*ದಿಗಂತ್ - ತರುಣ್ ಚಂದ್ರ ನಟನೆಯ ನೂತನ ಚಿತ್ರಕ್ಕೆ ಚಾಲನೆ.* ಕಮರ್ ಫ್ಯಾಕ್ಟರಿ ಅರ್ಪಿಸುವ, ಕಮರ್ ಡಿ ಹಾಗೂ ವಿಜಯಲಕ್ಷ್ಮಿ ವೀರ ಮಾಚನನ್ ನಿರ್ಮಿಸುತ್ತಿರುವ ನೂತನ ಚಿತ್ರದ ಮುಹೂರ್ತ ಸಮಾರಂಭ ಮಲ್ಲೇಶ್ವರದ ಶ್ರೀಗಣಪತಿ ದೇವಸ್ಥಾನದಲ್ಲಿ ನೆರವೇರಿತು. ದಿಗಂತ್ ಹಾಗೂ ತರುಣ್ ಚಂದ್ರ ಈ ಚಿತ್ರದ ನಾಯಕರಾಗಿ ನಟಿಸುತ್ತಿದ್ದಾರೆ. ಕಾವ್ಯ ಶೆಟ್ಟಿ ಮತ್ತು ಕೊಮಿಕಾ ಆಂಚಲ್ ಈ ಚಿತ್ರದ ನಾಯಕಿಯರು. ದೇವರ ಮೇಲೆ ಸೆರೆಹಿಡಿಯಲಾದ ಮೊದಲ ಸನ್ನಿವೇಶಕ್ಕೆ ನಿರ್ಮಾಪಕರಾದ ಕಮರ್ ಹಾಗೂ ಕಿರಣ್ ವೆಂಕಟ್ ವೀರಮಾಚನೆನಿ ಆರಂಭ ಫಲಕ ತೋರಿದರು. ವಾಸಿಂ ಕ್ಯಾಮೆರಾ ಚಾಲನೆ ಮಾಡಿದರು. ಶಾಸಕ ರೇಣಕಾಚಾರ್ಯ ಅವರು ಮುಖ್ಯ ಅತಿಥಿಯಾಗಿ ಆಗಮಿಸಿ ಚಿತ್ರತಂಡಕ್ಕೆ ಶುಭ ಕೋರಿದರು. ಮುಂಬೈ ....
*ಸುಜಯ್ ಶಾಸ್ತ್ರಿ ನಿರ್ದೇಶನದಲ್ಲಿ "ಎಲ್ರ ಕಾಲೆಳಿಯುತ್ತೆ ಕಾಲ".* *ಸಂಗೀತದ ಮೂಲಕ ಜನಮನಗೆದ್ದ ಚಂದನ್ ಶೆಟ್ಟಿ ನಟನಾ ಕ್ಷೇತ್ರಕ್ಕೆ ಪಾದಾರ್ಪಣೆ.* ತಮ್ಮ ಹಾಸ್ಯ ಪಾತ್ರಗಳ ಮೂಲಕ ಹೆಸರಾಗಿರುವ ಸುಜಯ್ ಶಾಸ್ತ್ರಿ ನಿರ್ದೇಶನದ "ಎಲ್ರ ಕಾಲೆಳಿಯುತ್ತೆ ಕಾಲ" ಚಿತ್ರದ ಮುಹೂರ್ತ ಸಮಾರಂಭ ಧರ್ಮಗಿರಿ ಶ್ರೀಮಂಜುನಾಥಸ್ವಾಮಿ ದೇವಸ್ಥಾನದಲ್ಲಿ ನೆರವೇರಿತು. ಮೈಸೂರಿನ ಶ್ರೀ ಅರ್ಜುನ ಅವಧೂತ ಮಹಾರಾಜರು ಚಿತ್ರದ ಪ್ರಥಮ ಸನ್ನಿವೇಶಕ್ಕೆ ಆರಂಭ ಫಲಕ ತೋರಿದರು. ಕರ್ನಾಟಕದಲ್ಲಿ ಕನ್ನಡತನ ಮರೆಯಾಗುತ್ತಿದೆ. ನಾವು ಹೇಗೆ ಬೇರೆಭಾಷೆಗಳ ಚಿತ್ರಗಳನ್ನು ಸಬ್ ಟೈಟಲ್ ಮೂಲಕ ನೋಡುತ್ತೀವಲ್ಲಾ, ಹಾಗೆ ಬೇರೆ ಭಾಷೆಗಳಲ್ಲೂ ನಮ್ಮ ಕನ್ನಡ ಚಿತ್ರಗಳು ಬಿಡುಗಡೆಯಾಗಲಿ. ....
