ಲಂಬೋದರನ ಹಾಡುಗಳು ಹೊರಬಂತು ಎರಡು ವರ್ಷದ ನಂತರ ಬಣ್ಣ ಹಚ್ಚಿರುವ ಲೂಸ್ಮಾದ ಯೋಗಿ ಅಭಿನಯದ ‘ಲಂಬೋದರ’ ಚಿತ್ರದ ಆಡಿಯೋ ಸಿಡಿ ಅನಾವರಣಗೊಂಡಿತು. ನಿರ್ದೇಶಕ ಕೆ.ಕೃಷ್ಣರಾಜ್ ಮಾತನಾಡಿ ಕಳೆದ ವರ್ಷ ಇದೇ ತಿಂಗಳು ಮಹೂರ್ತ ಆಚರಿಸಿಕೊಳ್ಳಲಾಗಿತ್ತು. ಈಗ ಆಡಿಯೋ ಸಿಡಿ ಹೊರಬರುತ್ತಿರುವುದು ಖುಷಿಯಾಗಿದೆ. ಸಂಪೂರ್ಣ ಕಾಮಿಡಿಯಾಗಿದ್ದು, ಯೋಗಿ ಅವರಿಗೆ ಅಂತಲೇ ಕತೆ ಬರೆಯಲಾಗಿತ್ತು. ಅಡಿಬರಹದಲ್ಲಿ ಬಸವನಗುಡಿ ಬೆಂಗಳೂರು ಎಂದು ಹೇಳಲಾಗಿದ್ದು, ಸಿನಿಮಾವು ಇದೇ ಭಾಗದಲ್ಲಿ ನಡೆಯುತ್ತದೆ. ಎರಡು ಹಾಡುಗಳನ್ನು ಪುನೀತ್ರಾಜ್ಕುಮಾರ್, ಶ್ರೀಮುರಳಿ ಬಿಡುಗಡೆ ಮಾಡಿದ್ದಾರೆ. ....
ಪ್ರೇಮಿಗಳ ದಿನದಂದು ಐ ಲವ್ ಯು ‘ಐ ಲವ್ ಯು’ ಸಿನಿಮಾದ ಮಾತಿನ ಭಾಗದ ಚಿತ್ರೀಕರಣವು ಮುಗಿದಿದ್ದು, ಸದ್ಯ ಪೋಸ್ಟ್ ಪ್ರೊಡಕ್ಷನ್ದಲ್ಲಿ ನಿರತವಾಗಿದೆ. ‘ನಿನ್ನೆ ಪ್ರೀತಿಸ್ತೇನೆ’ ಗೀತೆಯನ್ನು ಪ್ರೀತ್ಸೆ,ಪ್ರೀತ್ಸೆ ಮಾದರಿಯಲ್ಲಿ ದುಬೈ, ಮಸ್ಕಟ್ದಲ್ಲಿ ಶೂಟ್ ಮಾಡುವುದು ಬಾಕಿ ಇದೆ. ಬುದುವಾರ ತಂಡವು ಮಾದ್ಯಮದ ಮುಂದೆ ಹಾಜರಾಗಿತ್ತು. ನಿರ್ದೇಶಕರ ಸೂಚನೆಯಂತೆ ಎಲ್ಲರ ಪಾತ್ರದ ಗೌಪ್ಯತೆಯನ್ನು ಕಾಪಾಡಿದರು. ಬಿಸಿ ತುಪ್ಪ ಇದ್ದಂತೆ ರೋಲ್ ಇದೆ. ಉಪ್ಪಿ ಸರ್ ಜೊತೆ ಅಭಿನಯಿಸಿದ್ದು ಖುಷಿ ನೀಡಿತು. ಹೆಚ್ಚಾಗಿ ಅಪ್ಪನೊಂದಿಗೆ ....
