ಹೂರಬಂದ ಜಗತ್ ಕಿಲಾಡಿ ಗೀತೆಗಳು ‘ಜಗತ್ಕಿಲಾಡಿ’ ಚಿತ್ರದ ನಿರ್ಮಾಪಕ ಲಯನ್ ಆರ್.ರಮೇಶ್ಬಾಬು ಅವರ ಗೆಳಯರೊಬ್ಬರು ಆನೇಕಲ್ದಲ್ಲಿ ಬೆಳ್ಳಿ ನಾಣ್ಯದ ಮೂಟೆ ಕೊಡುವುದಾಗಿ ನಂಬಿಸಿ ವಂಚನೆಗೊಳಗಾಗಿದ್ದಾರೆ. ನಂತರ ತಮಿಳು ಚಿತ್ರದಲ್ಲಿ ರೈಸ್ ಪುಲ್ಲಿಂಗ್ ವ್ಯವಹಾರದ ಕುರಿತ ಕತೆಯು ಇಲ್ಲಿ ನಡೆದಂತೆ ಇರುವುದರಿಂದ ಕನ್ನಡಕ್ಕೆ ಸೂಟ್ ಆಗುತ್ತಿರುವ ಕಾರಣ ಹಣ ಹೊಡಿದ್ದು ಅಲ್ಲದೆ ನ್ಯಾಯಧೀಶರ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಎಲ್ಲಿಯವರೆಗೆ ವಂಚನೆಗೆ ಒಳಗಾದವರು ಇರುತ್ತಾರೋ ಅಲ್ಲಿಯವರೆಗೆ ಮೋಸಗಾರರು ಇದ್ದೇ ಇರುತ್ತಾರೆಂದು, ಮತ್ತು ಇದರ ಬಗ್ಗೆ ಜನರು ಎಚ್ಚರಿಕೆಯಿಂದ ಇರಬೇಕೆಂದು ಜಾಗೃತಿ ಮೂಡಿಸುವ ....
‘ಆದಿ ಪುರಾಣ’ ಚಿತ್ರಕ್ಕೆ ಎ ಪ್ರಮಾಣ ಬಂದ ಕಾರಣ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ನಿರ್ದೇಶಕ ಮೋಹನ್ಕಾಮಾಕ್ಷಿ ಸೆನ್ಸಾರ್ನವರು ಚಿತ್ರ ಚೆನ್ನಾಗಿ ಬಂದಿದೆ. ಎ ಕೊಡುತ್ತೇವೆ ಅಂತಾರೆ. ರವಿಚಂದ್ರನ್ ಹಾಡನ್ನು ಐದು ಸೆಕೆಂಡ್ ಬಳಸಲಾಗಿದೆ. ಆ ಚಿತ್ರವು ಯು ಆಗಿತ್ತು. ಅದನ್ನೆ ಬಳಿಸಿದರೆ ಎ ನೀಡಿದರು. ಆರ್ಸಿಗೆ ಹೋಗೋಣವೆಂದರೆ ಈಗಾಗಲೇ ತಡವಾಗಿದೆ. ಮತ್ತೆ ಸಾಕಷ್ಟು ಹಣ ಖರ್ಚಾಗುತ್ತೆ. ವಿಧಿ ಇಲ್ಲದೆ ಅದರಲ್ಲೆ ತೃಪ್ತಿ ಪಡಬೇಕಾಯಿತು. ಅದಕ್ಕಾಗಿ ಎ ಫಾರ್ ಆಲ್ ಎಂದುಕೊಂಡು ಬಿಡುಗಡೆ ಮಾಡುತಿದ್ದೇವೆ ಎಂದರು.
