ಪತ್ರಕರ್ತರ ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡಮಿ ಯಾವುದೇ ಚಿತ್ರ ಬಿಡುಗಡೆಯಾದರೆ ಅದರ ಮಾಹಿತಿ ಮಾದ್ಯಮದ ಮೂಲಕ ಲಭ್ಯವಾಗುತ್ತದೆ. ಅದರಿಂದಲೇ ಪತ್ರಕರ್ತರು ಚಿತ್ರರಂಗ ಮತ್ತು ಮಾದ್ಯಮಕ್ಕೆ ಸೇತುವೆಯಾಗಿರುತ್ತಾರೆ. ಪ್ರತಿ ವರ್ಷ ಉತ್ತಮ ಚಿತ್ರಗಳು, ಕಲಾವಿದರು, ತಂತ್ರಜ್ಘರಿಗೆ ರಾಜ್ಯ ಸರ್ಕಾರದಿಂದ ಪ್ರಶಸ್ತಿಗಳನ್ನು ನೀಡುವ ಸಂಪ್ರದಾಯ ಬೆಳೆದುಬಂದಿದೆ. ಈ ಸಂದರ್ಭದಲ್ಲಿ ಪ್ರಶಸ್ತಿಗೆ ವಂಚಿತರಾದವರು ತಮ್ಮ ಬೇಸರವನ್ನು ಮಾದ್ಯಮದವರೊಂದಿಗೆ ಹಂಚಿಕೊಳ್ಳುತ್ತಾರೆ. ಈಗ ಅಂತಹುದೇ ದಕ್ಷಿಣ ಭಾರತದಲ್ಲಿ ಮೊದಲು ಎನ್ನುವಂತೆ ಸ್ಯಾಂಡಲ್ವುಡ್ ಪತ್ರಕರ್ತರು ಸೇರಿಕೊಂಡು ‘ಚಂದನವನ ....
ಪ್ರಚಲಿತ ಸಮಾಜದಲ್ಲಿ ನಡೆಯುವ ಘಟನೆಗಳ ಗಾಥೆ ಓದಿದ್ದು ಇಂಜಿನಿಯರಿಂಗ್, ಅಂತರಾಳದಲ್ಲಿ ಆಸೆ ಹುಟ್ಟಿದ್ದು ಚಿತ್ರರಂಗ. ಅದರಂತೆ ಉದ್ಯೋಗಕ್ಕೆ ತಾತ್ಕಲಿಕ ರಜೆ ತೆಗೆದುಕೊಂಡಿರುವ ಸ್ವಾಮಿ.ವೈ.ಬಿ.ಎನ್ ‘ಧೀರನ್’ ಚಿತ್ರಕ್ಕೆ ರಚನೆ, ಎರಡು ಹಾಡಿಗೆ ಸಾಹಿತ್ಯ, ನಿರ್ದೇಶನ ಜೊತೆಗೆ ನಾಯಕನಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಹಾಗಂತ ನೇರ ಬಣ್ಣದ ಲೋಕಕ್ಕೆ ಕಾಲಿಟ್ಟಿಲ್ಲ. ಹತ್ತು ವರ್ಷಗಳ ಕಾಲ ಹಲವು ನಿರ್ದೇಶಕರ ಬಳಿ ಅನುಭವ ಪಡೆದುಕೊಂಡ ಧೈರ್ಯದಿಂದಲೇ ಇಂತಹ ಸಾಹಸಕ್ಕೆ ಕೈ ಹಾಕಿದ್ದಾರೆ. ದಿ ರನ್, ಥೀರೇಂದ್ರಕುಮಾರ್ ಅಂತಲೂ ಶೀರ್ಷಿಕೆಗೆ ಹೋಲಿಸಬಹುದು. ಪ್ರಸಕ್ತ ಸಮಾಜದಲ್ಲಿ ನಡೆಯುವ ....
ಚಿತ್ರರಂಗಕ್ಕೆ ಗಣೇಶ್ ಸೋದರ ನಟ ಗಣೇಶ್ ಕಿರಿಯ ಸೋದರ ಮಹೇಶ್ ಕೆಲವು ಚಿತ್ರಗಳಲ್ಲಿ ನಟಿಸಿದ್ದರು. ಈಗ ಮತ್ತೋಬ್ಬ ತಮ್ಮ ಉಮೇಶ್ ‘ನಾನೇ ರಾಜ’ ಚಿತ್ರದ ಮೂಲಕ ಸೂರಜ್ಕೃಷ್ಣ ಹೆಸರಿನೊಂದಿಗೆ ನಾಯಕನಾಗಿ ಗುರುತಿಸಿಕೊಂಡಿದ್ದಾರೆ. ೧೯೮೨ರಂದು ರವಿಚಂದ್ರನ್ ಮೊದಲ ಚಿತ್ರ ಇದೇ ಹೆಸರಿನಲ್ಲಿ ಬಿಡುಗಡೆಗೊಂಡಿತ್ತು. ಮನರಂಜನೆ, ಸಾಹಸ ಮತ್ತು ಪ್ರೀತಿ ಕತೆ ಹೊಂದಿದೆ. ಅಜ್ಜಿಯ ಮುದ್ದಿನ ಮೊಮ್ಮಗ, ಸ್ನೇಹಿತರ ಅಚ್ಚುಮೆಚ್ಚಿನ ಗೆಳೆಯ ರಾಜ, ಮನೆಗೆ ಮಾರಿ ಊರಿಗೆ ಉಪಕಾರಿ ಎನ್ನುವ ಹಾಗೆ ಯಾರೇ ಯಾವ ಸಮಯದಲ್ಲೂ ಸಹಾಯ ಕೇಳಿದರೂ ಮುಂದಾಗುವ ಅಪಾಯವನ್ನು ಲೆಕ್ಕಿಸದೆ ಸಹಾಯ ಮಾಡುವ ಗುಣವುಳ್ಳವನು. ಅಕಸ್ಮಾತ್ ಸಿಕ್ಕ ಹುಡುಗಿಯೊಬ್ಬಳು ....