ದಾರಿ ಬಿಡಿ ಕೆ.ಜಿ.ಎಫ್ ಬರ್ತಾ ಇದೆ ಐದು ಭಾಷೆಗಳಲ್ಲಿ ತೆರೆ ಕಾಣುತ್ತಿರುವ ಅದ್ದೂರಿ ಚಿತ್ರ ‘ಕೆ.ಜಿ.ಎಫ್’ ಕೊನೆಗೂ ಜನರಿಗೆ ತೋರಿಸಲು ಸಜ್ಜಾಗಿದೆ. ಬಿಡುಗಡೆ ಮುನ್ನ ಮಾದ್ಯಮದವರನ್ನು ತಂಡವು ಭೇಟಿ ಮಾಡಿತು. ನಿರ್ಮಾಪಕ ವಿಜಯ್ ಕಿರಗಂದೂರ್ ಹೇಳುವಂತೆ ದೇಶದ್ಯಾಂತ ೨೦೦೦ ಕೇಂದ್ರಗಳು, ಅಮೇರಿಕಾ, ಕೆನಡಾ,ಯುಕೆ ಮತ್ತು ಕನ್ನಡ ಭಾಷ ಕುರಿತಂತೆ ೩೫೦ ಸೆಂಟರ್, ಹಿಂದಿ ಭಾಷೆಯಲ್ಲಿ ಭಾರತದ್ಯಂತ ೧೦೦೦ ಕೇಂದ್ರಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ. ವಿತರಣೆ ಹಕ್ಕುಗಳನ್ನು ....
ಮುಕ್ತಾಯದ ಹಂತದಲ್ಲಿ ಕನ್ನಡ್ ಗೊತ್ತಿಲ್ಲ
ಆರ್ಜೆ ಆಗಿದ್ದ ಮಯೂರರಾಘವೇಂದ್ರ ಚೂಚ್ಚಲಬಾರಿ ‘ಕನ್ನಡ್ ಗೊತ್ತಿಲ್ಲ’ ಚಿತ್ರಕ್ಕೆ ಕತೆ ಬರೆದು ನಿರ್ದೇಶನ ಮಾಡಿದ್ದಾರೆ. ಬೆಂಗಳೂರು ಹೊರವಲಯದಲ್ಲಿ ಚಿತ್ರೀಕರಣಕ್ಕೆ ಮಾದ್ಯಮದವರನ್ನು ಆಹ್ವಾನಿಸಲಾಗಿತ್ತು. ಧಗ ಧಗ ಬಿಸಿಲಿನಲ್ಲಿ ಹರಿಪ್ರಿಯ ಜೆಸಿಬಿ ವಾಹನದ ಪಕ್ಕ ಟೀ ಶರ್ಟ್ ಕಾಲರ್ ಪೀಸ್ನ್ನು ತೆಗೆದುಕೊಂಡು ಇದು ಒಂದು ಸಾಕ್ಷಿಯಾಗಿದೆ ಅಂತ ಕ್ಯಾಮಾರ ಕಡೆ ನೋಡಿದಾಗ ಕಟ್ ಎನ್ನುವಲ್ಲಿಗೆ ಕೆಲsಸಕ್ಕೆ ಬ್ರೇಕ್ ನೀಡಲಾಗಿ ತಂಡವು ಮಾತಿಗೆ ಕುಳಿತುಕೊಂಡಿತು.
ಶ್ರೀಮುರಳಿ ಹುಟ್ಟು ಹಬ್ಬಕ್ಕೆ ಡಬ್ಬಲ್ ಧಮಾಕ ಶ್ರೀಮುರಳಿ ೩೭ನೇ ಹುಟ್ಟುಹಬ್ಬಕ್ಕೆ ಅವರ ಅಭಿನಯದ ಎರಡು ಚಿತ್ರಗಳ ಸುದ್ದಿ ಹೊತಬಂತು. ಮೊದಲಿಗೆ ‘ಭರಾಟೆ’ ಚಿತ್ರದ ಟೀಸರ್, ತರುವಾಯ ‘ಮದಗಜ’ ಸಿನಿಮಾದ ಟೈಟಲ್ ಅನಾವರಣವನ್ನು ದರ್ಶನ್ ಲೋಕಾರ್ಪಣೆ ಮಾಡಿದರು. ನಂತರ ಮಾತನಾಡಿದ ಬಾಕ್ಸ್ ಆಫೀಸ್ ಸುಲ್ತನ್ ಭರಾಟೆ ನಿರ್ದೇಶಕ ಚೇತನ್ಕುಮಾರ್ ಚಿತ್ರಾನ್ನ ತಿಂದು ಈ ಲೆವಲ್ಗೆ ಸಿನಿಮಾ ನೀಡುತ್ತಾರೆ. ಇನ್ನೆನಾದರೂ ಚಿಕನ್ ಸೇವಿಸಿದರೆ ಎಂತಹ ಚಿತ್ರ ನೀಡಬಹುದು. ಅವರದು ಮಾತು ಕಡಿಮೆ ಕೆಲಸ ಜಾಸ್ತಿ ಎಂದು ಹೇಳಿದ್ದಾರೆ. ಉಗ್ರಂ ಚಿತ್ರ ಬಿಡುಗಡೆಯಾದಾಗ ....
