ಶತಕದ ಸಂಭ್ರಮದಲ್ಲಿ ಯಜಮಾನ ಪಿ.ಕುಮಾರ್ ಮತ್ತು ಸಂಗೀತ ನಿರ್ದೇಶಕ ವಿ.ಹರಿಕೃಷ್ಣ ಜಂಟಿಯಾಗಿ ನಿರ್ದೇಶನ ಮಾಡಿರುವ ‘ಯಜಮಾನ’ ಚಿತ್ರವು ಎಲ್ಲಾ ಕಡೆಗಳಿಂದಲೂ ಪ್ರಶಂಸೆ ಬಂದಿದ್ದರಿಂದ ಅನಾಯಾಸವಾಗಿ ನೂರು ದಿನಗಳನ್ನು ಪೂರೈಸಿದೆ. ಇದರನ್ವಯ ನಿರ್ಮಾಪಕಿ ಶೈಲಜಾನಾಗ್ ಚಿತ್ರದಲ್ಲಿ ನಟಿಸಿರುವ ಕಲಾವಿದರು,ತಂತ್ರಜ್ಘರಿಗೆ ನೆನಪಿನ ಕಾಣಿಕೆ ನೀಡುವ ಕಾರ್ಯಕ್ರಮವನ್ನು ಬಂಟ್ಸ್ ಅಸೋಸಿಯೇಶ್ನಲ್ಲಿ ಆಯೋಜಿಸಿದ್ದರು. ನಾಯಕಿಯರಾದ ರಶ್ಮಿಕಾಮಂದಣ್ಣಾ ಮತ್ತು ತಾನ್ಯಹೋಪ್ ಪರವಾಗಿ ಅವರ ತಾಯಿ ಫಲಕ ಸ್ವೀಕರಿಸಿದರು. ಹಿರಿಯ ನಟಿ ಮಾಲತಿಶ್ರೀ ಅವರಲ್ಲಿಗೆ ದರ್ಶನ್ ಬಂದು ಫಲಕ ವಿತರಿಸಿದರು. ದೇವರಾಜ್,ಸಾಧುಕೋಕಿಲ,ಗಾಯಕರಾದ ....
ಬೊಂಬೆ ಹೇಳುತೈತೆ ಗಾಯಕನಿಗೆ ವಿದೇಶದಲ್ಲಿ ಗೌರವ ಏನಮ್ಮಿ ಏನಮ್ಮಿ, ಶೃಂಗಾರದ ಹೊಂಗೆ ಹೂ, ಅಲ್ಲಾಡಿಸು ಮುಂತಾದ ಹಿಟ್ ಹಾಡುಗಳಿಗೆ ಧ್ವನಿಯಾಗಿರುವ ಖ್ಯಾತ ಗಾಯಕ ವಿಜಯ್ ಪ್ರಕಾಶ್ಗೆ ಕರ್ನಾಟಕದಲ್ಲಿ ಹಲವು ಪ್ರಶಸ್ತಿಗಳು ಬಂದಿವೆ. ಅವುಗಳ ಜೊತೆ ಈಗ ಮತ್ತೋಂದು ವಿಶೇಷ ಗೌರವಕ್ಕೆ ಪಾತ್ರರಾಗಿರುವುದು ಕನ್ನಡಿಗರಿಗೆ ಹೆಮ್ಮೆಯ ವಿಷಯವಾಗಿದೆ. ಕಳೆದ ತಿಂಗಳು ಅವರು ವಿದೇಶದ ಕೆಲವು ಭಾಗಗಳಲ್ಲಿ ಸಂಗೀತ ರಸಮಂಜರಿಯನ್ನು ನಡೆಸಿಕೊಟ್ಟಿದ್ದರು. ಮೇ ೧೨ರಂದು ನಾರ್ಥ್ ಕರೋಲಿನದಲ್ಲಿ ಕಾರ್ಯಕ್ರಮವನ್ನು ನಡೆಸಿದಾಗ ನಮ್ಮವರು ಸೇರಿದಂತೆ ಅಲ್ಲಿನ ಜನರು ಇವರ ಹಾಡುಗಳಿಗೆ ಕುಣಿದು ಕುಪ್ಪಳಿಸಿದ್ದಾರೆ. ಅದೇ ....
