ವರ್ಣಮಯ ಗೀತೆಗಳು
ಮೂರನೆ ಬಾರಿ ನಿರ್ದೇಶನ ಮಾಡಿರುವ ರವೀಂದ್ರವಂಶಿ ಅವರ ‘ವರ್ಣಮಯ’ ಸಿನಿಮಾದ ಕತೆಯಲ್ಲಿ ಅಂತರರಾಷ್ಟ್ರೀಯ ಚಿತ್ರಕಾರನ ಜೀವನದಲ್ಲಿ ನಡೆದ ಕತೆಯಾಗಿದ್ದರಿಂದ ಶೀರ್ಷಿಕೆ ಪೂರಕವಾಗಿದೆ. ಹಾರರ್ ಅಂದ ಮಾತ್ರಕ್ಕೆ ರಕ್ತದೋಕುಳಿ, ದೆವ್ವ, ಭೂತಗಳು ಕಾಣಿಸಿಕೊಳ್ಳುತ್ತವೆ. ಇದರಲ್ಲಿ ಇದೆಲ್ಲವು ಇರದೆ ಪುಟ್ಟ ಮಕ್ಕಳಿಂದ ವಯೋವೃದ್ದರು ನೋಡವಂತ ದೃಶ್ಯಗಳನ್ನು ಸೆರೆಹಿಡಿಯಲಾಗಿದೆ. ಭ್ರಮೆ, ದೆವ್ವ ಇದೆಯಾ ಎಂಬುದನ್ನು ನೋಡುಗರ ತೀರ್ಮಾನಕ್ಕೆ ನಿರ್ದೇಶಕರು ಬಿಟ್ಟಿದ್ದಾರೆ. ಮೂವರು ನಾಯಕಿಯರು ಮತ್ತು ಒಬ್ಬ ನಾಯಕ ಇರುವುದು ಸಹಜವಾಗಿ ಕುತೂಹಲ ಹುಟ್ಟಿಸಿದೆ.
ಎಂ ಎಲ್ ಎ ಮಾತುಗಳು ಮತುಗಾರ ಪ್ರಥಮ್ ಅಭಿನಯದ ‘ಎಂಎಲ್ಎ’ ಚಿತ್ರಕ್ಕೆ ಚಿತ್ರಮಂದಿರಕ್ಕೆ ಬರಲು ಕ್ಷಣಗಣನೆ ಶುರುವಾಗಿದೆ. ಅವರು ವಿಭಿನ್ನ ಇರುವಂತೆ ಹಾಗೂ ಪ್ರಚಲಿತ ಘಟನೆಗಳನ್ನು ಕ್ರೋಡಿಕರಿಸಿ ಅದೇ ರೀತಿಯಲ್ಲಿ ತೋರಿಸಲಾಗಿದೆ. ಮದರ್ ಪ್ರಾಮಿಸ್ ಲೆಕ್ಕಕ್ಕೆ ಸಿಗದ ಆಸಾಮಿ ಎಂಬುದು ಶೀರ್ಷಿಕೆಗೆ ಅರ್ಥ ಕೊಡುತ್ತದೆ. ಪ್ರಚಾರ ಕಾರ್ಯಕ್ಕಾಗಿ ದರ್ಶನ್ ಆಡಿಯೋ ಅನಾವರಣಗೊಳಿಸಿದ್ದರು. ಪುನೀತ್ರಾಜ್ಕುಮಾರ್ ಹಾಡುಗಳನ್ನು ಆಲಿಸಿ ಪಿಆರ್ಕೆ ಸಂಸ್ಥೆ ಮೂಲಕ ಆಡಿಯೋ ಹಕ್ಕುಗಳನ್ನು ಪಡೆದುಕೊಂಡಿದ್ದಾರೆ. ಗಣೇಶ್ ಟ್ರೈಲರ್ ರಿಲೀಸ್ ಮಾಡಿ ಶುಭ ಹಾರೈಸಿದ್ದಾರೆ. ಸದ್ಯದಲ್ಲೆ ಯಶ್, ಧ್ರುವಸರ್ಜಾ ....