ಹೊಸಬರ ಈ ಪಟ್ಟಣಕ್ಕೆ ಏನಾಗಿದೆ ಹೊಸಬರೇ ಸೇರಿಕೊಂಡು ಸಿದ್ದಪಡಿಸಿರುವ ‘ಈ ಪಟ್ಟಣಕ್ಕೆ ಏನಾಗಿದೆ’ ಚಿತ್ರದ ಕತೆಯಲ್ಲಿ ಇದರಲ್ಲಿ ಕ್ರಿಕೆಟ್ ಬೆಟ್ಟಿಂಗ್, ಗ್ಯಾಮ್ಲಿಂಗ್ ಇವುಗಳ ಮೇಲೆ ಕತೆ ಸಾಗುತ್ತದೆ. ಎಲ್ಲಾ ಪಟ್ಟಣಗಳಲ್ಲಿ ಇರುವಂತೆ ಯುವಕರು ಹೇಗೆ ತಪ್ಪುದಾರಿಗೆ ಹೋಗಿ ಹಾಳಾಗ್ತಾ ಇರುವುದು, ಅದನ್ನು ತಡೆದು ಅವರನ್ನು ಸರಿದಾರಿಗೆ ತರುವ ಅಂಶವನ್ನು ರಾ ಫೀಲ್ನಂತೆ ಸಿನಿಮಾದಲ್ಲಿ ತೋರಿಸಲಾಗಿದೆ. ಬೆಂಗಳೂರು ಸುತ್ತಮುತ್ತ ೭೦ ದಿನಗಳ ಕಾಲ ಚಿತ್ರೀಕರಣ ನಡೆಸಿ, ಕ್ಲೈಮಾಕ್ಸ್ ಭಾಗವನ್ನು ಮಂಗಳೂರು ಭಾಗದಲ್ಲಿ ಮುಂದಿನ ತಿಂಗಳು ಸೆರೆಹಿಡಿಯಲು ತಂಡವು ಯೋಜನೆ ....
ಸಪ್ಲಿಮೆಂಟರಿ ಹಾಡುಗಳು ಹೊರಬಂತು ‘ಸಪ್ಲೆಮೆಂಟರಿ’ ಚಿತ್ರದ ಹಾಡುಗಳು ಇತ್ತೀಚೆಗೆ ಭಗವಾನ್ ಬಿಡುಗಡೆ ಮಾಡಿ ಶುಭಹಾರೈಸಿದರು. ಅವರು ಮಾತನಾಡಿ ಇದೇ ವಯಸ್ಸಿನಲ್ಲಿ ನಾನು ಸಹ ಚಿತ್ರರಂಗಕ್ಕೆ ಬಂದು ೬೫ ವರ್ಷಗಳ ಕಾಲ ಸಿನಿಮಾರಂಗದಲ್ಲಿ ಸೇವೆ ಸಲ್ಲಿಸಲಾಗಿದೆ. ಇದರಲ್ಲಿ ೩೬ ಡಾ.ರಾಜ್ಕುಮಾರ್, ೯ ಅನಂತ್ನಾಗ್ ಚಿತ್ರಗಳಿಗೆ ನಿರ್ದೇಶನ ಮಾಡುವ ಸೌಭಾಗ್ಯ ಲಭಿಸಿತು. ನಂತರ ೨೬ ವರ್ಷಗಳ ಕಾಲ ಆಕ್ಷನ್ ಕಟ್ ಹೇಳಲು ಕಾಲ ಕೂಡಿ ಬಂದಿರಲಿಲ್ಲ. ಹಾಗಂತ ಸುಮ್ಮನೆ ಇರದೆ ಫಿಲಿಂ ತರಭೇತಿ ಶಾಲೆಯಲ್ಲಿ ಸತತ ೧೮ ವರ್ಷಗಳ ಕಾಲ ಪ್ರಿನ್ಸಿಪಾಲ್ ಹುದ್ದೆಯನ್ನು ಅಲಂಕರಿಸಿ ನೂರಾರು ....
