Chase.Film Teasor Rel.

Saturday, November 16, 2019

ಕಿರಿಯರ  ಟೀಸರ್‌ಗೆ  ಹಿರಿಯರ  ಚಾಲನೆ            ಸೆಸ್ಪನ್ಸ್, ಥ್ರಿಲ್ಲರ್ ಕುರಿತ ದೊಡ್ಡ ತಾರಗಣವಿರುವ  ‘ಚೇಜ್’ ಚಿತ್ರದ ಪೋಸ್ಟರ್ ಮತ್ತು ಟೀಸರ್‌ನ್ನು ಹಿರಿಯ ನಿರ್ದೇಶಕರುಗಳು ಅನಾವರಣಗೊಳಿಸಿದರು.  ಎರಡು ಪಾತ್ರಗಳು ಒಂದು ಘಟನೆಯಲ್ಲಿ ಭೇಟಿಯಾಗುತ್ತದೆ.  ಪ್ರತಿ ಪಾತ್ರವು ಒಬ್ಬರ ಬದುಕನ್ನು ಹೇಗೆ ಬದಲಾವಣೆ ಮಾಡುತ್ತದೆ ಎನ್ನುವದರೊಂದಿಗೆ ಕತೆಯು ತೆರೆದುಕೊಳ್ಳುತ್ತದೆ. ಬೇರೆ ಬೇರೆ ಪಾತ್ರಗಳು ಇದರೊಂದಿಗೆ ಜೋಡಿಸಿಕೊಂಡು ಹೋಗುತ್ತದೆ. ಒಂದು  ಸಾಮಾನ್ಯ ಸಂಗತಿಯನ್ನು ನಿರ್ಲಕ್ಷ ಮಾಡಿದರೆ ಸಮಾಜಕ್ಕೆ  ನಷ್ಟ ಉಂಟಾಗುತ್ತದೆ. ಅಕಸ್ಮಾತ್ ಜವಬ್ದಾರಿಯಾಗಿ ನಡೆದುಕೊಂಡರೆ ಜನರಿಗೆ ಯಾವ ರೀತಿ ಸಹಾಯವಾಗುತ್ತದೆ.  ಸರಿಯಾದ ಸಮಯದಲ್ಲಿ ....

481

Read More...

Mugilpete.Film Press Meet.

Saturday, November 16, 2019

                   ಪ್ರೇಯಸಿಯುನ್ನು  ನೋಡಲು  ಹೊರಟ  ಮನುರಂಜನ್ ರವಿಚಂದ್ರನ್        ರವಿಚಂದ್ರನ್ ಪುತ್ರ ಮನೋರಂಜನ್‌ರವಿಚಂದ್ರನ್ ತನ್ನ ಪ್ರೇಯಸಿಯನ್ನು ನೋಡಲು ಹೋಗುತ್ತಿದ್ದಾರೆ. ಇದನ್ನು ಓದಿದ ಮೇಲೆ ಗೊಂದಲ ಆಗುವುದು ಬೇಡ. ಅವರು ‘ಮುಗಿಲ ಪೇಟೆ’  ಎನ್ನುವ ಹೊಸ ಸಿನಿಮಾದಲ್ಲಿ ಮಧ್ಯಮ ವರ್ಗದ ಕುಟುಂಬದ ಹುಡುಗನಾಗಿ ನಾಯಕಿಯನ್ನು ಅರಸಿಕೊಂಡು ಹೋಗುವ ಪ್ರೇಮಿಯಾಗಿ, ವಿಶಿಷ್ಟವಾದ ಹೇರ್‌ಸ್ಟೈಲ್ ಹಾಗೂ ಬಾಡಿ ಲ್ಯಾಂಗ್ವೇಜ್ ಸಲುವಾಗಿ ತಯಾರಿ ನಡೆಸುತ್ತಿದ್ದಾರೆ. ದ್ವಿಚಕ್ರ ವಾಹನದ ಮರುಪಾವತಿ ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಬ್ರೇಕಪ್ ಆಗಿ ಎರಡು ವರ್ಷಗಳ ತರುವಾಯ ಪ್ರೇಯಸಿ ಸ್ಥಳ ಮುಗಿಲಪೇಟೆಗೆ  ....

457

Read More...

Gopala Gandhi.Film Audio Rel.

Saturday, November 16, 2019

ಗಾಂಧೀಜಿ  ಆದರ್ಶ  ಪಾಲಿಸುವ  ಗೋಪಾಲ         ಮಹಾತ್ಮ ಗಾಂಧೀಜಿ ಸರ್ವಕಾಲಕ್ಕೂ  ಅವರ ಆದರ್ಶ ಹಾಗೂ ತತ್ವಗಳನ್ನ ಅಂದರೆ ಪರಿಸರ, ಶಿಕ್ಷಣ, ಸ್ವಚ್ಚತೆ, ಗ್ರಾಮ ನೈರ್ಮಲ್ಯ, ಸತ್ಯ, ಅಹಿಂಸೆ, ನ್ಯಾಯ, ಬ್ರಷ್ಟಾಚಾರ ನಿರ್ಮೂಲನೆ ಈ ಆಶಯಗಳನ್ನು  ಚಿಕ್ಕವರಾಗಿದ್ದಾಗ ಅನುಷ್ಟಾನ ಮಾಡಿದರೆ ಮಕ್ಕಳು ದೇಶದ ಆಸ್ತಿಯಾಗುವುದರಲ್ಲಿ ಅನುಮಾನವಿಲ್ಲ. ಇಂತಹ ಆಶಯಗಳನ್ನು ಹೊತ್ತ ಚಿತ್ರವೇ ‘ಗೋಪಾಲಗಾಂಧಿ’ ಕತೆಯಾಗಿದೆ.  ಮತ್ತು  ಬಾಪೂಜಿ ಇಂದಿಗೂ ಎಷ್ಟು ಪ್ರಸ್ತುತವೆಂದು ಹೇಳಲಾಗಿದೆ. ಎರಡು ಪಾತ್ರಗಳು ಪ್ರಮುಖವಾಗಿ ಕಾಣಸಿಗುತ್ತವೆ. ಸ್ವಾತಂತ್ರ ಹೋರಾಟಗಾರರು, ನಿವೃತ್ತ ಮುಖ್ಯ ಶಿಕ್ಷಕರು, ಸಾಹಿತಿಗಳು ಆದ ರಾಮಣ್ಣ ಮೇಷ್ಟು ಗಾಂಧೀಜಿ ಪ್ರತಿನಿಧಿಯಾಗಿ ಕಂಡರೆ, ದಲಿತ ....

