ಅಕ್ಟೋಬರ್ ೨೫ರಂದು ಅಂದವಾದ ‘ಯು’ ಪ್ರಮಾಣಪತ್ರ ಪಡೆದುಕೊಂಡಿರುವ ‘ಅಂದವಾದ’ ಚಿತ್ರದ ಅಡಿಬರಹದಲ್ಲಿ ಕೇವಲ ಪ್ರೀತಿ ಮತ್ತು ಪ್ರೀತಿ ಎಂದು ಇಂಗ್ಲೀಷ್ದಲ್ಲಿ ಹೇಳಿಕೊಂಡಿದೆ. ಮಳೆ ಹಾಗೂ ಮಂಜಿನಲ್ಲಿ ಶೇಕಡ ೯೦ರಷ್ಟು ಚಿತ್ರೀಕರಣಗೊಂಡಿದೆ. ಇದೂವರೆಗೂ ಯಾರು ಕ್ಯಾಮಾರ ಇಡದ ಜಾಗದಲ್ಲಿ ಸೆರೆಹಿಡಿದಿರುವುದು ವಿಶೇಷ. ಇಲ್ಲಿವರೆಗೂ ತಿಳಿಸದ ಅರ್ಥಪೂರ್ಣ ಸಂದೇಶವಿದೆ. ವಾಹಿನಿಗಳಲ್ಲಿ ಬಿತ್ತರಗೊಂಡ ಕೆಲವೊಂದು ಘಟನೆಗಳನ್ನು ಹೆಕ್ಕಿಕೊಂಡು ಅದನ್ನು ಚಿತ್ರರೂಪಕ್ಕೆ ತರಲಾಗಿದೆ. ಹುಡುಗ-ಹುಡುಗಿ ಹುಟ್ಟುತ್ತಾರೆ,ಸಾಯುತ್ತಾರೆ. ಇದರ ಮಧ್ಯೆ ಮಳೆಯಲ್ಲೇ ನಡೆಯುವ ಸುಂದರ ಪ್ರೇಮ ಕತೆ ಇದಾಗಿದೆ. ಪಾತ್ರಗಳು ಹಾಗೂ ....
ನಮ್ಮ ಉದ್ದೇಶ ತಪ್ಪು ದಾರಿಗೆ ಹೋಗಬಾರದು - ಶ್ರೀಮುರಳಿ ಇಂದಿನ ಸಿನಿಮಾಸಕ್ತರಿಗೆ ತರಭೇತಿ ಎನ್ನುವುದು ಮುಖ್ಯವಾಗಿರುತ್ತದೆ. ಇದು ಯಾವಗಲೂ ಸಕರಾತ್ಮಕವಾಗಿ ಕಂಪನ ಹೊಂದಿರಬೇಕೆಂದು ಶ್ರೀಮುರಳಿ ಅಭಿಪ್ರಾಯಪಟ್ಟರು. ಅವರು ನಿರ್ದೇಶಕ ಮತ್ತು ನಿರ್ಮಾಪಕ ಗುರುದೇಶಪಾಂಡೆ ಸಾರಥ್ಯದ ‘ಜಿ ಅಕಾಡಮಿ’ ಶಾಲೆಯನ್ನು ಉದ್ಗಾಟಿಸಿ ಮಾತನಾಡುತ್ತಿದ್ದರು. ಯಾವುದು ಸರಿ ಅದನ್ನು ಆಯ್ಕೆ ಮಾಡಿಕೊಳ್ಳಬೇಕು. ತಪ್ಪು ಅನ್ನುವುದನ್ನು ಮಾಡಬಾರದು. ನಮ್ಮ ಉದ್ದೇಶ ಪೋಷಕರಿಗೆ ಗೌರವ ಕೊಡಬೇಕು. ಅವರ ಮಾರ್ಗದರ್ಶನವನ್ನು ಪೂರ್ಣಗೊಳಿಸಿ, ಯಾವುದೇ ಅಡತಡೆ ಬಂದರೂ ಅದನ್ನು ಎದುರಿಸಿ ನಮ್ಮನ್ನು ನಾವಾಗಿ ....
ಸಿನಿಮಾ ಶೈಲಿಯಲ್ಲಿ ‘ಕ್ರಾಂತಿಪುರ’ ಟ್ರೈಲರ್ ಬಿಡುಗಡೆ ಒಂದು ಸಿನಿಮಾ ನಿರ್ಮಾಣ/ನಿರ್ದೇಶನ ಮಾಡಬೇಕೆಂದರೆ ಅದಕ್ಕೆ ತಕ್ಕಂತೆ ಸಿದ್ದತೆಗಳನ್ನು ಮಾಡಿಕೊಳ್ಳುವುದು ಮುಖ್ಯವಾಗಿರುತ್ತದೆ. ಕಿರುಚಿತ್ರಗಳನ್ನು ಮಾಡುವುದು ವೆಬ್ ಸಿರೀಸ್ ಮಾಡುವುದು ಇದರಲ್ಲಿ ಯಶಸ್ವಿಯಾದ ಮೇಲೆ ಸಿನಿಮಾ ಮಾಡಲು ಕೈಹಾಕಿದರೆ ಆ ಚಿತ್ರ ಯಶಸ್ವಿಯಾಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಭವಿಷ್ಯದಲ್ಲಿ ಹಲವಾರು ಚಲನಚಿತ್ರಗಳನ್ನು ನಿರ್ಮಿಸುವ ಉದ್ದೇಶ ಹೊಂದಿರುವ ಡಾ|| ಸಂಜಯಗೌಡ ಅದಕ್ಕೆ ಪೂರ್ವಭಾವಿಯಾಗಿ ಕ್ರಾಂತಿಪುರ ಎಂಬ ವೆಬ್ ಸಿರೀಸ್ ಒಂದನ್ನು ನಿರ್ಮಿಸಿದ್ದಾರೆ. ಆ ಚಿತ್ರದ ಟ್ರೈಲರ್ ಹಾಗೂ ಆಡಿಯೋ ಬಿಡುಗಡೆ ಕಾರ್ಯಕ್ರಮ ....
