ಕನ್ನಡ ಚಿತ್ರರಂಗದಲ್ಲಿ ಕೆಜಿಎಫ್ ಚಿತ್ರದ ನಂತರ ಭಾರಿ ಸದ್ದು ಮಾಡುತ್ತಿರುವ ಸಿನಿಮಾ ಸೂಪರ್ ಸ್ಟಾರ್ "ಉಪೇಂದ್ರ" ಅಭಿನಯದ "ಕಬ್ಜ". ಭಾರತದ ಹೆಸರಾಂತ ಪತ್ರಿಕೆ ಹಾಗೂ ವೆಬ್ಸೈಟ್ಗಳು ನಡೆಸಿರುವ ಟಾಪ್ 10 ಭಾರತದ ಮೋಸ್ಟ್ ಎಕ್ಸ್ಪೆಕ್ಟೆಡ್ ಸಿನಿಮಾಗಳು ಎಂಬ ಸಮೀಕ್ಷೆಯಲ್ಲಿ ಕೆಜಿಎಫ್ ಎರಡನೇ ಸ್ಥಾನದಲ್ಲಿದ್ದರೆ," ಕಬ್ಜ" ಚಿತ್ರ ಮೂರನೇ ಸ್ಥಾನದಲ್ಲಿದೆ. ನಂತರದ ಸ್ಥಾನಗಳಲ್ಲಿ ಹಿಂದಿ, ತೆಲುಗು, ತಮಿಳು, ಮಲಯಾಳಂ ಚಿತ್ರರಂಗದ ಘಟಾನುಘಟಿಗಳ ಸಿನಿಮಾಗಳು ಸ್ಥಾನಗಳನ್ನು ಪಡೆದಿದೆ, ಇಂಡಿಯಾದ ಮೋಸ್ಟ್ ಎಕ್ಸ್ಪೆಕ್ಟೆಡ್ ಟಾಪ್ ಟೆನ್ ಸಿನಿಮಾಗಳ ಪಟ್ಟಿಯಲ್ಲಿ ಕನ್ನಡದ ಎರಡು ಚಿತ್ರಗಳು ಸ್ಥಾನವನ್ನು ಪಡೆದಿರುವುದು ಕನ್ನಡ ಚಿತ್ರರಂಗಕ್ಕೆ ಹೆಮ್ಮೆಯ ವಿಷಯ. ಸೂಪರ್ ಸ್ಟಾರ್ ....
ನವಿಲುಗರಿ ಸಿನಿಮಾಸ್ಸ್ ಬ್ಯಾನರ್ ನಡಿಯಲ್ಲಿ ತಯಾರಗುತ್ತಿರುವ ಹೊಸ ಸಿನಿಮಾದ ಪೋಸ್ಟರ್ ನನ್ನು ಇಂದು ಲಕ್ಷ್ಮೀ ಬಾರಮ್ಮಾ ಖ್ಯಾತಿಯ ಚಂದು ಗೌಡರವರು ಬಿಡುಗಡೆ ಮಾಡಲಾಯಿತು ಈ ಹಿಂದೆ ಅಭಯ ಹಸ್ತ ಎಂಬ ವಿಭಿನ್ನ ಸಿನಿಮಾವನ್ನು ಡೈರೆಕ್ಟ್ ಮಾಡುವ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಯುವ ನಿರ್ದೇಶಕ ನವಿಲುಗರಿ ನವೀನ್ ಪಿ ಬಿ ರವರು ಈಗ ಹೊಸ ಕಥೆಯೊಂದಿಗೆ ಹಳೇಯ ಹೆಸರಾಂತ ಕನ್ನಡ ಶೀರ್ಷಿಕೆಯನ್ನು ಇಟ್ಟುಕೊಂಡು ಕನ್ನಡ ಭಾಷೆಯ ಉಳಿವಿನ ಬಗ್ಗೆ ಸಿನಿಮಾ ಡೈರೆಕ್ಟ್ ಮಾಡಲು ಒರಟಿದ್ದಾರೆ. ಹಳೆಯ ಅಭಯ ಹಸ್ತ ಸಿನಿಮಾದಲ್ಲಿ ಹೆಸರಾಂತ ಮುತ್ತಪ್ಪ ರೈ, ಜೇಡರಹಳ್ಳಿ ಕೃಷ್ಣಪ್ಪ, ಡಾ. ಶಿವರಾಜ್ ಕುಮಾರ, ನವೀನ್ ಕೃಷ್ಣ, ಅನಿರುದ್ದ್ ಇನ್ನೂ ಹಲವರು ಮುಖ್ಯ ಭೂಮಿಕೆಯಲ್ಲಿ ಬಣ್ಣ ಹಚ್ಚಿದ್ದರು, ಈ ....
