ತೆರೆ ಮೇಲೆ ವಿರಾಜ್ ಆಕ್ಷನ್, ಕಾಮಿಡಿ ತುಂಬಿರುವ ಅದ್ದೂರಿ ಮನರಂಜನೆ ಇರುವ ‘ವಿರಾಜ್’ ಚಿತ್ರದ ಕತೆಯು ಪ್ರತಿಯೊಬ್ಬರಿಗೂ ಗೌರವ ಕೊಡುವುದು ನಮ್ಮ ಕರ್ತವ್ಯ ಎಂಬುದು ಒಂದು ಏಳೆಯಾಗಿದೆ. ಊರಿನ ಎರಡು ಕುಟುಂಬಗಳಲ್ಲಿ ಒಂದು ಕುಟುಂಬವು ಬಡವ, ಬಲ್ಲಿದ ಎಂದು ನೋಡದೆ ಎಲ್ಲರನ್ನು ಒಂದೇ ಸ್ಥಾನದಲ್ಲಿ ಗೌರವಿಸುತ್ತಿರುತ್ತದೆ. ಮತ್ತೋಂದು ವಿದೇಶದಿಂದ ಹಿಂತಿರುಗಿರುವುದರಿಂದ ಜನರ ಸ್ಥಾನಮಾನಗಳನ್ನು ನೋಡಿಕೊಂಡು ಅದರಂತೆ ನಡೆದುಕೊಳ್ಳುತ್ತಿರುತ್ತಾರೆ. ಎರಡು ಮನೆಯಿಂದ ಪ್ರೇಮಿಗಳು ಹುಟ್ಟಿಕೊಳ್ಳುತ್ತಾರೆ. ಮುಂದೆ ಸಣ್ಣ ಭಿನ್ನಾಭಿಪ್ರಾಯ, ಸಂಶಯದಿಂದ ಇಬ್ಬರು ....
ಹಫ್ತಾ ಟೀಸರ್ ಬಿಡುಗಡೆ ಮಾಡಿದ ಶ್ರೀಮುರಳಿ ಹೊಸಬರ ‘ಹಫ್ತಾ’ ಚಿತ್ರ ಅಡಿಬರಹದಲ್ಲಿ ಸೆಂಟಿಮೆಂಟ್ ನಾಟ್ ಅಲೋಡ್ ಅಂತ ಹೇಳಿಕೊಂಡಿದೆ. ಶೀರ್ಷಿಕೆ ಕೇಳಿದರೆ ಇದೂಂದು ವಸೂಲಿ ಕತೆ ಇರಬಹುದೆಂದು ಭಾವಿಸಿದರೆ ಅದು ಆಗಿರುವುದಿಲ್ಲ. ಕಡಲ ತೀರದ ಭೂಗತಲೋಕ ಮತ್ತು ಸುಪಾರಿ ಕಿಲ್ಲಿಂಗ್ ಜೊತೆಗೆ ಬೇರೆ ತರಹದ ಮತ್ತೋಂದು ವಿಷಯವನ್ನು ಸೆಸ್ಪನ್ಸ್ ಥ್ರಿಲ್ಲಿಂಗ್ ಮಾದರಿಯಲ್ಲಿ ತೋರಿಸಲಾಗಿದೆ. ಕೆಟ್ಟವರನ್ನು ಸಂಹಾರ ಮಾಡಲು ಕೆಟ್ಟವನೇ ಬರಬೇಕೆಂದು ಹೇಳಿದ್ದಾರೆ. ಮಂಗಳೂರು, ಮುರುಡೇಶ್ವರ, ಗೋಕರ್ಣ ಮತ್ತು ಬೆಂಗಳೂರು ಪ್ರದೇಶಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಮೂರು ಹಾಡುಗಳಿಗೆ ....
ಪಾಯಿಂಟ್ ಔಟ್ದಲ್ಲಿ ನಾಲ್ಕು ಹುಡುಗರು ‘ಒಳಿತು ಮಾಡು ಮನುಸ’ ಗೀತೆ ಪ್ರಪಂಚದಾದ್ಯಂತ ಪ್ರಸಿದ್ದಿಯಾಗಿತ್ತು. ಆದರೆ ಅದನ್ನು ಬರೆದವರು ಕಷ್ಟಕಾರ್ಪಣ್ಯದಲ್ಲಿ ಬೆಂದು, ಸುಸ್ತಿದಾರ ಆದ ಕಾರಣ ಆರು ತಿಂಗಳು ಕಂಬಿ ಏಣಿಸುವಂತಾಗಿತ್ತು. ಜೈಲಿನಲ್ಲೆ ಹಲವು ಕತೆಗಳನ್ನು ಗೀಚಿ ಒಂದು ಹಂತಕ್ಕೆ ತಂದು, ಅಲ್ಲಿನ ವಾತವರಣವನ್ನು ಕಂಡು ಇಲ್ಲಿರುವವರು ಬಹುಪಾಲು ಮುಗ್ದರು. ಹೊರಗಿನವರು ಭ್ರಷ್ಟರು, ಮೋಸಗಾರರು ಅಂತ ತಿಳಿದುಕೊಂಡಿದ್ದಾರೆ. ಅಂತೂ ಹೂರ ಬಂದ ನಂತರ ಗೆಳಯ ಶ್ರೀಗುರು ಫೇಸ್ಬುಕ್ದಲ್ಲಿ ಇವರ ವಿಷಯವನ್ನು ಹಂಚಿಕೊಂಡಿದ್ದಾರೆ. ಇದರಿಂದ ....