ಮನಸ್ಸನ್ನು ತಟ್ಟುವ ಜಿಪಿಎಸ್ ಚಿತ್ರರಂಗಕ್ಕೆ ಬರುವವರಿಗೆ ಕಿರುಚಿತ್ರವು ವೇದಿಕೆಯಾಗುತ್ತಿದೆ. ಇದರಲ್ಲಿ ಗುರುತಿಸಿಕೊಂಡವರು ಸಿನಿಮಾ ಮಾಡಲು ಅವಕಾಶಗಳು ಸಿಗುತ್ತದೆ. ಅದರಂತೆ ಯುವಕರೇ ಸೇರಿಕೊಂಡು ‘ಜಿಪಿಎಸ್’ ಎನ್ನುವ ಹದಿನೆಂಟು ನಿಮಿಷದ ಚಿತ್ರವನ್ನು ಸಿದ್ದಪಡಿಸಿದ್ದಾರೆ. ಹಗಲು ರಾತ್ರಿ ಎನ್ನದೆ ದುಡಿಯುವ ಕ್ಯಾಬ್ ಚಾಲಕ ಮೂರು ದಿನದಿಂದ ಮನೆಗೆ ಹೋಗಿರುವುದಿಲ್ಲ. ಜಿಪಿಎಸ್ (ಗ್ಲೋಬಲ್ ಪೊಸಿಷನಲ್ ಸಿಸ್ಟಮ್) ಬಳಸಿಕೊಂಡು ರಾತ್ರಿ ಹೊತ್ತಿನಲ್ಲಿ ಗ್ರಾಹಕರನ್ನು ಕರೆದುಕೊಂಡು ಹೋಗುತ್ತಿರುವ ಸಂದರ್ಭದಲ್ಲಿ ಪತ್ನಿ ಕರೆ ಮಾಡಿದಾಗ ಕೋಪದಿಂದ ಉತ್ತರ ನೀಡಿರುತ್ತಾನೆ. ಈ ಸಂದರ್ಭದಲ್ಲಿ ಮೊಬೈಲ್ ಬ್ಯಾಟರಿ ಕೊನೆ ಹಂತದಲ್ಲಿದ್ದು, ಆಫ್ ....
ಗಂಟುಮೂಟೆ ನಾಲ್ಕು ಭಾಷೆಗೆ ರಿಮೇಕ್ ಎಸ್ಎಸ್ಎಲ್ಸಿ ಓದುತ್ತಿರುವ ಹದಿನಾರರ ಹುಡುಗಿಯ ದೃಷ್ಟಿಕೋನದಲ್ಲಿ ಹೆಣೆದ ನವಿರಾದ, ನೈಜ ಹಾಗೇ ಅಷ್ಟೇ ತೀವ್ರತೆಯಿಂದ ಕೂಡಿದ ಭಾವದ ತುಡಿತಗಳ ಸಮ್ಮಿಲದಿಂದ ಕೂಡಿದ ಚಿತ್ರ ‘ಗಂಟುಮೂಟೆ’ ಪ್ರದರ್ಶನವಾದ ಕಡೆಗಳಲ್ಲಿ ಪ್ರಶಸ್ತಿಯನ್ನು ಬಾಚಿಕೊಂಡಿದೆ. ೨೦೧೯ರ ನ್ಯೂಯಾರ್ಕ್ ಇಂಡಿಯನ್ ಫಿಲಿಂ ಫಿಸ್ಟಿವಲ್ದಲ್ಲಿ ಉತ್ತಮ ಚಿತ್ರಕತೆ ಪಡೆದುಕೊಂಡ ಮೊದಲ ಕನ್ನಡ ಸಿನಿಮಾವಾಗಿದೆ. ಕೆನಡಾ, ಆಸ್ಟ್ರೇಲಿಯಾ, ಯುಎಸ್ ಇಟಲಿ ಮುಂತಾದ ದೇಶದ ಹಲವಾರು ಚಿತ್ರೋತ್ಸವಗಳಲ್ಲಿ ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ಸುದೀಪ್ ಟ್ವಿಟರ್ ಮೂಲಕ ಪ್ರೋತ್ಸಾಹ ಕೊಡುತ್ತಿದ್ದಾರೆ. ....
