Bayalaatada Bheemanna.Film Audio Rel.

Tuesday, July 30, 2019

ಇನ್ಮುಂದೆ  ದುಡ್ಡು  ಮಾಡುವುದೇ ಕಾಯಕ – ಕ್ರೇಜಿಸ್ಟಾರ್         ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ   ಕತೆ,ಚಿತ್ರಕತೆ,ಸಾಹಿತ್ಯ, ಸಂಭಾಷಣೆ ಬರೆದು ನಿರ್ದೇಶನ ಮಾಡಿರುವ ‘ಬಯಲಾಟದ ಭೀಮಣ್ಣ’ ಚಿತ್ರದ ಧ್ವನಿಸಾಂದ್ರಿಕೆಯನ್ನು ಅನಾವರಣಗೊಳಿಸಲು ಚಾಮುಂಡೇಶ್ವರಿ ಸ್ಟುಡಿಯೋಗೆ ರವಿಚಂದ್ರನ್ ಆಗಮಿಸಿದ್ದರು. ಸಾಧಾರಣವಾಗಿ ಕ್ರೇಜಿಸ್ಟಾರ್  ಮಿತಭಾಷಿಯಾಗಿರುತ್ತಾರೆ.  ಆದರೆ ನಿರ್ದೇಶಕರ ಮೇಲಿನ ಗೌರವಕ್ಕೆ ಹೆಚ್ಚು ಮಾತನಾಡುತ್ತಾ ಹೋದರು. ಇಲ್ಲಿ ನಿಂತಾಗ ರಣಧೀರ ನೆನಪಿಗೆ ಬರುತ್ತದೆ. ಇದೇ ಜಾಗದಲ್ಲಿ ಕ್ಲೈಮಾಕ್ಸ್‌ನ್ನು ಚಿತ್ರ್ರೀಕರಿಸಲಾಗಿತ್ತು. ಜಾಗ ಹಳೆಯದಾದರೂ, ವಾತವರಣ ಹೊಸತು ಆಗಿದೆ. ....

155

Read More...

Coffee Katte.Film Pooja and Press Meet.

Monday, July 29, 2019

ಮುವತ್ತೈದು ಹಾಸ್ಯ  ಕಲಾವಿದರ ಚಿತ್ರ        ಗುರುಶಿಷ್ಯರು, ಬೊಂಬಾಟ್‌ಹೆಂಡ್ತಿ, ನಗೆಬಾಂಬ್ ಚಿತ್ರಗಳಲ್ಲಿ ಬಹುತೇಕ ಹಾಸ್ಯ ಕಲಾವಿದರು ಜನರನ್ನು ನಗಿಸಿದ್ದರು. ಅದಕ್ಕಿಂತಲೂ ಹೆಚ್ಚು, ಚಂದನವನದ ಇತಿಹಾಸದಲ್ಲಿ ಮೊದಲು ಎನ್ನುವಂತೆ ಚಿತ್ರರಂಗದ ಮುವತ್ತೈದು ಹಿರಿ, ಕಿರಿ ಹಾಸ್ಯ ಕಲಾವಿದರನ್ನು ಒಂದೇ ತೆರೆ ಮೇಲೆ ನೋಡುವ ಅವಕಾಶವು ‘ಕಾಫಿ ಕಟ್ಟೆ’ ಚಿತ್ರದಲ್ಲಿ ಸಿಗಲಿದೆ.  ಮೂಲತ: ನೃತ್ಯ ನಿರ್ದೇಶಕರಾಗಿರುವ ಕಪಿಲ್ ಮೂರನೇ ಪ್ರಯತ್ನದಲ್ಲಿ ಸಂಪೂರ್ಣ ಹಾಸ್ಯ ಕಲಾವಿದರ ಮೇಲೆ ಕತೆಯನ್ನು ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಈ ಮೊದಲು ಫಿಲ್ಟರ್ ಕಾಫಿ ಶೀರ್ಷಿಕೆ ಇಡಲು ಚಿಂತನೆ ನಡೆಸಲಾಗಿತ್ತು. ಆಂಗ್ಲ ಹೆಸರು ಇರುವ ಕಾರಣ ....

201

Read More...

Dhoom Again.Film Teaser Rel.

Sunday, July 28, 2019

ಧೂಮ್‌ಗೆ  ಪುನೀತ್‌ರಾಜ್‌ಕುಮಾರ್  ಚಾಲನೆ        ವಿಶೇಷ ರೀತಿಯ ಬೈಕ್‌ಗಳನ್ನು ಓಡಿಸುವಾಗ ಸುರಕ್ಷತೆಗಾಗಿ ಹೆಲ್ಮಟ್ ಧರಿಸಿಕೊಳ್ಳುವುದು ಒಳ್ಳೆಯದು ಅಂತ ಪುನೀತ್‌ರಾಜ್‌ಕುಮಾರ್ ‘ಧೂಮ್ ಅಗೇನ್’ ಚಿತ್ರದ ಫಸ್ಟ್‌ಲುಕ್ ಮತ್ತು ಟೀಸರ್ ಅನಾವರಣ ಮಾಡುತ್ತಾ ನೂತನ ಕಲಾವಿದರಿಗೆ ಕಿವಿಮಾತು ಹೇಳಿದರು.  ಇದಕ್ಕೂ ಮುನ್ನ ನಾಲ್ಕು ಯುವಕಲಾವಿದರು ಬೈಕ್‌ನಲ್ಲಿ ವೇದಿಕೆಗೆ ಆಗಮಿಸಿದ್ದನ್ನು ಕಂಡು ಈ ರೀತಿ ಹೇಳಲು ಕಾರಣವಾಗಿತ್ತು. ಹೆಸರಿಗೆ ತಕ್ಕಂತೆ ದುಬಾರಿ ಬೈಕ್‌ಗಳು ಪಾತ್ರದಲ್ಲಿ ಕಾಣಿಸಿಕೊಳ್ಳುತ್ತದೆ. ಹಾಗಂತ ಬಾಲಿವುಡ್‌ನಲ್ಲಿ ತೆರೆಕಂಡ ಚಿತ್ರಕ್ಕೂ ಇದಕ್ಕೂ ಸಂಬಂದವಿರುವುದಿಲ್ಲವೆಂದು ನಿರ್ದೇಶಕ ....

