ತಾರಾಮಣಿಯರ ಫ್ಯಾಷನ್ ಕ್ಯಾಲೆಂಡರ್ ಅಂತರರಾಷ್ಟ್ರೀಯ ಮಟ್ಟದ ಫ್ಯಾಷನ್ನ್ನು ಭಾರತೀಯರಿಗೆ ತಲುಪಿಸುವ ಪ್ರಯುಕ್ತ ೧೯೯೭ ರಲ್ಲಿ ‘ಫ್ಯಾಷನ್ ಟಿವಿ’ಯು ಅತ್ಯತ್ತಮ ಕಾರ್ಯಕ್ರಮಗಳನ್ನು ಪ್ರಸಾರ ಮಾಡಿ ಹೆಗ್ಗಳಿಕೆಯನ್ನು ಪಡೆದುಕೊಂಡಿದೆ. ಬೇರೆ ಯಾವ ಜಾಲತಾಣಗಳಲ್ಲೂ ಸಿಗದ ಫ್ಯಾಷನ್ ಕುರಿತ ಮಾಹಿತಿಯನ್ನು ವಸ್ತುನಿಷ್ಟವಾಗಿ ನೀಡುವ ಏಕೈಕ ವಾಹಿನಿಯಾಗಿದ್ದು ಮಾಡ್ರನ್ ಜಗತ್ತಿನ ಅತ್ಯದ್ಬುತ ಚಿತ್ರಗಳು, ಪ್ರತ್ಯೇಕ ಮಾಹಿತಿಗಳೊಂದಿಗೆ ವಿಶ್ವಮಟ್ಟದ ಬ್ರಾಂಡ್ಗಳನ್ನು ತನ್ನತ್ತ ಸೆಳಯುತ್ತಿರುವ ವಾಹಿನಿ ಇದಾಗಿದೆ. ಸದರಿ ವಾಹಿನಿಯಿಂದ ಪ್ರತಿ ವರ್ಷ ತಾರೆಯರು, ಮಾಡೆಲ್ಗಳ ಕ್ಯಾಲೆಂಡರ್ಗಳು ಬರುತ್ತಿದೆ. ....
ಕವಚಗೆ ತಲೆದೂಗಿನ ಪ್ರೇಕ್ಷಕ ಮಹಾಪ್ರಭುಗಳು ಹದಿನಾಲ್ಕು ವರ್ಷದ ನಂತರ ಶಿವರಾಜ್ಕುಮಾರ್ ಅಭಿನಯಿಸಿರುವ ರಿಮೇಕ್ ಚಿತ್ರ ‘ಕವಚ’ಕ್ಕೆ ಎಲ್ಲಾ ಕಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಂತೋಷಕೂಟದಲ್ಲಿ ಮಾತನಾಡಿದ ವಸಿಷ್ಟಸಿಂಹ ಪ್ರೇಕ್ಷಕರು ಮೆಚ್ಚಿಕೊಂಡರೆ ಚಿತ್ರಕ್ಕೆ ನಿಜವಾದ ಬೆಲೆ ಸಿಗುತ್ತದೆ. ಗೋಧಿ ಬಣ್ಣದಲ್ಲಿ ಖಳನಾಗಿ ಅಭಿನಯಿಸಿದ್ದು, ಅದರ ಛಾಯೆ ಇಲ್ಲಿಯೂ ಮುಂದುವರೆದಿದೆ. ಖಳನಟ ಸತ್ತಾಗ ಕಣ್ಣೀರು ಹಾಕಿದ್ದು ಮೊದಲು ಎನ್ನಬಹುದು. ಕುಟುಂಬಸಮೇತ ಹೋಗುತ್ತಿದ್ದಾರೆ. ಸಾರ್ವತ್ರಿಕ ಕತೆಯಾಗಿದ್ದರಿಂದ ಎಲ್ಲರಿಗೂ ಇಷ್ಟವಾಗಿದೆ. ಒಳ್ಳೆ ಉದ್ದೇಶ, ಸ್ವಾವಲಂಬಿ ಬದುಕನ್ನು ....
ಬ್ರಹ್ಮಚಾರಿ ನೀನಾಸಂ ಸತೀಶ್
ಅಯೋಗ್ಯನಾಗಿ ಜನರ ಮನಸ್ಸಿನಲ್ಲಿ ತಳವೂರಿದ್ದ ನೀನಾಸಂ ಸತೀಶ್ ‘ಬ್ರಹ್ಮಚಾರಿ’ ಯಾಗಲು ತಯಾರಿ ಮಾಡಿಕೊಳ್ಳುತ್ತಿದ್ದಾರೆ, ಮಗುವಿನ ತಂದೆಯಾಗಿ ಹೀಗೇಕೆ ಎಂದು ಪ್ರಶ್ಮೆ ಕೇಳುವ ಮೊದಲೇ ಉತ್ತರ ಹೇಳಲಾಗುತ್ತಿದೆ. ಅವರು ಇದೇ ಹೆಸರಿನ ಚಿತ್ರವೊಂದರಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ. ಉಪ ಶೀರ್ಷಿಕೆಯಲ್ಲಿ ನೂರು ಪರ್ಸೆಂಟ್ ವರ್ಜಿನ್ ಅಂತ ಹೇಳಿಕೊಂಡಿದ್ದಾರೆ. ಲೈಬ್ರೆರಿಯನ್ ಪಾತ್ರದಲ್ಲಿ ಅದಿತಿಪ್ರಭುದೇವ ನಾಯಕಿ. ಕತೆಯಲ್ಲಿ ನಾಯಕನ ಪಾತ್ರಧಾರಿ ಬ್ರಹ್ಮಚಾರಿಯಾದಾಗ ಆತನ ಬದುಕಿನಲ್ಲಿ ಹಲವು ರೀತಿಯ ಪಯಣಗಳು ಬರುತ್ತವೆ.
ಅಶ್ವಿನಿಗೌಡ ಕನಸು ನನಸಾಯ್ತು ನಟಿ ಅಶ್ವಿನಿಗೌಡ ‘ವಾರಸುದಾರ’ ಚಿತ್ರದ ಮೂಲಕ ನಾಯಕಿಯಾಗಿ ಗುರುತಿಸಿಕೊಂಡು, ಒಂದಷ್ಟು ಚಿತ್ರಗಳಲ್ಲಿ ನಾಯಕನಿಗೆ ಜೋಡಿಯಾಗಿ ಕಾಣಿಸಿಕೊಂಡಿದ್ದರು. ಆ ಸಂಧರ್ಭದಲ್ಲಿ ತನ್ನಂತೆ ಹೊಸ ಕಲಾವಿದರು, ತಂತ್ರಜ್ಘರು ಅವಕಾಶಕ್ಕಾಗಿ ಅಲೆದಾಡುತ್ತಿದ್ದನ್ನು ಕಂಡು ಇಂತಹವರಿಗೆ ಏನಾದರೂ ಮಾಡಬೇಕೆಂಬ ತುಡಿತ ಹದಿನೈದು ವರ್ಷದಿಂದಲೇ ಮನಸ್ಸಿನಲ್ಲಿ ಕಾಡುತ್ತಿತ್ತು. ಈ ಮಧ್ಯೆ ಮದುವೆ, ಮಕ್ಕಳು ಅಂತ ಸಮಯ ತೆಗೆದುಕೊಂಡು ಮುಂದೆ ಅಕ್ಕ, ತಾಯಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ನಂತರ ಕನ್ನಡ ರಕ್ಷಣಾ ವೇದಿಕೆಯಲ್ಲಿ ಸಕ್ರಿಯ ಕಾರ್ಯಕರ್ತೆಯಾಗಿ ಸದ್ಯ ರಾಜ್ಯ ಮಹಿಳಾ ಘಟಕದ ....
ಬೆಲ್ ಬಾಟಂ ೫೦ ನಾಟ್ಔಟ್ ರೆಟ್ರೋ ಶೈಲಿಯ ‘ಬೆಲ್ ಬಾಟಂ’ ಯಶಸ್ವಿ ಐವತ್ತು ದಿನಗಳನ್ನು ಪೂರೈಸಿ ಮುಂದುವರೆಯುತ್ತಿದೆ. ಇದಕ್ಕಾಗಿ ಮಾದ್ಯಮದವರಿಗೆ ಥ್ಯಾಂಕ್ಸ್ ಹೇಳಲು ನಿರ್ಮಾಪಕರು ಸಂತೋಷಕೂಟವನ್ನು ಏರ್ಪಾಟು ಮಾಡಿದ್ದರು. ಎಲ್ಲರ ಸಂತಸದ ಮಾತುಗಳು ನಿಮಗಾಗಿ ಸಾದರಪಡಿಸಲಾಗುತ್ತಿದೆ. ಜಯತೀರ್ಥ, ನಿರ್ದೇಶಕ: ಎಲ್ಲರ ಶಕ್ತಿಯಿಂದ ಬೆಲ್ಬಾಟಂ ಎಂಬ ಸುಂದರ ಕಲಾಕೃತಿ ಸಿದ್ದಗೊಂಡಿತು. ಇದನ್ನು ಜನರಿಗೆ ಮಾದ್ಯಮದವರು ಆಹ್ವಾನಪತ್ರ್ರಿಕೆ ಎನ್ನುವಂತೆ ಮೂಲೆ ಮೂಲೆಗಳಲ್ಲಿ ಸುದ್ದಿಯನ್ನು ತಲುಪಿಸಿದರು. ಇಲ್ಲಿಯತನಕ ಸುಖಕರ ಪಯಣದಲ್ಲಿ ....
