ಆದಿ ಲಕ್ಷೀಯ ಪುರಾಣಗಳು ಕಳೆದ ವಾರ ‘ಆದಿ ಲಕ್ಷೀ ಪುರಾಣ’ ಚಿತ್ರದ ಹಾಡುಗಳು ಹೊರಬಂದು ವೈರಲ್ ಆಗಿತ್ತು. ಸಿನಿಮಾವು ಶುಕ್ರವಾರದಂದು ಬಿಡುಗಡೆಯಾಗುತ್ತಿರುವುದರಿಂದ ಪ್ರಚಾರದ ಕೊನೆ ಹಂತವಾಗಿ ಟ್ರೈಲರ್ನ್ನು ಯಶ್ ಅನಾವರಣಗೊಳಿಸಿದರು. ನಂತರ ಮಾತನಾಡುತ್ತಾ ಸುಹಾಸಿನಿ ಮೇಡಂ ಶಿಪಾರಸ್ಸಿನಂತೆ ಒಂದು ಕತೆ ಕೇಳಿ ಇಷ್ಟವಾಗಿತ್ತು. ರಾಕ್ಲೈನ್ವೆಂಕಟೇಶ್ ಅವರಿಗೆ ತಿಳಿಸಿದಾಗ ನಿರ್ಮಾಣ ಮಾಡುವುದಾಗಿ ರಾಧಿಕಾಪಂಡಿತ್ ಸೂಕ್ತ ಅನಿಸುತ್ತಾರೆಂದು ಕೇಳಿದರು. ಚಿತ್ರದಲ್ಲಿ ಹೆಣ್ ಮಕ್ಕಳ ದರ್ಬಾರ್ ಜಾಸ್ತಿ ಇದೆ. ರಾಧಿಕಾರವರು ನನಗಿಂತ ನಟನೆಯಲ್ಲಿ ಹಿರಿಯಳು. ಫಿಲಿಂ ಫೇರ್, ರಾಜ್ಯ ಸರ್ಕಾರದ ಪ್ರಶಸ್ತಿ ....
ವಿಷ್ಣು ಸರ್ಕಲ್ದಲ್ಲಿ ಸಾಹಸ ಸಿಂಹನ ನೆನಪುಗಳು ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಹೆಸರನ್ನು ಬಳಸಿಕೊಂಡು ಬಂದಿರುವ ಬಹುತೇಕ ಚಿತ್ರಗಳು ಯಶಸ್ಸನ್ನು ಕಂಡಿದೆ. ಅದರ ಪಸೆಯಿಂದಲೇ ‘ವಿಷ್ಣು ಸರ್ಕಲ್’ ಚಿತ್ರವೊಂದು ಬಿಡುಗಡೆಗೆ ಸಿದ್ದವಾಗಿದೆ. ಜನರಿಗೆ ಮೊದಲ ಆಹ್ವಾನ ಪತ್ರಿಕೆ ಎನ್ನುವಂತೆ ಸಿನಿಮಾದ ಧ್ವನಿಸಾಂದ್ರಿಕೆಯನ್ನು ಜಗ್ಗೇಶ್ ಅನಾವರಣಗೊಳಿಸಿದರು. ನಂತರ ಮಾತನಾಡುತ್ತಾ ವಿಷ್ಣು ಸರ್ ಅವರನ್ನು ಮೊದಲು ನೋಡಿದ್ದು ವಿಜಯ್ವಿಕ್ರಂ ಶೂಟಿಂಗ್ದಲ್ಲಿ. ಮುಂದೆ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಕಂಡು ಆತ್ಮೀಯವಾಗಿ ಮಾತನಾಡಿಸಿದ್ದರು. ಅವರೊಂದಿಗೆ ಊಟ ಮಾಡುವ ಅವಕಾಶ ಒದಗಿಬಂದಿತು. ಅವರು ಭವಿಷ್ಯವನ್ನು ಚೆನ್ನಾಗಿ ....
ಲಿಪ್ ಲಾಕ್ದಲ್ಲೂ ಭಾವನೆಗಳು ಇರುತ್ತದೆ ಕನ್ನಡದಲ್ಲಿ ಡಬ್ ಮಾಡಿದು., ಇತರೆ ಭಾಷೆಗಳೊಂದಿಗೆ ಮೊದಲ ಬಾರಿ ಏಕಕಾಲದಲ್ಲಿ ಬಿಡುಗಡೆಯಾಗುತ್ತಿರುವ ‘ಡಿಯರ್ ಕಾಮ್ರೇಡ್’ ಚಿತ್ರದ ನಾಲ್ಕು ಭಾಷೆಯ ಸಂಗೀತ ಹಬ್ಬವನ್ನು ಆಚರಿಸುತ್ತಿದ್ದು, ಮೊದಲ ಭಾಗವಾಗಿ ತಂಡವು ಬೆಂಗಳೂರಿಗೆ ಆಗಮಿಸಿತು. ಮೈಕ್ ತೆಗೆದುಕೊಂಡ ನಾಯಕ ವಿಜಯ್ದೇವರಕೊಂಡ ಅವರಿಗೆ ಲಿಪ್ ಲಾಕ್ ವಿಷಯದ ಕುರಿತಂತೆ ಮಾದ್ಯಮದಿಂದ ಪ್ರಾರಂಭದಲ್ಲಿ ಪ್ರಶ್ನೆ ಎದುರಾಯಿತು. ಇದಕ್ಕೆ ಸಂಯಮದಿಂದಲೇ ಉತ್ತರಿಸಿದರು. ಲಿಪ್ ಲಾಕ್ ಎನ್ನುವುದು ದೊಡ್ಡ ವಿಷಯವೇನಲ್ಲ. ಇಂತಹ ಪದವನ್ನು ಹೇಳಲು ಇಷ್ಟಪಡುವುದಿಲ್ಲ. ಕತೆ, ದೃಶ್ಯಕ್ಕೆ ಪೂರಕವಾಗಿದ್ದು ನಿರ್ದೇಶಕರ ....