703

Read More...

Gadi Naadu.Film Audio Rel.

Friday, November 15, 2019

 ಗಡಿನಾಡು ಗೀತಮಾಧುರಿ         ಗತಕಾಲದಿಂದಲೂ ಬೆಳಗಾವಿಯಲ್ಲಿ ಕನ್ನಡ-ಮರಾಠಿ ಭಾಷೆ ಸಮಸ್ಯೆ ಉದ್ಬವವಾಗುತ್ತಿದೆ.   ಇದಕ್ಕೆ ಪರಿಹಾರ ಕಂಡುಕೊಳ್ಳಲು ಸರ್ಕಾರ  ಕೆಲವೊಂದು ಕ್ರಮಗಳನ್ನು ಕೈಗೊಂಡರೂ ಅದು ಪ್ರಯೋಜನವಾಗಿಲ್ಲ. ಇಂತಹುದೆ ಅಂಶಗಳ ಕುರಿತಾದ ‘ಗಡಿನಾಡು’ ಚಿತ್ರವೊಂದು ಚಿಕ್ಕೋಡಿ, ಅಥಿಣಿ, ಬೆಳಗಾವಿ ಮುಂತಾದ ಕಡೆಗಳಲ್ಲಿ ಚಿತ್ರೀಕರಣ ನಡೆಸಿ ಸದ್ಯ ಡಿಟಿಎಸ್ ಹಂತದಲ್ಲಿ ಬ್ಯುಸಿ ಇದೆ. ವಿದ್ಯಾಭ್ಯಾಸ ಮುಗಿಸಿ ಕುಂದಾನಗರಿಗೆ ಹೋಗುವ ಕಥಾನಾಯಕ ಅಲ್ಲಿನ ಗಡಿ ಸಮಸ್ಯೆಗಳನ್ನು ಕಂಡು  ಗಡಿನಾಡ ಸೇನೆಯನ್ನು ಕಟ್ಟುತ್ತಾನೆ. ಇದರ ಮಧ್ಯೆ ನೀರೆಯೊಂದಿಗೆ ಪ್ರೇಮ ಹುಟ್ಟುತ್ತದೆ.  ಇದನ್ನು ಸಹಿಸದ ದುಷ್ಟರು ಗಲಾಟೆ ಮಾಡುತ್ತಾ  ನೈಚ್ಯತನದಿಂದ ....

537

Read More...

Elli Adodu Naavu Elli Adodu.Movie Audio Rel.

Thursday, November 14, 2019

ಹೆಸರಾಂತ  ವೃತ್ತ  ಚಿತ್ರದ  ಶೀರ್ಷಿಕೆ         ಸಿಲಿಕಾನ್ ಸಿಟಿಯಲ್ಲಿ ‘ಶಿವಾನಂದ ವೃತ್ತ’ ತಿಳಿಯದವರೂ ಯಾರು ಇಲ್ಲ. ಶೇಷಾದ್ರಿಪುರಂ ಸಮೀಪದಲ್ಲಿ ಗತಕಾಲದಿಂದ ಶಿವಾನಂದ ಪ್ರಾವಿಷನ್ ಸ್ಟೋರ್ ಇರುವ ಕಾರಣ ಅಂದಿನಿಂದಲೂ ಅಲ್ಲಿರುವ ವೃತ್ತಕ್ಕೆ ಈ ಹೆಸರನ್ನು ಇಡಲಾಗಿದೆ. ಇದನ್ನು ಹೇಳಲು ಪೀಠಿಕೆ ಇದೆ. ಈಗ ಇದೇ ಶೀರ್ಷಿಕೆಯೊಂದಿಗೆ ಚಿತ್ರವೊಂದು ಸೆಟ್ಟೇರಿದೆ. ಆರು ಮಧ್ಯ ವಯಸ್ಸಿನ ಜವಬ್ದಾರಿ ಗಂಡಸರು ಬೇಜವಬ್ದಾರಿ, ಮಂಥರಗಳಂತೆ ನಡೆದುಕೊಂಡರೆ ಪರಿಣಾಮ ಏನಾಗುತ್ತದೆ. ಇವರನ್ನು ನಂಬಿಕೊಂಡಿರುವ ಕುಟುಂಬದ ಗತಿ.  ಹೆಂಡತಿ ಮಲಗಿರುವಾಗ ಮನೆಗೆ ಬರುತ್ತಾರೆ. ಆಕೆ ಏಳುವ ಮುನ್ನ ಹೊರಗೆ ಹೋಗಿರುತ್ತಾರೆ. ಅಬ್ಬೆಪಾರಿಗಳಂತೆ ಪ್ರತಿ ದಿನವನ್ನು  ಶಿವಾನಂದ ....

442

Read More...