ಹಳ್ಳಿಯ ಜನರೇ ನಾಯಕ, ನಾಯಕಿಯರು ಅಂದು ಒಂದು ಕಾಲವಿತ್ತು. ಹಳ್ಳಿ, ಪಟ್ಟಣದಲ್ಲಿ ಮದುವೆ ಶುಭ ಸಮಾರಂಭವನ್ನು ಸಂಭ್ರಮ, ಸಡಗರದಿಂದ ಮಾಡುತ್ತಿದ್ದರು. ತಂತ್ರಜ್ಘಾನ ಬೆಳೆದಂತೆ ಜನರು ಅದಕ್ಕೆ ಮಾರುಹೋಗಿ ಆಚರಣೆಗಳಲ್ಲಿ ಆಸಕ್ತಿ ತೋರಿಸುತ್ತಿಲ್ಲ. ೪೩ ವರ್ಷಗಳ ಕೆಳಗೆ ಹಳ್ಳಿಯಲ್ಲಿ ಮೂರು ದಿನಗಳ ಕಾಲ ಯಾವ ....
ತೆರೆ ಮೇಲೆ ಅಮೃತ ಘಳಿಗೆ ೩೪ ವರ್ಷಗಳ ಹಿಂದೆ ತೆರೆ ಕಂಡ ‘ಅಮೃತ ಘಳಿಗೆ’ ಚಿತ್ರವು ಈಗ ಇದೇ ಹೆಸರಿನಲ್ಲಿ ಬಿಡುಗಡೆಗೆ ಸಿದ್ದವಾಗಿದೆ. ಹಾಗಂತ ಹಳೆಯ ಚಿತ್ರದ ಕತೆಯಾಗಿರುವುದಿಲ್ಲ. ಕಲಾತ್ಮಕ ಕಥನವಾಗಿದ್ದು ಮಲೆನಾಡಿನ ಅಪರೂಪದ ದೃಶ್ಯ ಕಾವ್ಯವಾಗಿದೆ. ಪರಿಸ್ಥಿತಿಯು ಬದಲಾದಾಗ ಸಂಬಂದಗಳ ತಕ್ಕಡಿ ಯಾವರೀತಿ ಬದಲಾಗುತ್ತೆ. ಇಂದು ನಾವು ಬೇಕು ಎನ್ನುವುದು ನಾಳೆ ಬೇಡ ಅನಿಸುತ್ತೆ ಎಂಬುದು ಒಂದು ಏಳೆಯ ಸಾರಾಂಶವಾಗಿದೆ. ತಂದೆಯ ವಿರೋಧಕಟ್ಟಿಕೊಂಡು ಮದುವೆಯಾಗಿ, ನಂತರ ಏನೇನು ಕಷ್ಟಗಳನ್ನು ಅನುಭವಿಸುತ್ತಾನೆ. ಹೆಣ್ಣು ತವರು ಮನೆ ಬಿಟ್ಟುಗಂಡನ ಮನೆಗೆ ಬಂದಾಗ, ಆಕೆ ....
ಬೀರ್ಬಲ್ ಟೀಸರ್,ಟ್ರೈಲರ್ ಬಿಡುಗಡೆ ಟೋಪಿವಾಲ ನಿರ್ದೇಶಕ ಮತ್ತು ಶ್ರೀನಿವಾಸ ಕಲ್ಯಾಣ ಚಿತ್ರದ ನಾಯಕ ಶ್ರೀನಿ ಅವರು ರಚಿಸಿ, ನಿದೇಶಿಸಿ ಹಾಗೂ ನಾಯಕನಾಗಿ ನಟಿಸಿರುವ ಕ್ರೈಮ್ ಥ್ರಿಲ್ಲರ್ ಕತೆ ಹೊಂದಿರುವ ‘ಬೀರಬಲ್’ ಚಿತ್ರವು ಬಿಡುಗಡೆಗೆ ಸಿದ್ದವಾಗಿದೆ. ಶ್ರೀನಿ ೩೦ ಸೆಕೆಂಡ್ ಸಂಭಾಷಣೆಯನ್ನು ಒಂದೇ ಗುಕ್ಕಿಗೆ ಹೇಳಿ ಪ್ರತಿಭೆಯನ್ನು ತೋರಿಸಿದರು. ನಂತರ ಮಾತು ಮುಂದುವರೆಸುತ್ತಾ ಚಿತ್ರದಲ್ಲಿ ಹಲವು ವಿಶೇಷಗಳು ಇರಲಿದೆ ಎಂದು ಹೇಳುತ್ತಾ ಹೋದರು. ಮೂರು ಭಾಗಗಳಲ್ಲಿ ಬರಲಿದ್ದು, ಮೊದಲನೆಯದರಲ್ಲಿ ಫೈಂಡಿಂಗ್ ....