ಸಿಲಿಕಾನ್ ಸಿಟಿಯಲ್ಲಿ ಗಿರಿಗಿಟ್ ಅಬ್ಬರ ಬೆಂಗಳೂರಿನಲ್ಲಿ ಎಲ್ಲಾ ಭಾಷೆಯ ಚಿತ್ರಗಳನ್ನು ಜನರು ನೋಡುತ್ತಾರೆ. ಅದರಿಂದಲೇ ಟಾಲಿವುಡ್, ಬಾಲಿವುಡ್, ಕಾಲಿವುಡ್, ಮಾಲಿವುಡ್ ಚಿತ್ರಗಳು ಹೆಚ್ಚಾಗಿ ತೆರೆಕಾಣುತ್ತವೆ. ಆ ಸಾಲಿಗೆ ಕೋಸ್ಟಲ್ವುಡ್ನ ತುಳು ಚಿತ್ರವು ಸೇರಿಕೊಂಡಿದೆ. ಅಪರೂಪಕ್ಕೆ ಎನ್ನುವಂತೆ ಒಂದು ಕಡೆ ಈ ಭಾಷೆಯ ಸಿನಿಮಾ ಬಿಡುಗಡೆಗೊಂಡು ಸುದ್ದಿಯಾಗದೆ ಮಾಯವಾಗುತ್ತಿತ್ತು. ಈಗ ‘ಗಿರಿಗಿಟ್’ ಎನ್ನುವ ಹಾಸ್ಯ ತುಳು ಸಿನಿಮಾವು ಕಳೆದ ವಾರ ಬೆಂಗಳೂರಿನ ೧೧ ಕೇಂದ್ರಗಳಲ್ಲಿ ವಿತರಕ ಜಯಣ್ಣ ಶಿಪಾರಸ್ಸಿನ ಮೇರೆಗೆ ತೆರೆ ಕಂಡಿತ್ತು. ಮಾಲ್ಗಳು ಒಲ್ಲದ ಮನಸ್ಸಿನಿಂದ ಬಿಡುಗಡೆ ಮಾಡಿದ್ದರು. ಮುಂದೆ ಇದರ ....
ಹೊಸಬರ ವಿಕ್ರಮ ಚಿತ್ರ ಮಹೂರ್ತ ಜನರು ಅನಿರೀಕ್ಷಿತ ಕತೆಗಳನ್ನು ಇಷ್ಟಪಡುತ್ತಾರೆಂದು ತಿಳಿದಿರುವ ಮಂಡ್ಯಾದ ಶ್ರೀಯುತ್ ‘ವಿಕ್ರಮ ಚಿತ್ರ’ ಸಿನಿಮಾಕ್ಕೆ ರಚನೆ,ಚಿತ್ರಕತೆ, ನಿರ್ದೇಶನ ಜವಬ್ದಾರಿ, ಇದರೊಂದಿಗೆ ಕಾಲೇಜು ಹುಡುಗನ ಪಾತ್ರದಲ್ಲಿ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇವರ ಕುರಿತು ಹೇಳುವುದಾದರೆ ಎಂಟಿಎ ಮುಗಿಸಿ ಉತ್ತಮ ಹುದ್ದೆಯಲ್ಲಿದ್ದರೂ ಬಣ್ಣದ ವ್ಯಾಮೋಹದಿಂದ ಕೆಲಸಕ್ಕೆ ಬೆನ್ನು ತೋರಿಸಿ ಪೂರ್ಣ ಪ್ರಮಾಣದಲ್ಲಿ ಇದರಲ್ಲಿ ತೊಡಗಿಕೊಂಡಿದ್ದಾರೆ. ಕರ್ವ ಸೇರಿದಂತೆ ಹಲವರ ಬಳಿ ಅನುಭವ ಪಡೆದುಕೊಂಡು, ಗ್ಯಾಪ್ನಲ್ಲಿ ಧಾರವಾಹಿ, ಸಣ್ಣ ಪುಟ್ಟ ಪಾತ್ರಗಳಲ್ಲಿ ನಟನೆ ....