ಮಕ್ಕಳಿಂದ, ಮಕ್ಕಳಿಗಾಗಿ, ಮಕ್ಕಳಿಗೋಸ್ಕರ ವಿಶ್ವದಲ್ಲೆ ಪ್ರಪ್ರಥಮ ಎನ್ನುವಂತೆ ಛಾಯಾಗ್ರಾಹಕ, ನಿರ್ಮಾಪಕ ಹೂರತುಪಡಿಸಿ ಸಂಪೂರ್ಣ ಮಕ್ಕಳೇ ಸೇರಿಕೊಂಡು ಸಿದ್ದಪಡಿಸಿರುವ ‘ನಿರ್ಮಲ’ ಚಿತ್ರವು ಪ್ರಧಾನ ಮಂತ್ರಿಗಳ ಸ್ವಚ್ಚ ಭಾರತ ಅಭಿಯಾನ, ಬಯಲು ಮುಕ್ತ ದೇಶವನ್ನಾಗಿ ಮಾಡುವ ಮುಖ್ಯ ವಿಷಯವನ್ನು ಹೇಳುವ ಪ್ರಯುತ್ನ ಮಾಡಲಾಗಿದೆ. ಇದರ ಜೊತೆಗೆ ಸಾಮಾಜಿಕ ಕಳಕಳಿ ಇರುವ ಅಂಶಗಳನ್ನು ಸೇರಿಸಿಕೊಂಡಿದ್ದಾರೆ. ಇವೆಲ್ಲವನ್ನು ಮಕ್ಕಳು ಹೇಗೆ ಮಾಡುತ್ತಾರೆ ಎಂಬುದು ಒಂದು ಏಳೆಯ ಸಾರಾಂಶವಾಗಿದೆ. ಅದಕ್ಕಾಗಿ ಮುಗ್ದ ಮನಸುಗಳ ಕನಸು ಎಂದು ಅಡಿಬರಹದಲ್ಲಿ ಹೇಳಲಾಗಿದೆ. ಹಾಗಂತ ಇವರುಗಳು ತೆರೆ ಹಿಂದೆ,ಮುಂದೆ ನೇರವಾಗಿ ಬಂದವೆಲ್ಲ. ....
ವಿದೇಶದಲ್ಲಿ ಮೆಚ್ಚುಗೆ ಗಳಿಸಿರುವ ಬೌ ಬೌ ಚಿತ್ರ ಅಂತರರಾಷ್ರ್ತೀಯ ಮಟ್ಟದಲ್ಲಿ ಇಪ್ಪತ್ತೋಂದು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುವ ‘ಬೌ ಬೌ’ ಚಿತ್ರವು ಪುಟ್ಟ ಹುಡುಗ ಮತ್ತು ನಾಯಿಯೊಂದಿಗಿನ ಬಾಂದವ್ಯವನ್ನು ಹೇಳುವ ಕತೆಯಾಗಿದೆ. ಇಪ್ಪತ್ತರೆಡು ವರ್ಷಗಳ ಕಾಲ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿರುವ ಎಸ್.ಪ್ರದೀಪ್ಕಿಲಿಕರ್ ಮೊದಲಬಾರಿಗೆ ನಿರ್ದೇಶಕನ ಸೀಟಿನಲ್ಲಿ ಕೂತಿದ್ದಾರೆ. ಒಂದಷ್ಟು ನೈಜ ಘಟನೆಗಳಿಂದ ಪ್ರೇರಣೆಗೊಂಡು ಕತೆ ಹಣೆಯಲಾಗಿದೆ. ಮನುಷ್ಯರಾದವರಿಗೆ ಧೋರಣೆ, ಅಹಂಕಾರ, ಕೋಪ ಎಂಬುದು ಇರುತ್ತದೆ. ಆದರೆ ಏನು ಅರಿಯದ ಮುಗ್ದ ಮಕ್ಕಳು, ಪ್ರಾಣಿಗಳಿಗೆ ಇಂತಹ ಯಾವುದೇ ....