'ತ್ರಿಕೋನ’ ಚಿತ್ರಕ್ಕೆ ಸೆನ್ಸಾರ್ ಅಸ್ತು... ಪೊಲೀಸ್ ಪ್ರಕ್ಕಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ರಾಜಶೇಖರ್ ಅವರು ನಿರ್ಮಿಸಿರುವ ’ತ್ರಿಕೋನ` ಚಿತ್ರ ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ ಯು/ಎ ಅರ್ಹತಾಪತ್ರ ನೀಡಿದೆ.. ಯಾವುದೇ ಕಟ್ ನೀಡದೆ, ಸೌಂಡ್ ಮ್ಯೂಟ್ ಸಹ ನೀಡದೆ ಸೆನ್ಸಾರ್ ಮಂಡಳಿ ಯು/ಎ ಅರ್ಹತಾಪತ್ರ ನೀಡಿದೆ. ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ನಿರ್ಮಾಪಕ ರಾಜಶೇಖರ್ ಅವರೆ ಕಥೆ ಬರೆದದ್ದು, 143 ಚಿತ್ರದ ಖ್ಯಾತಿಯ ಚಂದ್ರಕಾಂತ್ ನಿರ್ದೇಶನ ಮಾಡಿದ್ದಾರೆ... ಕನ್ನಡ, ತೆಲುಗು, ತಮಿಳು ಮೂರು ಭಾಷೆಗಳಲ್ಲಿ ವಿಭಿನ್ನ ಚಿತ್ರಕಥೆಯೊಂದಿಗೆ ನಿರ್ಮಾಣವಾಗಿರುವ ಈ ಚಿತ್ರಕ್ಕೆ ಮೊದಲು ಕನ್ನಡದಲ್ಲಿ ಸೆನ್ಸಾರ್ ಆಗಿದೆ... ತೆಲುಗು, ತಮಿಳಿನಲ್ಲೂ ....
ಸದ್ಯದಲ್ಲೇ ಹೋಂ ಮಿನಿಸ್ಟರ್ ಬರುತ್ತಿದ್ದಾರೆ... ಶ್ರೇಯಸ್ಸ್ ಚಿತ್ರ ಹಾಗೂ ವಾಟರ್ ಕಲರ್ ಎಂಟರ್ ಟೈನ್ ಮೆಂಟ್ ಲಾಂಛನದಲ್ಲಿ ಪೂರ್ಣಚಂದ್ರ ನಾಯ್ಡು ಹಾಗೂ ಶ್ರೀಕಾಂತ್ ವಿ ಅವರು ನಿರ್ಮಿಸಿರುವ, ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ’ಹೋಂ ಮಿನಿಸ್ಟರ್’ ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ ಯು/ಎ ಅರ್ಹಾತ ಪತ್ರ ನೀಡಿದೆ.. ಸರ್ಕಾರ ಚಿತ್ರಮಂದಿರ ತೆರೆಯಲು ಒಪ್ಪಿಗೆ ನೀಡಿದ ಕೂಡಲೆ, ಚಿತ್ರ ಬಿಡುಗಡೆ ಮಾಡಲು ತಯಾರಿ ನಡೆದಿದೆ... ಶ್ರೀಹರಿ ನಾನು ನಿರ್ದೇಶನದ ಈ ಚಿತ್ರ ವಿಭಿನ್ನ ಕಥಾಹಂದರ ಹೊಂದಿದೆ.. ’ಹೋಂ ಮಿನಿಸ್ಟರ್’ ಅಂದರೆ ರಾಜಕೀಯ ಚಿತ್ರ ಎನ್ನುವುದು ಎಲ್ಲರ ಅಭಿಪ್ರಾಯ. ಆದರೆ ಅದರ ಹೊರತಾಗಿ ಈ ಚಿತ್ರದಲ್ಲಿ ಈ ಪದ ಯಾವ ರೀತಿ ಬಳಕೆಯಾಗಿದೆ ....
ಸದ್ಯದಲ್ಲೇ ಚಿತ್ರಮಂದಿರಗಳಲ್ಲಿ ಶಾರ್ದೂಲ ಭೈರವ ಸಿನಿಮಾಸ್ ಲಾಂಛನದಲ್ಲಿ ಕಲ್ಯಾಣ್ ಸಿ ಹಾಗೂ ರೋಹಿತ್ .ಎಸ್ ಅವರು ನಿರ್ಮಿಸಿರುವ ಶಾರ್ದೂಲ ಚಿತ್ರವನ್ನು ವೀಕ್ಷಿಸಿರುವ ಪ್ರಾದೇಶಿಕ ಸೆನ್ಸಾರ್ ಮಂಡಳಿ ಯು/ಎ ಅರ್ಹತಾಪತ್ರವನ್ನು ನೀಡಿದೆ. ಕೊರೋನ ಹಾವಳಿಯಿಂದ ಸಿನಿಮಾ ಬಿಡುಗಡೆ ವಿಳಂಬವಾಗಿದ್ದು, ಅನುಮತಿ ದೊರಕಿದ ಕೂಡಲೆ ಚಿತ್ರವನ್ನು ತೆರೆಗ ತರುವುದಾಗಿ ನಿರ್ಮಾಪಕರು ತಿಳಿಸಿದ್ದಾರೆ... ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರದ ಟ್ರೇಲ್ಲರ್ ಕೂಡ ವಿಭಿನ್ನವಾಗಿದ್ದು, ಸದ್ಯದಲ್ಲೇ ಬಿಡುಗಡೆಯಾಗಲಿದೆ... ನಮ್ ಏರಿಯಲ್ಲೊಂದು ದಿನ, ತುಘಲಕ್ ಹಾಗೂ ಹುಲಿರಾಯ ಚಿತ್ರಗಳನ್ನು ನಿರ್ದೇಶಿಸಿರುವ ಅರವಿಂದ್ ಕೌಶಿಕ್ ಈ ಚಿತ್ರದ ನಿರ್ದೇಶಕರು. ಇವರೆ ....