ಟಕ್ಕರ್ಗೆ ದರ್ಶನ್ರಿಂದ ಬಂಪರ್ ದರ್ಶನ್ ಹತ್ತಿರದ ಸಂಬಂದಿ ಮನೋಜ್ ನಾಯಕನಾಗಿ ನಟಿಸಿರುವ ‘ಟಕ್ಕರ್’ ಚಿತ್ರದ ಶುರುವಿನಿಂದಲೂ ಕುರುಕ್ಷೇತ್ರದ ದುಯೋರ್ಧನ ಸಲಹೆ, ಸಹಕಾರ ನೀಡುತ್ತಿರುವುದರಿಂದ ಬಿಡುಗಡೆ ಮುಂಚೆ ಬಂಪರ್ ಹೊಡೆದಂತೆ ಆಗಿದೆ ಎಂಬುದಾಗಿ ತಂಡವು ಆಶಾಭಾವನೆಯಲ್ಲಿದೆ. ಸದರಿ ವಿಷಯವನ್ನು ನಿರ್ಮಾಪಕ ಕೆ.ಎನ್.ನಾಗೇಶ್ಕೋಗಿಲು ಧ್ವನಿಸಾಂದ್ರಿಕೆ ಅನಾವರಣ ಸಂದರ್ಭದಲ್ಲಿ ಖುಷಿಯಿಂದ ಹೇಳಿಕೊಂಡರು. ಮೊದಲ ಭೇಟಿಯಲ್ಲೆ ನಿರ್ಮಾಪಕರನ್ನು ಮೊದಲು ಉದ್ಯಮದಲ್ಲಿ ಉಳಿಸುವ ಕೆಲಸ ಮಾಡಬೇಕು ಅಂತ ಕಿವಿಮಾತನ್ನು ತಂಡಕ್ಕೆ ಹೇಳಿದರು. ಚಿತ್ರೀಕರಣದ ಸಮಯದಲ್ಲಿ ಏನೇನು ಆಗುತ್ತಿದೆ ಎಂದು ....
ಮೂಡನಂಬಿಕೆ, ಕಂದಾಚಾರ ನಿರ್ಮೂಲನ ಮಾಡುವ ಚಿತ್ರ ಜಗತ್ತು ೨೧ನೇ ಶತಮಾನದಲ್ಲಿ ಇದ್ದರೂ ಜನರು ಮೂಡನಂಬಿಕೆ, ಕಂದಾಚಾರಗಳನ್ನು ನಂಬುತ್ತಲೆ ಇದ್ದಾರೆ. ಇದರಿಂದ ಅಮಾಯಕ ಜನರು ತತ್ತರಕ್ಕೆ ಒಳಗಾಗುತ್ತಿದ್ದಾರೆ. ಇಂತಹ ನಂಬಿಕೆಗಳನ್ನು ಹೋಗಲಾಡಿಸಿ, ಬದಲಾವಣೆ ಸಾರುವ ‘ಆವಂತಿಕ’ ಚಿತ್ರವೊಂದು ತೆರೆಗೆ ಬರಲು ಸಜ್ಜಾಗಿದೆ. ತಾಯಿ ಮಗನ ಬಾಂದವ್ಯದ ಕತೆಯಲ್ಲಿ ಇದರ ಅಡಿಗೆ ಸಿಲುಕಿದ ಹಾಗೂ ನಿಧಿ ಆಸೆಗಾಗಿ ಮಗನಿಗೆ ತೊಂದರೆ ಕೊಡುತ್ತಾರೆ. ಇದರ ವಿರುದ್ದ ಹೋರಾಡಿ ಮಗನನ್ನು ಹೇಗೆ ರಕ್ಷಿಸಿಕೊಳ್ಳುತ್ತಾಳೆ. ಹಾಗೆಯೇ ಬದಲಾವಣೆ ಮಾಡಲು ಯಾವ ರೀತಿಯಲ್ಲಿ ಶ್ರಮಪಡುತ್ತಾಳೆ ಎಂಬುದು ಒಂದು ಏಳೆಯ ....
ವಿಜ್ಘಾನಿಯ ವಿಜ್ಘಾನದ ಕತೆ ಬಣ್ಣದ ಲೋಕ ಅಷ್ಟು ಸುಲಭವಾಗಿ ಮರೆಯಲಿಕ್ಕೆ ಸಾಧ್ಯವಿಲ್ಲ. ಎಲ್ಲೇ ಹೋದರೂ ಅದು ಕಾಡುತ್ತಲೇ ಇರುತ್ತದೆ. ಇದನ್ನು ಹೇಳಲು ಪೀಠಿಕೆ ಇದೆ. ಸುಂದರ್ರಾಜ್-ಪ್ರಮೀಳಾಜೋಷಾಯ್ ಹತ್ತಿರದ ಸಂಬಂದಿ ತೇಜ್ ಬಾಲಕನಾಗಿ ಶಂಕರ್ನಾಗ್ ಅಭಿನಯದ ‘ಮಹೇಶ್ವರ’ ಚಿತ್ರದಲ್ಲಿ ಅಭಿನಯಿಸಿ, ಮೀಸೆ ಚಿಗುರಿದಾಗದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ಮುಂದೆ ಅಪ್ಪನ ಬಯಕೆಯಂತೆ ವಿದ್ಯಾಭ್ಯಾಸದ ಕಡೆ ಗಮನ ಹರಿಸಿ ಪಿ.ಹೆಚ್ಡಿ ಮುಗಿಸಿ, ವಿಜ್ಘಾನಿಯಾಗಿ ಸಿಂಗಪೂರ್ದಲ್ಲಿ ಕಚೇರಿಯನ್ನು ತೆರೆದಿದ್ದಾರೆ. ಆದರೆ ನಟನೆ ಗೀಳು ಮಾಸದ ಕಾರಣ ಮಧ್ಯೆ ಎರಡು ತಮಿಳು ಚಿತ್ರಗಳಲ್ಲಿ ನಟಿಸಿದ್ದರು. ಆದರೂ ಮಾತೃಭಾಷೆಯಲ್ಲಿ ....
