ಗೋವಿಂದ ಗೋವಿಂದ ಯು ಪ್ರಮಾಣಪತ್ರ ಹಾಸ್ಯ ಚಿತ್ರ ‘ಗೋವಿಂದ ಗೋವಿಂದ’ ವೀಕ್ಷಿಸಿದ ಸೆನ್ಸಾರ್ ಮಂಡಳಿಯು ಸಂತಸಗೊಂಡು ಯಾವುದೇ ದೃಶ್ಯಕ್ಕೆ ಆಕ್ಷೇಪ ವ್ಯಕ್ತಪಡಿಸದೆ ಕ್ಲೀನ್ ಯು ಸರ್ಟಿಫೀಕೇಟ್ ನೀಡಿರುವುದು ತಂಡಕ್ಕೆ ಖುಷಿ ತಂದುಕೊಟ್ಟಿದೆ. ಮೂರು ದಶಕಕ್ಕೂ ಹೆಚ್ಚು ಕಾಲ ಚಿತ್ರರಂಗದಲ್ಲಿರುವ ಹಿರಿಯ ನಿರ್ಮಾಪಕ ಶೈಲೇಂದ್ರಬಾಬು ಪುತ್ರ ಸುಮಂತ್ಶೈಲೇಂದ್ರ ಅವರ ಸಲುವಾಗಿ ನಿರ್ಮಾಣ ಮಾಡಿದ್ದು ಎಲ್ಲಾ ಕಡೆಗಳಿಂದ ಪ್ರಶಂಸೆ ಬಂದಿದೆ. ಈಗಾಗಲೇ ಚಾನಲ್ರವರು ಒಳ್ಳೆ ಮೊತ್ತಕ್ಕೆ ಹಕ್ಕುಗಳನ್ನು ಖರೀದಿಸಿದ್ದಾರೆ. ಓಟಿಟಿದಿಂದ ಬೇಡಿಕೆ ಬಂದಿದೆ. ಮೊದಲು ಜನರಿಗೆ ತೋರಿಸಿ ನಂತರ ನಿರ್ಧಾರ ತೆಗೆದುಕೊಳ್ಳುವುದಾಗಿ ....
ಸುದೀಪ್ ಬಯೋಗ್ರಫಿ ಬಿಡುಗಡೆ ಮಾಡಿದ ಪವರ್ ಸ್ಟಾರ್ ಪುನೀತ್ ಕಿಚ್ಚ ಸುದೀಪ್ ಅವರ ಬಯೋಗ್ರಫಿ ಬಿಡುಗಡೆ ಮಾಡುವ ಮೂಲಕ ಹುಟ್ಟು ಹಬ್ಬಕ್ಕೆ ಶುಭ ಕೋರಿದರು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್. ಪತ್ರಕರ್ತ ಶರಣು ಹುಲ್ಲೂರು ಬರೆದ ಈ ಪುಸ್ತಕದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ ಪುನೀತ್ ರಾಜ್ ಕುಮಾರ್, ಸಮಗ್ರ ಮಾಹಿತಿ, ಅಪರೂಪದ ಫೋಟೋ ಒಳಗೊಂಡಿರುವ ಕೃತಿಯ ಓದುಗರನ್ನು ಸೆಳೆಯಲಿದೆ ಎಂದರು. ಈ ಪುಸ್ತಕದಲ್ಲಿ ಸುದೀಪ್ ಮತ್ತು ಪುನೀತ್ ಅವರ ಬಾಲ್ಯದ ಅಪರೂಪದ ಫೋಟೋ ಇದ್ದು, ಅದನ್ನು ಕಂಡು ಸಂಭ್ರಮಿಸಿದರು. ಮತ್ತು ಈ ಹೊತ್ತಿನಲ್ಲಿ ಬಾಲ್ಯದ ಹಲವು ನೆನಪುಗಳನ್ನು ಹಂಚಿಕೊಂಡರು. ಪುಸ್ತಕ ಬಿಡುಗಡೆ ಸಂಧರ್ಭದಲ್ಲಿ ವಿಷ್ಣುಸೇನಾ ಸಮಿತಿಯ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್, ....
ಹೊಸ ಅವಿಷ್ಕಾರದೊಂದಿಗೆ ’ನಮ್ಮ ಪ್ಲಿಕ್ಸ್’. ಇದು ನಿರ್ಮಾಪಕರ ಸ್ನೇಹಿ.