ಪ್ರೇಕ್ಷಕರು ಉಪ್ಪಿಗೆ ಲವ್ ಯು ಅಂದರು ಎರಡು ವರ್ಷಗಳ ಕೆಳಗೆ ತೆರೆಕಂಡ ‘ಉಪೇಂದ್ರ ಮತ್ತೆ ಬಾ’ ಚಿತ್ರದ ನಂತರ ಈಗ ಬಿಡುಗಡೆ ಆಗಿರುವ ಉಪ್ಪಿ ಅಭಿನಯದ ‘ಐ ಲವ್ ಯು’ ಚಿತ್ರವನ್ನು ಪ್ರೇಕ್ಷಕ ಮಹಾಪ್ರಭುಗಳು ಪ್ರೀತಿಯಿಂದ ಲವ್ ಯು ಅಂತ ಅಪ್ಪಿಕೊಂಡಿದ್ದಾರೆ. ಶುಕ್ರವಾರ ಕನ್ನಡ,ತೆಲುಗು ಭಾಷೆಯಲ್ಲಿ ತೆರೆಕಂಡು ಮೊದಲ ದಿನವೇ ಚಿತ್ರಮಂದಿರದಲ್ಲಿ ಹೌಸ್ಫುಲ್ ಬೋರ್ಡ್ ಹಾಕಿದ್ದಾರೆ. ಇದರ ಸಂತಸವನ್ನು ಹಂಚಿಕೊಳ್ಳಲು ತೆರೆ ಕಂಡ ಮರುದಿನವೇ ತಂಡವು ಮಾದ್ಯಮದ ಮುಂದೆ ಹಾಜರಾಗಿತ್ತು. ವಿತರಕ ಮೋಹನ್ದಾಸ್ಪೈ ಹೇಳುವಂತೆ ತಮಿಳು ಸಿನಿಮಾಗಳು ಪ್ರದರ್ಶನವಾಗುವ ....
ಹಳ್ಳಿಯ ಅಂಬಾನಿ ಪುತ್ರ ‘ಅಂಬಾನಿ ಪುತ್ರ’ ಎಂದರೆ ಧೀರುಬಾಯ್ಅಂಬಾನಿ ನೆನಪಿಗೆ ಬರುತ್ತಾರೆ. ಆದರೆ ಇದೇ ಹೆಸರಿನ ಚಿತ್ರವು ಅವರ ಕತೆಯಾಗಿರುವುದಿಲ್ಲ. ಹಳ್ಳಿ ಕಡೆಗಳಲ್ಲಿ ದುಡ್ಡು ಇದ್ದು, ತಲೆ ತಿರುಗುತ್ತಿದ್ದರೆ ಆಡು ಭಾಷೆಯಲ್ಲಿ ಅಲ್ಲಿನ ಜನರು ಈ ಹೆಸರಿನಿಂದಲೇ ಕರೆಯುತ್ತಾರಂತೆ. ಅದರಂತೆ ಊರಿನ ಹುಡುಗನೊಬ್ಬ ಶೀರ್ಷಿಕೆಯಂತೆ ಬಿಂದಾಸ್ ಆಗಿ ಚಂಚಲ ಮನಸ್ಸುಳ್ಳವನಾಗಿರುತ್ತಾರೆ. ಅವಳು ಸಿಕ್ಕರೆ, ಇವಳು ಅಂದುಕೊಂಡು ಬದುಕನ್ನು ಸಾಗಿಸುತ್ತಿರುತ್ತಾನೆ. ಪ್ರಪಂಚ ನಡಿತಾ ಇರೋದು ನಂಬಿಕೆ ಮೇಲೆ. ಇವುಗಳನ್ನು ಆಧರಿಸಿದ ಮತ್ತು ಕೆಲವೊಂದು ನೈಜ ಘಟನೆಗಳನ್ನು ಕಂಡಿದ್ದು-ಕೇಳಿದ್ದು-ನೋಡಿದ್ದು ಎಂಬಂತೆ ....
