Klaantha.Reveews

Friday, January 19, 2024

99

ಕಾನನದಲ್ಲಿ ದೈವ ಅನುಗ್ರಹ

       ‘ಕ್ಲಾಂತ’ ಸಿನಿಮಾವು ಸೆಸ್ಪೆನ್ಸ್ ಥ್ರಿಲ್ಲರ್ ಅಂಶಗಳನ್ನು ಒಳಗೊಂಡಿದೆ. ನಿರ್ದೇಶಕ ವೈಭವಪ್ರಶಾಂತ ನೋಡುಗರಿಗೆ ಕುತೂಹಲ ಹುಟ್ಟುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.  ವೀಕೆಂಡ್‌ದಲ್ಲಿ ಮನೆಯವರಿಗೆ ತಿಳಿಸದೆ ಹುಡುಗ-ಹುಡುಗಿ ಅಪರಿಚಿತ ಸ್ಥಳವೊಂದಕ್ಕೆ ಹೋಗಿ, ಅಲ್ಲಿ ಸಮಸ್ಯೆಗಳಿಗೆ ಸಿಲುಕಿಕೊಳ್ಳುತ್ತಾರೆ. ಇದರಿಂದ ಹೇಗೆ ಪಾರಾಗುತ್ತಾರೆ? ಎಂಬುದು ಒನ್ ಲೈನ್ ಸ್ಟೋರಿಯಾಗಿದೆ. ಮನೆಗೆ ಸುಳ್ಳು ಹೇಳಿ ತಪ್ಪು ದಾರಿ ಹಿಡಿಯಬೇಡಿ ಅಂತ ಸಂದೇಶ ಇರಲಿದೆ. ಶೀರ್ಷಿಕೆಗೆ ಅರ್ಥ ದಣಿವು, ಆಯಾಸ ಅಂತ ಹೇಳಿಕೊಂಡಿದ್ದು ಇದು ಸಹ ಕಥೆಗೆ ಪೂರಕವಾಗಿದೆ.

      ತುಳು ಚಿತ್ರದಲ್ಲಿ ಕಾಣಿಸಿಕೊಂಡಿದ್ದ ವಿಘ್ನೇಶ್ ನಾಯಕನಾಗಿ ಭವಿಷ್ಯವಿದೆ. ಗ್ಯಾಪ್ ನಂತರ ಸಂಗೀತಭಟ್ ನಾಯಕಿಯಾಗಿ ಗಮನ ಸೆಳೆಯುತ್ತಾರೆ. ಇವರ ತಂದೆತಾಯಿಯಾಗಿ ಶೋಭರಾಜ್-ಸಂಗೀತ, ಉಳಿದಂತೆ ವೀಣಾ, ಕಾಮಿಡಿ ಕಿಲಾಡಿ ದೀಪಿಕಾ, ಪ್ರವೀಣ್‌ಜೈನ್, ಯುವ,ಸ್ವಪ್ನ, ತಿಮ್ಮಪ್ಪಕುಲಾಲ್ ಮುಂತಾದವರು ನಟಿಸಿದ್ದಾರೆ. ಎಸ್.ಪಿ.ಚಂದ್ರಕಾಂತ್ ಸಂಗೀತ, ಪಿ.ಆರ್.ಸೌಂದರರಾಜನ್ ಸಂಕಲನ, ಮೋಹನ್‌ಲೋಕನಾಥ್ ಛಾಯಾಗ್ರಹಣ ಸಿನಿಮಾಕ್ಕೆ ಮೆರುಗು ತಂದಿದೆ. ಅನುಗ್ರಹ ಪರ್ವ ಮೀಡಿಯಾ ಬ್ಯಾನರ್‌ದಲ್ಲಿ ಉದಯ್ ಅಮ್ಮಣ್ಣಾಯ.ಕೆ ನಿರ್ಮಾಣ ಮಾಡಿದ್ದಾರೆ. ಚಿತ್ರ ಒಮ್ಮೆ ನೋಡಲು ಅಡ್ಡಿಯಿಲ್ಲ. 

****

 

Copyright@2018 Chitralahari | All Rights Reserved. Photo Journalist K.S. Mokshendra,