Seethayana.Film Trailer Launch

Friday, May 20, 2022

217

ಅಕ್ಷಿತ್ಶಶಿಕುಮಾರ್ ಮೊದಲ ಚಿತ್ರಸೀತಾಯಣತೆರೆಗೆ ಸಿದ್ದ

ಸುಪ್ರೀಂಹೀರೋ ಶಶಿಕುಮಾರ್ ಪುತ್ರ ಅಕ್ಷಿತ್‌ಶಶಿಕುಮಾರ್ ಮೊದಲ ಬಾರಿ ಅಭಿನಯಿಸಿರುವ ಚಿತ್ರ ‘ಸೀತಾಯಣ’ ಕನ್ನಡ ಮತ್ತುತೆಲುಗು ಭಾಷೆಯಲ್ಲಿ ಸಿದ್ದಗೊಂಡಿದೆ.ಸಿನಿಮಾದಕುರಿತಂತೆ ವಿವರ ನೀಡಲುತಂಡವು ಮಾದ್ಯಮದ ಮುಂದೆ ಹಾಜರಾಗಿತ್ತು. ಅತಿಥಿಯಾಗಿ ಆಗಮಿಸಿದ್ದ ರಾಜವರ್ಧನ್‌ಟ್ರೇಲರ್ ಬಿಡುಗಡೆ ಮಾಡಿತಂಡಕ್ಕೆ ಶುಭ ಹಾರೈಸಿದರು.ನಂತರ ಮಾತನಾಡುತ್ತಾ ನನ್ನತಂದೆ ಹಾಗೂ ಶಶಿಕುಮಾರ್ ತುಂಬ ಆಪ್ತರು.ಚಿತ್ರದಲ್ಲಿ ಒಳ್ಳೆ ಅಂಶಗಳು ಇರಲಿದೆ. ಲವರ್ ಬಾಯ್‌ಆಗಿದ್ದರೂಆಕ್ಷನ್ ಸೀನ್‌ದಲ್ಲಿ ಮಿಂಚಿದ್ದಾರಾ.ಎಲ್ಲದಕ್ಕಿಂತ ಹೆಚ್ಚಾಗಿ ಕಲಾವಿದರ ಮಕ್ಕಳು ಮೇಲಕ್ಕೆ ಬರಬೇಕುಎಂದುಅಭಿಪ್ರಾಯ ವ್ಯಕ್ತಪಡಿಸಿದರು.

ನಾನು ನಟಿಸಿರುವ ಪ್ರಥಮಚಿತ್ರಕ್ಕೆಅಪ್ಪು ಸರ್ ಹಾಡಿರೋದು ನನ್ನ ಪುಣ್ಯಎನ್ನಬಹುದು.ಅಪ್ಪ ಒಳ್ಳೆ ಡ್ಯಾನ್ಸರ್‌ಆಗಿದ್ದರು.ಆದರೆಇದರಲ್ಲಿ ನಾನು ಡ್ಯಾನ್ಸ್ ಮಾಡಿಲ್ಲ. ಮುಂದಿನ ಚಿತ್ರದಲ್ಲಿಖಂಡಿತ ಮಾಡುವೆ. ಶಿವರಾಜ್‌ಕುಮಾರ್ ಪೋಸ್ಟರ್ ಬಿಡುಗಡೆ ಮಾಡಿದರೆ, 