ಬೈ ೧ ಗೆಟ್ ೧ ಫ್ರೀ ಪೋಸ್ಟರ್ ಬಿಡುಗಡೆ
ಕನ್ನಡದಲ್ಲಿ ಒಂದು ಆಕರ್ಷಕ ಶೀರ್ಷಿಕೆ ‘ಬೈ ೧ ಗೆಟ್ ೧ ಫ್ರೀ’ ಚಿತ್ರೀಕರಣ ಮುಗಿಸಿಕೊಂಡು ಪ್ರಚಾರ ಕೆಲಸ ಶುರು ಮಾಡಬೇಕು ಅನ್ನುವಷ್ಟರಲ್ಲಿ ಕೋರೋನಾ ಆವರಿಸಿದೆ. ಆದರೆ ಈ ಚಿತ್ರದ ಪೋಸ್ಟರ್ ಅನ್ನು ಆನಂದ್ ಆಡಿಯೋ ಯು ಟ್ಯೂಬ್ ಅಲ್ಲಿ ಬಿಡುಗಡೆ ಮಾಡಲಾಗಿದೆ. ಚಿತ್ರದ ಶೀರ್ಷಿಕೆ ಹೇಗೆ ಆಕರ್ಷಣೆಯೋ ಹಾಗೆ ಈ ಚಿತ್ರದ ಮತ್ತೊಂದು ಆಕರ್ಷಣೆ ಅಂದರೆ ಅವಳಿ ಸಹೋದರರು ಮಧು ಮಿಥುನ್ ಹಾಗೂ ಮನು ಮಿಲನ್ ಮುಖ್ಯ ಪಾತ್ರ ನಿರ್ವಹಿಸಿರುವುದು. ಜನಪ್ರಿಯ ನಟ ಕಿಶೋರ್ ಇಲ್ಲಿ ಕೇಂದ್ರ ಬಿಂದು. ರಿಷಿತ ಮಲ್ನಾಡ್, ಉಷ ಭಂಡಾರಿ, ಗೌರೀಶ್ ಅಕ್ಕಿ, ರೋಷಿಣಿ ತೆಲ್ಕರ್, ಬಲರಜವಾಡಿ ಹಾಗೂ ಇತರರು ತಾರಗಣದಲ್ಲಿದ್ದಾರೆ.
ದ ಚೆಕ್ಮೇಟ್ - ಒಂದು ಹಾಡು ಅನಾವರಣ ಆಯಿತು
ಶ್ರೀ ಬಸವ ಜಯಂತಿ ಪ್ರಯುಕ್ತ ಜಗಜ್ಯೋತಿ ಮೂವಿ ಮೇಕರ್ಸ್ ‘ದ ಚೆಕ್ಮೇಟ್’ ಸಿನಿಮಾದ ಒಂದು ಹಾಡನ್ನು ಬೆಳಗ್ಗೆ ೧೧ ಗಂಟೆಗೆ ಆನಂದ್ ಆಡಿಯೋ ಯು ಟ್ಯೂಬ್ ಅಲ್ಲಿ ಬಿಡುಗಡೆ ಮಾಡಿದೆ. ಇದೊಂದು ಮಾಧುರ್ಯ ತುಂಬಿದ ಹಾಡು. ಬಿಡುಗಡೆ ಆದ ಕೆಲವು ಘಂಟೆಗಳಲ್ಲಿ ಸಾವಿರಾರು ವ್ಯಕ್ತಿಗಳು ಈ ಮಧುರ ಗೀತೆಯನ್ನು ಕೇಳಿದ್ದಾರೆ. ಈ ಹಾಡನ್ನು ಆಲಿಸಿದ ಪ್ರಸಿದ್ದ ಸಂಗೀತ ನಿರ್ದೇಶಕ ವಿ ಹರಿಕೃಷ್ಣ ದೂರವಾಣಿ ಮುಖಾಂತರ ಮಾಧುರ್ಯಕ್ಕೆ ತಂಡವನ್ನು ಶ್ಲಾಘಿಸಿದ್ದಾರೆ.