"Anviton Entertainment Corporation" ಅಡಿಯಲ್ಲಿ ಬಿಡುಗಡೆಯಾಗಿದ್ದ ನಮ್ಮ ಪ್ಲಿಕ್ಸ್ (Namma Flix) ಕರ್ನಾಟಕದ ಮೊಟ್ಟ ಮೊದಲ ಡಿಜಿಟಲ್ "ಒ.ಟಿ.ಟಿ" ಪ್ಲಾಟ್ಫಾರ್ಮ್ ಎಂಬ ಹೆಮ್ಮೆಗೆ ಒಳಪಟ್ಟಿದೆ. ನಮ್ಮ ಫ್ಲಿಕ್ಸ್ ಆಪನ್ನು ಎಲ್ಲಾ ಕನ್ನಡಿಗರು ಮೆಚ್ಚಿಕೊಂಡು ಬೆಂಬಲ ನೀಡಿದಕ್ಕೆ , ಸಮಸ್ತ ಕನ್ನಡಿಗರಿಗೆ ನಾವು ಚಿರರುಣಿ. ಇದೀಗ ನಿಮ್ಮ ಬೇಡಿಕೆ ಮೇರೆಗೆ ನಮ್ಮ ಪ್ಲಿಕ್ಸ್ ನೂತನ ಆವಿಷ್ಕಾರದೊಂದಿಗೆ ಹೊಸ ರೂಪುರೇಷೆಗಳನ್ನು ಒಳಗೊಂಡು ನಿಮ್ಮ ಮುಂದೆ ಬಂದಿದೆ . ನಿಮ್ಮ ನೆಚ್ಚಿನ ನಮ್ಮ ಪ್ಲಿಕ್ಸ್ ಈಗ ಆಂಡ್ರಾಯ್ಡ್ ಹಾಗೂ ಆಪಲ್ ಐಫೋನ್ಗಳಲ್ಲು ಲಭ್ಯವಿದೆ.
ಅಣ್ಣನ ಚಿತ್ರಕ್ಕೆ ತಮ್ಮನ ಶುಭಹಾರೈಕೆ
ಹೊಸಬರ ‘ರಾಜತಂತ್ರ’ ಚಿತ್ರದ ಮೋಷನ್ ಪೋಸ್ಟರ್ನ್ನು ರಾಘಣ್ಣನ ಮನೆಯಲ್ಲಿ ಪುನೀತ್ರಾಜ್ಕುಮಾರ್ ಬಿಡುಗಡೆ ಮಾಡಿ ಪೋಸ್ಟರ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ತಂಡಕ್ಕೆ ಶುಭ ಹಾರೈಸಿದರು. ಡಾ.ರಾಜ್ಕುಮಾರ್ ಮತ್ತು ಪಾರ್ವತಮ್ಮರಾಜ್ಕುಮಾರ್ ಭಾವಚಿತ್ರದ ಮುಂದೆ ಸರಳ ಕಾರ್ಯಕ್ರಮ ನಡೆಯಿತು. ಕಥಾವಸ್ತು, ನಿರ್ಮಾಣ ತಂಡವನ್ನು ಶ್ಲಾಘಿಸಿದ ರಾ.ರಾ ಸಂತಸ ಹಂಚಿಕೊಂಡರು. ಇದೇ ಸಂದರ್ಭದಲ್ಲಿ ವಿಜಯ್ರಾಜ್ಕುಮಾರ್ ಹಾಜರಿದ್ದರು.
ಕಬ್ಜ ಚಿತ್ರದ ವೆಬ್ಸೈಟ್ ಲೋಕಾರ್ಪಣೆ ಫ್ಯಾನ್ ಇಂಡಿಯಾದಲ್ಲಿ ಸಿದ್ದಗೊಳ್ಳುತ್ತಿರುವ ಅದ್ದೂರಿ ‘ಕಬ್ಜ’ ಚಿತ್ರದ ಮಾಹಿತಿ ಕುರಿತ ವೆಬ್ಸೈಟ್ ಬಿಡುಗಡೆ ಕಾರ್ಯಕ್ರಮ ಸೆವನ್ ಸ್ಟಾರ್ ಶೆರ್ಟಾನ್ ಹೋಟೆಲ್ದಲ್ಲಿ ನಡೆಯಿತು. ಶಿವಣ್ಣ ಯಾವತ್ತು ಲಕ್ಕಿ ಹ್ಯಾಂಡ್. ಕಬ್ಜ ಅವರ ಕೈಯಿಂದಲೇ ಅನಾವರಣಗೊಂಡಿದೆ ಎಂದು ಹೊಗಳಿಕೆಗೆ ಮಾತನ್ನು ಕೆ.ಪಿ.ಶ್ರೀಕಾಂತ್ ಮೀಸಲಿಟ್ಟರು. ಆರ್.ಚಂದ್ರು ಅವರ ನಿಷ್ಟೆ, ಅದ್ದೂರಿತನ ಪ್ರತಿ ಹಂತದಲ್ಲಿ ಕಾಣಬಹುದು. ಇಂತಹ ನಿರ್ದೇಶಕ ಇರುವುದರಿಂದಲೇ ನಮ್ಮ ಚಿತ್ರರಂಗವು ದೇಶದ ಗಮನ ಸೆಳೆಯುತ್ತಿದೆ. ನಿರೀಕ್ಷೆಯ ಪಟ್ಟಿಯಲ್ಲಿ ಹತ್ತರಲ್ಲಿ ಮೂರರೊಳಗಿದೆ. ....
