Shardoola.Film Teaser Rel.

Saturday, August 03, 2019

ಗೊತ್ತಿಲ್ಲದಯೇ  ನಡೆಯುವ  ಘಟನೆಗಳ  ಶಾರ್ದೂಲ         ಒಂದು ಕಾರು  ರಾತ್ರಿ  ಕಾಡಿನೊಳಗೆ ಹೋಗುವಾಗ ‘ಶಾರ್ದೂಲ’ ಎನ್ನುವ ಬೋರ್ಡ್ ನೋಡಿ ನಿಂತುಕೊಳ್ಳುತ್ತದೆ.  ಕೆಲವು ಸೆಕೆಂಡ್‌ಗಳ ನಂತರ  ಕೈತುಂಡು ಮೇಲಿನಿಂದ ಬೀಳುತ್ತದೆ. ಇಷ್ಟು ಇರುವ ಟ್ರೈಲರ್ ನೋಡಿದಾಗ ಇದೊಂದು ಥ್ರಿಲ್ಲರ್ ಸಿನಿಮಾವೆಂದು ಸುಲಭವಾಗಿ ಹೇಳಬಹುದು. ಹಾಗಂತ ಇದರಲ್ಲಿ ಬಿಳಿ ಸೀರೆ ತೊಟ್ಟ ಹೆಂಗಸು, ರಾಕ್ಷಸ ಇರುವುದಿಲ್ಲ. ದಿನನಿತ್ಯದ ದೈನಂದಿನ ಕೆಲಸಗಳು ನಮಗೆ ತಿಳಿದಿರುತ್ತದೆ. ಅದರಂತೆ ನಾವುಗಳು  ಗೊತ್ತಿಲ್ಲದ ಜಾಗಕ್ಕೆ ಹೋದಾಗ ಅಲ್ಲಿನ ಅನುಭವ, ಜನ, ಸ್ಥಳ  ಅಗೋಚರವಾಗಿ ಕಾಣಿಸುತ್ತದೆ. ಅವೆಲ್ಲವು ಅತೀಂದ್ರಿಯ ಶಕ್ತಿಗಳು ಅಂತ ಅನ್ನಿಸೋಕೆ ಶುರುವಾಗುತ್ತದೆ. ಅಂತಹ ....

471

Read More...

Kurukshetra 3D.Film Press Meet.

Saturday, August 03, 2019

ಮುನಿರತ್ನ  ಕುರುಕ್ಷೇತ್ರ  ಮಾತುಗಳು         ಸತತ ಎರಡು ವರ್ಷಗಳಿಂದ ಸುದ್ದಿಯಾಗಿದ್ದ ‘ಮುನಿರತ್ನ ಕುರುಕ್ಷೇತ್ರ’ ಕೊನೆಗೆ ತೆರೆಗೆ ಬರಲು ಸಿದ್ದವಾಗಿದೆ. ಅದರಂತೆ ಕೊನೆಬಾರಿ ತಂಡವು  ಸಿನಿಮಾ ಹಿಂದಿನ ಶ್ರಮದ ಸಣ್ಣ ತುಣುಕುಗಳನ್ನು ತೋರಿಸಿ ಒಂದಷ್ಟು ಮಾಹಿತಿಗಳನ್ನು ತೆರೆದಿಟ್ಟರು.  ಮುನಿರತ್ನ, ನಿರ್ಮಾಪಕ; ಎರಡನೇ ತಾರೀಖು ಬರಲು ಸಿದ್ದತೆಗಳನ್ನು ಮಾಡಿಕೊಳ್ಳಲಾಗಿತ್ತು. ವರಮಹಾಲಕ್ಷೀ ಹಬ್ಬ ಶುಭದಿನವೆಂದು ಹಿತೈಷಿಗಳು ಸಲಹೆ ನೀಡಿದ್ದರಿಂದ ಒಂದು ವಾರ ಮುಂದಕ್ಕೆ ಹೋಗಲಾಗಿದೆ. ವಿತರಣೆಯನ್ನು ರಾಕ್‌ಲೈನ್ ಸಂಸ್ಥೆಯು ವಹಿಸಿಕೊಂಡಿದೆ. ೨ಡಿ,೩ಡಿಯಲ್ಲಿ ಎರಡು ಸಲ ಚಿತ್ರೀಕರಣ ನಡೆಸಿ, ಡಬ್ಬಿಂಗ್ ....

416

Read More...

Swecha.Film Press Meet.