ಒಳ್ಳೆಯದು ಕೆಟ್ಟದ್ದು ನಡುವಿನ ಕಥನ ‘ಅಡೆಚಣೆಗಾಗಿ ಕ್ಷಮಿಸಿ’ ಹೆಸರಿನಲ್ಲೆ ಸೆಸ್ಪನ್ಸ್ ಥ್ರಿಲ್ಲರ್ ಚಿತ್ರವೊಂದು ತೆರೆಗೆ ಬರಲು ತಯಾರಾಗಿದೆ. ಹನ್ನೆರಡು ವರ್ಷಗಳ ಕಾಲ ಚಿತ್ರರಂಗದಲ್ಲಿ ಅನುಭವ ಪಡೆದುಕೊಂಡ ಹಿನ್ನಲೆಯಲ್ಲಿ ಸಿನಿಮಾಕ್ಕೆ ಕತೆ, ಸಾಹಿತ್ಯ, ಸಾಹಸ ಜೊತೆಗೆ ಚೂಚ್ಚಲಬಾರಿ ನಿರ್ದೇಶನ ಮಾಡಿರುವುದು ಭರತ್.ಎಸ್.ನಾವುಂದ. ಇವರು ಹೇಳುವಂತೆ ಕಾಲೇಜಿನ ಒಂದಷ್ಟು ಸಿನಿಮಾಮೋಹಿಗಳು ಸೇರಿಕೊಂಡು ಒಂದು ಹಂತದವರಗೆ ಚಿತ್ರೀಕರಣ ಮುಗಿಸಿ ಹಣಕಾಸಿನ ತೊಂದರೆಯಿಂದ ಅರ್ಧಕ್ಕೆ ನಿಲ್ಲಿಸಬೇಕಾಯಿತು. ಮುಂದೆ ಬೇರೆಯವರು ನಮ್ಮ ಸಿನಿಮಾವನ್ನು ಟೇಕಾಫ್ ....
ಮತ್ತೋಂದು ಚಿತ್ರದುರ್ಗದ ಐತಿಹಾಸಿಕ ಸಿನಿಮಾ ಐತಿಹಾಸಿಕ ಚಿತ್ರ ‘ಬಿಚ್ಚುಗತ್ತಿ’ ಛಾಪ್ಟರ್-೧ ಕುರಿತು ಹೇಳುವುದಾದರೆ ವೇಣುರವರು ಚಿತ್ರಕತೆ, ಸಂಭಾಷಣೆಗೆ ತಯಾರಿ ನಡೆಸಿದ್ದಾರೆ. ಗಂಡು ಮೆಟ್ಟಿದ ನಾಡು ಚಿತ್ರದುರ್ಗದ ೧೬ನೇ ಶತಮಾನದಲ್ಲಿ ೧೩ ಪಾಳೇಗಾರರು ಆಳಿದ್ದರು. ಇದರಲ್ಲಿ ರಾಜಬಿಚ್ಚುಗತ್ತಿ ಭರಮಣ್ಣ ನಾಯಕ ಕೂಡ ಒಬ್ಬರು. ಇವರು ೧೬೭೫ ರಿಂದ ೧೬೮೫ರ ಅವಧಿಯಲ್ಲಿ ದಳವಾಯಿ ಆಗಿದ್ದ ಪಂಚಮರ ಮುದ್ದಣ್ಣ ಇಡೀ ಸೇನೆಯನ್ನೆ ತನ್ನ ವಶದಲ್ಲಿರಿಸಿಕೊಂಡು ಹೆಸರಿಗೆ ಮಾತ್ರ ಬಲಹೀನ ಪಾಳೆಗಾರರನ್ನು ಪಟ್ಟಕ್ಕೆ ಕೂರಿಸಿ, ದೊರೆ, ಪ್ರಜೆಗಳನ್ನು ದರ್ಪ ದೌರ್ಜನ್ಯದಿಂದ ....