ಮಕ್ಕಳ ಚಿತ್ರ ನಮ್ಮ ಪ್ರೀತಿಯ ಶಾಲೆ
ಹೊಸಬರ ಮಕ್ಕಳ ಚಿತ್ರ ‘ನಮ್ಮ ಪ್ರೀತಿಯ ಶಾಲೆ’ ಮಹೂರ್ತ ಸಮಾರಂಭವು ಮಿನಿ ಇಸ್ಕಾನ್ ಆವರಣ, ಶ್ರೀ ಲಕ್ಷೀ ನರಸಿಂಹ ದೇವಸ್ಥಾನದಲ್ಲಿ ಸರಳವಾಗಿ ಜರುಗಿತು. ಮಾ.ಜಿವಿತ್ಭೂಷಣ್ (ಸೆಲ್ವಂ ಪುತ್ರ) ಮತ್ತು ಮಾಸ್ಟರ್ ಮಹಾನಿದಿ ನಟಿಸುವ ಮೊದಲ ದೃಶ್ಯವನ್ನು ಸೆರೆಹಿಡಿಯಲಾಗಿ, ನಂತರ ಹೊರಾಂಗಣದಲ್ಲಿ ಚಿತ್ರೀಕರಣ ನಡೆಯಿತು. ತಾರಗಣದಲ್ಲಿ ಅಚ್ಯುತಕುಮಾರ್, ದತ್ತಣ್ಣ, ಕೆಜಿಎಫ್ ಖ್ಯಾತಿಯ ಕೃಷ್ಣೋಜಿರಾವ್ ಮುಂತಾದವರು ನಟಿಸುತ್ತಿದ್ದಾರೆ. (ಸಿಎಂ ಪಾತ್ರವನ್ನು ಸ್ಟಾರ್ ನಟ ಅಭಿನಯಿಸುವ ಸಾದ್ಯತೆ ಇದೆ)
ಹೊಸ ಕಸ್ತೂರಿ ನಿವಾಸದಲ್ಲಿ ವಿನೂತನಕಥೆ ೭೦ರ ದಶಕದಲ್ಲಿ ಬಿಡುಗಡೆಗೊಂಡು ಹಿಟ್ಆಗಿದ್ದಡಾ.ರಾಜ್ಕುಮಾರ್ಅಭಿನಯದ ‘ಕಸ್ತೂರಿ ನಿವಾಸ’ ಚಿತ್ರವು ಮತ್ತೆ ಬರಲಿದೆ.ಅಂದರೆಇದೇ ಹೆಸರಿನಲ್ಲಿ ಸಿನಿಮಾವೊಂದು ಶುಕ್ರವಾರ ಸೆಟ್ಟೇರಿದೆ. ಸದಭಿರುಚಿಯ ಸಿನಿಮಾಗಳನ್ನು ನೀಡಿರುವ ದಿನೇಶ್ಬಾಬುಅವರ ೫೦ನೇ ನಿರ್ದೇಶನಎಂಬುದುವಿಶೇಷ. ಶೀರ್ಷಿಕೆ ಅನಾವರಣ ಸಂದರ್ಭದಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ರಚಿತಾರಾಮ್ ಮಾತನಾಡಿ ನಿರ್ದೇಶಕರು ಸಾಕಷ್ಟು ಉತ್ತಮ ಚಿತ್ರಗಳನ್ನು ನೀಡಿದ್ದಾರೆ. ಅವರ ೫೦ನೇ ಸಿನಿಮಾದಲ್ಲಿ ನಟಿಸಲು ಅವಕಾಶ ಸಿಕ್ಕಿರುವುದು ಸುಕೃತಎನ್ನಬಹುದು.ಲಾಕ್ಡೌನ್ ನಂತರ ನನ್ನ ಪಾಲಿಗೆ ಮೊದಲ ....
ಗಣಪತಿ ಹಬ್ಬಕ್ಕೆ ’ಕೋಲು ಮಂಡೆ’ ವಿಡಿಯೋ ಆಲ್ಬಂ. ಆನಂದ್ ಆಡಿಯೋ ಹೊಸ ಪ್ರಯತ್ನಕ್ಕೆ ಚಂದನ್ ಶೆಟ್ಟಿ ಸಾಥ್. ಕನ್ನಡ ಚಿತ್ರರಂಗದಲ್ಲಿ ಸರ್ವಕಾಲಿಕ ದಾಖಲೆ ಎನ್ನಬಹುದಾದ, ಬಹು ತಾರಾಬಳಗದ ಅದ್ದೂರಿ ಚಿತ್ರ ಹಬ್ಬ. ಈ ಚಿತ್ರದ ಹಾಡುಗಳು ಜನರ ಕಿವಿಯಲ್ಲಿ ಇನ್ನೂ ಗುನುಗುತ್ತಿದೆ. ಇಂತಹ ಯಶಸ್ವಿ ಚಿತ್ರದ ಆಡಿಯೋ ಹಕ್ಕನ್ನು ಪಡೆಯುವ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ ಆನಂದ್ ಆಡಿಯೋ ಸಂಸ್ಥೆ ಈ ವರೆಗೂ ಸಾಕಷ್ಟು ಯಶಸ್ವಿ ಚಿತ್ರಗಳ ಹಾಡುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಈಗ ’ಕೋಲುಮಂಡೆ’ ಎಂಬ ವಿಡಿಯೋ ಆಲ್ಬಂ ಈ ಸಂಸ್ಥೆಯಿಂದ ನಿರ್ಮಾಣವಾಗಿದ್ದು, ಗಣಪತಿ ಹಬ್ಬದ ಶುಭ ಸಂದರ್ಭದಲ್ಲಿ ಬಿಡುಗಡೆಯಾಗಿದೆ. ಖ್ಯಾತ ಗಾಯಕ ಚಂದನ್ ಶೆಟ್ಟಿ ....