ನಮ್ಮದು ಕಿರಿಕ್ ಲೈಫು ಒಂದು ಹೆಸರಿನ ಮೇಲೆ ಚಿತ್ರವು ಯಶಸ್ಸು ಕಂಡರೆ ಅದನ್ನೆ ಹಿಂಬಾಲಿಸುವ ಛಾಳಿ ಗಾಂಧಿನಗರದಲ್ಲಿ ಲಗಾಯ್ತಿನಿಂದಲೂ ನಡೆದುಕೊಂಡು ಬಂದಿದೆ,ಬರುತ್ತಲೆ ಇದೆ. ಕಿರಿಕ್ ಸ್ಟೋರಿ ಹಿಟ್ ಆದ ಹಿನ್ನಲೆಯಲ್ಲಿ ಹೊಸಬರ ತಂಡವೊಂದು ‘ಕಿರಿಕ್ ಲೈಫ್’ ಎನ್ನುವ ಚಿತ್ರಕ್ಕೆ ಚಾಲನೆ ನೀಡಿದ್ದಾರೆ. ಹಲವು ನಿರ್ದೇಶಕರ ಬಳಿ ಕೆಲಸ ಮಾಡಿದ ಅನುಭವ ಇರುವ ಗುರುರಾಜಕುಲಕರ್ಣಿ ಕತೆ,ಚಿತ್ರಕತೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಇವರು ಹೇಳುವಂತೆ ಪ್ರತಿಯೊಬ್ಬರ ಜೀವನದಲ್ಲಿ ಕಿರಿಕ್ ಅನ್ನೋದು ಮಾಮೂಲಿ. ಇದು ಇಲ್ಲದೆ ಜೀವನ ಯಾರದ್ದು ಇರುವುದಿಲ್ಲ. ಸ್ಲಂನಲ್ಲಿ ಬೆಳೆದ ಐವರು ಹುಡುಗರ ಬದುಕಿನಲ್ಲಿ ಏನೇನು ....
ಹೆಣ್ಣು ಸಮಾಜದ ಕಣ್ಣು ಟೈಗರ್ ಪ್ರಭಾಕರ್,ಜಯಮಾಲ ಅಭಿನಯದಲ್ಲಿ ಹೊಸ ಇತಿಹಾಸ ಚಿತ್ರವೊಂದು ತೆರೆಕಂಡಿತ್ತು. ಈಗ ಹೊಸಬರೇ ಸೇರಿಕೊಂಡು ‘ನವ ಇತಿಹಾಸ’ ಎನ್ನುವ ಸಿನಿಮಾವನ್ನು ಸಿದ್ದಪಡಿಸಿದ್ದಾರೆ. ಟೈಟಲ್ ಕೇಳಿದಾಗ ಇದೊಂದು ಸಮಾಜದ ಕುರಿತಾದ ಕತೆ ಇರಬಹುದೆಂದು ತಿಳಿದುಕೊಂಡರೆ ನಿಮ್ಮ ಊಹೆ ತಪ್ಪಾಗುತ್ತದೆ. ಸಂಪೂರ್ಣ ಚಿತ್ರವು ಹೆಣ್ಣು ಮಕ್ಕಳ ಮೇಲೆ ಕೇಂದ್ರಿಕೃತವಾಗಿದೆ. ಲಗಾಯ್ತಿನಲ್ಲಿ ಮದುವೆ ಮಾಡಲು ಹೋದಾಗ ಹೆಣ್ಣುಗಳಿಗೆ ಬರವಿರಲಿಲ್ಲ. ಈಗ ಹುಡುಗಿರ ಸಂಖ್ಯೆ ಕಡಿಮೆ ಇದ್ದು, ಅವರನ್ನು ಹುಡುಕೊದರಲ್ಲಿ ಕಾಲ ಕಳೆದುಹೋಗುತ್ತಿದೆ. ಹೆಣ್ಣು ಭ್ರೂಣ ಹತ್ಯೆ ನಿಲ್ಲಿಸಿ. ಹಾಗೂ ಇದನ್ನು ಮೀರಿ ಮಾಡಿದರೆ ಪರಿಣಾಮ ....
ಹಫ್ತಾ ಟ್ರೈಲರ್ಗೆ ಪ್ರಶಂಸೆಗಳ ಸುರಿಮಳೆ ಹೊಸಬರ ‘ಹಫ್ತಾ’ ಚಿತ್ರ ಅಡಿಬರಹದಲ್ಲಿ ಸೆಂಟಿಮೆಂಟ್ ನಾಟ್ ಅಲೋಡ್ ಅಂತ ಹೇಳಿಕೊಂಡಿದೆ. ಶೀರ್ಷಿಕೆ ಕೇಳಿದರೆ ಇದೂಂದು ವಸೂಲಿ ಕತೆ ಇರಬಹುದೆಂದು ಭಾವಿಸಿದರೆ ಅದು ಆಗಿರುವುದಿಲ್ಲ. ಕಡಲ ತೀರದ ಭೂಗತಲೋಕ ಮತ್ತು ಸುಪಾರಿ ಕಿಲ್ಲಿಂಗ್ ಜೊತೆಗೆ ಬೇರೆ ತರಹದ ಮತ್ತೋಂದು ವಿಷಯವನ್ನು ಸೆಸ್ಪನ್ಸ್ ಥ್ರಿಲ್ಲಿಂಗ್ ಮಾದರಿಯಲ್ಲಿ ತೋರಿಸಲಾಗಿದೆ. ಕೆಟ್ಟವರನ್ನು ಸಂಹಾರ ಮಾಡಲು ಕೆಟ್ಟವನೇ ಬರಬೇಕೆಂದು ಹೇಳಿದ್ದಾರೆ. ಮಂಗಳೂರು, ಮುರುಡೇಶ್ವರ, ಗೋಕರ್ಣ ಮತ್ತು ಬೆಂಗಳೂರು ಪ್ರದೇಶಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಮೂರು ಹಾಡುಗಳಿಗೆ ....