ಜಿ ಅಕಾಡಮಿ ಶಾಲೆಗೆ ಚಾಲನೆ ಬಣ್ಣದ ಲೋಕ ಎಂತಹವರನ್ನು ಸೆಳಯುತ್ತದೆ ಎಂಬುದಕ್ಕೆ ನಿರ್ಮಾಪಕರು, ನಿರ್ದೇಶಕರು, ಕಲಾವಿದರು, ತಂತ್ರಜ್ಘರು ಕಾಂಗ್ರೇಸ್ ಗಿಡದಂತೆ ಬರುತ್ತಿರುವುದು ಸಾಕ್ಷಿಯಾಗಿದೆ. ಇದರಲ್ಲಿ ಅನುಭವ, ತರಭೇತಿ ಪಡೆಯದೇ ನೇರ ಆಕಾಡಕ್ಕೆ ಇಳಿಯುತ್ತಿರುವುದರಿಂದ ಮೊದಲ ಯತ್ನದಲ್ಲೆ ಸೋಲನ್ನು ಕಾಣುತ್ತಾರೆ. ಅದರಲ್ಲೂ ನಟನೆ, ತಾಂತ್ರಿಕತೆಗೆ ಮೇಲಿನ ಎರಡು ಅಂಶಗಳು ಅವಶ್ಯಕವಾಗಿರುತ್ತದೆ. ಬಿಜಾಪುರ ಜಿಲ್ಲೆ, ತಾಳಿಕೋಟೆ ಸಮೀಪ ಇರುವ ನಾಗೂರು ಗ್ರಾಮದ ಗುರುದೇಶಪಾಂಡೆ ಇಂತಹುದೆ ಕನಸನ್ನು ಹೊತ್ತುಕೊಂಡು ಗಾಂಧಿನಗರಕ್ಕೆ ಬಂದಿದ್ದಾರೆ. ನಂತರ ಡೈರಕ್ಷನ್ ಕೋರ್ಸ್ ಮುಗಿಸಿ ಒಂದಷ್ಟು ಚಿತ್ರಗಳಿಗೆ ಕಲಾ ....
ಸೈರಾ ಕನ್ನಡ ಚಿತ್ರವನ್ನು ನಮ್ಮವರು ಪ್ರೀತಿಸಿದರು - ಸುದೀಪ್ ಮೆಗಾಸ್ಟಾರ್ ಚಿರಂಜೀವಿ ಅಭಿನಯದ ‘ಸೈರಾ’ ಚಿತ್ರವು ಕನ್ನಡದಲ್ಲಿ ಡಬ್ಬಿಂಗ್ ಆಗಿ ಕಳೆದ ವಾರ ಬಿಡುಗಡೆಗೊಂಡಿತ್ತು. ಎಲ್ಲಾ ಕಡೆಗಳಿಂದಲೂ ಒಳ್ಳೆಯ ಪ್ರತಿಕ್ರಿಯೆ, ಉತ್ತಮ ಗಳಿಕೆ ಕಂಡು ಬರುತ್ತಿರುವುದರಿಂದ ಒಂದಷ್ಟು ಮಾಹಿತಿ ನೀಡಲು ಸುದೀಪ್ ನಿರ್ದೇಶಕರೊಂದಿಗೆ ಮಾದ್ಯಮದವರನ್ನು ಭೇಟಿ ಮಾಡಿದರು. ಅವರು ಹೇಳುವಂತೆ ಚಿರಂಜೀವಿ ಅವರಂತಹ ದೊಡ್ಡ ನಟರ ಚಿತ್ರದಲ್ಲಿ ನಾನಿರುವುದೇ ನನಗೆ ಸಿಕ್ಕ ಗೌರವ. ಕರ್ನಾಟಕದಲ್ಲಿ ಚಿತ್ರ ನೋಡಲು ಬರುವ ನೂರು ಮಂದಿಯಲ್ಲಿ ಇಪ್ಪತ್ತು ಮಂದಿ ನನಗಾಗಿ ಬಂದರೆ ಅದು ....
ಜಗ್ಗೇಶ್ ಈಗ ರಂಗನಾಯಕ ನಿರ್ದೇಶಕ ಗುರುಪ್ರಸಾದ್, ಜಗ್ಗೇಶ್ ಕಾಂಬಿನೇಶನ್ದಲ್ಲಿ ಮಠ, ಎದ್ದೇಳು ಮಂಜುನಾಥ ಚಿತ್ರಗಳು ಬಿಡುಗಡೆಗೊಂಡು ಇಬ್ಬರಿಗೂ ಹೆಸರು ತಂದುಕೊಟ್ಟಿತ್ತು. ಹ್ಯಾಟ್ರಿಕ್ ಎನ್ನುವಂತೆ ಮೂರನೇ ಬಾರಿ ಇವರದೇ ಜುಗಲ್ಬಂದಿಯಲ್ಲಿ ‘ರಂಗನಾಯಕ’ ಸಿನಿಮಾವೊಂದು ಸೆಟ್ಟೇರುತ್ತಿದೆ. ವಾಗ್ಮಿ, ವಿನೂತನ ಎನ್ನುವ ನಿರ್ದೇಶಕರ ಬತ್ತಳಿಕೆಯಿಂದ ಮೂಡಿ ಬಂದ ತುಣುಕುಗಳು ಪ್ರದರ್ಶನಗೊಂಡಿತು. ಯಕ್ಷಗಾನ ಕಲಾವಿದರು ಕಾಣುವ ಅದೇ ಧಾಟಿಯಲ್ಲಿ ಬರುವ ಸಾಲುಗಳಾದ ಕತೆ,ಚಿತ್ರಕತೆ, ಮಿಕ್ಕಲ್ಲವು ಸಿದ್ದಗೊಂಡಿಲ್ಲ. ಎಲ್ಲವನ್ನು ತಿಳಿಸುತ್ತೇವೆ. ಮುಂದಿನ ವರ್ಷ ಸಿನಿಮಾ ತೋರಿಸುತ್ತೇವೆ ಎಂಬುದು ಕೇಳಿಬಂತು. ....