ಸ್ಪೂರ್ತಿಯ ಸೆಲೆಯಾದ ಆಲ್ಬಂ ಗೀತೆ 'ನೀನು ಇನ್ನೊಬ್ಬರಿಗೋಸ್ಕರ ಬದುಕಿದರೆ ಅದಕ್ಕೆ ಬದುಕು ಅಂತಾರೆ , ಇಲ್ಲಾಂದ್ರೆ ನೀನು ಬದುಕಿದ್ದೂ ಸತ್ತಂತೆಯೇ ’ ಇದು ಮಹಾ ಚೇತನ ಸ್ವಾಮಿ ವಿವೇಕಾನಂದರ ಮಾತುಗಳು. ಇಡೀ ವಿಶ್ವಕ್ಕೆ ಅವರು ಸಾರಿದ ಇಂತಹ ನುಡಿಗಳು ಯುವಕರ ಎದೆಯಲ್ಲಿ ಹಚ್ಚ ಹಸಿರಾಗಿದೆ. ಎಲ್ಲರ ಪಾಲಿಗೆ ಅವರು ಒಂದು ಸ್ಪೂರ್ತಿಯ ಸೆಲೆ. ಅವರಾಡಿದ ನುಡಿಗಳನ್ನೇ ದಾರಿದೀಪವಾಗಿಸಿ , ಅವರು ಬದುಕಿ ನಡೆದು ತೋರಿಸಿದ ದಾರಿಯನ್ನೇ ಅನುಸರಿಸಿ , ಅವರನ್ನು ಬದುಕಿನ ದಿವ್ಯ ಚೇತನವನ್ನಾಗಿಸಿ ಆರಾಧಿಸಿಕೊಂಡು ಬಂದಂತಹ ಯುವಕರ ತಂಡ ’ಜೈ ಜೈ ಸ್ವಾಮಿ ವಿವೇಕಾನಂದ ’ ಎಂಬ ಲಿರಿಕಲ್ ವಿಡಿಯೋ ವನ್ನು ಹೊರತಂದಿದ್ದಾರೆ. ಕನ್ನಡ, ಇಂಗ್ಲೀಷ್, ಹಿಂದಿ ಹಾಗೂ ತುಳು ಹೀಗೆ ನಾಲ್ಕು ....
ʻನಿಮಗೊಂದು ಸಿಹಿ ಸುದ್ದಿʼ
ಇದು ಗರ್ಭ ಧರಿಸಿದ ಪುರುಷನ ಸುತ್ತಲಿನ ಕತೆ…
* * *
ನಿಮಗೊಂದು ಸಿಹಿ ಸುದ್ದಿ - ಗಂಡಸರಿಗೆ ಮಕ್ಕಳಾಗೊ ಕಾಲ ಬಂದಿದೆ!
* * *
ವೆಬ್ ಸರಣಿಯಲ್ಲಿ ನಗುವಿನ ಜೊತೆ ರೋಚಕ ಕತೆ
ಪಾಪಿ ಕಲಿಗಾಲ ಕೆಟ್ಟೋಯ್ತಯ್ಯ.. ಹೆಣ್ಣು ಹೆಣ್ಣ ಮದುವೆಯಾಗೋ ಮೋಹ ಬಂತಯ್ಯ.. ಗಂಡಸರಿಗೆ ಮಕ್ಕಳಾಗೊ ಕಾಲ ಬಂತಯ್ಯ – ಹೀಗೊಂದು ಹಾಡಿನ ಸಾಲನ್ನು ಕೇಳಿರುತ್ತೀರಿ. ಈ ಹಾಡಿನ ಸಾಲುಗಳನ್ನು ನಿಜವಾಗಿಸುವಂತೆ ಭಾರತೀಯ ಚಿತ್ರರಂಗದಲ್ಲಿ ಸಾಕಷ್ಟು LG BT Q ಕಥೆಯನ್ನಾಧರಿಸಿದ ಸಿನಿಮಾಗಳು ರೂಪುಗೊಂಡಿವೆ. ಈಗ ಕನ್ನಡದಲ್ಲಿ ಮೊಟ್ಟ ಮೊದಲ ಬಾರಿಗೆ ಗರ್ಭ ಧರಿಸಿದ ಗಂಡಸಿನ ಕಥೆ ವೆಬ್ ಸಿರೀಸ್ ರೂಪದಲ್ಲಿ ಅನಾವರಣಗೊಳ್ಳಲು ತಯಾರಿ ನಡೆದಿದೆ!