ಹೊಸಬರ ರಂಗಾದ ಹುಡುಗರು ಯುವ ಮನಸುಗಳು ಹಾಗೂ ಪ್ರಚಲಿತ ಘಟನೆಗಳನ್ನು ಹೆಕ್ಕಿಕೊಂಡು ‘ರಂಗಾದ ಹುಡುಗರು’ ಚಿತ್ರಕ್ಕೆ ಕತೆಯನ್ನು ಬರೆಯಲಾಗಿದೆ. ಮೂವರು ತುಂಟ ಹುಡುಗರು ಕಡಿಮೆ ಅವಧಿಯಲ್ಲಿ ದುಡ್ಡು ಮಾಡುವ ಸಲುವಾಗಿ ತಪ್ಪು ದಾರಿಗೆ ಹೋದಾಗ ಕಷ್ಟಗಳು ಹೆಗಲ ಮೇಲೆ ಬರುತ್ತವೆ. ಒಂದು ಹಂತದಲ್ಲಿ ದೇಶಪ್ರೇಮದ ವಿಷಯ ಬಂದಾಗ ತಮ್ಮ ಅಭಿಪ್ರಾಯವನ್ನು ಬದಲಿಸಿಕೊಂಡು ಹೇಗೆ ತೊಡಗಿಕೊಳ್ತಾರೆ. ಜೊತೆಗೆ ಹಿರಿಯ ನಿವೃತ್ತ ಐಪಿಎಸ್ ಅಧಿಕಾರಿಗಳ ಸಲಹೆಗಳನ್ನು ಪಡೆದುಕೊಂಡು ಭಯೋತ್ಪಾದನೆ ಸನ್ನಿವೇಶಗಳನ್ನು ಸೃಷ್ಟಿಸಲಾಗಿದ್ದು, ಅದು ಏನು ಎಂಬುದನ್ನು ಸಿನಿಮಾ ....
ಹೂರಬಂತು ರಾಜಣ್ಣನ ಮಗನ ಹಾಡುಗಳು ಕನ್ನಡ ದಿನದಂದು ‘ರಾಜಣ್ಣನ ಮಗ’ ಸಿನಿಮಾದ ಧ್ವನಿಸಾಂದ್ರಿಕೆ ಅನಾವರಣಗೊಂಡಿತು. ಟ್ರೈಲರ್ನಲ್ಲಿ ಡಿಫರೆಂಡ್ ಡ್ಯಾನಿ ನಿರ್ದೇಶನದ ಮೈ ಜುಂ ಅನಿಸುವ ಫೈಟ್ ತುಣುಕುಗಳನ್ನು ಪ್ರದರ್ಶಗೊಂಡಿತು. ಇವರ ಗುರು ಥ್ರಿಲ್ಲರ್ಮಂಜು ಹಾಗೂ ಇತರೆ ಫೈಟ್ ಮಾಸ್ಟರ್ಗಳಾದ ಜಾಲಿಬಾಸ್ಟನ್, ಮಾಸ್ಮಾದ, ಕುಂಗುಫುಚಂದ್ರು, ವಿನೋಧ್, ವಿಕ್ರಂ ಇವರುಗಳನ್ನು ಆಹ್ವಾನಿಸಿದ್ದರು. ಚಿತ್ರಕ್ಕೆ ಹರಸಲು ಇವರೆಲ್ಲರೂ ಬಂದಿರುವುದು ಚಿತ್ರರಂಗದಲ್ಲಿ ಇದೇ ಮೊದಲು ಎನ್ನಬಹುದು. ಕಾರ್ಯಕ್ರಮಕ್ಕೆ ಚಾಲನೆ ನೀಡಿದ ವಾಣಿಜ್ಯ ಮಂಡಳಿ ಅಧ್ಯಕ್ಷ ಎಸ್.ಎ.ಚಿನ್ನೆಗೌಡ ಮಾತನಾಡಿ ಶೀರ್ಷಿಕೆ ....
ಡಾ.ರಾಜ್ ಕುಟುಂಬದಿಂದ ಹಾಡುಗಳ ಅನಾವರಣ ಕನ್ನಡ ರಾಜೋತ್ಸವ ದಿನದಂದು ಕಲಾವಿದರ ಸಂಘದಲ್ಲಿ ಶಿವರಾಜ್ಕುಮಾರ್ ಹೂರತುಪಡಿಸಿ ಡಾ.ರಾಜ್ಕುಮಾರ್ ಕುಟುಂಬವು ಆಗಮಿಸಿತ್ತು. ಅದಕ್ಕೆ ಕಾರಣ ವಿನಯ್ ರಾಜ್ಕುಮಾರ್ ಅಭಿನಯದ ‘ಅನಂತ್ ವರ್ಸಸ್ ನುಸ್ರತ್’ ಚಿತ್ರದ ಧ್ವನಿಸುರಳಿ ಅನಾವರಣ. ಧರ್ಮದ ಆಚರಣೆ, ಸಮಾಜ ಇದರ ಮಧ್ಯೆ ಪ್ರೀತಿ, ಪ್ರೇಮ, ವಿಶ್ವಾಸ ವಿಷಯಗಳ ಕುರಿತ ಕತೆಯಾಗಿದೆ ಎಂದು ಚಿತ್ರದಲ್ಲಿ ನಟನೆ ಮಾಡಿರುವ ದತ್ತಣ್ಣ ಕತೆಯ ಒಂದು ಏಳೆಯನ್ನು ತೆರೆದಿಟ್ಟರು. ಶೀರ್ಷಿಕೆಯನ್ನು ಅನಂತು ಮತ್ತು ನುಸ್ರತ್ ಇಡಬಹುದಿತ್ತು, ಈಗಿರುವ ಟೈಟಲ್ ಗೊಂದಲವಿದೆ ಎಂಬುದರ ಬಗ್ಗೆ ಆರೋಗ್ಯಕರ ....