Saturday, August 03, 2019

ಹೊಸಬರ  ಸ್ವೇಚ್ಛಾ         ದಕ್ಷಿಣ ಕನ್ನಡ ಜಿಲ್ಲೆಯಿಂದ ಹೆಚ್ಚು  ನಿರ್ಮಾಪಕರು ಬರುತ್ತಿರುವಂತೆ, ಈಗ ಬಳ್ಳಾರಿ ಕಡೆಯಿಂದ ಅನ್ನದಾತರ ಆಗಮನವಾಗುತ್ತಿದೆ. ಇದರ ಸಾಲಿಗೆ ‘ಸ್ವೇಚ್ಛಾ’ ಚಿತ್ರವೊಂದು ಸೇರಿದೆ. ಸಿರಗುಪ್ಪ ತಾಲ್ಲೋಕಿನ ಕೆ.ಆರ್.ಮುರಹರಿರೆಡ್ಡಿ ನಿರ್ಮಾಣ ಮಾಡಿದ್ದಾರೆ.  ತೆಲುಗು ಚಿತ್ರಗಳನ್ನು ವಿತರಣೆ ಮಾಡಿ ಕೈ ಸುಟ್ಟುಕೊಂಡಿದ್ದ ಸ್ಟಾರ್‌ಮಸ್ತಾನ್ ಅವರಿಗೆ ಶಿವರಾಜ್‌ಕುಮಾರ್ ಅಭಿನಯದ ಕಿಲ್ಲಿಂಗ್ ವೀರಪ್ಪನ್ ಡಬ್ಬಿಂಗ್ ಚಿತ್ರವು ಲಾಭ ತಂದುಕೊಟ್ಟಿದೆ. ಅದರಿಂದ ಕನ್ನಡ ಚಿತ್ರರಂಗದ ಬಗ್ಗೆ ಒಲವು ಬಂದು ಸಿನಿಮಾಕ್ಕೆ ಕೈ ಜೋಡಿಸಿದ್ದಾರೆ.  ಸೂಕ್ಷ ವಿಷಯಗಳ ಕುರಿತಾದ ಎರಡು ಸಮಾನಾಂತರದ ಕತೆಗಳು ಇರಲಿದೆ. ಹಳ್ಳಿಯಲ್ಲಿ ....

387

Read More...

Arjun Gowda.Film Teaser Rel.

Friday, August 02, 2019

ಆಕ್ಷನ್   ಅರ್ಜುನ್‌ಗೌಡ        ಕಳೆದ ವರ್ಷ ಟಾಲಿವುಡ್‌ನಲ್ಲಿ ಅರ್ಜುನ್‌ರೆಡ್ಡಿ ಚಿತ್ರವೊಂದು ಹಿಟ್ ಆಗಿ ಎಲ್ಲರಿಗೂ ಹೆಸರು ತಂದುಕೊಟ್ಟತ್ತು. ಈಗ ಚಂದನವನದಲ್ಲಿ ‘ಅರ್ಜುನ್‌ಗೌಡ’ ಸಿನಿಮಾವೊಂದು ಕೊನೆ ಹಂತದ ಚಿತ್ರೀಕರಣವನ್ನು ಬಾಕಿ ಉಳಿಸಿಕೊಂಡಿದೆ. ಆ ಚಿತ್ರಕ್ಕೂ ಇದಕ್ಕೂ ಸಂಬಂದವಿಲ್ಲವೆಂದು ಹೇಳಿಕೊಳ್ಳುವುದಕ್ಕೆ  ಟೀಸರ್ ಬಿಡುಗಡೆ ನೆಪ ಮಾಡಿಕೊಂಡು ತಂಡವು ಮಾದ್ಯಮದ ಎದುರು ಹಾಜರಾಗಿತ್ತು. ಮೊದಲಬಾರಿ ಆಕ್ಷನ್ ಚಿತ್ರಕ್ಕೆ ನಿರ್ದೇಶನ ಮಾಡಿರುವ ಶಂಕರ್ ಹೇಳುವಂತೆ ೬೫ ದಿನಗಳ ಕಾಲ ಬೆಂಗಳೂರು, ಮಂಗಳೂರು, ಊಟಿ, ಚಿಕ್ಕಮಗಳೂರು, ಮೈಸೂರು ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಹಾಡನ್ನು ಸಿಂಗಪೂರ್, ಮೆಲೇಶಿಯಾ, ಥೈಲ್ಯಾಂಡ್ ಶೂಟ್ ....

429

Read More...

Gubbi Mele Brahmastra.Film Press Meet.

Friday, August 02, 2019

ಗಾದೆ  ಮಾತು  ಚಿತ್ರದ  ಶೀರ್ಷಿಕೆ             ಚಿತ್ರದ ಶೀರ್ಷಿಕೆಗಳಿಂದ ಜನರು ಚಿತ್ರಮಂದಿರಕ್ಕೆ ಬರುತ್ತಾರೆಂಬ ನಂಬಿಕೆ ಅನಾದಿ ಕಾಲದಿಂದಲೂ ಬಂದಿದೆ. ಇದು ಮುಂದುವರೆಯುತ್ತಲೆ ಇದೆ. ಇದಕ್ಕೆ  ಸಾಕ್ಷಿಯಾಗಿ ಗಾದೆ ಮಾತು   ‘ಗುಬ್ಬಿ ಮೇಲೆ ಬ್ರಹ್ಮಾಸ್ತ್ರ’  ಹಾಸ್ಯ ಚಿತ್ರವೊಂದು ತೆರೆಗೆ ಬರಲು ಸಿದ್ದವಾಗಿದೆ. ಬೆಲ್‌ಬಾಟಂದಲ್ಲಿ ನಟಿಸಿದ್ದ ಸುಜಯ್‌ಶಾಸ್ತ್ರೀ ಕತೆ ಬರೆದು ಮೊದಲಬಾರಿ ನಿರ್ದೇಶನ ಮಾಡಿದ್ದಾರೆ. ಒಬ್ಬ ವ್ಯಕ್ತಿ ತಾನು ಮಾಡಿಲ್ಲದ ತಪ್ಪಿಗೆ ಹೇಗೆ ಸಿಕ್ಕಿಹಾಕಿಕೊಳ್ತಾನೆ. ಒಂದು ಘಟನೆಯಲ್ಲಿ ಗೊಂದಲಗಳು ಸೃಷ್ಟಿಯಾಗುತ್ತದೆ. ಅದು ಯಾರಿಂದ, ಯಾತಕ್ಕೆ, ಎಲ್ಲಿ, ಹೇಗೆ.  ಸಾಮಾನ್ಯ ....