ಮಕ್ಕಳ - ಪೋಷಕರ ನಡುವಿನ ಬಾಂಧವ್ಯ ಎತ್ತಿಹಿಡಿಯುವ ’ಪಂಚಮ’ ಇತ್ತೀಚಿನ ದಿನಗಳಲ್ಲಿ ಮಕ್ಕಳ ಚಿತ್ರಗಳ ನಿರ್ಮಾಣ ಬಹಳ ವಿರಳವಾಗಿದೆ. ಇಂತಹ ಸಂದರ್ಭದಲ್ಲಿ ’ಪಂಚಮ’ ಎಂಬ ಮಕ್ಕಳ ಚಿತ್ರ ನಿರ್ಮಾಣವಾಗಿದ್ದು, ಸದ್ಯದಲ್ಲೇ ತೆರೆಗೆ ಬರಲಿದೆ. ಪವಿತ್ರ ಪರ್ಸ್ಯೂಟ್ ಪಿಕ್ಚರ್ಸ್ ಲಾಂಛನದಲ್ಲಿ ಪವಿತ್ರ ಎಂ ಪಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ವಿಕ್ರಂ ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ನಮ್ಮ ಸಂಸ್ಥೆಯಿಂದ ಮೊದಲ ಬಾರಿಗೆ ಮಕ್ಕಳ ಬಗ್ಗೆ ಕಾಳಜಿಯಿರುವ ಚಿತ್ರ ನಿರ್ಮಿಸಿರುವ ಹೆಮ್ಮೆ ಇದೆ. ’ಪಂಚಮ’ ಪ್ರಪಂಚದಾದ್ಯಂತ ಕೀರ್ತಿ ಪತಾಕೆ ಹಾರಿಸಲಿ ಎನ್ನುವ ಹಾರೈಕೆ ನಿರ್ಮಾಪಕರದು. ಮೂಲತಃ ರಂಗಶಿಕ್ಷಕರಾಗಿರುವ ಶ್ರೀಧರ್ ನಾಯ್ಕ ಈ ....
ಗಣೇಶನ ಹಬ್ಬದಂದು ರಾಘವೇಂದ್ರ ರಾಜಕುಮಾರ್ ಅಭಿನಯದ 25 ನೇ ಸಿನಿಮಾ ’ಆಡಿಸಿದಾತ’ ಟೀಸರ್ ಬಿಡುಗಡೆ ಮಾಡಿದ ಪವರ್ ಸ್ಟಾರ್ ಪುನೀತ್ ರಾಜಕುಮಾರ್.
ನನ್ನ ನೆಚ್ಚಿನ ಮಾಧ್ಯಮ ಮಿತ್ರರಿಗೆ ವೆಂಕಟ್ ಭರದ್ವಾಜ್ ಮಾಡುವ ನಮಸ್ಕಾರಗಳು ನನ್ನ ಚಿತ್ರ ದ ಪೇಂಟರ್ ಹೋದ ವಾರ ಶ್ರೇಯಸ್ ಎಂಟರ್ಟೈನ್ಮೆಂಟ್ ಎಂಬ ATT ಪ್ಲಾಟ್ ಫಾರ್ಮಿನಲ್ಲಿ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ, ಬರೀ ಭಾರತ ದೇಶ ಅಲ್ಲದೆ ಅಮೆರಿಕಾ, ಆಫ್ರಿಕಾ ಯೂರೋಪ್ ಮತ್ತು ಮಧ್ಯಪ್ರಾಚ್ಯ ದೇಶಗಳಲ್ಲಿ ಬಹಳ ಹೆಸರು ಮತ್ತು ಸದ್ದು ಮಾಡಿದೆ. ಪಂಜಾಬಿ, ಮರಾಠಿ, ತಮಿಳು ಮತ್ತು ಹಿಂದಿ ಮಾತಾಡುವವರು ಕೂಡ ಈ ಚಿತ್ರವನ್ನು ನೋಡಿ ಸವಿದಿದ್ದಾರೆ. ಗೌರಿ ಮತ್ತು ಗಣೇಶ ಹಬ್ಬದ ಸಂದರ್ಭದಲ್ಲಿ ನಾನು ನಿಮಗೆ ಒಂದು ಸಿಹಿಸುದ್ದಿಯನ್ನು ಹೇಳಲು ಖುಷಿಪಡುತ್ತೇನೆ, ಶ್ರೇಯಸ್ ಎಂಟರ್ಟೈನ್ಮೆಂಟ್ ಬ್ಯಾನರಿನಡಿಯಲ್ಲಿ ನನಗೆ ಎರಡು ಚಿತ್ರಗಳನ್ನು ನಿರ್ದೇಶನ ಮಾಡಲು ....