ಇದು ಬೆಂಗಳೂರು ನಗರ ಮಾಡಬೇಡ ನಕರ ‘ಇದು ಬೆಂಗಳೂರು ನಗರ’ ಸಿನಿಮಾಕ್ಕೆ ಕೆ.ಪಿ.ಸೆಲ್ವರಾಜ್ ಕತೆ, ಚಿತ್ರಕತೆ, ಸಂಭಾಷಣೆ, ಸಾಹಿತ್ಯ, ಸಂಗೀತ, ನಿರ್ದೇಶನ ಮತ್ತು ನಿರ್ಮಾಣದ ಜವಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಇವರ ಕುರಿತು ಹೇಳುವುದಾದರೆ ೧೯೮೭ರಿಂದ ಚಿತ್ರರಂಗದಲ್ಲಿ ಕ್ಲಾಪ್ಬಾಯ್, ಸಹಾಯಕ, ತಂತ್ರಜ್ಘನಾಗಿ ತರೆಹಿಂದೆ ಸಾಕಷ್ಟು ಕೆಲಸಗಳನ್ನು ಮಾಡಿಕೊಂಡು ಎಲ್ಲವನ್ನು ಕರಗತ ಮಾಡಿಕೊಂಡು ಅಂತಿಮವಾಗಿ ಚಿತ್ರ ಮಾಡುವಲ್ಲಿ ಸಪಲರಾಗಿದ್ದಾರೆ. ದಕ್ಷಿಣ ಭಾರತದಲ್ಲಿ ಗಾರ್ಡನ್ ಸಿಟಿ ಎಂದು ಬೆಂಗಳೂರುನ್ನು ಕರೆಯುತ್ತಾರೆ. ಬೇರೆ ರಾಜ್ಯಗಳಿಂದ ಲಕ್ಷಾಂತರ ಜನರು ಬದುಕಿಗಾಗಿ ....
ಸಂಖ್ಯೆ ಹೆಸರಿನ ಸಿನಿಮಾ ‘೧-೧೧= -’ ಚಿತ್ರಕ್ಕೆ ಕತೆ,ಚಿತ್ರಕತೆ, ಸಂಭಾಷಣೆ ಬರೆದು ಮೊದಲ ಬಾರಿ ನಿರ್ದೇಶನ ಮಾಡಿರುವ ಎಸ್.ಆನಂದ್ಕುಮಾರ್ ಹೇಳುವಂತೆ ಚಿತ್ರದಲ್ಲಿ ಆರು ಹುಡುಗರು ಮತ್ತು ಹುಡುಗಿಯರು ಇರುತ್ತಾರೆ. ಸಮಾಜದಲ್ಲಿ ಕೆಟ್ಟ ಸಹವಾಸದಿಂದ ಯುವಜನತೆಯು ಹಾಳಾಗುತ್ತಿದೆ. ಶ್ರೀಮಂತರ ಮಕ್ಕಳು ಡ್ರಗ್ಸ್ ವ್ಯಸನಿಯಾಗಿ, ಅರಿವಿಲ್ಲದೆ ತಪ್ಪು ದಾರಿಗೆ ಸಾಗುತ್ತಿದ್ದಾರೆ. ಮುಂದೆ ಆಗುವ ಪರಿಣಾಮಗಳಿಗೆ ತಾವೇ ಹೊಣೆಗಾರರಾಗುತ್ತಾರೆ. ನಿಮ್ಮಗಳ ಮನಸ್ಸನ್ನು ಹತೋಟಿಯಲ್ಲಿ ಇಟ್ಟುಕೊಳ್ಳಿರಿ, ಅದನ್ನು ಹರಿಬಿಡಬೇಡಿರಿ. ಹೆಣ್ಣು ಮಕ್ಕಳಿಗೆ ಗೌರವ ಕೊಡಿ ಎಂದು ಸಂದೇಶದ ....