ಚಂದನವನಕ್ಕೆ ಮತ್ತೋಬ್ಬರಾಮಾಚಾರಿ ನಾಗರಹಾವುಚಿತ್ರದಲ್ಲಿಡಾ.ವಿಷ್ಣುವರ್ಧನ್ರಾಮಾಚಾರಿಯಾಗಿಖ್ಯಾತಿಗೊಂಡಿದ್ದರು. ನಂತರರವಿಚಂದ್ರನ್, ಯಶ್ಇದೇ ಹೆಸರಿನೊಂದಿಗೆ ನಟಿಸಿ ಹೆಸರು ಮಾಡಿದ್ದರು.ಈಗ ಇದರ ಸಾಲಿಗೆ ‘ರಾಮಾಚಾರಿ ೨.೦’ ಚಿತ್ರವು ಸೇರ್ಪಡೆಯಾಗಿದೆ.ರಜನಿಕಾಂತ್ ನಟಿಸಿರುವ ೨.೦, ಯಶಸ್ಸು ಗಳಿಸಿದ್ದರಿಂದ ಇದನ್ನು ಹೆಸರಿನೊಂದಿಗೆ ಸೇರಿಸಲಾಗಿದೆ. ಕತೆ ಹೊಸ ಜಾನರ್ದಲ್ಲಿರುವುದರಿಂದಇಂತಹುದೆಅಂಥ ಹೇಳಲು ಬರುವುದಿಲ್ಲವಂತೆ.‘ಮೀಸೆ ಚಿಗುರಿದಾಗ’ ಚಿತ್ರದ ನಂತರಇಂಜನಿಯಿರಿಂಗ್ ಮುಗಿಸಿ, ವಿದೇಶದಲ್ಲಿಉನ್ನತ ವ್ಯಾಸಾಂಗ ಮಾಡಿ, ಸದ್ಯ ವಿಜ್ಘಾನಿಯಾಗಿರುವಕನ್ನಡಿಗತೇಜ್ಕಾಲಿವುಡ್ದಲ್ಲಿ ಗುರುತಿಸಿಕೊಂಡಿದ್ದರು.ನಂತರ ....
ಕೋಟಿಗೊಬ್ಬ-೩ ಟೀಸರ್ಡಿಲೀಟ್ಆಗಿದ್ದಕ್ಕೆ ಸೂರಪ್ಪಬಾಬು ಸ್ಪಷ್ಟೀಕರಣ ಸುದೀಪ್ ನಟಿಸಿರುವ ‘ಕೋಟಿಗೊಬ್ಬ-೩’ ಚಿತ್ರದಟೀಸರ್ಯೂಟ್ಯೂಬ್ದಲ್ಲಿಡಿಲೀಟ್ ಮಾಡಿಸಲಾಗಿದೆ.ಎರಡು ಮಿಲಿಯುನ್ ವೀಕ್ಷಣೆದಾಟಿದ ಸಿನಿಮಾದತುಣುಕುಗಳು ಯೂಟ್ಯೂಬ್ದಲ್ಲಿ ನಾಪತ್ತೆಆಗಿರುವುದಕ್ಕೆ ನಿರ್ಮಾಪಕ ಸೂರಪ್ಪಬಾಬು ಸ್ಪಷ್ಟನೆ ನೀಡಲು ಮಾದ್ಯಮದವರನ್ನು ಭೇಟಿ ಮಾಡಿದ್ದರು.ಪೋಲೆಂಡ್ದಲ್ಲಿಚಿತ್ರೀಕರಣ ನಡೆಸಲು ಸ್ಥಳಗಳನ್ನು ತೋರಿಸಿ, ಇಡೀಚಿತ್ರತಂಡಅಲ್ಲಿ ಉಳಿದುಕೊಳ್ಳಲು ಮುಂಬೈ ಮೂಲದ ಸೋದರರಾದ ಸಂಜಯ್ಪೌಲ್, ಅಜಯ್ಪೌಲ್ ವ್ಯವಸ್ಥೆ ....
ಇದೇ ಶುಕ್ರವಾರ ನರಗುಂದ ಬಂಡಾಯ ಬಿಡುಗಡೆ
ಶೇಖರ್ ಯಳುವಿಗಿ, ಹುಬ್ಬಳ್ಳಿ ಅರ್ಪಿಸುವ ಎಸ್ ಜಿ ವಿರಕ್ತಮಠ ಕಥೆ ಹಾಗೂ ನಿರ್ಮಾಣದ ಚಿತ್ರ ನರಗುಂದ ಬಂಡಾಯ’ ಹ್ಯಾಟ್ ಟ್ರಿಕ್ ನಿರ್ದೇಶಕ ನಾಗೇಂದ್ರ ಮಾಗಡಿ ಪಾಂಡು ಚಿತ್ರಕಥೆ ಹಾಗೂ ನಿರ್ದೇಶನದಲ್ಲಿ ಮೂಡಿಬಂದಿದೆ.
ಓಂಕಾರ್ ಫಿಲ್ಮ್ಸ್ ಸಂಸ್ಥೆ ೧೯೮೦ ನಡೆದ ನೈಜ ಕಥೆ ಆಧಾರಿತ ಸಿನಿಮಾ ನರಗುಂದ ಬಂಡಾಯ’. ರೈತರು ತೆರಿಗೆ ಕಟ್ಟುವ ವಿಚಾರದಲ್ಲಿ ಬಂಡಾಯ ಮಾಡಿ ಸಿಡಿದೇಳುತ್ತಾರೆ.