ಚಿತ್ರಕಥಾದಲ್ಲೊಂದು ಸಿನಿಮಾ ಸಿನಿಮಾದೊಳಗೊಂದು ಚಿತ್ರಕತೆಗಳು ಬರುವುದು ಸಾಮಾನ್ಯವಾಗಿದೆ. ಈ ಸಾಲಿಗೆ ‘ಚಿತ್ರಕಥಾ’ ಸೇರ್ಪಡೆಯಾಗಿದೆ. ಇದಕ್ಕೆ ಪೂರಕವಾಗುವಂತೆ ದಿ ಪೈಟಿಂಗ್ ಟ್ಯಾಗ್ಲೈನ್ ಎಂದು ಹೇಳಿಕೊಂಡಿದ್ದಾರೆ. ಒಬ್ಬ ಕಲಾವಿದ ಕಷ್ಟಪಟ್ಟು ಒಂದು ಹಂತ ದಾಟಿದ ಮೇಲೆ, ಆತನ ಗುರಿ,ಕಲೆಗೆ ಗುರುತು ಸಿಗುತ್ತದೆ. ಅದನ್ನು ಗಳಿಸಲು ಬಣ್ಣದ ಲೋಕದ ಪಯಣದಲ್ಲಿ ಯಾವ ರೀತಿಯಲ್ಲಿ ಮಾನಸಿಕವಾಗಿ ಸಿದ್ದನಾಗುತ್ತಾನೆ, ಈ ದಾರಿಯ ಮಧ್ಯೆ ಬರುವ ಅವಘಡಗಳನ್ನು ಹೇಗೆ ಎದುರಿಸುತ್ತಾನೆ ಎಂಬುದನ್ನು ಸೆಸ್ಪನ್ಸ್ ,ಥ್ರಿಲ್ಲರ್ ಮಾದರಿಯಲ್ಲಿ ತೋರಿಸಲಾಗಿದೆ. ಆನಿಮೇಶನ್ದಲ್ಲಿ ಪರಿಣಿತರಾಗಿರುವ ಯಶಸ್ವಿಬಾಲಾದಿತ್ಯಾ ಕತೆ ಬರೆದು ....
ಹತ್ತನೇ ತರಗತಿ ಎಲ್ಲರಿಗೂ ಮಹತ್ವದ ಘಟ್ಟವಾಗಿರುತ್ತದೆ ‘೧೦ನೇ ತರಗತಿ’ ಎಂಬುದು ಪ್ರತಿಯೊಬ್ಬರಿಗೂ ತಾನು ವೈದ್ಯ, ಸೈನಿಕ, ಅಧಿಕಾರಿ ಇನ್ನು ಮುಂತಾದ ಗಮ್ಯ ತಲುಪಬೇಕೆಂಬ ಪಸೆ ಚಿಗುರುತ್ತದೆ. ಅದರಾಚೆಗೆ ಪ್ರೀತಿ, ಸ್ನೇಹ ಬೇರೆ ತರಹದಲ್ಲಿ ಹುಟ್ಟಿಕೊಳ್ಳುತ್ತದೆ. ಈಗ ಇದೇ ಹೆಸರಿನ ಮೇಲೆ ಚಿತ್ರವೊಂದು ಬಿಡುಗಡೆಗೆ ಸಿದ್ದವಾಗಿದೆ. ಇಂತಹುದೆ ನೈಜ ಘಟನೆಯೊಂದು ಮಹೇಶ್ಸಿಂಧುವಳ್ಳಿ ಜೀವನದಲ್ಲಿ ನಡೆದಿದೆ. ಅದನ್ನೆ ಚಿತ್ರಕತೆಯಾಗಿ ಮಾರ್ಪಡಿಸಿ ನಿರ್ದೇಶನ ಮಾಡಿದ್ದಾರೆ. ಇವರ ಕುರಿತು ಹೇಳುವುದಾದರೆ ಡಿಪ್ಲಮೋ ಇನ್ ಫಿಲಿಂ ಕೋರ್ಸ್ ಮತ್ತು ಓಂ ಪ್ರಕಾಶ್ರಾವ್ ಬಳಿ ಕೆಲಸ ಮಾಡಿದ ಅನುಭವದಿಂದ ಮೊದಲಬಾರಿ ....