ಒಂಟಿಯಾಗಿ ಹೋರಾಡುವವ ಕಥನ ಈ ಸಂಜೆ ಚಿತ್ರದ ನಾಯಕ ಆರ್ಯ, ನಿರ್ದೇಶಕ ಶ್ರೀ ಸಂಗಮದಲ್ಲಿ ‘ಒಂಟಿ’ ಸಿನಿಮಾವು ಸಿದ್ದಗೊಂಡಿದೆ. ಪ್ರಚಾರದ ಹಂತವಾಗಿ ಧ್ವನಿಸಾಂದ್ರಿಕೆ ಅನಾವರಣಗೊಂಡಿತು, ನಾಯಕ ಹೂರತುಪಡಿಸಿ ವೇದಿಕೆಯಲ್ಲಿ ಒಬ್ಬರನ್ನೊಬ್ಬರು ಹೊಗಳುವುದರಲ್ಲೆ ಕಾಲ ಕಳೆದು ಚಿತ್ರದ ಕುರಿತಂತೆ ಮಾಹಿತಿ ನೀಡಲಿಲ್ಲ. ನಾಯಕನ ಅಣ್ಣನಾಗಿ ಕಾಣಿಸಿಕೊಂಡಿರುವ ನೀನಾಸಂಅಶ್ವಥ್ಗೆ ಭರಾಟೆ,ಕೆಜಿಎಫ್ ಮತ್ತು ಈ ಚಿತ್ರದಲ್ಲಿ ನಟಿಸಿದ್ದು ಖುಷಿ ತಂದಿದೆ. ಅಲ್ಲದೆ ಪ್ರಶಸ್ತಿ ಸಿಗಬಹುದೆಂಬ ಆಶಾಭಾವನೆಯಲ್ಲಿದ್ದಾರೆ. ಬಲಿಷ್ಟ ಕಾಲೇಜು ಹುಡುಗಿಯ ಪಯಣದಲ್ಲಿ ಹುಡುಗನೊಬ್ಬನ ಪ್ರವೇಶವಾದಾಗ ಏನಾಗುತ್ತದೆ. ಆತನ ಗುಣಕ್ಕೆ ....
ಸಿನಿ ನಾಟಕದ ಸುದ್ದಿಗೋಷ್ಟಿ ಸಾಮಾನ್ಯವಾಗಿ ಸುದ್ದಿಗೋಷ್ಟಿಯಲ್ಲಿ ಕಲಾವಿದರು,ತಂತ್ರಜ್ಞರು ತಮ್ಮ ಚಿತ್ರದ ಬಗ್ಗೆ ವಿಷಯಗಳನ್ನು ಹಂಚಿಕೊಳ್ಳುತ್ತಾರೆ. ಇಲ್ಲೋಂದು ಹೊಸಬರ ತಂಡವು ರಂಗಭೂಮಿ ಕಲಾವಿದರಾಗಿರುವುದರಿಂದ ಹಲವು ಮಾಹಿತಿಗಳನ್ನು ನಾಟಕ ರೂಪದಲ್ಲಿ ಹೇಳಿಕೊಂಡಿದ್ದು ವಿಶೇಷ,ನೋಡುವಂತೆ ಮಾಡಿತು. ಹಿರಿಯ ಪತ್ರಕರ್ತ ಜೋಗಿ ವಿರಚಿತ ‘ನದಿಯ ನೆನಪಿನ ಹಂಗು’’ ಕಾದಂಬರಿಯು ನಾಟಕರೂಪದಲ್ಲಿ ಯಶಸ್ಸನ್ನು ಕಂಡಿದೆ. ಮುಂದೆ ಇದೇ ಹಸರಿನಲ್ಲಿ ನೊಂದಣಿ ಮಾಡಿಸಲು ವಾಣಿಜ್ಯ ಮಂಡಳಿಗೆ ಹೋದಾಗ ಸಿಗಲಿಲ್ಲ. ನಂತರ ‘ಸಮಯದ ಹಿಂದೆ ಸವಾರಿ’ ಹೆಸರಿನಲ್ಲಿ ಕುಂದಾಪುರ, ಮಂಗಳೂರು ಮುಂತಾದ ಸುಂದರ ತಾಣಗಳಲ್ಲಿ ....