ಪ್ರಸಕ್ತ ಶಿಕ್ಷಣ ವ್ಯವಸ್ಥೆಯ ನೋಟ ‘ಕಾಳಿದಾಸ ಕನ್ನಡ ಮೇಷ್ಟ್ರು’ ಚಿತ್ರದಲ್ಲಿ ಪ್ರಸಕ್ತ ಶಿಕ್ಷಣ ವ್ಯವಸ್ಥೆ, ಮನೆ ಮೊದಲ ಪಾಠ ಶಾಲೆ, ನಂತರ ವಿದ್ಯೆಯನ್ನು ಶಿಕ್ಷಕರು ಹೇಗೆ ಹೇಳಿಕೊಡಬೇಕು. ಇವತ್ತಿನ ಜಾಗತಿಕರಣದಲ್ಲಿ ನಮ್ಮ ಭಾವನೆಯಿಂದ ಯಾರು ಬರುತ್ತಾ ಇಲ್ಲ. ನಮಗೆ ಅರಿವಿಲ್ಲದೆ ಶಿಕ್ಷಣದ ಮನಸ್ಥಿತಿಗೆ ಮಕ್ಕಳನ್ನು ಸಿದ್ದಪಡಿಸುತ್ತೇವೆ. ಸರ್ಕಾರಿ ಶಾಲೆಗಳು ಮುಚ್ಚುವಂತ ಪರಿಸ್ಥಿತಿ ಬಂದಿದೆ. ಅದರ ಹುನ್ನಾರ ಏನು. ಇದರಿಂದ ಯಾರಿಗೆ ಲಾಭ ಎಂಬ ಸೂಕ್ಷವಾದ ಅಂಶಗಳನ್ನು ಶೇಕಡ ೭೦ ಹಾಸ್ಯದೊಂದಿಗೆ ತೋರಿಸುವ ಪ್ರಯತ್ನ ಮಾಡಲಾಗುತ್ತಿದೆ. ಸರ್ಕಾರ ಜನರಿಗೆ ....
ರಂಗನ ಇವ ನಮ್ಮ ಹುಡುಗ ಎರಡು ಪದವಿಗಳನ್ನು ಪಡೆದುಕೊಂಡಿರುವ ವಿದ್ಯಾವಂತ. ಕಲ್ಮಶ ಇಲ್ಲದ ಹುಡುಗ. ಜೀವನದಲ್ಲಿ ಏನೋ ಮಾಡಬೇಕೆಂದು ಹೋಗುತ್ತಾನೆ. ಇದರ ಮಧ್ಯೆ ಪ್ರೀತಿಗೆ ಬೀಳುತ್ತಾನೆ. ಅದರಿಂದ ಹೇಗೆ ಸಂಕಟಗಳನ್ನು ಎದುರಿಸುತ್ತಾನೆ ಎಂಬುದನ್ನು ‘ರಂಗ’ ಅಡಿಬರಹದಲ್ಲಿ ಬಿಇ, ಎಂಟೆಕ್ ಇರುವ ಚಿತ್ರದಲ್ಲಿ ಹೇಳಲಾಗಿದೆ. ಪ್ರೀತಿಯ ಕತೆಯಲ್ಲಿ ಈಗಿನ ವಾಸ್ತವತೆ, ಯುವ ಜನಾಂಗದ ಮನಸ್ಥಿತಿ ಯಾವ ರೀತಿ ಇರುತ್ತದೆ. ಕೆಲವು ಸಲ ಸಕರಾತ್ಮಕ, ನಕರಾತ್ಮಕವಾಗಿ ಎರಡು ರೀತಿಯಲ್ಲಿ ಆಗಲಿದ್ದು, ಇವತ್ತಿನ ಪೀಳಿಗೆಗೆ ಹೊಂದಿಕೊಳ್ಳುವಂತ ಸನ್ನಿವೇಶಗಳು ಇರಲಿದೆ. ಹತ್ತು ವರ್ಷಗಳ ಕಾಲ ....
ಟಾಲಿವುಡ್ ತಂಡದ ಕನ್ನಡ ಸಿನಿಮಾ ಟಾಲಿವುಡ್ ತಂಡದ ‘ಇಬ್ಬರು ಬಿ.ಟೆಕ್ ಸ್ಟೂಡೆಂಟ್ಸ್ ಜರ್ನಿ’ ಎನ್ನುವ ಚಿತ್ರವನ್ನು ಸಿದ್ದಪಡಿಸಿದ್ದಾರೆ. ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳ ಕತೆಯಲ್ಲಿ ಮದುವೆ ಮುಂಚೆ, ನಂತರ ನಡೆಯುವ ಘಟನೆಗಳು, ಪ್ರೀತಿಸಿ ಮದುವೆಯಾದರೆ ದಂಪತಿಗಳ ಸರಸ, ವಿರಸ ಎಲ್ಲವನ್ನು ಮನರಂಜನೆ, ಸಂದೇಶದ ಮೂಲಕ ಹೇಳುವ ಪ್ರಯತ್ನ ಮಾಡಲಾಗಿದೆ. ಬೆಂಗಳೂರು, ಚಿಕ್ಕಮಗಳೂರು, ನಂದಿಬೆಟ್ಟ, ಮಲೇಶಿಯಾ ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಒಂಬತ್ತು ಚಿತ್ರಗಳನ್ನು ನಿರ್ದೇಶಿಸಿ ನಂದಿ ಪ್ರಶಸ್ತಿಗೆ ಭಾಜನರಾಗಿದ್ದ ....
