Bhaava Theera Yaana.News

Wednesday, February 14, 2024

47

ಹೊಸ ಪ್ರತಿಭೆಗಳ ಭಾವತೀರ ಯಾನ

      ‘ಶಾಖಹಾರಿ’ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿರುವ ಮಯೂರ್ ಅಂಬೆಕಲ್ಲು ಮತ್ತು ನಾಯಕನಾಗಿ ನಟಿಸಿರುವ ತೇಜಸ್ ಕಿರಣ್ ಜಂಟಿಯಾಗಿ ನಿರ್ದೇಶನ ಮಾಡಿರುವ ‘ಭಾವತೀರ ಯಾನ’ ಸಿನಿಮಾದ ಶೀರ್ಷಿಕೆ ಅನಾವರಣ ಕಾರ್ಯಕ್ರಮ ನಡೆಯಿತು. ಶೈಲೇಶ್‌ಅಂಬೆಕಲ್ಲು, ಲಕ್ಷಣ.ಬಿ.ಕೆ ನಿರ್ಮಾಣ ಮಾಡಿರುವುದು ಹೊಸ ಅನುಭವ.

       ಇಂದಿನ ಯುವಕ, ಯುವತಿಯರ ಭಾವನೆ, ಪ್ರೀತಿಯ ಹಾಡು ಪಾಡು, ನೋವು ನಲಿವುಗಳನ್ನು ತೆರೆದಿರುವ ಒಬ್ಬ ಹುಡುಗನ ಕಥೆ  ಇರಲಿದೆ. ಹಿರಿಯ ನಟ ರಮೇಶ್‌ಭಟ್ ಮಾತನಾಡಿ ನನ್ನ ೫೦ ವರ್ಷಗಳ ಸಿನಿಮಾ ಪಯಣದಲ್ಲಿ ಸಿಹಿ, ಬೊಕ್ಕೆ ತಂದು ಪಾತ್ರವನ್ನು ಕೊಟ್ಟವರು ತುಂಬಾ ವಿರಳ. ಈ ಹುಡುಗರು ನನಗೆ ಅಷ್ಟು ಗೌರವ ಕೊಟ್ಟರು. ಮನುಷ್ಯನಿಗೆ ಪ್ರಬುದ್ಧತೆ ಬಂದ ಮೇಲೆ ತಾನು ಮಾಡಿದ ಸರಿ,ತಪ್ಪುಗಳನ್ನು ಅವಲೋಕಿಸುವ ಸಮಯ ಬಂದಿರುತ್ತದೆ. ಮನದ ತೊಳಲಾಟಗಳನ್ನು ವ್ಯಕ್ತಪಡಿಸುವ ರೋಲ್‌ದಲ್ಲಿ ಕಾಣಿಸಿಕೊಂಡಿದ್ದು ಪ್ರತಿಯೊಬ್ಬರಿಗೂ ಕನೆಕ್ಟ್ ಆಗುತ್ತದೆ ಎಂದರು.

       ಆರೋಹಿ ನೈನಾ ನಾಯಕಿ. ಮತ್ತೋಂದು ಮುಖ್ಯ ಪಾತ್ರದಲ್ಲಿ ವಿದ್ಯಾಮೂರ್ತಿ ನಟಿಸಿದ್ದಾರೆ. ತಂಡಕ್ಕೆ ಶುಭ ಹಾರೈಸಲು ಬಾ.ಮ.ಹರೀಶ್, ಕರಿಸುಬ್ಬು, ಶಿಲ್ಪಾಶ್ರೀನಿವಾಸ್, ಲಯನ್‌ವೆಂಕಟೇಶ್, ಹಿರಿಯ ಪತ್ರಕರ್ತ ಎ.ಆರ್.ಮಣಿಕಾಂತ್ ಹಾಜರಿದ್ದರು.

 

 

Copyright@2018 Chitralahari | All Rights Reserved. Photo Journalist K.S. Mokshendra,