ಹೊಸ ತಂತ್ರಜ್ಘಾನದಲ್ಲಿ ನಿಷ್ಕರ್ಷ ೧೯೯೪ರಲ್ಲಿ ಬಿಡುಗಡೆಗೊಂಡ ‘ನಿಷ್ಕರ್ಷ’ ಸೂಪರ್ ಹಿಟ್ ಚಿತ್ರದಲ್ಲಿ ಡಾ.ವಿಷ್ಣುವರ್ಧನ್, ಅನಂತ್ನಾಗ್, ಸುಮನ್ನಗರ್ಕರ್, ಪ್ರಕಾಶ್ರೈ, ರಮೇಶ್ಭಟ್ ಮತ್ತು ವೈಟ್ ಕಾಲರ್ ವಿಲನ್ ಆಗಿ ಬಿ.ಸಿ.ಪಾಟೀಲ್ ಮೊದಲ ಬಾರಿ ಬಣ್ಣ ಹಚ್ಚಿದ್ದರು. ರಾಜ್ಯ ಸರ್ಕಾರದಿಂದ ಮೂರು ಪ್ರಶಸ್ತಿಗಳು, ಉದಯ ವಾಹಿನಿಯಿಂದ ಒಂಬತ್ತು ಪ್ರಶಸ್ತಿಗಳನ್ನು ದಕ್ಕಿಸಿಕೊಂಡಿತು. ಸದರಿ ಚಿತ್ರಕ್ಕೆ ಅಧುನಿಕ ತಂತ್ರಜ್ಘಾನದ ಸ್ಪರ್ಶ ನೀಡಿದೆ. ಇದರನ್ವಯ ಮಾಹಿತಿ ನೀಡಲು ನಿರ್ಮಾಪಕಿ ವನಜಾ.ಬಿ.ಪಾಟೀಲ್ ಮಾದ್ಯಮದವರನ್ನು ಭೇಟಿ ಮಾಡಿದ್ದರು. ಬಿ.ಸಿ.ಪಾಟೀಲ್ ಮಾತನಾಡುತ್ತಾ ಒಂದು ದಿನ, ....
ವಾರ್ಡ್ ನಂ.೧೧ರಲ್ಲಿ ನಡೆಯುವ ಗಾಥೆ ವಾರ್ಡ್ ಅಂತ ಆಸ್ಪತ್ರೆ, ಪಟ್ಟಣಗಳಲ್ಲಿ ಬಳಸುವ ಪದವಾಗಿದೆ. ಈಗ ‘ವಾರ್ಡ್ ನಂ.೧೧’ ಎನ್ನುವ ಪೊಲಟಿಕಲ್ ಥ್ರಿಲ್ಲರ್ ಚಿತ್ರವೊಂದು ಸೆಟ್ಟೇರಿದೆ. ಪಾಂಡವಪುರದ ಶ್ರೀಕಾಂತ್ ಇಂಜನಿಯರಿಂಗ್ ಓದುವಾಗಲೇ ಕತೆಗಳನ್ನು ಬರೆಯುವ ಹವ್ಯಾಸ ರೂಡಿಸಿಕೊಂಡಿದ್ದರು. ಅದರಲ್ಲಿ ಇದು ಒಂದಾಗಿದೆ. ಹಲವು ನಿರ್ದೇಶಕ ಬಳಿ ಸಹಾಯಕರಾಗಿ ಕೆಲಸ, ಕಿರುಚಿತ್ರ ಸಿದ್ದಪಡಿಸಿದ್ದು, ಈಗ ಅನುಭೂತಿಯಿಂದ ಚಿತ್ರಕ್ಕೆ ರಚನೆ, ನಿರ್ದೇಶನ ಮಾಡುತ್ತಿದ್ದಾರೆ. ಕಾಲ್ಪನಿಕ ವಾರ್ಡ್ನಲ್ಲಿ ನಾಲ್ಕು ಗೆಳಯರು ಇರುತ್ತಾರೆ. ಅದರಲ್ಲಿ ಒಬ್ಬನ ಕೊಲೆಯಾಗುತ್ತದೆ. ಇದನ್ನು ತನಿಖೆ ....