ಸೃಜನ್ಲೋಕೇಶ್ ಹೊಸ ಚಿತ್ರ ಎಲ್ಲಿದ್ದೆ ಇಲ್ಲೀ ತನಕ ಲೋಕೇಶ್ ಅಭಿನಯದ ‘ಪರಸೆಂಗದ ಗೆಂಡೆತಿಮ್ಮ’ ಚಿತ್ರದಲ್ಲಿ ‘ಎಲ್ಲಿದ್ದ ಇಲ್ಲೀ ತನಕ, ಎಲ್ಲಿಂದ ಬಂದವ್ವ’ ಗೀತೆಯ ಎಸ್.ಬಿ.ಬಾಲಸುಬ್ರಮಣ್ಯಹಂ ಕಂಠದಲ್ಲಿ ಹಾಡು ಹಿಟ್ ಆಗಿತ್ತು. ಈಗ ಸೃಜನ್ಲೋಕೇಶ್ ಅಪ್ಪನ ನಟಿಸಿದ ಚಿತ್ರದ ಹಾಡಿನ ಸಾಲು ‘ಎಲ್ಲಿದ್ದ ಇಲ್ಲೀ ತನಕ’ ಟೈಟಲ್ನಲ್ಲಿ ನಾಯಕನಾಗಿ ನಟಿಸುತ್ತಿರುವ ಜೊತೆಗೆ ಲೋಕೇಶ್ ಪ್ರೊಡಕ್ಷನ್ನಲ್ಲಿ ಹಣ ಹೂಡುತ್ತಿರುವುದು ವಿಶೇಷ. ನಾಯಕಿಯಾಗಿ ಹರಿಪ್ರಿಯಾ ಮೊದಲಬಾರಿ ಸೃಜನ್ಗೆ ಜೋಡಿಯಾಗಿ ಅಭಿನಯಿಸುತ್ತಿದ್ದಾರೆ. ಮಜಾ ಟಾಕೀಸ್ ಶೋ ನಿರ್ದೇಶನದ ....
ರಾಜೀವ ಟ್ರೈಲರ್ ಬಿಡುಗಡೆ ‘ರಾಜೀವ’ ಚಿತ್ರದ ಅಡಿಬರಹದಲ್ಲಿ ಐಎಎಸ್, ಯುವರೈತ ಎಂದು ಹೇಳಿಕೊಂಡಿದೆ. ಶನಿವಾರ ಸಿನಿಮಾದ ಟ್ರೈಲರ್ನ್ನು ಅನಾವರಣಗೊಳಿಸಿದ ಮಾಜಿ ವಿಧಾನ ಸಭಾ ಪರಿಷತ್ ಸದಸ್ಯರಾದ ಡಿ.ವೀರಯ್ಯ ಮಾತನಾಡುತ್ತಾ ರೈತರ ಹೆಸರಿನಲ್ಲಿ ಅಧಿಕಾರಕ್ಕೆ ಬರುವ ಸರ್ಕಾರಗಳು ಇವರ ಸಮಸ್ಯೆಯನ್ನು ಇಂದಿಗೂ ಬಗೆ ಹರಿಸಿಲ್ಲ. ರಾಜೀವ ಸಿನಿಮಾದಲ್ಲಿ ರೈತರ ಕಷ್ಟಗಳನ್ನು ತೋರಿಸಿ, ಸರ್ಕಾರದ ಕಣ್ಣು ತೆರೆಸುವಂತಹ ಕೆಲಸ ಮಾಡಿದ್ದಾರೆ. ಸಿನಿಮಾವು ಯಶಸ್ಸುಗಳಿಸಲೆಂದು ಶುಭ ಹಾರೈಸಿದರು. ಗ್ಯಾಪ್ ನಂತರ ಬಂದಿದ್ದೇನೆ. ಐಎಎಸ್ ವ್ಯಾಸಾಂಗವನ್ನು ಬದಿಗಿಟ್ಟು, ಹಳ್ಳಿಗೆ ಬಂದು ....