ಸಿನಿಮಾ ಜೀವನ ಎರಡು ಒಂದೇ ಆಗಿರುವುದಿಲ್ಲ ೧೯೯೦ರಲ್ಲಿ ಮೊಬೈಲ್, ಇಂಟರ್ನೆಟ್ ಇರಲಿಲ್ಲ. ಅಂದು ಚಿತ್ರದಲ್ಲಿ ಇದ್ದಂತೆ ನಿಜ ಜೀವನದಲ್ಲಿ ಇರುತ್ತದೆಂದು ಯುವ ಮನಸ್ಸುಗಳು ಭ್ರಮಿಸಿಕೊಳ್ಳುತ್ತಿದ್ದರು. ಆದರೆ ಸಿನಿಮಾದ ಹಾಗೆಯೇ ಜೀವನ ಇರುವುದಿಲ್ಲವೆಂದು ‘ಗಂಟುಮೂಟೆ’ ಚಿತ್ರದಲ್ಲಿ ಹೇಳುವ ಪ್ರಯತ್ನ ಮಾಡಿದ್ದಾರೆ. ಅದಕ್ಕಾಗಿ ಆಗಿನ ಕಾಲಕ್ಕೆ ತಕ್ಕಂತೆ ಸ್ಥಳಗಳಾದ ಬೆಂಗಳೂರು, ಮೈಸೂರು ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಎಸ್ಎಸ್ಎಲ್ಸಿ ಓದುತ್ತಿರುವ ಹದಿನಾರರ ಹುಡುಗಿಯ ದೃಷ್ಟಿಕೋನದಲ್ಲಿ ಹೆಣೆದ ನವಿರಾದ, ನೈಜ ಹಾಗೂ ಅಷ್ಟೇ ತೀವ್ರತೆಯಿಂದ ಕೂಡಿದ ಭಾವದ ....
ಕೌತುಕಗಳ ಆಪರೇಶನ್ ನಕ್ಷತ್ರ ನಾವು ಒಬ್ಬರಿಗೆ ಯಾಮಾರಿಸಿದರೆ, ಬೇರೆಯವರಿಂದ ನಾವುಗಳು ಯಾವ ರೀತಿ ಮೋಸ ಹೋಗುತ್ತೇವೆ. ಎಲ್ಲಿಯವರೆವಿಗೂ ಮೋಸ ಮಾಡುವವರು ಇರುತ್ತಾರೋ, ಅಲ್ಲಿಯವರೆಗೂ ಇದೆಲ್ಲವೂ ನಡೆಯುತ್ತಲೇ ಇರುತ್ತದೆ. ನಿಸ್ವಾರ್ಥ ಮುಖವಾಡಗಳ ಮಧ್ಯೆ ಸ್ವಾರ್ಥ ಮನಸ್ಸು ಇದ್ದವರಿಗೆ ದುಡ್ಡು ಬಂದಾಗ ಏನಾಗುತ್ತಾರೆ. ಇಂತಹ ಅಂಶಗಳನ್ನು ತೆಗೆದುಕೊಂಡು ‘ಆಪರೇಶನ್ ನಕ್ಷತ್ರ’ ಚಿತ್ರಕ್ಕೆ ಕತೆ,ಚಿತ್ರಕತೆ ಬರೆದು ನಿರ್ದೇಶನ ಮಾಡಿರುವುದು ಮಧೂಸೂಧನ್.ಕೆ.ಆರ್. ಟೆಂಟ್ ಸಿನಿಮಾ ವಿದ್ಯಾರ್ಥಿಯಾಗಿ ಹೂರಬಂದ ನಂತರ ಆಕ್ಷನ್ ಕಟ್ ಹೇಳಿದ್ದಾರೆ. ಮೈಂಡ್ ಗೇಮ್ ಕತೆಯಾಗಿದ್ದು, ನಾಲ್ಕು ಪಾತ್ರಗಳು ಜೀವಾಳವಾಗಿದೆ. ....