353

Read More...

I Love You.Film 50 Days Success Meet.

Thursday, August 01, 2019

ಖಾಕಿ ಖಾದಿ ಕಾವಿ ಲವ್ ಯು ಅಂದರು         ವರ್ಷದ ಮೊದಲ ಹಿಟ್ ಚಿತ್ರ ‘ಐ ಲವ್ ಯು’ ೫೦ನೇ ದಿನದ ಸಮಾರಂಭಕ್ಕೆ  ಐಡಿಜಿಪಿ ಭಾಸ್ಕರರಾವ್, ಮಾಜಿ ಸಚಿವ ಹೆಚ್.ಎಂ.ರೇವಣ್ಣ ಮತ್ತು  ಜ್ಯೋತಿಷ ಆನಂದ್‌ಗುರೂಜಿ  ಆಗಮಿಸಿ ಕಲಾವಿದರು, ತಂತ್ರಜ್ಘರು  ಮತ್ತು ಮಾದ್ಯಮದವರಿಗೆ ಫಲಕಗಳನ್ನು ವಿತರಣೆ ಮಾಡಿದರು. ಉಪೇಂದ್ರ ಮಾತನಾಡಿ ಜನಗಳು ಲವ್ ಯು ಅಂತ ಸಿನಿಮಾವನ್ನು ಇಲ್ಲಿಯವರೆಗೂ ತೆಗೆದುಕೊಂಡು ಹೋಗಿದ್ದಾರೆ. ಆಗಿನ ಕಾಲದಲ್ಲಿ ಹೆಚ್ಚೆಂದರೆ ೩೦ ಕೇಂದ್ರಗಳಲ್ಲಿ ಚಿತ್ರವು ಬಿಡುಗಡೆಯಾಗುತ್ತಿತ್ತು. ಈಗ ಏಕಕಾಲಕ್ಕೆ  ೩೦೦ ಕೇಂದ್ರಗಳಲ್ಲಿ  ತೆರೆಗೆ ಬರುತ್ತಿರುವುದರಿಂದ ಎರಡು ವಾರ ಪ್ರದರ್ಶನ ಕಂಡರೆ ಗಳಿಕೆ ....

365

Read More...

Randhava.Film Press Meet.

Tuesday, July 30, 2019

ಸ್ವಾತಂತ್ರ  ದಿನಾಚರಣೆಗೆ  ರಾಂಧವ             ಮೂರು ಕಾಲಘಟ್ಟದಲ್ಲಿ ಕತೆ ಹೇಳುವ ‘ರಾಂಧವ’ ಚಿತ್ರಕ್ಕೆ ಬಿಗ್‌ಬಾಸ್ ಖ್ಯಾತಿಯ ಭುವನ್ ಪೊನ್ನಣ್ಣ ನಾಯಕನಾಗಿ ಅಭಿನಯಿಸಿದ್ದಾರೆ. ಮೊದಲನೆ ಶೇಡ್‌ದಲ್ಲಿ ರಾಬರ್ಟ್ ಹೆಸರಿನಲ್ಲಿ ಮಿತಭಾಷಿಯಾಗಿ ಪಕ್ಷಿತಜ್ಘ. ಎರಡನೆಯದರಲ್ಲಿ  ಎಲ್ಲರೊಂದಿಗೆ ಬಾಂದವ್ಯ ಬೆಳಸಿಕೊಂಡಿರುವ ರಾಂಧವದ ಯುವರಾಜ. ಕೊನೆಯದರಲ್ಲಿ ಸಾಮಾನ್ಯ ಮನುಷ್ಯನಾಗಿ ಲವರ್‌ಬಾಯ್.  ನಾಯಕಿಯರಾಗಿ ಅಪೂರ್ವಶ್ರೀನಿವಾಸನ್ ಮತ್ತು ರಾಶಿ ನಟನೆ ಇದೆ.  ಭಾಗ-೨ರಲ್ಲಿ  ಮೂರನೆ ನಾಯಕಿಯ ಹೆಸರನ್ನು ಹೇಳುತ್ತಾರಂತೆ. ಯಾರ ಬಳಿ ಕೆಲಸ ಮಾಡದೆ, ಸುಮಾರು ೨೮೦ಕ್ಕೂ ಹೆಚ್ಚು ಚಿತ್ರಗಳನ್ನು ವೀಕ್ಷಿಸಿ, ಅಲ್ಲಿರುವ ....

447

Read More...

Savarnadheerga Sandhi.Film Press Meet.