ಪ್ರಸಕ್ತ ವಸ್ತುಸ್ಥಿತಿಯನ್ನು ತಿಳಿಸುವ ನಾತಿಚರಾಮಿ ಪ್ರಸಕ್ತ ಸಮಾಜದಲ್ಲಿ ಹೆಣ್ಣು ತನ್ನ ವೃತ್ತಿ, ವೈಯಕ್ತಿಕ ಅನುಭವಗಳನ್ನು ಹೇಗೆ ನಿಭಾಯಿಸುತ್ತಾಳೆ. ಧರ್ಮೇಚ, ಅರ್ಥೇಚ, ಕಾಮೇಚ, ಮೋಕ್ಷೇಚ ನಾತಿಚರಾಮಿ ಎನ್ನುವಂತೆ ಸಿನಿಮಾಕ್ಕೆ ‘ನಾತಿಚರಾಮಿ’ ಶೀರ್ಷಿಕೆಯನ್ನು ಬಳಸಲಾಗಿದೆ. ನಿರ್ದೇಶಕ ಮಂಸೋರೆ ಹೇಳುವಂತೆ ಟೆಕ್ಕಿ ಕೆಲಸದಲ್ಲಿ ಯಶಸ್ಸನ್ನು ಪಡೆದು, ಆಂತರಿಕ ಬದುಕಿನ ಜಂಜಾಟದಲ್ಲಿ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿಕೊಂಡಿರುತ್ತಾಳೆ. ಸಂಪ್ರದಾಯ ಆಚರಣೆ ಗೊತ್ತಿದ್ದು, ಗೊತ್ತಿಲ್ಲದೆ ಅದನ್ನು ಹೇಗೆ ನಿಭಾಯಿಸುವುದು ಅಂತ ಗೊಂದಲ್ಲಿದಲ್ಲ ಇರುತ್ತಾಳೆ. ....
ಡಾ.ರಾಜ್ಕುಮಾರ್ ಸಮಕಾಲೀನರಿಗೆ ಸೌಹಾರ್ದ ಪ್ರಶಸ್ತಿ ಡಾ.ರಾಜ್ಕುಮಾರ್ ಅವರೊಂದಿಗೆ ನಟಿಸಿರುವ ಮತ್ತು ಅವರ ಚಿತ್ರಗಳಿಗೆ ಕೆಲಸ ಮಾಡಿರುವ ಹಿರಿಯರನ್ನು ಗುರುತಿಸಿ ‘ಡಾ.ರಾಜ್ಕುಮಾರ್ ಸೌಹಾರ್ದ ಪ್ರಶಸ್ತಿ’ ನೀಡಿ ಗೌರವಿಸಲಾಯಿತು. ಕಳೆದ ಎರಡು ವರ್ಷಗಳಿಂದ ಪಾರ್ವತಮ್ಮ ರಾಜ್ಕುಮಾರ್ ಆರೋಗ್ಯ ಸರಿಯಿಲ್ಲದ್ದರಿಂದ ಅಪ್ಪಾಜಿ ಸೌಹಾರ್ದ ಪ್ರಶಸ್ತಿಯನ್ನು ನೀಡಿರಲಿಲ್ಲ. ಈಗ ಅಮ್ಮ, ಅಪ್ಪಾಜಿ ಒಟ್ಟಿಗೆ ಸೇರಿಕೊಂಡಿದ್ದರಿಂದ ಇದೇ ಸ್ಥಳದಲ್ಲಿ ಮೂರು ವರ್ಷಗಳ ಪ್ರಶಸ್ತಿ ಮತ್ತು ಅಮ್ಮನ ಹುಟ್ಟುಹಬ್ಬ ....
ಶುಕ್ರವಾರದಂದು ಆರೆಂಜ್ ಸವಿಯಬಹುದು ಅದ್ದೂರಿ ಚಿತ್ರ ‘ಆರೆಂಜ್’ ಶುಕ್ರವಾರದಂದು ಸುಮಾರು ೩೦೦ ಕೇಂದ್ರಗಳಲ್ಲಿ ಬಿಡುಗಡೆ ಆಗುತ್ತಿರುವ ಕಾರಣ ಮೊದಲ ಮತ್ತು ಕೊನೆಯ ಬಾರಿ ಸುದ್ದಿಗೋಷ್ಟಿಯನ್ನು ನಿರ್ದೇಶಕರು ಏರ್ಪಾಟು ಮಾಡಿದ್ದರು. ನಿರ್ದೇಶಕ ಪ್ರಶಾಂತ್ರಾಜ್ ಮಾತನಾಡಿ ಜೂಮ್ ಬಿಡುಗಡೆ ಮುಂಚೆ ಗಣೇಶ್ ಚಿತ್ರ ನೋಡಿ ಚೆನ್ನಾಗಿ ಮಾಡಿದ್ದೀರಾ. ಕತೆ ಕೇಳದೆ ನಿಮ್ಮದೆ ಸಂಸ್ಥೆಯಲ್ಲಿ ಮತ್ತೋಂದು ಸಿನಿಮಾ ಮಾಡಿ ಅಂತ ಹಸಿರು ನಿಶಾನೆ ನೀಡಿದರು. ಅದರಿಂದ ಎರಡನೆ ಕತೆ ಹೇಳಿದ್ದು ಆರೆಂಜ್ ಆಯಿತು. ಅವರು ಎಲ್ಲದರಲ್ಲೂ ತಲೆತೂರದೆ, ಬೇಕಿದ್ದ ವಿಷಯದಲ್ಲಿ ....