ರಿವೀಲ್ ಗೀತಮಾಧುರಿ ಹೊಸಬರ ‘ರಿವೀಲ್’ ಚಿತ್ರದ ಧ್ವನಿಸಾಂದ್ರಿಕೆಯು ಅನಾವರಣಗೊಂಡಿತು. ನಾಯಕ ಅದ್ವೈತ್ ಮಾತನಾಡಿ ಮಡಕೇರಿಯ ನಲವತ್ತು ಕಿ.ಮೀ ದೂರದಲ್ಲಿರುವ ಅರಮನೆ ಸಂಬಂದಪಟ್ಟ ಕತೆಯಾಗಿದೆ ಎಂದಷ್ಟೇ ಹೇಳಿ ವೈಯಕ್ತಿಕ ವಿಷಯಗಳನ್ನು ಹೆಚ್ಚು ಹೇಳಿಕೊಂಡರು. ಅದರಂತೆ ನಾಯಕಿ ಆದ್ಯಆರಾಧ್ಯ ಪಾತ್ರದ ಗುಟ್ಟನ್ನು ಕಾಪಾಡಿಕೊಂಡು ಅವಕಾಶ ನೀಡಿದ ನಿರ್ಮಾಪಕ, ನಿರ್ದೇಶಕರಿಗೆ ಮತ್ತು ಇತರರಿಗೆ ಥ್ಯಾಂಕ್ಸ್ ಎಂದು ಸಮಯವನ್ನು ಕೊಂದು ಹಾಕಿದರು. ಎರಡು ಹಾಡುಗಳಿಗೆ ಸಂಗೀತ ನೀಡಿರುವ ವಿಜಯ್ಯಾರ್ಡ್ಲಿ ಕಡಿಮೆ ಮಾತನಾಡಿದರು. ಇವತ್ತು ಕಲರ್ಫುಲ್ ಡೇ ಎನ್ನಬಹುದು. ನಾನು ಸೇರಿದಂತೆ ಬಹುತೇಕ ....
ಐಎಎಸ್ ಆಗುವಳ ಸಿನಿಮಾ ‘ಕಾಣೆಯಾಗಿದ್ದಾಳೆ’ ಚಿತ್ರಕ್ಕೆ ಕತೆ, ನಿರ್ದೇಶನ ಮತ್ತು ನಿರ್ಮಾಣ ಮಾಡುತ್ತಿರುವುದು ರಾಜುಹಲಗೂರು. ಸಿನಿಮಾ ಕುರಿತು ಹೇಳುವುದಾದರೆ ಮಳವಳ್ಳಿ ಪಟ್ಟಣದ ಕಾವೇರಿ ಎನ್ನುವ ಹುಡುಗಿಗೆ ಶಿವನ ಜೊತೆ ಪ್ರೀತಿ ಅರಳುತ್ತದೆ. ಬಡತನ ಸಾಕಾಗಿ, ಪ್ರೀತಿಗೆ ಹೊಟ್ಟೆ ತುಂಬಿಸಿಕೊಳ್ಳಲು ಸಮಾಜದಲ್ಲಿ ದುಡಿಮೆ ಮಾಡಿದರೂ ಸಾಕಾಗುವುದಿಲ್ಲ. ತನ್ನ ವ್ಯಕ್ತಿತ್ವವನ್ನು ಉಳಿಸಿಕೊಳ್ಳಲು ಓದಲು ಬೆಂಗಳೂರಿಗೆ ಬರುತ್ತಾಳೆ. ಹೊರಡುವ ಮುನ್ನ ತಾನು ಐಎಎಸ್ ಆಗಬೇಕೆಂಬ ಧ್ಯೇಯ ಇದೆ. ಎರಡು ವರ್ಷ ಯಾವುದೇ ಕಾರಣಕ್ಕೂ ಇಲ್ಲಿಗೆ ಬರಬಾರದು, ....