ಕವಲುದಾರಿಯು ಪ್ರಸಕ್ತ ರಾಜಕೀಯಕ್ಕೆ ಸಮಂಜಸವಾಗಿದೆ ದೇಶಕ್ಕೆ ಹೊಸ ನಾಯಕನನ್ನು ಆರಿಸಲು ಚುನಾವಣೆ ನಡೆಯಲಿದೆ. ವಿನೂತನ ಕತೆ ಹೊಂದಿರುವ ‘ಕವಲುದಾರಿ’ ಚಿತ್ರದಲ್ಲಿ ಬರುವ ಸನ್ನಿವೇಶಗಳು ಪ್ರಸ್ತುತ ರಾಜಕೀಯ ಚುನಾವಣೆಗೆ ಸಮಂಜಸವಾಗಲಿದೆ ಎಂಬುದಾಗಿ ರಚನೆ, ನಿರ್ದೇಶನ ಮಾಡಿರುವ ಹೇಮಂತ್ರಾವ್ ಹೇಳಿಕೊಂಡಿದ್ದಾರೆ. ಮರ್ಡರ್ ಮಿಸ್ಟರಿ ಹಿನ್ನಲೆಯಲ್ಲಿ ಸಾಗುವ ಕತೆಯ ಜೊತೆಗೆ ಸಮಾಜದಲ್ಲಿ ಪೋಲೀಸ್ ಅಧಿಕಾರಿಗಳಿಗೆ ಯಾವ ಸ್ಥಾನ ಇದೆ. ಸಮಾಜವು ಇವರನ್ನು ಹೇಗೆ ನೋಡುತ್ತದೆ. ಇಂತಹ ಕ್ಲಾಸಿಕ್ ಅಂಶಗಳು ಇರುವುದು ಪ್ಲಸ್ ಪಾಯಿಂಟ್ ಆಗಿದೆ. ಪ್ರಚಾರದ ಸಲುವಾಗಿ ವಿಭಿನ್ನ ....
ಚಿತ್ರಮಂದಿರದಲ್ಲಿ ವಿರುಪಾ ಪ್ರತ್ಯಕ್ಷ ವಿನೂತನ ‘ವಿರುಪಾ’ ಮಕ್ಕಳ ಚಿತ್ರವನ್ನು ಸಂಪೂರ್ಣ ಹಂಪಿ ಸುತ್ತಮುತ್ತ ಸೆರೆಹಿಡಿಯಲಾಗಿದೆ. ವಿನ್ಸೆಂಟ್, ರುಸ್ತುಂ ಮತ್ತು ಪಾಕ್ಷ ಮೂವರ ಚಿಣ್ಣರ ಕತೆಯಾಗಿದ್ದರಿಂದ ಹೆಸರಿನ ಮೊದಲ ಅಕ್ಷರವನ್ನು ಬಳಸಿಕೊಂಡು ಶೀರ್ಷಿಕೆ ಇಡಲಾಗಿದೆ. ಇದರಲ್ಲಿ ಒಬ್ಬನು ಕುರುಡ, ಮತ್ತೋಬ್ಬ ಮೂಕನಾಗಿದ್ದು, ಇವರೊಂದಿಗೆ ಪುಟ್ಟ ಹುಡುಗಿ ಇರುತ್ತಾಳೆ. ಹಂಪಿಯಲ್ಲಿ ಗೈಡ್ ಆಗಿರುವ ಮಂಜುವಿಗೆ ತಮ್ಮ ಮೂಕನನ್ನು ಚೆನ್ನಾಗಿ ಓದಿಸಬೇಕೆಂದು ಸಿಟಿಗೆ ಕಳುಹಿಸುತ್ತಾನೆ. ಅಲ್ಲಿನ ವಾತವರಣ, ಒತ್ತಡಗಳು ಸರಿಹೊಂದದೆ ತಪ್ಪಿಸಿಕೊಂಡು ಬರುವಾಗ ದಾರಿಯಲ್ಲಿ ಕುರುಡನ ಪರಿಚಯವಾಗಿ ಅವನೊಂದಿಗೆ ಹುಟ್ಟಿದ ....