ಫ್ಯಾಂಟಮ್ ಚಿತ್ರದಲ್ಲಿ ಕಿರುತೆರೆ ನೀರೆ ಬಹು ನಿರೀಕ್ಷಿತ ‘ಫ್ಯಾಂಟಮ್’ ಚಿತ್ರದಲ್ಲಿ ಹೊಸ ಹೊಸ ಸುದ್ದಿಗಳು ಬರುತ್ತಲೆ ಇದೆ. ಈಗ ಬಂದ ಮಾಹಿತಿಯಂತೆ ಕಿರುತೆರೆಯ ಪ್ರತಿಭಾವಂತ ನಟಿ ನೀತಾಅಶೋಕ್ ಸೇರ್ಪಡೆಯಾಗಿದ್ದಾರೆ. ‘ಯಶೋಧೆ’ ‘ನಾ ನಿನ್ನ ಬಿಡಲಾರೆ’ ಮತ್ತು ‘ನೀಲಾಂಬರಿ’ ಧಾರವಾಹಿಗಳನ್ನು ವೀಕ್ಷಿಸಿದವರಿಗೆ ಇವರ ಪರಿಚಯವಾಗಿರುತ್ತದೆ. ಅಪರ್ಣಾಬಲ್ಲಾಳ್ ಆಲಿಯಾಸ್ ಪನ್ನಾ ಹೆಸರಿನ ಪಾತ್ರ. ಬಾಂಬೆಯಲ್ಲಿ ಹುಟ್ಟಿ ಬೆಳೆದಿದ್ದರಿಂದ ಹಿಂದಿ ಮಿಶ್ರಿತ ಕನ್ನಡ ಮಾತನಾಡುವುದು ಅಭ್ಯಾಸ. ಅಡ್ವೆಂಚರ್ ನೇಚರ್ ಇರುವ ಹುಡುಗಿಯಾಗಿ ಎಲ್ಲಾ ತಿಳಿದುಕೊಳ್ಳಬೆಕು ಎನ್ನುವ ಕುತೂಹಲ ತೋರಿಸುವ ಗುಣವುಳ್ಳವಳು. ....
ಲೈಫ್ ಈಸ್ ಬ್ಯೂಟಿಫುಲ್ ಅಂತಾರೆ ಪೃಥ್ವಿಅಂಬರ್ ದಿಯಾ ಚಿತ್ರದ ಮೂಲಕ ನಾಯಕನಟನಾಗಿ ಗುರುತಿಸಿಕೊಂಡಿರುವ ಪೃಥ್ವಿಅಂಬರ್ ‘ಲೈಫ್ ಈಸ್ ಬ್ಯೂಟಿಫುಲ್’ ಸಿನಿಮಾಕ್ಕೆ ಸಹಿ ಹಾಕಿದ್ದಾರೆ. ಸೋಮವಾರದಂದು ಡಾಲಿಧನಂಜಯ್ ಶೀರ್ಷಿಕೆಯನ್ನು ಅನಾವರಣ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿ, ಹೆಸರಿಗೆ ತಕ್ಕಂತೆ ಚಿತ್ರವು ಚೆನ್ನಾಗಿ ಮೂಡಿಬರಲೆಂದು ಶುಭಹಾರೈಸಿದ್ದಾರೆ. ಅರುಣ್ಕುಮಾರ್.ಎಂ ಮತ್ತು ಸಬುಅಲೋಶಿಯಸ್ ಜಂಟಿಯಾಗಿ ನಿರ್ದೇಶನ ಮಾಡಲಿದ್ದಾರೆ. ಇವರಿಬ್ಬರಿಗೂ ಎರಡು ದಶಕಗಳ ಕಾಲ ಜಾಹಿರಾತು ಕ್ಷೇತ್ರದಲ್ಲಿ ಮುದ್ರಾ ಕಮ್ಮುನಿಕೇಶನ್ಸ್, ಪಬ್ಲಿಸಿಸ್, ಹೆಡ್ಜ್ ಇಕ್ವಿಟೀಸ್, ವಿರ್ಲ್ಪೂಲ್, ಪಂಕಜಕಸ್ತೂರಿ, ....