ಸಿಲಿಕಾನ್ ಸಿಟಿಯ ಮತ್ತೋಂದು ಕರಾಳ ದಂಧೆ ಕಥನ ಎರಡು ವರ್ಷದ ಹಿಂದೆ ಶುರುವಾಗಿದ್ದ ‘ಡಿಚ್ಕಿ ಡಿಸೈನ್’ ಚಿತ್ರದಲ್ಲಿ ಸಿಲಿಕಾನ್ ಸಿಟಿಯ ಭೂಗತಲೋಕ, ರೌಡಿಸಂ ಹೊರತುಪಡಿಸಿ ಮತ್ತೋಂದು ದಂಧೆ ಏನೆಂದು ತೋರಿಸುವ ಪ್ರಯತ್ನ ಮಾಡಲಾಗಿದೆ. ಕಾಲೇಜುನಲ್ಲಿ ಹುಡುಗರು ವಿಚಿತ್ರ ವೇಷಭೂಷಣ ಹಾಕಿಕೊಂಡರೆ ಗೆಳಯರು ಇದೇ ಹೆಸರಿನಿಂದ ಚುಡಾಯಿಸುತ್ತಾರೆ. ಕ್ಯಾಚಿ ಆಗಿರಲೆಂದು ಇದನ್ನೆ ಇಡಲಾಗಿದೆಯಂತೆ. ಕತೆಯ ಕುರಿತು ಹೇಳುವುದಾದರೆ ಹಳ್ಳಿಯಲ್ಲಿ ಏನು ನೋಡದ ಹುಡುಗನೊಬ್ಬ ಬೆಂಗಳೂರು ದುನಿಯಾವನ್ನು ನೋಡಲು ಬಂದಾಗ ಏನಾಗುತ್ತಾನೆ. ಇಲ್ಲಿ ನಡೆಯುವ ಅನೇಕ ಮಜಲುಗಳು, ಅದರಾಚೆಗೆ ಅಭಿರುಚಿ ಇರುವ ....
ಪ್ಯಾತೆ ಟ್ರೈಲರ್ ಬಿಡುಗಡೆ ಮಾಡಿದ ಯೋಗೀಶ್ ಮೂವತ್ತೈದು ಲಕ್ಷದಲ್ಲಿ ಸಿದ್ದಪಡಿಸಿರುವ ‘ಫುಲ್ ಟೈಟ್ ಪ್ಯಾತೆ’ ಚಿತ್ರದ ಟ್ರೈಲರ್ನ್ನು ಬಿಡುಗಡೆ ಮಾಡಿದ ಲೂಸ್ ಮಾದ ಯೋಗಿ ಮಾತನಾಡಿ ನಿರ್ಮಾಪಕರು ಆಹ್ವಾನ ಮಾಡಲು ಬಂದಾಗ ಟೈಟಲ್ನ ಮೊದಲ ಎರಡು ಪದ ತಿಳಿಯಿತು. ಮೂರನೆ ಪದವನ್ನು ಮೂರು ಬಾರಿ ಕೇಳಿದ ತರುವಾಯ ಅರ್ಥವಾಯಿತು. ಅವರಿಗೆ ಕುಡಿಯೋದು ಗೊತ್ತಿಲ್ಲದಿದ್ದರೂ ಹೆಸರು ಮಾತ್ರ ಆ ರೀತಿ ಹೇಳಿದ್ದಾರೆ. ತಿಥಿ ಚಿತ್ರವನ್ನು ಜನರು ಇಷ್ಟಪಟ್ಟಂತೆ ಅದೇ ತರಹ ಎಲ್ಲರಿಗೂ ತಲುಪಲಿ ಎಂದು ಶುಭ ಹಾರೈಸಿದರು. ಕತೆಯು ....
ಬಿಡುಗಡೆ ಮುಂಚೆ ಆಪರೇಶನ್ ನಕ್ಷತ್ರಕ್ಕೆ ಬೇಡಿಕೆ ಒಂದಷ್ಟು ಸಿನಿಮಾಗಳು ಬಿಡುಗಡೆ ಮುಂಚೆ ತಂಡಕ್ಕೆ ನೆಮ್ಮದಿ ತಂದುಕೊಡುತ್ತದೆ. ಆ ಸಾಲಿಗೆ ‘ಆಪರೇಶನ್ ನಕ್ಷತ್ರ’ ಚಿತ್ರವು ಸೇರ್ಪಡೆಯಾಗಿದೆ. ಇಂಟರ್ನೆಟ್ ಮೂವಿ ಡೇಟಾ ಬೇಸ್ (ಐಎಂಡಿಬಿ ) ಸಂಸ್ಥೆಯು ಈ ವರ್ಷದಲ್ಲಿ ಹತ್ತು ಕನ್ನಡ ಚಿತ್ರಗಳನ್ನು ಉತ್ತಮ ಸಿನಿಮಾವೆಂದು ಹೇಳಿಕೊಂಡಿದ್ದು, ಅದರಲ್ಲಿ ಇದು ಸೇರಿದೆ. ಎರಡನೆಯದಾಗಿ ಟೀಸರ್,ಟ್ರೈಲರ್ ವೀಕ್ಷಿಸಿರುವ ಟಾಲಿವುಡ್ ನಿರ್ಮಾಪಕರೊಬ್ಬರು ರಿಮೇಕ್ ಮಾಡಲು ಉತ್ಸುಕರಾಗಿದ್ದು, ಸದ್ಯದಲ್ಲೆ ಸಿನಿಮಾ ನೋಡುವುದಾಗಿ ಹೇಳಿದ್ದಾರೆ. ಇಂತಹ ಸಕರಾತ್ಮಕ ಬೆಳವಣಿಗೆಯಿಂದ ಐವರು ನಿರ್ಮಾಪಕ, ನಿರ್ದೇಶಕರಿಗೆ ಖುಷಿ ತಂದುಕೊಟ್ಟಿದೆ. ಸಿನಿಮಾ ಕುರಿತು ....
