Kamandala.Film News

Tuesday, February 20, 2024

79

ಆಕರ್ಷಕ ಶೀರ್ಷಿಕೆ ಕಮಂಡಲ

      ಉತ್ತರ ಕರ್ನಾಟಕದ ಶಿವು ಜಮಖಂಡಿ  ಈ ಹಿಂದೆ ‘ನನ್ನ ನಿನ್ನ ಪ್ರೇಮಕಥೆ’ ಮತ್ತು ‘ಗುಲಾಲ್ ಡಾಟ್ ಕಾಮ್’ ಚಿತ್ರಗಳನ್ನು ನಿರ್ದೇಶಿಸಿದ್ದರು. ಗ್ಯಾಪ್ ನಂತರ ಈಗ ‘ಕಮಂಡಲ’ ಸಿನಿಮಾಕ್ಕೆ ಕಥೆ ಬರೆದು ಆಕ್ಷನ್ ಕಟ್ ಹೇಳುತ್ತಿದ್ದಾರೆ. ಮೊನ್ನೆಯಷ್ಟೇ ಪೋಸ್ಟರ್ ಲಾಂಚ್ ಕಾರ್ಯಕ್ರಮ ನಡೆಯಿತು.

      ಸಿನಿಮಾವು ದೈವಿಕ ಶಕ್ತಿಯನ್ನು ಹೇಳಲಿದೆ. ಹಾಗಂತ ಇದು ಪೌರಾಣಿಕ ಚಿತ್ರವಲ್ಲ. ಸಿನಿಮಾವು ಚೆನ್ನಾಗಿ ಮೂಡಿಬರಲೆಂದು ೪೮ ದಿನಗಳ ಕಾಲ ವೃತ ಮಾಡಿದ್ದಾರಂತೆ. ಒನ್ ಲೈನ್ ಹುಟ್ಟಿಕೊಂಡಿದ್ದೇ ದೇವಸ್ಥಾನದಲ್ಲಿ. ಕಮಂಡಲ ಎನ್ನುವುದು ಋಷಿ, ಮುನಿಗಳ ಕೈಲಿರುತ್ತದೆ. ಅದರಲ್ಲಿಯ ತೀರ್ಥ ತುಂಬಾ ಶ್ರೇಷ್ಟವಾದುದು. ಕಾಲ್ಪನಿಕ ಸನ್ನಿವೇಶಗಳನ್ನು ಕಮರ್ಷಿಯಲ್ ಅಂಶಗಳೊಂದಿಗೆ ಸೃಷ್ಟಿಸಲಾಗುತ್ತಿದೆ.

ಹರ್ಷಿತ್‌ಕುಮಾರ್ ನಾಯಕನಾಗಿ ನಟಿಸುವ ಜತೆಗೆ ಬೃಂದಾವನ ಕ್ರಿಯೇಶನ್ಸ್ ಬ್ಯಾನರ್‌ದಲ್ಲಿ ಬಂಡವಾಳ ಹೂಡುತ್ತಿದ್ದಾರೆ. ತಾರಗಣದಲ್ಲಿ ಅಮೃತ, ನಾಗೇಂದ್ರಅರಸ್, ಕರಣ್, ಪ್ರಶಾಂತ್, ಚಂದನ ರಾಘವೇಂದ್ರ ಮುಂತಾದವರು ನಟಿಸುತ್ತಿದ್ದಾರೆ. ಮಾರ್ಚ್ ೨೦ರಿಂದ ಚಿಕ್ಕಮಗಳೂರು ಸೇರಿದಂತೆ ಹಲವು ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲು ತಂಡವು ಯೋಜನೆ ರೂಪಿಸಿಕೊಂಡಿದೆ.

 

Copyright@2018 Chitralahari | All Rights Reserved. Photo Journalist K.S. Mokshendra,