ಮಾರ್ಗ ಚಿತ್ರಕ್ಕೆ ಪುನೀತ್ರಾಜ್ಕುಮಾರ್ ಕ್ಲಾಪ್ ಕ್ರೈಮ್ ಥ್ರಿಲ್ಲರ್ ಕತೆ ಹೊಂದಿರುವ ‘ಮಾರ್ಗ’ ಚಿತ್ರದ ಮಹೂರ್ತ ಸಮಾರಂಭವು ಬನಶಂಕರಿಯ ಬನಗಿರಿ ಶ್ರೀ ವರಸಿದ್ದಿ ವಿನಾಯಕ ದೇವಸ್ಥಾನದಲ್ಲಿ ಸರಳವಾಗಿ ನಡೆಯಿತು. ಪ್ರಥಮ ದೃಶ್ಯಕ್ಕೆ ಪುನೀತ್ರಾಜ್ಕುಮರ್ ಕ್ಲಾಪ್ ಮಾಡಿ ಶುಭ ಹಾರೈಸಿದರು. ರಚನೆ,ಚಿತ್ರಕತೆ ಬರೆದು ನಿರ್ದೇಶನ ಮಾಡುತ್ತಿರುವ ಮೋಹನ್ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. ಪ್ರತಿಯೊಬ್ಬರಿಗೂ ಜೀವನದಲ್ಲಿ ಒಂದು ಮಾರ್ಗ ಇರುತ್ತದೆ. ಅದನ್ನು ತಲುಪುವ ಹಾದಿಯಲ್ಲಿ ಹಲವಾರು ತೊಂದರೆ, ತೊಡಕುಗಳನ್ನು ಎದುರಿಸಬೇಕಾಗುತ್ತದೆ. ಮುಖ್ಯ ....
ನಿರಂಜನ್ ಈಗ ಸೂಪರ್ ಸ್ಟಾರ್ ಉಪೇಂದ್ರ ನಿರ್ದೇಶಕರಾಗಿ, ನಟರಾಗಿ ಹೆಸರಾದವರು. ತಮ್ಮ ಅದ್ಭುತ ಪ್ರತಿಭೆ ಮೂಲಕ ಕನ್ನಡದಲ್ಲಷ್ಟೇ ಅಲ್ಲದೇ ಇತರ ಭಾಷೆಗಳಲ್ಲಿಯೂ ಹೆಸರು ಮಾಡಿ ಸೂಪರ್ ಸ್ಟಾರ್ ಆದವರು ಉಪೇಂದ್ರ. ಈಗ ಅವರ ಕುಟುಂಬದಿಂದ ಚಂದನವನಕ್ಕೆ ಮತ್ತೊಬ್ಬ ನಾಯಕ ನಟನ ಆಗಮನವಾಗುತ್ತಿದೆ. ಹೌದು. ಉಪೇಂದ್ರ ಅವರ ಅಣ್ಣನ ಮಗ ನಿರಂಜನ್ ಸುಧೀಂದ್ರ ಪೂರ್ಣಪ್ರಮಾಣದ ನಾಯಕನಾಗಿ ಬರುತ್ತಿದ್ದಾರೆ ’ಸೂಪರ್ ಸ್ಟಾರ್’ ಚಿತ್ರದ ಮೂಲಕ. ಇತ್ತೀಚಿಗೆ ಚಿತ್ರದ ಕ್ಯಾರೆಕ್ಟರ್ ಟೀಸರ್ ಅನ್ನು ರೋರಿಂಗ್ ಸ್ಟಾರ್ ಶ್ರೀಮುರಳಿ ಬಿಡುಗಡೆ ಮಾಡಿದರು. ಟೀಸರ್ ಬಿಡುಗಡೆ ನಂತರ ಮಾತನಾಡಿದ ಶ್ರೀಮುರಳಿ ಎಲ್ಲಾ ನಟರಿಗೂ ಈ ಅವಕಾಶ ಸಿಗುವುದಿಲ್ಲ. ಸ್ಟಾರ್ ಆದ ನಂತರ ....
ಗಜಾನನ ಗ್ಯಾಂಗ್ದಲ್ಲಿ ಅದಿತಿಪ್ರಭುದೇವ ಇಲ್ಲಿಯವರೆಗೂ ಎಲ್ಲಾ ಸಿನಿಮಾಗಳಲ್ಲಿ ಕಲರ್ಫುಲ್ ಕಾಲೇಜ್ ಸ್ಟೋರಿಯನ್ನು ತೋರಿಸಲಾಗಿತ್ತು. ಮೊಟ್ಟ ಮೊದಲು ಎನ್ನುವಂತೆ ಮಧ್ಯಮ ವರ್ಗದ ಕಾಲೇಜು ಪ್ರೀತಿ ಕಥನವನ್ನು ‘ಗಜಾನನ ಅಂಡ್ ಗ್ಯಾಂಗ್’ ಚಿತ್ರದಲ್ಲಿ ತೋರಿಸುವ ಪ್ರಯತ್ನ ಮಾಡಲಾಗುತ್ತಿದೆ. ೨೦೧೪ ರಿಂದ ೨೧ರ ವರೆಗೆ ನಡೆಯುವ ಗಾಥೆ ಇರುವುದು ವಿಶೇಷ. ಚಿತ್ರವು ೨೦೨೧ರಿಂದ ಶುರುವಾಗಿ ಫ್ಲ್ಯಾಶ್ಬ್ಯಾಕ್ದಲ್ಲಿ ೨೦೧೪ರ ವರೆವಿಗೂ ಸಾಗುತ್ತದೆ. ಜೊತೆಗೆ ಗೆಳೆತನ ಹಾಗೂ ಇತರೆ ಅರ್ಥಪೂರ್ಣ ಅಂಶಗಳು ಸನ್ನಿವೇಶಗಳಲ್ಲಿ ಬರುತ್ತವೆ. ‘ಇರುವುದೆಲ್ಲವ ಬಿಟ್ಟು’ ದಲ್ಲಿ ನಟಿಸಿದ್ದ ಶ್ರೀಮಹದೇವ ನಾಯಕ. ಇವರಿಗೆ ....