ಪರಕಾಯ ಪ್ರವೇಶ ಮಾಡಿದರೆ ಆಗುವ ಅನಾಹುತಗಳು ಚಂದನವನಕ್ಕೆ ಬಂದಲ್ಲಿ ಬಂಡವಾಳ ವಾಪಸ್ಸು ಬರುತ್ತದೆಂಬ ಯಾವ ಪುಣ್ಯಾತ್ಮ ಹೇಳಿದರೋ ಗೊತ್ತಿಲ್ಲ. ಅದರ ನಂಬಿಕೆಯಿಂದಲೇ ಟಾಲಿವುಡ್, ಕಾಲಿವುಡ್, ಬಾಲಿವುಡ್ ನಿರ್ಮಾಪಕರು ಒಮ್ಮೆ ನೋಡುವ ಅಂತ ಸಿನಿಮಾ ಮಾಡುತ್ತಿದ್ದಾರೆ. ಅದರಂತೆ ತೆಲುಗಿನ ಟಿ.ಸುಲ್ತಾನ್ ನಾಲ್ಕಾರು ಚಿತ್ರಗಳನ್ನು ನಿರ್ಮಾಣ ಮಾಡಿದ್ದು, ಮೊದಲಬಾರಿ ಕನ್ನಡ ಚಿತ್ರಕ್ಕೆ ಕತೆ ಬರೆದು ಹಣ ಹೂಡುತ್ತಿದ್ದಾರೆ. ಭಾರತೀಯ ಸಂಸ್ಕ್ರತಿಯಲ್ಲಿ ಭೂತ, ಪ್ರೇತಗಳನ್ನು ನಂಬುತ್ತಾರೆ. ಅದರ ಆಧಾರದ ಮೇಲೆ ‘ದೇವಯಾನಿ’ ಚಿತ್ರವೊಂದು ಶೇಕಡ ೬೦ರಷ್ಟು ....
ತಿಥಿ ಆಯ್ತು ಮಾರ್ಲಾಮಿ ಬಂತು ಪೂರ್ವಿಕರನ್ನು ನೆನಸಿಕೊಳ್ಳಲು ಮಹಾಲಯ ಅಮಾವಾಸ್ಯೆಯೆಂದು ಪಟ್ದಣದಲ್ಲಿ ನಡೆಸುತ್ತಾರೆ. ಇದನ್ನೆ ಹಳ್ಳಿಯಲ್ಲಿ ಮಾಡಿದಾಗ ‘ಮಾರ್ಲಾಮಿ’ ಎಂದು ಕರೆಯುತ್ತಾರೆ. ಈಗ ಇದರ ಹೆಸರಿನಲ್ಲಿ ಚಿತ್ರವೊಂದು ಸೆಟ್ಟೇರಿದೆ. ಮಂಡ್ಯಾ, ಚಾಮರಾಜನಗರ,ಮದ್ದೂರು, ಹಾಸನ, ಚನ್ನರಾಯಪಟ್ಟಣ ಮುಂತಾದ ಕಡೆಗಳಲ್ಲಿ ಹೆಚ್ಚಾಗಿ ದಸರಾ, ಗೌರಿ ಹಬ್ಬದಲ್ಲಿ ಸಂಭ್ರಮದಿಂದ ಆಚರಿಸುವುದಕ್ಕೆ ಇದೇ ಹೆಸರನ್ನು ಹೇಳುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಲಭ್ಯವಾಗಿಲ್ಲದ ಕಾರಣ ಸಿಟಿ ಜನರಿಗೆ ಇದರ ಕುರಿತಂತೆ ವಿಷಯ ತಿಳಿದಿರುವುದಿಲ್ಲ. ಅದರಿಂದಲೇ ಈ ಸಿನಿಮಾದ ಮೂಲಕ ಎಲ್ಲವನ್ನು ಹೇಳುವ ....
ವೈಜಾಗ್ ತೀರದಲ್ಲಿ ಐ ಲವ್ ಯೂ ಟ್ರೈಲರ್ ಈ ವರ್ಷದ ಅದ್ದೂರಿ ಚಿತ್ರ ‘ಐ ಲವ್ ಯು’ ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಬರುತ್ತಿರುವ ಬಗ್ಗೆ ಸಾಕಷ್ಟು ಪ್ರಚಾರ ಪಡೆದುಕೊಂಡಿದೆ. ಉಪೇಂದ್ರ ಸಿನಿಮಾಗಳು ಟಾಲಿವುಡ್ನಲ್ಲಿ ಹೆಸರು ಮಾಡಿದ ಕಾರಣ ಪ್ರಚಾರದ ಕೊನೆ ಹಂತವಾಗಿ ಮೊದಲಬಾರಿ ಅಲ್ಲಿನ ಜನರಿಗೆ ಅಂತಲೇ ಟ್ರೈಲರ್ ಬಿಡುಗಡೆ ಕಾರ್ಯಕ್ರಮವು ವಿಶಾಖಪಟ್ಟಣದಲ್ಲಿ ನಡೆಯಿತ್ತು. ಇದಕ್ಕಾಗಿ ಬೆಂಗಳೂರಿನ ಪತ್ರಕರ್ತರು ವೈಜಾಗ್ಗೆ ಪ್ರಯಾಣ ಬೆಳೆಸಿದ್ದರು. ಒಂದು ಕಡೆ ಕಡಲತೀರದ ಭೋರ್ಗರೆತ, ಬಿಸಿಲು, ಸೆಕೆಯಿಂದ ಮಾದ್ಯಮದವರು ತತ್ತರಿಸಿ ಹೋಗಿದ್ದರು. ನಿರ್ಮಾಪಕ ಮತ್ತು ನಿರ್ದೇಶಕ ....
