ಜೂನ್ ೨೬ರಿಂದ ಕರುನಾಡಿನ ಮನೆ-ಮನೆಗೆ ಹರಿದು ಬರಲಿದ್ದಾಳೆ “ ಕಾವೇರಿ”
೨೩ ವರ್ಷಗಳಿಂದ ಕನ್ನಡಿಗರ ಮನೆಮಾತಾಗಿರುವ ಉದಯ ವಾಹಿನಿ ವೀಕ್ಷಕರಿಗೆ ಮನರಂಜನೆಯನ್ನು ನೀಡುತ್ತಾ ಬಂದಿದೆ. ಹಾಗೆ ಈಗ ಮತ್ತೊಂದು ಹೊಸ ಧಾರಾವಾಹಿಯನ್ನು ಕನ್ನಡಿಗರ ಮಡಿಲಿಗೆ ಹಾಕಲು ಸಿದ್ಧವಾಗಿದೆ. ಇದೇ ಜೂನ್ ೨೬ ರಿಂದ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ ೮ಕ್ಕೆ ತ್ಯಾಗಮಯಿ, ಸ್ನೇಹಮಯಿ ಹುಡುಗಿಯ ಕಥೆ “ಕಾವೇರಿ” ಪ್ರಸಾರವಾಗಲಿದೆ.
“ಕಾವೇರಿ” ಬೆಂಕಿಯಲ್ಲಿ ಅರಳಿದ ಹೂ, ತಾನು ನೊಂದರೂ ಮನೆಯವರಿಗೆ ನೆರಳನ್ನು ನೀಡುವಾಕೆ. ಇನ್ನೂ ನಾಯಕ ಸಂತೋಷ, ಜನ್ಮತ: ಆಗರ್ಭ ಶ್ರೀಮಂತನಾದರೂ ತನ್ನ ತಂದೆಯ ದುರ್ಬುದ್ಧಿ, ಲೋಭತನದಿಂದ ಕುಪಿತನಾಗಿ ಮನೆಯಿಂದ ಹೊರಬಂದಿರುತ್ತಾನೆ. ಕಾವೇರಿಯ ಮಾನವೀಯ ಮೌಲ್ಯಗಳನ್ನು ಕಂಡು ಅವಳೆಡೆಗೆ ಆಕರ್ಷಿತನಾಗಿರುತ್ತಾನೆ. ಆದರೆ ಅವಳಿಗೆ ತನ್ನ ಮನಸ್ಸಿನ ಪಿಸುಮಾತನ್ನು ಹೇಳಬೇಕು ಎಂದು ಅವಳ ಮನೆಗೆ ಬಂದಾಗ ಅಲ್ಲಿ ಅವಳ ನಿಶ್ಚಿತಾರ್ಥ ನಡೆಯಿತ್ತಿರುತ್ತದೆ. ಆದರೆ ವಿಧಿಯಾಟದಿಂದ ಕಾವೇರಿಯ ಮದುವೆ ಮುರಿದು ಬೀಳುತ್ತದೆ. ಭವಿಷ್ಯದಲ್ಲಿ ಕಾವೇರಿ ಮದುವೆಯಾಗದಿದ್ದರೂ ಹೆಂಡತಿಯಾಗಿ ಮತ್ತು ಜನ್ಮ ನೀಡದಿದ್ದರೂ ತಾಯಿಯಾಗಿ ಬದುಕುವ ಅನಿವಾರ್ಯತೆಯಲ್ಲಿ ಬೀಳುತ್ತಾಳೆ. ಆದರೆ ಸಂತೋಷನ ನಿಷ್ಕಲ್ಮಷ ಪ್ರೀತಿಗೆ ಕಾವೇರಿ ಒಲಿಯುತ್ತಾಳಾ ಎಂಬುದು ಕಾದು ನೋಡಬೇಕಾಗಿದೆ.
ಕಾವೇರಿಯ ಪಾತ್ರದಲ್ಲಿ ನಟಿ ಪ್ರಿನ್ಸಿ ಕೃಷ್ಣನ್ ನಟಿಸಿದರೆ ನಾಯಕನಾಗಿ ಶ್ರೀಧರ ನಟಿಸುತ್ತಿದ್ದಾರೆ. ಪ್ರಧಾನ ಪಾತ್ರದಲ್ಲಿ ಜನಪ್ರೀಯ ನಟರಾದ ಅಶ್ವಿನಿ ಗೌಡ, ಸುರೇಶ್ ರೈ, ಶ್ರೀಕಾಂತ ಹೆಬ್ಳಿಕರ್ ಮತ್ತು ನಟಿಸುತ್ತಿದ್ದಾರೆ. “ಕಾವೇರಿ” ನ್ಯೂ ಡಿ-ಟು ಮಿಡಿಯಾ ನಿರ್ಮಾಣದಲ್ಲಿ ಮೂಡಿಬರುತ್ತಿದೆ. ನಿರ್ದೇಶನದ ಜವಾಬ್ದಾರಿಯನ್ನು ವಿನೋದ ಫೀಲ್ಸ್ ವಹಿಸಿಕೊಂಡಿದ್ದಾರೆ.
“ಕಾವೇರಿ” ಕೇವಲ ಪಾತ್ರವಲ್ಲದೇ ಅದು ಸಮಸ್ತ ಹೆಣ್ತನದ ರಾಯಭಾರಿ ಎನ್ನುವುದು ನಿರ್ದೇಶಕ ವಿನೋದ ಮಾತು.
ಇದೇ ಸಂದರ್ಭದಲ್ಲಿ “ಕಾವೇರಿ” ಧರಾವಾಹಿಯನ್ನು ನೋಡಿ ಚಿನ್ನ ಗೆಲ್ಲಿ ಎಂಬುದರ ಮೂಲಕ ಉದಯ ವೀಕ್ಷಕರಿಗೆ ಚಿನ್ನದ ಸುರಿಮಳೆ ಹರಿಸಲಿದೆ. ಜೂನ್೨೬ ರಿಂದ ಜೂಲೈ ೦೭ರವರೆಗೆ ಧಾರಾವಾಹಿಯಲ್ಲಿ ಕೇಳುವ ಪ್ರಶ್ನೆಗೆ ಉತ್ತರಿಸಿದ ವಿನ್ನರ್ಗಳಿಗೆ ೧೦೦ಗ್ರಾಮದವರಗೆ ಬಂಗಾರವನ್ನು ಗೆಲ್ಲುವ ಅವಕಾಶವಿದೆ.
“ಕಾವೇರಿ” ಇದೇ ಜೂನ್ ೨೬ರಿಂದ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ ೮ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ.