ಏಕಲವ್ಯ ಅಂದರು ಜೋಗಿ ಪ್ರೇಮ್ ದಿ ವಿಲನ್ ನಂತರ ಜೋಗಿ ಪ್ರೇಮ್ ಯಾವ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ ಎಂಬುದಕ್ಕೆ ‘ಏಕಲವ್ಯ’ ಎಂಬ ಉತ್ತರ ಸಿಕ್ಕಿದೆ. ಪ್ರಚಾರ ವೈಖರಿಯಲ್ಲಿ ಮೊದಲ ಸ್ಥಾನ ಪಡೆದಿರುವ ಅವರು ಚಿತ್ರದ ಟೈಟಲ್ ಲಾಂಚ್ನ್ನು ಯುಬಿ ಸಿಟಿಯಲ್ಲಿ ಹಮ್ಮಿಕೊಂಡಿದ್ದರು. ಹದಿನಾರನೇ ಮಹಡಿಯಲ್ಲಿ ಸೇರಿದ್ದ ಗಣ್ಯರ ಸಮ್ಮುಖದಲ್ಲಿ ಯೋಗರಾಜಭಟ್ಟರು ಶುಭವಾಗಲಿ ಎಂದಾಗ, ಎದುರಿಗಿದ್ದ ಪ್ರಸ್ಟೀಜ್ ಟವರ್ಸ್ ಕಡೆ ಎಲ್ಲರು ಕತ್ತನ್ನು ಮೇಲಕ್ಕೆ ಹಾಕಿದಾಗ ಡಿಜಿಟಲ್ ಮಾದರಿಯಲ್ಲಿ ಏಕಲವ್ಯ ಶೀರ್ಷಿಕೆ ಕಾಣಿಸಿಕೊಂಡಿತು. ಗ್ರಾಮೀಣ ಹಿನ್ನಲೆಯಲ್ಲಿ ಬಂದ ....
ನೇತ್ರದಾನ ಮಹಾದಾನ ವರನಟ ಡಾ.ರಾಜ್ಕುಮಾರ್ ಬದುಕಿದ್ದಾಗ ಎರಡು ಕಣ್ಣುಗಳನ್ನು ದಾನ ಮಾಡಲು ಒಪ್ಪಂದಕ್ಕೆ ಸಹಿ ಹಾಕಿ, ಅಂದರಿಗೆ ಬಾಳನ್ನು ನೀಡಿ ಎಂದು ಅಭಿಮಾನಿಗಳಿಗೆ ಕರೆ ನೀಡಿದ್ದರು. ಇಂತಹುದೆ ಪರಿಕಲ್ಪನೆ ಹೊಂದಿರುವ ‘ವೈಟ್’ ಎನ್ನುವ ಐದು ನಿಮಿಷದ ಕಿರುಚಿತ್ರವನ್ನು ರಾಧಿಕಾಪಂಡಿತ್ ಲೋಕಾರ್ಪಣೆ ಮಾಡಿದರು. ಅವರು ಮಾತನಾಡುತ್ತಾ ಅಂದತ್ವ ಇರುವವರಿಗೆ ಕಣ್ಣುಗಳು ಅವಶ್ಯ ಇರುತ್ತದೆ. ಕಣ್ಣು ದಾನ ಮಾಡಿ ಎಂದು ಅರಿವು ಮೂಡಿಸುವ ಶಾರ್ಟ್ಫಿಲ್ಮ್ ಚೆನ್ನಾಗಿ ಮೂಡಿಬಂದಿದೆ. ಪ್ರಿಯಾಮಣಿ ಸಂಭಾವನೆ ಪಡೆಯದೆ ನಟಿಸಿರುವುದು ಹೆಮ್ಮೆಯ ವಿಷಯ. ಅಮಿತಾಬ್ಬಚ್ಚನ್ ಕಂಠದಾನ ಮಾಡಿರುವುದು ಪ್ಲಸ್ ಪಾಯಿಂಟ್ . ಸುಂದರ ಸಂದೇಶವು ....
ಖನನ ಹಾಡುಗಳು ಹೊರಬಂತು ಸೆಸ್ಪನ್ಸ್, ಥ್ರಿಲ್ಲರ್ ಕತೆ ಹೊಂದಿರುವ ಸಾಲಿಗೆ ‘ಖನನ’ ಅಡಿಬರಹದಲ್ಲಿ ಮರಣ ಶಾಸನ ಚಿತ್ರದ ಶೀರ್ಷಿಕೆಯನ್ನು ಸಂಸ್ಕ್ರತ ಶಬ್ದಕೋಶದಿಂದ ಆಯ್ಕೆ ಮಾಡಿಕೊಂಡಿದ್ದು, ಅಗೆಯುವುದು, ಹೂಳುವುದು ಎಂಬರ್ಥ ಕೊಡುತ್ತದೆ. ಇದನ್ನು ಸಾಮಾನ್ಯವಾಗಿ ಅರಣ್ಯ ಪ್ರದೇಶದಲ್ಲಿ ಬಳಸಲಾಗುತ್ತದೆ. ಪ್ರತಿಯೊಬ್ಬರ ಜೀವನದಲ್ಲಿ ಪ್ರತಿ ದಿವಸ ಅಗೆಯುವುದು ಇದ್ದೇ ಇರುತ್ತದೆ. ಅದರ ವಿರುದ್ದ ಹೋರಾಡಲು ಆಗುವುದಿಲ್ಲ ಎಂದರೆ ಬದುಕಲು ಕಷ್ಟವಾಗುತ್ತದೆ. ಮನುಷ್ಯನ ಮನಸ್ಸು ಕ್ಷಣ ಕ್ಷಣ ಬದಲಾವಣೆಗಳು ಆಗುತ್ತಾ ಹೋಗುತ್ತದೆ. ಪ್ರಾಣಿಗಳಿಗೆ ಇರುವ ....