ಉಪೇಂದ್ರಅವರು ಹಾಡನ್ನು ಅನಾವರಣಗೊಳಿಸಿದರು.ರಶ್ಮಿಕಾಮಂದಣ್ಣ ಮತ್ತೋಂದುಗೀತೆಯನ್ನುಲೋಕಾರ್ಪಣೆ ಮಾಡಿದ್ದಾರೆ.೨೦೧೯ರಲ್ಲಿ ಶುರುವಾಗಿ ೨೦೨೦ರಲ್ಲಿ ಮುಗಿಯಿತು.ಕರೋನಕಾರಣದಿಂದತಡವಾಗಿದೆ.ಪ್ರೀತಿಯಕಥೆಆದರೂ ವಿರಾಮದ ನಂತರಥ್ರಿಲ್ಲರ್ ಅಂಶಗಳು ಬರಲಿದ್ದು, ಸಾಕಷ್ಟು ತಿರುವುಗಳಿಂದ ಕೂಡಿದೆ.ಮದ್ಯಮ ವರ್ಗದ ಹುಡುಗನಾಗಿ ಸಮಸ್ಯೆಯಲ್ಲಿ ಸಿಲುಕಿದಾಗ ಅದರಿಂದ ತಪ್ಪಿಸಿಕೊಂಡು ಹೇಗೆ ಹೊರಗೆ ಬರುತ್ತಾನೆಎನ್ನುವ ಪಾತ್ರವಾಗಿದೆ. ಮಾತೃಭಾಷೆಕನ್ನಡವಾಗಿರುವುದರಿಂದ ಮೊದಲುಇಲ್ಲಿರಿಲೀಸ್ ಮಾಡಿ ಮುಂದಿನ ದಿನಗಳಲ್ಲಿ ತೆಲುಗುದಲ್ಲಿ ಬರಲಿದೆಎಂಬುದಾಗಿ ನಾಯಕ ಅಕ್ಷಿತ್‌ಶಶಿಕುಮಾರ್ ಹೇಳಿದರು.

ರಾಮಾಯಣದಲ್ಲೂ ನಾಯಕ, ನಾಯಕಿ ಖಳನಾಯಕ ಇದ್ದಂತೆಇದರಲ್ಲೂಅದೆಲ್ಲವೂಇದೆ.ಅದಕ್ಕಾಗಿ ಸೀತಾಯಣ ಹೆಸರನ್ನುಇಡಲಾಗಿದೆ.ಮಂಗಳೂರು, ಆಗುಂಬೆ, ವೈಜಾಕ್, ಹೈದರಬಾದ್ ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ.ಲಲಿತಾರಾಜಲಕ್ಷೀ ಬಂಡವಾಳ ಹೂಡಿದ್ದಾರೆಅಂತರಚಿಸಿ ನಿರ್ದೇಶನ ಮಾಡಿರುವ ಪ್ರಭಾಕರ್‌ಆರಿಪ್ಕಾ ಮಾಹಿತಿ ನೀಡಿದರು.

ಕವಿರಾಜ್ ಮತ್ತಗೌಸ್‌ಪೀರ್ ಸಾಹಿತ್ಯದ ಹಾಡುಗಳಿಗೆ ಪದ್ಮನಾಭ ಭಾರದ್ವಾಜ್ ಸಂಗೀತ ಒದಗಿಸಿದ್ದಾರೆ.ಛಾಯಾಗ್ರಹಣದುರ್ಗಪ್ರಸಾದ್‌ಕೊಲ್ಲಿ, ಸಂಕಲನ ಪ್ರವೀಣ್‌ಪುಡಿಅವರದಾಗಿದೆ. ಇದಕ್ಕೂ ಮುನ್ನಟ್ರೇಲರ್ ಮತ್ತು ಪುನೀತ್‌ರಾಜ್‌ಕುಮಾರ್ ಹಾಡಿರುವ‘ಯಾರು ನೀನು ಯಾರು, ಹರಿವ ನದಿಗೆ ಎದುರು ನಾನು ಈಜಿರುವೆ’ ವಿಡಿಯೋಗೀತೆಯನ್ನುತೋರಿಸಲಾಯಿತು.ಆಮದು ನಾಯಕಿಅನಹಿತಾಭೂಷಣ್‌ಗೈರುಹಾಜರಿಯಲ್ಲಿಕಾರ್ಯಕ್ರಮ ನಡೆಯಿತು.

 

Copyright@2018 Chitralahari | All Rights Reserved. Photo Journalist K.S. Mokshendra,