ವಿನೂತನ ಶೀರ್ಷಿಕೆ ಕುಷ್ಕ ಮಾಂಸಹಾರಿ ಸೇವಿಸುವವರಿಗೆ ‘ಕುಷ್ಕ’ ಚೆನ್ನಾಗಿ ತಿಳಿದಿರುತ್ತದೆ. ಇದೇ ಹೆಸರಿನಲ್ಲಿ ನಿಮಾವೊಂದು ಶೇಕಡ ೮೦ ರಷ್ಟು ಚಿತ್ರೀಕರಣ ನಡೆಸಿದೆ., ಕ್ರೈಮ್ ಕಾಮಡಿ ಕತೆಯಲ್ಲಿ ರಷ್ಯನ್ ಪ್ರಜೆ ಸೇರಿದಂತೆ ನಾಲ್ಕು ಪಾತ್ರಗಳು ಬರುತ್ತವೆ. ಇವರುಗಳು ಒಂದು ವಸ್ತುವಿನ ಹಿಂದೆ ಬಿದ್ದಾಗ ಏನೇನು ಘಟನೆಗಳು, ಅವಾಂತರಗಳು ಆಗುತ್ತವೆ ಎಂಬುದನ್ನು ಹಾಸ್ಯ ರೂಪದಲ್ಲಿ ತೋರಿಸಲಾಗುತ್ತದೆ. ಅದು ಏನು ಎಂಬುದನ್ನು ಸಿನಿಮಾ ನೋಡಬೇಕಂತೆ. ಮುಖ್ಯ ಪಾತ್ರದಲ್ಲಿ ಮಠ ಗುರುಪ್ರಸಾದ್ ತಲಹರಟೆ, ಇತಿ ಮಿತಿ ಇರೋಲ್ಲ. ಗುರಿ ಇಲ್ಲದೆ ಓಡಾಡ್ತಾ ಇರುವ ಕಾಮಿಡಿ ವಿಲನ್ ....
ಆಡಿಯೋ ಸಕ್ಸಸ್ ಮೀಟ್ ಭಾವನೆಗಳು, ಆಕ್ಷನ್ ತುಂಬಿಕೊಂಡಿರುವ ‘ತಾಯಿಗೆ ತಕ್ಕ ಮಗ’ ಚಿತ್ರವು ಬಿಡುಗಡೆ ಮುಂಚೆ ಯುಟ್ಯೂಬ್ನಲ್ಲಿ ಲಕ್ಷಾಂತರ ಜನರು ಕೇಳಿರುವುದರಿಂದ ಆಡಿಯೋ ಸಕ್ಸಸ್ ಆಗಿದೆ. ಇದರನ್ನಯ ಆಡಿಯೋ ಸಕ್ಸಸ್ ಮೀಟ್ ನೆಪ ಮಾಡಿಕೊಂಡು ತಂಡವು ಮಾದ್ಯಮದ ಮುಂದೆ ಹಾಜರಾಗಿತ್ತು. ನಿರ್ದೇಶಕ ಶಶಾಂಕ್ ಮಾತನಾಡಿ ಜಾಲತಾಣದಲ್ಲಿ ಹಾಡುಗಳನ್ನು ಹೆಚ್ಚು ಜನರು ಕೇಳಿದರೆ, ಆಡಿಯೋ ಸಕ್ಸಸ್ ಅಂತ ಕರೆಯುತ್ತಾರೆ. ನಮ್ಮ ಚಿತ್ರದ ಹಾಡುಗಳು ದಾಖಲೆಯಾಗಿ ಇನ್ನೋಂದು ಮಜಲಿಗೆ ತೆಗೆದುಕೊಂಡು ಹೋಗಿದೆ. ಇಂತಹ ಕಾರ್ಯಕ್ರಮ ಮಾಡುತ್ತಿರುವುದು ನಾವೇ ಮೊದಲಿರಬಹುದು. ಸಿದ್ದಾಂತಕ್ಕೆ ಹೋರಾಡುವ ತಾಯಿ ಮಗನ ಕತೆಯಾಗಿದೆ. ಬಿಡುಗಡೆಗೆ ಮುಂಚೆ ಸೇಫ್ ಆಗಿದ್ದೇನೆ. ....