ಪಡ್ಡೆಹುಲಿಯಲ್ಲಿ ೧೦ ಹಾಡುಗಳು ಶುರುವಿನಿಂದಲೂ ಪ್ರಚಾರದಲ್ಲಿ ಮೊದಲ ಪಂಕ್ತಿಯಲ್ಲಿರುವ ‘ಪಡ್ಡೆಹುಲಿ’ ಚಿತ್ರದ ಮ್ಯಾಶ್ಅಪ್ ಹಾಡುಗಳನ್ನು ಮಾದ್ಯಮದವರಿಗೆ ತೋರಿಸಿದ ನಂತರ, ಐದನೇ ಬಾರಿ ತಂಡವು ಮತ್ತಷ್ಟು ವಿಷಯಗಳನ್ನು ಹಂಚಿಕೊಂಡಿತು. ಕತೆ ಚೆನ್ನಾಗಿದ್ದರಿಂದ ನಿರ್ಮಾಣ ಮಾಡಲಾಯಿತು. ಮೂರೇ ದಿವಸ ಸೆಟ್ಗೆ ಹೋಗಿದ್ದು, ಶ್ರೇಯಸ್ ಫೈಟ್ ಮಾಡುವುದನ್ನು ನೋಡಿದಾಗ ಅವರ ಮೇಲೆ ನಂಬಿಕೆ ಬಂತು. ಹೊಸಬ ಅನಿಸಲಿಲ್ಲ. ಬ್ಯಾಲೆನ್ಸ್ ಅಂತ ಹೇಳದೆ ನಿರ್ದೇಶಕರು ಕೇಳಿದ್ದನೆಲ್ಲಾ ನೀಡಿದ್ದೇನೆಂದು ಎಂ.ರಮೇಶ್ರೆಡ್ಡಿ ಹೇಳಿದರು. ಬಸವಣ್ಣ, ಜಿಪಿ.ರಾಜರತ್ನಂ, ಡಿವಿಜಿ, ನಾಗಾರ್ಜುನ, ....
ಪ್ರೀತಿಗೂ ಮೀರಿದ್ದು ದೋಸ್ತಿ ಹಳೆಯ ನಿರ್ಮಾಪಕರುಗಳ ಪೈಕಿ ಸದಾ ಚಿತ್ರಗಳನ್ನು ನಿರ್ಮಾಣ ಮಾಡುತ್ತಿರುವ ಬಿ.ಎನ್.ಗಂಗಾಧರ್ ಅವರ ನೂತನ ಚಿತ್ರ ‘ಜಿಗರಿ ದೋಸ್ತ್’ ಚಿತ್ರೀಕರಣ ಸದ್ಯ ಕನಕಪುರ ರಸ್ತೆ, ವಡೇರಹಳ್ಳಿ ಬಳಿ ಇರುವ ಖೆಡ್ಡಾ ರೆಸಾರ್ಟ್ದಲ್ಲಿ ನಡೆಯುತ್ತಿದೆ. ಸಿಲಕಾನ್ ಸಿಟಿ ಟ್ರಾಫಿಕ್ನಲ್ಲಿ ೭೫ ನಿಮಿಷ ಪ್ರಯಾಣ ಮಾಡಿ ಮಾದ್ಯಮದವರು ಸೆಟ್ಗೆ ಭೇಟಿ ನೀಡಿದಾಗ ತಂಡವು ಹಲವು ಮಾಹಿತಿಗಳನ್ನು ಹಂಚಿಕೊಂಡಿತು. ಮೋಹನ್, ನಿರ್ದೇಶಕ: ದೋಸ್ತಿ ಅಂದರೆ ಏನು ಎಂಬುದನ್ನು ಹೇಳಹೊರಟಿದೆ. ನಮಗೆ ಚಿಕ್ಕಮ್ಮ, ಮಾವ, ಅತ್ತೆ ಕೇಳದೆ ಜನುಮದಿಂದ ಬಂದಿರೋದು. ಸ್ನೇಹ ಎನ್ನುವುದನ್ನು ....