Tuesday, July 30, 2019

ಕನ್ನಡ  ವ್ಯಾಕರಣ  ಪಂಡಿತ         ರೌಡಿಸಂ ಚಿತ್ರಗಳು ಸಾಕಷ್ಟು ಬಂದಿವೆ. ಬದಲಾವಣೆ ಎನ್ನುವಂತೆ ಹಾಸ್ಯ ರೌಡಿ ಕುರಿತ ‘ಸವರ್ಣ ದೀರ್ಘ ಸಂಧಿ’ ಚಿತ್ರವೊಂದು ಸದ್ದಿಲ್ಲದೆ ಆನೇಕಲ್. ಜಗಣಿ, ದೇವರಾಯದುರ್ಗದ ಇನ್ನೂರು ವರ್ಷದ ಮನೆಯಲ್ಲಿ ಚಿತ್ರೀಕರಣ ನಡೆಸಿ ಸುದ್ದಿ ಮಾಡಲು ತಂಡವು ಮಾದ್ಯಮದ ಮುಂದೆ ಹಾಜರಾಗಿತ್ತು. ತುಳು ಚಿತ್ರ ಚಾಲಿಪೋಲಿಲು ನಿರ್ದೇಶನ ಮಾಡಿರುವ ವೀರೇಂದ್ರಶೆಟ್ಟಿ ಚಿತ್ರಕ್ಕೆ ರಚನೆ,ಸಾಹಿತ್ಯ, ಪಾಲದಾರ  ಮತ್ತು ಆಕ್ಷನ್ ಕಟ್ ಹೇಳಿದ್ದಾರೆ. ಅವರು ಮಾತನಾಡಿ ಹಲವು ನಾಯಕ ನಟರನ್ನು ಸಂಪರ್ಕಿಸಲಾಗಿ, ಸೂಕ್ತ ಸ್ಪಂದನೆ ಸಿಗಲಿಲ್ಲ. ಅನಿವಾರ್ಯವಾಗಿ ನಾಯಕನಾಗಬೇಕಾಯಿತು. ಅವಿದ್ಯಾವಂತ, ರೌಡಿ ತಂಡದ ಮುಖ್ಯಸ್ಥ. ಆದರೆ ಕನ್ನಡ ....

459

Read More...

Mahira.Film Success Meet.

Tuesday, July 30, 2019

ಮಹಿರಾಗೆ  ಮೆಚ್ಚುಗೆಯ  ಮಾತುಗಳು         ‘ಮಹಿರಾ’ ಚಿತ್ರದ ಬಹುತೇಕ ಕಲಾವಿದರು, ನಿರ್ದೇಶಕ, ನಿರ್ಮಾಪಕ, ಸಾಹಸ, ಸಂಕಲನ,  ಸಾಹಿತ್ಯ  ಇವರೆಲ್ಲರಿಗೂ ಹೊಸ ಅನುಭವ.  ಇಂಗ್ಲೀಷ್ ಸಿನಿಮಾವನ್ನು ಕನ್ನಡದಲ್ಲಿ ನೋಡಲಾಗಿದೆ ಎಂಬ ಪ್ರಶಂಸೆಗಳು ಬಂದಿದೆ. ನಿರ್ದೇಶನ ಮಾಡಿರುವ ಮಹೇಶ್‌ಗೌಡ ಹೇಳುವಂತೆ ತಂಡವು  ಶ್ರಮದಿಂದ ಕೆಲಸ ಮಾಡಿದ್ದು ಪರದೆ ಮೇಲೆ ನೋಡಿದಾಗ ಖುಷಿಕೊಟ್ಟಿದೆ. ಅದೇ ರೀತಿ  ಪ್ರೇಕ್ಷಕರು ಇದನ್ನೆ ಹೇಳುತ್ತಿದ್ದಾರೆ. ಚಿತ್ರಮಂದಿರಕ್ಕೆ  ಭೇಟಿ ನೀಡಿದಾಗ  ಎಷ್ಟು ಸಿನಿಮಾ ಮಾಡಿದ್ದಾರೆಂದು ಕೇಳುತ್ತಾರೆ. ಶನಿವಾರ ಶೇಕಡ ೭೦ರಷ್ಟು ಗಳಿಕೆ ಕಂಡರೆ, ಭಾನುವಾರ ಮಾಲ್‌ಗಳಲ್ಲಿ ಏಳು ಪ್ರದರ್ಶನಗಳು ಹೌಸ್‌ಫುಲ್ ಆಗಿದೆ. ....

314

Read More...

M R P.Film Press Meet.

Tuesday, July 30, 2019

ಹಿರಿಯ  ತಂತ್ರಜ್ಘರ ಎಂ ಆರ್ ಪಿ         ಕೆರೆಯ ನೀರನ್ನು ಕೆರೆಗೆ ಚೆಲ್ಲು ಎನ್ನುವ ನಾಣ್ಣುಡಿ ಚಿತ್ರರಂಗದಲ್ಲಿ  ಅನ್ವಯವಾಗುತ್ತಿದೆ. ಸ್ಯಾಂಡಲ್‌ವುಡ್‌ನ  ವಿವಿಧ ವಿಭಾಗಗಳಲ್ಲಿ ತಮ್ಮದೆ ಛಾಪನ್ನು  ಉಳಿಸಿಕೊಂಡಿರುವ  ಹಿರಿಯರುಗಳಾದ ನಿರ್ದೇಶಕ ಎಂ.ಡಿ.ಶ್ರೀಧರ್, ಛಾಯಾಗ್ರಾಹಕ ಎ.ವಿ.ಕೃಷ್ಣಕುಮಾರ್(ಕೆಕೆ), ಕಾರ್ಯಕಾರಿ ನಿರ್ಮಾಪಕ ರಂಗಸ್ವಾಮಿ.ಕೆ.ಆರ್ ಇವರುಗಳು ದುಡಿದ ಹಣದಲ್ಲಿ ‘ಎಂ.ಆರ್.ಪಿ’ ಹಾಸ್ಯ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಇವರೊಂದಿಗೆ ನನ್ ಮಗಳೇ ಹೀರೋಯಿನ್‌ಗೆ ಪಾಲುದಾರರಾಗಿದ್ದ ಎನ್.ಜಿ.ಮೋಹನ್‌ಕುಮಾರ್ ಕೈ ಜೋಡಿಸಿದ್ದಾರೆ. ಶೀರ್ಷಿಕೆ ಕೇಳಿದರೆ ವೈನ್ ಸ್ಟೋರ್ ಕತೆ ಅಂತ ....

