Purushothamana Prasanga.

Tuesday, February 20, 2024

40

 ಪುರುಷೋತ್ತಮನಿಗೆ  ಶರಣ್ ಸಾಥ್

       ತುಳು ಚಿತ್ರರಂಗದ ಖ್ಯಾತ ಹಾಸ್ಯ ನಟ ದೇವಿದಾಸ್ ಕಾಪಿಕಾಡ್ ನಿರ್ದೇಶನ ಮಾಡಿರುವ ‘ಪುರುಷೋತ್ತಮನ ಪ್ರಸಂಗ’ ಸಿನಿಮಾವು ಕಾಮಿಡಿ, ನೈಜ ಘಟನೆ ಆಧಾರಿತ ಜತೆಗೆ ಕೌಟುಂಬಿಕ ಕಥೆಯನ್ನು ಹೊಂದಿದೆ. ರಾಷ್ಟ್ರಕೂಟ ಪಿಕ್ಚರ‍್ಸ್ ಲಾಂಛನದಲ್ಲಿ ವಿ.ರವಿಕುಮಾರ್ ಮಗನ ಸಲುವಾಗಿ ನಿರ್ಮಾಣ ಮಾಡಿದ್ದಾರೆ. ವಿದೇಶದಲ್ಲಿ ತರಭೇತಿ ಪಡೆದುಕೊಂಡಿರುವ ಅಜಯ್ ಶೀರ್ಷಿಕೆ ಹೆಸರಿನಲ್ಲಿ ನಾಯಕ. ಈ ಹಿಂದೆ ಕಿಸ್, ಮೆಹಬೂಬ, ನಾಟ್‌ಔಟ್ ಸಿನಿಮಾಗಳಲ್ಲಿ  ಅಭಿನಯಿಸಿದ್ದು, ಹೀರೋ ಆಗಿ ಮೊದಲ ಅನುಭವವಂತೆ. ರಿಷಿಕಾನಾಯಕ್ ನಾಯಕಿ. ಇವರೊಂದಿಗೆ ನವೀನ್.ಡಿ.ಪಡೀಲ್, ಅರವಿಂದ್  ಬೋಳಾರ್, ಭೋಜರಾಜ್ ವಾಮಂಜೂರು ಮುಂತಾದವರು ನಟಿಸಿದ್ದಾರೆ. ಪ್ರಚಾರದ ಸಲುವಾಗಿ ನಟ ಶರಣ್ ಟ್ರೇಲರ್ ಬಿಡುಗಡೆ ಮಾಡಿ ತಂಡಕ್ಕೆ ಶುಭ ಹಾರೈಸಿದರು.

ಪ್ರೊ.ದೊಡ್ಡರಂಗೇಗೌಡ-ಡಾ.ವಿ.ನಾಗೇಂದ್ರಪ್ರಸಾದ್-ಜಯಂತ್‌ಕಾಯ್ಕಣಿ ಸಾಹಿತ್ಯದ ನಾಲ್ಕು ಹಾಡುಗಳಿಗೆ ನಕುಲ್‌ಅಭಯಂತರ್ ಸಂಗೀತ ಸಂಯೋಜಿಸಿದ್ದಾರೆ. ಮಂಗಳೂರು, ದುಬೈನಲ್ಲಿ ಚಿತ್ರೀಕರಣ ನಡೆಸಲಾಗಿದೆ. ಅಂದುಕೊಂಡಂತೆ ಆದರೆ ಮುಂದಿನ ತಿಂಗಳು ಸಿನಿಮಾವು ತೆರೆಕಾಣುವ ಸಾಧ್ಯತೆ ಇದೆ.

 

Copyright@2018 Chitralahari | All Rights Reserved. Photo Journalist K.S. Mokshendra,