*ಫೆಬ್ರವರಿ 11ಕ್ಕೆ ಎಸ್ ಎಸ್ ರವಿಗೌಡ - ದಿವ್ಯ ಸುರೇಶ್ ಅಭಿನಯದ "ರೌಡಿ ಬೇಬಿ" ಚಿತ್ರ ತೆರೆಗೆ.* *ಟ್ರೇಲರ್ ಬಿಡುಗಡೆ ಮಾಡಿ ಶುಭಕೋರಿದ ನಿರ್ಮಾಪಕ ಉಮಾಪತಿ ಶ್ರೀನಿವಾಸಗೌಡ* . ಸುಮುಖ ಎಂಟರ್ ಟೈನರ್ ಅರ್ಪಿಸುವ, ವಾರ್ ಫುಟ್ ಸ್ಟುಡಿಯೋ ನಿರ್ಮಾಣದ "ರೌಡಿ ಬೇಬಿ" ಚಿತ್ರ ಇದೇ ಹನ್ನೊಂದನೇ ತಾರೀಖು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಇತ್ತೀಚೆಗೆ ಈ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭ ನಡೆಯಿತು. ನಿರ್ಮಾಪಕ ಉಮಾಪತಿ ಶ್ರೀನಿವಾಸ ಗೌಡ ಟ್ರೇಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ಸಂಜಯ್ ಗೌಡ, ರಘು ಗೌಡ, ವಿತರಕ ಸುರೇಶ್ ಹಾಗೂ ಚಿತ್ರತಂಡದ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ನಾವು ಮೊದಲ ಸಲ ನಮ್ಮೊಳಗಾದ ....
ಗೌಳಿ ಟೀಸರ್ ಬಿಡುಗಡೆ
‘ಗೌಳಿ’ ಚಿತ್ರದಲ್ಲಿ ನಾಯಕನ ಲುಕ್ ಹೇಗಿರುತ್ತದೆಂದುತಂಡವು ಮಾಹಿತಿಯನ್ನು ಬಿಟ್ಟುಕೊಟ್ಟಿರಲಿಲ್ಲ. ಈಗ ಅದನ್ನು ವಿವರವಾಗಿದೃಶ್ಯರೂಪದಲ್ಲಿ ತೋರಿಸಿದ್ದಾರೆ.ಛಾಯಾಗ್ರಾಹಕ ಮತ್ತು ಸಹ ನಿರ್ದೇಶಕರಾಗಿರುವ ಶೂರ ಮೊದಲಬಾರಿ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದಾರೆ. ಸೋಹನ್ ಫಿಲಿಂ ಫ್ಯಾಕ್ಟರಿಯಡಿ ರಘುಸಿಂಗಂ ನಿರ್ಮಾಣ ಮಾಡಿರುವುದು ಹೊಸ ಅನುಭವ. ಮೂಲತ: ಗೌಳಿಗರು ಮರಾಠಿಗರು. ಮಹಾರಾಷ್ಟ್ರದಿಂದಇಲ್ಲಿಗೆ ಬಂದು ನೆಲಸಿದವರು.
ಲವ್ ಮಾಕ್ಟೇಲ್ಗೆ ಬಿಡುಗಡೆ ದಿನಾಂಕ ಫಿಕ್ಸ್ ‘ಲವ್ ಮಾಕ್ಟೇಲ್-೨’ ಚಿತ್ರದ ಸುದ್ದಿಗೋಷ್ಟಿಯಲ್ಲಿಆರೋಗ್ಯಕರಆರೋಪ-ಪ್ರತ್ಯಾರೋಪಗಳು ಕೇಳಿಬಂದವು.ನಿರ್ಮಾಪಕಿ ಮಿಲನಾನಾಗರಾಜು ಹೇಳುವಂತೆ ಸೆಟ್ದಲ್ಲಿ ನಿರ್ದೇಶಕರ ಕೂಗು ಇಡೀಕೂರ್ಗ್ ಕೇಳುವಂತಿತ್ತು.ಇದಕ್ಕೆಇತರೆ ಸಹ ನಟಿಯರುತಲೆ ಅಲ್ಲಾಡಿಸಿದರು.ಇವರಕೋಪದಿಂದಾಗಿಒಂದುಕಪ್ಕಾಫಿ ನೆಮ್ಮದಿಯಿಂದಕುಡಿಯಲು ಆಗಲಿಲ್ಲವೆಂದು ಹೇಳಿದರು.ಅದಕ್ಕೆಉತ್ತರ ನೀಡಿದ ಕೃಷ್ಣ ನಾನು ಶಾಟ್ಇಟ್ಟುಕಾಯುತ್ತಿರಬೇಕಾದರೆ, ಮಿಲನಾ ಹುಡುಗಿರನ್ನಕರೆದುಕೊಂಡುಕಾಫಿಗೆ ಹೋಗಿದ್ದರು.ಇದಕ್ಕೆ ಕೋಪ ಬರುವುದಿಲ್ಲಾವಾ?ಎಂದು ಹೇಳಿದರು.ನಂತರ ಮಾತು ಮುಂದುವರೆಸಿದ ....