ಚಂಬಲ್ ಡಕಾಯಿತರ ಕತೆಯಲ್ಲ ಸವಾರಿ, ಪೃಥ್ವಿ ಚಿತ್ರದ ನಿರ್ದೇಶಕ ಜೇಕಬ್ವರ್ಗಿಸ್ ಕತೆ ಬರದು ನಿರ್ದೇಶನ ಮಾಡಿರುವ ‘ಚಂಬಲ್’ ಥ್ರಿಲ್ಲರ್ ಜಾನರ್ ಚಿತ್ರವಾಗಿದೆ. ಸಿನಿಮಾ ಚೆನ್ನಾಗಿ ಬಂದಿರುವ ಕಾರಣ ನೆಟ್ಫ್ಲಿಕ್ಸ್ನವರು ಖರೀದಿ ಮಾಡಲು ಆಸಕ್ತಿ ತೋರಿಸಿದ್ದಾರೆ. ಕನ್ನಡ ಪ್ರೇಕ್ಷಕರು ಇದರಲ್ಲಿ ನೋಡುವುದು ತುಂಬಾ ಕಡಿಮೆ. ಅಲ್ಲದೆ ಕಲಾವಿದರು, ತಂತ್ರಜ್ಘರ ಪರಿಚಯ ಆಗುವುದಿಲ್ಲ. ಅದಕ್ಕಾಗಿ ನೇರವಾಗಿ ಚಿತ್ರಮಂದಿರದಲ್ಲಿ ಜನರಿಗೆ ತೋರಿಸಲು ಯೋಜನೆ ಹಾಕಲಾಗಿದೆಯಂತೆ. ನಾಯಕ ನೀನಾಸಂಸತೀಶ್ಗೆ ಹಲವು ಚಿತ್ರಗಳಲ್ಲಿ ಅಭಿನಯಿಸಿದ್ದರೂ, ಈ ಚಿತ್ರದಲ್ಲಿ ....
ಹೊಸಬರ ಆರ್ಡಿ ಅಂದರೆ ರಾಜ್ದೂತ್ ‘ಆರ್ಡಿ’ ಅಡಿಬರಹದಲ್ಲಿ ರಾಜದೂತ್ ಎನ್ನುವ ಸಿನಿಮಾದಲ್ಲಿ ಇದರ ಮೇಲೆ ಕತೆಯು ಸಾಗುತ್ತದೆ. ಇಬ್ಬರು ವಾಂಚಲ್ಯ ತುಂಬಿರುವ ಗೆಳಯರ ಮಧ್ಯೆ ವಾಹನ ಬರುತ್ತದೆ. ತಾತನೊಬ್ಬ ಆರ್ಡಿ ವಾಹನ ಮಾಲೀಕನಾಗಿದ್ದು, ಅದನ್ನು ಪಡೆದುಕೊಳ್ಳಲು ಇವರು ಶತಾಯಗತಾಯ ಪ್ರಯತ್ನ ಪಡುತ್ತಾರೆ. ಇದರಿಂದ ಇಬ್ಬರಲ್ಲೂ ಭಿನ್ನಾಭಿಪ್ರಾಯ ಶುರುವಾಗಿ ವೈಮನಸ್ಯಕ್ಕೆ ದಾರಿಯಾಗುತ್ತದೆ. ಅಂತಿಮವಾಗಿ ತಾತ ಬೈಕ್ನ್ನು ಕೊಡ್ತನಾ ಅಥವಾ ಸ್ನೇಹ ಏನಾಗುತ್ತದೆ ಎಂಬುದು ಒಂದು ಏಳೆಯ ....