ಟೆಕ್ಕಿಗಳ ಸರಸ, ವಿರಸ ಇಂಜಿನಿಯರ್ಗಳನ್ನು ಚಿಕ್ಕದಾಗಿ ಟೆಕ್ಕಿಗಳು ಅಂತ ಕರೆಯುತ್ತಾರೆ. ಇವರ ಬದುಕು ನೀರಿನ ಮೇಲಿನ ಗುಳ್ಳೆಯಿದ್ದ ಹಾಗೆ ಅಂತ ಹೇಳುವುದುಂಟು. ‘ವೀಕೆಂಡ್’ ಎನ್ನುವ ಚಿತ್ರದ ಕತೆಯು ಸಂಪೂರ್ಣ ಇವರದೆ ಆಗಿರುತ್ತದೆ. ರಚನೆ, ಚಿತ್ರಕತೆ, ಸಂಭಾಷಣೆ ಮತ್ತು ನಿರ್ದೇಶನ ಮಾಡಿರುವ ಶ್ರಿಂಗೇರಿಸುರೇಶ್ ಹೇಳುವಂತೆ ಇವರುಗಳು ಶುರುವಿನಲ್ಲೆ ೫೦-೧ ಲಕ್ಷ ವೇತನ ಪಡೆಯಲಿದ್ದು, ದುಡ್ಡಿನ ಮಹತ್ವ ತಿಳಿದಿರುವುದಿಲ್ಲ. ಸೋಮವಾರದಿಂದ ಶುಕ್ರವಾರದ ತನಕ ಕಷ್ಟಪಟ್ಟು ಕೆಲಸ ಮಾಡಿ, ಬಾಕಿ ಎರಡು ದಿನಗಳನ್ನು ಸಾದ್ಯವಾದಷ್ಟು ಭವಿಷ್ಯವನ್ನು ಲೆಕ್ಕಿಸದೆ ಸುಖವನ್ನು ....
ಬರಹಗಾರರಿಗೆ ಸುವರ್ಣಾವಕಾಶ ಚಿತ್ರ ಮಾಡಲು ಕತೆಗಳ ವೈಕಲ್ಯ ಇದೆ ಎಂದು ನಿರ್ಮಾಪಕರು, ನಿರ್ದೇಶಕರು ಹೇಳುತ್ತಾ ಬಂದಿರುತ್ತಾರೆ. ಕೆಲವು ಪ್ರತಿಭೆಗಳಿಗೆ ಬರೆಯುವ ಕಲೆ ಇದ್ದರೂ ಎಲ್ಲಿಗೆ ಕೊಡುವುದೆಂಬ ದಾರಿ ತಿಳಿದಿರುವುದಿಲ್ಲ. ಅದಕ್ಕಾಗಿಯೇ ಸಿದ್ದಿ ಎಂಟರ್ಟೈನ್ಮೆಂಟ್ಸ್ರವರು ‘ರೈಟ್ ಕರ್ನಾಟಕ’ ಅಡಿಬರಹದಲ್ಲಿ ನಿಮ್ಮ ಕಥೆ ನಾವ್ ಕೇಳ್ತೀವಿ.. ಅಂತ ಹೇಳಿಕೊಂಡಿದ್ದು, ಹೊಸ ಬರಹಗಾರರಿಗೆ ವೇದಿಕೆ ಕಲ್ಪಸಿದೆ. ಅದರನ್ವಯ ಆಸಕ್ತಿವುಳ್ಳವರು ೨೦೦೦ ಪದಗಳ ಒಳಗೆ ಕನ್ನಡ ಅಥವಾ ಇಂಗ್ಲೀಷಿನಲ್ಲಿ ಮಾತ್ರ ಯಾವ ರೀತಿಯಲ್ಲಾದರೂ ಸ್ವಂತ ಕತೆ ಬರೆಯುವ ಅವಕಾಶ ಮಾಡಿಕೊಡಲಾಗಿದೆ. ಅಪ್ಪಟ ಕತೆಯ ರೂಪದಲ್ಲಿ ಇರತಕ್ಕದ್ದು, ....
ಆಡಿಸಿದಾತದಲ್ಲಿ ಪ್ರೇಮದ ಕಾಣಿಕೆ ಹಾಡು ಸಾರ್ವಕಾಲಿಕ ಗೀತೆ ‘ಬಾನಿಗೊಂಡು ಎಲ್ಲೆ ಎಲ್ಲಿದೆ’ ಹಾಡು ‘ಪ್ರೇಮದಕಾಣಿಕೆ’ ಚಿತ್ರದಲ್ಲಿ ಡಾ.ರಾಜ್ಕುಮಾರ್ ಧ್ವನಿಯಲ್ಲಿ ಮೂಡಿಬಂದಿತ್ತು. ಇದೇ ಹಾಡನ್ನು ‘ಆಡಿಸಿದಾತ’ ಚಿತ್ರದಲ್ಲಿ ಬಳಸಲು ಸಂಗೀತ ನಿರ್ದೇಶಕ ಕದ್ರಿಮಣಿಕಾಂತ್ ಯೋಜನೆ ಹಾಕಿಕೊಂಡಿದ್ದಾರೆ. ನಾಯಕ ರಾಘವೇಂದ್ರರಾಜ್ಕುಮಾರ್ ೨೫ನೇ ಚಿತ್ರವಾಗಿದ್ದು, ಸದರಿ ಹಾಡಿನಲ್ಲಿ ಮಾರುಕಟ್ಟೆಗೆ ಬಂದಿರುವ ದುಬಾರಿ ಕಾರನ್ನು ತೋರಿಸಲಾಗುವುದು. ಪ್ರತಿಯೊಬ್ಬರ ಜೀವನದಲ್ಲಿ ಶೀರ್ಷಿಕೆಯು ಅನ್ವಯವಾಗುತ್ತದೆ. ಹೊಸ ಕತೆ ಅಲ್ಲದಿದ್ದರೂ ನಿರೂಪಣೆಯಲ್ಲಿ ಹೊಸತನ ....
ಹಾರರ್ ಕಥನ ವಜ್ರಮುಖಿ ಸಿಗಂದೂರು ದೇವಿ ಕುರಿತ ದೇವರ ಚಿತ್ರ ನಿರ್ಮಾಣ ಮಾಡಿದ್ದ ಶಶಿಕುಮಾರ್.ಪಿ.ಎಮ್ ಈ ಬಾರಿ ದೆವ್ವದ ಸಿನಿಮಾ ‘ವಜ್ರಮುಖಿ’ಗೆ ರಚನೆ,ಚಿತ್ರಕತೆ ಬರೆದು ಹಣ ಹೊಡಿದ್ದಾರೆ. ಪ್ರಚಾರದ ಮೊದಲ ಹಂತವಾಗಿ ಧ್ವನಿಸಾಂದ್ರಿಕೆ ಅನಾವರಣಗೊಂಡಿತು. ಹಾರರ್,ಪ್ರೀತಿ ಮತ್ತು ತ್ರಿಕೋನಾತ್ಮಕ ಕತೆಯೆಂದು ಬಣ್ಣಿಸಿಕೊಂಡ ನಿರ್ಮಾಪಕರು ಗೌಪ್ಯತೆಯನ್ನು ಕಾಪಾಡಿಕೊಂಡರು. ರೋಡ್ರೋಮಿಯೋ ನಂತರ ಎರಡನೆ ಇನ್ನಿಂಗ್ಸ್ ಇದಾಗಿದೆ. ಹಾರರ್ ಅಂದ ಮಾತ್ರಕ್ಕೆ ಯಾವಾಗಲೂ ದೆವ್ವ ಕಾಣಿಸಿಕೊಳ್ಳುವುದಿಲ್ಲ. ಎಲ್ಲಿ ಬೇಕೋ ಅಷ್ಟು ಮಾತ್ರ ಬರುತ್ತದೆಂದು ಆಡ್ ಫಿಲಿಂ ಮೇಕರ್ ಪಾತ್ರ ಮಾಡಿರುವ ನಾಯಕ ....
ಶಾಲೆಯ ಹುಡುಗರ ಹನಿಗಳು ತರಭೇತಿ ಶಾಲೆಯಿಂದ ಹೊರಬರುವ ವಿದ್ಯಾರ್ಥಿಗಳು ಪ್ರಯತ್ನ ಎನ್ನುವಂತೆ ಸಿನಿಮಾ ಮಾಡುವುದು ವಾಡಿಕೆಯಾಗಿದೆ. ಅದರಂತೆ. ವಿಜಯ ಫಿಲಿಂ ಇನ್ಸಿಟ್ಯೂಟ್ ವಿದ್ಯಾರ್ಥಿಗಳಿಂದ ಸಿದ್ದಗೊಂಡಿರುವ ‘ಹನಿಗಳು’ ಚಿತ್ರದ ಅಡಿಬರಹದಲ್ಲಿ ಏನನ್ನು ಹೇಳಲು ಹೊರಟಿರುವೆ ಎಂದು ಹೇಳಿಕೊಂಡಿದೆ. ತರಭೆತಿ ಪಡೆದುಕೊಂಡಿದ್ದು ಒಂದು, ಚಿತ್ರದಲ್ಲಿ ಕೆಲಸ ಮಾಡಿದ್ದು ಮತ್ತೋಂದು ಎಂದು ತಂಡವು ಹೇಳಿಕೊಂಡಿದೆ. ಹಳ್ಳಿ ಹುಡುಗನೊಬ್ಬ ಬೆಂಗಳೂರಿಗೆ ಓದಲು ಬರುತ್ತಾನೆ. ಇಲ್ಲಿನ ವಾತವರಣ, ಸಂಪರ್ಕದಿಂದ ಏನು ಆಗುತ್ತಾನೆ ಎಂಬುದನ್ನು ಪ್ರೀತಿ, ಹಾಸ್ಯ ಮೂಲಕ ತೋರಿಸಲಾಗಿದೆ. ಹುಡುಗ ಹುಡುಗಿಯರನ್ನು ....