ಲಾಲಿ ಲಾಲಿ ಮಲಗು ರಾಜಕುಮಾರ… ಅಪ್ಪುಗೆ ಗೀತ ನಮನ ಸಲ್ಲಿಸಿದ ಟಿವಿ ವಿಕ್ರಮ ತಂಡ
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ಟಿವಿ ವಿಕ್ರಮ ತಂಡದಿಂದ ಇಂದು ಗೀತ ನಮನ ಸಲ್ಲಿಸಲಾಯಿತು. ಪ್ರೆಸ್ ಕ್ಲಬ್ ನಲ್ಲಿ ನಡೆದ ಈ ಗೀತ ನಮನ ಕಾರ್ಯಕ್ರಮಕ್ಕೆ ರಾಘವೇಂದ್ರ ರಾಜ್ ಕುಮಾರ್, ಪತ್ರಕರ್ತ ಸಂಘದ ಅಧ್ಯಕ್ಷ ಸದಾಶಿವ ಶೆಣೈ, ಮಹೇಂದ್ರ ವಿಕ್ರಮ್ ಹೆಗ್ಡೆ, ಅರ್ಜುನ್ ಜನ್ಯ, ರಾಜೇಶ್ ಕೃಷ್ಣನ್, ನಾಗೇಂದ್ರ ಪ್ರಸಾದ್ ವಿಶೇಷ ಅತಿಥಿಗಳಾಗಿ ಆಗಮಿಸಿದ್ದರು.
ಮಕ್ಕಳ ಶಿಕ್ಷಣಕ್ಕೆ ಭಾರತಿ ವಿಷ್ಣುವರ್ಧನ್ ಕೊಡುಗೆ
ಕೋವಿಡ್ ಕಾಲದಲ್ಲಿ ಮಕ್ಕಳಿಗೆ ಡಿಜಿಟಲ್ ತಂತ್ರಜ್ಞಾನದ ಮೂಲಕ ವಿದ್ಯಾಭ್ಯಾಸ ಇನ್ನೂ ಸುಲಭವಾಗಿಸಿದೆ. ಅರ್ಜುನ್ ಸಾಮ್ರಾಟ್ ಅವರು ತಮ್ಮ ವಿಸ್ತಾ’ಸ್ ಲರ್ನಿಂಗ್ ಆಪ್ ಮೂಲಕ ಮಕ್ಕಳಿಗೆ ಸುಲಭ ದಾರಿಯಲ್ಲಿ ವಿದ್ಯೆ ಕಲಿಸಿಕೊಡಲು ಮುಂದಾಗಿದ್ದಾರೆ. ಇದರ ರಾಯಭಾರಿಯಾಗುವ ಮೂಲಕ ಒಂದು ಭಾಗವಾಗಿ ಹಿರಿಯ ಕಲಾವಿದೆ ಶ್ರೀಮತಿ ಭಾರತಿ ವಿಷ್ಣುವರ್ಧನ್ ಅವರು ಕೈಜೋಡಿಸಿದ್ದಾರೆ.
ಕಾದಂಬರಿಆಧಾರಿತಚಿತ್ರ ಮಾನ ಹಿರಿಯ ಸಾಹಿತಿ ಕುಂ.ವೀರಭದ್ರಪ್ಪ ವಿರಚಿತಕಾದಂಬರಿಯು ‘ಮಾನ’ ಚಿತ್ರವಾಗಿದೆ.ಅನಿಷ್ಟ ಪದ್ದತಿಯಾಗಿದ್ದಜೀತಪದ್ದತಿಯ ಬಗ್ಗೆ ಸಿನಿಮಾವು ಬೆಳಕು ಚೆಲ್ಲುತ್ತದೆ.ಪ್ರಚಾರದ ಸಲುವಾಗಿ ಇತ್ತೀಚೆಗೆ ಸುದ್ದಿಗೋಷ್ಟಿ ನಡೆಯಿತು.ದೇವರಾಜ್ ಮಾತನಾಡಿ ಹಳ್ಳಿಯ ಮುಗ್ದ ವ್ಯಕ್ತಿಯಾಗಿ ಕಾಣಿಸಿಕೊಂಡಿದ್ದೇನೆ. ನನ್ನ ನಟನಾಜೀವನದ ಪ್ರಾರಂಭದಲ್ಲಿಗ್ರಾಮೀಣ ಸೊಗಡಿನಕಥೆಯ ಹಲವು ಚಿತ್ರಗಳಲ್ಲಿ ನಟಿಸಿದ್ದೇನೆ. ಇದರಲ್ಲಿ ವಿಭಿನ್ನವಾಗಿ ಮಾಡಿದ್ದೇನೆ. ತನ್ನ ವಿರುದ್ದ ಸಂಚು ಹೊಡುವವರಿಗೆ ನಗುತ್ತಲೇಉತ್ತರಕೊಡುತ್ತೇನೆ. ಸಂಭಾಷಣೆಗಳು ಹಾಸ್ಯಮಯವಾಗಿ ಮೂಡಿಬಂದಿರುವುದೇ ಹೈಲೈಟ್ಸ್. ಪತ್ನಿಯಾಗಿ ಉಮಾಶ್ರೀ ನಟಿಸಿದ್ದಾರೆ.ಹಿಂದೆ ನಾಟಕಗಳಲ್ಲಿ ....