ಪ್ರೀತಿ, ತ್ರಿಕೋನ ಕತೆಯ ಹಾರರ್ ಚಿತ್ರ ಸಿಗಂದೂರು ದೇವಿ ಕುರಿತ ಭಕ್ತಿ ಚಿತ್ರ ನಿರ್ಮಾಣ ಮಾಡಿದ್ದ ಶಶಿಕುಮಾರ್.ಪಿ.ಎಮ್ ಈ ಬಾರಿ ದೆವ್ವದ ಸಿನಿಮಾ ‘ವಜ್ರಮುಖಿ’ಗೆ ರಚನೆ,ಚಿತ್ರಕತೆ ಬರೆದು ಹಣ ಹೊಡುವ ಜೊತೆಗೆ ಖಳನ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಹಾರರ್,ಪ್ರೀತಿ ಮತ್ತು ತ್ರಿಕೋನಾತ್ಮಕ ಮಹಿಳಾ ಪ್ರಧಾನ ಜೊತೆಗೆ ಮರ್ಡರ್ ಮಿಸ್ಟರ್ ಕತೆ ಇರುವುದು ವಿಶೇಷವಾಗಿದೆ. ಯಾರಿಂದ ಯಾರಿಗೆ ಎಂಬಂತಹ ಕಾಲ್ಪನಿಕ ಘಟನೆಗಳು ತಿರುವು ಕೊಡುತ್ತದೆ. ರೋಡ್ರೋಮಿಯೋ ನಂತರ ಎರಡನೆ ಇನ್ನಿಂಗ್ಸ್ ಎನ್ನುವಂತೆ ಆಡ್ ಫಿಲಿಂ ಮೇಕರ್ ಪಾತ್ರಕ್ಕೆ ನಾಯಕ ದಿಲೀಪ್ಪೈ ನಟನೆ ಇದೆ. ಇವರಿಗೆ ....
ಮಳೆ ಬಿಲ್ಲು ಬಿಡುಗಡೆಗೆ ಸಿದ್ದ ಕಾಮನ ಬಿಲ್ಲಿಗೆ ಮತ್ತೋಂದು ಹೆಸರು ‘ಮಳೆ ಬಿಲ್ಲು’ ಅಂತ ಕರೆಯುವುದುಂಟು. ಈಗ ಇದೇ ಹೆಸರಿನಲ್ಲಿ ಚಿತ್ರವೊಂದು ತೆರೆಗೆ ಬರಲು ಸಜ್ಜಾಗಿದೆ. ರವಿಚಂದ್ರನ್ ಅಭಿಮಾನಿಯಾಗಿರುವ ನಾಗರಾಜಹಿರಿಯೂರು ಮೂಲತ: ಸಾಹಿತಿ, ರಂಗಭೂಮಿ ಅನುಭವ ಪಡೆದುಕೊಂಡಿದ್ದಾರೆ. ಇದರ ಧೈರ್ಯದಿಂದಲೇ ಮೊಬೈಲ್, ಗೂಗಲ್ ಮೂಲಕ ನಿರ್ದೇಶನ ಮಾಡುವ ಬಗೆಯನ್ನು ತಿಳಿದುಕೊಂಡು ಕತೆ, ಚಿತ್ರಕತೆ, ಸಂಭಾಷಣೆ, ಸಾಹಿತ್ಯ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ಕನಸುಗಾರ ರವಿ ಸರ್ ಪ್ರೇಮಲೋಕ ಕೊಟ್ಟರು. ಮಾತುಗಾರ ಯೋಗರಾಜಭಟ್ಟರು ಮುಂಗಾರು ಮಳೆ ನೀಡಿದರು. ಜೀವನದಲ್ಲಿ ಹುಡುಗನ ಬದುಕು ಕಪ್ಪು-ಬಿಳಿಪು ಆಗಿರುತ್ತದೆ. ಮಳೆಬಿಲ್ಲಿನಂತೆ ....
ಬೆಲ್ ಬಾಟಂ ೧೨೫ ನಾಟ್ ಔಟ್ ಕನ್ನಡ ಚಿತ್ರಗಳು ಆರ್ಧ ಶತಕ ಪೂರೈಸುವುದೇ ಕಡಿಮೆ ಇರುವ ಸಂದರ್ಭದಲ್ಲಿ ರೆಟ್ರೋ ಕತೆ ಹೊಂದಿರುವ ‘ಬೆಲ್ಬಾಟಂ’ ಚಿತ್ರವು ಸತತ ೧೨೫ ದಿವಸ ಯಶಸ್ವಿ ಪ್ರದರ್ಶನ ಕಂಡಿದೆ. ಇದಕ್ಕಾಗಿ ನಿರ್ಮಾಪಕರು ಸಣ್ಣದೊಂದು ಸಂತೋಷ ಕೂಟ ಏರ್ಪಾಟು ಮಾಡಿ ಕಲಾವಿದರು, ತಂತ್ರಜ್ಘರಿಗೆ ಗಣ್ಯರುಗಳಿಂದ ಫಲಕ ವಿತರಣೆ ಮಾಡಿಸಿದರು. ತಬಲವಾದಕನಾಗಿದ್ದು, ಧರ್ಮಸ್ಥಳದಲ್ಲಿ ಇದ್ದಾಗ ಕತೆ ಕೇಳಲಾಗಿತ್ತು. ರಂಗಭೂಮಿ ನಟನಾಗಿ ನಿರ್ಮಾಣ ಮಾಡುವ ಬಯಕೆ ಇತ್ತು. ಅದರಂತೆ ಧೈರ್ಯ ಮಾಡಿ ಹಣ ಹೂಡಿದ್ದು ಸಾರ್ಥಕವಾಗಿದೆ. ಇದಕ್ಕೆಲ್ಲಾ ಅಮ್ಮನ ಆರ್ಶಿವಾದವೆಂದು ಭ್ರಷ್ಟ ಪೋಲೀಸ್ ....