ತ್ರಯಂಬಕಂದಲ್ಲಿ ಅಚ್ಚರಿಗಳ ಗುಚ್ಚ ಶಿವನ ಮೂರನೇ ಕಣ್ಣು ಅಂತ ಉಪ ಶೀರ್ಷಿಕೆಯಲ್ಲಿ ಹೇಳಿಕೊಂಡಿರುವ ‘ತ್ರಯಂಬಕಂ’ ಚಿತ್ರವು ಬಿಡುಗಡೆ ಸನಿಹದಲ್ಲಿರುವ ಕಾರಣ ಕೊನೆಬಾರಿ ತಂಡವು ಮಾದ್ಯಮದ ಎದುರು ಹಾಜರಿದ್ದು ಮತ್ತಷ್ಟು ಮಾಹಿತಿಗಳನ್ನು ಹಂಚಿಕೊಂಡಿತು. ನಾಯಕಿ ಅನುಪಮಗೌಡ ಹೇಳುವಂತೆ ರಾಘಣ್ಣನ ಮಗಳಾಗಿ ಕಾಣಸಿಕೊಂಡಿದ್ದೇನೆ. ಜಾಸ್ತಿ ಸಂಭಾಷಣೆ ಇರುವುದರಿಂದ ನಟಿಸಲು ಕಷ್ಟವಾಯಿತು. ಅಪ್ಪ-ಮಗಳ ಬಾಂದವ್ಯ, ಅದಕ್ಕೂ ಮೀರಿದ ಸಾಕಷ್ಟು ವಿಷಯಗಳು ಇದೆ ಎಂದರು. ದೇವರು ಇದ್ದಾನೆ. ಆದರೆ ದೇವರ ಸಿನಿಮಾ ಆಗಿರುವುದಿಲ್ಲವೆಂದು ಶಿವಮಣಿ ಬಣ್ಣನೆ ಮಾಡಿದ್ದರು. ಶೇಕಡ ಎಂಬತ್ತರಷ್ಟು ಸಿತಾರ್ ....
ಯುಗಾದಿ ಹಬ್ಬದಂದು ಶ್ರೀಮಂತ ಹಾಡು ಜಗತ್ತಿನಲ್ಲಿ ಅತಿ ಹೆಚ್ಚು ಶ್ರೀಮಂತನಾಗಿರುವುದು ರೈತ. ಸಮಾಜದ ಚಕ್ರವರ್ತಿಗಳು, ಸರ್ಕಾರಗಳು, ಬಂಡವಾಳಶಾಹಿಗಳು ಎಲ್ಲರು ಇವರ ಮೇಲೆ ಅವಲಂಬಿತರಾಗಿದ್ದಾರೆ. ಅದರಿಂದಲೇ ಇವರನ್ನು ‘ಶ್ರೀಮಂತ’ ಅಂತ ಕರೆಯುತ್ತಾರೆ. ಈಗ ಇದೇ ಹೆಸರಿನ ಮೇಲಿನ ಸಿನಿಮಾವೊಂದು ಹಾಸನ, ಕೊಳ್ಳೇಗಾಲ, ಮಂಡ್ಯಾ ಕಡೆಗಳಲ್ಲಿ ಶೇಕಡ ೮೦ರಷ್ಟು ಚಿತ್ರೀಕರಣವನ್ನು ಮುಗಿಸಿ, ಕ್ಲೈಮಾಕ್ಸ್, ಎರಡು ಹಾಡುಗಳನ್ನು ಬಾಕಿ ಉಳಿಸಿಕೊಂಡಿದ್ದು, ಅದನ್ನು ಸದ್ಯದಲ್ಲೆ ಮುಗಿಸಲು ತಂಡವು ಯೋಜನೆ ಹಾಕಿಕೊಂಡಿದೆ. ಅನ್ನದಾತನು ಶೀರ್ಷಿಕೆಯಂತೆ ಆದರೆ ಜಗತ್ತೇ ಶ್ರೀಮಂತದಿಂದ ಇರಬಹುದು ....
ಒಂದು ದಶಕ ಪೂರೈಸಿದ ತುಪ್ಪದ ರಾಣಿ ಮಾರ್ಚ್ ೨೦, ೨೦೦೯ರಂದು ಚಂದನವನಕ್ಕೆ ‘ವೀರ ಮದಕರಿ’ ಚಿತ್ರದ ಮೂಲಕ ರಾಗಿಣಿ ಎನ್ನುವ ಸುಂದರ ಹುಡುಗಿಯೊಬ್ಬಳ ಪ್ರವೇಶವಾಯಿತು. ನೋಡು ನೋಡುತ್ತಿದ್ದಂತೆ ಅವರು ಸಿನಿ ಪಯಣದಲ್ಲಿ ಯಶಸ್ವಿಯಾಗಿ ಹತ್ತು ವರ್ಷಗಳನ್ನು ಮುಗಿಸಿದ್ದಾರೆ. ನಟಿಸಿದ್ದು ೨೦+. ಇದರಲ್ಲಿ ಮಲೆಯಾಳಂ-೩, ತಮಿಳು-೨ ಮತ್ತು ತೆಲುಗು-೧ ಖಾತೆಯಲ್ಲಿ ಸೇರಿಕೊಂಡಿದೆ. ಇವುಗಳಲ್ಲಿ ಹಿಟ್, ಫ್ಲಾಪ್ ಆಗಿದ್ದು ಉಂಟು. ಹಾಗಂತ ಇದರ ಬಗ್ಗೆ ಚಿಂತನೆ ಮಾಡದೆ ಒಳ್ಳೆಯದನ್ನು ಆರಿಸಿತ್ತಾ, ಮನಸ್ಸನ್ನು ಹತೋಟಿಯಲ್ಲಿ ಇಟ್ಟುಕೊಂಡು ಮುಂಬರುವ ಸವಾಲುಗಳನ್ನು ಎದುರಿಸುತ್ತಿದ್ದಾರೆ. ....