ರಂಗಭೂಮಿ ಪ್ರತಿಭೆಗಳ ಪ್ರೀತಿಗಿಬ್ಬರು ‘ಪ್ರೀತಿಗಿಬ್ಬರು’ ಚಿತ್ರದಲ್ಲಿ ನಾಯಕಿ ಹೊರತುಪಡಿಸಿ ಉಳಿದ ಕಲಾವಿದರುಗಳು ರಂಗಭೂಮಿ ಹಿನ್ನಲೆಯಿಂದ ಬಂದವರುಎಂಬುದು ವಿಶೇಷ. ಕೆ.ವಿ.ರಾಜು, ಎಂ.ಎಸ್.ರಮೇಶ್ ಬಳಿ ಕೆಲಸ ಕಲಿತಿರುವ ಷಾಂಡಿಲ್ಯ.ಬಿ.ಟಿ ಕಥೆ, ಚಿತ್ರಕತೆ ಬರೆದು ಮೊದಲ ಬಾರಿ ನಿರ್ದೇಶನ ಮಾಡಿದ್ದಾರೆ. ತಿರುಪತಿ ಮೂಲದ ಬಿಲ್ಡರ್ಆಗಿರುವ ಬಿ.ಬಾಲಾಜಿಬೊರ್ಲಿಗೊರ್ಲಅವರುಅಕ್ಷತಾ ಮೂವೀಸ್ ಮುಖಾಂತರ ಬಂಡವಾಳ ಹೂಡಿದ್ದಾರೆ. ರಾಜಕೀಯ, ಕ್ರಿಕೆಟ್ಇದರಲ್ಲಿಒಬ್ಬರು ನೆನಪಿಗೆ ಬರುತ್ತಾರೆ. ಆದರೆ ನಿರ್ದೇಶಕರದೃಷ್ಟಿಯಲ್ಲಿ ಪ್ರೀತಿಎಂದರೆಚಿತ್ರದ ನಾಯಕ, ನಾಯಕಿ ನೆನಪಾಗುತ್ತಾರೆ.ಇಂತಹುದೇ ಅಂಶಗಳನ್ನು ತೆಗೆದುಕೊಂಡುಒಂದು ಹಳ್ಳಿಯಲ್ಲಿ ನಡೆಯುವ ....
*ಸದ್ದು ಮಾಡುತ್ತಿದೆ "ಸಾವಿತ್ರಿ" ಚಿತ್ರದ ಹಾಡುಗಳು..* ಪಿ ಎನ್ ಪಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ಪ್ರಶಾಂತ್ ಕುಮಾರ್ ಹೀಲಲಿಗೆ ನಿರ್ಮಿಸಿರುವ "ಸಾವಿತ್ರಿ" ಚಿತ್ರದ ಹಾಡುಗಳ ಬಿಡುಗಡೆ ಸಮಾರಂಭ ಇತ್ತೀಚೆಗೆ ನಡೆಯಿತು. ಚಿತ್ರದ ಮೂರು ಹಾಡುಗಳು ಹಾಗೂ ಟ್ರೇಲರನ್ನು ಪ್ರದರ್ಶಿಸಲಾಯಿತು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಉಪಾಧ್ಯಕ್ಷ ಉಮೇಶ್ ಬಣಕಾರ್ ಮುಖ್ಯ ಅತಿಥಿಯಾಗಿ ಹ ಆಗಮಿಸಿ ಹಾಡುಗಳನ್ನು ಬಿಡುಗಡೆಗೊಳಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ನಾನು ಮಾಡುವ ಎಲ್ಲಾ ಕಾರ್ಯದಲ್ಲೂ ಅಪ್ಪು ಅವರಿರುತ್ತಾರೆ. ಈ ನೂತನ ವರ್ಷದಲ್ಲಿ ತಮ್ಮನೆಲ್ಲಾ ಮೊದಲ ಬಾರಿಗೆ ಭೇಟಿ ಮಾಡುತ್ತಿದ್ದೇನೆ. ಎಲ್ಲರಿಗೂ ಶುಭಾಶಯ. ಒಳ್ಳೆಯ ತಂಡದೊಂದಿಗೆ ಒಳ್ಳೆಯ ....