ಸಂಪ್ರದಾಯ ಮತ್ತು ಸ್ವಾದಕ್ಕೆ ಮತ್ತೋಂದು ಹೆಸರು ಓಗರ ಓಗರ ಅಂದರೆ ಕರ್ನಾಟಕದಲ್ಲಿ ಅನ್ನ ಎಂದರ್ಥ ಕೊಡುತ್ತದೆ. ಸ್ವಾದಿಷ್ಟ ಆರೋಗ್ಯಕರ ಅಡುಗೆಯನ್ನು ದಿಢೀರ್ ತಯಾರಿಸಲು ಸಾಂಪ್ರದಾಯಿಕ ಮಸಾಲಾ ಮಿಶ್ರಣಗಳ ಶ್ರೀಮಂತ ಪರಂಪರೆಯನ್ನು ಇದು ಮನೆ ಮನೆಗೆ ತರುತ್ತದೆ. ಇದರಲ್ಲಿ ತಯಾರಾಗುವ ಸಿದ್ದ ತಿನಿಸುಗಳು ಗ್ರಾಹಕರ ನಾಲಿಗೆಗೆ ರುಚಿಕರವಾಗಿ ಧೀರ್ಘಕಾಲದವರೆಗೂ ಉಳಿಸುತ್ತದೆ. ಶ್ರೀಚಕ್ರ ಫುಡ್ಸ್ ಅಂಡ್ ಬಿವರೇಜಸ್ (ಪ್ರೈ) ಲಿ. ಸಂಸ್ಥೆಯ ‘ಓಗರ’ ಮಾಲೀಕ ರಘುನಾಥ್ ರಾಷ್ಟದಲ್ಲಿ ಅಂದಾಜು ೫೦ ಸಾವಿರ ಓಗರ ಮಳಿಗೆ ಸ್ಥಾಪಿಸಲು ನಿರ್ಧರಿಸಲಾಗಿದೆ. ರಾಜ್ಯದಲ್ಲಿ ೮ ಸಾವಿರ ಮಳಿಗೆಗಳು, ....
ಪ್ರಚಲಿತ ಶೋಷಿತ ಮಹಿಳೆಯ ಪ್ರತಿನಿಧಿ ರಂಗನಾಯಕಿ ಅನುಗಾಲದಿಂದಲೂ ಹೆಣ್ಣು ಮಕ್ಕಳಿಗೆ ದೈಹಿಕವಾಗಿ ಅಲ್ಲದೆ ಮಾನಸಿಕವಾಗಿ ಅತ್ಯಾಚಾರವಾಗುತ್ತಿದೆ. ಈ ಪದವೇ ಹೆಣ್ಣಿಗೆ ಶಿಕ್ಷೆಯಾಗಿದೆ ಎಂದು ಖಾರವಾಗಿ ತಾರ ಮಾತನಾಡಲು ‘ರಂಗನಾಯಕಿ’ ಚಿತದ ಟ್ರೈಲರ್ ಬಿಡುಗಡೆ ಕಾಯಕ್ರಮವು ವೇದಿಕೆಯಾಗಿತ್ತು. ಒಂಬತ್ತು ತಿಂಗಳು ಗರ್ಭದಲ್ಲಿ ಭಾರವನ್ನು ಹೊತ್ತುಕೊಂಡು, ನಂತರವು ಅದರ ನೊಗವನ್ನು ಹೊರುತ್ತಲೆ ಇರುತ್ತಾಳೆ. ಎಲ್ಲಿಯವರೆಗೂ ಇಂತಹ ದೌರ್ಜನ್ಯ ನಿಲ್ಲವುದಿಲ್ಲವೋ ಅಲ್ಲಿಯವರೆಗೂ ಸ್ರೀಯರ ನಂಜು ಕಡಿಮೆಯಾಗುವುದಿಲ್ಲ್ಲವೆಂದು ಅಭಿಪ್ರಾಯ ಪಟ್ಟರು. ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ....
ಹಲವು ವಿಶೇಷತೆಗಳ ವಿಷ್ಣು ಪ್ರಿಯ ನೂತನ ಚಿತ್ರ ‘ವಿಷ್ಣು ಪ್ರಿಯ’ದಲ್ಲಿ ಒಂಬತ್ತು ಔನ್ನತ್ಯಗಳು ಇರುವುದರಿಂದ ಸುದ್ದಿಯಾಗಲು ಕಾರಣವಾಗಿದೆ. ಮೊದಲನೆಯದಾಗಿ ಹಿರಿಯ ನಿರ್ಮಾಪಕ ಕೆ.ಮಂಜು ಬ್ಯಾನರ್ದಲ್ಲಿ ೪೫ನೇ ಚಿತ್ರವಾಗಿದ್ದು, ಅವರ ಹೃದಯದಿಂದ ಬಂದಂತ ಶೀರ್ಷಿಕೆ, ಹಾಗೂ ಮೂರು ಭಾಷೆಯಲ್ಲಿ ಬರುವ ಸಾದ್ಯತೆ ಇದೆ. ಎರಡನೆಯದಾಗಿ ಪ್ರೀತಿ ಎಂದರೆ ಏನು ಎಂಬುದನ್ನು ವಿಭಿನ್ನವಾಗಿ ತೋರಿಸುವ ಪ್ರಯತ್ನ ಮಾಡಲಾಗುತ್ತಿದೆ. ಪೋಷಕರಿಗೆ ಮಕ್ಕಳು ಯಾವ ರೀತಿ ಗೌರವ ಕೊಡಬೇಕು, ಹಿರಿಯರಾದವರು ಯುವ ಪ್ರೇಮಿಗಳಿಗೆ ಪ್ರೋತ್ಸಾಹ ನೀಡಬೇಕು. ಕೃತಕವಲ್ಲದ ೯೦ರ ದಶಕದ ಪ್ರೀತಿ ಕತೆ, ಸಂಬಂದಗಳ ಮೌಲ್ಯಗಳು ....