518

Read More...

Bayalaatada Bheemanna.Film Audio Rel.

Tuesday, July 30, 2019

ಇನ್ಮುಂದೆ  ದುಡ್ಡು  ಮಾಡುವುದೇ ಕಾಯಕ – ಕ್ರೇಜಿಸ್ಟಾರ್         ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ   ಕತೆ,ಚಿತ್ರಕತೆ,ಸಾಹಿತ್ಯ, ಸಂಭಾಷಣೆ ಬರೆದು ನಿರ್ದೇಶನ ಮಾಡಿರುವ ‘ಬಯಲಾಟದ ಭೀಮಣ್ಣ’ ಚಿತ್ರದ ಧ್ವನಿಸಾಂದ್ರಿಕೆಯನ್ನು ಅನಾವರಣಗೊಳಿಸಲು ಚಾಮುಂಡೇಶ್ವರಿ ಸ್ಟುಡಿಯೋಗೆ ರವಿಚಂದ್ರನ್ ಆಗಮಿಸಿದ್ದರು. ಸಾಧಾರಣವಾಗಿ ಕ್ರೇಜಿಸ್ಟಾರ್  ಮಿತಭಾಷಿಯಾಗಿರುತ್ತಾರೆ.  ಆದರೆ ನಿರ್ದೇಶಕರ ಮೇಲಿನ ಗೌರವಕ್ಕೆ ಹೆಚ್ಚು ಮಾತನಾಡುತ್ತಾ ಹೋದರು. ಇಲ್ಲಿ ನಿಂತಾಗ ರಣಧೀರ ನೆನಪಿಗೆ ಬರುತ್ತದೆ. ಇದೇ ಜಾಗದಲ್ಲಿ ಕ್ಲೈಮಾಕ್ಸ್‌ನ್ನು ಚಿತ್ರ್ರೀಕರಿಸಲಾಗಿತ್ತು. ಜಾಗ ಹಳೆಯದಾದರೂ, ವಾತವರಣ ಹೊಸತು ಆಗಿದೆ. ....

338

Read More...

Coffee Katte.Film Pooja and Press Meet.

Monday, July 29, 2019

ಮುವತ್ತೈದು ಹಾಸ್ಯ  ಕಲಾವಿದರ ಚಿತ್ರ        ಗುರುಶಿಷ್ಯರು, ಬೊಂಬಾಟ್‌ಹೆಂಡ್ತಿ, ನಗೆಬಾಂಬ್ ಚಿತ್ರಗಳಲ್ಲಿ ಬಹುತೇಕ ಹಾಸ್ಯ ಕಲಾವಿದರು ಜನರನ್ನು ನಗಿಸಿದ್ದರು. ಅದಕ್ಕಿಂತಲೂ ಹೆಚ್ಚು, ಚಂದನವನದ ಇತಿಹಾಸದಲ್ಲಿ ಮೊದಲು ಎನ್ನುವಂತೆ ಚಿತ್ರರಂಗದ ಮುವತ್ತೈದು ಹಿರಿ, ಕಿರಿ ಹಾಸ್ಯ ಕಲಾವಿದರನ್ನು ಒಂದೇ ತೆರೆ ಮೇಲೆ ನೋಡುವ ಅವಕಾಶವು ‘ಕಾಫಿ ಕಟ್ಟೆ’ ಚಿತ್ರದಲ್ಲಿ ಸಿಗಲಿದೆ.  ಮೂಲತ: ನೃತ್ಯ ನಿರ್ದೇಶಕರಾಗಿರುವ ಕಪಿಲ್ ಮೂರನೇ ಪ್ರಯತ್ನದಲ್ಲಿ ಸಂಪೂರ್ಣ ಹಾಸ್ಯ ಕಲಾವಿದರ ಮೇಲೆ ಕತೆಯನ್ನು ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಈ ಮೊದಲು ಫಿಲ್ಟರ್ ಕಾಫಿ ಶೀರ್ಷಿಕೆ ಇಡಲು ಚಿಂತನೆ ನಡೆಸಲಾಗಿತ್ತು. ಆಂಗ್ಲ ಹೆಸರು ಇರುವ ಕಾರಣ ....

371

Read More...

Dhoom Again.Film Teaser Rel.