189

Read More...

Baro Baro Geleya.Film Press Meet.

Saturday, July 27, 2019

ಗಣಿ ನಾಡಿನ ಯುವಕರ ಸಿನಿಮಾ         ಗಣಿ-ಧಣಿ ಎಂದರೆ ಥಟ್ಟನೆ ನೆನಪಿಗೆ ಬರುವುದು ಬಳ್ಳಾರಿ.  ಈ ಭಾಗದಲ್ಲಿ ಹೆಚ್ಚು ತೆಲುಗು ಚಿತ್ರಗಳು ಪ್ರಾಬಲ್ಯ ಹೊಂದಿದೆ. ಇದರಿಂದ ಅಲ್ಲಿನ ಇಂಜಿನಿಯರಿಂಗ್  ಕನ್ನಡಿಗರಿಗೆ ಬೇಸರ ತಂದು  ನಮ್ಮ ಭಾಷೆಯಲ್ಲಿ ಸಿನಿಮಾ ಮಾಡಲು ನಿರ್ಣಯ ತೆಗೆದುಕೊಂಡಿದ್ದೆ ‘ಬಾರೊ ಬಾರೊ ಗೆಳಯ’ ಚಿತ್ರವೊಂದು ಬಿಡುಗಡೆ ಹಂತಕ್ಕೆ ಬಂದಿದೆ.  ಸಂಗೀತ ನಿರ್ದೇಶಕ ಹೊರತುಪಡಿಸಿ ಉಳಿದವರೆಲ್ಲರೂ ಇದೇ ಭಾಗದವರು ಎಂಬುದು ವಿಶೇಷ. ಹೆಣ್ಣಿನ ಕೂಗನ್ನು ಶೀರ್ಷಿಕೆಗೆ ಹೋಲಿಸಿದ್ದಾರೆ. ದುರಂತ ಪ್ರೇಮ ಕತೆಯಲ್ಲಿ ಕುತೂಹಲದ ಅಂಶಗಳು ಇರಲಿದೆ. ಯುವ ಪ್ರೇಮಿಗಳು ಸಂತೋಷ ಹಂಚಿಕೊಳ್ಳಲು ದೂರದ ಪಯಣ ಕೈಗೊಳ್ಳುತ್ತಾರೆ. ಸ್ಥಳ ....

206

Read More...

Adyaksha in America.Film Teaser Rel.

Saturday, July 27, 2019

ದಂಪತಿಗಳು ಇಷ್ಟ ಪಡುವ ಚಿತ್ರ -ಶರಣ್          ನಮ್ಮ ಸಿನಿಮಾ ಈ ರೀತಿ ಇರುತ್ತದೆಂದು ಮೊದಲು ತೋರಿಸುವುದು ಟೀಸರ್. ಅದರಂತೆ.  ‘ಅಧ್ಯಕ್ಷ ಇನ್ ಅಮೇರಿಕಾ’ ಚಿತ್ರದ ತುಣುಕುಗಳು ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಪ್ರದರ್ಶನಗೊಂಡಿತು. ನಂತರ ಮಾತನಾಡಿದ ನಾಯಕ ಶರಣ್ ಈ ವೇದಿಕೆ ಭಾವನಾತ್ಮಕವಾಗಿ ಮನಸ್ಸಿಗೆ ತಟ್ಟಿದೆ. ಇದೇ ಜಾಗದಲ್ಲಿ ಮೊದಲ ಚಿತ್ರದ ಡಬ್ಬಿಂಗ್, ಅಯೋಗ್ಯ ಆಡಿಯೋ ಸಿಡಿಯನ್ನು ಬಿಡುಗಡೆ ಮಾಡಲಾಗಿತ್ತು. ಎರಡು ಚಿತ್ರಗಳು ಹಿಟ್ ಆಗಿತ್ತು.  ಆ ಸಾಲಿಗೆ ಇದು ಸೇರಲಿದೆ ಎನ್ನುವ ಆಶಾಭಾವನೆ ಇದೆ. ಒಂದು ನಿಮಿಷದ ದೃಶ್ಯಗಳ ಹಿಂದೆ  ಹತ್ತು ತಿಂಗಳ ಶ್ರಮ,  ನೂರಾರು ಜನರು  ಬೆವರು ಸುರಿಸಿದ್ದಾರೆ. ....

232

Read More...

Star Kannadiga.Film Triler Rel.