ಇದೇ ಶುಕ್ರವಾರಜಾಡಘಟ್ಟ ಬಿಡುಗಡೆ
ಯುವ ಪಡೆಗಳೇ ಸೇರಿಕೊಂಡು ಸಿದ್ದಪಡಿಸಿರುವ ‘ಜಾಡಘಟ್ಟ’ ಚಿತ್ರವುಇದೇ ಶುಕ್ರವಾರದಂದುತೆರೆಕಾಣುತ್ತಿದೆ. ಹತ್ತು ವರ್ಷಗಳಿಂದ ಚಿತ್ರರಂಗದಲ್ಲಿ ಸಂಕಲನಕಾರನಾಗಿಕಿರುತೆರೆ, ಹಿರಿತೆರೆಯಲ್ಲಿಅನುಭವ ಪಡೆದುಕೊಂಡಿರುವಎಸ್.ರಘು ಸಿನಿಮಾಕ್ಕೆಕತೆ,ಚಿತ್ರಕತೆ, ಸಂಭಾಷಣೆ, ಸಂಕಲನ, ನಿರ್ದೇಶನಮತ್ತುನಾಯಕನಾಗಿ ಅಭಿನಯಿಸಿರುವುದು ವಿಶೇಷ. ಸೋದರ ನಾಯಕ,ನಿರ್ದೇಶಕಆಗುತ್ತಿರುವುದರಿಂದ ಶಶಿಮಣಿ ನಿರ್ಮಾಣ ಮಾಡುವುದರಜತೆಗೆಒಂದು ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಹಾಸನ ಜಿಲ್ಲೆ ಅರಸಿಕೆರೆ ತಾಲ್ಲೋಕಿನಲ್ಲಿಜಾಡಘಟ್ಟಎನ್ನುವ ಸ್ಥಳವಿದೆ.
ಚಿತ್ರೀಕರಣ ಮುಗಿಸಿದ ಯುಟರ್ನ್ ೨
ಹಾರರ್ ಅಂಶಗಳನ್ನು ಒಳಗೊಂಡಿದ್ದು, ಪಿಜ್ಜಾ ಸರಬರಾಜು ಮಾಡುವ ವ್ಯಕ್ತಿಯ ಸುತ್ತಕಥೆ ಹೋಗುವ ‘ಯುಟರ್ನ್ ೨’ ಸಿನಿಮಾದಚಿತ್ರೀಕರಣವು ಬೆಂಗಳೂರು, ಬಿಡದಿ, ಹೊನ್ನಾವರ ಸುಂದರ ತಾಣಗಳಲ್ಲಿ ನಡೆದಿದೆ.ನೋಡುಗರುಇಷ್ಟಪಡುವಂತಹಚಿತ್ರಕಥೆಇರಲಿದ್ದು, ಜತೆಗೆ ಸಾಮಾಜಿಕ ಸಂದರ್ಭಗಳ ಸನ್ನಿವೇಶಗಳು ಕಾಣಿಸಿಕೊಳ್ಳಲಿದೆ. ಸಿನಿಮಾಕ್ಕೆಚಿತ್ರಕಥೆ,ಸಂಭಾಷಣೆ, ಸಾಹಿತ್ಯ, ಸಂಗೀತ, ನಿರ್ದೇಶನ ಮಾಡಿರುವಚಂದ್ರುಓಬಯ್ಯಒಂದು ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಇದಕ್ಕೂ ಮುನ್ನಇವರುಎರಡುಕಾದಂಬರಿ ಮತ್ತುಎರಡು ಕಿರುಕಥೆಗಳನ್ನು ಬರೆದಿದ್ದು,
*ಫೆಬ್ರವರಿಯಲ್ಲಿ ಫೋರ್ ವಾಲ್ಸ್ ಸಿನಿಮಾ ತೆರೆಗೆ...ಅಚ್ಯುತ್ ಸಿನಿಮಾ ವಿತರಣೆ ಮಾಡಲಿದ್ದಾರೆ ಸತ್ಯಪ್ರಕಾಶ್* ಟೈಟಲ್, ಪೋಸ್ಟರ್, ಟೀಸರ್ ಹೀಗೆ ಪ್ರತಿ ಹಂತದಲ್ಲೂ ಕ್ಯೂರಿಯಾಸಿಟಿ ಹುಟ್ಟಿಸಿರುವ ಸಿನಿಮಾ ಫೋರ್ ವಾಲ್ಸ್.. ಫರ್ ದ ಫಸ್ಟ್ ಟೈಮ್ ಖ್ಯಾತ ನಟ ಅಚ್ಯುತ್ ಕುಮಾರ್ ಹೀರೋ ಆಗಿ ನಟಿಸಿರುವ ‘ಫೋರ್ ವಾಲ್ಸ್’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಇಂದು ಸುದ್ದಿಗೋಷ್ಠಿ ನಡೆಸಿದ ಚಿತ್ರತಂಡ ಈ ಬಗ್ಗೆ ಮಾಹಿತಿ ಹಂಚಿಕೊಂಡಿತು. ಅಚ್ಯುತ್, ಸುಜಯ್, ಜಾಹ್ನವಿ, ಭಾಸ್ಕರ್ ನೀನಾಸಂ, ಡಾ.ಪವಿತ್ರ, ರಚನಾ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿದ್ದರು. ಫೆಬ್ರವರಿಯಲ್ಲಿ ‘ಫೋರ್ ವಾಲ್ಸ್’ ಸಿನಿಮಾ ಬಿಡುಗಡೆ ಬಗ್ಗೆ ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ. ....