ಪ್ರಚಂಡ ಪುಟಾಣಿಗಳ ಜೊತೆಯಾದರು ನಟ ಶಶಿಕುಮಾರ್! ಡಿ ಅಂಡ್ ಡಿ ಫಿಲಂ ಪ್ರೊಡಕ್ಷನ್ಸ್ ಬ್ಯಾನರ್ ನ ಅಡಿಯಲ್ಲಿ ಶ್ರೀಮತಿ ಪದ್ಮಾವತಿಯವರು ನಿರ್ಮಿಸುತ್ತಿರುವ ಪ್ರಚಂಡ ಪುಟಾಣಿಗಳು ಚಿತ್ರದ ಚಿತ್ರೀಕರಣ ಮುಕ್ತಾಯಗೊ೦ಡಿದೆ. ಕೋಲಾರದ ನರಸಾಪುರದ ಗುಡ್ಡಗಾಡು ಪ್ರದೇಶದಲ್ಲಿ ಮಕ್ಕಳನ್ನು ನಿಧಿಗಾಗಿ ಬಲಿಕೊಡುವಾಗ. ಅಲ್ಲಿಗೆ ಬರುವ ಹಿರಿಯ ನಟ ಶಶಿಕುಮಾರ್ ಅವರು ʻʻಅಮಾಯಕರನ್ನು ಕಾಪಾಡಲು ಯುಗಯುಗದಲ್ಲೂ ನಾನು ಅವತಾರವೆತ್ತುತ್ತಲೇ ಬಂದಿದ್ದೇನೆ. ಇನ್ನು ಅವತಾರಗಳಿಲ್ಲ... ಸಂಹಾರವೇ ಎನ್ನುತ್ತಾ ಖಳನಟರಾದ ಬಲರಾಮ್ ಪಂಚಾಲ್.. ಕೋಲಾರ್ ಬಾಲು ,ನಿಡುವಳ್ಳಿ ರೇವಣ್ಣ,ಗುರು ಪ್ರಸನ್ನ ಮೊದಲಾದವರನ್ನು ಸೆದೆಬಡಿಯುವ ಸಾಹಸ ದೃಷ್ಯಗಳ ಮುಕ್ತಾಯದೊಂದಿಗೆ ..ಚಿತ್ರಕ್ಕೆ ಕುಂಬಳ ಕಾಯಿ ....
ಮೆಡಿಸನ್ ರಿಸರರ್ಚ್ ಸುತ್ತಲಿನ ಡಿಸೆಂಬರ್ 24 ಮೊದಲ ಹಂತದ ಚಿತ್ರೀಕರಣ ಮುಕ್ತಾಯ ನಾಗರಾಜ್ ಎಂಜಿ ಗೌಡ ಕಥೆ, ಚಿತ್ರಕತೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿರುವ ಚಿತ್ರ ಡಿಸೆಂಬರ್ 24. ಈ ಚಿತ್ರಕ್ಕೆ ಬೆಂಗಳೂರಿನಲ್ಲಿ ಮೊದಲ ಹಂತದ ಶೂಟಿಂಗ್ ಈಗಾಗಲೇ ಮುಕ್ತಾಯವಾಗಿದೆ. ಎರಡನೇ ಹಂತದ ಶೂಟಿಂಗ್ನ್ನು ಯಲ್ಲಾಪುರ ಹಾಗೂ ದಾಂಡೇಲಿಯಲ್ಲಿ ನಡೆಸುವ ಪ್ಲಾನ್ ಚಿತ್ರತಂಡಕ್ಕಿದೆ. ಈ ಚಿತ್ರದಲ್ಲಿ 4 ಹಾಡುಗಳಿದ್ದು ಪ್ರವೀಣ್ ನಿಕೇತನ್ ಸಂಗೀತ ನೀಡಿದ್ದಾರೆ. ಡಾ. ವಿ.ನಾಗೇಂದ್ರಪ್ರಸಾದ್ ಹಾಗೂ ಗೀತಾ ಆನಂದ್ ಪಾಟೀಲï ಸಾಹಿತ್ಯ ಬರೆದಿದ್ದಾರೆ. ಈ ಚಿತ್ರದಲ್ಲಿ ನಾಯಕ ನಟರಾಗಿ ಅಪ್ಪು ಬಡಿಗೇರ, ರವಿ ಕೆ.ಆರ್.ಪೇಟೆ ಕಾಡುಮೆಣಸ, ರಘು ಶೆಟ್ಟಿ, ಜಗದೀಶ್ ಹೆಚ್. ದೊಡ್ಡಿ ಅಭಿನಯಿಸುತ್ತಿದ್ದಾರೆ ....