ಇನ್ಮುಂದೆಕನ್ನಡ ಸಿನಿಮಾಗಳಿಗೂ ಡಬ್ಬಿಂಗ್ನಿಂದ ವರಮಾನ ಭಾರತದಲ್ಲಿ ಮೊಟ್ಟ ಮೊದಲಬಾರಿ ‘ಡೈರಕ್ಟರ್ಸ್ ಫಿಲಿಂ ಬಜಾರ್’ನ್ನು ಬೆಂಗಳೂರು ಅಂತರಾಷ್ಟ್ರೀಯಚಿತ್ರೋತ್ಸವದಲ್ಲಿಆರಂಭಿಸಲಾಗಿತ್ತು.ಈ ಮೂಲಕ ನಮ್ಮ ಭಾಷೆಯ ಚಿತ್ರಗಳಿಗೆ ಮಾರುಕಟ್ಟೆಯನ್ನು ಸೃಷ್ಟಿ ಮಾಡಿಕೊಡುವ ನಿರ್ದೇಶಕ ಸಂಘದ ಮೊದಲ ಪ್ರಯತ್ನ ಯಶಸ್ವಿಯಾಗಿದೆ.ಇದರಕುರಿತಂತೆ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ನಿರ್ದೇಶಕರ ಸಂಘದಅಧ್ಯಕ್ಷ ಟೀಶಿ.ವೆಂಕಟೇಶ್ ಇಲ್ಲಿಯವರೆಗೂ ೨೫೦ ಚಿತ್ರಗಳು ನೊಂದಣಿಯಾಗಿದೆ.ವಿದೇಶಿ ಸಿನಿಮಾಪಂಡಿತರು ಆಗಮಿಸಿದ್ದು ವಿಶೇಷವಾಗಿತ್ತು.ತಮಿಳುನಾಡು, ಕೇರಳ, ಆಂಧ್ರ ಕಡೆಗಳಲ್ಲಿ ಕನ್ನಡಚಿತ್ರರಂಗ ಬಗ್ಗೆ ....
ಪ್ರತಿಯೊಬ್ಬರಿಗೂಅಂತ್ಯವಿರುವಂತೆಆರಂಭವುಇರುತ್ತದೆ ಸುಂದರ ಸಾಮಾಜಿಕ, ಸಾಂಸರಿಕ, ಸದಭಿರುಚಿಯ,ಸಂದೇಶಸಹಿತ, ಕುತೂಹಲಕಾರಿ ಪ್ರೇಮಕಥಾನಕ ‘ಅಂತ್ಯವಲ್ಲಆರಂಭ’ ಚಿತ್ರವೆಂದು ನಿರ್ದೇಶಕರಲ್ಲಿಒಬ್ಬರಾದ ಡಾ.ಎನ್.ಬಿ.ಜಯಪ್ರಕಾಶ್ ಬಣ್ಣಸಿಕೊಳ್ಳುತ್ತಾರೆ. ಜೊತೆಗೆಯಕ್ಷಗಾನಕಲಾವಿದನ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಅಗರ್ಭ ಶ್ರೀಮಂತ, ಹಾಗೆಯೇ ಮಹಾ ಜಿಪುಣನಾಗಿ ಸಂಚಾರಿವಿಜಯ್ ನಾಯಕ.ಪತ್ನಿಯಾಗಿ ಶೃತಿಹರಿಹರನ್ ನಾಯಕಿ.ತಾರಗಣದಲ್ಲಿ ನರಸಿಂಹರಾಜು ಮೊಮ್ಮಗ ವೆಂಕಟರಾಜು, ಶಿಶರ್, ಹರ್ಷ, ನಚಿಕೇತನ್, ದೀಪಕ್ ಮತ್ತು ಹಲವು ಮಂಗಳೂರು ರಂಗಭೂಮಿ ಪ್ರತಿಭೆಗಳಿಗೆ ಅವಕಾಶ ಮಾಡಿಕೊಡಲಾಗಿದೆ. ಶೇಕಡ ೮೦ರಷ್ಟು ಚಿತ್ರೀಕರಣ ಸಾಗರ, ಉಳಿದಂತೆ ಬೆಂಗಳೂರು ಸುತ್ತಮುತ್ತ ಸ್ಥಳಗಳನ್ನು ....