Saturday, July 27, 2019

ಹೆಮ್ಮೆಯ  ಸ್ಟಾರ್ ಕನ್ನಡಿಗ         ಬಣ್ಣದ ಲೋಕಕ್ಕೆ  ಸಾಕಷ್ಟು ಮಂದಿ ಬರುತ್ತಾರೆ. ಕೆಲವರಿಗೆ ಅದೃಷ್ಟ ಖುಲಾಯಿಸುತ್ತದೆ. ಮತ್ತೋಬ್ಬರು ಸೈಕಲ್ ಹೊಡೆಯುತ್ತಾ ಇರುತ್ತಾರೆ.  ಇದನ್ನು ಹೇಳಲು ಪೀಠಿಕೆ ಇದೆ. ಹೊಸಬರೇ ಸೇರಿಕೊಂಡು ‘ಸ್ಟಾರ್ ಕನ್ನಡಿಗ’ ಅಡಿಬರಹದಲ್ಲಿ ಬೋಲೋ ಕನ್ನಡಿಗಾ ಕೀ ಜೈ, ಇದು ಕನ್ನಡಿಗನ ಕಥೆ  ಎಂದು ಹೇಳಿಕೊಂಡರುವ  ಚಿತ್ರವನ್ನು ಸಿದ್ದಪಡಿಸಿದ್ದಾರೆ. ಸಿನಿಮಾದೊಳಗೊಂದು ಸಿನಿಮಾ ಕತೆ ಇರುವುದು ವಿಶೇಷ.  ಯುವಕರ ತಂಡವೊಂದು ಚಿತ್ರ ಮಾಡಲು ತಯಾರಿ ನಡೆಸುತ್ತಿರುವಾಗ, ದಾರಿಯಲ್ಲಿ ಹುಡುಗಿಯೊಬ್ಬಳು ಸಿಗುತ್ತಾಳೆ. ಇದರಿಂದ ಅವರ ಆಕಾಂಕ್ಷೆಗಳು ಬೇರೆ ಕಡೆಗೆ ವಾಲುತ್ತದೆ. ಅಂತಿಮವಾಗಿ ಪ್ರೀತಿ, ಬದುಕು ಇದರಲ್ಲಿ ....

250

Read More...

Yaar Maga.Film Triler Rel.

Wednesday, July 24, 2019

ವೇದಿಕೆ ಒಂದು ಕಾರ್ಯಕ್ರಮ ಮೂರು          ‘ಏ ಸೋನಾ’ ಮ್ಯೂಸಿಕ್ ಆಲ್ಬಂದಲ್ಲಿ ರಘುಪಡುಕೋಟೆ ಕಾಣಿಸಿಕೊಂಡಿದ್ದ ವಿಡಿಯೋ ಗೀತೆ ಅನಾವರಣ ಸಮಯದಲ್ಲಿ ‘ಯಾರ್  ಮಗ’ ಚಿತ್ರದ ಬಗ್ಗೆ  ಮಾಹಿತಿಯನ್ನು ನೀಡಿದ್ದರು. ಈಗ ಸದರಿ ಚಿತ್ರದ ಮೊದಲ ಹಂತದ ಪ್ರಚಾರಕ್ಕಾಗಿ ಟ್ರೈಲರ್, ನಾಯಕನ ಹುಟ್ಟುಹಬ್ಬ ಮತ್ತು ೨೦ ಕಲಾವಿದರ ಅಡಿಷನ್ ಕಾರ್ಯಕ್ರಮ ನಡೆಯಿತು. ನಿರ್ದೇಶಕ ಸುರೇಶ್‌ರಾಜ್ ಮತ್ತು ನಟ ಗಣೇಶ್‌ರಾವ್ ಸಾರಥ್ಯದಲ್ಲಿ ಆಯ್ಕೆಗೊಂಡಿದ್ದವರು ಹಾಜರಿದ್ದರು. ನಿರ್ದೇಶಕರು ಮಾತನಾಡಿ ೯೦ರ ದಶಕದ ಕತೆಯಲ್ಲಿ ತಾಯಿ-ಮಗನ ಬಾಂದವ್ಯ ಹಾಗೂ ಭೂಗತಲೋಕದ ಶಿವಾಜಿನಗರದ ರಿಯಲ್ ರೌಡಿಗಳನ್ನು ತೋರಿಸಲಾಗುವುದು. ಸುರಕ್ಷತೆ ದೃಷ್ಟಿಯಿಂದ ....

507

Read More...

Sinnga.Film Success Meet.