ಅಮೇರಿಕಾದ ಅಧ್ಯಕ್ಷ ಫುಲ್ ಖುಷ್ ಶುಕ್ರವಾರ ತೆರೆಕಂಡ ‘ಅಧ್ಯಕ್ಷ ಇನ್ ಅಮೇರಿಕಾ’ ಚಿತ್ರವು ಕೋಟಿ ಕೋಟಿ ಗಳಿಕೆ ಬರುತ್ತಿರುವ ಕಾರಣ ಅನ್ನದಾತರು ಸಣ್ಣದೊಂಡು ಸಂತೋಷಕೂಟ ಏರ್ಪಾಟು ಮಾಡಿದ್ದರು. ನಿರ್ಮಾಪಕ ಟಿ.ಜಿ.ವಿಶ್ವಪ್ರಸಾದ್ ಮಾತನಾಡಿ ತೆಲುಗುದಲ್ಲಿ ಈ ಮಟ್ಟದ ಪ್ರಶಂಸೆ ಬಂದಿರಲಿಲ್ಲ. ಕನ್ನಡದಲ್ಲಿ ಅಂದುಕೊಂಡಿದ್ದಕ್ಕಿಂತ ಹೆಚ್ಚಾಗಿ ಆಗಿದೆ. ಆದರೆ ಪೈರಸಿಯಿಂದ ತೊಂದರೆ ಆಗುತ್ತಿದೆ. ಹೈದರಬಾದ್ ತಂಡದವರು ಸಾಮಾಜಿಕ ಜಾಲತಾಣದಲ್ಲಿ ಚಿತ್ರ ಬಂದ ತಕ್ಷಣ ತೆಗದುಹಾಕುತ್ತಿದ್ದಾರೆ. ಇಂತಹ ದುರಳರನ್ನು ಕಂಡುಹಿಡಿದು ಶಿಕ್ಷಿಸಬೇಕೆಂದು ಕೋರಿದರು. ಶರಣ್ ನಟನೆಗೆ ನಿರ್ದೇಶನ ಮಾಡಿದ್ದು ಯೋಗ, ಸಕ್ಸಸ್ ಕಂಡಿದ್ದು ....
ಮಾತಿನ ಕಟ್ಟೆಯಲ್ಲಿ ಎಲ್ಲಿದ್ದೇ ಇಲ್ಲಿ ತನಕ ಸೃಜನ್ಲೋಕೇಶ್ ನಿರ್ಮಾಣ, ನಾಯಕತ್ವದ ‘ಎಲ್ಲಿದ್ದೇ ಇಲ್ಲಿ ತನಕ’ ಚಿತ್ರದ ಬಿಡುಗಡೆಪೂರ್ವ ಸುದ್ದಿಗೋಷ್ಟಿಯಲ್ಲಿ ತಂಡವು ಸಾಕಷ್ಟು ವಿಷಯಗಳನ್ನು ಹಂಚಿಕೊಂಡಿತು. ಮೈಕ್ ತೆಗೆದುಕೊಂಡ ಟಾಕಿಂಗ್ ಸ್ಟಾರ್ ಹಣ ಹೂಡಿರುವುದಕ್ಕೆ ಚಿಂತೆ ಇಲ್ಲ. ತೆರೆಗೆ ಬರುತ್ತಿರುವ ಕಾರಣ ದುಗುಡ ಶುರುವಾಗುತ್ತಿದೆ. ತಾತ ಸುಬ್ಬಯ್ಯ ನಾಯ್ಡು ಹೆಸರಿನಲ್ಲಿ ನೀಡುವ ಪ್ರಶಸ್ತಿ ಪಡೆಯುವ ಬಯಕೆ ಇದೆ. ಅವರು ಕೊನೆಗಾಲದಲ್ಲಿ ಕಷ್ಟದಲ್ಲಿ ಇದ್ದರು, ಅಪ್ಪ ನಿರ್ಮಾಣ ಮಾಡುವಾಗ ರಕ್ತದೊತ್ತಡ ಹೆಚ್ಚಾಗಿತ್ತು ಎಂದು ತಿಳಿದಿದ್ದೆ. ಸಿನಿಮಾದಲ್ಲಿ ನಾಯಕಿ ಅಮ್ಮ, ಮತ್ತು ಹರಿಪ್ರಿಯಾ. ಛಾಯಾಗ್ರಾಹಕ ....