ಚಲನಚಿತ್ರ ವಾಣಿಜ್ಯ ಮಂಡಳಿಗೆ ೭೫ರ ಹೆಜ್ಜೆ ೧೯೪೪ರಲ್ಲಿ ಸ್ಥಾಪನೆಗೊಂಡ ‘ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ’ ೭೫ ವಸಂತಗಳನ್ನು ಕಂಡಿದೆ.ಇದರ ಪ್ರಯುಕ್ತವಾಗಿ ೭೫ನೇ ವರ್ಷದಕಾರ್ಯಕ್ರಮದ ಲಾಂಛನವನ್ನು ಗೃಹ ಸಚಿವ ಬಸವರಾಜಬೊಮ್ಮಾಯಿ ಬಿಡುಗಡೆ ಮಾಡಿದ ಸಂದರ್ಭದಲ್ಲಿರವಿಚಂದ್ರನ್, ಜಗ್ಗೇಶ್, ಹಾಲಿ ಮತ್ತು ಮಾಜಿ ಅಧ್ಯಕ್ಷರುಗಳು ಸಾಕ್ಷಿಯಾಗಿದ್ದರು.ಪ್ರಾರಂಭದಲ್ಲಿ ಮೈಕ್ತೆಗೆದುಕೊಂಡಜಗ್ಗೇಶ್ಎಲ್ಲರ ಪರಿಕಲ್ಪನೆಯಿಂದ ‘ಚಿತ್ರನಗರಿ’ ಶುರುವಾಗುತ್ತಿದೆ.ಹಿಂದೆಂದೂಯಾವ ಮುಖ್ಯ ಮಂತ್ರಿಗಳು ಮಾಡದ ಕೆಲಸವನ್ನುಇವರು ಮಾಡಿದ್ದಾರೆ.ನಮ್ಮಕಾಲದಲ್ಲಿ ವಾಣಿಜ್ಯ ಮಂಡಳಿಯನ್ನು ....
ನಾಯಕ ಈಗ ಖಳನಾಯಕ
ಶಿಷ್ಯ ಚಿತ್ರದ ಮೂಲಕ ನಾಯಕನಾಗಿ ಪಾದಾರ್ಪಣೆ ಮಾಡಿದ್ದ ದೀಪಕ್ ಮುಂದೆ ಶಿಷ್ಯದೀಪಕ್ ಅಂತ ಗುರುತಿಸಿಕೊಂಡಿದ್ದರು.೧೮ನೇ ಕ್ರಾಸ್, ಬಾ ಬೇಗ ಚಂದಮಾಮ, ಮಾಗಡಿ, ತ್ಯಾಗು ಸೇರಿದಂತೆ ಹದಿನೈದಕ್ಕೂ ಹೆಚ್ಚು ಚಿತ್ರಗಳಲ್ಲಿ ನಾಯಕ, ‘ಬೆಳ್ಳಿ’ ಸಿನಿಮಾದಲ್ಲಿ ಶಿವರಾಜ್ಕುಮಾರ್ ಅವರೊಂದಿಗೆ ನಟಿಸಿ, ವೈಯಕ್ತಿಕಕಾರಣದಿಂದದೂರಇದ್ದರು.ಗ್ಯಾಪ್ ನಂತರಜೋಗಿಪ್ರೇಮ್ ನಿರ್ದೇಶನದಅದ್ದೂರಿಚಿತ್ರ
ತೆರೆಗೆ ಸಿದ್ದ ೫ ಅಡಿ ೭ ಅಂಗುಲ ‘೫ ಅಡಿ ೭ ಅಂಗುಲ’ ಚಿತ್ರವುತಂತ್ರ್ರ, ಯುಕ್ತಿ, ಚೇಷ್ಟೆ ಹಾಗೂ ಕುಚೇಷ್ಟೆ, ಕುತಂತ್ರ, ಮತ್ತುಕುಯುಕ್ತಿ ಮೂರು ಪದಗಳಿಂದ ಕೂಡಿದೆ.ಅದರಲ್ಲೂ‘ಕು’ ಅಕ್ಷರವು ನಕರಾತ್ಮಕವಾಗಿದ್ದು, ಅದನ್ನುಯಾರೂ ಬೇಕಾದರೂ ಸುಲಭವಾಗಿ ಅಳವಡಿಸಬಹುದು, ಇಲ್ಲದೆಇರಬಹುದು. ಈ ಅಕ್ಷರಕ್ಕೂ ನಮ್ಮಅಂತರಾತ್ಮಕ್ಕೂಇರುವಅಂತರವೇಶೀರ್ಷಿಕೆಯಾಗಿದೆ.ಸಾಮಾನ್ಯವಾಗಿ ಭಾರತೀಯ ಮನುಷ್ಯನಎತ್ತರ ೫.೨ ಅಡಿಯಿಂದ ೬.೩ವರೆಗೆ ಇರುತ್ತದೆ.ಅದರಿಂದಒಬ್ಬನ ಸರಾಸರಿತೆಗೆದುಕೊಂಡಾಗಟೈಟಲ್ಸೂಕ್ತವಾಗುತ್ತದೆಂದು ಭಾವಿಸಿ ಮುಂದಕ್ಕೆ ಹೆಜ್ಜೆಇಟ್ಟಿದ್ದಾರೆ.ಒಬ್ಬಚೆಲ್ಲಾಟ ಮಾಡುವಯುವಉದ್ಯಮಿಯನ್ನುಒಳಗೊಂಡ ಕೊಲೆ ....