ನೈಟ್ಔಟ್ ಬಿಡುಗಡೆಗೆ ದಿನಗಣನೆ ನಟ ರಾಕೇಶ್ಅಡಿಗ ಮೊದಲಬಾರಿ ನಿರ್ದೇಶನ ಮಾಡಿರುವ ‘ನೈಟ್ಔಟ್’ ಚಿತ್ರದ ಕತೆಯು ಆರು ಗಂಟೆಗಳಲ್ಲಿ ನಡೆಯಲಿದೆ. ನೈಜ ಘಟನೆಯಂತೆ ಪರಿಕಲ್ಪನೆವುಳ್ಳ ಒಂದೊಂದು ಸಂಗತಿಗಳು ತೆರೆದುಕೊಳ್ಳುತ್ತಾ ಹೋಗುತ್ತದೆ. ನಾಯಕ, ನಾಯಕಿ ಎನ್ನದೆ ಮೂರು ಪಾತ್ರಗಳು ಅವರ ಸಂಭಾಷಣೆಗಳ ಮೂಲಕ ಪರಿಚಯವಾಗುತ್ತದೆ. ಅವರು ಮಾತನಾಡುವುದರಿಂದ ಫ್ಲಾಶ್ಬ್ಯಾಕ್ ಅನಾವರಣಗೊಂಡು, ಪ್ರತಿ ಸನ್ನಿವೇಶಕ್ಕೂ ತಿರುವುಗಳು ಬರುತ್ತವೆ. ಪ್ರಯೋಗ ಎನ್ನಲಾಗದೆ ವಿಭಿನ್ನ ರೂಪದ ಕಮರ್ಷಿಯಲ್ ಮಾದರಿಯ ಹೊಸ ಜಾನರ್ದಲ್ಲ್ಲಿ ಕಟ್ಟಿಕೊಡುವ ಪ್ರಯತ್ನ ಮಾಡಲಾಗಿದೆ. ....
ಗುಂಡ ಮತ್ತು ಶಿವರಾಜ್.ಕೆ.ಆರ್.ಪೇಟೆ ಕಾಮಿಡಿ ಕಿಲಾಡಿಗಳು ಮೂಲಕ ಹಾಸ್ಯ ನಟನಾಗಿ ಗುರುತಿಸಿಕೊಂಡಿರುವ ಶಿವರಾಜ್.ಕೆ.ಆರ್.ಪೇಟೆ ನಾಯಕನಾಗಿ ಅಭಿನಯಿಸಿರುವ ಮೊದಲ ಚಿತ್ರ ‘ನಾನು ಮತ್ತು ಗುಂಡ’ ತೆರೆಗೆ ಬರಲು ಸಿದ್ದವಾಗಿದೆ. ಗುಂಡ ಅಂದರೆ ನಾಯಿ. ಇದು ಕೂಡ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದೆ. ಇಂತಹ ಸಾಕು ಪ್ರಾಣಿಗಳು ಎಂಥ ಪಾತ್ರವಹಿಸುತ್ತವೆ. ಹಾಗೆಯೇ ಇದನ್ನೆ ಇಟ್ಟುಕೊಂಡು ಯಾವ ರೀತಿ ದಂಧೆ ಮಾಡುತ್ತಾರೆಂದು ಹೇಳಲಾಗಿದೆ. ನಾಯಕ ಹಾಗೂ ನಾಯಿಗೂ ಭಾವನಾತ್ಮಕ ಸಂಬಂದಗಳು, ಇದರೊಂದಿಗಿನ ಪ್ರೀತಿಯ ವಿಷಯಗಳು. ದಂಪತಿಯೊಬ್ಬರು ....