ಸಿಂಗ ಹಾಡುಗಳು ಶ್ಯಾನೆ ಹಿಟ್ ಆಗಿದೆ ಕಮರ್ಷಿಯಲ್ ಆಕ್ಷನ್ ಚಿತ್ರ ‘ಸಿಂಗ’ ಮೊದಲ ಗೀತೆ ‘ಶ್ಯಾನೆ ಟಾಪ್ ಅಗವ್ಳೆ’ ಹಾಡು ಏಳು ಲಕ್ಷ ಜನರು ವೀಕ್ಷಿಸಿದ್ದು, ಯುಟ್ಯೂಬ್ದಲ್ಲಿ ೭೫ ಲಕ್ಷಕ್ಕೂ ಅಧಿಕ ಹಿಟ್ಸ್ ಪಡೆದುಕೊಂಡು ದಾಖಲೆ ಮಾಡಿದ. ಈಗ ನಟಿ ಮೇಘನಾರಾಜ್, ನವೀನ್ಸಜ್ಜು ಕಂಠಸಿರಿಯಲ್ಲಿ ಮೂಡಿಬಂದಿರುವ ‘ವಾಟ್ ಎ ಬ್ಯೂಟಿಫುಲ್ ಹುಡುಗಿ’ ಹಾಡನ್ನು ದರ್ಶನ್ ಬಿಡುಗಡೆ ಮಾಡಿದರು. ಅವರು ಮಾತನಾಡುತ್ತಾ ಎರಡು ಹಾಡುಗಳನ್ನು ಕೇಳಿದ್ದೇನೆ. ಚೆನ್ನಾಗಿ ಬಂದಿದೆ. ಶೀರ್ಷಿಕೆಯು ಚಿರಂಜೀವಿಗೆ ಸೂಕ್ತವಾಗಿದೆ. ಇದರ ಶ್ರಮ ನಿರ್ಮಾಪಕ ಉದಯ್.ಕೆ.ಮೆಹ್ತಾ ಅವರಿಗೆ ಸಲ್ಲಬೇಕೆಂದು ತಂಡಕ್ಕೆ ಶುಭ ಹಾರೈಸಿದರು. ....
ವಿಜಯರಥದಲ್ಲಿ ಅಚ್ಚರಿಗಳ ಗುಚ್ಚ ‘ವಿಜಯರಥ’ ಚಿತ್ರವು ಕತೆಯು ಪ್ರಪಂಚದಲ್ಲಿ ಒಂದು ಒಳ್ಳೆ ಕೆಲಸ ಮಾಡಬೇಕು ಅಂದರೆ ಬೆಕ್ಕಿಗಿಂತ ಜನರು ಅಡ್ಡ ಬರ್ತಾರೆ. ನಾವು ಎರಡು ಸಿದ್ದಾಂತದಲ್ಲಿ ಬದುಕುತ್ತಿದ್ದೇವೆ. ಅದು ಧರ್ಮ ಮತ್ತು ಕರ್ಮ. ಗುರಿ ಮುಟ್ಟುವ ಪ್ರಯತ್ನದಲ್ಲಿ ಕೆಳಗಡೆ ಬೀಳುತ್ತಾನೆ. ಅದು ಕರ್ಮ. ಇನ್ನೋಬ್ಬ ಗಮ್ಯ ತಲುಪುತ್ತಾನೆ. ಅದುವೇ ಧರ್ಮ. ಕೆಳಗಡೆ ಬಿದ್ದವನನ್ನು ಕೂಡ ತನ್ನ ಜೊತೆ ಗುರಿಯನ್ನು ಮುಟ್ಟಿಸಲು ಪ್ರಯತ್ನ ಮಾಡುವ ಕಥಾನಾಯಕನಿಗೆ ಮೂರನೇ ರೂಪ ಕಾಣಿಸುತ್ತದೆ. ಯಾರಿಗೂ ಕಾಣಲಾರದ ತೃತೀಯ ಶಕ್ತಿ ಏನು ? ಪ್ರತಿ ಹತ್ತು ನಿಮಿಷಕ್ಕೊಮ್ಮೆ ತಿರುವು ಇರಲಿದೆ. ಉಪಕತೆಯ ಒಂದು ಭಾಗದಲ್ಲಿ ೬೦೦ ಸಕೆಂಡ್ಗಳ ಕಾಲ ....