ಜನರುಕಾಣದಂತೆ ಮಾಯವಾದರು ಜನವರಿಕೊನೆವಾರದಂದು ಬಿಡುಗಡೆಗೊಂಡ ‘ಕಾಣದಂತೆ ಮಾಯವಾದನು’ ಚಿತ್ರವು ಪತ್ರಿಕೆಗಳಿಂದ ಒಳ್ಳೆ ವಿಮರ್ಶೆ ಮತ್ತುಜನರಿಂದಉತ್ತಮ ಪ್ರತಿಕ್ರಿಯೆ ವ್ಯಕವಾಗಿದೆ. ಆದರೆಚಿತ್ರಮಂದಿರಕ್ಕೆಜನರು ಬರುತ್ತಿಲ್ಲವೆಂದು ನಾಯಕ ವಿಕಾಸ್ ಸುದ್ದಿಗೋಷ್ಟಿಯಲ್ಲಿಖೇದ ವ್ಯಕ್ತಪಡಿಸಿದರು. ಸದ್ಯದ ಪರಿಸ್ಥಿತಿಯಲ್ಲಿ ಮಾಲ್ಗಳು ನಾಲ್ಕು ದಿನದೊಳಗೆ ಗಳಿಕೆ ಕಡಿಮೆಯಾzರೆ, ನಮಗೆ ಹೇಳದೆ ತೆಗೆದುಹಾಕಿರುತ್ತಾರೆ. ಹೆಚ್ಚಾಗಿ ಬುಕ್ ಮೈ ಷೋದಿಂದಅನ್ಯಾಯವಾಗುತ್ತಿದೆ. ಹಣ ನೀಡಿದವರಿಗೆ ಒಳ್ಳೆ ರೇಟಿಂಗ್ಸ್ಕೊಡುತ್ತಾರೆ. ಪ್ರೇಕ್ಷಕರಿಂದ ಹೆಚ್ಚಿನ ಅಂಕ ನೀಡಿದ್ದರೂಅದನ್ನು ಮರೆಮಾಚಿ, ತಮ್ಮದೆಅಂಕವನ್ನು ನೀಡುವುದು ನಿರ್ಮಾಪಕರಿಗೆ ....
ಪ್ರಾರಂಭ ಶುಭಾರಂಭವಾಗಲಿ - ರವಿಚಂದ್ರನ್ ‘ಪ್ರಾರಂಭ’ ಚಿತ್ರದಲ್ಲಿ ಮನೋರಂಜನ್ರವಿಚಂದ್ರನ್ ಅಭಿನಯಿಸಿದ್ದು, ಪುತ್ರನ ಸಿನಿಮಾದ ಲಿರಿಕಲ್ ವಿಡಿಯೋ ಹಾಡನ್ನು ಬಿಡುಗಡೆ ಮಾಡಲುರವಿಚಂದ್ರನ್ ಸ್ವಪತ್ನಿ ಸಮೇತ ಆಗಮಿಸಿದ್ದರು. ಮೂರು ಹಾಡುಗಳನ್ನು ನೋಡಿದ ಬಳಿಕ ಇದರಕುರಿತಂತೆ ಬಣ್ಣಸಿದ ಪರಿ ಹೀಗಿತ್ತು: ಮಗನ ಸಿನಿಮಾ, ಬೇರೆಯವರದುಅಂತತಲೆಗೆ ಹಾಕಿಕೊಳ್ಳಲ್ಲಾ.ನನಗೆ ಅನಿಸಿದ್ದನ್ನು ನೇರೆವಾಗಿ ಹೇಳುತ್ತೇನೆ.ಅದುತಪ್ಪಾಗಿರಲಿ, ಸರಿಯಾಗಿರಲಿ. ಫೋಟೋಸ್ಇಟ್ಟುಕೊಂಡು ಹಾಡು ಸಿದ್ದಪಡಿಸಿರುವುದನ್ನು ನೋಡಿದಾಗ ಪ್ರಮಾಣಿಕರಿಸಲು ಆಗುವುದಿಲ್ಲ. ಮೂರು ಹಾಡುಗಳಲ್ಲಿ ಭಾವನೆಗಳು, ನೋವು ಇದೆ. ....
ಶಾಪಗ್ರಸ್ತರಾಜೇಶ್ನಟರಂಗ ಅನನ್ಯ ಪ್ರತಿಭೆರಾಜೇಶ್ನಟರಂಗ ಪ್ರಥಮಬಾರಿ ನಾಯಕನಾಗಿ ನಟಿಸುತ್ತಿರುವ ‘ಓಬಿರಾಯನಕಥೆ’ ಚಿತ್ರಕ್ಕೆ ಶುಭ ಹಾರೈಸಲುಯಶ್ ಆಗಮಿಸಿದ್ದರು.ಶೀರ್ಷಿಕೆ ಅನಾವರಣಮಾಡಿದರಾಕಿಬಾಯ್ ಮಾತನಾಡುತ್ತಾ ‘ಪ್ರೀತಿಇಲ್ಲದೆ ಮೇಲೆ’ ಧಾರವಾಹಿಯಲ್ಲಿ ನಟಿಸುತ್ತಿರುವಾಗಅಚ್ಯುತಕುಮಾರ್, ರಾಜೇಶ್ರವರನ್ನುಅಣ್ಣಎಂದುಕರೆಯುತ್ತಿದ್ದೆ.ಅವರುಸ್ಪುರದ್ರೂಪಿಯಾಗಿದ್ದು ಹೀರೋ ಆಗಲಿಲ್ಲವಾದರೂ, ಸೆಟ್ದಲ್ಲಿಯಾವಗಲೂ ಹೀರೋನಂತೆಇರುತ್ತಿದ್ದರು.ತಡವಾಗಿಯಾದರೂನಾಯಕಆಗುತ್ತಿರುವುದು ಸಂತಸತಂದಿದೆ.ಅಂದುಚಿಕ್ಕ ಹುಡುಗನಾಗಿಅನಂತ್ನಾಗ್ ಸರ್, ಇವರುಗಳಿಂದ ಸಾಕಷ್ಟು ಪ್ರಶ್ನೆಗಳಿಗೆ ಉತ್ತರ ಸಿಗುತ್ತಿತ್ತು.ನನ್ನ ....