Tuesday, July 23, 2019

ಪೈರಸಿಯಿಂದ  ಸಿಂಗನಿಗೆ  ಬೇಸರ          ಕಮರ್ಷಿಯಲ್ ಆಕ್ಷನ್ ಚಿತ್ರ ‘ಸಿಂಗ’ ಬಿಡುಗಡೆಯಾಗಿ ಎಲ್ಲಾ ಕಡೆಗಳಿಂದಲೂ ಉತ್ತಮ ಪ್ರತಿಕ್ರಿಯೆ ಬರುತ್ತಿರುವುದು ಒಂದು ಕಡೆಯಾದರೆ, ಎರಡೇ ದಿನದಲ್ಲಿ ಸಿನಿಮಾವು ಪೈರಸಿಯಾಗಿರುವುದು  ನೋವಿನ ಸಂಗತಿಯಾಗಿದೆ ಎಂದು  ನಿರ್ಮಾಪಕ ಉದಯ್.ಕೆ.ಮೆಹ್ತಾ ಸಂತೋಷಕೂಟದಲ್ಲಿ ಮಾತನಾಡುತ್ತಾ ಸುದ್ದಿಯನ್ನು  ಖಚಿತ ಪಡಿಸಿದರು.. ಅವರು ಹೇಳುವಂತೆ  ೨೩೬ ಕೇಂದ್ರಗಳಲ್ಲಿ ಬಿಡುಗಡೆ ಮಾಡಲಾಗಿತ್ತು. ಬಿ.ಸಿ ಸೆಂಟರ್‌ಗಳಲ್ಲಿ ಗಳಿಕೆ ಚೆನ್ನಾಗಿ ಬರುತ್ತಿದೆ.  ಪೈರಸಿ ಎನ್ನುವ  ಪೆಡಂಭೂತದಿಂದ ಹೆಚ್ಚು ಪ್ರಚಾರ ಸಿಕ್ಕಿದ್ದರೂ ಆದಾಯ ಕಡಿಮೆಯಾಗಿದೆ.  ಸೈಬರ್ ಕ್ರೈಮ್‌ಗೆ ದೂರು ನೀಡಿದಾಗ, ಅಲ್ಲಿನ ....

633

Read More...

Murder-2.Film Press Meet.

Tuesday, July 23, 2019

ಕುತೂಹಲದ  ಮರ್ಡರ್-೨         ಕೊಲೆ ಎಂದ ಮೇಲೆ ಅದು ಮರ್ಡರ್ ಎನ್ನುವುದು ತಿಳಿದಿದೆ. ಈಗ ಅಂತಹುದೆ  ಹಸರಿನಲ್ಲಿ ‘ಮರ್ಡರ್-೨’ ಎನ್ನುವ ಚಿತ್ರವೊಂದು ಬಿಡುಗಡೆಗೆ ಸಿದ್ದವಾಗಿದೆ. ಭಾಗ-೧ ಸಿನಿಮಾಕ್ಕೆ ಕತೆ,ನಿರ್ದೇಶನ,ನಿರ್ಮಾಣ ಮಾಡಿರುವ  ಮಂಡ್ಯಾನಾಗರಾಜು  ಭಾಗ-೨ಕ್ಕೂ ಇದೇ ಜವಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಅಂದಹಾಗೆ ಇವರದು  ನಿರ್ದೇಶಕ, ನಿರ್ಮಾಪಕನಾಗಿ ಹದಿನಾಲ್ಕನೇ ಚಿತ್ರವಾಗಿರುವುದು ವಿಶೇಷ. ಸಂಪೂರ್ಣ ಮನರಂಜನೆ ಇರುವ ಕಾರಣ ಯಾವುದೇ ರೀತಿಯ  ಹಾಡುಗಳು ಇರುವುದಿಲ್ಲ. ಗ್ರಾಮೀಣ ಭಾಗದ ಕತೆಯಲ್ಲಿ  ಹುಡುಗಿ ಮನೆಯವರನ್ನು ಎದುರು ಹಾಕಿಕೊಂಡು ಅಕೆಯನ್ನು ಕರೆದುಕೊಂಡು ಹೋದಾಗ ದೂರದ ಸ್ಥಳದಲ್ಲಿ ಘಟನೆ ....

513

Read More...

Mahira.Film Press Meet.

Monday, July 22, 2019

                                         ಮಹಿರಾ ನೋಡಲು ಕಾರಣಗಳು           ಆಕ್ಷನ್, ಥ್ರಿಲ್ಲರ್‌ನಿಂದ ಕೂಡಿರುವ ‘ಮಹಿರಾ’ ಸಿನಿಮಾ ನೋಡಲು ನಿರ್ದೇಶಕ ಮಹೇಶ್‌ಗೌಡ ಕಾರಣಗಳನ್ನು ಕೊಡುತ್ತಾರೆ. ಮೊದಲನೆಯದಾಗಿ ಕತೆ,ಚಿತ್ರಕತೆ. ಲಂಡನ್ ಕನ್ನಡಿಗರು ಸೇರಿಕೊಂಡು ಹಣ ಹೂಡಿದ್ದಾರೆ. ಅನುಭವ ಇರುವ ತಂತ್ರಜ್ಘರು ಕೆಲಸ  ಮಾಡಿರುವುದು. ಹೊಸ ರೀತಿಯ ಸಾಹಸ ಇರಲಿದೆ. ಮಧ್ಯ ವಯಸ್ಸಿನ ತಾಯಿ ಡ್ಯೂಪ್‌ಬಳಸದೆ ಫೈಟ್ ಮಾಡಿದ್ದಾರೆ. ಇದುವರೆಗೂ ನೋಡಿರದ ಅಮ್ಮ-ಮಗಳ ಬಾಂದವ್ಯ ತೋರಿಸಲಾಗಿದೆ. ಹಿನ್ನಲೆ ಸಂಗೀತ ಪ್ಲಸ್ ಪಾಯಿಂಟ್ ಆಗಿದೆ. ಕತೆ  ಕುರಿತು ಹೇಳುವುದಾದರೆ ಶೀರ್ಷಿಕಯು  ಸಂಸ್ಕ್ರತ ....

713

Read More...

Jark.Film Press Meet.

Monday, July 22, 2019

ಪ್ರಾರಂಭ ರಾಕ್ ಮುಕ್ತಾಯ ಶಾಕ್         ಬಿಗಿನಿಂಗ್ ರಾಕ್, ಎಂಡಿಂಗ್ ಶಾಕ್. ಇದನ್ನು ಕನ್ನಡದಲ್ಲಿ ಮೇಲಿನಂತೆ ಹೇಳುತ್ತಾರೆ. ‘ಜರ್ಕ್’ ಚಿತ್ರದ ಅಡಿಬರಹದಲ್ಲಿ ಇದನ್ನೆ  ಹೇಳಲಾಗಿದೆ. ಮೆಟ್ರೋದಲ್ಲಿ ಕೆಲಸ ಮಾಡುತ್ತಾ ಅಂಶಕಾಲಿಕವಾಗಿ ಸಿನಿಮಾಕ್ಕೆ ಕತೆ,ಚಿತ್ರಕತೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿರುವ ಮಹಾಂತೇಶ್‌ಮದಕರಿಗೆ ಹೊಸ ಅನುಭವ. ಇವರಿಗೆ  ಸಮಾಜದ ಅಂಕುಡೊಂಕುಗಳನ್ನು  ತಿದ್ದಬೇಕೆಂದು ಮನಸ್ಸು ಯಾವಾಗಲೂ ಹೇಳುತ್ತಿತ್ತು. ಇದಕ್ಕಾಗಿ ಸಿನಿಮಾ ಮಾಡಬೇಕೆಂಬ ತುಡಿತವಿತ್ತು. ಬಿಡುವಿನ ಸಮಯದಲ್ಲಿ ೨೫೦೦ ಕವಿತೆಗಳನ್ನು  ಬರೆದಿದ್ದಾರೆ. ಮುಂದೆ ಗುರುಗಳು ಜಯತೀರ್ಥ ಅವರಿಂದ ಚಿತ್ರರಂಗದ ವಿಭಾಗಗಳನ್ನು ....

569

Read More...

Mane Maratakkide.Film Press Meet.

Wednesday, July 17, 2019

ಹಾರರ್  ಕಾಮಿಡಿ  ಸಮ್ಮಿಲನ         ಹಾರರ್ ಚಿತ್ರವೆಂದರೆ ಅಲ್ಲಿ ಬೇರೆ ಯಾವುದಕ್ಕೆ ಅವಕಾಶ ಇರುವುದಿಲ್ಲ. ಅದರಂತೆ ಕಾಮಿಡಿ ಅಂದರೆ ನಗು ಬಿಟ್ಟು ಬೇರೇನೂ ಸಿಗುವುದಿಲ್ಲ. ಹೊಸತು ಎನ್ನುವಂತೆ  ‘ಮನೆ ಮಾರಾಟಕ್ಕಿದೆ’ ಅಡಿ ಬರಹದಲ್ಲಿ ದೆವ್ವಗಳೇ  ಎಚ್ಚರಿಕೆ  ಎಂದು ಹೇಳಿಕೊಂಡಿರುವ ಚಿತ್ರದಲ್ಲಿ ಇವರೆಡು ಒಂದರ ನಂತರ ಸನ್ನಿವೇಶಗಳಲ್ಲಿ ಮೂಡಿಬಂದಿದೆ. ಶಶಿರ, ಶ್ರೀಕಂಠ, ಶ್ರಾವಣಿ ಸುಬ್ರಮಣಿ, ಪಟಾಕಿ ಚಿತ್ರಗಳ ನಿರ್ದೇಶಕ ಮಂಜುಸ್ವರಾಜ್ ಈ ಬಾರಿ ಎರಡು ಆಂಶಗಳನ್ನು ಸೇರಿಸಿಕೊಂಡು ಕತೆ ಹಣೆಯಲು ತೆಲುಗು ಚಿತ್ರ ಸ್ಪೂರ್ತಿ ಎನ್ನುತ್ತಾ ವಿವರ ನೀಡಲಿಲ್ಲ.  ಬಾರ್‌ನಲ್ಲಿ ಕ್ಯಾಶಿಯರ್ ಆಗಿರುವ ಚಿಕ್ಕಣ್ಣ, ಎಣ್ಣೆ ಪ್ರಿಯಾ ಸಾಧುಕೋಕಿಲ, ....

497

Read More...

Mohanadasa.Film Press Meet.

Wednesday, July 17, 2019

ಗಾಂಧೀಜಿ ಬಾಲ್ಯ ನೆನಪಿಸುವ ಚಿತ್ರ         ಮಹಾತ್ಮಗಾಂಧಿ ಬಾಲ್ಯ ಕುರಿತಾದ ‘ಮೋಹನದಾಸ’ ಚಿತ್ರದ ಕೊನೆ ಹಂತದ ಚಿತ್ರೀಕರಣವು ಬೆಂಗಳೂರಿನ ಚಾಮರಾಜಪೇಟೆಯ ೧೧೫ ವರ್ಷದ ಹಳೆಯ ಮನೆಯಲ್ಲಿ ಸೆರೆ ಹಿಡಿಯಲಾಗುತ್ತಿತ್ತು.  ವಿವಿರಗಳನ್ನು  ತಿಳಿಸುವ ಸಲುವಾಗಿ  ಮಾದ್ಯಮದವರನ್ನು  ಕರೆಸಿಕೊಳ್ಳಲಾಗಿತ್ತು.  ಪತ್ರಕರ್ತರು ಸೆಟ್‌ಗೆ ಭೇಟಿ ನೀಡಿದಾಗ ಬಾಲಕ ಗಾಂಧೀಜಿ ತಂದೆಗೆ ತಪ್ಪನ್ನು ಒಪ್ಪಿಕೊಂಡು  ಪತ್ರ ನೀಡುವ ದೃಶ್ಯವನ್ನು ಸೆರೆಹಿಡಿಯಲಾಗುತ್ತಿತ್ತು. ತಾತ್ಕಾಲಿಕವಾಗಿ ಬ್ರೇಕ್ ನೀಡಿದ ನಂತರ ತಂಡವು ಮಾತಿಗೆ ಕುಳಿತುಕೊಂಡಿತು. ಈ ನಿಟ್ಟಿನಲ್ಲಿ ನಿರ್ದೇಶಕ ಪಿ.ಶೇಷಾದ್ರಿ ಹೇಳಿಕೊಂಡ ಮಾತುಗಳು ಇಲ್ಲಿವೆ. ....

558

Read More...

Yaana.Film Success Meet.

Tuesday, July 16, 2019

ಯಾನ ಗೆಲುವಿನ ಪಯಣ           ವಿಜಯಲಕ್ಷೀಸಿಂಗ್ ನಿರ್ದೇಶನ, ಜೈಜಗದೀಶ್ ನಿರ್ಮಾಣ, ಇವರ ಮೂವರು ಪುತ್ರಿಯರು ನಟಿಸಿರುವ ‘ಯಾನ’ ಚಿತ್ರವು ಶುಕ್ರವಾರದಂದು ಬಿಡುಗಡೆಗೊಂಡಿದೆ. ಚಿತ್ರಕ್ಕೆ ಒಳ್ಳೆಯ ಪ್ರಶಂಸೆ ಬರುತ್ತಿದೆ ಎಂದು ನಿರ್ದೇಶಕರು ಸಂತೋಷಕೂಟದಲ್ಲಿ  ಮಾತನಾಡುತ್ತಿದ್ದರು. ಅವರ ಪ್ರಕಾರ ಮೊದಲ ದಿನ ಶೇಕಡ ೪೦, ಎರಡನೆ ದಿನಕ್ಕೆ  ೬೦, ಭಾನುವಾರದಂದು  ೭೦ರಷ್ಟು ಗಳಿಕೆ ಬಂದಿದೆ. ಜನರು ಚಿತ್ರ ವೀಕ್ಷಿಸಿ ಬೇರೆಯವರನ್ನು ಚಿತ್ರಮಂದಿರಕ್ಕೆ ಕಳುಹಿಸುತ್ತಿದ್ದಾರೆ. ಯುವಜನಾಂಗದ ಕತೆಯಾಗಿರುವುದರಿಂದ ಹುಡುಗರು,ಹುಡುಗಿಯರು ಬರುತ್ತಾರೆಂದು ತಿಳಿಯಲಾಗಿತ್ತು. ವಿಸ್ಮಯ ಎನ್ನುವಂತೆ ವಯಸ್ಸಾದವರು ಮೊಮ್ಮಕ್ಕಳೊಂದಿಗೆ ಚಿತ್ರ ....

522

Read More...

Pailwaan.Film Press Meet.

Monday, July 15, 2019

ಐದು  ಭಾಷೆಗಳಲ್ಲಿ  ಪೈಲ್ವಾನ್         ೨೦೧೯ರ ಅದ್ದೂರಿ ‘ಪೈಲ್ವಾನ್’ ಚಿತ್ರವು ಕನ್ನಡ ಸೇರಿದಂತೆ ಬಾಲಿವುಡ್,ಟಾಲಿವುಡ್, ಕಾಲಿವುಡ್, ಮಾಲಿವುಡ್‌ದಲ್ಲಿ ಏಕಕಾಲಕ್ಕೆ ಬಿಡುಗಡೆ ಮಾಡುವುದಾಗಿ ನಿರ್ದೇಶಕ,ನಿರ್ಮಾಪಕ ಕೃಷ್ಣ ಸಿನಿಮಾದ ಮೊದಲ  ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡುತ್ತಾ ಹೋದರು. ಚಿತ್ರೀಕರಣ ಮುಗಿದಿದೆ. ಗ್ರಾಫಿಕ್ಸ್, ಹಿನ್ನಲೆ ಸಂಗೀತ ಬಾಕಿ ಇದೆ. ಕ್ರೀಡೆ ಆಧಾರಿತ ಚಿತ್ರ ಮಾಡುವ ಬಗ್ಗೆ ಯೋಜನೆ ಹಾಕಲಾಗಿತ್ತು. ಸುದೀಪ್ ಅವರಿಗೆ ಕತೆ ಹೇಳಿದಾಗ ಮೊದಲು ಬೇಡ ಅಂದವರು, ನಂತರ ಅಭಿನಯಿಸುವುದಾಗಿ, ನಿರ್ಮಾಣ ಮಾಡಲು ಹುಮ್ಮಸ್ಸು ತುಂಬಿದರು. ಅದರನ್ವಯ ಕುಟುಂಬದ ಸಹಕಾರದಿಂದ ಆರ್‌ಆರ್‌ಆರ್ ಮೋಷನ್ ಪಿಕ್ಚರ‍್ಸ್ ಮೂಲಕ ....

530

Read More...

Full Tight Pyathe.Film Success Meet.