ಅಕ್ಟೋಬರ್ ೧೧ಕ್ಕೆ ಲುಂಗಿ ದರ್ಶನ ವಿದ್ಯಾವಂತ ಯುವಕನೊಬ್ಬ ವಿದೇಶದಲ್ಲಿ ಕೆಲಸ ಸಿಕ್ಕರೂ ಹೋಗದೆ, ತನ್ನ ನೆಲದಲ್ಲೇ ಏನಾದರೂ ಸಾಧನೆ ಮಾಡಬೇಕಂಬ ಹಂಬಲದಿಂದ ಬಟ್ಟೆ ಉದ್ಯಮವನ್ನು ಶುರು ಮಾಡುತ್ತಾನೆ. ಅದುವೇ ‘ಲುಂಗಿ’ ಸಿನಿಮಾದ ಒನ್ ಲೈನ್ ಸ್ಟೋರಿ. ರೋಮಾಂಟಿಕ್ ಕಾಮಿಡಿ ಕತೆಯನ್ನು ಯುವಜನಾಂಗದವರಿಗೆ ಅಂತಲೇ ಹಣೆಯಲಾಗಿದೆ. ಕರಾವಳಿ ಸೊಗಡಿನ ಕತೆಯಾಗಿದ್ದರಿಂದ ಆ ಭಾಗದಲ್ಲೆ ಚಿತ್ರೀಕರಣ ನಡೆಸಲಾಗಿದೆ. ಅಲ್ಲಿನ ಸಂಸ್ಕ್ರತಿ, ಸೊಗಡು, ಸೊಬಗು ಹೇರಳವಾಗಿದೆ. ಅರ್ಜುನ್ಲುಯಿಸ್ ಮತ್ತು ಅಕ್ಷಿತ್ಶೆಟ್ಟಿ ಜಂಟಿಯಾಗಿ ನಿರ್ದೇಶನ ಮಾಡಿದ್ದಾರೆ. ಈ ಪೈಕಿ ಅರ್ಜುನ್ ಚಿತ್ರಕತೆ, ಸಂಭಾಷಣೆ ಜೊತೆಗೆ ಸಾಹಿತ್ಯ ....
ಗೀತಾ ಮೂವತ್ತೈದು ಲಕ್ಷದ ಹಾಡಿಗೆ ಕತ್ತರಿ ‘ಗೀತಾ’ ಸಿನಿಮಾದ ಮೊದಲವಾರದ ಗಳಿಕೆ ಐದು ಕೋಟಿ ಬಂದಿದೆ ಎಂದು ನಿರ್ಮಾಪಕ ಸೈಯದ್ಸಲಾಂ ಸಂತೋಷಕೂಟದಲ್ಲಿ ಮಾಹಿತಿ ನೀಡಿದರು. ಆದರೂ ನಮ್ಮ ನಿರೀಕ್ಷೆ ಮಟ್ಟ ತಲುಪಿಲ್ಲವೆಂದು ಒಪ್ಪಿಕೊಂಡರು. ನಟಿ ಶಾನ್ವಿಶ್ರೀವಾತ್ಸವ್ ಸಾಮಾಜಿಕ ಜಾಲತಾಣದಲ್ಲಿ ಬರೆದಿರುವ ಬೇಸರದ ಪತ್ರಕ್ಕೆ ಸಮಂಜಸ ಉತ್ತರ ನೀಡಿದರು. ಚಿತ್ರದಲ್ಲಿ ಗಣೇಶ್, ಅವರೊಂದಿಗೆ ಇರಲಾದ ಡ್ಯುಯೆಟ್ ಹಾಡು ಸಿನಿಮಾ ಲೆಂಥ್ ಜಾಸ್ತಿಯಾಗಿದೆ ಎಂದು ಸೇರಿಸಿಲ್ಲ. ಇದಕ್ಕಾಗಿ ೩೫ ಲಕ್ಷ ಖರ್ಚು ಮಾಡಲಾಗಿತ್ತು. ಲಕ್ಷ ಖರ್ಚು ಮಾಡಿದ ಹಾಡನ್ನು ತೆಗೆದುಹಾಕಿದ್ದು ನಮಗೂ ನೆಮ್ಮದಿ ತಂದಿಲ್ಲ. ಅವರು ಈ ರೀತಿ ಹೇಳಿಕೊಂಡಿದ್ದು ತಪ್ಪಿಲ್ಲ. ಅಲ್ಲದೆ ....
ನೋಡಿದ್ದು ಸುಳ್ಳಾಗಬಹುದು ‘ಕೇಳಿದ್ದು ಸುಳ್ಳಾಗಬಹುದು, ನೋಡಿದ್ದು ಸುಳ್ಳಾಗಬಹುದು. ನಿಧಾನಿಸಿ ಯೋಚಿಸಿದಾಗ ನಿಜವು ತಿಳಿವುದು’ ಗೀತೆಯ ಸಾಲು ‘ರಾಮಲಕ್ಷಣ’ ಚಿತ್ರದಲ್ಲಿ ಇರುವುದು ಪ್ರಚಲಿತ ಜನರಿಗೆ ಅನ್ವಯವಾಗುತ್ತದೆ. ಕಳೆದ ತಿಂಗಳು ಆರ್ಟಿಓ ಇನ್ಸ್ಪೆಕ್ಟರ್ ಮಂಜುನಾಥ್ ವಾಹನ ಚಲಾಯಿಸುವಾಗ ಆರೋಗ್ಯ ಸಮಸ್ಯೆಯಿಂದ ಅಪಘಾತವೆಸಗಿ, ಜನರಿಂದ ಥಳಿಸಿಕೊಂಡಂತೆ, ವಾಹಿನಿಗಳು ಇವರ ಮೇಲೆ ಕೆಟ್ಟದಾಗಿ ಪ್ರಚಾರ ಮಾಡಿದ್ದರು. ಇದರಿಂದ ದುಗುಡಕ್ಕೆ ಒಳಗಾದ ಅಧಿಕಾರಿಯು ಇಹಲೋಕ ತ್ಯಜಿಸಿದ್ದರು. ನಂತರ ಇವರ ಬಗ್ಗೆ ಮಾಹಿತಿ ತಿಳಿದುಕೊಂಡು ಕನಿಕರ ವ್ಯಕ್ತಪಡಿಸಿದರೂ ಪ್ರಯೋಜವಾಗಲಿಲ್ಲ. ಇಂತಹುದೆ ನೈಜ ಘಟನೆಯ ಕತೆಯನ್ನು ನಟ ....