ತೆಲುಗು ತಂಡದಿಂದ ಸಿದ್ದಗೊಂಡಿರುವ ‘ಸ್ಮೇಹವೇ ಪ್ರೀತಿ’ ಚಿತ್ರದ ಕತೆಯು ಸ್ನೇಹ, ಪ್ರೀತಿ ಎರಡನ್ನು ಒಂದೇ ರೀತಿ ಅಳೆಯುವುದು ಬೇಡವೆಂದು ಹೇಳುವ ಪ್ರಯತ್ನ ಮಾಡಲಾಗಿದೆ. ಕಾಲೇಜಿನಲ್ಲಿ ಇಬ್ಬರು ಪ್ರೀತಿಸದೆ ಗೆಳಯರಾಗಿ ಇರುತ್ತಾರೆ. ಮುಂದೆ ಆತ ಬೇರೆ ಹುಡುಗಿಯನ್ನು ಪ್ರೀತಿಸುತ್ತಿದ್ದಾಳೆಂದು ತಿಳಿದ ಗೆಳತಿ ಅವರಿಬ್ಬರನ್ನು ಒಂದು ಗೂಡಿಸುವಲ್ಲಿ ಸಪಲಳಾಗುವುದು ಒಂದು ಏಳೆಯ ಸಾರಾಂಶವಾಗಿದೆ. ಹೈದರಾಬಾದ್, ಬೆಂಗಳೂರು ಕಡೆಗಳಲ್ಲಿ ಚಿತ್ರೀಕರಣ ನಡೆದಿದೆ. ನಾಯಕ ಸೂರಜ್ಗೌಡ, ಪೋಷಕ ಕಲಾವಿದರು ಹೂರತುಪಡಿಸಿದರೆ ಬಾಂಬೆ ಮೂಲದ ಸೋನಿಯಾ, ಫರ ನಾಯಕಿಯರು, ಉಳಿದಂತೆ ಎಲ್ಲರೂ ತೆಲುಗುನವರೆ ಆಗಿರುವುದು ವಿಶೇಷ.
‘ಪುಟ ೧೦೯’ ಚಿತ್ರದ ಅವಧಿ ೯೦ ನಿಮಿಷ. ಒಟ್ಟು ೨೫ ಸನ್ನಿವೇಶಗಳು. ಅದರಲ್ಲಿ ೨೪ ಸನ್ನಿವೇಶವು ೨೮ ನಿಮಿಷದಲ್ಲಿ ಕಾಣಿಸಿಕೊಂಡರೆ, ೧ ಸನ್ನಿವೇಶ ೬೨ ನಿಮಿಷಗಳು ತೆಗೆದುಕೊಳ್ಳುತ್ತದೆ. ಎರಡು ಪಾತ್ರಧಾರಿಗಳು ಮಾತನಾಡುತ್ತಾರೆ. ಹಾಗಂತ ನೋಡುಗರಿಗೆ ಬೋರ್ ಆಗದಂತೆ ಹಲವು ಷಾಟ್ಗಳನ್ನು ವಿಭಾಗಿಸಲಾಗಿದೆ. ಎರಡು ಹಾಡುಗಳಿಗೆ ಸಂಗೀತ ಗಣೇಶ್ನಾರಾಯಣ್ ಒದಗಿಸಿದ್ದಾರೆ. ಸುದೀಪ್ ಚಿತ್ರ ವೀಕ್ಷಿಸಿ ಇದನ್ನು ತೆಲುಗು, ತಮಿಳು ಭಾಷೆಯಲ್ಲಿ ನಿರ್ಮಾಣ ಮಾಡಲು ಆಸಕ್ತಿ ತೋರಿಸಿರುವುದು ಇವರೊಂದಿಗೆ ಜಾಕ್ ಮಂಜು ಸೇರಿಕೊಂಡಿದ್ದಾರೆ.
ಜಂಬದ ಹುಡುಗಿ, ಬಿಂದಾಸ್ ಹುಡುಗಿ ಅಂತ ಗುರುತಿಸಿಕೊಂಡಿರುವ ನಿರ್ದೇಶಕಿ, ನಿರ್ಮಾಪಕಿ,ನಟಿ, ಕನ್ನಡ ಪರ ಹೋರಾಟಗಾರತಿ ಪ್ರಿಯಾಹಾಸನ್ ಅವರ ಹದಿನೈದು ವರ್ಷದ ಸೇವೆಯನ್ನು ಗುರುತಿಸಿದ ಜರ್ಮನ್ ವಿಶ್ವವಿದ್ಯಾಯಲವು ಡಾಕ್ಟರೇಟ್ ಗೌರವ ನೀಡಿದೆ. ಇವರ ಮೊದಲ ನಿರ್ಮಾಣ, ನಟನೆಯ ಜಂಬದಹುಡುಗಿಯಲ್ಲಿ ಯಶ್ ಅವಕಾಶ ನೀಡಿದ್ದರು. ಸದಾ ಹೊಸ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುತ್ತಿದ್ದು, ಹೊಸ ಚಿತ್ರ ‘ರಣಚತುರೆ’ಗೆ ನಾಲ್ಕು ಹುಡುಗರು, ಸಂಭಾಷನೆ, ಸಂಗೀತ ನಿರ್ದೇಶಕರನ್ನು ಪರಿಚಯಿಸುತ್ತಿದ್ದಾರೆ. ಸಮಾಜಕ್ಕೆ ಉತ್ತಮ ಸಂದೇಶ ಸಾರುವ ಕತೆ ಸಿದ್ದಪಡಿಸಿದಲು ಮೂರು ಸಮಯ ತೆಗೆದುಕೊಂಡಿದ್ದಾರೆ. ಖಡಕ್ ಪೋಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದು, ಉಳಿದ ತಾರಗಣ, ....