Shivananda Circle.Film Song Recording.

Thursday, November 14, 2019

ಹೆಸರಾಂತ  ವೃತ್ತ  ಚಿತ್ರದ  ಶೀರ್ಷಿಕೆ         ಸಿಲಿಕಾನ್ ಸಿಟಿಯಲ್ಲಿ ‘ಶಿವಾನಂದ ವೃತ್ತ’ ತಿಳಿಯದವರೂ ಯಾರು ಇಲ್ಲ. ಶೇಷಾದ್ರಿಪುರಂ ಸಮೀಪದಲ್ಲಿ ಗತಕಾಲದಿಂದ ಶಿವಾನಂದ ಪ್ರಾವಿಷನ್ ಸ್ಟೋರ್ ಇರುವ ಕಾರಣ ಅಂದಿನಿಂದಲೂ ಅಲ್ಲಿರುವ ವೃತ್ತಕ್ಕೆ ಈ ಹೆಸರನ್ನು ಇಡಲಾಗಿದೆ. ಇದನ್ನು ಹೇಳಲು ಪೀಠಿಕೆ ಇದೆ. ಈಗ ಇದೇ ಶೀರ್ಷಿಕೆಯೊಂದಿಗೆ ಚಿತ್ರವೊಂದು ಸೆಟ್ಟೇರಿದೆ. ಆರು ಮಧ್ಯ ವಯಸ್ಸಿನ ಜವಬ್ದಾರಿ ಗಂಡಸರು ಬೇಜವಬ್ದಾರಿ, ಮಂಥರಗಳಂತೆ ನಡೆದುಕೊಂಡರೆ ಪರಿಣಾಮ ಏನಾಗುತ್ತದೆ. ಇವರನ್ನು ನಂಬಿಕೊಂಡಿರುವ ಕುಟುಂಬದ ಗತಿ.  ಹೆಂಡತಿ ಮಲಗಿರುವಾಗ ಮನೆಗೆ ಬರುತ್ತಾರೆ. ಆಕೆ ಏಳುವ ಮುನ್ನ ಹೊರಗೆ ಹೋಗಿರುತ್ತಾರೆ. ಅಬ್ಬೆಪಾರಿಗಳಂತೆ ಪ್ರತಿ ದಿನವನ್ನು  ಶಿವಾನಂದ ....

731

Read More...

Aa Drushya.Film Success Meet.

Wednesday, November 13, 2019

ಆ ನೋಟದಿಂದ  ದೃಶ್ಯವನ್ನು ನೋಡಬೇಕು – ರವಿಚಂದ್ರನ್        ಎಲ್ಲಾ ಕಡೆಗಳಿಂದ ಒಳ್ಳೆ ಪ್ರಶಂಸೆ ಬರುತ್ತಿದೆ. ಆದರೆ ಗಳಿಗೆ ಸುಧಾರಿಸಬೇಕಾಗಿದೆ. ಬಾಯಿ ಮಾತಿನ ಪ್ರಚಾರದಿಂದ ಮುಂದೆ ಅಭಿವೃದ್ದಿಗೊಳ್ಳಬಹುದು. ಈ ವಾರವೂ ೧೦೦ ಕೇಂದ್ರಗಳಲ್ಲಿ  ಪ್ರದರ್ಶನಗೊಳ್ಳಲಿದೆ ಎಂದು ನಿರ್ಮಾಪಕ ಕೆ.ಮಂಜು ‘ಆ ದೃಶ್ಯ’ ಚಿತ್ರದ ಸಂತೋಷಕೂಟದಲ್ಲಿ ಹೇಳುತ್ತಿದ್ದರು.  ಸಿನಿಮಾ ಚೆನ್ನಾಗಿದೆ. ರವಿ ಸರ್ ಜೊತೆ ತೆರೆ ಹಂಚಿಕೊಂಡಿದ್ದು, ಕೆಲಸ ಮಾಡಿದ್ದು  ಮರೆಯಲಾಗದು ಎಂಬ ಒಕ್ಕರೂಲ ಮಾತುಗಳು ನಿರ್ದೇಶಕ ಶಿವಗಣೇಶ್, ಛಾಯಾಗ್ರಾಹಕ ವಿನೋಧ್‌ಭಾರತಿ, ಸಂಗೀತ ನಿರ್ದೇಶಕ ಗೌತಂಶ್ರೀವತ್ಸ, ಗುಜ್ಜಲ್‌ಪುರುಷೋತ್ತಮ್, ಕಲಾವಿದರುಗಳಾದ ಯಶಸ್‌ಶೆಟ್ಟಿ, ಚೈತ್ರಾಆಚಾರ್, ....

424

Read More...

Damayanti.Movie Audio Rel.