ಹೆಣ್ ಮಕ್ಕಳೇ ಸ್ಟ್ರಾಂಗ್ ಗುರು ಮಹಿಳೆಯರಿಗೂ ಸಮಾನತೆ ಕೊಡಬೇಕೆಂದು ಸಮಾಜದಲ್ಲಿ ಹೋರಾಟ ನಡೆಯುತ್ತಿದೆ. ಅದಕ್ಕೆ ತಕ್ಕಂತೆ ನಾಲ್ಕು ನಾಯಕಿಯರು ನಟಿಸಿರುವ ‘ಪುಣ್ಯಾತ್ಗಿತ್ತೀರು’ ಸಿನಿಮಾವೊಂದು ಸಿದ್ದಗೊಳ್ಳುತ್ತಿದೆ. ನಾಯಕನಿಲ್ಲದೆ, ಹುಡುಗಿಯರು ಮಾಸ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ನೆಲ ಡೊಂಕಿದ್ರು ಕುಣಿತೀವಿ ಅಂತ ಅಡಿಬರಹದಲ್ಲಿ ಹೇಳಿಕೊಂಡಿರುವಂತೆ, ಸಿನಿಮಾದ ಪುಣ್ಯಾತ್ಗಿತ್ತೀರ ಅವತಾರಗಳು ಅನಾವರಣಗೊಂಡಿತು. ಕತೆ ಬರೆದು ನಿರ್ದೇಶನ ಮಾಡಿರುವುದು ರಾಜ್.ಬಿ.ಎನ್. ಕತೆಯ ಕುರಿತು ಹೇಳುವುದಾದರೆ ಪಿಜಿದಲ್ಲಿ ಉಳಿದುಕೊಂಡಿದ್ದ ....
ಐದು ದೃಷ್ಟಿಕೋನದ ನಾಲ್ಕು ಕತೆಗಳು ‘ಜೀ-ವನ ಯಗ್ನ’ ಚಿತ್ರವೊಂದು ಸೇರ್ಪಡೆಯಾಗಿದೆ. ಕತೆ,ಸಂಭಾಷಣೆ, ಚಿತ್ರಕತೆ ಮತ್ತು ನಿರ್ದೇಶನ ಮಾಡಿರುವ ಶಿವು ಸರಳೇಬೆಟ್ಟು ಹೇಳುವಂತೆ ಜೀ-ವನವನ್ನು ಜಿ ಗೆ ಹೋಲಿಸಲಾಗಿದೆ. ಪಾರ್ಲೆ-ಜಿ ಸಂತೋಷವನ್ನು ಉಂಟು ಮಾಡಿದರೆ, ಗೂಗಲ್ ಹುಡುಕಾಟವನ್ನು ನಡೆಸುತ್ತದೆ. ಪಂಚಭೂತಗಳಾದ ಭೂಮಿ, ಆಕಾಶ, ಜಲ, ಅಗ್ನಿ ಹಾಗೂ ವಾಯು ಇವೆಲ್ಲವು ಜೀವನದ ಒಂದು ಪಯಣವಾಗಿದೆ. ಇವುಗಳಲ್ಲಿ ನಾಲ್ಕು ಪಾತ್ರಗಳಿಗೆ ಹೆಸರನ್ನು ಇಡಲಾಗಿದೆ. ಉಳಿದ ೫೦ ಪಾತ್ರಗಳ ಹೆಸರು ಇರುವುದಿಲ್ಲ. ಕಣ್ಣು, ಕಿವಿ, ಮೆದುಳು, ಮನಸ್ಸು ಜೊತೆಗೆ ಸಮಾಜ ಇರಲಿದ್ದು ಒಂದು ....
ಸದ್ಯದಲ್ಲೆ ಯಾರಿಗೆ ಯಾರುಂಟು ‘ಯಾರಿಗೆ ಯಾರುಂಟು’ ಸಿನಿಮಾದಲ್ಲಿ ರಂಗಣ್ಣ ಎಂಬುವರು ಪಾತ್ರಗಳನ್ನು ಪರಿಚಯ ಮಾಡಿಕೊಡಲಿದ್ದಾರೆ. ಈತ ಬೇರೆ ಯಾರು ಅಲ್ಲ. ನಿರ್ದೇಶಕರ ಕಲ್ಪನೆಯಲ್ಲಿ ಸೃಷ್ಟಿ ಮಾಡಿಕೊಂಡಿರುವ ಕಾರ್ಟೂನ್ ಬೊಂಬೆ. ಕತೆಯು ಆರೋಗ್ಯಧಾಮ ಎನ್ನುವ ಜಾಗದಲ್ಲಿ ನಡೆಯುತ್ತದೆ. ನಾಯಕ ವೈದ್ಯನಾಗಿದ್ದು ಬ್ರಹ್ಮಚಾರಿ. ತನಗೆ ನೇರವಾಗಿ ಬಂದು ಪ್ರೀತಿಸುತ್ತೇನೆ ಎನ್ನುವ ಹುಡುಗಿಯನ್ನು ಮದುವೆಯಾಗುತ್ತೆನೆ ಎಂಬ ಧೋರಣೆ ಗುಣವುಳ್ಳವನು. ಅದರಂತೆ ಇವನ ಬದುಕಿನಲ್ಲಿ ಮೂವರು ಹುಡುಗಿಯರು ಬಂದು ಹೋಗುತ್ತಾರೆ. ಶೀರ್ಷಿಕೆಯಂತೆ ಯಾರಿಲ್ಲ, ಯಾರಿದ್ದಾರೆ ....