ಚಿತ್ರಮಂದಿರದಲ್ಲಿ ವಿಷ್ಣು ಸರ್ಕಲ್ ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಹೆಸರನ್ನು ಬಳಸಿಕೊಂಡು ಬಂದಿರುವ ಬಹುತೇಕ ಚಿತ್ರಗಳು ಯಶಸ್ಸನ್ನು ಕಂಡಿದೆ. ಅದರ ಪಸೆಯಿಂದಲೇ ‘ವಿಷ್ಣು ಸರ್ಕಲ್’ ಚಿತ್ರವೊಂದು ಬಿಡುಗಡೆಗೆ ಸಿದ್ದವಾಗಿದೆ. ಹಾಫ್ ಮೆಂಟಲ್ ನಿರ್ದೇಶನ ಮಾಡಿರುವ ಲಕ್ಷೀದಿನೇಶ್ ಕತೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ತುತ್ತು ಅನ್ನ ತಿನ್ನೋಕೆ, ಬೊಗಸೆ ನೀರು ಕುಡಿಯೋಕೆ ಅಂತ ಉಪಶೀರ್ಷಿಕೆಯಲ್ಲಿ ಹೇಳಿರುವಂತೆ ಪ್ರತಿಯೊಬ್ಬರ ಜೀವನಾಂಶ ಸಾರುವ ಸಾರಾಂಶವಾಗಿದೆ. ಒಳ್ಳೆ ಕತೆಯನ್ನು ಬ್ಲೆಂಡ್ ಮಾಡಿ ಅದಕ್ಕೆ ಪ್ರಯೋಗಾತ್ಮಕ ಚಿತ್ರವಾಗುವಂತೆ ಸ್ಪರ್ಶ ನೀಡಲಾಗಿದೆ. ಹಿಂದಿನ ಸಿನಿಮಾದಲ್ಲಿ ಪ್ರೀತಿಯ ಹುಡುಕಾಟ ಏನೆಂಬುದನ್ನು ....
ತೆಲುಗು, ತಮಿಳು, ಹಿಂದಿ ಭಾಷೆಗೆ ನನ್ನ ಪ್ರಕಾರ ಬಾಲಿವುಡ್, ಕಾಲಿವುಡ್, ಟಾಲಿವುಡ್ ಮತ್ತು ಮಾಲಿವುಡ್ ಉದ್ಯಮವು ಸ್ಯಾಂಡಲ್ವುಡ್ ಕಡೆ ಗಮನ ಹರಿಸುತ್ತಿರುವುದು ಇಲ್ಲಿನ ಚಿತ್ರಗಳು ಅಲ್ಲಿಗೆ ಹೋಗುತ್ತಿರುವುದು ಹೆಮ್ಮೆಯ ಬೆಳವಣಿಗೆಯಾಗಿದೆ. ಆ ಸಾಲಿಗೆ ಎರಡು ವಾರದ ಹಿಂದೆ ಬಿಡುಗಡೆಯಾದ ‘’ನನ್ನ ಪ್ರಕಾರ’ ಸಿನಿಮಾವು ಸೇರ್ಪಡೆಯಾಗಿದೆ. ಸೆಸ್ಪನ್ಸ್, ಥ್ರಿಲ್ಲರ್ ಕತೆಯಾಗಿದ್ದು, ನೋಡಿದವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ರಚನೆ, ನಿರ್ದೇಶನ ಮಾಡಿರುವ ವಿನಯ್ಬಾಲಾಜಿ ಹೇಳುವಂತೆ ತಮಿಳು, ತೆಲುಗು ಡಬ್ಬಿಂಗ್ ಹಕ್ಕುಗಳು ಮಾರಾಟವಾಗಿದೆ. ....