ಮಂಡ್ಯಾ ಸೊಗಡಿನ ಸತ್ಯ ಘಟನೆ ಮಂಡ್ಯಾ ಸೊಗಡಿನಲ್ಲಿ ಬಿಡುಗಡೆಯಾದ ಅಯೋಗ್ಯ, ರಾಜಾಹುಲಿ ಚಿತ್ರಗಳು ಯಶಸ್ವಿಯಾದಂತೆ ಇದರ ಸಾಲಿಗೆ ‘ರಾಜಲಕ್ಷೀ’ ಚಿತ್ರವು ಸೇರ್ಪಡೆಯಾಗಿದೆ. ಕೆರಗೂಡು ಸಮೀಪ ಸಿದ್ದಗೌಡನ ಹೋಬ್ಲಿಯಲ್ಲಿ ನಡೆದಂತ ಘಟನೆಗಳನ್ನು ಹೆಕ್ಕಿಕೊಳ್ಳಲಾಗಿದೆ. ವೃತ್ತಿಯಲ್ಲಿ ವಕೀಲ, ಅಂಶಕಾಲಿಕವಾಗಿ ಸಹಾಯಕ ನಿರ್ದೇಶನ, ಸಾಹಿತ್ಯ, ಕತೆ ಬರೆಯುವ ಹವ್ಯಾಸ ರೂಡಿಸಿಕೊಂಡಿರುವ ಕಾಂತರಾಜ್ಗೌಡ ಸಿನಿಮಾಕ್ಕೆಂದು ಶ್ರೀಕಾಂತ್ ಆಗಿ ಗುರುತಿಸಿಕೊಂಡಿದ್ದಾರೆ. ಅವಕಾಶಕ್ಕಾಗಿ ಹದಿನೇಳು ಕತೆಗಳನ್ನು ನಿರ್ಮಾಪಕರಿಗೆ ಹೇಳಿದಾಗ ಎಲ್ಲವನ್ನು ತಿರಸ್ಕರಿಸಿದ್ದಾರೆ. ಕೊನೆಗೆ ಸಕ್ಕರೆ ನಾಡಿನ ಶೈಲಿಯ ....
ಉಧ್ಭವ, ಮತ್ತೆ ಉಧ್ಭವ ಆಯ್ತು ೧೯೯೦ರಲ್ಲಿ ಬಿಡುಗಡೆಯಾಗಿ ಯಶಸ್ವಿಯಾಗಿದ್ದ ಉಧ್ಭವ ಚಿತ್ರ ಮುಂದುವರೆದ ಭಾಗದಂತೆ ‘ಮತ್ತೆ ಉಧ್ಭವ’ ಹೆಸರಿನೊಂದಿಗೆ ಬರುತ್ತಿದೆ. ಅನಂತನಾಗ್ ಮಾಡಿದ ಪಾತ್ರವನ್ನು ರಂಗಾಯಣರಘು ನಟಿಸುತ್ತಿದ್ದು, ಇವರ ಮಕ್ಕಳು ದೊಡ್ಡವರಾಗಿ ಅಪ್ಪನಿಗೆ ಸಹಾಯ ಮಾಡುತ್ತಾರೆ. ಬೆರಳು ತೋರಿಸಿದರೆ ಹಸ್ತ ನುಂಗುವ ಮಹಾನ್ ಬುದ್ದವಂತ. ಭಯ-ಭಕ್ತಿಯನ್ನು ಸಮಯೋಚಿತವಾಗಿ ಹೇಗೆ ಉಪಯೋಗಿಸುತ್ತಾನೆ. ಅಪ್ಪ ಕಾಪೋರೇಶನ್ ಲೆವಲ್ದಲ್ಲಿ ಇದ್ದರೆ ಮಗ ವಿಧಾನಸೌದ ಸಂಪರ್ಕ ಬೆಳಸಿಕೊಂಡಿರುವ ಪ್ರೀಮಿಯರ್ ಪದ್ಮಿನಿ ಖ್ಯಾತಿಯ ಪ್ರಮೋದ್ ಹಿರಿಮಗ. ವಕೀಲನಾಗಿ ಮಂಡ್ಯಾರವಿ ....