*ಕಣ್ಮನ ಸೆಳೆಯುತ್ತಿದೆ "ಕಡಲೂರ ಕಣ್ಮಣಿ" ಚಿತ್ರದ ಹಾಡು.* ರಾಮ್ ಪ್ರಸನ್ನ ಹುಣಸೂರು ನಿರ್ದೇಶನದ "ಕಡಲೂರ ಕಣ್ಮಣಿ" ಚಿತ್ರಕ್ಕಾಗಿ ಮಧುರಾಮ್ ಅವರು ಬರೆದಿರುವ "ಎದೆಯೊಳಗೆ ಈ ಪ್ರೀತಿ ಶುರುವಾಯಿತು ನನಗೆ" ಎಂಬ ಹಾಡು ಇತ್ತೀಚೆಗೆ A2 music ಮೂಲಕ ಬಿಡುಗಡೆಯಾಯಿತು. ನನಗೆ ಹದಿನಾಲ್ಕು ವರ್ಷಗಳಿಂದ ಕನ್ನಡ ಚಿತ್ರರಂಗದೊಂದಿಗೆ ನಂಟು. ಈ ಚಿತ್ರ ಆರಂಭವಾದ ಒಂದು ಪ್ರಸಂಗ ನಿಮ್ಮ ಮುಂದೆ ಹಂಚಿಕೊಳ್ಳುತ್ತೇನೆ. ಜೀವನದಲ್ಲಿ ನೊಂದ ನಾನು ಆತ್ಮಹತ್ಯೆ ಮಾಡಿಕೊಳ್ಳಲು ಸಮುದ್ರದ ಬಳಿ ಹೋಗುತ್ತಿದೆ. ಇನೇನ್ನೂ ಆತ್ಮಹತ್ಯೆ ಮಾಡಿಕೊಳ್ಳುವಷ್ಟರಲ್ಲಿ ಹಿಂದೆ ನನ್ನ ತಂದೆ-ತಾಯಿ ಕಂಡರು. ಆಗ ನಾನು ನನ್ನ ನಿರ್ಧಾರದಿಂದ ಹಿಂದೆ ಸರಿದೆ. ಈ ಸಿನಿಮಾದ ನಿರ್ಮಾಪಕರು ನನ್ನ ಸ್ನೇಹಿತರು. ....
*ಬಿಡುಗಡೆಯಾಯಿತು "ಖಡಕ್ ಹಳ್ಳಿಹುಡುಗರು" ಚಿತ್ರದ ಕನ್ನಡಾಭಿಮಾನದ ಗೀತೆ.* *ರಾಘವೇಂದ್ರ ರಾಜಕುಮಾರ್ ಹಾಡಿರುವ ಹಾಡಿಗೆ ಭಾರಿ ಮೆಚ್ಚುಗೆ.* ಹೊಸಬರ ತಂಡವೊಂದು ಹೊಸರೀತಿಯ ಚಿತ್ರ ನಿರ್ಮಾಣಕ್ಕೆ ಮುಂದಾಗಿದೆ. ಆ ಚಿತ್ರಕ್ಕೆ "ಖಡಕ್ ಹಳ್ಳಿ ಹುಡುಗರು" ಎಂದು ಹೆಸರಿಡಲಾಗಿದೆ. ಹಳ್ಳಿ ಹಿನ್ನೆಲೆಯಿಂದ ಬಂದಿರುವ ಎಂ ಯು ಪ್ರಸನ್ನ ಹಳ್ಳಿ ನಿರ್ದೇಶಿಸಲಿರುವ ಈ ಚಿತ್ರದ ಕನ್ನಡಾಭಿಮಾನದ ಹಾಡೊಂದನ್ನು ರಾಘವೇಂದ್ರ ರಾಜಕುಮಾರ್ ಹಾಡಿದ್ದಾರೆ. ಈ ಹಾಡಿನ ಬಿಡುಗಡೆ ಸಮಾರಂಭ ಗಣರಾಜ್ಯೋತ್ಸವದ ಶುಭದಿನ ನೆರವೇರಿತು. ಖ್ಯಾತ ನಿರ್ಮಾಪಕ ರೆಹಮಾನ್ ಹಾಡನ್ನು ಬಿಡುಗಡೆ ಮಾಡಿದರು. ಹಾಡಿಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಸಮಾರಂಭದ ....
*ವಿಭಿನ್ನ ಕಥಾಹಂದರದ "ಸ್ಥಬ್ಧ" ಚಿತ್ರಕ್ಕೆ ಚಾಲನೆ.* *ಪ್ರಮುಖಪಾತ್ರಗಳಲ್ಲಿ ರಾಘವೇಂದ್ರ ರಾಜಕುಮಾರ್ , ಪ್ರತಾಪ್ ಸಿಂಹ - ಹರ್ಷಿಕಾ ಪೂಣಚ್ಛ.* ರಾಘವೇಂದ್ರ ರಾಜಕುಮಾರ್ ಅಭಿನಯದ "ಸ್ತಬ್ಧ" ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ಕರ್ನಾಟಕ ಚಲನಚಿತ್ರ ಕಲಾವಿದರ ಸಂಘದಲ್ಲಿ ನಡೆಯಿತು. ಚಿತ್ರದ ಮೊದಲ ಸನ್ನಿವೇಶಕ್ಕೆ ಶಾಸಕ ರಾಮಲಿಂಗ ರೆಡ್ಡಿ ಅವರ ಪುತ್ರ ಶ್ರೀರಾಜ್ ರಾಮಲಿಂಗಾರೆಡ್ಡಿ ಆರಂಭಫಲಕ ತೋರಿದರು. ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ||ಸಿ.ಸೋಮಶೇಖರ್ ಕ್ಯಾಮೆರಾ ಚಾಲನೆ ಮಾಡಿದರು. ವೈದ್ಯರಾಗಿರುವ ಡಾ||ಡಿ.ವಿ.ವಿದ್ಯಾಸಾಗರ್ ನಿರ್ಮಾಣ ಮಾಡುತ್ತಿರುವ ಈ ಚಿತ್ರವನ್ನು ಲಾಲಿರಾಘವ ನಿರ್ದೇಶಿಸುತ್ತಿದ್ದಾರೆ. ....
ಡಾ.ರಾಜ್ಕುಮಾರ್ ಪಾತ್ರಕ್ಕೆಜೀವತುಂಬುತ್ತಿದ್ದರು–ಎಸ್.ಎ.ಚಿನ್ನೆಗೌಡ ನೂರಐವತ್ತು ಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಿರುವ ಗೌರಿಶ್ರೀ ಹೊಸ ಪ್ರಯತ್ನಎನ್ನುವಂತೆ ‘ಜನರಕ್ಷಕ’ ಚಿತ್ರಕ್ಕೆ ನಿರ್ಮಾಣ, ನಿರ್ದೇಶನಜೊತೆಗೆ ನಾಯಕಿಯಾಗಿ ಅಭಿನಯಿಸಿದ್ದಾರೆ. ಅಡಿಬರಹದಲ್ಲಿ ‘ನಾ ಭಕ್ಷಕ’ ಎಂದು ಹೇಳಿಕೊಂಡಿದೆ.ಸಿನಿಮಾದ ಪೋಸ್ಟರ್ನ್ನು ಬಿಡುಗಡೆ ಮಾಡಿದ ಹಿರಿಯ ನಿರ್ಮಾಪಕಎಸ್.ಎ.ಚಿನ್ನೆಗೌಡ ಮಾತನಾಡಿಡಾ.ರಾಜ್ಕುಮಾರ್ ಹೆಸರು ಮೊದಲು ಮುತ್ತುರಾಜ್ಎಂಬುದಾಗಿಇತ್ತು. ‘ಬೇಡರಕಣ್ಣಪ್ಪ’ ನಿರ್ದೇಶಕ ಹೆಚ್.ಎಲ್.ಎನ್.ಸಿಂಹ ರವರು ....
*ಪ್ರಣಯರಾಜನ ಕನಸಿನ ಕೂಸು "ಆರ್ಟ್ ಎನ್ ಯು" ಗೆ ಅಧಿಕೃತ ಚಾಲನೆ* . ತಮ್ಮ ಅಮೋಘ ಅಭಿನಯದ ಮೂಲಕ ಜನಮನಸೂರೆಗೊಂಡಿರುವ, ಕಳೆದ 54 ವರ್ಷಗಳಿಂದ ಕನ್ನಡ ಕಲಾದೇವಿಗೆ ಸೇವೆ ಸಲ್ಲಿಸುತ್ತಾ ಬಂದಿರುವ ಪ್ರಣಯರಾಜ ಶ್ರೀನಾಥ್ ಅವರ ಕನಸಿನ ಕೂಸು "ಆರ್ಟ್ ಎನ್ ಯು". ಈ ಸಂಸ್ಥೆಯ ಉದ್ಘಾಟನಾ ಸಮಾರಂಭ ಇತ್ತೀಚೆಗೆ ನಡೆಯಿತು. ಖ್ಯಾತ ನಟ ಉಪೇಂದ್ರ ಈ ಸಂಸ್ಥೆಯನ್ನು ಉದ್ಘಾಟಿಸಬೇಕಿತ್ತು. ಆದರೆ ಅನಿವಾರ್ಯ ಕಾರಣದಿಂದ ನಾನು ಬರಲಿಕ್ಕೆ ಆಗುತ್ತಿಲ್ಲ. ಶ್ರೀನಾಥ್ ಸರ್ ಅವರ ಈ ಪ್ರಯತ್ನಕ್ಕೆ ಒಳ್ಳೆಯದಾಗಲಿ. ಸದಾ ನಾನು ಅವರೊಂದಿಗಿರುತ್ತೇನೆ ಎಂಬ ಧ್ವನಿ ಸಂದೇಶ ಕಳುಹಿಸಿ ಉಪೇಂದ್ರ ಶುಭ ಕೋರಿದರು. " ಆರ್ಟ್ ಎನ್ ಯು" ಸಂಸ್ಥೆಯಲ್ಲಿ ನಟನೆ, ನಿರ್ದೇಶನ, ಕಥೆ ಹಾಗೂ ....