ಗಾಂದಿ ಅಭಿಮಾನಿ ನಾಥೂರಾಮ್ ನಟ, ನಿರ್ದೇಶಕ ರಿಶಬ್ಶೆಟ್ಟಿ ‘ನಾಥೂರಾಮ್’ ಚಿತ್ರಕ್ಕೆ ನಾಯಕ ಎಂಬ ಸುದ್ದಿ ಹರಡಿತ್ತು. ಅದು ನಿಜವಾಗಿ ಬುದುವಾರ ಮಹೂರ್ತ ಆಚರಿಸಿಕೊಂಡಿದೆ. ಚಿತ್ರದ ಕುರಿತು ಹೇಳುವುದಾದರೆ ಗಾಂಧೀಜಿ ಆತ್ಮಕತೆಯನ್ನು ಓದಿ ಇಷ್ಟಪಟ್ಟವರಲ್ಲಿ ಶೀರ್ಷಿಕೆ ಹೆಸರಿನವನು ಒಬ್ಬನಾಗಿರುತ್ತಾನೆ. ಅವರ ಅಭಿಮಾನಿಯಾಗಿ, ಇವತ್ತಿವ ಮನೋಭಾವದಲ್ಲಿ ಯಾವ ರೀತಿ ಇರುತ್ತಾನೆಂದು ತೋರಿಸವ ಪ್ರಯತ್ನ ಮಾಡಲಾಗುತ್ತಿದೆ. ಮಿಕ್ಕಿದ್ದನ್ನು ಸಿನಿಮಾ ನೋಡಬೇಕೆಂದು ತಂಡವು ಹೇಳಿಕೊಂಡಿದೆ. ೬೦ ದಿನಗಳ ಕಾಲ ಶ್ರೀರಂಗಪಟ್ಟಣ, ಮೈಸೂರು, ಕಾರ್ಕಳ ಸಮೀಪದಲ್ಲಿರುವ ....
ಸಿನಿಮಾಸಕ್ತರಿಗೆ ಫ್ಲ್ಲೆಮಿಂಗೋ ಸೆಲಬ್ರಿಟಿಸ್ ಶಾಲೆ ಸಿನಿಮಾ ಮೋಹಿಗಳಿಗೆ ಡ್ಯಾನ್ಸ್, ನಟನೆ, ನಿರ್ದೇಶನ ಮತ್ತು ಮಾಡಲಿಂಗ್ ಕಲಿಯಲು ‘ಫ್ಲೆಮಿಂಗೋ ಸೆಲಬ್ರಿಟಿಸ್ ವರ್ಡ್ ಪ್ರೈ. ಲಿಮಿಟೆಡ್’ ತರಭೇತಿ ಸಂಸ್ಥೆಯು ಧವನ್ಸೋಹ ಸಾರಥ್ಯದಲ್ಲಿ ೨೦೧೩ರಲ್ಲಿ ಪ್ರಾರಂಭಮಾಡಿದ್ದಾರೆ. ಉತ್ತಮ ವಿದ್ಯಾರ್ಥಿಗಳನ್ನು ಅಡಿಷನ್ ಮಾಡಿ ಕಿರುತೆರೆ, ಹಿರಿತೆರೆಗೆ ಶಿಪಾರಸ್ಸು ಮಾಡಲಾಗುತ್ತಿದೆ. ಈಗಾಗಲೇ ಹಲವು ಪ್ರತಿಭೆಗಳು ಚಿತ್ರರಂಗ ಹಾಗೂ ಮಾಡಲಿಂಗ್ ಕ್ಷೇತ್ರದಲ್ಲಿ ಬ್ಯುಸಿ ಇದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ಫ್ಯಾಷನ್ ವೀಕ್, ಮಾಡಲಿಂಗ್, ಫಿಲಿಂ ....
ನಿರೂಪಕ ಈಗ ನಾಯಕ ಕಿರುತೆರೆ, ವಾಹಿನಿಗಳಲ್ಲಿ ಕೆಲಸ ಮಾಡುತ್ತಿರುವವರು ಕಲಾವಿದ, ತಂತ್ರಜ್ಘ ಆಗುತ್ತಿರುವುದು ವಾಡಿಕೆಯಾಗಿದೆ. ಇದರ ಸಾಲಿಗೆ ಉತ್ತರ ಕರ್ನಾಟಕದ ಪ್ರತಿಭೆಗಳು ಸೇರಿಕೊಂಡು ‘ಗೋರಿ’ ಸಿನಿಮಾ ಮಾಡುತ್ತಿದ್ದಾರೆ. ಜಾತಿ ಧರ್ಮ ಮೀರಿದ್ದು ಪ್ರೀತಿ-ಸ್ನೇಹ. ಅದರಂತೆ ಎರಡಕ್ಕೂ ಮೀರಿದ್ದು ಮಾನವಿಯತೆ. ಮನುಷ್ಯ ಯಾವುದೇ ಜಾತಿಯಾಗಿದ್ದರೂ ಪರವಾಗಿಲ್ಲ. ಆದರೆ ಮೊದಲು ನೀನು ಭಾರತೀಯ ಎಂಬುದನ್ನು ಮರೆಯಬೇಡ ಅಂತ ಸಂದೇಶದಲ್ಲಿ ಹೇಳಲಾಗಿದೆ. ಪ್ರೀತಿಗಿಂತ ಸ್ನೇಹ ಜಾಸ್ತಿ. ಇದರ ಮಧ್ಯೆ ಪ್ರೀತಿ ಬಂದಾಗ ಸ್ನೇಹ ಎಷ್ಟು ಗಟ್ಟಿಯಾಗುತ್ತದೆ ಎಂಬುದು ಒಂದು ಏಳೆಯ ಕತೆಯಾಗಿದೆ. ....