ಹೆಚ್ಎಸ್ಆರ್ ಹಬ್ಬದಲ್ಲಿ ಬಿಂದಾಸ್ ಕಾರ್ಯಕ್ರಮಗಳು ಹೆಚ್ಎಸ್ಆರ್ ಲೇಔಟ್ ಬೆಂಗಳೂರಿನ ಹೊರವಲಯದಲ್ಲಿ ಇರಲಿದ್ದು, ಬಹುತೇಕ ಕನ್ನಡೇತರರು ಇರುವ ಕಾರಣ ಇಲ್ಲಿನ ಭಾಷೆ, ಸಂಸ್ಕ್ರತಿ ತಿಳಿದಿರುವುದಿಲ್ಲ. ಅದರಿಂದಲೇ ಅಲ್ಲಿನ ಯುವ ತಂಡವೊಂದು ಸ್ಥಳೀಯ ಶಾಸಕರ ಪ್ರೋತ್ಸಾಹದೊಂದಿಗೆ ಮೂರು ದಿನಗಳ ಕಾಲ ‘ಹೆಚ್ಎಸ್ಆರ್ ಹಬ್ಬ’ ವನ್ನು ಅದ್ದೂರಿಯಾಗಿ ಆಚರಣೆ ಮಾಡುತ್ತಿದ್ದಾರೆ. ಡಿಸೆಂಬರ್ ಏಳರಂದು ಡೊಳ್ಳು ಕುಣಿತದೊಂದಿಗೆ ಚಾಲನೆ ಸಿಗಲಿದ್ದು, ಮೊದಲ ದಿವಸ ಪೆಟ್ ಶೋ, ಬಾಡಿ ಬಿಲ್ಡರ್ಸ್ಗಳ ಪ್ರದರ್ಶನ, ಫ್ಲೂಟ್ ಬಾಕ್ಸಿಂಗ್, ....
ಆರು ಹೆಸರಿನ ಚಿತ್ರದಲ್ಲಿ ವಿಶೇಷತೆಗಳು ವಿನೂತನ ಚಿತ್ರ ‘೬’ದಲ್ಲಿ ಹಲವು ವಿಶೇಷತೆಗಳು ಇರಲಿದೆ. ಶಿಶಿರಾ ಚಿತ್ರದ ಮೂಲಕ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದ ಮಂಜುಸ್ವರಾಜ್ಗೆ ಆರನೇ ಚಿತ್ರವಾಗಿದೆ. ಕತೆಗೆ ಸೂಕ್ತವೆಂದು ಇದೇ ಸಂಖ್ಯೆಯನ್ನು ಬಳಸಲಾಗಿದೆ. ಆರು ಹುಡುಗರ ಸುತ್ತ ಕತೆ ನಡೆಯಲಿದೆ. ಸೆಸ್ಪನ್ಸ್ , ಹಾರರ್ ಥ್ರಿಲ್ಲರ್ ಕತೆಯಾಗಿದ್ದರಿಂದ ಒಂದು ಸಣ್ಣ ಸುಳಿವು ನೀಡಿದಲ್ಲಿ ಸಿನಿಮಾದ ಸಾರಾಂಶ ತಿಳಿಯುತ್ತದೆ. ಅದರಿಂದ ಎಲ್ಲವನ್ನು ಚಿತ್ರಮಂದಿರದಲ್ಲೆ ನೋಡಬೇಕಂತೆ. ಆರು ಹುಡುಗರ ಪೈಕಿ ನಾಲ್ವರು ಆಯ್ಕೆಯಾಗಿದ್ದು, ಉಳಿದ ಎರಡು ಮತ್ತು ಒಬ್ಬಳೇ ....