ಯುರೋಪಿಯನ್ ನಿರೂಪಣೆ ದಿಯಾ ‘೬-೫=೨’ ನಿರ್ದೇಶಕ ಅಶೋಕ್ ಮತ್ತು ‘ಕರ್ವ’ ನಿರ್ಮಾಪಕ ಕೃಷ್ಣಚೈತನ್ಯ ಜುಗಲ್ಬಂದಿಯಲ್ಲಿ ‘ದಿಯಾ’ ಸಿನಿಮಾವೊಂದು ಬಿಡುಗಡೆಗೆ ಸಜ್ಜಾಗಿದೆ. ಯುರೋಪಿಯನ್ ಸ್ಟೈಲ್ದಲ್ಲಿ ನಿರೂಪಣೆ ಇರುವುದು ವಿಶೇಷ. ಜೀವನಪೂರ್ತಿ ಸೋಜಿಗಗಳು ಎಂಬ ಇಂಗ್ಲೀಷ್ ಅಡಿಬರಹ ಇರಲಿದೆ. ಮೂರು ಪಾತ್ರಗಳ ಸುತ್ತ ಕತೆಯು ಸಾಗುತ್ತದೆ. ಮೂವತ್ತಾರು ತಿಂಗಳ ಶ್ರಮ ಹಾಗೂ ಗೆಳಯ ಆಕ್ಷನ್ ಕಟ್ ಹೇಳುತ್ತಿರುವುದರಿಂದ ನಂಬಿಕೆ ಮೇಲೆ ಬಂಡವಾಳ ಹೂಡಿದ್ದಾರಂತೆ. ಮುಂದಾಳತ್ವ ವಹಿಸುವ ಮಹಿಳೆಗೆ ಶೀರ್ಷಿಕೆ ಹೆಸರಿನಲ್ಲಿ ಕರೆಯುತ್ತಾರೆ. ಶೂನ್ಯದಿಂದ ಹತ್ತರವರೆಗೆ ಪಯಣದಲ್ಲಿ ರೋಮಾಂಟಿಕ್ ಚಿತ್ರವು ಸಾಗುತ್ತದೆ. ಕತೆಯಲ್ಲಿ ....
ಚಿತ್ರಮಂದರದಲ್ಲಿ ದೇವರು ಬೇಕಾಗಿದ್ದಾರೆ ಪ್ರತಿಯೊಬ್ಬರು ದೇವರ ಅನುಗ್ರಹವನ್ನು ಕೇಳುತ್ತಾರೆ. ಇಲ್ಲೋಂದು ಹೊಸಬರ ತಂಡವೊಂದು ‘ದೇವರು ಬೇಕಾಗಿದ್ದಾರೆ’ ಎನ್ನುವ ಸಿನಿಮಾವನ್ನು ಸಿದ್ದಪಡಿಸಿದ್ದಾರೆ. ರಸ್ತೆ ಅಪಘಾತದಲ್ಲಿ ತನ್ನ ಕುಟುಂಬದವರನ್ನು ಕಳೆದುಕೊಂಡ ಆರು ತಿಂಗಳ ಮಗು ಅಪ್ಪುವನ್ನು ಊರಿನ ಮುಖ್ಯಸ್ಥ ರಂಗಣ್ಣ ಸಾಕುತ್ತಾರೆ. ಆತನಿಗೆ ಬುದ್ದಿ ಬಂದಾಗ ರಂಗಣ್ಣ ‘ಭಕ್ತಪ್ರಹ್ಲಾದ’ ಚಿತ್ರದ ಡಾ.ರಾಜ್ಕುಮಾರ್,ಪುನೀತ್ರಾಜ್ಕುಮಾರ್ ಡೈಲಾಗ್ನ್ನು ತೋರಿಸುತ್ತಾ ರಾಜಣ್ಣ ದೇವರನ್ನು ನೋಡಲು ಹೋಗಿದ್ದಾರೆಂದು ಹೇಳುತ್ತಾರೆ. ಇದನ್ನು ಅರಿತ ಮುಗ್ದ ಬಾಲಕನು ತನ್ನ ತಾಯಿ ದೇವರ ಬಳಿ ಇದ್ದಾರೆಂದು ತಿಳಿದು ....