Sunday, July 28, 2019

ಧೂಮ್‌ಗೆ  ಪುನೀತ್‌ರಾಜ್‌ಕುಮಾರ್  ಚಾಲನೆ        ವಿಶೇಷ ರೀತಿಯ ಬೈಕ್‌ಗಳನ್ನು ಓಡಿಸುವಾಗ ಸುರಕ್ಷತೆಗಾಗಿ ಹೆಲ್ಮಟ್ ಧರಿಸಿಕೊಳ್ಳುವುದು ಒಳ್ಳೆಯದು ಅಂತ ಪುನೀತ್‌ರಾಜ್‌ಕುಮಾರ್ ‘ಧೂಮ್ ಅಗೇನ್’ ಚಿತ್ರದ ಫಸ್ಟ್‌ಲುಕ್ ಮತ್ತು ಟೀಸರ್ ಅನಾವರಣ ಮಾಡುತ್ತಾ ನೂತನ ಕಲಾವಿದರಿಗೆ ಕಿವಿಮಾತು ಹೇಳಿದರು.  ಇದಕ್ಕೂ ಮುನ್ನ ನಾಲ್ಕು ಯುವಕಲಾವಿದರು ಬೈಕ್‌ನಲ್ಲಿ ವೇದಿಕೆಗೆ ಆಗಮಿಸಿದ್ದನ್ನು ಕಂಡು ಈ ರೀತಿ ಹೇಳಲು ಕಾರಣವಾಗಿತ್ತು. ಹೆಸರಿಗೆ ತಕ್ಕಂತೆ ದುಬಾರಿ ಬೈಕ್‌ಗಳು ಪಾತ್ರದಲ್ಲಿ ಕಾಣಿಸಿಕೊಳ್ಳುತ್ತದೆ. ಹಾಗಂತ ಬಾಲಿವುಡ್‌ನಲ್ಲಿ ತೆರೆಕಂಡ ಚಿತ್ರಕ್ಕೂ ಇದಕ್ಕೂ ಸಂಬಂದವಿರುವುದಿಲ್ಲವೆಂದು ನಿರ್ದೇಶಕ ....

372

Read More...

Baro Baro Geleya.Film Press Meet.

Saturday, July 27, 2019

ಗಣಿ ನಾಡಿನ ಯುವಕರ ಸಿನಿಮಾ         ಗಣಿ-ಧಣಿ ಎಂದರೆ ಥಟ್ಟನೆ ನೆನಪಿಗೆ ಬರುವುದು ಬಳ್ಳಾರಿ.  ಈ ಭಾಗದಲ್ಲಿ ಹೆಚ್ಚು ತೆಲುಗು ಚಿತ್ರಗಳು ಪ್ರಾಬಲ್ಯ ಹೊಂದಿದೆ. ಇದರಿಂದ ಅಲ್ಲಿನ ಇಂಜಿನಿಯರಿಂಗ್  ಕನ್ನಡಿಗರಿಗೆ ಬೇಸರ ತಂದು  ನಮ್ಮ ಭಾಷೆಯಲ್ಲಿ ಸಿನಿಮಾ ಮಾಡಲು ನಿರ್ಣಯ ತೆಗೆದುಕೊಂಡಿದ್ದೆ ‘ಬಾರೊ ಬಾರೊ ಗೆಳಯ’ ಚಿತ್ರವೊಂದು ಬಿಡುಗಡೆ ಹಂತಕ್ಕೆ ಬಂದಿದೆ.  ಸಂಗೀತ ನಿರ್ದೇಶಕ ಹೊರತುಪಡಿಸಿ ಉಳಿದವರೆಲ್ಲರೂ ಇದೇ ಭಾಗದವರು ಎಂಬುದು ವಿಶೇಷ. ಹೆಣ್ಣಿನ ಕೂಗನ್ನು ಶೀರ್ಷಿಕೆಗೆ ಹೋಲಿಸಿದ್ದಾರೆ. ದುರಂತ ಪ್ರೇಮ ಕತೆಯಲ್ಲಿ ಕುತೂಹಲದ ಅಂಶಗಳು ಇರಲಿದೆ. ಯುವ ಪ್ರೇಮಿಗಳು ಸಂತೋಷ ಹಂಚಿಕೊಳ್ಳಲು ದೂರದ ಪಯಣ ಕೈಗೊಳ್ಳುತ್ತಾರೆ. ಸ್ಥಳ ....

389

Read More...

Adyaksha in America.Film Teaser Rel.

Saturday, July 27, 2019

ದಂಪತಿಗಳು ಇಷ್ಟ ಪಡುವ ಚಿತ್ರ -ಶರಣ್          ನಮ್ಮ ಸಿನಿಮಾ ಈ ರೀತಿ ಇರುತ್ತದೆಂದು ಮೊದಲು ತೋರಿಸುವುದು ಟೀಸರ್. ಅದರಂತೆ.  ‘ಅಧ್ಯಕ್ಷ ಇನ್ ಅಮೇರಿಕಾ’ ಚಿತ್ರದ ತುಣುಕುಗಳು ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಪ್ರದರ್ಶನಗೊಂಡಿತು. ನಂತರ ಮಾತನಾಡಿದ ನಾಯಕ ಶರಣ್ ಈ ವೇದಿಕೆ ಭಾವನಾತ್ಮಕವಾಗಿ ಮನಸ್ಸಿಗೆ ತಟ್ಟಿದೆ. ಇದೇ ಜಾಗದಲ್ಲಿ ಮೊದಲ ಚಿತ್ರದ ಡಬ್ಬಿಂಗ್, ಅಯೋಗ್ಯ ಆಡಿಯೋ ಸಿಡಿಯನ್ನು ಬಿಡುಗಡೆ ಮಾಡಲಾಗಿತ್ತು. ಎರಡು ಚಿತ್ರಗಳು ಹಿಟ್ ಆಗಿತ್ತು.  ಆ ಸಾಲಿಗೆ ಇದು ಸೇರಲಿದೆ ಎನ್ನುವ ಆಶಾಭಾವನೆ ಇದೆ. ಒಂದು ನಿಮಿಷದ ದೃಶ್ಯಗಳ ಹಿಂದೆ  ಹತ್ತು ತಿಂಗಳ ಶ್ರಮ,  ನೂರಾರು ಜನರು  ಬೆವರು ಸುರಿಸಿದ್ದಾರೆ. ....