ವೈಜ್ಘಾನಿಕ ಕುರಿತ ನ್ಯೂರಾನ್ ಸೈಂಟಿಫಿಕ್ ಸೆಸ್ಪನ್ಸ್, ಥ್ರಿಲ್ಲರ್ ‘ನ್ಯೂರಾನ್’ ಸಿನಿಮಾಕ್ಕೆ ಕತೆ, ಚಿತ್ರಕತೆ ಬರೆದು ಪ್ರಥಮಬಾರಿ ನಿರ್ದೇಶನ ಮಾಡುತ್ತಿರುವುದು ವಿಕಾಸ್ಪುಷ್ಪಗಿರಿ. ಒಬ್ಬ ಮನುಷ್ಯನಲ್ಲಿ ಒಂದು ಮಿಲಿಯನ್ ಜೀವಕಣಗಳು ಇರಲಿದ್ದು, ಇವುಗಳು ನ್ಯೂರಾನ್ ಮೂಲಕ ಕಾರ್ಯರೂಪಕ್ಕೆ ಬರುತ್ತದೆ. ಅದರಂತೆ ಕತೆಯಲ್ಲಿ ನಾಯಕ ಪಿ.ಹೆಚ್.ಡಿ ಮಾಡಿದ್ದು, ಪ್ರಕೃತಿ ಸಂಶೋಧನೆ ನಡೆಸಿರುತ್ತಾನೆ. ಕೆಲಸದ ನಿಮಿತ್ತ ವಿದೇಶಕ್ಕೆ ಹೋದಾಗ ಭಾರತದಲ್ಲಿ ಹುಡುಗಿ ಮಿಸ್ಸಿಂಗ್ ಅಂತ ತಿಳಿಯುತ್ತದೆ. ವಾಪಸ್ಸು ಬಂದಾಗ ಮತ್ತೋಬ್ಬಳ ಪ್ರವೇಶವಾಗುತ್ತದೆ. ಹೀಗೆ ಮೂವರು ....
೨ ಎ೨ ಎ ಗೀತೆಗಳು ಹೊರಬಂತು ವಿನೂತನ ಶೀರ್ಷಿಕೆ ಹೊಂದಿರುವ ‘ಎ೨ ಎ೨ ಎ’ ಚಿತ್ರವು ಮೂರು ಪಾತ್ರಗಳ ಸುತ್ತ ಸಾಗುತ್ತದೆ. ನಾಯಕ ಆದಿಯಾಗಿ, ಆರಂಭದಲ್ಲಿ ನಾಯಕಿ ಹಾಗೂ ಅಂತ್ಯಕ್ಕೆ ಹಿರಿಯ ನಟಿ ರೂಪದೇವಿ ಇದ್ದಾರೆ. ಎಲ್ಲಾ ಪಾತ್ರಗಳು ಎ ಅಕ್ಷರದಲ್ಲಿ ಬಂದು ಹೋಗುತ್ತದೆ. ಎರಡೆನೆ ಬಾರಿ ನಿರ್ದೇಶಕರಾಗಿರುವ ಆರ್.ಕೆ.ನಾಯಕ್ ಹೇಳುವಂತೆ ಜೋಗಿ, ಬಂದನ, ಹುಚ್ಚ, ಕಸ್ತೂರಿನಿವಾಸ ಹಾಗೂ ಉಪೇಂದ್ರ ಚಿತ್ರಗಳ ಒಂದು ಏಳೆಯನ್ನು ತೆಗೆದುಕೊಂಡು ಕತೆ ಸಿದ್ದಪಡಿಸಲಾಗಿದೆ. ಅದು ಏನು ಎಂಬುದಕ್ಕೆ ಸಿನಿಮಾ ನೋಡಬೇಕೆಂತೆ. ವೃತ್ತಿಯಲ್ಲಿ ಸರ್ಕಾರಿ ನೌಕರರಾಗಿರುವ ಪ್ರತಾಪ್ ಮೊದಲಬಾರಿ ನಾಯಕನಾಗಿ ಅಭಿನಯಿಸಿದ್ದಾರೆ. ....