ಮನರೂಪದಲ್ಲಿ ಗುಮ್ಮಾ ಏನ್ ಮಾಡ್ತಾನೆ ? ೧೯೮೧ ರಿಂದ ೨೦೦೦ರ ಅವಧಿಯಲ್ಲಿ ಹುಟ್ಟಿದ ಮನುಷ್ಯರ ಮನಸ್ಸಿನ ವಿವಿಧ ಛಾಯೆಗಳು ಹೇಗಿರುತ್ತವೆ ಎಂಬುದನ್ನು ‘ಮನರೂಪ’ ಚಿತ್ರದಲ್ಲಿ ತೋರಿಸುವ ಪ್ರಯತ್ನ ಮಾಡಿರುವುದು ನಿರ್ದೇಶಕ, ನಿರ್ಮಾಪಕ ಕಿರಣ್ಹೆಗಡೆ. ಇವರು ಸಹ ಇದೇ ಇಸವಿಯಲ್ಲಿ ಜನ್ಮತಾಳಿದ್ದಾರಂತೆ. ಇದರ ಅನುಭವದಲ್ಲಿ ಹಾರರ್ ಅಲ್ಲದ, ಸೈಕಲಾಜಿಕಲ್ ಚಿತ್ರಕ್ಕೆ ಕತೆ, ಸಂಭಾಷಣೆ ಬರೆದಿರುವುದು ವಿಶೇಷ. ಕಾಡಿನ ಹಿನ್ನಲೆಯಲ್ಲಿ ನಡೆಯಲಿರುವುದರಿಂದ ಸಿದ್ದಾಪುರ, ಸಿರ್ಸಿ ಕಡೆಗಳಲ್ಲಿ ನಲವತ್ತ ಮೂರು ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ. ಐದು ಸಮಾನ ಮನಸ್ಕರ ಯುವ ತಂಡವೊಂದು ....
ಚಿತ್ರರೂಪದಲ್ಲಿ ಟಿ.ಪಿ.ಕೈಲಾಸಂ ನಾಟಕ ನೈಜ ಘಟನೆ, ಕಾದಂಬರಿಗಳು ಸಿನಿಮಾವಾಗುತ್ತಿರುವುದು ತಿಳಿದಿದೆ. ಅಪರೂಪಕ್ಕೆ ಎನ್ನುವಂತೆ ನಾಟಕಗಳು ಇದೇ ಹಾದಿಗೆ ಸಾಗುತ್ತಿದೆ. ಇದನ್ನು ಹೇಳಲು ಪೀಠಿಕೆ ಇದೆ. ೧೯೨೦ರಲ್ಲಿ ಟಿ.ಪಿ.ಕೈಲಾಸಂ ಬರೆದಿರುವ ‘ಟೊಳ್ಳುಗಟ್ಟಿ’ ನಾಟಕ ‘ಮೂಕ ವಿಸ್ಮಿತ’ ಚಿತ್ರದ ಹೆಸರಿನೊಂದಿಗೆ ತೆರೆಗೆ ಬರಲು ಸನ್ನಿಹಿತವಾಗಿದೆ. ಆಗಿನ ಕಾಲದ ಕತೆಗೆ ಪ್ರಸ್ತುತ ಕಾಲಘಟ್ಟದಲ್ಲಿ, ಮೂರು ತಲೆಮಾರುಗಳು ಹೇಗೆ ತನ್ನ ಪಾತ್ರವನ್ನು ನಿರ್ವಹಿಸುತ್ತೆ. ಒಳ್ಳೆಯದು ಮತ್ತು ಕೆಟ್ಟದ್ದು ಎನ್ನುವ ವ್ಯತ್ಯಾಸಗಳಲ್ಲಿ ಮನುಷ್ಯ ತನ್ನನ್ನು ತಾನು ಹೇಗೆ ....
ಕಲಾವಿದರು ಸರಿಯಾದ ಸಮಯದಲ್ಲಿ ಬಾರದಿದ್ದಲ್ಲಿ ಬಹಿಷ್ಕರಿಸಿ ಕಲಾವಿದರು ತಮ್ಮ ಚಿತ್ರದ ಪ್ರಚಾರಕ್ಕೆ ಬರುತ್ತಿಲ್ಲವೆಂದು ನಿರ್ಮಾಪಕ, ನಿರ್ದೇಶಕರ ಚಿಂತನೆಯಾಗುತ್ತಿದೆ. ಅದರಂತೆ ‘ಧರ್ಮಸ್ಯ’ ಚಿತ್ರದ ಧ್ವನಿಸಾಂದ್ರಿಕೆ ಅನಾವರಣ ಕಾರ್ಯಕ್ರಮಕ್ಕೆ ನಾಯಕರ ಅನುಪಸ್ಥಿತಿ ಇತ್ತು. ಮಾದ್ಯಮದವರು ಮೂರು ಗೋಷ್ಟಿಗಳಿಗೆ ಹಾಜರಾಗಿ ನಾಲ್ಕನೆಯದಕ್ಕೆ ಹೈರಣಾಗಿದ್ದರು. ನಿಗದಿತ ಸಮಯಕ್ಕಿಂತ ೯೦ ನಿಮಿಷಗಳ ತಡವಾಗಿ ಶುರುವಾಗಿದ್ದಕ್ಕೆ ಮತ್ತೋಂದು ಕಡೆ ಕೋಪ ಬಂದಿತ್ತು. ವೇದಿಕೆಗೆ ಬಂದವರೇ ಲಹರಿವೇಲು ಬೇಸರವನ್ನು ವ್ಯಕ್ತಪಡಿಸುತ್ತಾ, ಇನ್ನು ಮುಂದೆ ಕಲಾವಿದರು ಸರಿಯಾದ ....