407

Read More...

Star Kannadiga.Film Triler Rel.

Saturday, July 27, 2019

ಹೆಮ್ಮೆಯ  ಸ್ಟಾರ್ ಕನ್ನಡಿಗ         ಬಣ್ಣದ ಲೋಕಕ್ಕೆ  ಸಾಕಷ್ಟು ಮಂದಿ ಬರುತ್ತಾರೆ. ಕೆಲವರಿಗೆ ಅದೃಷ್ಟ ಖುಲಾಯಿಸುತ್ತದೆ. ಮತ್ತೋಬ್ಬರು ಸೈಕಲ್ ಹೊಡೆಯುತ್ತಾ ಇರುತ್ತಾರೆ.  ಇದನ್ನು ಹೇಳಲು ಪೀಠಿಕೆ ಇದೆ. ಹೊಸಬರೇ ಸೇರಿಕೊಂಡು ‘ಸ್ಟಾರ್ ಕನ್ನಡಿಗ’ ಅಡಿಬರಹದಲ್ಲಿ ಬೋಲೋ ಕನ್ನಡಿಗಾ ಕೀ ಜೈ, ಇದು ಕನ್ನಡಿಗನ ಕಥೆ  ಎಂದು ಹೇಳಿಕೊಂಡರುವ  ಚಿತ್ರವನ್ನು ಸಿದ್ದಪಡಿಸಿದ್ದಾರೆ. ಸಿನಿಮಾದೊಳಗೊಂದು ಸಿನಿಮಾ ಕತೆ ಇರುವುದು ವಿಶೇಷ.  ಯುವಕರ ತಂಡವೊಂದು ಚಿತ್ರ ಮಾಡಲು ತಯಾರಿ ನಡೆಸುತ್ತಿರುವಾಗ, ದಾರಿಯಲ್ಲಿ ಹುಡುಗಿಯೊಬ್ಬಳು ಸಿಗುತ್ತಾಳೆ. ಇದರಿಂದ ಅವರ ಆಕಾಂಕ್ಷೆಗಳು ಬೇರೆ ಕಡೆಗೆ ವಾಲುತ್ತದೆ. ಅಂತಿಮವಾಗಿ ಪ್ರೀತಿ, ಬದುಕು ಇದರಲ್ಲಿ ....

432

Read More...

Yaar Maga.Film Triler Rel.

Wednesday, July 24, 2019

ವೇದಿಕೆ ಒಂದು ಕಾರ್ಯಕ್ರಮ ಮೂರು          ‘ಏ ಸೋನಾ’ ಮ್ಯೂಸಿಕ್ ಆಲ್ಬಂದಲ್ಲಿ ರಘುಪಡುಕೋಟೆ ಕಾಣಿಸಿಕೊಂಡಿದ್ದ ವಿಡಿಯೋ ಗೀತೆ ಅನಾವರಣ ಸಮಯದಲ್ಲಿ ‘ಯಾರ್  ಮಗ’ ಚಿತ್ರದ ಬಗ್ಗೆ  ಮಾಹಿತಿಯನ್ನು ನೀಡಿದ್ದರು. ಈಗ ಸದರಿ ಚಿತ್ರದ ಮೊದಲ ಹಂತದ ಪ್ರಚಾರಕ್ಕಾಗಿ ಟ್ರೈಲರ್, ನಾಯಕನ ಹುಟ್ಟುಹಬ್ಬ ಮತ್ತು ೨೦ ಕಲಾವಿದರ ಅಡಿಷನ್ ಕಾರ್ಯಕ್ರಮ ನಡೆಯಿತು. ನಿರ್ದೇಶಕ ಸುರೇಶ್‌ರಾಜ್ ಮತ್ತು ನಟ ಗಣೇಶ್‌ರಾವ್ ಸಾರಥ್ಯದಲ್ಲಿ ಆಯ್ಕೆಗೊಂಡಿದ್ದವರು ಹಾಜರಿದ್ದರು. ನಿರ್ದೇಶಕರು ಮಾತನಾಡಿ ೯೦ರ ದಶಕದ ಕತೆಯಲ್ಲಿ ತಾಯಿ-ಮಗನ ಬಾಂದವ್ಯ ಹಾಗೂ ಭೂಗತಲೋಕದ ಶಿವಾಜಿನಗರದ ರಿಯಲ್ ರೌಡಿಗಳನ್ನು ತೋರಿಸಲಾಗುವುದು. ಸುರಕ್ಷತೆ ದೃಷ್ಟಿಯಿಂದ ....

815

Read More...

Sinnga.Film Success Meet.

