Matsyagandha.News

Monday, February 12, 2024

43

ತೆರೆಗೆ ಸಿದ್ದ ಮತ್ಸ್ಯಗಂಧ

       ‘ಮತ್ಸ್ಯಗಂಧ’ ಸಿನಿಮಾದ ಟ್ರೇಲರ್‌ನ್ನು ಸಚಿವ ಮಾಂಕಾಳ.ಎಸ್.ವೈದ್ಯ ಬಿಡುಗಡೆ ಮಾಡಿದ್ದು, ದುನಿಯಾ ವಿಜಯ್, ಸೂರಿ, ಯೋಗರಾಜಭಟ್, ತರುಣುಸುಧೀರ್, ಉದಯ್‌ಮೆಹ್ತಾ, ಶಶಾಂಕ್ ಮುಂತಾದವರು ನೋಡಿ ಶುಭ ಹಾರೈಸಿದಿರುವುದು ತಂಡಕ್ಕೆ ಸಂತಸ ತಂದಿದೆ.

     ಸಹ್ಯಾದ್ರಿ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ಬಿ.ಎಸ್.ವಿಶ್ವನಾಥ್ ನಿರ್ಮಾಣ ಮಾಡಿದ್ದಾರೆ. ಸಮುದ್ರ ತೀರದ ಮೀನುಗಾರರ ಜೀವನದಲ್ಲಿ ನಡೆಯುವ ವಿಭಿನ್ನ ಕಥೆಯನ್ನು ಒಳಗೊಂಡಿದೆ. ನಿರ್ದೇಶಕ ದೇವರಾಜಪೂಜಾರಿ ಸಾಹಿತ್ಯ, ಅಂಜಲಿಪಾಂಡೆ ಹೆಜ್ಜೆ ಹಾಕಿದ್ದು, ಇಂದುನಾಗರಾಜ್-ಪ್ರಶಾಂತ್‌ಸಿದ್ದಿ ಧ್ವನಿಯಾಗಿರುವ ಗೀತೆ ಸದ್ದು ಮಾಡಿದೆ. ನಟ ಪ್ರಶಾಂತ್‌ಸಿದ್ದ ಸಂಗೀತ ಸಂಯೋಜಕರಾಗಿ ಬಡ್ತಿ ಹೊಂದಿದ್ದಾರೆ. ಪೋಲೀಸ್ ಅಧಿಕಾರಿಯಾಗಿ ಪೃಥ್ವಿಅಂಬಾರ್ ನಾಯಕ. ಉಳಿದಂತೆ ಭಜರಂಗಿಲೋಕಿ, ನಾಗರಾಜ್‌ಬೈಂದೂರ್, ಮೈಮ್‌ರಾಮದಾಸ್ ಮುಂತಾದವರು ಅಭಿನಯಿಸಿದ್ದಾರೆ.  ಕುಂದಾಪುರ, ಬೈಂದೂರು ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. ಜಾಕ್‌ಮಂಜು ವಿತರಣೆಯಲ್ಲಿ ಫೆಬ್ರವರಿ ೨೩ರಂದು ರಾಜ್ಯಾದ್ಯಂತ ಚಿತ್ರಮಂದಿರಕ್ಕೆ ಲಗ್ಗೆ ಇಡಲಿದೆ.

 

Copyright@2018 Chitralahari | All Rights Reserved. Photo Journalist K.S. Mokshendra,