ಕಾಡಿನ ಹಿನ್ನಲೆಯ ನವರತ್ನ ಸೆಸ್ಪನ್ಸ್, ಥ್ರಿಲ್ಲರ್ ಮತ್ತು ಐತಿಹಾಸಿಕ ಹಿನ್ನಲೆಯ ‘ನವರತ್ನ’ ಚಿತ್ರದ ಕತೆಯು ಶೇಕಡ ಎಪ್ಪತ್ತರಷ್ಟು ಕಾಡಿನಲ್ಲಿ ನಡೆಯುತ್ತದೆ. ಅದಕ್ಕಾಗಿ ಗರಿಷ್ಟ ಚಿತ್ರೀಕರಣವನ್ನು ಶೃಂಗೇರಿ ಬಳಿ ಇರುವ ಕಿಗ್ಗ ಅರಣ್ಯ ಪ್ರದೇಶ, ಉಳಿದಂತೆ ಇಂಡೋನೇಶಿಯಾ, ಲಡಾಕ್, ಬೆಂಗಳೂರು ಸುತ್ತಮುತ್ತ ಇರುವ ಸುಂದರ ತಾಣಗಳಲ್ಲಿ ಐವತ್ತು ದಿನಗಳ ಕಾಲ ಸೆರೆ ಹಿಡಿಯಲಾಗಿದೆ. ಎರಡು ಸಿನಿಮಾಗಳಲ್ಲಿ ನಟಿಸಿದ ಸಂವೇದನೆಯಿಂದ ನಾಯಕ ಜೊತೆಗೆ ನಿರ್ದೇಶನದ ಜವಬ್ದಾರಿಯನ್ನು ಪ್ರತಾಪ್ರಾಜ್ ಹೊತ್ತುಕೊಂಡಿದ್ದಾರೆ. ಚಿತ್ರಕತೆ, ಚಿತ್ರೀಕರಣೋತ್ತರ ಕೆಲಸ ಮತ್ತು ಯುಎ ಪ್ರಮಾಣ ಪಡೆಯಲು ಒಟ್ಟು ಮೂರು ವರ್ಷ ಸಮಯ ತೆಗೆದುಕೊಂಡಿದೆ. ವೈಲ್ಡ್ ಲೈಫ್ ....
ಕಂಸಾಳೆಯಲ್ಲಿ ಪ್ರೇಮ ನಾದ ಜನುಮದ ಜೋಡಿಯ ‘ಕೋಲುಮಂಡೆ ಜಂಗಮದೇವ’ ಹಾಡಿನಲ್ಲಿ ‘ಕಂಸಾಳೆ’ಯನ್ನು ಶಿವರಾಜ್ಕುಮಾರ್ ಉಪಯೋಗಿಸಿದ್ದರು. ಈಗ ಇದೇ ಹೆಸರಿನಲ್ಲಿ ಚಿತ್ರವೊಂದು ಸೆಟ್ಟೇರಿದೆ. ಮೈಸೂರು ಮತ್ತು ಚಾಮರಾಜನಗರದಲ್ಲಿ ಹೆಚ್ಚಾಗಿ ಇದನ್ನು ಬಳಸುತ್ತಾರೆ. ಕತೆಯು ಹೆಚ್ಚಾಗಿ ಬೆಟ್ಟಗುಡ್ಡಗಳ ತಪ್ಪಲಿನಲ್ಲಿ ನಡೆಯುತ್ತದೆ. ನಾಯಕನ ಪಾತ್ರವು ಎಲ್ಲರಿಗೂ ಇಷ್ಟವಾಗುತ್ತಾ ಹೋದರೆ, ದುರಳ ವ್ಯಕ್ತಿಗಳಿಗೆ ಈತನು ಕಷ್ಟಕಾರಿಯಾಗಿರುತ್ತಾನೆ. ಇದರ ಮಧ್ಯ ನವಿರಾದ ಪ್ರೀತಿ, ಹಾಗೂ ಅರಣ್ಯಕ್ಕೆ ಸಂಬಂದಿಸಿದ ಕಾನೂನುಬಾಹಿರ ಚಟುವಟಿಕೆಗಳನ್ನು ಆತನು ಹೇಗೆ ಬಗೆಹರಿಸುತ್ತಾನೆ ಎಂಬುದು ಒಂದು ಏಳೆಯ ಸಾರಾಂಶವಾಗಿದೆ. ಮೂಡಿಗೆರೆ, ....
