ಸೇಡು, ಪ್ರತೀಕಾರದಲ್ಲಿ ಮಿಂದೆದ್ದ ಮಾದೇಶ
ವಿಮರ್ಶೆ
ಚಿತ್ರ: ಮಾದೇವ
ನಿರ್ದೇಶನ: ನವೀನ್ ರೆಡ್ಡಿProd-R.Keshava(Devasandra)
ತಾರಾಗಣ; ವಿನೋದ್ ಪ್ರಭಾಕರ್, ಸೋನಲ್ ತರುಣ್, ಶೃತಿ, ಅಚ್ಯುತ್ ಕುಮಾರ್, ಶ್ರೀನಗರ ಕಿಟ್ಟಿ, ಮಾಲಾಶ್ರೀ, ಕಾಕ್ರೋಚ್ ಸುಧಿ, ಮೈಕ್ರೋ ನಾಗರಾಜ್, ಬಾಲರಾಜವಾಡಿ ಮತ್ತಿತರರು
ರೇಟಿಂಗ್: *** 3 /5
ವಿಭಿನ್ನ ಪಾತ್ರದಲ್ಲಿ ನಟ ವಿನೋದ್ ಪ್ರಭಾಕರ್ ಕಾಣಿಸಿಕೊಂಡಿರುವ “ಮಾದೇವ”. ಚಿತ್ರ ಬಿಡುಗಡೆಯಾಗಿದೆ. ಸೇಡು, ಪ್ರತೀಕಾರದಲ್ಲಿ ಮಾದೇಶ ಮಿಂದೆದ್ದಿದ್ದಾರೆ
ನಿರ್ದೇಶಕ ನವೀನ್ ರೆಡ್ಡಿ ವಿಭಿನ್ನ ಪ್ರಯತ್ನದ ಚಿತ್ರವನ್ನು ಜನರ ಪ್ರಯತ್ನದಲ್ಲಿ ಯಶಸ್ಸು ಕಂಡಿದ್ದಾರೆ.ಇನ್ನು ಜನರು ಇಷ್ಟಪಟ್ಟರೆ ಕೈಹಿಡಿದರೆ ಚಿತ್ರತಂಡದ ಖುಷಿ ಮತ್ತಷ್ಟು ಹಿಮ್ಮಡಿಯಾಗಲಿದೆ.
ಮಾದೇವ (ವಿನೋದ್ ಪ್ರಭಾಕರ್) ನಿರ್ಜೀವಿ. ಯಾರನ್ನು ಕಂಡರೂ ಕಿಂಚಿತ್ತು ಕನಿಕರ ಮರುಕ ಇಲ್ಲ, ಆತನಿಗೆ ಗೊತ್ತಿರುವುದು ಒಂದೇ, ಜೈಲಿನಲ್ಲಿ ಮರಣದಂಡನೆಗೆ ಗುರಿಯಾದವರಿಗೆ ನೇಣು ಬಿಗಿಯುವುದು, ಹೆಣದ ಮುಂದೆ ಬಿರಿಯಾನಿ ತಿಂದು ವಿಕೃತ ನೋಟ ಬೀರುವುದು. ಇಂತವನಿಗೆ ಇಬ್ಬರೇ ಸ್ನೇಹ.
ತನ್ನದಲ್ಲದ ತಪ್ಪಿಗೆ ಜೈಲು ಪಾಲಾಗಿರುವ ಅಮ್ಮನ್ನು ಬಿಡಿಸಿಕೊಂಡು ಬರಲು ಮತ್ತು ಆಕೆಯನ್ನು ನೋಡುವುದು ಪಾರ್ವತಿ ( ಸೋನಲ್ ತರುಣ್) ನಿತ್ಯದ ಕೆಲಸ, ಆದರೆ ಅದಕ್ಕೆ ಜೈಲು ಅಧಿಕಾರಿಗಳಿಂದ ಸಿಗದ ಅವಕಾಶ, ಜೈಲನ್ನೇ ಮನೆಯನ್ನಾಗಿ ಮಾಡಿಕೊಂಡ ಮಾದೇವನ ಸಂಪರ್ಕ ಪಡೆದರೆ ಅಮ್ಮನ ಭೇಟಿ ಸುಲಭವಾಗಬಹುದೆಂದು ಭಾವಿಸುತ್ತಾಳೆ, ಆದರೆ ಆಗುವುದೇ ಬೇರೆ, ಏನೇ ಮಾಡಿದರೂ ಜಗ್ಗದವ. ಮತ್ತೊಂದೆಡೆ ಮರಣದಂಡನೆಗೆ ಗುರಿಯಾದ ಮಗನನ್ನು ಬಿಡಿಸಿಕೊಳ್ಳಲು (ಶೃತಿ) ಇನ್ನಿಲ್ಲದ ಪ್ರಯತ್ನ ಮಾಡ್ತಾರೆ. ಮಾದೇವನ ಬಳಿ ಸಹಾಯಕ್ಕೂ ಬರ್ತಾರೆ. ಆದರೆ ಮುಂದಾಗುವುದೇ ರಣ ರೋಚಕ. ಊಹಿಸಲೂ ಆಗದ ಘಟನೆ. ಅದೇನು ಎನ್ನುವುದನ್ನು ಚಿತ್ರದಲ್ಲಿ ನೋಡಿದರೆ ಚೆನ್ನ.
ಮಾದೇವ ನಿರ್ಭಾವುಕ ಯಾಕಾದ ಅದರ ಹಿಂದಿನ ಕಥೆ ಮನಕಲಕುವಂತಹುದು, ಇಂತಹನ ಬಾಳಲ್ಲಿ ಬೆಳಕಾಗಿ ಬಂದ ಪಾರ್ವತಿ ಕಥೆ ಏನಾಯಿತು, ಹಿರಿಯ ಶೃತಿ ಪಾತ್ರವೇನು, ಶ್ರೀನಗರ ಕಿಟ್ಟಿ, ಮಾಲಾಶ್ರೀ ಯಾಕಾಗಿ ಬರುತ್ತಾರೆ ಎನ್ನುವುದನ್ನು ಪ್ರೇಕ್ಷಕರನ್ನು ಸೀಟಿನ ತುದಿಯಲ್ಲಿ ಕುಳಿತು ನೋಡುವಂತೆ ಮಾಡುವ ಪ್ರಯತ್ನದಲ್ಲಿ ನಿರ್ದೇಶಕ ನವೀನ್ ರೆಡ್ಡಿ ಸಫಲರಾಗಿದ್ದಾರೆ. ಭರ ಪೂರ ಆಕ್ಷನ್ ಜೊತೆಗೆ ಸೆಂಟಿಮೆಂಟ್,ದೃಶ್ಯಗಳು ಗಮನ ಸೆಳೆದಿವೆ.
ನಾಯಕನಾಗಿ ವಿನೋದ್ ಪ್ರಭಾಕರ್, ವಿಭಿನ್ನ ಪಾತ್ರದಲ್ಲಿ ಗಮನ ಸೆಳೆದಿದ್ಧಾರೆ, ಮೊದಲರ್ದ ಮತ್ತು ದ್ವೀತೀಯಾರ್ಧದಲಿ ಪೈಪೋಟಿಗೆ ಬಿದ್ದವರಂಂತೆ ನಟಿಸಿದ್ದಾರೆ, ಸೋನಲ್ ತರುಣ್ ಕೂಡ ತಾವೇನು ಕಡಿಮೆ ಇಲ್ಲ ಎನ್ನುವುದನ್ನು ನಿರೂಪಿಸಿದ್ದಾರೆ.