ಪ್ರಪಂಚ ದಾಖಲೆಗೆ ಅರ್ಹಗೊಂಡ ಚಿತ್ರ ಬಿಂಬ ಒಂದೇ ಸ್ಥಳ, ಕಲಾವಿದ, ದೃಶ್ಯ ಹಾಗೂ ಸಂಗೀತ ಇರಲಿರುವ ‘ಬಿಂಬ’ ಚಿತ್ರವು ಈಗ ಗಿನ್ನಿಸ್ ದಾಖಲೆಗೆ ಸರಿಸಮನಾದ ಕೊಲ್ಕತ್ತಾದಲ್ಲಿರುವ ‘ಯುಆರ್ಎಫ್’ ಸಂಸ್ಥೆಯು ಗುರುತಿಸಿದೆ. ಇದರನ್ವಯ ಪ್ರಮಾಣಪತ್ರ ವಿತರಣೆ ಮಾಡಲು ಸಂಸ್ಥೆಯ ಮುಖ್ಯ ಸಂಪಾದಕ ಸುನಿಲ್ಜೋಸಫ್ ಆಗಮಿಸಿದ್ದರು. ಅವರು ಮಾತನಾಡಿ ಮಲೆಯಾಳಂದಲ್ಲಿ ಒಂದೇ ಸ್ಥಳದಲ್ಲಿ ೨.೧೦ ಗಂಟೆಯ ಸಿನಿಮಾವೊಂದು ಬಂದಿದ್ದು, ಅದರಲ್ಲಿ ಹಲವು ಕಲಾವಿದರು ಕಾಣಿಸಿಕೊಂಡಿದ್ದರು. ಆದರೆ ಇದರಲ್ಲಿ ಒಬ್ಬರೆ ಇರುವುದರಿಂದ ದಾಖಲೆಗೆ ಅರ್ಹಗೊಂಡಿರುವುದಾಗಿ ಸಭೆಯು ನಿರ್ಣಯ ತೆಗೆದುಕೊಂಡಿದೆ. ಬಿಂಬ ಆ ತೊಂಬತ್ತು ನಿಮಿಷಗಳಲ್ಲಿ ಒಬ್ಬರೆ ಸಂಭಾಷಣೆ ....
ಸ್ಮೈಫಾ ೨೦೧೯ ಕಿರುಚಿತ್ರಗಳ ಉತ್ಸವ ಕಿರುಚಿತ್ರಗಳು ಪ್ರತಿಭಾವಂತರಿಗೆ ವೇದಿಕೆ ಯಾಗುತ್ತದೆ. ಅದರಂತೆ ಉತ್ತಮ ಚಿತ್ರಗಳನ್ನು ಸಿದ್ದಪಡಿಸಿದ ತಂತ್ರಜ್ಘರು, ಕಲಾವಿದರನ್ನು ಆಯ್ಕೆ ಮಾಡಿ ಪ್ರಶಸ್ತಿ ನೀಡುವ ಕಾರ್ಯಕ್ರಮ ‘ಸ್ಮೈಫಾ ೨೦೧೯ ಅವಾರ್ಡ್ಸ್” ಇತ್ತೀಚೆಗೆ ಪಂಚತಾರ ಹೋಟೆಲ್ದಲ್ಲಿ ಅದ್ದೂರಿಯಾಗಿ ನಡೆಯಿತು. ಕನ್ನಡ, ತಮಿಳು, ತೆಲುಗು ಮತ್ತು ಮಲೆಯಾಳಂ ಶಾರ್ಟ್ ಫಿಲ್ಮ್ಗಳ ಒಟ್ಟು ಸಂಖ್ಯೆ ೨೬೦. ಹಿರಿಯ ಸಾಹಿತಿ, ವಿಮರ್ಶಕ ಜೋಗಿ, ಬರಹಗಾರ, ನಿರ್ದೇಶಕ ತರುಣ್ಸುಧೀರ್, ಕೆಜಿಎಫ್ ಖ್ಯಾತಿಯ ಛಾಯಾಗ್ರಾಹಕ ಭುವನ್ಗೌಡ, ದೇವಕಿ ನಿರ್ದೇಶಕ ಲೋಹಿತ್ ತೀರ್ಪುಗಾರರಾಗಿ ಎಲ್ಲಾ ಭಾಷೆಯ ....
ಕಿರು ಚಿತ್ರದ ಕತೆ ಸಿನಿಮಾ ಆಗುತ್ತಿದೆ ಚಂದನವನದಲ್ಲಿ ಚಿತ್ರ ಶುರು ಮಾಡುವ ಮುನ್ನ ಸದ್ದು ಮಾಡುವುದು, ಅರ್ಧ ಕೆಲಸ ಮುಗಿಸಿದ ನಂತರ ಸುದ್ದಿ ನೀಡುವುದು. ಬಿಡುಗಡೆ ಪೂರ್ವ ಸಂದರ್ಭದಲ್ಲಿ ಅದ್ದೂರಿ ಕಾರ್ಯಕ್ರಮ ಏರ್ಪಡಿಸುವುದು. ಮೇಲಿನ ಮೂರು ವರ್ಗಗಳಲ್ಲಿ ‘ಜಗ್ಗಿ ಜೊತೆ ಜಾನು’ ಚಿತ್ರವು ಮೊದಲನೇ ವರ್ಗಕ್ಕೆ ಸೇರುತ್ತದೆ. ವರ್ಷದ ಕೊನೆ ತಿಂಗಳಲ್ಲಿ ಆರಂಭಿಸಲು ಯೋಜನೆ ರೂಪಿಸಿದ್ದು, ಪ್ರಚಾರದ ಮೊದಲ ಹಂತವಾಗಿ ಶರಣ್ ಅವರಿಂದ ಪೋಸ್ಟರ್ನ್ನು ಅನಾವರಣಗೊಳಿಸಿದ್ದಾರೆ. ಶೀರ್ಷಿಕೆ ಹೇಳುವಂತೆ ಪ್ರೀತಿ, ಭಾವನೆಗಳು, ಸಾಹಸ, ಹಾಸ್ಯ ಜೊತೆಗೆ ಸಾಮಾಜಿಕ ಅಂಶಗಳು ಬರಲಿದೆ. ಪಯಣದಲ್ಲಿ ಕತೆಯು ಬರುವುದು ....