ವಾಹಿನಿಗಳಿಂದ ಉಪಯೋಗ, ದುರಪಯೋಗ ವಾಹಿನಿಗಳಿಂದ ಚಿತ್ರಗಳಿಗೆ ಪೆಟ್ಟು ಬೀಳುತ್ತಿದೆ ಎಂದು ನಿರ್ಮಾಪಕರು ಆರೋಪ ಹೊರಿಸುತ್ತಿದ್ದರೆ, ಮತ್ತೋಂದು ಕಡೆ ಕಿರುತೆರೆಯಲ್ಲಿ ಗುರುತಿಸಿಕೊಂಡ ಕಲಾವಿದರು ಹಿರಿತೆರೆಗೆ ಹೋಗುತ್ತಿರುವುದು ಆರೋಗ್ಯಕರ ಬೆಳವಣಿಗೆ ಎಂದು ವಾಣಿಜ್ಯ ಮಂಡಳಿ ಅಧ್ಯಕ್ಷ ಎಸ್.ಎ.ಚಿನ್ನೆಗೌಡ ಅಭಿಪ್ರಾಯ ಪಟ್ಟರು. ಅವರು ಮಕ್ಕಳ ಚಿತ್ರ ‘ಪುಟಾಣಿ ಪವರ್’ ಧ್ವನಿಸಾಂದ್ರಿಕೆಯನ್ನು ಅನಾವರಣಗೊಳಿಸಿ ಮಾತನಾಡುತ್ತಿದ್ದರು. ಸಿನಿಮಾ ಕುರಿತು ಹೇಳುವುದಾದರೆ ಮಕ್ಕಳ ಮೇಲಿನ ದೌರ್ಜನ್ಯ, ಮಾನಸಿಕ ಹಿಂಸೆಗೆ ಪರಿಹಾರವೇನು? ಚಿಣ್ಣರ ಹಕ್ಕು, ಕನಸು ಏನಾಗಿದೆ?, ಕಡ್ಡಾಯ ಶಿಕ್ಷಣ ಉಲ್ಲಂಘನೆ ಎಷ್ಟು ....
ಹೊಸ ಸಂವತ್ಸರಕ್ಕೆ ಯುಗಾದಿ ಗೀತೆ
ವರಕವಿ ದ.ರಾ.ಬೇಂದ್ರ ವಿರಚಿತ ‘ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ’ ಸಾಹಿತ್ಯವನ್ನು ೧೯೬೦ರಲ್ಲಿ ಬಿಡುಗಡೆಯಾದ ‘ಕುಲವಧು’ ಚಿತ್ರದಲ್ಲಿ ಲೀಲಾವತಿ ಅಭಿನಯದೊಂದಿಗೆ ಬಳಸಲಾಗಿತ್ತು. ಇದನ್ನು ಹೇಳಲು ಪೀಠಿಕೆ ಇದೆ.
ಮಂಡ್ಯಾ ಫಲಿತಾಂಶಕ್ಕೆ ಪಂಚತಂತ್ರ ನೋಡಬೇಕು ಮಂಡ್ಯಾ ಇಂಡಿಯಾ ಅಂತ ಮಾತು, ಟೀಕೆಗಳು ಬರುತ್ತಿದ್ದು, ಚುನಾವಣಾ ಫಲಿತಾಂಶದ ಕಾವು ದಿನದಿಂದ ದಿನಕ್ಕೆ ತಾರಕಕ್ಕೆ ಏರುತ್ತಿದೆ. ಅದರ ಫಲಿತಾಂಶವನ್ನು ‘ಪಂಚತಂತ್ರ’ ಸಿನಿಮಾದಲ್ಲಿ ನೋಡಬಹುದು ಎಂಬುದಾಗಿ ಮಾಹಿತಿ ಹರಡಿದೆ. ಸದರಿ ವಿಷಯವನ್ನು ನಿರ್ದೇಶಕ ಯೋಈಗರಾಜಭಟ್ಟರ ಬಳಿ ಪ್ರಸ್ತಾಪಿಸಿದಾಗ ಅವರಿಂದ ಬಂದ ಉತ್ತರ ಹೀಗಿತ್ತು: ಈ ಪಾಠಿ ಸುದ್ದಿಯನ್ನು ಯಾರು ಹಬ್ಬಿಸಿದರೋ ಗೊತ್ತಿಲ್ಲ. ಚುನಾವಣೆಯಲ್ಲಿ ಸ್ಪರ್ಧಿಸಿರುವ ಇಬ್ಬರ ಮೇಲೂ ಗೌರವವಿದೆ. ಉದ್ದೇಶಪೂರ್ವಕವಾಗಿ ದೃಶ್ಯಗಳನ್ನು ಸೃಷ್ಟಿಸಿಲ್ಲ. ....