Tuesday, November 12, 2019

ಕಲಾವಿದರಿಗೆ ಶ್ರದ್ದೆ ಇರಬೇಕು – ದರ್ಶನ್         ಅದ್ದೂರಿ ‘ದಮಯಂತಿ’ ಚಿತ್ರದ ಆಡಿಯೋ ಸಿಡಿಯನ್ನು ದರ್ಶನ್ ಬಿಡುಗಡೆ ಮಾಡಿದರು. ನಂತರ ಮಾತನಾಡುತ್ತಾ ತುಣುಕುಗಳನ್ನು ನೋಡಿದಾಗ ಕ್ಯಾಮಾರ ಕೆಲಸ ಅದ್ಬುತವಾಗಿ ಮೂಡಿಬಂದಿದೆ. ಪ್ರತಿಯೊಬ್ಬ ಕಲಾವಿದರು ಚೆನ್ನಾಗಿ ನಟಿಸಿದ್ದಾರೆ.  ಇನ್ನು ಹೇಳಬೇಕಂದರೆ ರಾಧಿಕಾ ನನಗಿಂತ ಒಂದು ವರ್ಷ ಸೀನಿಯರ್.  ನೀಲಮೇಘಶ್ಯಾಮ ಚಿತ್ರದ ಮೂಲಕ ಪಾದರ್ಪಣೆ ಮಾಡಿದ್ದರು. ಚೈನಾದಲ್ಲಿ  ನಾವು ಸತ್ತ ಮೇಲೆ ಹೇಗಿರುತ್ತೆ. ಅದರ ಅನುಭವ ಆಗಲಿ  ಅಂತ ಹತ್ತು ನಿಮಿಷ ಮಲಗಿಸುತ್ತಾರೆ.  ನಮ್ಮಲ್ಲಿ ನಾಲ್ಕು ಜನ ಹೂತ್ತುಕೊಂಡು ಹೋಗುತ್ತಾರೆ. ಇಂತಹುದೆ ದೃಶ್ಯ  ನೀಲಮೇಘಾಶ್ಯಾಮ ಮತ್ತು  ಮೆಜಸ್ಟಿಕ್ ಚಿತ್ರದಲ್ಲಿ ಬಂದಿತ್ತು. ....

414

Read More...

Chayya.Film Audio Rel.

Tuesday, November 12, 2019

       ಒಂದು ಸಿನಿಮಾ ಹಿಟ್ ಆದರೆ ಅದರ ಪ್ರೇರಣೆಯಿಂದಲೇ ಹಲವು ಚಿತ್ರಗಳು ಬರುತ್ತವೆ. ಇದಕ್ಕೆ ಕೊಂಡಿಯಾಗಿ ‘ಛಾಯ’ ಚಿತ್ರ ಸೇರ್ಪಡೆಯಾಗುತ್ತದೆ. ನಾ ನಿನ್ನ ಬಿಡಲಾರೆ ಅಂತ ಇಂಗ್ಲೀಷ್‌ದಲ್ಲಿ ಅಡಿಬರಹವಿದೆ. ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ಕಲಾವಿದರುಗಳನ್ನು ಕುಣಿಸಿದ್ದ  ಜಗ್ಗು ಮೊದಲ ಪ್ರಯತ್ನ ಎನ್ನುವಂತೆ ನಿರ್ದೇಶಕನಾಗಿ ಗುರುತಿಸಿಕೊಂಡಿದ್ದಾರೆ.  ನಾಲ್ಕು ಹುಡುಗರ ಮಧ್ಯೆ ನಡೆಯುವ ಕತೆಯಾಗಿದೆ. ಹೀರೋ  ಮದುವೆಯಾಗಿ ಗೆಳಯರ ಮನೆಗೆ ಬಂದಾಗ ವಿಚಿತ್ರ ಘಟನೆ ಸಂಭವಿಸುತ್ತದೆ. ಮನೆಯಲ್ಲಿ ಏನು ನಡೆಯುತ್ತೇ? ದೆವ್ವ ಆಗಿರುತ್ತಾ? ಇಲ್ಲವಾ, ಇಲ್ಲದೆ ಇರಬಹುದು. ಗೆಳತನ ಹಾಗೂ ಸಂಬಂದ ಹೇಗಿರುತ್ತದೆ. ಇಂತಹುದೇ ಅಂಶಗಳು ಕುತೂಹಲ ಮೂಲಕ ತೋರಿಸಿಕೊಂಡು ಹೋಗುತ್ತದೆ.  ....

543

Read More...

Film 100.Film Shooting Press Meet.

Tuesday, November 12, 2019

ಕೊನೆ ಹಂತದ  ಚಿತ್ರೀಕರಣದಲ್ಲಿ  ೧೦೦        ಪ್ರಚಲಿತ ಸಮಾಜದಲ್ಲಿ ಬೆಂಕಿ,ಚಾಕು, ಅಧಿಕಾರ, ಸೋಷಿಯಲ್ ಮೀಡಿಯಾ ಇದೆಲ್ಲದರ ಪರಿಣಾಮ ಯಾರ ಕೈಯಲ್ಲಿ ಅಂತ ನಿರ್ಧಾರವಾಗುತ್ತದೆ.  ಬೆಂಕಿ ತಪ್ಪಾದವರಿಂದ ಆದಾಗ ಹೊತ್ತಿಕೊಳ್ಳುತ್ತದೆ. ಚಾಕು ತಪ್ಪಾದವರ ಕೈಯಲ್ಲಿ ಸಿಕ್ಕರೆ ರಕ್ತದ ನದಿ ಹರಿಯುತ್ತದೆ.  ಅಧಿಕಾರ ತಪ್ಪಾದವರಿಗೆ ನೀಡಿದರೆ ಇತಿಹಾಸ ಬದಲಾಗುತ್ತದೆ. ಕೊನೆಯದಾಗಿ ಮುಖ್ಯವಾದುದು ಸಾಮಾಜಿಕ ಜಾಲತಾಣ. ತಪ್ಪಾದ ಕೈಯಲ್ಲಿ ಇದ್ದು, ಅದನ್ನು ದುರಪಯೋಗ ಪಡಿಸಿಕೊಂಡಾಗ ವಿಪರೀತ ಅನಾಹುತಗಳು ನಡೆಯುತ್ತದೆ. ಅಂತ ಕತೆಯೇ ‘೧೦೦’ ಚಿತ್ರ. ಇದನ್ನು ಕೆಟ್ಟಚಾಳಿಗೆ  ಉಪಯೋಗಿಸುವ ದುರಳವ್ಯಕ್ತಿಯಾಗಿ ಹೊಸ ಪ್ರತಿಭೆ ವಿಶ್ವ.  ಇವನನ್ನು ಸಂಹಾರ ಮಾಡುವ ....

