾರ್ಡಿನಲ್ಲಿ ನೇಗಿಲು, ಗಾಡಿಯ ಚಕ್ರ, ನೇಣು ಕುಡಿಕೆ ತೋರಿಸಲಾಗಿ, ಬಲರಾಮನ ಕಡೆ ನೋಡಿ ಎಂದು ಅಡಿಬರಹದಲ್ಲಿ ಹೇಳಿಕೊಂಡಿದೆ. ಹೊಟ್ಟೆಗೆ ಆಹಾರ ಪ್ರಧಾನ, ಅನ್ನ ನೀಡುವ ಕೈಗಳು ದೇಶಕ್ಕೆ ಪ್ರಧಾನಿ. ರೈತಾಪಿ ಜನಗಳ ಬದುಕು ಬವಣೆ. ಅದರಲ್ಲೂ ಕಬ್ಬು ಬೆಳೆಗಾರರು ಅನುಭವಿಸುವ ಯಾತನೆಗಳು. ಸರ್ಕಾರಿ-ಖಾಸಗಿ ಶಾಲೆಗಳ ತಾರತಮ್ಯ. ಇದರ ಮದ್ಯೆ ನವಿರಾದ ಪ್ರೀತಿ,  ಪ್ರೇಮ ಇರಲಿದೆ. ರೈತ  ದೇವೋಭವ, ಗ್ರಾಮೀಣ ಭಾಗದ ....

959

Read More...
Copyright@2018 Chitralahari | All Rights Reserved. Photo Journalist K.S. Mokshendra,