ಚಂದನದಲ್ಲಿ ಗಾನ ಚಂದನ
ಖ್ಯಾತಗಾಯಕಿ ಬಿ.ಆರ್.ಛಾಯಾ ಮತ್ತು ಸಾಹಿತಿ,ಸಂಗೀತ ನಿರ್ದೇಶಕ ವಿ.ಮನೋಹರ್ ಸಾರಥ್ಯದಲ್ಲಿ ‘ಗಾನ ಚಂದನ’ ರಿಯಾಲಿಟಿ ಷೋ ಕಾರ್ಯಕ್ರಮದ ಮೆಗಾ ಅಡಿಷನ್ ಸುತ್ತು ಪೂರ್ಣಗೊಂಡಿದ್ದು, ಗುರುವಾರದಿಂದಗಾಯಕ,ಗಾಯಕಿಯರ ನಡುವೆ ಸ್ಪರ್ಧೆಏರ್ಪಡಲಿದೆ. ತ್ನಿಗೆ ಬೆಂಬಲವಾಗಿ ಇರುವ ಪದ್ಮಪಾಣಿ ಈಗಾಗಲೇ ಮೂವತ್ತು ಜಿಲ್ಲೆಗಳಿಗೆ ಪ್ರಯಾಣ ಬೆಳಸಿ ೧೮-೩೫ ವಯಸ್ಸಿನ, ಪ್ರತಿಜಿಲ್ಲೆಯಿಂದ ೩೦-೪೦ ಪ್ರತಿಭೆಗಳನ್ನು ಆಯ್ಕೆ ಮಾಡಿದ್ದಾರೆ. ಸದರಿ ಸುತ್ತಿನಲ್ಲಿ ೭೯ ಸ್ಪರ್ಧಿಗಳು ಉಳಿದುಕೊಂಡಿದ್ದಾರೆ.ಇದರಲ್ಲಿಎರಡುರೀತಿಯ ವ್ಯವಸ್ಥೆಯನ್ನುಕಲ್ಪಿಸಲಾಗಿದೆ.
ಚಂದನವನದ ಕುಷ್ಕ ಸಿಟಿಮಾರ್ಕೆಟ್, ಶಿವಾಜಿನಗರದ ಮಾಂಸಹಾರಿ ಹೋಟೆಲ್ಗಳಲ್ಲಿ ‘ಕುಷ್ಕ’ ಪ್ರಸಿದ್ದಿ ಹೊಂದಿದೆ. ಪೀಸ್ಲೆಸ್ ಬಿರಿಯಾನಿಗೆಇದೇ ಹೆಸರಿನಲ್ಲಿಕರೆಯುತ್ತಾರೆ. ಇದನ್ನು ಹೇಳಲು ಪೀಠಿಕೆಇದೆ. ಈಗ ಅಂತಹುದೆ ಶೀರ್ಷಿಕೆಯಲ್ಲಿ ಸಿನಿಮಾವೊಂದುತೆರೆಗೆ ಬರಲು ಸಜ್ಜಾಗಿದೆ. ಕ್ರೈಮ್ಕಾಮಡಿಕತೆಯಲ್ಲಿರಷ್ಯನ್ ಪ್ರಜೆ ಸೇರಿದಂತೆ ನಾಲ್ಕು ಪಾತ್ರಗಳು ಬರುತ್ತವೆ. ಇವರುಗಳು ಡೈಮೆಂಡ್ ಸ್ಟೋನ್ ಹಿಂದೆ ಬಿದ್ದಾಗ ಏನೇನು ಘಟನೆಗಳು, ಅವಾಂತರಗಳು ಆಗುತ್ತವೆಎಂಬುದನ್ನುಕೇಪರ್ಕಾಮಿಡಿ (ಕುಣಿದು ಕುಪ್ಪಳಿಸುವಂತ ಹಾಸ್ಯ)ರೂಪದಲ್ಲಿತೋರಿಸಲಾಗುತ್ತಿದೆ.ಅದು ಏನು ಎಂಬುದನ್ನು ಸಿನಿಮಾ ನೋಡಬೇಕಂತೆ. ....