402

Read More...

3rd Class.Film Audio Rel.

Tuesday, November 12, 2019

                                ಶೀರ್ಷಿಕೆ ಥರ್ಡ್ ಕ್ಲಾಸ್, ಕತೆ ಫಸ್ಟ್ ಕ್ಲಾಸ್         ವಿಭಿನ್ನ ಟೈಟಲ್  ‘ಥರ್ಡ್ ಕ್ಲಾಸ್’ ಕೇಳಿದಾಕ್ಷಣ  ಇದೊಂದು ಆ ತರಹದ  ಸಿನಿಮಾ ಅಂದುಕೊಳ್ಳಬಹುದು. ಹಣೆಬರಹಕ್ಕೆ  ಯಾರು ಹೊಣೆ ಅಂತ ಉಪಶೀರ್ಷಿಕೆಯಲ್ಲಿ ಹೇಳಿಕೊಂಡಿದೆ. ಹೆಸರು  ಈ ರೀತಿ ಇದ್ದರೂ ಕತೆ ಫಸ್ಟ್ ಕ್ಲಾಸ್ ಆಗಿದೆ ಅಂತ ಕತೆ ಬರೆದು ಮೊದಲಬಾರಿ ನಾಯಕ ಜೊತೆಗೆ ನಿರ್ಮಾಣ ಮಾಡಿರುವ  ನಮ್‌ಜಗದೀಶ್  ಬಣ್ಣಿಸಿಕೊಂಡರು. ಮೂರು ವಿಧದ ಜೀವನ ಶೈಲಿಯಾದ ಗ್ಯಾರೇಜು, ಸಿರಿತನ, ಮಧ್ಯಮವರ್ಗ ಇವುಗಳನ್ನು ಸಮಾಜವು  ಹೇಗೆ ನೋಡುತ್ತದೆ ಎಂಬುದನ್ನು ಹೇಳಲಾಗಿದೆ.  ಜೀವನದಲ್ಲಿ ಯಾವುದೇ ತಪ್ಪುಗಳು, ....

471

Read More...

Daaki Tappida Maga.Film Re-Rel.

Tuesday, November 12, 2019

ಮತ್ತೋಮ್ಮೆ  ತೆರೆ  ಮೇಲೆ  ಕ್ಲಾಸಿಕ್ ಸಿನಿಮಾ

         ಚಿಕ್ಕ ವಯಸ್ಸಿನಲ್ಲಿ ಮಕ್ಕಳು ಯಾವ ರೀತಿಯಲ್ಲಿ  ಬೆಳಯುತ್ತಾರೆ. ಒಳ್ಳೆಯ ದಾರಿಯಲ್ಲಿ ಹೋಗುವವನು ವಿದ್ಯಾವಂತ, ಕೆಟ್ಟ ಕೆಲಸ ಕಲಿತವನು ಮೋಸಗಾರನಾಗುತ್ತಾನೆ. ಇಂತಹುದೇ ವಿಷಯವನ್ನು ತೆಗೆದುಕೊಂಡ ‘ದಾರಿ ತಪ್ಪಿದ ಮಗ’ ಚಿತ್ರವು ೭೦ರ ದಶಕದಲ್ಲಿ ಬಿಡುಗಡೆಗೊಂಡು  ಸೂಪರ್ ಹಿಟ್ ಆಗಿತ್ತು. ಡಾ.ರಾಜ್‌ಕುಮಾರ್ ದ್ವಿ ಪಾತ್ರದಲ್ಲಿ ಅಭಿನಯಿಸಿದ್ದರು. ಆರತಿ, ಜಯಮಾಲ, ಮಂಜುಳ ನಾಯಕಿಯರು. ತೂಗದೀಪಶ್ರೀನಿವಾಸ್, ವಜ್ರಮುನಿ, ಅಶ್ವಥ್ ಮುಂತಾದವರು ನಟಿಸಿದ್ದರು. ಕೆಸಿಎನ್.ಗೌಡ ನಿರ್ಮಾಣ, ಪಕೇಟಿಶಿವರಾಂ ನಿರ್ದೇಶನದಲ್ಲಿ ಜಿ.ಕೆ.ವೆಂಕಟೇಶ್ ಸಂಗೀತದ ಎಲ್ಲಾ ಹಾಡಗಳು ಇಂದಿಗೂ ಆಲಿಸುವಂತಿದೆ.  

411

Read More...

Aayushmanbhava.Movie Rel Press Meet.