ಕಂಸಾಳೆಯಲ್ಲಿ ಪ್ರೇಮ ನಾದ ಜನುಮದ ಜೋಡಿಯ ‘ಕೋಲುಮಂಡೆ ಜಂಗಮದೇವ’ ಹಾಡಿನಲ್ಲಿ ‘ಕಂಸಾಳೆ’ಯನ್ನು ಶಿವರಾಜ್ಕುಮಾರ್ ಉಪಯೋಗಿಸಿದ್ದರು. ಈಗ ಇದೇ ಹೆಸರಿನಲ್ಲಿ ಚಿತ್ರವೊಂದು ಸೆಟ್ಟೇರಿದೆ. ಮೈಸೂರು ಮತ್ತು ಚಾಮರಾಜನಗರದಲ್ಲಿ ಹೆಚ್ಚಾಗಿ ಇದನ್ನು ಬಳಸುತ್ತಾರೆ. ಕತೆಯು ಹೆಚ್ಚಾಗಿ ಬೆಟ್ಟಗುಡ್ಡಗಳ ತಪ್ಪಲಿನಲ್ಲಿ ನಡೆಯುತ್ತದೆ. ನಾಯಕನ ಪಾತ್ರವು ಎಲ್ಲರಿಗೂ ಇಷ್ಟವಾಗುತ್ತಾ ಹೋದರೆ, ದುರಳ ವ್ಯಕ್ತಿಗಳಿಗೆ ಈತನು ಕಷ್ಟಕಾರಿಯಾಗಿರುತ್ತಾನೆ. ಇದರ ಮಧ್ಯ ನವಿರಾದ ಪ್ರೀತಿ, ಹಾಗೂ ಅರಣ್ಯಕ್ಕೆ ಸಂಬಂದಿಸಿದ ಕಾನೂನುಬಾಹಿರ ಚಟುವಟಿಕೆಗಳನ್ನು ಆತನು ಹೇಗೆ ಬಗೆಹರಿಸುತ್ತಾನೆ ಎಂಬುದು ಒಂದು ಏಳೆಯ ಸಾರಾಂಶವಾಗಿದೆ. ಮೂಡಿಗೆರೆ, ....
ಡಾ.ರಾಜ್ಕುಮಾರ್ ಆದರ್ಶಗಳನ್ನು ತೋರಿಸುವ ಚಿತ್ರ ಡಾ.ರಾಜ್ಕುಮಾರ್ ಚಿತ್ರಗಳು ಹಲವರನ್ನು ಬದಲಾವಣೆ ಮಾಡಿತ್ತು. ಹಾಗೆಯೇ ಅವರ ಆದರ್ಶಗಳು ಇತರರಿಗೆ ಮಾದರಿಯಾಗಿದೆ. ಹೊಸಬರ ‘ಶ್ರೀ’ ಎನ್ನುವ ಚಿತ್ರದಲ್ಲಿ ಅಪ್ಪ ಮಗನ ಬಾಂದವ್ಯವನ್ನು ಹೇಳುವ ಪ್ರಯತ್ನ ಮಾಡಲಾಗುತ್ತಿದೆ. ತಂದೆಯಾಗಿ ರಾಘವೇಂದ್ರರಾಜ್ಕುಮಾರ್, ಮಗನಾಗಿ ಚಂದೂಗೌಡ ನಾಯಕ. ರಾಘಣ್ಣ ಹೇಳುವಂತೆ ಅಪ್ಪಾಜಿ ನಡೆದು ಬಂದ ದಾರಿ, ರೀತಿ, ನೀತಿ. ಅವರ ತಿಳುವಳಿಕೆ, ನಡವಳಿಕೆ ಜನರ ಮೇಲೆ ಹೇಗೆ ಪರಿಣಾಮ ಬೀರಿತು. ಕಿರಿ ಮಗನ ಹೆಸರು ಗುರು, ಸೊಸೆ ಶ್ರೀದೇವಿ. ಎರಡು ಹೆಸರುಗಳು ಚಿತ್ರದಲ್ಲಿ ಇರುವುದರಿಂದ ಮನಸ್ಸಿಗೆ ಹತ್ತಿರವಾದ ....
ಡಿಜಿಟಲ್ ಮೂಲಕ ನೇರವಾಗಿ ಬಿಡುಗಡೆಯಾದ ಚಿತ್ರ ತಂತ್ರಜ್ಘಾನ ಬೆಳೆದಂತೆ ಜನರು ಅದಕ್ಕೆ ಹೊಂದಿಕೊಳ್ಳುತ್ತಿದ್ದಾರೆ. ರೀಲ್ ಕಾಲದಿಂದ, ಈಗ ಡಿಜಿಟಲ್ ಯುಗ ಬಂದಿರುವುದರಿಂದ ಎಲ್ಲವು ಅಂಗೈನಲ್ಲೆ ಸಿಗುತ್ತದೆ. ಬೇರೆ ಭಾಷೆಯ ಚಿತ್ರಗಳನ್ನು ಅಮೆಜಾನ್, ನೆಟ್ಫ್ಲಿಕ್ಸ್ನವರು ಖರೀದಿಸುತ್ತರುವಂತೆ, ಕನ್ನಡ ಸಿನಿಮಾಗಳು ಸೇರ್ಪಡೆಯಾಗುತ್ತಾ ಬಂದಿರುವುದು ಆರೋಗ್ಯಕರ ಬೆಳವಣಿಗೆಯಾಗಿದೆ. ಹೆಸರಾಂತ ಜೀ ವಾಹಿನಿ ಅವರ ಜಿ ೫ ಆನ್ಲೈನ್ ಸಂಸ್ಥೆಯು ೧೯೦ ದೇಶಗಳಲ್ಲಿ ತಮ್ಮದೆ ಆದ ವೀಕ್ಷಕರನ್ನು ಸೆಳದುಕೊಂಡಿದೆ. ಅದರಿಂದಲೇ ಹಿಂದಿ, ತಮಿಳು, ಮರಾಠಿ ತೆಲುಗು ಸೇರಿದಂತೆ ಹಲವು ಭಾಷೆಯ ಚಿತ್ರಗಳನ್ನು ಪ್ರಸಾರ ....