ಅಂದಕ್ಕೆ ಮನಸೋತ ರಿಶಬ್ಶೆಟ್ಟಿ ಶೀರ್ಷಿಕೆ, ಛಾಯಾಗ್ರಹಣ ಅಂದವಾಗಿದೆ. ನಿರ್ದೇಶಕ ಚಲರವರು ಛಲ ಬಿಡದ ತ್ರಿವಿಕ್ರಮನಂತೆ ಒಳ್ಳೆ ಚಿತ್ರ ಮಾಡಿದ್ದಾರೆ. ಇಂತಹ ಅಂದಕ್ಕೆ ಮನಸೋತೆ ಎಂದು ನಟ,ನಿರ್ದೇಶಕ ರಿಶಬ್ಶೆಟ್ಟಿ ‘ಅಂದವಾದ’ ಸಿನಿಮಾದ ಧ್ವನಿಸಾಂದ್ರಿಕೆ ಅನಾವರಣ ಸಂದರ್ಭದಲ್ಲಿ ಹೇಳುತ್ತಾ ಶುಭ ಹಾರೈಸಿದರು. ಇವರದು ಈ ರೀತಿ ಆದರೆ, ಯೋಗಿ ದ್ವಾರಕೀಶ್ ಮಾತನಾಡಿ ನಾಯಕಿ ಇಷ್ಟವಾದರು. ಒಳ್ಳೆ ಅಂಶಗಳು ಇದ್ದರೆ ಸಿನಿಮಾ ಗೆಲ್ಲುತ್ತದೆ. ದುಡ್ಡಿನಿಂದ ಅಲ್ಲದೆ ಬುದ್ದಿಯಿಂದ ಮಾಡಿದರೆ ಜನರಿಗೆ ತಲುಪುತ್ತದೆ. ಎಲ್ಲಾ ಹಾಡುಗಳು ಚೆನ್ನಾಗಿದೆ. ನಾ ಕಂಡಂತೆ ಗುರುಕಿರಣ್ ಶ್ರೇಷ್ಟ ಸಂಗೀತ ನಿರ್ದೇಶಕ. ಇವರನ್ನು ಕರ್ನಾಟಕದ ....
ಜಂಟಲ್ಮನ್ ಟ್ರೈಲರ್ ಬಿಡುಗಡೆ ಗುರುವಾರ ಪ್ರಜ್ವಲ್ದೇವರಾಜ್ ಹುಟ್ಟಹಬ್ಬದ ಪ್ರಯುಕ್ತ ಅವರ ಅಭಿನಯದ ‘ಜಂಟಲ್ಮನ್’ ಚಿತ್ರದ ಟ್ರೈಲರ್ ಉಡುಗೊರೆಯಾಗಿ ಬಿಡುಗಡೆಗೊಂಡಿತು. ಸ್ಲೀಪಿಂಗ್ ಬ್ಯೂಟಿ ಸಿಂಡ್ರೋಮ್ ಎಂಬ ಖಾಯಿಲೆಯನ್ನು ಮೂಲವಾಗಿಟ್ಟುಕೊಂಡ ಕತೆಯಾಗಿದೆ. ಸಾಮಾನ್ಯ ಮನುಷ್ಯನಾದವನು ದಿನವೊಂದಕ್ಕೆ ಏಳು ಗಂಟೆ ನಿದ್ದೆ ಮಾಡುತ್ತಾನೆ. ಈ ಖಾಯಿಲೆಯಿಂದ ಬಳಲುತ್ತಿರುವವರು ಆರು ಗಂಟೆ ಮಾತ್ರ ಎಚ್ಚರವಿದ್ದು, ಉಳಿದ ಹದಿನೆಂಟು ಘಂಟೆಗಳ ಸಮಯದಲ್ಲಿ ನಿದ್ರೆಗೆ ಜಾರುತ್ತಾರೆ. ಅದಕ್ಕಾಗಿ ....
ಪ್ರಜ್ವಲ್ ಹುಟ್ಟುಹಬ್ಬಕ್ಕೆ ೨ನೇ ಟೀಸರ್ ಬಿಡುಗಡೆ ಪ್ರಜ್ವಲ್ದೇವರಾಜ್ ಅಭಿನಯಿಸುತ್ತಿರುವ ‘ಇನ್ಸ್ಪೆಕ್ಟರ್ ವಿಕ್ರಂ’ ಚಿತ್ರದ ಮೊದಲ ಟೀಸರ್ ಕಳೆದ ಹುಟ್ಟುಹಬ್ಬದಂದು ಬಿಡುಗಡೆ ಮಾಡಲಾಗಿತ್ತು. ಸಿನಿಮಾದ ಕೊನೆ ಹಂತದ ಚಿತ್ರೀಕರಣ ಬಾಕಿ ಇರಲಿದ್ದು, ಈ ಬಾರಿ ಅವರ ಹುಟ್ಟಹಬ್ಬ ಮುನ್ನ ದಿನದಂದು ಎರಡನೇ ಟೀಸರ್ ತಾಜ್ ವಿವಾಂಟಾದಲ್ಲಿ ಅನಾವರಣಗೊಂಡಿತು. ಪ್ರಜ್ವಲ್ ಮಾತನಾಡಿ ಹನ್ನೆರಡು ವರ್ಷದ ಅನುಭವ, ೩೦ನೇ ಚಿತ್ರದಲ್ಲಿ ನಟಿಸಲಾಗುತ್ತಿದೆ. ಕ್ಯಾಮಾರಾ ಮುಂದೆ ನಿಲ್ಲಲು ಭಯ ಆಗುವುದಿಲ್ಲ. ಆದರೆ ವೇದಿಕೆ ಮುಂದೆ ಮೈಕ್ ಹಿಡಿದಾಗ ಏನು ಹೇಳುವುದೆಂದು ತಿಳಿಯುವುದಿಲ್ಲ. ಇದೇ ಹೆಸರಿನ ....
