Karataka Damanaka.News

Monday, January 29, 2024

43

 ಹೊರಬಂತು ಕುತಂತ್ರಿ ನರಿಗಳ ಗೀತೆ

      ರಾಕ್‌ಲೈನ್‌ವೆಂಕಟೇಶ್ ನಿರ್ಮಾಣ, ಶಿವರಾಜ್‌ಕುಮಾರ್, ಪ್ರಭುದೇವ ಅಭಿನಯದ ‘ಕರಟಕ ದಮನಕ’ ಚಿತ್ರದ ಮೊದಲ ಹಾಡು ವಿಭಿನ್ನ ಆಡಿಯೋ ಮೂಲಕ ಅಂಬರೀಷ್ ಅವರಿಂದ ಬಿಡುಗಡೆಗೊಳಿಸಿದ್ದು ವಿಶೇಷವಾಗಿತ್ತು. ಯೋಗರಾಜಭಟ್ ಸಾಹಿತ್ಯದಲ್ಲಿ, ಹರಿಕೃಷ್ಣ ಸಂಗೀತ, ಶಂಕರ್‌ಮಹದೇವನ್ ಹಾಡಿದ್ದಾರೆ. 

      ನಿರ್ದೇಶಕರು ಹೇಳುವಂತೆ ದೀಪಾವಳಿ ಸಂದರ್ಭದಲ್ಲಿ  ಪಟಾಕಿ ಸದ್ದುಗಳ ನಡುವೆ ಸಿದ್ದಪಡಿಸಲಾಗಿತ್ತು. ಸಿನಿಮಾದ ಬಗ್ಗೆ ಎರಡು ಹಿಂಟ್ ಕೊಡಬಹುದು. ಒಂದು ಊರು ಮತ್ತು ನೀರು. ಇಡೀ ಚಿತ್ರವು ಉತ್ತರ ಕರ್ನಾಟಕ ಬ್ಯಾಕ್ ಡ್ರಾಪ್‌ದಲ್ಲಿ ಸಾಗುತ್ತದೆ. ಬಹಳ ಸಮಯದ ಕಾಲ ನೆನಪಿನಲ್ಲಿರುವ ಚಿತ್ರ ಇದಾಗಲಿದೆ ಎಂಬ ಭರವಸೆ ಇದೆ ಎನ್ನುತ್ತಾರೆ. 

       ಭಟ್ಟರೊಂದಿಗೆ ೧೦ ವರ್ಷದಿಂದ ಸಿನಿಮಾ ಮಾಡುವ ಯೋಜನೆ ಇತ್ತು. ಅದಕ್ಕೆ ಈಗ ಕಾಲ ಕೂಡಿಬಂತು. ಪ್ರಭುದೇವ ಜತೆ ಮೊದಲ ಸಿನಿಮಾ ಅನಿಸಲಿಲ್ಲ. ಈಗಾಗಲೇ ಅವರೊಂದಿಗೆ ಸಾಕಷ್ಟು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದೇನೆ ಅನಿಸುತ್ತದೆ. ಒಂದೊಳ್ಳೆ ವಿಷಯ ಇರುವಂತ ಕಥೆ ಇದರಲ್ಲಿದೆ ಎಂದು ಶಿವರಾಜ್‌ಕುಮಾರ್ ಹೇಳಿದರು.

      ತಾರಗಣದಲ್ಲಿ ರವಿಶಂಕರ್, ತನಿಕೆಲ್ಲಭರಣಿ, ರಂಗಾಯಣರಘು,  ಪ್ರಿಯಾಆನಂದ್, ನಿಶ್ವಿಕಾನಾಯ್ಡು ಹಾಗೂ ಒಂದು ಮಹತ್ತರ ಪಾತ್ರಕ್ಕೆ ನಿರ್ದೇಶಕರು ಬಣ್ಣ ಹಚ್ಚಿರುವುದು ವಿಶೇಷ. ಯೋಗರಾಜಭಟ್-ರವಿ ರಚನೆ,ಚಿತ್ರಕಥೆ, ವಿ.ಹರಿಕೃಷ್ಣ ಸಂಗೀತ, ಸಂತೋಷ್‌ರೈಪಾತಾಜೆ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನವಿದೆ. ಬೆಂಗಳೂರು, ಕೋಲಾರ, ಗೌರಿಬಿದನೂರು, ಉತ್ತರಕರ್ನಾಟಕ ತಾಣಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಶಿವರಾತ್ರಿ ಹಬ್ಬದ ಸಮಯದಲ್ಲಿ ತೆರೆಕಾಣುವ ಸಾಧ್ಯತೆ ಇದೆ.

 

Copyright@2018 Chitralahari | All Rights Reserved. Photo Journalist K.S. Mokshendra,