Monday, November 11, 2019

ಬಿಡುಗಡೆ ಹೊಸ್ತಿಲಿನಲ್ಲಿ ಆಯುಷ್ಮಾನ್‌ಭವ          ಶಿವರಾಜ್‌ಕುಮಾರ್, ರಚಿತಾರಾಮ್ ಜೋಡಿಯ ‘ಆಯುಷ್ಮಾನ್‌ಭವ’ ಚಿತ್ರದ ಕತೆಯು ತುಂಬಿದ ಕುಟುಂಬ ಮನೆಯಲ್ಲಿ ಇದ್ದರೆ ದೇಶ. ಅದೇ ಶೀರ್ಷಿಕೆಯಾಗಿದೆ. ಮನುಷ್ಯನ  ಬದುಕಿನ ಪಯಣದಲ್ಲಿ ಭಾವನೆಗಳು ಬರುತ್ತವೆ. ಅದು ಒಳ್ಳೇದು,ಕೆಟ್ಟದ್ದು ಇರುತ್ತದೆ. ಅದರಲ್ಲಿ ಸಿಲುಕಿಕೊಂಡು ಹೇಗೆ ಒದ್ದಾಡುತ್ತಾ, ತಪ್ಪು ಮಾಡಿದಂತೆ ಭಾಸವಾಗುತ್ತದೆ ಎಂಬುದು ಸಾರಾಂಶವಾಗಿದೆ. ತಾರಗಣದಲ್ಲಿ ಅನಂತ್‌ನಾಗ್, ಸುಹಾಸಿನಿ, ಶಿವಾಜಿಪ್ರಭು, ಜೈಜಗದೀಶ್, ವೀಣಾಸುಂದರ್,  ಯಶಸ್‌ಶೆಟ್ಟಿ, ನಿಧಿಸುಬ್ಬಯ್ಯ, ಸಾಧುಕೋಕಿಲ ಮುಂತಾದವರು ನಟಿಸಿದ್ದಾರೆ. ಐದು ಹಾಡುಗಳಿಗೆ ಗುರುಕಿರಣ್ ಸಂಗೀತ ಸಂಯೋಜಿಸಿರುವ ನೂರನೇ ಚಿತ್ರವಾಗಿರುವುದು ....

384

Read More...

Raa.Film Press Meet.

Monday, November 11, 2019

ನಾಯಕನ  ಹೆಸರು ಹೇಳಿ  ಬಹುಮಾನ ಗೆಲ್ಲಿ         ಯಾವುದೇ ಚಿತ್ರವು ಜನರಿಗೆ ತಲುಪಬೇಕಾದರೆ ಪ್ರಚಾರ ಬಹು ಮುಖ್ಯವಾಗಿರುತ್ತದೆ. ಇದಕ್ಕೆಂದೆ ಹಲವು ಬಗೆಯ ಯೋಚನೆ, ಆಲೋಚನೆಗಳನ್ನು ಮಾಡುತ್ತಾರೆ. ಇದರಲ್ಲಿ ಯಶಸ್ಸು ಎನ್ನುವುದು ಬಿಡುಗಡೆ ನಂತರ ಗೊತ್ತಾಗುತ್ತದೆ. ಆ ಸಾಲಿಗೆ ‘ರಾ’ ಚಿತ್ರವೊಂದು ಸೇರಿಕೊಂಡಿದೆ.  ಈಗಾಗಲೇ ಶೇಕಡ ೮೦ರಷ್ಟು ಚಿತ್ರೀಕರಣ ಸದ್ದಿಲ್ಲದೆ  ಮುಗಿದಿದೆ. ಕಥಾನಾಯಕ, ನಾಯಕನ ಹೆಸರು ರಾ ಅಕ್ಷರದಲ್ಲಿ ಇರಲಿದೆ. ಟೈಟಲ್‌ನ್ನು ಜನರ ಮನಸ್ಸಿನಲ್ಲಿ ಕೂರಿಸಬೇಕು. ನಾಯಕನ ಪರಿಚಯವಾಗಬಾರದೆಂದು ಪೋಸ್ಟರ್‌ದಲ್ಲಿ ಹೆಸರು ಹೇಳಿ ಬಹುಮಾನ ಗೆಲ್ಲಿ ಅಂತ ಹೇಳಿಕೊಂಡಿದ್ದಾರೆ.  ಲಕ್ಕಿ ಡಿಪ್ ಮೂಲಕ ಸರಿಯಾದ ಉತ್ತರ ನೀಡಿದವರಿಗೆ ಹಣ ನೀಡಲಾಗುವುದು. ....

435

Read More...

Jan Dhan.Film Audio Rel.

Monday, November 11, 2019

ಅಪನಗಧೀಕರಣದ  ಸತ್ಯ  ಘಟನೆಗಳು          ಕೇಂದ್ರ ಸರ್ಕಾರವು  ರೂ.೨೦೦೦ ಮತ್ತು ರೂ.೫೦೦ ಬೆಲೆಯ ನೋಟುಗಳನ್ನು ೨೦೧೬ರಲ್ಲಿ ಅಪನಗದಿಕರಣಗೊಳಿಸಿತು, ಈ ಸಂದರ್ಭದಲ್ಲಿ  ಜನಸಾಮಾನ್ಯರು ಯಾವ ರೀತಿ ಸಮಸ್ಯೆಗೆ ಒಳಪಟ್ಟರು. ಕಾಳಧನಿಕರು ಬಡವರನ್ನು ಹೇಗೆ ಉಪಯೋಗಿಸಿಕೊಂಡರು ಎಂಬುದು ಎಲ್ಲರೂ ನೋಡಿದ್ದು, ಕೇಳಿದ್ದು ಆಗಿದೆ.  ಅದಕ್ಕಿಂತಲೂ ಭಿನ್ನವಾದ ಒಂದಷ್ಟು ಸಂಗತಿಗಳನ್ನು ‘ಜನ್‌ಧನ್’ ಸಿನಿಮಾದಲ್ಲಿ ತೋರಿಸುವ ಪ್ರಯತ್ನ ಮಾಡಲಾಗಿದೆ.  ಇದಕ್ಕೆ ಪೂರಕವಾಗಿ ಬೆಂಗಳೂರು  ಟು ಚಿತ್ರದುರ್ಗವೆಂದು ಅಡಿಬರಹದಲ್ಲಿ  ಹೇಳಿಕೊಂಡಿದೆ. ಹಾಗಂತ  ತಂಡವು ಏಕಾಏಕಿ ಮಾಹಿತಿ  ಕಲೆ ಹಾಕಿಲ್ಲ.  ಅಡಿಪಾಯದಲ್ಲಿ ಸಂಶೋಧನೆ ನಡೆಸಿ ಮತ್ತಷ್ಟು ವಿಷಯಗಳನ್ನು ....