ಪ್ರೀತಿ ಕೇಳಿ ಸ್ನೇಹ ಕಳೆದುಕೊಳ್ಳಬೇಡಿ ಸುಪ್ರಭಾತ, ಅಮೃತವರ್ಷಿಣಿ ಚಿತ್ರಗಳ ನಿರ್ದೇಶಕ ದಿನೇಶ್ಬಾಬು ಪ್ರೀತಿಯ ಕುರಿತಂತೆ ‘ಪ್ರೀತಿ ಕೇಳಿ ಸ್ನೇಹ ಕಳೆದುಕೊಳ್ಳ ಬೇಡಿ’ ಚಿತ್ರಕ್ಕೆ ಕತೆ, ಚಿತ್ರಕತೆ, ಛಾಯಗ್ರಹಣ ಜೊತೆಗೆ ಆಕ್ಷನ್ ಕಟ್ ಹೇಳಿದ್ದಾರೆ. ಅದಕ್ಕೆಂದು ವಿಚಿತ್ರ ಪ್ರೀತಿ ಕತೆ, ಪ್ರೀತಿ ಬಲಶಾಲಿಯಾಗಿದೆ ಅಂತ ಪೋಸ್ಟರ್ನಲ್ಲಿ ಮುದ್ರಿಸಿದ್ದಾರೆ. ಎಲ್ಲರ ಜೀವನದಲ್ಲಿ ನಡೆದಿರುವ ಸನ್ನಿವೇಶಗಳು ನೋಡುಗರಿಗೆ ಅನಿಸುತ್ತದಂತೆ. ಇದರ ಕುರಿತು ಗೊಂದಲಗಳಿಗೆ ಸ್ಪಷ್ಟಿಕರಣ ನೀಡಿ, ಕ್ಲೈಮಾಕ್ಸ್ನಲ್ಲಿ ಸ್ನೇಹಕ್ಕಿಂತ ಪ್ರೀತಿ ....
ಲಂಡನ್ನಲ್ಲಿ ಲಂಬೋಧರನ ಆಟಟೋಪಗಳು ‘ಲಂಡನ್ನಲ್ಲ ಲಂಬೋಧರ’ ಕತೆಯು ದಿನಭವಿಷ್ಯವನ್ನು ನಂಬಿಕೊಂಡು ದಿನಚರಿ ಆರಂಭಿಸಿದಾಗ ಅವನ ಜೀವನದಲ್ಲಿ ಏನೇನು ಘಟನೆಗಳು ನಡೆಯುತ್ತವೆ. ನಂಬಿಕೆ ಮೇಲೆ ತೊಂದರೆಗಳು ಆಗುತ್ತಿದ್ದರೆ ಪ್ರೇಕ್ಷಕರಿಗೆ ನಗು ತರಿಸುತ್ತದೆ. ಅದನ್ನು ಹೇಗೆ ಸರಿಪಡಿಸಿಕೊಳ್ಳುತ್ತಾನೆ. ಚಿಕ್ಕ ಮನೆಯಿಂದ ಶುರುವಾದ ಕತೆಯು ಲಂಡನ್ಗೆ ಕರೆದುಕೊಂಡು ಹೋಗುತ್ತದೆ. ಇಂತಹ ಸನ್ನಿವೇಶಗಳನ್ನು ಕಾಮಿಡಿ ರೂಪದಲ್ಲಿ ತೋರಿಸುವ ಪ್ರಯತ್ನ ಮಾಡಲಾಗಿದೆ. ನೋಡುಗರಿಗೆ ಲಂಬೋದರ ಹೊಂದಿಕೆಯಾಗುತ್ತಾರೆ. ಕಿರುಚಿತ್ರ ಹಾಗೂ ಹಲವು ನಿರ್ದೇಶಕ ಬಳಿ ಕೆಲಸ ಮಾಡಿದ ಅನುಭವ ಇರುವ ರಾಜ್ಸೂರ್ಯ ಮೊದಲಬಾರಿ ಕತೆ ಬರೆದು ....
ತೆರೆ ಮೇಲೆ ಶ್ರೀ ಹಾಸನಾಂಬ ದೇವಿ ಮಹಿಮೆ ಶ್ರೀ ಹಾಸನಾಂಬ ದೇವಿಯ ದರ್ಶನವು ವರ್ಷಕ್ಕೆ ಒಂದು ವಾರಗಳ ಮಾತ್ರ ತೆರೆದು, ಕೊನೆ ದಿವಸದಂದು ದೇವಿಗೆ ದೀಪ, ಹೂ ಇಡಲಾಗಿದ್ದು, ವರ್ಷದ ನಂತರ ಬಾಗಿಲು ತೆಗೆದಾಗ ದೀಪ ಉರಿಯುತ್ತಿದ್ದು, ಹೂ ಬಾಡಿರುವುದಿಲ್ಲ. ಆಚಾರ ಗೊತ್ತಿದ್ದರೂ, ಹಿನ್ನಲೆ ಏನು? ಇದರ ನಡುವೆ ಏನಾಗಿದೆ, ಯಾಕೆ ಬಾಗಿಲು ಪ್ರತಿ ದಿವಸ ತೆಗೆಯುವುದಿಲ್ಲವೆಂದು ಇಂದಿಗೂ ತಿಳಿದಿರುವುದಿಲ್ಲ. ದೇವಿಯು ಹೇಗೆ ಉದ್ಬವವಾಯಿತು. ಇಂತಹ ಸಾಕಷ್ಟು ವಿಷಯಗಳನ್ನು ‘ಶ್ರೀ ಹಾಸನಾಂಬ ಮಹಿಮೆ’ ಎನ್ನುವ ಚಿತ್ರದಲ್ಲಿ ತೋರಿಸಲಾಗಿದೆ. ಚಿತ್ರಕತೆ,ಸಾಹಿತ್ಯ, ಸಂಭಾಷಣೆ ....