ಸಾಗರಿ ನಿರ್ಮಾಪಕರ ರನ್ ೨ ಮೆಂಟಲ್ ಖ್ಯಾತಿಯ ಅರ್ಜುನ್ ಅಭಿನಯದ ‘ರನ್’ ಚಿತ್ರವು ೨೦೧೧ರಲ್ಲಿ ಸಿದ್ದಗೊಂಡು, ಕಾರಣಾಂತರದಿಂದ ಬಿಡುಗಡೆ ಆಗಿರುವುದಿಲ್ಲ. ಈಗ ಅದೇ ಚಿತ್ರದ ನಿರ್ಮಾಪಕ,ನಿರ್ದೇಶಕ ಬಿ.ಎಸ್.ಸಂಜಯ್ ಸದ್ದಿಲ್ಲದೆ ‘ರನ್ ೨’ ಚಿತ್ರವನ್ನು ಮುಗಿಸಿ ಸೆನ್ಸಾರ್ ಮಾಡಿಸಲು ಅರ್ಜಿ ಸಲ್ಲಿಸಿದ್ದಾರೆ. ಅಡಿಬರಹದಲ್ಲಿ ಬಾರ್ನ್ ಟಫ್ ಎಂದು ಹೇಳಿಕೊಂಡಿದ್ದಾರೆ. ಸಾಗರಿಯಿಂದ ಬ್ಯಾಡಗಿಮಿರ್ಚಿ ವರೆಗೆ ಹನ್ನೋಂದು ಚಿತ್ರಗಳಿಗೆ ಆಕ್ಷನ್ ಕಟ್ ಹೇಳಿ, ಹಣ ಹೊಡಿದ್ದ ನಿರ್ಮಾಪಕರಿಗೆ ಸಾಹಸ ಪ್ರಧಾನ ಸಿನಿಮಾ ಮಾಡುವ ಬಯಕೆ ಇದರ ಮೂಲಕ ಈಡೇರಿದೆಯಂತೆ. ಕತೆಯ ಕುರಿತು ಹೇಳುವುದಾದರೆ ಕಾಲೇಜು ದಿನಗಳನ್ನು ....
ಅಲ್ಲೇ ಪೂಜೆ, ಕುಂಬಳಕಾಯಿ ‘ರತ್ನ ಮಂಜರಿ’ ಹಾರರ್, ಥ್ರಿಲ್ಲರ್ ಸಿನಿಮಾದ ಚಿತ್ರೀಕರಣವು ಕೊಡಗು ಸಮೀಪ ಇರುವ ಇಗ್ಗುತಪ್ಪು ದೇವಿ ಸನ್ನಿದಿಯಲ್ಲಿ ಪ್ರಾರಂಭವಾಗಿದೆ. ನಂತರ ಅಮೇರಿಕಾ, ಮಲೇಶಿಯಾ ಕಡೆಗಳಲ್ಲಿ ಚಿತ್ರೀಕರಣ ನಡೆಸಿ, ಕೊನೆಗೆ ಶುರು ಮಾಡಿದ ಜಾಗದಲ್ಲೆ ಕುಂಬಳಕಾಯಿ ಒಡೆಯಲಾಗಿದ್ದು ವಿಶೇಷವಾಗಿದೆ. ಅದರಿಂದಲೇ ಮಳೆಗಾಲದಲ್ಲೂ ಯಾವುದೇ ಅಡಚಣೆ ಇಲ್ಲದೆ ಸುಗಮವಾಗಿ ಕೆಲಸ ಮಾಡಲಾಗಿದೆ ಎಂದು ತಂಡವು ಹೇಳಿಕೊಂಡಿದೆ. ಮೊದಲಬಾರಿ ನಿರ್ದೇಶನ ಮಾಡಿರುವ ಪ್ರಸಿದ್ದ್ ಹೇಳುವಂತೆ ಕತೆಯು ಅಮೇರಿಕಾದಿಂದ ಶುರುವಾಗಿ ಕೊಡಗುದಲ್ಲಿ ಕ್ಲೈಮಾಕ್ಸ್ ಬರುತ್ತದೆ. ೯೦ರಲ್ಲಿ ....