415

Read More...

Raja Lakshmi.Movie Press Meet.

Monday, November 11, 2019

ರಾಜಲಕ್ಷೀಗೆ ನಾಯಕನ ಆವಜ್ಘೆ         ಚಂದನವನದಲ್ಲಿ ಕಲಾವಿದರು ಪ್ರಚಾರಕ್ಕೆ ಗೈರು ಹಾಜರಾಗುತ್ತಿರುವುದರಿಂದ ಆಯಾ ಚಿತ್ರಕ್ಕೆ ಪೆಟ್ಟು ಬೀಳುತ್ತಿರುವುದು ಇತ್ತೀಚಿಗೆ ಗಮನಕ್ಕೆ ಬಂದಿದೆ. ಆ ಸಾಲಿಗೆ ‘ರಾಜಲಕ್ಷೀ’ ಚಿತ್ರ ಸೇರ್ಪಡೆಯಾಗಿದೆ. ಬಿಡುಗಡೆಪೂರ್ವ ಸುದ್ದಿಗೋಷ್ಟಿಯಲ್ಲಿ ನಿರ್ಮಾಪಕ ಎಸ್.ಕೆ.ಮೋಹನ್‌ಕುಮಾರ್ ಬಹಿರಂಗವಾಗಿ ನಾಯಕ ನವೀನ್‌ತೀರ್ಥಹಳ್ಳಿ ಮೇಲೆ ಬೇಸರ ವ್ಯಕ್ತಪಡಿಸಿ, ಪೋಷಕ ನಟರುಗಳೇ ನಮ್ಮ ಚಿತ್ರದ ಸ್ಟಾರ್‌ಗಳು. ಇಂತಹ ನಾಯಕರು ಚಿತ್ರರಂಗಕ್ಕೆ ಮಾರಕ. ಸ್ಟಾರ್ ನಟರಿಗೆ ಫ್ಯಾನ್ಸ್  ಇರುವುದು ಸಹಜ. ಆದರೆ ಮೊದಲು ಎನ್ನುವಂತೆ  ನಮ್ಮ ಚಿತ್ರಕ್ಕೆ ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ. ಪ್ರತಿ ಜಿಲ್ಲೆಯಲ್ಲಿ ಖುದ್ದು ....

479

Read More...

Kaurya.Movie Audio Rel.

Saturday, November 09, 2019

                           ಶಂಕರ್‌ನಾಗ್ ವರ್ಧಂತಿಗೆ ಹಾಡು        ಟೆಕ್ಕಿಗಳಾದ ಯುವಕರ ತಂಡವೊಂದು ರಜಾ ದಿನಗಳಲ್ಲಿ ಅನಿಲ್‌ರಾಜಪ್ಪ ಸಾರಥ್ಯದಲ್ಲಿ ಟೀಂ ಶಂಕರ್‌ನಾಗ್ ತಂಡವನ್ನು ಶುರುಮಾಡಿ, ಇವರ ಹುಟ್ಟುಹಬ್ಬದಂದು ವಿಶೇಷ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಾ ಬಂದಿದೆ. ಈಗ ಇದೇ ತಂಡದಿಂದ ‘ಕೌರ್ಯ’ ಎನ್ನುವ ಆಕ್ಷನ್,ಥ್ರಿಲ್ಲರ್, ಸೆಸ್ಪನ್ಸ್, ಅಪರಾಧ ಹಾಗೂ  ತನಿಖೆ ಕುರಿತ ಚಿತ್ರವೊಂದು ಸದ್ದಿಲ್ಲದೆ ಶೇಕಡ ೭೦ರಷ್ಟು ಚಿತ್ರೀಕರಣ ಬೆಂಗಳೂರು ಸುತ್ತ,ಮುತ್ತ ನಡೆಸಿದ್ದಾರೆ.  ಪ್ರಚಾರದ ಮೊದಲ ಹಂತವಾಗಿ ನವೆಂಬರ್ ೯ ಶಂಕರ್‌ನಾಗ್ ಹುಟ್ಟಹಬ್ಬದಂದು ಅವರದೇ ಚಿತ್ರದ ಹೆಸರುಗಳ ಸಾಹಿತ್ಯ ಇರುವ ಲಿರಿಕಲ್ ....

435

Read More...

Gulal.Film Audio Rel.

Saturday, November 09, 2019

ಐವರು  ಹುಡುಗರ  ಯಶೋಗಾಥೆ  ಗುಲಾಲ್         ಉತ್ತರ ಕರ್ನಾಟಕ ಭಾಗದಲ್ಲಿ ಹುಟ್ಟಿದಾಗ ಗುಲಾಲ್ ಬಣ್ಣ ಹಾರಿಸ್ತಾರೆ, ಸತ್ತಾಗ ಗೌರವ ಸಲ್ಲಿಸಲು ಇದನ್ನೆ ಏರಿಸ್ತಾರೆ. ಬದುಕಲ್ಲಿ ಸಾವು ಅಂದರೆ ಕಷ್ಟ, ಹುಟ್ಟುಗೆ ಅರ್ಥ ಸುಖ ಕೊಡುತ್ತದೆ. ಇವೆರಡನ್ನು ಬಿಂಬಿಸುವ ‘ಗುಲಾಲ್.ಡಾಟ್ ಕಾಮ್’ ಚಿತ್ರವೊಂದು ಬೆಂಗಳೂರು, ಬೆಳಗಾಂ,ಕಿತ್ತೂರು  ಮುಂತಾದ ಕಡೆಗಳಲ್ಲಿ ಚಿತ್ರೀಕರಣ ನಡೆದಿದೆ.   ‘ಈ  ಸಲ ... ನಮ್ದೆ’  ಅಂತ ಅಡಿಬರಹದಲ್ಲಿ ಹೇಳಿಕೊಂಡಿದೆ. ಪ್ರತಿಯೊಬ್ಬರ ಬದುಕಿನಲ್ಲಿ ನೋವು-ಸಾವು, ಕಷ್ಟ-ಸುಖ ಇರುತ್ತದೆ. ಆ ಒಂದು ಪಯಣವೇ ಶೀರ್ಷಿಕೆಯಾಗಿದೆ. ದೇವರು ಪ್ರತಿಯೊಬ್ಬರಿಗೂ ಶಕ್ತಿ ಕೊಟ್ಟಿರುತ್ತಾನೆ. ಅದನ್ನು ಗುರುತಿಸಲು ಗುರು ಅಂತ ಒಬ್ಬರು ಇರಬೇಕು.  ....