Monday, July 15, 2019

ಪ್ರಚಾರಕ್ಕೆ  ಅವಜ್ಘೆ  ಮಾಡಿದ  ನಾಯಕಿ         ಸತ್ಯ ಘಟನೆ ಆಧಾರಿತ, ಸಕ್ಕರೆ ನಾಡಿನ ಬಳಕೆ  ಭಾಷೆಯ  ‘ಫುಲ್ ಟೈಟ್  ಪ್ಯಾತೆ’ ಸಿನಿಮಾವು ಎಲ್ಲಾ ಕಡೆಗಳಿಂದಲೂ, ಅದರಲ್ಲೂ ಮಂಡ್ಯಾ, ಮಳವಳ್ಳಿ, ಮದ್ದೂರು ಕೇಂದ್ರಗಳಲ್ಲಿ  ಯಶಸ್ವಿಯಾಗಿ ಪ್ರದರ್ಶನವಾಗುತ್ತಿದೆ. ಆದರೆ  ನಾಯಕಿ ಮಾನಸಗೌಡ  ಪ್ರಚಾರಕ್ಕೆ ಬಾರದೆ ಇರುವುದು ತಂಡಕ್ಕೆ ಬೇಸರ ತರಿಸಿದೆ.  ಸದರಿ ವಿಷಯವನ್ನು  ಖುದ್ದು ನಾಯಕ, ನಿರ್ದೇಶಕ, ನಿರ್ಮಾಪಕ ಎಸ್‌ಎಲ್‌ಜಿ.ಪುಟ್ಟಣ್ಣ ಸಂತೋಷಕೂಟದಲ್ಲಿ ಖಚಿತಪಡಿಸಿದರು. ಅವರು ಹೇಳುವಂತೆ  ಮೂರು ಸುದ್ದಿಗೋಷ್ಟಿಗೆ ಆಹ್ವಾನಿಸಲಾಗಿತ್ತು. ಒಬ್ಬ ಕಲಾವಿದೆಗೆ ಕಲೆ ಬಗ್ಗೆ ಗೌರವ ಇರಬೇಕು. ದುರಾಂಹಕಾರದ ....

499

Read More...

Aadi Lakshmi Purana.Film Trailer Rel.

Friday, July 12, 2019

ಆದಿ  ಲಕ್ಷೀಯ  ಪುರಾಣಗಳು         ಕಳೆದ ವಾರ ‘ಆದಿ ಲಕ್ಷೀ ಪುರಾಣ’ ಚಿತ್ರದ ಹಾಡುಗಳು ಹೊರಬಂದು ವೈರಲ್ ಆಗಿತ್ತು. ಸಿನಿಮಾವು ಶುಕ್ರವಾರದಂದು ಬಿಡುಗಡೆಯಾಗುತ್ತಿರುವುದರಿಂದ ಪ್ರಚಾರದ ಕೊನೆ ಹಂತವಾಗಿ ಟ್ರೈಲರ್‌ನ್ನು ಯಶ್ ಅನಾವರಣಗೊಳಿಸಿದರು.  ನಂತರ ಮಾತನಾಡುತ್ತಾ ಸುಹಾಸಿನಿ ಮೇಡಂ ಶಿಪಾರಸ್ಸಿನಂತೆ ಒಂದು ಕತೆ ಕೇಳಿ ಇಷ್ಟವಾಗಿತ್ತು. ರಾಕ್‌ಲೈನ್‌ವೆಂಕಟೇಶ್ ಅವರಿಗೆ ತಿಳಿಸಿದಾಗ ನಿರ್ಮಾಣ ಮಾಡುವುದಾಗಿ ರಾಧಿಕಾಪಂಡಿತ್ ಸೂಕ್ತ ಅನಿಸುತ್ತಾರೆಂದು ಕೇಳಿದರು. ಚಿತ್ರದಲ್ಲಿ ಹೆಣ್ ಮಕ್ಕಳ ದರ್ಬಾರ್ ಜಾಸ್ತಿ ಇದೆ. ರಾಧಿಕಾರವರು  ನನಗಿಂತ  ನಟನೆಯಲ್ಲಿ ಹಿರಿಯಳು.  ಫಿಲಿಂ ಫೇರ್, ರಾಜ್ಯ  ಸರ್ಕಾರದ ಪ್ರಶಸ್ತಿ ....

496

Read More...

Vishnu Circle.Film Audio Rel.

Friday, July 12, 2019

  ವಿಷ್ಣು ಸರ್ಕಲ್‌ದಲ್ಲಿ ಸಾಹಸ ಸಿಂಹನ ನೆನಪುಗಳು         ಸಾಹಸ ಸಿಂಹ ಡಾ.ವಿಷ್ಣುವರ್ಧನ್  ಹೆಸರನ್ನು ಬಳಸಿಕೊಂಡು ಬಂದಿರುವ ಬಹುತೇಕ ಚಿತ್ರಗಳು  ಯಶಸ್ಸನ್ನು ಕಂಡಿದೆ. ಅದರ ಪಸೆಯಿಂದಲೇ ‘ವಿಷ್ಣು ಸರ್ಕಲ್’ ಚಿತ್ರವೊಂದು ಬಿಡುಗಡೆಗೆ ಸಿದ್ದವಾಗಿದೆ. ಜನರಿಗೆ ಮೊದಲ ಆಹ್ವಾನ ಪತ್ರಿಕೆ ಎನ್ನುವಂತೆ ಸಿನಿಮಾದ ಧ್ವನಿಸಾಂದ್ರಿಕೆಯನ್ನು ಜಗ್ಗೇಶ್ ಅನಾವರಣಗೊಳಿಸಿದರು.  ನಂತರ  ಮಾತನಾಡುತ್ತಾ  ವಿಷ್ಣು ಸರ್ ಅವರನ್ನು ಮೊದಲು ನೋಡಿದ್ದು ವಿಜಯ್‌ವಿಕ್ರಂ ಶೂಟಿಂಗ್‌ದಲ್ಲಿ.  ಮುಂದೆ  ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಕಂಡು ಆತ್ಮೀಯವಾಗಿ ಮಾತನಾಡಿಸಿದ್ದರು. ಅವರೊಂದಿಗೆ ಊಟ ಮಾಡುವ ಅವಕಾಶ ಒದಗಿಬಂದಿತು.  ಅವರು ಭವಿಷ್ಯವನ್ನು ಚೆನ್ನಾಗಿ ....