ಮಾಸ್ಟರ್ ಆನಂದ್ಗೆ ಹಗಲು ಕನಸು ಬಾಲ ನಟ, ಪೋಷಕ ಪಾತ್ರಗಳು, ಕಿರುತೆರೆ ಸ್ಟಾರ್ ನಿರೂಪಕ ಮಾಸ್ಟರ್ ಆನಂದ್ ‘ಹಗಲು ಕನಸು’ ಚಿತ್ರದಲ್ಲಿ ಮೊದಲಬಾರಿ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಶೀರ್ಷಿಕೆ ಹೇಳುವಂತೆ ಶುಕ್ರವಾರ, ಶನಿವಾರ ಮತ್ತು ಭಾನುವಾರ ವಿಕೆಂಡ್ನಲ್ಲಿ ನಡೆಯುವ ಕತೆ ಇರುವುದು ವಿಶೇಷ. ಕಥಾನಾಯಕ ವಿಕ್ರಮಾದಿತ್ಯ ಆಲಿಯಾಸ್ ವಿಕ್ರಂಗೆ ಪ್ರತಿ ಬಾರಿ ಕುತ್ತಿಗೆ ಮೇಲೆ ಮಚ್ಚೆ ಇರುವ ಮುಖ ಕಾಣಿಸದ ಹುಡುಗಿಯೊಬ್ಬಳು ಸಿಕ್ಕಂತೆ ಕನಸು ಕಾಣುತ್ತಿರುತ್ತಾನೆ. ಸೋಜಿಗ ಎನ್ನುವಂತೆ ಒಮ್ಮೆ ಅದೇ ತರಹದ ಹುಡುಗಿಯೊಬ್ಬಳು ಮನೆ ಪ್ರವೇಶಿಸಿದಾಗ ಮನೆಯಲ್ಲಿರುವ ಇಬ್ಬರು ಅಳಿಯಂದಿರು, ಅಮ್ಮನಿಗೆ ....
ಲುಂಗಿ ಟ್ರೈಲರ್ ಬಿಡುಗಡೆ ಮಾಡಿದ ರಕ್ಷಿತ್ಶೆಟ್ಟಿ ಮಂಗಳೂರು ಸೊಗಡಿನ ‘ಲುಂಗಿ’ ಚಿತ್ರಕ್ಕೆ ಅದೇ ಭಾಗದವರಾದ ರಕ್ಷಿತ್ಶೆಟ್ಟಿ ಟ್ರೈಲರ್ ಬಿಡುಗಡೆ ಮಾಡಿ ತಂಡಕ್ಕೆ ಶುಭ ಹಾರೈಸಿದರು. ನಂತರ ಮಾತನಾಡುತ್ತಾ ತುಣುಕುಗಳನ್ನು ನೋಡಿದ್ದೇನೆ. ಅದ್ಬುತವಾಗಿ ಮೂಡಿಬಂದಿದೆ. ಬಹಳ ವರ್ಷಗಳ ಹಿಂದೆ ನಿರ್ದೇಶಕರು ಆಯಾ ಜಿಲ್ಲೆಯ ಭಾಷೆಯನ್ನು ಟಚ್ ಮಾಡುತ್ತಿರಲಿಲ್ಲ. ಕಾಲ ಬದಲಾದಂತೆ ಈಗಿನ ತಂತ್ರಜ್ಘರು ಹೆಚ್ಚಾಗಿ ಕಡಲತೀರದ ಭಾಷೆಯ ಕುರಿತಂತೆ ಚಿತ್ರಗಳನ್ನು ಮಾಡುತ್ತಿದ್ದಾರೆ. ಒಳ್ಳೆ ಸಿನಿಮಾ ಮಾಡಿದಾಗ ವಿತರಕರ ಕಚೇರಿ ತಾನಾಗೆ ತೋರಿಸುತ್ತದೆ. ಕರ್ನಾಟಕದ ಒಂದೊಂದು ಭಾಗದಿಂದ ತಂಡವು ಬಂದು ಅಲ್ಲಿನ ಕತೆ ಆರಿಸಿಕೊಂಡು ಚಿತ್ರ ಮಾಡಿದಾಗ ....