ಯುಗಾದಿಗೆ ಪ್ರೀಮಿಯರ್ ಪದ್ಮಿನಿ ಟ್ರೈಲರ್ ಕಿರುತೆರೆ ಸ್ಟಾರ್ ನಿರ್ಮಾಪಕಿ ಶ್ರುತಿನಾಯ್ಡು ಮೊದಲಬಾರಿ ಹಿರಿತೆರೆಗೆ ನಿರ್ಮಾಣ ಮಾಡಿರುವ ‘ಪ್ರೀಮಿಯರ್ ಪದ್ಮಿನಿ’ ಚಿತ್ರವು ಇದೇ ೨೬ರಂದು ತೆರೆಗೆ ಬರಲಿದೆ. ಕತೆ,ಚಿತ್ರಕತೆ,ಸಂಭಾಷಣೆ ಬರೆದು ನಿರ್ದೇಶನ ಮಾಡಿರುವುದು ರಮೇಶ್ಇಂದಿರಾ. ಸಿನಿಮಾದ ಕುರಿತು ಹೇಳುವುದಾದರೆ ಸಂಬಂದಗಳ ಮೇಲೆ ಬದುಕು ಸಾಗಲಿದ್ದು, ಎಲ್ಲರದು ಬೇರೆ ಬೇರೆ ದಾರಿಯಲ್ಲಿ ಇರುತ್ತದೆ. ಜೀವನವನ್ನು ಹಗುರವಾಗಿ ತೆಗೆದುಕೊಳ್ಳಬೇಕು. ಕಥನಾಯಕನ ಬಳಿ ಪ್ರೀಮಿಯರ್ ಪದ್ಮಿನಿ ಕಾರು ಇರುತ್ತದೆ. ಸೆಂಟಿಮೆಂಟ್ ಸಲುವಾಗಿ ಹೊಸ ಕಾರನ್ನು ಖರೀದಿಸದೆ ಅದರಲ್ಲೇ ಜೀವನ ....
ಭಾವನೆ ಭಾವೈಕ್ಯತೆ ನಡುವಿನ ಕಥನ ಕಳೆದವಾರ ಟಪಿ ಕೈಲಾಸಂ ನಾಟಕವು ಸಿನಿಮಾವಾಗುತ್ತಿರುವ ಬಗ್ಗೆ ಸುದ್ದಿಯಾಗಿತ್ತು. ಈಗ ಉತ್ತರ ಕರ್ನಾಟಕ ಭಾಗದಲ್ಲಿ ಯಶಸ್ವಿ ೬೦೦ ಪ್ರದರ್ಶನ ಕಂಡ ನಾಟಕವೊಂದು ‘ಜೈ ಕೇಸರಿ ನಂದನ’ ಎನ್ನುವ ಹೆಸರಿನೊಂದಿಗೆ ಸದ್ದಿಲ್ಲದೆ ಚಿತ್ರೀಕರಣವನ್ನು ಮುಗಿಸಿ ಜನರಿಗೆ ತೋರಿಸಲು ಸಿದ್ದತೆಗಳನ್ನು ಮಾಡಿಕೊಂಡಿದೆ. ಸಬಿ ಬೋಲೋ ಜೈ ಶ್ರೀ ರಾಮ್ ಅಂತ ಅಡಿಬರಹದಲ್ಲಿ ಹೇಳಿಕೊಂಡಿದೆ. ೧೯೮೭ರಲ್ಲಿ ನಡೆದ ಸತ್ಯಕತೆಯನ್ನು ಆಧರಿಸಿದೆ. ಆ ಭಾಗದವರು ಧರ್ಮ ಮತ್ತು ಮೂಡನಂಬಿಕೆ ಮೇಲೆ ಬದುಕನ್ನು ಸಾಗಿಸುತ್ತಿದ್ದಾರೆ. ಹಾಗಂತ ಹಿಂದೂ ಮುಸ್ಲಿಂ ನಡುವಿನ ದ್ವೇಷವನ್ನು ....
ಲಂಬೋದರನನ್ನು ಕೈ ಹಿಡಿದ ಪ್ರೇಕ್ಷಕ ಮಹಾಪ್ರಭುಗಳು ಕಳೆದ ವಾರ ಬಿಡುಗಡೆಯಾದ ‘ಲಂಡನ್ನಲ್ಲಿ ಲಂಬೋದರ’ ಹಾಸ್ಯ ಚಿತ್ರವು ಎಲ್ಲಾ ಕಡೆಗಳಿಂದಲೂ ಉತ್ತಮ ಪ್ರಶಂಸೆ ಪಡೆದುಕೊಂಡಿದೆ. ಲಂಡನ್ದಲ್ಲಿ ಇಲ್ಲಿಯವರೆಗೂ ೪೦೦ ಪ್ರದರ್ಶನ ಕಂಡಿದ್ದು, ಅಲ್ಲಿನ ಕನ್ನಡಿಗರು ಇಷ್ಟಪಟ್ಟಿದ್ದರಿಂದ ಹೆಚ್ಚಿನ ಕೇಂದ್ರಗಳಲ್ಲಿ ಜನರಿಗೆ ತೋರಿಸಲು ಯೋಜನೆ ಹಾಕಿಕೊಂಡಿದ್ದಾರೆ. ಪತ್ರಿಕೆಗಳಲ್ಲಿ ಒಳ್ಳೆಯ ವಿಮರ್ಶೆ ಬಂದಿರುವ ಕಾರಣ ಚಿತ್ರಮಂದಿರದ ಗಳಿಕೆ ಹೆಚ್ಚಾಗುತ್ತಿದೆ ಎಂದು ಸಂಗೀತ ನಿರ್ದೇಶಕ ಪ್ರಣವ್ ಮಾದ್ಯಮದವರಲ್ಲಿ ವಿಷಯವನ್ನು ಹಂಚಿಕೊಂಡಿದ್ದಾರೆ. ಮೈಸೂರು ಹಾಗೂ ಬೆಂಗಳೂರು ಟಾಕೀಸುಗಳಿಗೆ ಭೇಟಿ ....