ಕಿರುತೆರೆ ಸ್ಟಾರ್ ನಿರ್ದೇಶಕ, ನಿರ್ಮಾಪಕಿ ಇಬ್ಬರ ಸಂಗಮದಲ್ಲಿ ಮೂಡಿಬರುತ್ತಿರುವ ‘ಪ್ರೀಮಿಯರ್ ಪದ್ಮಿನಿ’ ಚಿತ್ರದ ಎರಡನೆ ಹಂತದ ಚಿತ್ರೀಕರಣದಲ್ಲಿ ಮಧುಬಾಲ ತಂಡಕ್ಕೆ ಸೇರಿಕೊಂಡಿದ್ದಾರೆ. ಮಾದ್ಯಮದವರು ಸೆಟ್ಗೆ ಹೋದಾಗ ತಂಡವು ಹಲವು ಮಾತಿಹಿಗಳನ್ನು ಹಂಚಿಕೊಂಡಿತು. ಒಂದೇ ತರಹದ ಪಾತ್ರಗಳಿಂದ ಆಚೆ ಬರಬೇಕೆಂದು ಯೋಚನೆ ಮಾಡುತ್ತಿದ್ದೆ. ಆ ಸಮಯದಲ್ಲಿ ರಾಯರ ಕೃಪೆಯಿಂದ ಈ ಚಿತ್ರವು ಸಿಕ್ಕಿತು. ನಿರ್ದೇಶಕರ ಯೋಜನೆ, ಯೋಚನೆ ನೋಡುತ್ತಿರುವಾಗ ಇವರು ಯಾಕೆ ತಡವಾಗಿ ಚಿತ್ರರಂಗಕ್ಕೆ ಬಂದರು ಅನಿಸುತ್ತದೆ. ಸುಂದರ ದಾಂಪತ್ಯ ಜೀವನದಲ್ಲಿ ಇಬ್ಬರು ತಪ್ಪು ಮಾಡದೆ ಇದ್ದರೂ ಬೇರೆಯಾಗುತ್ತೇವೆ. ಬಿಡುಗಡೆ ನಂತರ ಹೆಚ್ಚು ಹೆಣ್ಣುಮಕ್ಕಳು ಅಭಿಮಾನಿಗಳು ....
‘’ಅಂಬಿ ನಿಂಗ್ ವಯಸ್ಸಾಯ್ತೋ’ ಚಿತ್ರದ ಸುದ್ದಿಗೋಷ್ಟಿಯಲ್ಲಿ ಅಂಬರೀಷ್ ಮಾತನಾಡುತ್ತಾ ಕಲಾವಿದರು, ಮಾದ್ಯಮದವರು ಒಂದೇ ನಾಣ್ಯದ ಸುಂದರ ಮುಖಗಳಂತೆ. ರಜನಿ ಫೋನ್ ಮಾಡಿ ಈ ಸಿನಿಮಾ ಮಾಡಲು ಹೇಳಿದರು. ಚಿತ್ರ ನೋಡಿದಾಗ ಪಾತ್ರ ಮಾಡಲು ಇಷ್ಟವಾಯಿತು. ಸುದೀಪ್ ಬೆನ್ನಲುಬಾಗಿ ಬಂದರು. ನನ್ನ ಹಾಕ್ಕೊಂದು ಸಿನಿಮಾ ಮಾಡೋದು ಕಷ್ಟ. ಆದರೂ ಇವೆರಲ್ಲರೂ ತಾಳ್ಮೆಯಿಂದ ಮುಗಿಸಿದ್ದಾರೆ. ಹೊರಗಡೆ ಅಂಬರೀಷ್, ಸೆಟ್ಗೆ ಬಂದಾಗ ಕಲಾವಿದ. ಹೆದರಬೇಡವೆಂದು ನಿರ್ದೇಶಕರಿಗೆ ಹೇಳುತ್ತಿದ್ದೆ. ಒಳ್ಳೆ ಚಿತ್ರವಾಗಿದ್ದರಿಂದ ಪ್ರಚಾರ ಮಾಡುವ ಅಗತ್ಯವಿಲ್ಲ. ೨೦೦ ಚಿತ್ರದಲ್ಲಿ ನಟಿಸಿದ್ದರೂ ಇದರಲ್ಲಿರುವ ಕರೆಂಟ್ ಬೇರೆಯಲ್ಲಿ ಕಂಡಿಲ್ಲ. ಇದೇ ನನ್ನದು ಕಡೆ ಚಿತ್ರ ಆಗಬಹುದು ಎಂದು, ನಂತರ ....