Tuesday, July 23, 2019

ಪೈರಸಿಯಿಂದ  ಸಿಂಗನಿಗೆ  ಬೇಸರ          ಕಮರ್ಷಿಯಲ್ ಆಕ್ಷನ್ ಚಿತ್ರ ‘ಸಿಂಗ’ ಬಿಡುಗಡೆಯಾಗಿ ಎಲ್ಲಾ ಕಡೆಗಳಿಂದಲೂ ಉತ್ತಮ ಪ್ರತಿಕ್ರಿಯೆ ಬರುತ್ತಿರುವುದು ಒಂದು ಕಡೆಯಾದರೆ, ಎರಡೇ ದಿನದಲ್ಲಿ ಸಿನಿಮಾವು ಪೈರಸಿಯಾಗಿರುವುದು  ನೋವಿನ ಸಂಗತಿಯಾಗಿದೆ ಎಂದು  ನಿರ್ಮಾಪಕ ಉದಯ್.ಕೆ.ಮೆಹ್ತಾ ಸಂತೋಷಕೂಟದಲ್ಲಿ ಮಾತನಾಡುತ್ತಾ ಸುದ್ದಿಯನ್ನು  ಖಚಿತ ಪಡಿಸಿದರು.. ಅವರು ಹೇಳುವಂತೆ  ೨೩೬ ಕೇಂದ್ರಗಳಲ್ಲಿ ಬಿಡುಗಡೆ ಮಾಡಲಾಗಿತ್ತು. ಬಿ.ಸಿ ಸೆಂಟರ್‌ಗಳಲ್ಲಿ ಗಳಿಕೆ ಚೆನ್ನಾಗಿ ಬರುತ್ತಿದೆ.  ಪೈರಸಿ ಎನ್ನುವ  ಪೆಡಂಭೂತದಿಂದ ಹೆಚ್ಚು ಪ್ರಚಾರ ಸಿಕ್ಕಿದ್ದರೂ ಆದಾಯ ಕಡಿಮೆಯಾಗಿದೆ.  ಸೈಬರ್ ಕ್ರೈಮ್‌ಗೆ ದೂರು ನೀಡಿದಾಗ, ಅಲ್ಲಿನ ....

939

Read More...

Murder-2.Film Press Meet.

Tuesday, July 23, 2019

ಕುತೂಹಲದ  ಮರ್ಡರ್-೨         ಕೊಲೆ ಎಂದ ಮೇಲೆ ಅದು ಮರ್ಡರ್ ಎನ್ನುವುದು ತಿಳಿದಿದೆ. ಈಗ ಅಂತಹುದೆ  ಹಸರಿನಲ್ಲಿ ‘ಮರ್ಡರ್-೨’ ಎನ್ನುವ ಚಿತ್ರವೊಂದು ಬಿಡುಗಡೆಗೆ ಸಿದ್ದವಾಗಿದೆ. ಭಾಗ-೧ ಸಿನಿಮಾಕ್ಕೆ ಕತೆ,ನಿರ್ದೇಶನ,ನಿರ್ಮಾಣ ಮಾಡಿರುವ  ಮಂಡ್ಯಾನಾಗರಾಜು  ಭಾಗ-೨ಕ್ಕೂ ಇದೇ ಜವಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಅಂದಹಾಗೆ ಇವರದು  ನಿರ್ದೇಶಕ, ನಿರ್ಮಾಪಕನಾಗಿ ಹದಿನಾಲ್ಕನೇ ಚಿತ್ರವಾಗಿರುವುದು ವಿಶೇಷ. ಸಂಪೂರ್ಣ ಮನರಂಜನೆ ಇರುವ ಕಾರಣ ಯಾವುದೇ ರೀತಿಯ  ಹಾಡುಗಳು ಇರುವುದಿಲ್ಲ. ಗ್ರಾಮೀಣ ಭಾಗದ ಕತೆಯಲ್ಲಿ  ಹುಡುಗಿ ಮನೆಯವರನ್ನು ಎದುರು ಹಾಕಿಕೊಂಡು ಅಕೆಯನ್ನು ಕರೆದುಕೊಂಡು ಹೋದಾಗ ದೂರದ ಸ್ಥಳದಲ್ಲಿ ಘಟನೆ ....

818

Read More...

Mahira.Film Press Meet.

Monday, July 22, 2019

                                         ಮಹಿರಾ ನೋಡಲು ಕಾರಣಗಳು           ಆಕ್ಷನ್, ಥ್ರಿಲ್ಲರ್‌ನಿಂದ ಕೂಡಿರುವ ‘ಮಹಿರಾ’ ಸಿನಿಮಾ ನೋಡಲು ನಿರ್ದೇಶಕ ಮಹೇಶ್‌ಗೌಡ ಕಾರಣಗಳನ್ನು ಕೊಡುತ್ತಾರೆ. ಮೊದಲನೆಯದಾಗಿ ಕತೆ,ಚಿತ್ರಕತೆ. ಲಂಡನ್ ಕನ್ನಡಿಗರು ಸೇರಿಕೊಂಡು ಹಣ ಹೂಡಿದ್ದಾರೆ. ಅನುಭವ ಇರುವ ತಂತ್ರಜ್ಘರು ಕೆಲಸ  ಮಾಡಿರುವುದು. ಹೊಸ ರೀತಿಯ ಸಾಹಸ ಇರಲಿದೆ. ಮಧ್ಯ ವಯಸ್ಸಿನ ತಾಯಿ ಡ್ಯೂಪ್‌ಬಳಸದೆ ಫೈಟ್ ಮಾಡಿದ್ದಾರೆ. ಇದುವರೆಗೂ ನೋಡಿರದ ಅಮ್ಮ-ಮಗಳ ಬಾಂದವ್ಯ ತೋರಿಸಲಾಗಿದೆ. ಹಿನ್ನಲೆ ಸಂಗೀತ ಪ್ಲಸ್ ಪಾಯಿಂಟ್ ಆಗಿದೆ. ಕತೆ  ಕುರಿತು ಹೇಳುವುದಾದರೆ ಶೀರ್ಷಿಕಯು  ಸಂಸ್ಕ್ರತ ....

1013

Read More...
Copyright@2018 Chitralahari | All Rights Reserved. Photo Journalist K.S. Mokshendra,