1662

Read More...

Bhagyashree.Film Rel On 15th Nove 2019.

Saturday, November 09, 2019

ಬಾಲ್ಯ ವಿವಾಹ ನಿರ್ಮೂಲನ ಮಾಡುವ ಭಾಗ್ಯಶ್ರೀ          ಪಟ್ಟಣದಲ್ಲಿ ಬಾಲ್ಯ ವಿವಾಹ ಕಡಿಮೆಯಾಗಿದೆ. ಆದರೆ ಗ್ರಾಮಾಂತರ ಪ್ರದೇಶ ಅದರಲ್ಲೂ ಹಳ್ಳಿಗಳಲ್ಲಿ ಈಗಲೂ ಚಾಲ್ತಿಯಲ್ಲಿದೆ. ಇದನ್ನು ತಡೆಗಟ್ಟಬೇಕೆಂದು ಹೇಳುವ ‘ಭಾಗ್ಯಶ್ರೀ’ ಚಿತ್ರವೊಂದು ಬಿಡುಗಡೆಗೆ ಸಿದ್ದವಾಗಿದೆ. ಮೂರು ದಶಕಕ್ಕೂ ಹೆಚ್ಚು ಕಾಲ ಚಿತ್ರರಂಗದಲ್ಲಿ ಅನುಭವ ಪಡೆದುಕೊಂಡಿರುವ ಎಸ್.ಮಲ್ಲೇಶ್ ವಿರಚಿತ ‘ಭಾಗ್ಯ’ ಕಿರು ಕಾದಂಬರಿಯು ಅವರದೇ ಚಿತ್ರಕತೆ, ನಿರ್ದೇಶನ ಇರುವುದು ವಿಶೇಷ. ಪತ್ರಿಕೆಗಳಲ್ಲಿ ಬಂದಂತ ಸುದ್ದಿಗಳನ್ನು ಕಲೆ ಹಾಕಿ ಇದಕ್ಕೊಂದು ರೂಪ ನೀಡಿದ್ದಾರೆ. ಕತೆಯಲ್ಲಿ ಶಾಲೆಗೆ ಹೋಗುತ್ತಿರುವ ಪುಟ್ಟ ಬಾಲಕಿಗೆ ವಿವಾಹ ಮಾಡಲು  ನಿರ್ಣಯ ತೆಗೆದುಕೊಳ್ಳುತ್ತಾರೆ. ಇದನ್ನು ....

424

Read More...

Jigri Dosth.Movie Audio Rel.

Friday, November 08, 2019

ಪ್ರೀತಿಗೂ ಮೀರಿದ್ದು ದೋಸ್ತಿ          ಗೆಳತನದ ಮೌಲ್ಯ ಸಾರುವ ‘ಜಿಗ್ರಿ ದೋಸ್ತ್’ ಚಿತ್ರದ ಆಡಿಯೋ ಸಿಡಿಯನ್ನು ಪುನೀತ್‌ರಾಜ್‌ಕುಮಾರ್ ಮತ್ತು ಮಾಜಿ ಸಚಿವ ಟಿ.ಬಿ.ಜಯಚಂದ್ರ ಅನಾವರಣಗೊಳಿಸಿದರು. ಪುನೀತ್ ಮಾತನಾಡಿ ನಿರ್ಮಾಪಕರು ಅಮ್ಮನಿಗೆ, ನಿರ್ದೇಶಕರು ನನಗೆ ಪರಿಚಯದವರು. ಅದಕ್ಕಾಗಿ ಬರಬೇಕಾಯಿತು. ೨೭ ಚಿತ್ರಗಳನ್ನು ನಿರ್ಮಾಣ ಮಾಡಿರುವುದು ಸುಲಭದ ಮಾತಲ್ಲ. ಕಲಾವಿದರು ತಂಡಕ್ಕೆ ಒಳ್ಳೆಯದಾಗಲಿ ಎಂದರು.       ಯುವಕನಾಗಿದ್ದಾಗ ಡಾ.ರಾಜ್‌ಕುಮಾರ್ ಅಭಿಮಾನಿಯಾಗಿದ್ದೆ. ಅವರು ಇಟ್ಟ ಹೆಜ್ಜೆಯಂತೆ ಶಿವಣ್ಣ, ಪುನೀತ್ ನಡೆಸಿಕೊಂಡು ಹೋಗುತ್ತಿದ್ದಾರೆ.  ಭಾರತೀಯ  ಸಿನಿಮಾರಂಗದಲ್ಲಿ  ಉತ್ತಮ ಸಿನಿಮಾ, ಸಾಹಿತ್ಯ ಬರುತ್ತಿರುವುದು  ....

492

Read More...
Copyright@2018 Chitralahari | All Rights Reserved. Photo Journalist K.S. Mokshendra,