714

Read More...

Dear Comrade.Film Press Meet.

Friday, July 12, 2019

ಲಿಪ್ ಲಾಕ್‌ದಲ್ಲೂ ಭಾವನೆಗಳು  ಇರುತ್ತದೆ         ಕನ್ನಡದಲ್ಲಿ ಡಬ್ ಮಾಡಿದು., ಇತರೆ ಭಾಷೆಗಳೊಂದಿಗೆ ಮೊದಲ ಬಾರಿ ಏಕಕಾಲದಲ್ಲಿ ಬಿಡುಗಡೆಯಾಗುತ್ತಿರುವ ‘ಡಿಯರ್ ಕಾಮ್ರೇಡ್’ ಚಿತ್ರದ ನಾಲ್ಕು ಭಾಷೆಯ ಸಂಗೀತ ಹಬ್ಬವನ್ನು ಆಚರಿಸುತ್ತಿದ್ದು, ಮೊದಲ ಭಾಗವಾಗಿ ತಂಡವು ಬೆಂಗಳೂರಿಗೆ ಆಗಮಿಸಿತು.  ಮೈಕ್ ತೆಗೆದುಕೊಂಡ ನಾಯಕ ವಿಜಯ್‌ದೇವರಕೊಂಡ ಅವರಿಗೆ ಲಿಪ್ ಲಾಕ್ ವಿಷಯದ ಕುರಿತಂತೆ ಮಾದ್ಯಮದಿಂದ ಪ್ರಾರಂಭದಲ್ಲಿ ಪ್ರಶ್ನೆ ಎದುರಾಯಿತು. ಇದಕ್ಕೆ ಸಂಯಮದಿಂದಲೇ ಉತ್ತರಿಸಿದರು. ಲಿಪ್ ಲಾಕ್ ಎನ್ನುವುದು ದೊಡ್ಡ ವಿಷಯವೇನಲ್ಲ. ಇಂತಹ ಪದವನ್ನು ಹೇಳಲು ಇಷ್ಟಪಡುವುದಿಲ್ಲ. ಕತೆ, ದೃಶ್ಯಕ್ಕೆ ಪೂರಕವಾಗಿದ್ದು ನಿರ್ದೇಶಕರ ....

489

Read More...

Nirmala.Film Teaser Rel.

Thursday, July 11, 2019

  ಮಕ್ಕಳಿಂದ, ಮಕ್ಕಳಿಗಾಗಿ, ಮಕ್ಕಳಿಗೋಸ್ಕರ           ವಿಶ್ವದಲ್ಲೆ ಪ್ರಪ್ರಥಮ ಎನ್ನುವಂತೆ ಛಾಯಾಗ್ರಾಹಕ, ನಿರ್ಮಾಪಕ ಹೂರತುಪಡಿಸಿ ಸಂಪೂರ್ಣ ಮಕ್ಕಳೇ ಸೇರಿಕೊಂಡು ಸಿದ್ದಪಡಿಸಿರುವ ‘ನಿರ್ಮಲ’ ಚಿತ್ರವು ಪ್ರಧಾನ ಮಂತ್ರಿಗಳ ಸ್ವಚ್ಚ ಭಾರತ  ಅಭಿಯಾನ, ಬಯಲು ಮುಕ್ತ ದೇಶವನ್ನಾಗಿ ಮಾಡುವ ಮುಖ್ಯ ವಿಷಯವನ್ನು  ಹೇಳುವ ಪ್ರಯುತ್ನ ಮಾಡಲಾಗಿದೆ.  ಇದರ ಜೊತೆಗೆ ಸಾಮಾಜಿಕ ಕಳಕಳಿ ಇರುವ ಅಂಶಗಳನ್ನು ಸೇರಿಸಿಕೊಂಡಿದ್ದಾರೆ. ಇವೆಲ್ಲವನ್ನು  ಮಕ್ಕಳು ಹೇಗೆ ಮಾಡುತ್ತಾರೆ ಎಂಬುದು ಒಂದು ಏಳೆಯ ಸಾರಾಂಶವಾಗಿದೆ. ಅದಕ್ಕಾಗಿ ಮುಗ್ದ ಮನಸುಗಳ ಕನಸು ಎಂದು ಅಡಿಬರಹದಲ್ಲಿ ಹೇಳಲಾಗಿದೆ. ಹಾಗಂತ ಇವರುಗಳು ತೆರೆ ಹಿಂದೆ,ಮುಂದೆ ನೇರವಾಗಿ ಬಂದವೆಲ್ಲ. ....

169

Read More...
Copyright@2018 Chitralahari | All Rights Reserved. Photo Journalist K.S. Mokshendra,