ನೈಜ ಘಟನೆ ಚಿತ್ರ ಹೊಸಬರೇ ಸೇರಿಕೊಂಡು ಸಿದ್ದಪಡಿಸಿರುವ ‘ಗಲ್ಲಿ ಬೇಕರಿ’ ಸಿನಿಮಾದ ಕತೆಯು ಗಲ್ಲಿಯಲ್ಲಿರುವ ಬೇಕರಿಯಲ್ಲಿ ಕೆಲಸ ಮಾಡುವ ಹುಡುಗ, ಅದೇ ಏರಿಯಾದಲ್ಲಿರುವ ಪೋಲೀಸ್ ಆಫೀಸರ್ ಮಗಳು. ಇಬ್ಬರ ಮಧ್ಯೆ ನಡೆಯುವ ಪ್ರೇಮಕತೆಯನ್ನು ಸಿನಿಮಾದಲ್ಲಿ ಹೇಳಲಾಗಿದೆ. ನೈಜ ಘಟನೆಯಲ್ಲಿ ಪ್ರೀತಿಸಿದ ಹುಡುಗನನ್ನು ಅವಳ ಅಪ್ಪ ಕೊಲೆ ಮಾಡಿಸಿರುತ್ತಾರೆ. ಚಿತ್ರದಲ್ಲಿ ಇಬ್ಬರು ಒಂದಾಗುವುದನ್ನು ತೋರಿಸಲಾಗಿದೆ. ಆತನನ್ನು ಹುಡುಕಿಕೊಡುವ ಜವಬ್ದಾರಿಯನ್ನು ಜಯಕರ್ನಾಟಕ ಸಂಘವು ವಹಿಸಿಕೊಂಡಂತ ಸನ್ನಿವೇಶವನ್ನು ಸೃಷ್ಸಿಸಿದ್ದು, ಸಂಘಕ್ಕೆ ಅಂತಲೇ ಒಂದು ಹಾಡನ್ನು ರಚಿಸಿ ೨೦ ಜಿಲ್ಲೆಗಳಲ್ಲಿ ....
ಪ್ರಶಸ್ತಿ ಆಯ್ಕೆಯಲ್ಲಿ ಲಾಭಿ ೨೦೧೭ನೇ ಸಾಲಿಗೆ ರಾಜ್ಯ ಚಲನಚಿತ್ರ ಪ್ರಶಸ್ತಿ ಘೋಷಿಸಿದ ಬೆನ್ನಲ್ಲೆ ತರಹೆವಾರು ಟೀಕೆಗಳು ಕೇಳಿಬರುತ್ತವೆ. ಅದರಂತೆ ಮೊದಲ ಸಾಲಿನಲ್ಲ ಇದರು ಕುರಿತು ಮಾತನಾಡಿದ್ದು ‘ಬೆಸ್ಟ್ ಫ್ರಂಡ್ಸ್’ ನಿರ್ದೇಶಕ ಟೀಶಿ. ವೆಂಕಟೇಶ್. ಅವರು ಮಾತನಾಡಿ ಚಲನಚಿತ್ರ ಪ್ರಶಸ್ತಿಯಲ್ಲಿ ಸರಿಯಾದ ಮಾನದಂಡ ಅನುಸರಿಸದೆ, ಶಿಪಾರಸ್ಸು ಇರುವವರಿಗೆ ಪ್ರಶಸ್ತಿ ನೀಡಲಾಗಿದೆ. ಚಿತ್ರಗಳನ್ನು ಹರಾಜು ರೀತಿಯಲ್ಲಿ ಪರಿಗಣಿಸಿದ್ದಾರೆ. ೧೫೮ ವರ್ಷಗಳ ಕಾನೂನು ಹೋರಾಟದ ನಂತರ ಮೂರನೇ ಜಾತಿಯ ಜನರ ಪರವಾಗಿ ಹಾಗೂ ಕಾಯ್ದೆ ೩೭೭ ಪ್ರಕಾರ ಪರಸ್ಪರ ಪ್ರೀತಿ ....