ಸಚಿತ್ ಫಿಲಂಸ್ ಲಾಂಛನದಲ್ಲಿ ವೆಂಕಟ ಗೌಡ ಮತ್ತು ಮೀನಾ ವೆಂಕಟ್ ಗೌಡ ನಿರ್ಮಾಣ, ಶಶಾಂಕ್ ರಾಜ್ ನಿರ್ದೇಶನದಲ್ಲಿ ನಿರ್ಮಾಣವಾಗುತ್ತಿರುವ ಚಿತ್ರ ನಾಚಿ. ಗೂಳಿಹಟ್ಟಿ, ಹಾಲು ತುಪ್ಪ ಮತ್ತು ಉಡುಂಬಾ ಸಿನಿಮಾಗಳಲ್ಲಿ ನಾಯಕನಾಗಿ ನಟಿಸಿದ್ದವರು ಪವನ್ ಶೌರ್ಯ. ಈಗ ನಾಚಿ ಚಿತ್ರದಲ್ಲಿಯೂ ನಾಯಕನಟನಾಗಿ ನಟಿಸುತ್ತಿದ್ದಾರೆ. ಕ್ರೇಜ಼ಿಸ್ಟಾರ್ ರವಿಚಂದ್ರನ್ ಅವರ ಗರಡಿಯಲ್ಲಿ ಕೆಲಸ ಕಲಿತು, ನಂತರ ಯುಗಯುಗಗಳೇ ಸಾಗಲಿ, ಉಡ, ಮಾವಳ್ಳಿ ಮಿಲ್ಟ್ರಿ ಹೋಟೆಲ್, ಗೂಳಿಹಟ್ಟಿ, ಹನಿ ಹನಿ ಇಬ್ಬನಿ, ಹಾಲುತುಪ್ಪ ಮುಂತಾದ ಸಿನಿಮಾಗಳನ್ನು ನಿರ್ದೇಶಿಸಿರುವ ಶಶಾಂಕ್ ರಾಜ್ `ನಾಚಿ’ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಎಲ್ಲ ಅಂದುಕೊಂಡಂತೇ ಆಗಿದ್ದಿದ್ದರೆ ಅಕ್ಟೋಬರ್ 29ರಂದು ಅದ್ದೂರಿ ....
*ಸತ್ಯಹೆಗಡೆ ಸ್ಟುಡಿಯೋಸ್ ಮೂಲಕ ನಿರ್ಮಾಣವಾಗಿದೆ ಎರಡು ಮನಸೆಳೆಯುವ ಕಿರುಚಿತ್ರಗಳು.* ಅಭಿಷೇಕ್ ಕಾಸರಗೋಡು ನಿರ್ದೇಶನದ "ಪಪ್ಪೆಟ್ಸ್" ಹಾಗೂ ಮಂಸೋರೆ ನಿರ್ದೇಶನದ "ದಿ ಕ್ರಿಟಿಕ್" ಹತ್ತು ನಿಮಿಷ ಅವಧಿಯ ಈ ಎರಡು ಕಿರುಚಿತ್ರಗಳ ಪ್ರದರ್ಶನ ಹಾಗೂ ಪತ್ರಿಕಾಗೋಷ್ಠಿ ಇತ್ತೀಚೆಗೆ ನಡೆಯಿತು. ಕಳೆದ ಇಪ್ಪತ್ತಾರು ವರ್ಷಗಳಿಂದ ಛಾಯಾಗ್ರಹಕರಾಗಿ ಕಾರ್ಯ ನಿರ್ವಹಿಸುತ್ತಿರುವ ಸತ್ಯ ಹೆಗಡೆ ಈ ಕಿರುಚಿತ್ರಗಳನ್ನು ನಿರ್ಮಾಣ ಮಾಡುವ ಮೂಲಕ ನಿರ್ಮಾಪಕರಾಗಿದ್ದಾರೆ. ಮೊದಲು ಅಭಿಷೇಕ್ ಕಾಸರಗೋಡು ನಿರ್ದೇಶನದ "ಪಪ್ಪೆಟ್ಸ್" ಕಿರುಚಿತ್ರದ ಪ್ರದರ್ಶನ ನಡೆಯಿತು. ಗೌತಮಿ ಜಾಧವ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. . ನನಗೆ ಅವಕಾಶ ನೀಡಿದ ಸತ್ಯ ಹೆಗಡೆ ....