‘ಭರಾಟೆ’ ಚಿತ್ರದಲ್ಲಿ ಬ್ಯುಸಿ ಇರುವ ಶ್ರೀ,ಮುರಳಿ ನಡುವೆ ‘ಮದಗಜ’ ಎನ್ನುವ ಸಿನಿಮಾಕ್ಕೆ ಸಹಿ ಹಾಕಿದ್ದಾರೆ. ಅಯೋಗ್ಯ ನಿರ್ದೇಶಕ ಮಹೇಶ್ಕುಮಾರ್ ಆಕ್ಷನ್ ಕಟ್ ಹೇಳುತ್ತಿದ್ದು ಮುಂದಿನ ಸಿನಿಮಾ ತೂಕ ಇರಬೇಕೆಂದು ಅದಕ್ಕೆ ತಕ್ಕಂತೆ ಕತೆಯನ್ನು ರೂಪಿಸಿದ್ದಾರೆ. ದೊಡ್ಡ ಮಟ್ಟದ ಕಲಾವಿದರು, ತಂತ್ರಜ್ಘರು ಕೆಲಸ ಮಾಡುತ್ತಿರುವುದು ಖುಷಿ ತಂದಿದೆಯಂತೆ. ಆನೆಗೆ ಮದವೇರಿದಾಗ ಯಾರಿಗೂ ಕೇರ್ ಮಾಡದೆ ತನ್ನಿಷ್ಟ ಬಂದ ಕಡೆ ಹೋಗುತ್ತದೆ. ಅದರಂತೆ ನಾಯಕ ಎದುರಾಳಿಗಳನ್ನು ಗುದ್ದಿಕೊಂಡು ಮುಂದಕ್ಕೆ ಹೋಗುತ್ತಾನೆ. ಒಟ್ಟಾರೆ ಮನರಂಜನೆ, ಆಕ್ಷನ್ ಚಿತ್ರವಾಗಲಿದೆ. ಹೆಚ್ಚಿನ ಮಾಹಿತಿಗಳು ಸದ್ಯದಲ್ಲೆ ಸಿಗುತ್ತದಂತೆ.
ಕರ್ನಾಟಕ ಚಲನಚಿತ್ರ ಅಕಾಡಮಿ ನೂತನ ಅಧ್ಯಕ್ಷ ನಾಗತ್ತಿಹಳ್ಳಿ ಚಂದ್ರಶೇಖರ್ ಅವರನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯು ಗೌರವತಿಸಿತು. ಸಮಾರಂಭದಲ್ಲಿ ಮಂಡಳಿ ಸದಸ್ಯರುಗಳು ನೀಡಿದ ಸಲಹೆ, ಕೋರಿಕೆಯನ್ನು ಆಲಿಸಿದ ಅಧ್ಯಕ್ಷರು ಮಿತವ್ಯಯವಾಗಿ ನಿರ್ಮಾಪಕರಿಗೆ ಅನುಕೂಲವಾಗುವಂತೆ ಚಿತ್ರೀಕರಣ ನಡೆಸಲು ಸರ್ಕಾರಿಂದ ನೀತಿ, ನಿಯಾಮಾವಳಿಗಳನ್ನು ರೂಪಿಸುವುದು. ಮಿನಿ ಚಿತ್ರಮಂದಿರ ರಾಜ್ಯಾದ್ಯಂತ ಆಗಬೇಕಾಗಿದೆ. ಆದರೆ ಸರ್ಕಾರವು ರೂಪಿಸಿರುವ ನಿಯಾಮಗಳಿಂದ ಜನತಾ ಚಿತ್ರಮಂದಿರ ನಿರ್ಮಾಣ ಮಾಡಲು ನಿರ್ಮಾಪಕರು ಹಿಂದೇಟು ಹಾಕುತ್ತಿರುವುದು ಗಮನಕ್ಕೆ ಬಂದಿದೆ. ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಈ ಬಾರಿ ಕಮರ್ಷಿಯಲ್ ಚಿತ್ರಗಳಿಗೂ ಅವಕಾಶ ಮಾಡಿಕೊಡಲಾಗಿದೆ. ಇದರ ....