ತಿರುಡನ್ ಪೋಲೀಸ್ ಇಲ್ಲಿ ಕಿಲಾಡಿ ಪೋಲೀಸ್ ೨೦೧೫ರ ತಮಿಳು ಚಿತ್ರ ಸ್ಯಾಂಡಲ್ವುಡ್ದಲ್ಲಿ ‘ಕಿಲಾಡಿ ಪೋಲೀಸ್’ ಹೆಸರಿನಲ್ಲಿ ಶೂಟಿಂಗ್ ಮುಗಿಸಿ ಚಿತ್ರಿಕರಣೋತ್ತರ ಕೆಲಸದಲ್ಲಿ ಬ್ಯುಸಿ ಇದೆ. ಶ್ರೀ ಸತ್ಯ ನಾರಾಯಣ ಸಿನಿಮಾಕ್ಕೆ ಒಂದೇ ಸಲ ಹದಿನಾರು ಪಾತ್ರಗಳಲ್ಲಿ ನಟಿಸಿ ಗಿನ್ನಿಸ್ ದಾಖಲೆಗೆ ಅರ್ಹರಾಗಿದ್ದ ಹರೀಶ್ರಾಜ್ ಕಾಲಿವುಡ್, ಮಾಲಿವುಡ್ನ ದೊಡ್ಡ ಚಿತ್ರಗಳಲ್ಲಿ ಬ್ಯುಸಿ ಇದ್ದರು. ಆದರೂ ಭಾಷೆಯ ಅಭಿಮಾನದಿಂದ ವರ್ಷಗಳ ನಂತರ ಇವರು ನಾಯಕ,ಎರಡು ಗೀತೆಗೆ ಸಾಹಿತ್ಯ, ನಿರ್ದೇಶನ ಮತ್ತು ನಿರ್ಮಾಣ ಮಾಡಿದ್ದಾರೆ. ಪೋಲೀಸ್ ಕ್ವಾರ್ಟಸ್ದಲ್ಲಿ ನಡೆಯುವ ಕತೆಯಲ್ಲಿ ತಂದೆ ಮಗನ ಬಾಂದವ್ಯ ....
ಬುದ್ದಿಮಾಂದ್ಯರು ದೇವರ ಮಕ್ಕಳು ಪ್ರಯೋಗಾತ್ಮಕ ಚಿತ್ರ ‘ಜ್ಘಾನಂ’ ಚಿತ್ರವು ಈಗಾಗಲೇ ಹನ್ನೊಂದು ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಉತ್ತಮ ಚಿತ್ರವೆಂದು ಪ್ರಶಸ್ತಿಯನ್ನು ಪಡೆದುಕೊಂಡಿದೆ. ವರದರಾಜ್ವೆಂಕಟಸ್ವಾಮಿ ಮನೆಯ ಪಕ್ಕದಲ್ಲಿ ಬುದ್ದಿಮಾಂದ್ಯ ಮಗುವೊಂದರ ಚಲನವಲನಗಳನ್ನು ಕಂಡು ಅದರ ಪ್ರೇರಣೆಯಿಂದ ಕತೆ,ಚಿತ್ರಕತೆ,ಸಾಹಿತ್ಯ, ಸಂಭಾಷಣೆ ಬರೆದು ಸಂಕಲನ, ನಿರ್ದೇಶನ ಮಾಡಿದ್ದಾರೆ. ಸಿನಿಮಾ ಕುರಿತು ಹೇಳುವುದಾದರೆ ಒಂದೇ ದಿನದಂದು ಹುಟ್ಟಿದ ಇಬ್ಬರು ಮಕ್ಕಳಲ್ಲಿ ಒಬ್ಬ ಬುದ್ದಿವಂತ. ಮತ್ತೋಬ್ಬ ಬುದ್ದಿಮಾಂದ್ಯನಾಗಿರುತ್ತಾನೆ. ಇಂತಹ ಖಾಯಿಲೆಗೆ ತುತ್ತಾಗಿರುವ ಮಕ್ಕಳ ಯೋಚನೆ, ಆಲೋಚನೆಗಳು, ಅವರ ಪ್ರಪಂಚ, ....