ಪಯಣದಲ್ಲಿ ಸಂತಸ, ಸಮಸ್ಯೆ ಬರುತ್ತೆ, ಹೋಗುತ್ತೆ ಸಮಾನ ವಯಸ್ಸಿನವರು ಪ್ರಯಾಣ ಕೈಗೊಂಡರೆ ಅವರ ಅನುಭವಗಳು ಹೇಗಿರುತ್ತೇ? ಸಮಸ್ಯೆಗಳು, ಸುಖ ಇವೆಲ್ಲವುಗಳನ್ನು ‘ಪಯಣಿಗರು’ ಎನ್ನುವ ಚಿತ್ರದಲ್ಲಿ ತೋರಿಸಲಾಗಿದೆ. ಸಡಗರ, ಡೀಲ್ರಾಜ್ ನಿರ್ದೇಶನ ಮಾಡಿರುವ ರಾಜ್ಗೋಪಿ ಕತೆ ಬರೆದು ಮೂರನೇ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಇವರು ಹೇಳುವಂತೆ ಪ್ರತಿಯೊಬ್ಬರ ಜೀವನದಲ್ಲಿ ಪಯಣ ಎನ್ನುವುದು ಇರುತ್ತದೆ. ಅದು ಎಲ್ಲಿ, ಯಾಕೆ, ಹೇಗೆ ಮುಗಿಯುತ್ತದೆಂದು ನಿಖರವಾಗಿ ವಿವರಿಸುವುದು ಕಷ್ಟವಾಗುತ್ತದೆ. ಕತೆಯಲ್ಲಿ ನಲವತ್ತು ದಾಟಿದ ಐದು ಮಂದಿ ಗೃಹಸ್ಥರು ....
ಭಕ್ತಿ ಚಿತ್ರ ಕೂಗಿ ಕರೆದೆನಲ್ಲೋ ಮಾದೇವ ಅಪರೂಪಕ್ಕೆ ಎನ್ನುವಂತೆ ಭಕ್ತಿ ಚಿತ್ರಗಳು ಬರುತ್ತಿದೆ. ಇದರ ಸಾಲಿಗೆ ‘ಕೂಗಿ ಕರೆದೆನಲ್ಲೋ ಮಾದೇವ’ ಸಿನಿಮಾ ಸೇರ್ಪಡೆಯಾಗಿದೆ. ಕತೆ,ಚಿತ್ರಕತೆ, ಸಂಭಾಷಣೆ, ಸಾಹಿತ್ಯ ನಿರ್ದೇಶನ ಮಾಡಿರುವ ಎ.ನಟಆರಾಧ್ಯ ಒಮ್ಮೆ ಮಲೈ ಮಹದೇಶ್ವರ ಸ್ವಾಮಿ ದರ್ಶನ ಮಾಡಲು ಪಾದಾಯಾತ್ರೆ ಕೈಗೊಂಡಿದ್ದಾರೆ. ದಾರಿಯಲ್ಲಿ ನಿತ್ರಾಣರಾಗಿದ್ದ ಭಕ್ತನಿಗೆ ದೇವರನ್ನು ಕೂಗಿ ಕರೆಯಿರಿ ತಮಗೆ ಶಕ್ತಿ ಬರುತ್ತದೆ ಆಗ ಸ್ವಾಮಿ ದರ್ಶನ ಮಾಡಬಹುದೆಂದು ಹೇಳುತ್ತಾರೆ. ಆತನು ಕೂಗಿದಾಗ ಅರಿವಿಲ್ಲದಂತೆ ಬೆಟ್ಟ ಹತ್ತುತ್ತಾನೆ. ಅದರಂತೆ ನಿರ್ದೇಶಕರು ತನಗೆ ಸಿನಿಮಾದಲ್ಲಿ ಕೆಲಸ ....