ಮುಂದಿನ ಬದಲಾವಣೆ ಇದು ಸಿನಿಮಾದ ಹೆಸರು ‘ಮುಂದಿನ ಬದಲಾವಣೆ’ ಎಂದು ಸಿನಿಮಾದ ಜಾಹಿರಾತುಗಳು ಪತ್ರಿಕೆಯಲ್ಲಿ ಪ್ರಕಟವಾಗುವುದನ್ನು ನೋಡಿದ್ದೇವೆ. ಇದನ್ನೆ ಹೊಸ ತಂಡವೊಂದು ಶೀರ್ಷಿಕೆಯಾಗಿ ಬಳಸಿಕೊಂಡಿದ್ದಾರೆ. ಸಾಹಿತಿಯಾಗಿ ಗುರುತಿಸಿಕೊಂಡಿದ್ದ ಪ್ರವೀಣ್ಭೂಷಣ್.ಪಿ.ಎಸ್. ಕತೆ, ಐದು ಹಾಡಿಗೆ ಸಾಹಿತ್ಯ, ನಿರ್ದೇಶನ ಮಾಡುವ ಜೊತಗೆ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಕತೆಯಲ್ಲಿ ನಾಯಕನು ತನ್ನ ಸ್ನೇಹಿತರೊಂದಿಗೆ ಕಾಲೇಜ್ಗೆ ಬಂಕ್ ಹೊಡೆದು ಟಾಕೀಸ್ಗೆ ಹೋಗುತ್ತಾನೆ. ಅಲ್ಲಿ ಬ್ರೇಕ್ಅಪ್ ಆದ ಪ್ರೇಮಿ ಭೇಟಿಯಾಗುತ್ತದೆ. ಮುಂದೆ ....
ನಾಗರಭಾವಿಯಲ್ಲಿ ರೂಪ್ಸಂಗಮ್ ನೂತನ ಮಳಿಗೆ ಆರಂಭ ನವೀನ ವಿನ್ಯಾಸದ ಮಹಿಳೆಯರ ಮತ್ತು ಮಕ್ಕಳ ಸಿದ್ದ ಉಡುಪುಗಳ ಮಾರಾಟದಲ್ಲಿ ತನ್ನದೇ ಆದ ವಿಶೇಷತೆ ಹೊಂದಿರುವ ಬಟ್ಟೆ ಅಂಗಡಿ ರೂಪ್ ಸಂಗಮ್ ಬೆಂಗಳೂರು ನಗರದಲ್ಲಿ ತನ್ನ ಮೂರನೇ ಮಳಿಗೆಯನ್ನು ಆರಂಭಿಸಿದೆ. ಈಗಾಗಲೇ ಮಲ್ಲೇಶ್ವರಂನಲ್ಲೂ ತನ್ನ ಶಾಖೆಯನ್ನು ಹೊಂದಿರುವ ಈ ಸಿದ್ದ ಉಡುಪುಗಳ ಷೋ ರೂಂ ಈಗ ನಾಗರಭಾವಿಯಲ್ಲಿ ಮತ್ತೊಂದು ಶಾಖೆಗೆ ಚಾಲನೆ ನೀಡಿದೆ. ರೂಪ್ ಸಂಗಮ್ ಮಳಿಗೆಯ ಮಾಲೀಕರಾದ ಕೃಷ್ಣ ಆರ್. ಗೌಡ ಹಾಗೂ ಅವರ ಪುತ್ರರಾದ ರಾಜೇಶ್ ಕೆ.ಗೌಡ ರೂಪ್ ಸಂಗಮ್ ಹೊಸ ಮಳಿಗೆಯ ಉದ್ಘಾಟನೆಯನ್ನು ದೀಪ ಬೆಳಗುವುದರ ಮೂಲಕ ನೆರವೇರಿಸಿದರು. ರಾಕಿಂಗ್ಸ್ಟಾರ್ ಯಶ್ ಈ ನೂತನ ಮಳಿಗೆಯ ....
ಸಮ್ಮೋಹಕ ಪ್ರತಿಭೆ ನಿಖಿತಾರಮ್ಯಾಸತೀಶ್ ಬಣ್ಣದ ಲೋಕ ಎನ್ನುವುದು ಎಂತಹವರನ್ನು ಆಕರ್ಷಿಸುತ್ತದೆ. ಇದಕ್ಕೆ ಉದಾಹರಣೆ ೫.೮ ಅಡಿ ಎತ್ತರದ ನೀರೆ ‘ನಿಖಿತಾರಮ್ಯಾಸತೀಶ್’. ಹತ್ತಿರದ ಸಂಬಂದಿ ರೇಣುಕುಮಾರ್ ಚಿತ್ರ ನಿರ್ದೇಶಕ ಹಾಗೂ ಸ್ಟುಡಿಯೋ ಮಾಲೀಕರು. ಕೆಲವು ಸಿನಿಮಾದ ಕೆಲಸಕಾರ್ಯಗಳು ಇವರ ಸ್ಟುಡಿಯೋದಲ್ಲಿ ನಡೆಯುತ್ತಿರುವಾಗ ತಂತ್ರಜ್ಘರು, ಕಲಾವಿದರು ಬರುವುದು ಸಹಜ. ಶಾಲಾ ರಜಾ ದಿನಗಳಲ್ಲಿ ಇಲ್ಲಿಗೆ ಭೇಟಿ ನೀಡಿದಾಗ, ಬರುವವರನ್ನು ನೋಡುತ್ತಾ ತನಗೂ ಕಲಾವಿದೆ ಆಗಬೇಕೆಂಬ ಸಣ್ಣದೊಂದು ಆಸೆ ಅಂದೇ ಚಿಗುರಿದೆ. ಧೈರ್ಯ ಮಾಡಿ ಅಮ್ಮ ಲತಾಸತೀಶ್, ಅಪ್ಪ ಸತೀಶ್ಗೆ ಮನದ ಆಸೆಯನ್ನು ....