ಹೊಸಬರ ಬದ್ರಿ v/s ಮಧುಮತಿ ಹೊಸಬರೇ ಸೇರಿಕೊಂಡು ಬದ್ರಿ v/s ಮಧುಮತಿ ಚಿತ್ರವು ಜನರಿಗೆ ತೋರಿಸಲು ಸಜ್ಜಾಗಿದೆ. ಕತೆಯಲ್ಲಿ ದೇಶಕ್ಕೆ ಪ್ರಾಣ ಕೊಡುವ ವ್ಯಕ್ತಿ , ಕುಟುಂಬದ ಸಲುವಾಗಿ ತನ್ನ ಪ್ರೀತಿಯನ್ನು ಹೇಗೆ ತ್ಯಾಗ ಮಾಡುತ್ತಾನೆ ಎಂಬುದು ಒಂದು ಏಳೆಯ ಸಾರಾಂಶವಾಗಿದೆ. ಕ್ಲೈಮಾಕ್ಸ್ದಲ್ಲಿ ನಾಯಕ ಇಂಡಿಯಾ-ಪಾಕಿಸ್ತಾನ ಯುದ್ದದಲ್ಲಿ ಭಾಗವಹಿಸುವ ಸನ್ನಿವೇಶಗಳನ್ನು ಸ್ಟಾಕ್ ಶಾಟ್ಸ್ ಮೂಲಕ ಸೃಷ್ಟಿಸಲಾಗಿದೆ. ಟಾಲಿವುಡ್ನ ಶಂಕರ್ನಾರಾಯಣ್ರೆಡ್ಡಿ ಕನ್ನಡಿಗರು ಇಷ್ಟಪಡುವ ಕತೆಯನ್ನು ರಚಿಸಿ ನಿರ್ದೇಶನ ....
ಶ್ಯಾಡೊ ಟೀಸರ್ ಬಿಡುಗಡೆ ಮಾಡಿದ ದರ್ಶನ್ ಗೆಳಯ ವಿನೋಧ್ಪ್ರಭಾಕರ್ ಅಭಿನಯದ ‘ಶ್ಯಾಡೊ’ ಸಿನಿಮಾದ ಟೀಸರ್ ಬಿಡುಗಡೆ ಮಾಡಿದ ದರ್ಶನ್ ಮಾತನಾಡಿ ಟೈಗರ್ ಕಂಡರೆ ತುಂಬಾ ಪ್ರೀತಿ. ಅವರ ಯಾವುದೇ ಸಿನಿಮಾದ ಕಾರ್ಯಕ್ರಮವಿರಲಿ ಅಲ್ಲಿ ನನ್ನ ಹಾಜರಿ ಖಂಡಿತ ಇರುತ್ತದೆ. ಅವರ ಆಗು ಹೋಗುಗಳನ್ನು ಬಲ್ಲವನಾಗಿ, ಈಗ ಬ್ಯಾಕ್ ಟು ಬ್ಯಾಕ್ ಚಿತ್ರಗಳಿಗೆ ಸಹಿ ಹಾಕುತ್ತಿದ್ದಾರೆ. ಎರಡು ಚಿತ್ರದ ಮುಂಗಡವನ್ನು ಕ್ಯಾರವಾನ್ ಇರುವಾಗಲೇ ಕೊಡಿಸಿದ್ದೆ. ಅವರು ಎಲ್ಲಾ ಪಾತ್ರಕ್ಕೂ ಶ್ರದ್ದೆ ವಹಿಸುತ್ತಾರೆ. ....