ಗೌಡ್ರು ಸೈಕಲ್ ಕಥನ ಕಾರ್, ಬಸ್ ಆಯ್ತು. ಈಗ ಸೈಕಲ್ ಕುರಿತ ‘ಗೌಡ್ರು ಸೈಕಲ್’ ಎನ್ನುವ ಚಿತ್ರವೊಂದು ತೆರೆಗೆ ಬರಲು ಸಿದ್ದವಾಗಿದೆ. ಹತ್ತು ವರ್ಷಗಳ ಹಿಂದೆ ಸೆಟ್ ಬಾಯ್ ಆಗಿದ್ದ, ಪ್ರಶಾಂತ್.ಕೆ.ಎಳ್ಳಂಪಳ್ಳಿ ಹಲವು ನಿರ್ದೇಶಕರ ಬಳಿ ಅನುಭವ ಪಡೆದುಕೊಂಡು ಸಿನಿಮಾಕ್ಕೆ ಕತೆ, ಚಿತ್ರಕತೆ, ಸಂಭಾಷಣೆ ಬರೆದು ಸ್ವತಂತ್ರವಾಗಿ ಆಕ್ಷನ್ ಕಟ್ ಹೇಳಿದ್ದಾರೆ. ಊರ ಗೌಡರ ಬಳಿ ವಿನೂತನ ಸೈಕಲ್ವೊಂದು ಇರುತ್ತದೆ. ಅದನ್ನು ಗತಕಾಲದಿಂದಲೂ ಅದೇ ರೀತಿಯಲ್ಲಿ ಉಳಿಸಿಕೊಂಡು ಬಂದಿರುತ್ತಾರೆ. ಇದನ್ನು ನವೀಕರಿಸಲು ಗೆಳೆಯ ಹೇಳಿದಾಗ ಅಮ್ಮನಿಗೆ ವಯಸ್ಸು ಆಯ್ತು ಅಂತ ಬದಲಾವಣೆ ಮಾಡುವುದಕ್ಕೆ ಆಗೋದಿಲ್ಲ. ಅದೇ ....
ಮೂವರು ಹುಡುಗರ ತುಂಟಾಟಗಳು ಒಬ್ಬನಿಗೆ ಅಪ್ಪ ಮಾಡಿದ ದುಡ್ಡು ಸಾಕಷ್ಟು ಇರುತ್ತದೆ. ಅದನ್ನು ಹೇಗೆ ಖರ್ಚು ಮಾಡುವುದೆಂದು ತಿಳಿದಿರುವುದಿಲ್ಲ. ಅದಕ್ಕಾಗಿ ಗೆಳಯರೊಂದಿಗೆ ಪುಂಡಾಟಗಳನ್ನು ಮಾಡಿಕೊಂಡಿರುತ್ತಾನೆ. ಎರಡನೆಯವನು ಅದೇ ತರಹ ಗುಣವುಳ್ಳವನು. ಕೊನೆಯವ ಆರ್ಡಿ ಕಾರು ಮಾಲೀಕ. ಮೂವರು ಸುತ್ತಾಡುತ್ತಾ, ಮಜಾ ಮಾಡುವುದೇ ಬದುಕು ಅಂದುಕೊಂಡಿರುತ್ತಾರೆ. ಈ ಪೈಕಿ ಒಬ್ಬನಿಗೆ ಹುಡುಗಿ ಸಿಗುತ್ತಾಳೆ. ಇಲ್ಲಿಂದ ದಾರಿ ಎಲ್ಲಿಗೊ ಕರೆದುಕೊಂಡು ಹೋಗುತ್ತದೆ. ಇದನ್ನೆ ‘ತ್ರಯ’ ಎನ್ನುವ ಮರ್ಡರ್ ಮಿಸ್ಟರ್ ಚಿತ್ರದ ಕತೆಯಲ್ಲಿ ಸನ್ನಿವೇಶಗಳ ಮೂಲಕ ತೋರಿಸಲಾಗಿದೆ. ತಮಿಳಿನಲ್ಲಿ ಮೂರು ಸಿನಿಮಾಗಳನ್ನು ....