ವಿಜಯ್ ಚಿತ್ರಕ್ಕೆ ಸುದೀಪ್ ಶುಭಹಾರೈಕೆ ನಟನಾಗಿ ಗುರುತಿಸಿಕೊಂಡಿದ್ದ ದುನಿಯಾವಿಜಯ್ ‘ಸಲಗ’ ಚಿತ್ರದ ಮೂಲಕ ನಿರ್ದೇಶಕರಾಗಿ ಗುರುತಿಸಿಕೊಳ್ಳುವುದರ ಜೊತೆಗೆ ಕತೆ,ಚಿತ್ರಕತೆ ಬರೆದಿರುವುದು ವಿಶೇಷ. ನಡೆದಿದ್ದೇ ದಾರಿ ಎಂದು ಅಡಿಬರಹದಲ್ಲಿ ಹೇಳಿಕೊಂಡಿದೆ. ಬಂಡಿ ಕಾಳಮ್ಮ ದೇವಸ್ಥಾನದಲ್ಲಿ ನಡೆದ ಮಹೂರ್ತ ಸಮಾರಂಭಕ್ಕೆ ಸುದೀಪ್ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿದರು. ನಂತರ ಮಾತನಾಡುತ್ತಾ ವಿಜಯ್ ಹಳೇ ಪರಿಚಯವಾಗಿದ್ದು ಅವರ ಕಷ್ಟದ ದಿನಗಳಿಂದಲೂ ನೋಡುತ್ತಾ ಬಂದಿರುತ್ತೇನೆ. ನಿರ್ದೇಶಕನಾಗುವುದರ ಮೂಲಕ ಸರಿಯಾದ ದಾರಿಗೆ ಬಂದಿದ್ದಾರೆ. ಪ್ರತಿಯೊಬ್ಬ ನಿರ್ದೇಶಕನ ಹಿಂದೆ ಕಲಾವಿದ ಇರುವಂತೆ, ....
ಸುವರ್ಣ ಸುಂದರಿಗೆ ಗೆಲುವಿನ ಗರಿ ಕಳೆದ ವಾರ ಬಿಡುಗಡೆಯಾಗಿ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿರುವ ಚಿತ್ರ ‘ಸುವರ್ಣ ಸುಂದರಿ’. ಈ ಚಿತ್ರದಲ್ಲಿ ಸುಂದರ ಬೊಂಬೆಯು ಶೀರ್ಷಿಕೆಯಾಗಿರುವುದನ್ನು ಜನರು ಇಷ್ಟಪಟ್ಟಿದ್ದಾರೆ. ಕ್ರಿ.ಶ ೧೫೦೮ ರಿಂದ ಪ್ರಸಕ್ತ ೨೦೧೯ರ ವರೆಗಿನ ನಾಲ್ಕು ತಲೆಮಾರು ಮತ್ತು ಕಾಲಘಟ್ಟದ ಕತೆಯಾಗಿರುವುದರಿಂದ ನೋಡುಗರಿಗೆ ಕೊನೆವರೆಗೂ ಕುತೂಹಲ ಹುಟ್ಟಿಸುವಲ್ಲಿ ನಮ್ಮ ಶ್ರಮ ಸಾರ್ಥಕವಾಗಿದೆ. ಕತೆಗೆ ಪೂರಕವಾಗಿ ೫೦ ನಿಮಿಷ ಗ್ರಾಫಿಕ್ಸ್ ಇರುವುದು ಪ್ರೇಕ್ಷಕರಿಗೆ ಬೋನಸ್ ಆಗಿದೆ. ಮಾದ್ಯಮದ ಕಡೆಯಿಂದ ಉತ್ತಮ ವಿಮರ್ಶೆ ಬಂದ ಕಾರಣ ಗಳಿಕೆಯಲ್ಲಿ ಚೇತರಿಕೆ ಕಂಡುಬರುತ್ತಿದೆ. ಅದಕ್ಕಾಗಿ ಥ್ಯಾಂಕ್ಸ್ ಹೇಳಲು ಭೇಟಿ ಮಾಡಲಾಗಿದೆ ....