ಡಿಸೆಂಬರ್ ೭ಕ್ಕೆ ಮಟಾಶ್ ಬಿಡುಗಡೆ ಮಾಡ್ತಾ ಇರ್ತೇವೆ, ನೋಡ್ತಾ ಇರಿ ಅಂತ ಅಡಿಬರಹದಲ್ಲಿ ಹೇಳಿಕೊಂಡಿರುವ ‘ಮಟಾಶ್’ ಚಿತ್ರವು ನೋಟು ಅಮಾನ್ಯಕರಣ ಸಂದರ್ಭದಲ್ಲಿ ನಡೆದ ಕತೆಯಾಗಿದೆ ಜೊತೆಗೆ ಮೈಸೂರು, ಬಿಜಾಪುರ ಕಡೆಯಿಂದ ಯುವಕರ ತಂಡ, ಬೆಂಗಳೂರಿನಿಂದ ಗ್ಯಾಂಗ್ಸ್ಟರ್ಸ್ ತಂಡ ಇರುತ್ತದೆ. ಮೈಸೂರಿನ ಯುವಕರು ಸಕಲೇಶಪುರದ ರೆಸಾರ್ಟ್ಗೆ ಮಸ್ತಿ ಮಾಡಲು ಹೋಗುತ್ತಾರೆ. ಅಲ್ಲಿ ಬಿಜಾಪುರ ಯುವಕರು ಸೇರಿಕೊಂಡು ಪಾರ್ಟಿ ಮಾಡುವಾಗ ಬೆಂಗಳೂರಿನ ಇಬ್ಬರು ಹುಡುಗಿಯರು ನಿರ್ಧಿಷ್ಟ ಕಾರಣಕ್ಕೆ ಬರುತ್ತಾರೆ. ಎಲ್ಲವು ಚೆನ್ನಾಗಿರುವಾಗ ಒಂದು ಘಟನೆಯಿಂದ ಎಲ್ಲವು ಉಲ್ಟಾಪಲ್ಟಾ ....
ಸಿಬಿಐ ಅಧಿಕಾರಿಯಾಗಿ ಪ್ರಿಯಾಮಣಿ ಮದುವೆ ನಂತರ ನಟಿ ಪ್ರಿಯಾಮಣಿ ಎರಡನೆ ಸಿನಿಮಾ ‘ಡಾ.೫೬’ದಲ್ಲಿ ಸಿಬಿಐ ಅಧಿಕಾರಿಯಾಗಿ ಕಾಣಿಸುಕೊಳ್ಳುತ್ತಿದ್ದಾರೆ. ೩೬೦ ಡಿಗ್ರಿ ಎನ್ನುವಂತೆ ಮುಂದೆ ಸಂಭವಿಸುವ ಅಪರಾಧಗಳನ್ನು ತಡೆಗಟ್ಟಲು ಕ್ರಮ ತೆಗೆದುಕೊಳ್ಳುವ ತೂಕದ ಪಾತ್ರವಾಗಿದೆ. ಸೈನ್ಸ್ ಫಿಕ್ಷನ್ ಮರ್ಡರ್ ಮಿಸ್ಟರಿ ಕತೆಗೆ ಮೊದಲಬಾರಿ ನಿರ್ದೇಶನದ ಚುಕ್ಕಾಣಿ ಹಿಡಿಯಲಿರುವ ರಾಜಿಆನಂದ್ಲೀಲಾ ಹೇಳುವಂತೆ ೧೯೫೬ ರಿಂದ ೨೦೧೯ರ ವರೆಗೂ ಮನುಷ್ಯನಾದವನು ತನಗೆ ಅರಿವಿಲ್ಲದಂತೆ ಯಾವುದಾದರೂ ತಪ್ಪನ್ನು ಮಾಡುತ್ತಾನೆ. ಇದನ್ನು ಮಾಡಬೇಡಿ ಎಂದು ಅರಿವು ಮೂಡಿಸುವ ....