ಲಾಕಪ್ಡೆತ್ ನೆನಪಿಸುವ ಚಾಣಾಕ್ಷ ೧೯೯೪ರಲ್ಲಿ ಅದ್ದೂರಿ ‘ಲಾಕಪ್ಡೆತ್’ ಚಿತ್ರದಲ್ಲಿ ಭರ್ಜರಿ ಆಕ್ಷನ್ ದೃಶ್ಯವನ್ನು ಎಂಜಿ.ರಸ್ತೆಯಲ್ಲಿ ಚಿತ್ರೀಕರಿಸುವಾಗ ಅನಾಹುತ ಉಂಟಾಗಿತ್ತು. ಆದರೂ ಸದರಿ ದೃಶ್ಯದ ಬಗ್ಗೆ ಒಳ್ಳೆಯ ಮಾತುಗಳು ಕೇಳಿಬಂದಿದ್ದವು. ಅಂತಹುದೇ ಸಾಹಸ ‘ಚಾಣಾಕ್ಷ’ ಸಿನಿಮಾದಲ್ಲಿ ಮೂಡಿಬಂದಿದೆ. ಹಿಂದಿನ ಚಿತ್ರದಲ್ಲಿ ಕೆಲಸ ಮಾಡಿದ ಥ್ರಿಲ್ಲರ್ಮಂಜು ಸಾರಥ್ಯದಲ್ಲಿ ಶೂಟ್ ಮಾಡಲಾಗಿದೆ. ನಾಯಕನನ್ನು ಪರಿಚಯಿಸುವಾಗ ಎಂಟು ನಿಮಿಷದ ದೃಶ್ಯಗಳಲ್ಲಿ ಬೈಕ್, ರೋಪ್ ಎಲ್ಲವು ಕಾಣಿಸಿಕೊಳ್ಳುತ್ತದಂತೆ. ನವಗ್ರಹ ಚಿತ್ರದಲ್ಲಿ ....
ವಿಕಟಕವಿ ಯೋಗರಾಜಭಟ್ ‘ಪಂಚತಂತ್ರ’ ಚಿತ್ರದ ಪೋಸ್ಟರ್ನ್ನು ರವಿಚಂದ್ರನ್, ಫಸ್ಟ್ ಲುಕ್ನ್ನು ಶಿವರಾಜ್ಕುಮಾರ್ ಬಿಡುಗಡೆ ಮಾಡಿದ್ದರು. ಸಿನಿಮಾವು ಬಿಡುಗಡೆ ಸನಿಹದಲ್ಲಿರುವುದರಿಂದ ಕೊನೆ ಅಧಿಕೃತ ಟ್ರೈಲರ್ ಮತ್ತು ಚಿತ್ರದ ಆಟವನ್ನು ಯಶ್ ಲೋಕಾರ್ಪಣೆ ಮಾಡಿದರು. ನಂತರ ಮಾತನಾಡುತ್ತಾ ಭಟ್ಟರು ಯಾವುದೇ ಹಾಡು ಬರದಾಗ ನನಗೆ ಕೇಳಿಸ್ತಾರೆ. ಸರಿಯಿಲ್ಲದಿದ್ದರೆ ನೇರವಾಗಿ ಹೇಳುತ್ತೇನೆ. ವಿಕಟಕವಿಯಾಗಿ ಎಲ್ಲಾ ಕೋನಗಳಲ್ಲಿ ಶಕ್ತಿಶಾಲಿಯಾಗಿದ್ದಾರೆ. ಅವರ ಬರವಣಿಗೆ, ನಟರನ್ನು ಮೋಲ್ಡ್ ಮಾಡುವುದು ಹೀಗೆ ಹಲವು ವಿಭಾಗಗಳಲ್ಲಿ ಪರಿಣಿತರು. ಸಮಾಜಸೇವೆ ಕಡಿಮೆ ಮಾಡಿ ಚಿತ್ರರಂಗದ ಕಡೆಗೆ ಗಮನ ....
ಅಪಾಯದ ಆಟಗಳನ್ನು ನಿರ್ಮೂಲನ ಮಾಡುವ ಚಿತ್ರ ಮೊಬೈಲ್ನಿಂದ ಉಪಯೋಗವಾಗುವಂತೆ ದುರುಪಯೋಗ ಕೂಡ ಆಗುತ್ತಿದೆ. ಇದರಿಂದ ಪ್ರಸಕ್ತ ಯುವ ಜನಾಂಗವು ಇದರಲ್ಲಿ ಆಟ ಆಡಲು ಹೋಗುವುದು, ಎಚ್ಚರಿಕೆಯ ಅರಿವಿಲ್ಲದೆ ಸೆಲ್ಫಿ ತೆಗೆದುಕೊಳ್ಳುವಾಗ ಸಾವಿಗೆ ತುತ್ತಾಗುವುದು. ಇಂತಹುದೆ ಘೋರ ಘಟನೆಗಳಿಂದ ಅವಘಡಗಳು ಸಂಭವಿಸುತ್ತಿದೆ. ಇಂತಹ ವಿಷಯಗಳ ಕುರಿತಂತೆ ಸಾರ್ವಜನಿಕರಿಗೆ ಮನವರಿಕೆ ಮಾಡಲು ಏನಾದರೂ ಕ್ರಮ ತೆಗೆದುಕೊಳ್ಳಬಹುದೆಂದು ಸವೋಚ್ಚ ನ್ಯಾಯಲಯವು ಆದೇಶ ಹೊರಡಿಸಿತ್ತು. ಇದರ ಆಧಾರದ ಮೇಲೆ ಭಾರತದಲ್ಲಿ ಮೊಟ್ಟ ಮೊದಲಬಾರಿ ‘ಮನಸ್ಸಿನಾಟ’ ಎನ್ನುವ ಚಿತ್ರವು ಸಿದ್ದಗೊಂಡಿದೆ. ....